ಶಾಲಾ ಆವರಣದಲ್ಲಿ ಸಾರ್ವಜನಿಕ ಕೃಷ್ಣಾಷ್ಠಮಿ, ಗಣೇಶೋತ್ಸವ, ಹಬ್ಬಗಳ ಆಚರಣೆಗೆ ನಿರ್ಬಂಧ : ಬಿಜೆಪಿ ಆಡಳಿತಾವಧಿಯಲ್ಲೇ ಆದೇಶ

ಸುದ್ದಿಗಳು News

Posted by vidyamaana on 2024-07-24 17:19:41 |

Share: | | | | |


ಶಾಲಾ ಆವರಣದಲ್ಲಿ ಸಾರ್ವಜನಿಕ ಕೃಷ್ಣಾಷ್ಠಮಿ, ಗಣೇಶೋತ್ಸವ, ಹಬ್ಬಗಳ ಆಚರಣೆಗೆ ನಿರ್ಬಂಧ : ಬಿಜೆಪಿ ಆಡಳಿತಾವಧಿಯಲ್ಲೇ ಆದೇಶ

ರಾಜ್ಯದ ಸರಕಾರಿ ಶಾಲೆ ಮತ್ತು ಕಾಲೇಜು ಕ್ಯಾಂಪಸ್‌ ಗಳಲ್ಲಿ ಧಾರ್ಮಿಕ ಆಚರಣೆ ಸೇರಿದಂತೆ ಶೈಕ್ಷಣಿಕೇತರ ಚಟುವಟಿಕೆ ನಡೆಸದಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಇದು ಭಾರೀ ಸಂಚಲನವನ್ನೇ ಹುಟ್ಟುಹಾಕಿದೆ. ಇದರಿಂದ ಸಾರ್ವಜನಿಕ ಕೃಷ್ಣಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಆಚರಣೆಯ ಸಂಘಟಕರು ಗೊಂದಲದಲ್ಲಿದ್ದಾರೆ.

ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ 2013ರ ಫೆ.7 ರಂದು ಮತ್ತು 2023ರ ಡಿ.1ರಂದು ರಾಜ್ಯದ ಎಲ್ಲ ಡಿಡಿಪಿಐ ಕಚೇರಿಗಳಿಗೆ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಕಟ್ಟಡ ಅಥವಾ ಶಾಲಾ ಮೈದಾನ ಅನುಮತಿ ನೀಡಬಾರದೆಂದು ಸುತ್ತೋಲೆ ಬಂದಿತ್ತು. ಈ ಆಧಾರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಡಿಡಿಪಿಐ ವೆಂಕಟೇಶ್ ಪಟಗಾರ ಅವರು ಜು.16ರಂದು ಜ್ಞಾಪನಾ ಪತ್ರವನ್ನು ಎಲ್ಲ ಬಿಇಒಗಳಿಗೆ ರವಾನಿಸಿದ್ದಾರೆ.

ಜ್ಞಾಪನಾ ಪತ್ರದಲ್ಲಿ ಏನಿದೆ?

ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ, ಶಾಲಾ ಮೈದಾನ ಅಥವಾ ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ ಅಥವಾ ಉದ್ದೇಶಕ್ಕೆ ಬಳಸಬಾರದು ಮತ್ತು ಅನುಮತಿಯನ್ನು ನೀಡಬಾರದೆಂದು ಸೂಚಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಂಬಂಧಿತ ಶಾಲಾ ಮುಖ್ಯಸ್ಥರೇ ಹೊಣೆಯಾಗುತ್ತಾರೆ ಎಂದು ಜ್ಞಾಪನಾ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಬಿಜೆಪಿಯಿಂದ ಹೋರಾಟ :

ರಾಜ್ಯಾದ್ಯಂತ ಹಲವು ದಶಕಗಳಿಂದ ಶಾಲೆಯ ಕ್ಯಾಂಪಸ್, ಶಾಲಾ ಕಟ್ಟಡದಲ್ಲಿ ಕೃಷ್ಣಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಈಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ರಾಜಕೀಯ ಮಾಡಲು ಹೊರಟಿದ್ದು, ಶಾಲಾ ವಠಾರದಲ್ಲಿ ಧಾರ್ಮಿಕ ಆಚರಣೆ ನಡೆಸದಂತೆ ಆದೇಶ ಹೊರಡಿಸಿದೆ. ಇದು ಖಂಡನೀಯವಾಗಿದ್ದು, ಈ ಹಿಂದೆ ನಿಗದಿತ ಸ್ಥಳದಲ್ಲೇ ಕಾರ್ಯಕ್ರಮ ಆಯೋಜಿಸುತ್ತೇವೆ. ಇದನ್ನು ತಡೆಯಲು ಬಂದರೆ ಸುಮ್ಮನಿರಲ್ಲ ಎಂದು ಬಿಜೆಪಿ ತಾಕೀತು ಮಾಡಿದೆ. ಇದೇ ರೀತಿ ಜಿಲ್ಲಾದ್ಯಂತ ಹೋರಾಟ ನಡೆಯುತ್ತಿದೆ.

ಬಿಜೆಪಿ ಸರಕಾರದಲ್ಲೇ ಆದೇಶ :

2013ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದು, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಶಿಕ್ಷಣೇತರ ಚಟುವಟಿಕೆ ನಡೆಸದಂತೆ ಆದೇಶ ಹೊರಡಿಸಿತ್ತು ಆದೇ ಆದೇಶದಡಿ ನಿಯಮದಂತೆ ದಕ್ಷಿಣ ಕನ್ನಡ ಶಿಕ್ಷಣಾಧಿಕಾರಿಯವರು ಬಿಇಒ ಮೂಲಕ ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಆದರೆ ಅಧಿಕಾರದಲ್ಲಿದ್ದಾಗ ಆದೇಶ ಹೊರಡಿಸಿದ್ದ ಬಿಜೆಪಿಯವರೇ ಈಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಈ ವಿವಾದವೂ ಜಿಲ್ಲೆಯಲ್ಲಿ ದಿನ ಹೋದಂತೆ ರಾಜಕೀಯ ಬಣ್ಣ ಪಡೆದು ಕಾವೇರತೊಡಗಿದೆ.

 Share: | | | | |


ಆಯುಷ್ಮಾನ್ ಭಾರತ್ ಕಾರ್ಡ್ ಹೇಗೆ ಆರೋಗ್ಯ ರಕ್ಷಣೆ ನೀಡುತ್ತದೆ ; ಯಾರು ಅರ್ಹರು.? ಇಲ್ಲಿದೆ ಡಿಟೈಲ್ಸ್

Posted by Vidyamaana on 2024-02-11 07:43:09 |

Share: | | | | |


ಆಯುಷ್ಮಾನ್ ಭಾರತ್ ಕಾರ್ಡ್  ಹೇಗೆ ಆರೋಗ್ಯ ರಕ್ಷಣೆ ನೀಡುತ್ತದೆ ; ಯಾರು ಅರ್ಹರು.? ಇಲ್ಲಿದೆ ಡಿಟೈಲ್ಸ್

ನವದೆಹಲಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಭಾರತ ಸರ್ಕಾರದೊಂದಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯಡಿ ಪಿಎಂ ಜನ ಆರೋಗ್ಯ ಯೋಜನೆಯನ್ನ ಪ್ರಾರಂಭಿಸಿತು. ಸರ್ಕಾರಿ ಮತ್ತು ಇತರ ಸಂಯೋಜಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾದ ಅರ್ಹ ವ್ಯಕ್ತಿಗಳಿಗೆ ಈ ಕಾರ್ಡ್ ನೀಡಲಾಗುತ್ತದೆ, ಇದು 5 ಲಕ್ಷ ರೂ.ಗಳವರೆಗೆ ರಕ್ಷಣೆಯನ್ನ ನೀಡುತ್ತದೆ.ಈ ಕಾರ್ಡ್ ಪಡೆಯಲು, ಒಬ್ಬರು ನೋಂದಾಯಿಸಿಕೊಳ್ಳಬೇಕು ಮತ್ತು ಕೆಲವು ಅರ್ಹತಾ ಮಾನದಂಡಗಳನ್ನ ಪೂರೈಸಬೇಕು. ಅನುಮೋದನೆಯ ನಂತ್ರ ಅರ್ಜಿದಾರರು ಆರೋಗ್ಯ ಕಾರ್ಡ್ನ್ನ ಪಡೆಯುತ್ತಾರೆ ಮತ್ತು ನಂತ್ರ ಯೋಜನೆಯಡಿ ಪ್ರಯೋಜನಗಳನ್ನ ಪಡೆಯಬಹುದು.


ಅರ್ಜಿ ಸಲ್ಲಿಸುವ ಮೊದಲು, ಆಯುಷ್ಮಾನ್ ಭಾರತ್ ಕಾರ್ಡ್ಗೆ ಅರ್ಹತೆ ಪಡೆಯಲು ನಿಮ್ಮ ಬಳಿ ಎಲ್ಲಾ ಅಗತ್ಯ ದಾಖಲೆಗಳಿವೆ ಎಂದು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಅರ್ಹತಾ ಮಾನದಂಡಗಳು ಈ ಕೆಳಗಿನವುಗಳನ್ನ ಒಳಗೊಂಡಿವೆ.


ಅರ್ಹತಾ ಮಾನದಂಡ.?

* ವಾರ್ಷಿಕ ಆದಾಯ 2.5 ಲಕ್ಷ ರೂ.ಗಿಂತ ಕಡಿಮೆ.

* ಕುಟುಂಬದಲ್ಲಿ 16 ವರ್ಷಕ್ಕಿಂತ ಮೇಲ್ಪಟ್ಟ ಆದಾಯ ಗಳಿಸುವ ಸದಸ್ಯರ ಅನುಪಸ್ಥಿತಿ.

* ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ವರ್ಗಕ್ಕೆಸೇರಿದವರು.

* ಶಾಶ್ವತ ನಿವಾಸವಿಲ್ಲದೆಯೂ ಅರ್ಜಿ ಸಲ್ಲಿಸುವ ಸಾಮರ್ಥ್ಯ.


ಅರ್ಜಿ ಪ್ರಕ್ರಿಯೆಗಾಗಿ, ನೀವು ಈ ಕೆಳಗಿನ ಅಗತ್ಯ ದಾಖಲೆಗಳನ್ನ ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.!

* ಆಧಾರ್ ಕಾರ್ಡ್

* ವಾಸಸ್ಥಳ ಪ್ರಮಾಣಪತ್ರ

* ಆದಾಯ ಪ್ರಮಾಣ ಪತ್ರಗಳು

* ಛಾಯಾಚಿತ್ರ

* ವರ್ಗ ಪ್ರಮಾಣಪತ್ರ


ಆಯುಷ್ಮಾನ್ ಭಾರತ್ ಕಾರ್ಡ್ ನ ಪ್ರಯೋಜನಗಳು ಈ ಕೆಳಗಿನಂತಿವೆ.!

* ವಿವಿಧ ಆಸ್ಪತ್ರೆಗಳಲ್ಲಿ ಹೆಚ್ಚಿನ ರೋಗಗಳು ಮತ್ತು ಚಿಕಿತ್ಸೆಗಳಿಗೆ ವ್ಯಾಪ್ತಿ.

* ಪ್ರವೇಶ ಸೇವೆಗಳು ಮತ್ತು ಉಚಿತ ಚಿಕಿತ್ಸೆ.


ರಾಜ್ಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ.

* 15 ದಿನಗಳ ಆಸ್ಪತ್ರೆ ವೆಚ್ಚಗಳ ಕವರೇಜ್.


ಆಯುಷ್ಮಾನ್ ಭಾರತ್ ಕಾರ್ಡ್ ಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ.!

* https://pmjay.gov.in/ ಆಯುಷ್ಮಾನ್ ಭಾರತ್ ಕಾರ್ಡ್ 2024 ರ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ನಿಮ್ಮ ಬಳಿ ಅಗತ್ಯ ದಾಖಲೆಗಳಿವೆ ಎಂದು ಖಚಿತಪಡಿಸಿಕೊಳ್ಳಿ.

* ಅಭಾ ನೋಂದಣಿಯ ಮೇಲೆ ಕ್ಲಿಕ್ ಮಾಡಿ ಮತ್ತು ಕಾರ್ಯವಿಧಾನವನ್ನು ಪೂರ್ಣಗೊಳಿಸಲು ಆಧಾರ್ ಕಾರ್ಡ್ ಸಂಖ್ಯೆಯನ್ನ ಬಳಸಿ.

* OTP ನಮೂದಿಸಿ.

* ನಿಮ್ಮ ಹೆಸರು, ಆದಾಯ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಯಂತಹ ಮಾಹಿತಿಯನ್ನ ಒದಗಿಸಿ.

* ಅಧಿಕಾರಿಗಳ ಅನುಮೋದನೆಗಾಗಿ ಕಾಯಿರಿ, ಅದರ ನಂತರ ನೀವು ಆಯುಷ್ಮಾನ್ ಕಾರ್ಡ್ ಡೌನ್ಲೋಡ್ ಮಾಡಬಹುದು.ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯು ದುರ್ಬಲ ಕುಟುಂಬಗಳಿಗೆ ವಿನಾಶಕಾರಿ ಆರೋಗ್ಯ ವೆಚ್ಚಗಳಿಂದ ಆರ್ಥಿಕ ರಕ್ಷಣೆ ಒದಗಿಸುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳ ಪ್ರವೇಶವನ್ನ ಖಚಿತಪಡಿಸಿಕೊಳ್ಳುವ ಗುರಿಯನ್ನ ಹೊಂದಿದೆ. ಅರ್ಜಿ ಪ್ರಕ್ರಿಯೆಗೆ ಅಂಟಿಕೊಳ್ಳುವ ಮೂಲಕ ಮತ್ತು ಅರ್ಹತಾ ಮಾನದಂಡಗಳನ್ನ ಪೂರೈಸುವ ಮೂಲಕ, ವ್ಯಕ್ತಿಗಳು ಈ ಯೋಜನೆಯು ನೀಡುವ ಪ್ರಯೋಜನಗಳನ್ನು ಪಡೆಯಬಹುದು.

ಸುಬ್ರಹ್ಮಣ್ಯ: ಬಸ್ – ಬೈಕ್ ನಡುವೆ ಢಿಕ್ಕಿ - ಸುಬ್ರಹ್ಮಣ್ಯ ಮೂಲದ ಪ್ರಶಾಂತ್ ಮೃತ್ಯು, ಮತ್ತೋರ್ವನಿಗೆ ಗಾಯ

Posted by Vidyamaana on 2023-03-10 16:52:56 |

Share: | | | | |


ಸುಬ್ರಹ್ಮಣ್ಯ: ಬಸ್ – ಬೈಕ್ ನಡುವೆ ಢಿಕ್ಕಿ - ಸುಬ್ರಹ್ಮಣ್ಯ ಮೂಲದ ಪ್ರಶಾಂತ್ ಮೃತ್ಯು, ಮತ್ತೋರ್ವನಿಗೆ ಗಾಯ

ಸುಬ್ರಹ್ಮಣ್ಯ : ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಲಬಾರ್ ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಸುಬ್ರಹ್ಮಣ್ಯದಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು ಸುಬ್ರಹ್ಮಣ್ಯ ನಿವಾಸಿ ಪ್ರಶಾಂತ್ ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯದ ಇಂಜಾಡಿ ಸಮೀಪ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡ ಪ್ರಶಾಂತ್ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಗಾಯಾಳುವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. 

ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದರಿಗೆ ಮೊಹರೆ ಹನುಮಂತರಾಯ ಪ್ರಶಸ್ತಿ

Posted by Vidyamaana on 2023-03-09 07:37:57 |

Share: | | | | |


ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದರಿಗೆ ಮೊಹರೆ ಹನುಮಂತರಾಯ ಪ್ರಶಸ್ತಿ

ಪುತ್ತೂರು: ರಾಜ್ಯ ಸರಕಾರದ 2018ನೇ ಸಾಲಿನ ಪ್ರತಿಷ್ಠಿತ ಮೊಹರೆ ಹನುಮಂತರಾಯ ಪ್ರಶಸ್ತಿಗೆ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ ಡಾ. ಯು.ಪಿ. ಶಿವಾನಂದ್ ಆಯ್ಕೆಯಾಗಿದ್ದಾರೆ.

ಇವರಿಗೆ ಮಾರ್ಚ್ 13ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರತಿಷ್ಠಿತ ಮೊಹರೆ ಹನುಮಂತರಾಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ‌.

ವಿವಿಧ ಆಂದೋಲನಗಳ ಮೂಲಕ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿರುವ ಡಾ. ಯು.ಪಿ. ಶಿವಾನಂದ್ ಅವರು, ಕೃಷಿ ಜಾತ್ರೆಯನ್ನು ಯಶಸ್ವಿಯಾಗಿ ಸಂಘಟಿಸಿದ್ದರು. ಶಿಕ್ಷಣ ಮತ್ತು ಉದ್ಯೋಗ ಮಾಹಿತಿ ಕೇಂದ್ರವನ್ನು ಆರಂಭಿಸಿರುವುದಲ್ಲದೇ, ಇಂತಹ ಹಲವು ಪ್ರಥಮಗಳಿಗೆ ನಾಂದಿ ಹಾಡಿದ್ದಾರೆ. ಬಲಾತ್ಕಾರದ ಬಂದ್ ವಿರುದ್ಧದ ಹೋರಾಟ, ಭ್ರಷ್ಟಾಚಾರ ವಿರುದ್ಧದ ಹೋರಾಟ, ವಾರಾಂತ್ಯ ಕರ್ಫ್ಯೂ, ಶುದ್ಧ ಕುಡಿಯುವ ನೀರಿಗಾಗಿ ಅಭಿಯಾನ ಮೊದಲಾದ ಹೋರಾಟಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದು, ರಾಜ್ಯ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಿದ್ದಾರೆ.

ಮುಂಡೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ದ್ವಿತೀಯ ವರ್ಷದ ಜಾತ್ರೋತ್ಸವದ ಸಂಭ್ರಮ

Posted by Vidyamaana on 2024-02-29 11:09:09 |

Share: | | | | |


ಮುಂಡೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ದ್ವಿತೀಯ ವರ್ಷದ ಜಾತ್ರೋತ್ಸವದ ಸಂಭ್ರಮ

ಪುತ್ತೂರು: ಮುಂಡೂರು ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ, ದ್ವಿತೀಯ ವರ್ಷದ ಜಾತ್ರೋತ್ಸವ, ದೈವಗಳ ನೇಮೋತ್ಸವ, ನವೀಕೃತ ರಂಗಮಂಟಪದ ಉದ್ಘಾಟನೆ ಮಾ. 1 ಹಾಗೂ 2ರಂದು ನಡೆಯಲಿದೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 1ರಂದು ಸಂಜೆ 3.30ಕ್ಕೆ ಹಸಿರು ಹೊರೆಕಾಣಿಕೆ, ಬಳಿಕ ಶ್ರೀ ಸತ್ಯನಾರಾಯಣ ಪೂಜೆ, ರಂಗಪೂಜೆ, ನವೀಕೃತ ರಂಗಮಂಟಪದ ಉದ್ಘಾಟನೆ ನಡೆಯಲಿದೆ. ಬಳಿಕ ಧಾರ್ಮಿಕ ಸಭೆ, ಸಂಗೀತ ಕಾರ್ಯಕ್ರಮ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 8.45ರಿಂದ ಬೊಳ್ಳಿಮಲೆತ ಶಿವಶಕ್ತಿಲು ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಮಾರ್ಚ್ 2ರಂದು ಬೆಳಿಗ್ಗೆ 8ರಿಂದ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಪಂಚವಿಂಶತಿ ಕಲಶಪೂಜೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 7ರಿಂದ ಮಹಾಪೂಜೆ, ದೇವರ ಬಲಿ ಹೊರಟು ಶ್ರೀ ಭೂತಬಲಿ ಮಹೋತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ, ದೈವಗಳಿಗೆ ನೇಮೋತ್ಸವ ಜರಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಕುದ್ಕಾಡಿ ಶೀನಪ್ಪ ರೈ ಕೊಡೆಂಕಿರಿ, ನಿಕಟಪೂರ್ವ ಅಧ್ಯಕ್ಷ  ಅರುಣ್ ಕುಮಾರ್ ಆಳ್ವ ಬೋಳೋಡಿ, ಭಾಸ್ಕರ್ ರೈ ಕೆದಂಬಾಡಿಗುತ್ತು, ವಿಶ್ವನಾಥ ರೈ ಕುಕ್ಕುಂಜೋಡು ಉಪಸ್ಥಿತರಿದ್ದರು.

ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ನೂತನ ಸಮಿತಿ ರಚನೆ

Posted by Vidyamaana on 2023-09-21 17:40:20 |

Share: | | | | |


ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ನೂತನ ಸಮಿತಿ ರಚನೆ

ಪುತ್ತೂರು :- ಸರಕಾರಿ ಪ್ರಥಮ ದರ್ಜೆ ಕಾಲೇಜು ನೆಲ್ಲಿಕಟ್ಟೆಯಲ್ಲಿ ವ್ಯಾಸಂಗ ಮಾಡಿದ ಹಳೇ ವಿದ್ಯಾರ್ಥಿಗಳು (2009-12 ಬ್ಯಾಚ್) ರಚಿಸಿದ ಚೋಕೊಲೇಟ್ ಬಾಯ್ಸ್ ಗ್ರೂಪಿನ ಅಧೀನದಲ್ಲಿ ಸಾಮಾಜಿಕ ಸೇವಾ ಉದ್ದೇಶದೊಂದಿಗೆ  ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ನೂತನ ಸಮಿತಿಯನ್ನು ರಚಿಸಲಾಯಿತು.


ಸಮಾಜದಲ್ಲಿನ ಅಸಾಹಯಕ ರೋಗಿಗಳಿಗೆ ಹಾಗೂ ಅರ್ಹ ಅಶಕ್ತ ಫಲಾನುಭವಿಗಳಿಗೆ ನೆರವಾಗುವ ಉತ್ತಮ ಉದ್ದೇಶವಿಟ್ಟುಕೊಂಡು ವಿದ್ಯಾರ್ಥಿ ಜೀವನದಲ್ಲೇ ಒಟ್ಟಿಗೆ ಇದ್ದಂತಹ ಸ್ನೇಹಿತರು ರಚಿಸಿದ ಈ ಸಂಘಟನೆಯ ಧ್ಯೇಯ ಸೇವೆ ಮಾತ್ರ ಎಂದು ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾದ ಜನಾಬ್ ಸಿದ್ದೀಕ್ ಗಡಿಪ್ಪಿಲ ಹೇಳಿದರು.


2023-24 ರ ನೂತನ ಸಮಿತಿಯ ಅಧ್ಯಕ್ಷರಾಗಿ ಸಿದ್ದೀಕ್ ಗಡಿಪ್ಪಿಲ ,ಪ್ರಧಾನ ಕಾರ್ಯದರ್ಶಿಯಾಗಿ ನಝೀರ್ ಪರ್ಪುಂಜ ,ಉಪಾಧ್ಯಕ್ಷರಾಗಿ ಅಝೀರ್ ಕಲ್ಲಡ್ಕ ,ಕೋಶಾಧಿಕಾರಿಯಾಗಿ ರಿಯಾಝ್ ಪುರುಷರಕಟ್ಟೆ ಹಾಗೂ ಜೊತೆ ಕಾರ್ಯದರ್ಶಿಯಾಗಿ ಫಿರೋಝ್ ಪಾಲ್ತಾಡ್ ಆಯ್ಕೆಗೊಂಡರು.


ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಉಸ್ಮಾನ್ ಪೇರಮುಗೇರು,ಆಸಿಫ್ ಅಬುಧಾಬಿ ,ಆರಿಸ್ ಸವಣೂರು ,ಶಹೀರ್ ದುಬೈ,ರಝಾಕ್ ಸಾಲ್ಮರ,ನವಾಝ್ ಕಡಬ ,ನೌಶಾದ್ ಕಟ್ಟತ್ತಾರ್ ,ಸಾದಿಕ್ ಅರಿಯಡ್ಕ ,ಇರ್ಷಾದ್ ಕಾವು ಮತ್ತು ಸಮದ್ ಸವಣೂರು ಆಯ್ಕೆಗೊಂಡರು.


ಪದಾಧಿಕಾರಿಗಳು ಆಯ್ಕೆ ಪ್ರಕ್ರಿಯನ್ನು ಆಸಿಫ್ ಅಬುದಾಬಿ ಹಾಗೂ ರಝಾಕ್ ಸಾಲ್ಮರ ನಿರ್ವಹಿಸಿದರು.

ಹಂಡಿ ಗುಂಡಿ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗಿ ಮರಳಿ ಬರಲು ದಾರಿ ಕಾಣದೆ ಸಿಕ್ಕಿಬಿದ್ದು ಮಹಿಳೆಯರು ಪೊಲೀಸರಿಂದ ರಕ್ಷಣೆ

Posted by Vidyamaana on 2023-12-19 04:52:15 |

Share: | | | | |


ಹಂಡಿ ಗುಂಡಿ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗಿ ಮರಳಿ ಬರಲು ದಾರಿ ಕಾಣದೆ ಸಿಕ್ಕಿಬಿದ್ದು ಮಹಿಳೆಯರು  ಪೊಲೀಸರಿಂದ ರಕ್ಷಣೆ

ಬೆಂಗಳೂರು: ಆರು ಮಂದಿ ಮಹಿಳೆಯರು ರಾಮನಗರ ಬಳಿಯ ಹಂಡಿ ಗುಂಡಿ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗಿ ಮರಳಿ ಬರಲು ದಾರಿ ಕಾಣದೆ ಸಿಕ್ಕಿಬಿದ್ದು ಕೊನೆಗೆ ಪೊಲೀಸರು ರಕ್ಷಿಸಿದ ಘಟನೆ ನಡೆದಿದೆ.


ಮಹಿಳೆಯರು ರಾಮನಗರ ಜಿಲ್ಲೆಯ ಬಸವನಪುರ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಕಾರು ನಿಲ್ಲಿಸಿ ಅಲ್ಲಿಂದ ಹಂಡಿ ಗುಂಡಿ ಬೆಟ್ಟದ ಕಾಡಿನಲ್ಲಿ ಟ್ರಕ್ಕಿಂಗ್ ತೆರಳಿದ್ದರು. ಸಂಜೆ ವೇಳೆಗೆ ಬೆಟ್ಟದಿಂದ ಇಳಿದು ಬರುತ್ತಿದ್ದಾಗ ರಸ್ತೆ ಸಿಗಲಿಲ್ಲ. ರಾತ್ರಿಯಾದರೂ ಅತ್ತಿತ್ತ ಹುಡುಕಾಡಿ ರಸ್ತೆ ಸಿಗದೇ ಇದ್ದುದರಿಂದ 7.15ರ ಸುಮಾರಿಗೆ 112 ನಂಬರಿಗೆ ಫೋನ್ ಮಾಡಿದ್ದರು.


ಕೂಡಲೇ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಗಸ್ತಿನಲ್ಲಿದ್ದ ರಾಜೇಶ್ ಮತ್ತು ರಮೇಶ್ ಆ ಭಾಗದಲ್ಲೇ ಇದ್ದುದರಿಂದ ಅವರಿಗೆ ಸಂದೇಶ ಹೋಗುತ್ತದೆ. 7.30ರ ಸುಮಾರಿಗೆ ಮಹಿಳೆಯರನ್ನು ಫೋನಲ್ಲಿ ಸಂಪರ್ಕಿಸಿದ ಪೊಲೀಸರು, ನೀವು ಯಾವುದೇ ಆತಂಕ ಪಡುವುದು ಬೇಡ. ನಾವು ಹುಡುಕಿ ಬರುತ್ತೇವೆ ಎಂದು ಹೇಳಿದ್ದಾರೆ. ಆದರೆ ಪೊಲೀಸರ ವಾಹನವನ್ನೂ ಬೆಟ್ಟಕ್ಕೆ ಒಯ್ಯಲಾಗದೆ ಅರ್ಧಕ್ಕೆ ನಿಲ್ಲಿಸಿದ್ದಾರೆ.


ರಾತ್ರಿ 8.30ರ ವೇಳೆಗೆ ಸ್ಥಳೀಯ ಸಾರ್ವಜನಿಕರ ಸಹಾಯ ಪಡೆದು ಪೊಲೀಸರು ಟಾರ್ಚ್ ಲೈಟ್ ಹಿಡಿದು ಕಾಡಿನಲ್ಲಿ ಹುಡುಕಾಡಿದ್ದಾರೆ. ಎರಡು ಕಿಮೀ ಉದ್ದಕ್ಕೆ ಕಾಡಿನಲ್ಲಿ ನಡೆದ ಬಳಿಕ ಮಹಿಳೆಯರು ಸಿಕ್ಕಿದ್ದು, ಮರಳಿ ರಸ್ತೆಗೆ ತಲುಪಿಸಿದ್ದಾರೆ. ಹಂಡಿ ಗುಂಡಿ ಬೆಟ್ಟದಲ್ಲಿ ಕರಡಿ, ಚಿರತೆಗಳಿದ್ದು, ಅದೃಷ್ಟವಶಾತ್ ಮಹಿಳೆಯರಿಗೆ ತೊಂದರೆ ಮಾಡಿಲ್ಲ. 112 ಗೆ ಕರೆ ಮಾಡಲು ಫೋನ್ ನೆಟ್ವರ್ಕ್ ಸಿಕ್ಕಿದ್ದರಿಂದ ಬಚಾವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯರು ಬನ್ನೇರುಘಟ್ಟ ಆಸುಪಾಸಿನಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ.

Recent News


Leave a Comment: