KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಸುದ್ದಿಗಳು News

Posted by vidyamaana on 2024-07-24 17:11:55 |

Share: | | | | |


KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಸಮೀಪ ಸವಳಂಗ ಚಿನ್ನಿಕಟ್ಟೆ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಕೆಎಸ್‌ಆರ್‌ಟಿಸಿ ಬಸ್ಸು ಹಾನಗಲ್‌ನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿತ್ತುಎನ್ನಲಾಗಿದೆ.

ಕ್ರೈಸ್ತ ಧರ್ಮಗುರು ಇದ್ದ ಕಾರು ಶಿವಮೊಗ್ಗ ಕಡೆಯಿಂದ ತೆರಳುತ್ತಿತ್ತು. ಚಿನ್ನಿಕಟ್ಟೆ ಬಳಿ ಕಾರು, ಬಸ್ಸು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶಿಕಾರಿಪುರ ಧರ್ಮಕೇಂದ್ರದ ಧರ್ಮಗುರು ಆಂಥೋಣಿ ಪೀಟರ್‌ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು ನ್ಯಾಮತಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

 Share: | | | | |


ಪುತ್ತೂರು : ವಿವಾಹ ನಿರಾಕರಿಸಿದ ವಿಚ್ಛೇದಿತೆಗೆ ಕಿರುಕುಳ: ಉಡುಪಿ ಮೂಲದ ಪ್ರಶಾಂತ್ ಕೋಟ್ಯಾನ್ ವಿರುದ್ಧ ಪ್ರಕರಣ ದಾಖಲು

Posted by Vidyamaana on 2024-03-20 16:20:44 |

Share: | | | | |


ಪುತ್ತೂರು : ವಿವಾಹ ನಿರಾಕರಿಸಿದ ವಿಚ್ಛೇದಿತೆಗೆ ಕಿರುಕುಳ: ಉಡುಪಿ ಮೂಲದ ಪ್ರಶಾಂತ್ ಕೋಟ್ಯಾನ್ ವಿರುದ್ಧ ಪ್ರಕರಣ ದಾಖಲು

ಪುತ್ತೂರು : ಮಾ 20: ವಿವಾಹ ನಿರಾಕರಿಸಿದಕ್ಕಾಗಿ ಉಡುಪಿಯ ವ್ಯಕ್ತಿಯೊಬ್ಬ ವಿಚ್ಚೇದಿತ ಮಹಿಳೆಯ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು ಹಾಗೂ ಕೊಲ್ಲುವುದಾಗಿ ಬೆದರಿಸಿರುವ ಬಗ್ಗೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂತ್ರಸ್ತ ಮಹಿಳೆಗೆ 7 ವರ್ಷದ ಹಿಂದೆ ಮದುವೆಯಾಗಿ ವಿಚ್ಛೇದನವಾಗಿರುತ್ತದೆ. ಸದ್ಯ ಆಕೆ ಮಗನೊಂದಿಗೆ ತಾಯಿ ಮನೆಯಲ್ಲಿ ವಾಸ್ತವ್ಯವಿದ್ದಾರೆ. ಆಕೆಗೆ 2022ರಲ್ಲಿ ಮೇಟ್ರಿಮೋನಿಯೊಂದರ ಮೂಲಕ ಪ್ರಶಾಂತ್ ಕೋಟ್ಯಾನ್ ಉಡುಪಿ ಎಂಬಾತನ ಪರಿಚಯವಾಗುತ್ತದೆ. ಬಳಿಕ ಅವರಿಬ್ಬರು ವಿವಾಹವಾಗುವ ನಿರ್ಧಾರಕ್ಕೆ ಬರುತ್ತಾರೆ. ಈ ವೇಳೆ ಪ್ರಶಾಂತ್‌ ಪೂರ್ವಾಪರವನ್ನು ಸಂತ್ರಸ್ತೆಯ ಮನೆಯವರು ವಿಚಾರಿಸಿದಾಗ ಉತ್ತಮ ಅಭಿಪ್ರಾಯ ಕಂಡುಬಾರದ ಹಿನ್ನೆಲೆಯಲ್ಲಿ ಮದುವೆ ಮಾತುಕತೆ ಮುರಿದು ಬೀಳುತ್ತದೆ.


ಇದರಿಂದ ಅಸಮಧಾನಗೊಂಡ ಆರೋಪಿಯು ಸಂತ್ರಸ್ತೆಗೆ ಕರೆಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಫೋಟೋ ಗಳನ್ನು ಹಾಕುವುದಾಗಿ ಹಾಗೂ ಕೊಲೆ ಮಾಡುವುದಾಗಿ ಜೀವಬೆದರಿಕೆ ಒಡ್ಡಿರುತ್ತಾನೆ . ಅಷ್ಟು ಮಾತ್ರವಲ್ಲದೇ, ಆ ಮಹಿಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುತ್ತಾನೆ.ಈ ಕುರಿತು ಮಹಿಳೆಯು ನೀಡಿದ ದೂರಿನ ಮೇರೆಗೆ ಐಪಿಸಿ ಕಲಂ 354(D),506 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

ಹಲ್ಲಿನ ಶಸ್ತ್ರಚಿಕಿತ್ಸೆಗೆ ಹೋಗಿ ವರ ಮೃತ್ಯು: ಏನಿದು ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆ?

Posted by Vidyamaana on 2024-02-20 15:12:31 |

Share: | | | | |


ಹಲ್ಲಿನ ಶಸ್ತ್ರಚಿಕಿತ್ಸೆಗೆ ಹೋಗಿ ವರ ಮೃತ್ಯು: ಏನಿದು ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆ?

ಹೈದರಾಬಾದ್: ಮದುವೆಯ ದಿನ ಚೆನ್ನಾಗಿ ಕಾಣಿಸಬೇಕು ಎಂದು ಲಕ್ಷ್ಮಿ ನಾರಾಯಣ ವಿಂಜಮ್ (28) ಎಂಬಾತ ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆಗೆ ಹೋಗಿ ಪ್ರಾಣವನ್ನೇ ಕಳೆದುಕೊಂಡ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.



ಮದುವೆಯ ದಿನ ತನ್ನ ನಗು ಮತ್ತು ನಗುವನ್ನು ಉತ್ತಮವಾಗಿ ಕಾಣುವಂತೆ ಸ್ಮೈ ಲ್ ಡಿಸೈನಿಂಗ್ ಶಸ್ತ್ರ ಚಿಕಿತ್ಸೆಗೆ ಹೈದರಾಬಾದ್ ನ ಜುಬಿಲಿ ಹಿಲ್ ನಲ್ಲಿರುವ ಎಫ್ ಎಂಎಸ್ ಇಂಟರ್ನ್ಯಾ ಷನಲ್ ಡೆಂಟಲ್ ಕ್ಲಿನಿಕ್ ಗೆ ಹೋಗಿದ್ದನು. ಆದರೆ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿಯೇ ಈತ ಸಾವನ್ನಪ್ಪಿದ್ದಾನೆ. ಪ್ರಜ್ಞೆ ತಪ್ಪಿಸುವ ಔಷಧ (ಅನಸ್ತೇಶಿಯಾ) ಹೆಚ್ಚು ಕೊಟ್ಟ ಕಾರಣ ಆತ ಸಾವನ್ನಪ್ಪಿದ್ದಾನೆ ಎಂದು ಲಕ್ಷ್ಮಿ ನಾರಾಯಣ್ ತಂದೆ ಗಂಭೀರ ಆರೋಪ ಮಾಡಿದ್ದಾರೆ.



ಶಸ್ತ್ರಚಿಕಿತ್ಸೆ ವೇಳೆ ತನ್ನ ಮಗ ಪ್ರಜ್ಞಾ ಹೀನನಾಗಿದ್ದ. ಸರ್ಜರಿ ಬಳಿಕ ಅವನ ತಲೆಯಲ್ಲಿ ಯಾವುದೇ ಚಲನೆಯಿಲ್ಲದಿದ್ದಾಗ ಕ್ಲಿನಿಕ್ ಸಿಬ್ಬಂದಿ ನನ್ನನ್ನು ಕರೆದರು. ನಾನು ಹೋಗಿ ನೋಡಿದಾಗ ಆತನನ್ನು ನೋಡಿ ಗಾಬರಿಯಾಯಿತು. ಕೂಡಲೇ ನಾವು ಆತನನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಈ ವೇಳೆ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದರು. ಮಗನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆದರೆ ಈ ಸಾವಿಗೆ ವೈದ್ಯರೇ ನೇರ ಕಾರಣ ಎಂದು ಲಕ್ಷ್ಮಿ ನಾರಾಯಣ ತಂದೆ ರಾಮುಲು ವಿಂಜಮ್ ಕಣ್ಣೀರು ಹಾಕಿದ್ದಾರೆ.



ಏನಿದು ಸ್ಮೈಲ್ ಡಿಸೈನಿಂಗ್?:

ಜನರು ತಮ್ಮ ಹಲ್ಲುಗಳನ್ನು ಸರಿಪಡಿಸಲು, ಶುಚಿಗೊಳಿಸುವಿಕೆಗೆ ಆಸ್ಪತ್ರೆಗೆ ಹೋಗುತ್ತಾರೆ. ಇದರಿಂದ ಅವುಗಳು ಹೆಚ್ಚು ಹೊಳೆಯುವಂತೆ ಕಾಣುತ್ತವೆ. ಮಾನವನ ಹಲ್ಲುಗಳು ಕಾಲಾನಂತರದಲ್ಲಿ ಸಡಿಲಗೊಳ್ಳುತ್ತವೆ ಮತ್ತು ಅವುಗಳ ಬಣ್ಣವು ಮಸುಕಾಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸ್ಮೈ ಲ್ ಡಿಸೈನ್ ಸರ್ಜರಿ ಮೂಲಕ ಅವುಗಳನ್ನು ಹೊಳೆಯುವಂತೆ ಮಾಡಲಾಗುತ್ತದೆ

ಮಂಗಳೂರು : ಕಾಮಗಾರಿಯ ವರದಿ ನೀಡಲು ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ

Posted by Vidyamaana on 2023-10-18 16:43:20 |

Share: | | | | |


ಮಂಗಳೂರು : ಕಾಮಗಾರಿಯ ವರದಿ ನೀಡಲು ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ

ಮಂಗಳೂರು, ಅ.18: ರಸ್ತೆ ಕಾಮಗಾರಿ ಗುಣಮಟ್ಟ ಪರಿಶೀಲಿಸಿ ವರದಿ ನೀಡುವುದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 


ಮಂಗಳೂರಿನ ಬೋಂದೆಲ್ ನಲ್ಲಿರುವ ಪಿಡಬ್ಲ್ಯುಡಿ ಇಲಾಖೆಯ ಕಚೇರಿಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಗುಣಮಟ್ಟ ಭರವಸೆ ವಿಭಾಗದ ಸಹಾಯಕ ಇಂಜಿನಿಯರ್ ರೊನಾಲ್ಡ್ ಲೋಬೋ ಅವರನ್ನು ಬಂಧಿಸಿದ್ದಾರೆ. 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗಲೇ ಇಂಜಿನಿಯರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. 


ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯ ಎಎನ್ಎಂ ರಸ್ತೆ ಕಾಮಗಾರಿ (25 ಲಕ್ಷ) ಹಾಗೂ ಕರಿಮಣೇಲು ಗ್ರಾಮದ ಕೈರೋಳಿ ಎಂಬಲ್ಲಿನ ಪರಿಶಿಷ್ಟ ಜಾತಿ ಕಾಲನಿಯ ರಸ್ತೆ ಕಾಮಗಾರಿ (20 ಲಕ್ಷ) ನಡೆದು, ಬಿಲ್ ಪಾವತಿಯಾಗುವುದಕ್ಕೆ ಮೊದಲು ಕ್ವಾಲಿಟಿ ಚೆಕ್ಕಿಂಗ್ ರಿಪೋರ್ಟ್ ಕೊಡಬೇಕಾಗಿತ್ತು. ಗುತ್ತಿಗೆ ಕಾಮಗಾರಿ ನಿರ್ವಹಿಸಿದ್ದ ಪ್ರಭಾಕರ ನಾಯ್ಕ್ ಕ್ವಾಲಿಟಿ ಚೆಕ್ಕಿಂಗ್ ವರದಿ ಪಡೆಯಲೆಂದು ಮಂಗಳೂರಿನ ಎಇ ರೊನಾಲ್ಡ್ ಲೋಬೋ ಅವರಲ್ಲಿ ಬಂದಾಗ, 22 ಸಾವಿರ ರು. ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಗುತ್ತಿಗೆದಾರ ಲೋಕಾಯುಕ್ತ ಗಮನಕ್ಕೆ ತಂದಿದ್ದು ಅಧಿಕಾರಿಗಳ ಸೂಚನೆಯಂತೆ ಟ್ರಾಪ್ ಮಾಡಿದ್ದಾರೆ. 20 ಸಾವಿರ ರೂ. ಹಣ ನೀಡುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಲೋಕಾಯುಕ್ತ ಎಸ್ಪಿ ಸೈಮನ್ ಹಾಗು ಡಿವೈಎಸ್ಪಿ ಚೆಲುವರಾಜು ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು

ಬಡವರ ಭಾಗ್ಯದ ಬಾಗಿಲು ತೆರೆಯುವ ಡ್ರೀಮ್ ಗೋಲ್ಡ್ ಲಕ್ಕಿ ಸ್ಕೀಮ್

Posted by Vidyamaana on 2023-11-28 15:17:32 |

Share: | | | | |


ಬಡವರ ಭಾಗ್ಯದ ಬಾಗಿಲು ತೆರೆಯುವ ಡ್ರೀಮ್ ಗೋಲ್ಡ್ ಲಕ್ಕಿ ಸ್ಕೀಮ್

ಸುರತ್ಕಲ್: ಕಾರು, ಬೈಕ್, ಆಕ್ಟಿವಾ, ಚಿನ್ನ ಮತ್ತು ಗೃಹೋಪಯೋಗಿ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುವ ನಿಮ್ಮ ಕನಸನ್ನು ನನಸಾಗಿಸಲು “ಡ್ರೀಮ್ ಗೋಲ್ಡ್ ಲಕ್ಕಿ ಸ್ಕೀಮ್” ಹೊಸ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತಂದಿದೆ.



ಈ ಸ್ಕೀಮ್ ನ ಪ್ರಥಮ ಡ್ರಾ ಇದೇ ಬರುವ ಡಿಸೆಂಬರ್ 15 ರಂದು ನಡೆಯಲಿದ್ದು, ಪ್ರತೀ ತಿಂಗಳು ರೂ.1000/- . ನಂತೆ 20 ಕಂತುಗಳ ಒಟ್ಟು 20ಡ್ರಾಗಳು ನಡೆಯಲಿವೆ. ಪ್ರತೀ ತಿಂಗಳು ಗ್ರಾಹಕರ ಕನಸಿನ ಬಹುಮಾನಗಳೊಂದಿಗೆ ಪ್ರತೀ ಡ್ರಾದಲ್ಲೂ ಕನಿಷ್ಠ 10 ಅದೃಷ್ಟಶಾಲಿಗಳಿಗೆ ವಿಶೇಷ ಉಡುಗೊರೆಗಳನ್ನು ಸಂಸ್ಥೆ ನೀಡಲಿದೆ.

ಸ್ಕೀಮ್ ನ ವಿಷೇಶ ಏನೆಂದರೆ ಮೊದಲ ತಿಂಗಳ ಡ್ರಾ ನಲ್ಲೇ ಒಬ್ಬ ಅದೃಷ್ಟಶಾಲಿಗೆ “ಮಾರುತಿ ಸುಜುಕಿ ಆಲ್ಟೊ 800” ಕಾರು ಹಾಗೂ 20 ಅದೃಷ್ಟಶಾಲಿಗಳಿಗೆ ವಿಶೇಷ ಉಡುಗೊರೆಗಳು ಸಿಗಲಿದೆ.


ಕೊನೆಯ 20 ನೇ ತಿಂಗಳ ಗೋಲ್ಡನ್ ಡ್ರಾ ನಲ್ಲಿ ಸಂಸ್ಥೆಯು ಭರ್ಜರಿ ಬಂಪರ್ ಬಹುಮಾನಗಳನ್ನು ನೀಡುತ್ತಿದ್ದು ಒಬ್ಬ ಅದೃಷ್ಟಶಾಲಿಗೆ “ಹ್ಯುಂಡೈ ಎಕ್ಸ್ಟರ್” ಕಾರು, ಮೂವರು ಅದ್ರಷ್ಟಶಾಲಿಗಳಿಗೆ “ಹೋಂಡಾ ಆಕ್ಟಿವಾ” ಹಾಗೂ ಒಬ್ಬ ಅದ್ರಷ್ಟಶಾಲಿಗೆ ಸಿಗಲಿದೆ ಭರ್ಜರಿ “25 ಪವನ್ ನ ಚಿನ್ನಾಭರಣ”, ಹಾಗೆಯೇ 20 ಅದ್ರಷ್ಟಶಾಲಿಗಳಿಗೆ ವಿಶೇಷ ಉಡುಗೊರೆ ಲಭಿಸಲಿದೆ. 20 ತಿಂಗಳುಗಳಲ್ಲಿ ಯಾವುದೇ ಬಹುಮಾನ ಸಿಗದ ಸದಸ್ಯರಿಗೆ 20,000 ಬೆಲೆಬಾಳುವ ಇನ್ವರ್ಟರ್ ಸೆಟ್, ವಾಷಿಂಗ್ ಮಶೀನ್, ಫ್ರಿಡ್ಜ್, ಎಲ್ ಇ ಡಿ ಟಿವಿ ಹಾಗೂ ಸೋಫಾ ಸೆಟ್ ಇವುಗಳಲ್ಲಿ ಆಯ್ಕೆ ಮಾಡಿದ ವಸ್ತುವನ್ನು ಸಮಾಧಾನಕರ ಬಹುಮಾನವಾಗಿ ಸಂಸ್ಥೆ ನೀಡಲಿದೆ.


ಈಗಾಗಲೇ ದ.ಕ. ,ಉಡುಪಿ,ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ತನ್ನ ಸಂತೃಪ್ತ ಗ್ರಾಹಕರನ್ನು ಹೊಂದಿರುವ ಡ್ರೀಮ್ ಗೋಲ್ಡ್ ಲಕ್ಕಿ ಸ್ಕೀಮ್ ಬಡವರ ಪಾಲಿನ ಆಶಾಕಿರಣವಾಗಿ, ಕಾರು, ದ್ವಿಚಕ್ರ ವಾಹನ, ಚಿನ್ನಾಭರಣ ಹಾಗೂ ಗೃಹೋಪಯೋಗಿ ವಸ್ತುಗಳನ್ನು ತನ್ನದಾಗಿಸಿಕೊಳ್ಳುವವರ ಕನಸುಗಳಿಗೆ ರೆಕ್ಕೆಗಳಾಗಿವೆ.ಡ್ರೀಮ್ ಗೋಲ್ಡ್ ಲಕ್ಕಿ ಸ್ಕೀಮ್ ಗೆ ನೀವೂ ಸಂತೃಪ್ತ ಗ್ರಾಹಕರಾಗಬೇಕೆ? ಹಾಗಾದರೆ ತಡ ಏಕೆ? ಈ ಸುದ್ದಿಯೊಂದಿಗೆ ಇರುವ ಲಿಂಕ್ ಗೆ ಒತ್ತಿ ಸಂಸ್ಥೆಯ ಗ್ರಾಹಕರಾಗಬಹುದು ವಾಟ್ಸಾಪ್ 9845376677 ಅಥವಾ 6364018834, 8050257514 ಗೆ ಕರೆ ಮಾಡಿಯೂ ಸಂಸ್ಥೆಯೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು.


ಪ್ರತೀ ತಿಂಗಳ ಡ್ರಾ ಪ್ರಕ್ರಿಯೆಯನ್ನು “ಡ್ರೀಮ್ ಗೋಲ್ಡ್” ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಲಾಗುವುದು ಹಾಗೆಯೇ ಡ್ರಾ ಫಲಿತಾಂಶವನ್ನು ವಾಟ್ಸಾಪ್ ಮೂಲಕ ಎಲ್ಲಾ ಗ್ರಾಹಕರಿಗೆ ತಿಳಿಸಲಾಗುವುದು, ಪತ್ರಿಕೆ ಹಾಗೂ ವೆಬ್ ಪೋರ್ಟಲ್ ಗಳಲ್ಲಿ ಪ್ರಕಟಿಸಲಾಗುವುದು.

ನದಿಗೆ ಸ್ನಾನಕ್ಕೆಂದು ಇಳಿದಿದ್ದ ಯುವತಿಯರಿಬ್ಬರು ನೀರುಪಾಲು

Posted by Vidyamaana on 2024-04-14 17:39:07 |

Share: | | | | |


ನದಿಗೆ ಸ್ನಾನಕ್ಕೆಂದು ಇಳಿದಿದ್ದ ಯುವತಿಯರಿಬ್ಬರು ನೀರುಪಾಲು

ಕೇರಳ: ನದಿಗೆ ಸ್ನಾನ ಮಾಡಲು ಹೋಗಿದ್ದ ಇಬ್ಬರು ಯುವತಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಕೇರಳದ ಕರಿಂಪುಳದ ಚೆರುಪುಳದಲ್ಲಿ ನಡೆದಿದೆ.ಚೆರ್ಪುಲಸ್ಸೆರಿ ಕುಟ್ಟಿಕೋಡ್ ಪರಕ್ಕಲ್ ಹೌಸ್ ನಿವಾಸಿ ಮುಸ್ತಫಾ ಅವರ ಪುತ್ರಿ ರಿಜ್ವಾನಾ (19) ಮತ್ತು ಮನ್ನಾರ್ಕಾಡ್ ನಿವಾಸಿ ಕರುವರಕುಂಡು ಚೆರುಮಾಲಾ ಹೌಸ್ ನಿವಾಸಿ ಅಬೂಬಕ್ಕರ್ ಅವರ ಪುತ್ರಿ ದೀಮಾ ಮೆಹಬಾ (20) ಮೃತ ಯುವತಿಯರಾಗಿದ್ದಾರೆ. ರಿಜ್ವಾನಾ ಸ್ಥಳದಲ್ಲೇ ಮೃತಪಟ್ಟರೆ, ದೀಮಾ ಮೆಹಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರೊಂದಿಗೆ ಇದ್ದ ಕೊಟ್ಟೋಪದಂನ ಪುತನಿಕ್ಕಾಡ್ ಪುಥೆನ್ವೀಟಿಲ್ ನಿವಾಸಿ ಶಂಸುದ್ದೀನ್ ಅವರ ಪುತ್ರ ಬಾದುಷಾ (20) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಸಂಜೆ 5.30 ರ ಸುಮಾರಿಗೆ ಈ ಘಟನೆ ನಡೆದಿದೆ

ಶೋಭಕ್ಕನ ಕಾರಿನ ಡೋರಿಗೆ ಗುದ್ದಿ ರಸ್ತೆಗೆ ಬಿದ್ದ ಯುವಕನ ಮೇಲೆ ಹರಿದ ಲಾರಿ

Posted by Vidyamaana on 2024-04-08 19:48:49 |

Share: | | | | |


ಶೋಭಕ್ಕನ ಕಾರಿನ ಡೋರಿಗೆ ಗುದ್ದಿ ರಸ್ತೆಗೆ ಬಿದ್ದ ಯುವಕನ ಮೇಲೆ ಹರಿದ ಲಾರಿ

ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಕಾರಿಗೆ ಸವಾರನೊಬ್ಬ ಬಲಿಯಾಗಿದ್ದಾನೆ. ಟಿಸಿ ಪಾಳ್ಯ ನಿವಾಸಿ ಪ್ರಕಾಶ್ (35) ಮೃತ ದುರ್ದೈವಿ. ಬೆಂಗಳೂರಿನ ಕೆ.ಆರ್ ಪುರಂ ಸಮೀಪದ‌ ದೇವಸಂದ್ರ ವಿನಾಯಕ‌ ದೇವಸ್ಥಾನ ಬಳಿ ಅಪಘಾತ (Ro

non

Accident) ಸಂಭವಿಸಿದೆ.

ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ರಸ್ತೆ ಬದಿ ನಿಂತಿದ್ದ ಕಾರಿನ ಡೋರ್ ತೆರೆಯುವಾಗ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಪ್ರಕಾಶ್‌ ಗುದ್ದಿ ಕೆಳೆಗೆ ಬಿದ್ದಿದ್ದಾರೆ. ರಸ್ತೆಗೆ ಬಿದ್ದ ಪ್ರಕಾಶ್‌ ಮೇಲೆ ಖಾಸಗಿ ಬಸ್‌ ಹರಿದಿದೆ. ಗಂಭೀರ ಗಾಯಗೊಂಡ ಪ್ರಕಾಶ್‌ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಪ್ರಕಾಶ್‌ ಮೃತಪಟ್ಟಿದ್ದಾರೆ.

Recent News


Leave a Comment: