ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಸುದ್ದಿಗಳು News

Posted by vidyamaana on 2024-07-06 04:30:03 |

Share: | | | | |


ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ಶನಿವಾರ (ನಾಳೆ, ಜು.6) ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ

ಪದವಿ ಪೂರ್ವ ಕಾಲೇಜುಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿ ಆದೇಶಿಸಿದ್ದಾರೆ.

 Share: | | | | |


ಗುಣಮಟ್ಟವಲ್ಲದ ಮಸಾಲೆ ಪದಾರ್ಥ ಮತ್ತು ಚಹಾಪುಡಿ ಗಳ ಪಟ್ಟಿ ಬಿಡುಗಡೆ ಮಾಡಿ ರಾಜ್ಯ ಸರ್ಕಾರ

Posted by Vidyamaana on 2024-06-07 10:39:17 |

Share: | | | | |


ಗುಣಮಟ್ಟವಲ್ಲದ ಮಸಾಲೆ ಪದಾರ್ಥ ಮತ್ತು ಚಹಾಪುಡಿ ಗಳ ಪಟ್ಟಿ ಬಿಡುಗಡೆ ಮಾಡಿ ರಾಜ್ಯ ಸರ್ಕಾರ

ಬೆಂಗಳೂರು : ಸುದ್ದಿ ಮಾಧ್ಯಮಗಳಲ್ಲಿ ಮಸಾಲೆ ಪದಾರ್ಥಗಳ ಗುಣಮಟ್ಟವು ಕಳಪೆಯಾಗಿರುವ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಸಾಲೆ ಪುಡಿ ಮತ್ತು ಸಾಂಬಾರ್ ಪದಾರ್ಥಗಳನ್ನು ಮೈಕ್ರೋ ಬಯೋಲಾಜಿಕಲ್ ಪೆರಿಮಿಟರ್ಸ್ ಅಂಶಗಳನ್ನು ಪರೀಕ್ಷಿಸಲು ಮಸಾಲೆ ಪುಡಿ ಮತ್ತು ಸಾಂಬಾರ್ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಮೇ ಮೊದಲ ಮತ್ತು ಎರಡನೇ ವಾರದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿರುತ್ತದೆ.

ಅವುಗಳಲ್ಲಿ 23 ಮಾದರಿಗಳಲ್ಲಿ ರೋಗಕಾರಕ ಸೂಕ್ಷಂಆನು ಜೀವಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಸುರಕ್ಷಿತ ಎಂದು ವರದಿಯಾಗಿರುತ್ತವೆ.


ತುಮಕೂರಿನ ಮೆಣಸಿನಕಾಯಿ ಪುಡಿ, ಮೈಸೂರು ಗ್ರಾಮಾಂತರದ ಕೌಶಿಕ್ ಪುಡ್ ಬ್ರ್ಯಾಂಡ್‍ನ ಮಿಕ್ಸ್ಡ್ ಮಸಾಲ, ಕೊಪ್ಪಳದ ಶ್ರೀ ಮಂಜುನಾಥ ಬ್ರ್ಯಾಂಡ್‍ನ ಮೆಣಿಸಿನಕಾಯ ಮತ್ತು ಕ್ಯಾಪ್ಸಿಕಾಂ (ಲಾಲ್ ಮಿರ್ಚಿ), ಮಂಡ್ಯದ ಸಾಂಬರ್ ಪುಡಿ, ದಾವಣಗೆರೆಯ ಅಪೇಕ್ಷಾ ಬ್ರ್ಯಾಂಡ್‍ನ ಸಾಂಬಾರು ಪುಡಿ, ಚಿಕ್ಕಬಳ್ಳಾಪುರದ ಎ.ಆರ್.ಕೆ ಬ್ರ್ಯಾಂಡ್‍ನ ಮೆಣಿಸಿನಕಾಯಿ ಪುಡಿ, ದಕ್ಷಿಣ ಕನ್ನಡದ ಅರುಣ್ ಮಸಾಲ ಬ್ರ್ಯಾಂಡ್‍ನ ಗರಂ ಮಸಾಲ ಚಿಕ್ಕಮಗಳೂರಿನ ಎವರೆಸ್ಟ್ ಬ್ರ್ಯಾಂಡ್‍ನ ಮಿಕ್ಸ್ಡ್ ಮಸಾಲ, ಚಿಕ್ಕಬಳ್ಳಾಪುರದ ಮೆಣಸಿನಕಾಯಿ ಪುಡಿ, ಕೊಡುಗಿನ ಈಸ್ಟ್ರನ್ ಬ್ರ್ಯಾಂಡ್‍ನ ಧನಿಯಾ ಪುಡಿ, ಲೋಲಾರದ ಸಾಂಬರುಪುಡಿ ಮತ್ತು ಮೆಣಸಿನಕಾಯಿ ಪುಡಿ, ರಾಯಚೂರಿನ ಜಿ.ಸ್ಪೆಷಲ್ (ಸ್ಥಳೀಯ) ಬ್ರ್ಯಾಂಡ್‍ನ ಜಿ.ಟಿ. ಸ್ಪೆಷಲ್ ಮೆಣಸಿನಕಾಯಿಪುಡಿ, ಗದಗಿನ ಎಂ.ಜಿ.ಆರ್ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಚಿತ್ರದುರ್ಗದ ಮಾರುತಿ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಯಾದಗಿರಿಯ ಚಾರ್‍ಮಿನಾರ್ ಸ್ಪೀಸಿಸ್ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಹಾವೇರಿಯ ಮೆಣಸಿನಕಯಿ ಪುಡಿ, ಕಲಬುರಗಿಯ ಎಂಟಿಆರ್ ಚಿಲ್ಲಿಪೌಡರ್ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಚೆನ್ನರಾಯಪಟ್ಟಣದ ತೇಜು ಸಾಂಬರ್ ಪೌಡರ್ ಬ್ರ್ಯಾಂಡ್‍ನ ಸಾಂಬಾರು ಪುಡಿ, ಶಿವಮೊಗ್ಗೆ ಎವರೆಸ್ಡ್ ಬ್ರ್ಯಾಂಡ್‍ನ ತೀಕಾಲಾಲ್ ಹಾಟ್ ಅಂಡ್ ರೆಡ್ ಮೆಣಸಿನಕಾಯಿ ಪುಡಿ, ಬಿ.ಬಿ.ಎಂ.ಪಿ, ಪೂರ್ವದ ಎ.ವಿವಿಎ ಬ್ರ್ಯಾಂಡ್‍ನ ಬಿಸಿಬೇಳೆ ಬಾತ್ ಪಛಡರ್, ಸಾಂಬಾರು ಪುಡಿ, ವಾಂಗಿಬಾತ್ ಪುಡಿಗಳು ಅಸುರಕ್ಷಿತ ಎಂದು ವರದಿಯಾಗಿರುವ ಸಮಬಂಧ ಆಹಾರ ಮಾದರಿಗಳ ತಯಾರಕರುಗಳ ವಿರುದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮಗಳು 2011ರನ್ವಯ ಕನೂನು ಕ್ರಮವಹಿಸಲಾಗುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೃದಯಾಘಾತದಿಂದ ನಿಲಿಕಾ ನಿಧನ

Posted by Vidyamaana on 2024-06-27 16:50:11 |

Share: | | | | |


ಹೃದಯಾಘಾತದಿಂದ ನಿಲಿಕಾ ನಿಧನ

ಮಡಿಕೇರಿ: ಎಂದಿನಂತೆ ಇನ್ನೇನು ತನ್ನ ಕರ್ತವ್ಯಕ್ಕೆ ಹೊರಡಬೇಕಾಗಿದ್ದ ಯುವತಿ ಹೃದಯಾಘಾತದಿಂದ ಮನೆಯಲ್ಲಿ ಮೃತಪಟ್ಟ ದಾರುಣ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ನೆಲಜಿ ಗ್ರಾಮದಲ್ಲಿ ನಡೆದಿದೆ.ನೆಲಜಿ ಗ್ರಾಮದ ಕಾಫಿ ಬೆಳೆಗಾರರಾದ ಪೊನ್ನಪ್ಪ ಅವರ ಮಗಳು ನಿಲಿಕಾ ಪೊನ್ನಪ್ಪ (24) ಮೃತ ಯುವತಿ.

ಬೆಂಗಳೂರು ಕಂಬಳ : ವಿರೋಧ ವ್ಯಕ್ತವಾಗುತ್ತಿದ್ದಂತೆ ಕಂಬಳದಿಂದ ಬ್ರಿಜ್ ಭೂಷಣ್ ಆಹ್ವಾನ ರದ್ದು

Posted by Vidyamaana on 2023-11-21 14:39:51 |

Share: | | | | |


ಬೆಂಗಳೂರು ಕಂಬಳ : ವಿರೋಧ ವ್ಯಕ್ತವಾಗುತ್ತಿದ್ದಂತೆ ಕಂಬಳದಿಂದ ಬ್ರಿಜ್ ಭೂಷಣ್ ಆಹ್ವಾನ ರದ್ದು

ಮಂಗಳೂರು, ನ.21: ಇದೇ ಮೊದಲ ಬಾರಿಗೆ ನಡೆಯಲಿರುವ ಕರಾವಳಿಯ ಪ್ರಸಿದ್ಧ ಕಂಬಳಕ್ಕೆ (Kambala)ರಾಜ್ಯ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿದೆ. ಆದರೆ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ (Brij Bhushan Sharan Singh) ಅವರನ್ನು ಆಹ್ವಾನಿಸಲಾಗಿದ್ದು ಈ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕುಸ್ತಿ ಆಟಗಾರರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಅವರನ್ನು ಇಂತಹ ಕಾರ್ಯಕ್ರಮಕ್ಕೆ ಕರೆದಿರುವುದು ಎಷ್ಟು ಸರಿ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳಾಗುತ್ತಿದ್ದವು. ಸದ್ಯ ಈಗ ತಾವು ಕಂಬಳಕ್ಕೆ ಅತಿಥಿಯಾಗಿ ಬರಲ್ಲ ಎಂದು ಬ್ರಿಜ್ ಭೂಷಣ್ ಪತ್ರ ಬರೆದು ತಿಳಿಸಿದ್ದಾರೆ.ನವೆಂಬರ್ 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾರತದ ಕುಸ್ತಿ ಫೆಡರೇಷನ್ ಮಾಜಿ ಆಧ್ಯಕ್ಷ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲಾಗಿತ್ತು. ಅತಿಥಿಯಾಗಿ ಆಹ್ವಾನ ನೀಡಲು ಕುಸ್ತಿ ಅಸೋಸಿಯೇಷನ್ ಹಾಗೂ ಸಿದ್ದಿ ಜನಾಂಗ ಮನವಿ ಮಾಡಿತ್ತು. ಮನವಿ ಮೇರೆಗೆ ಕಂಬಳ ಸಮಿತಿ ಆಹ್ವಾನ ನೀಡಿತ್ತು. ಈ ಸಂಬಂಧ ವಿರೋಧ ಹಿನ್ನಲೆ ಬ್ರಿಜ್ ಭೂಷಣ್ ಅವರಿಗೆ ಕರೆ ಮಾಡಿ ಕಂಬಳ ಸಮಿತಿ ವಿವರ ನೀಡಿದ್ದು ತಾವು ಕಂಬಳಕ್ಕೆ ಅತಿಥಿಯಾಗಿ ಬರಲ್ಲ ಎಂದು ಪತ್ರ ಬರೆದು ಬ್ರಿಜ್ ಭೂಷಣ್ ಶುಭಾಶಯ ತಿಳಿಸಿದ್ದಾರೆ. ಈ ಬಗ್ಗೆ ಕಂಬಳ ಸಮಿತಿ ಮುಖ್ಯಸ್ಥ ಅಶೋಕ್ ರೈ  ಮಾಹಿತಿ‌ ನೀಡಿದ್ದಾರೆ. ವಿರೋಧ ವ್ಯಕ್ತವಾದ ಹಿನ್ನಲೆ ಬ್ರಿಜ್ ಅವರ ಆಹ್ವಾನ ರದ್ದುಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.

ಬುಳೇರಿಕಟ್ಟೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

Posted by Vidyamaana on 2023-05-01 10:40:09 |

Share: | | | | |


ಬುಳೇರಿಕಟ್ಟೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು: ಬೆಲೆ ಏರಿಕೆಯ ಮೂಲಕ ಬಡವರ ಬದುಕನ್ನು ಮೂರಾಬಟ್ಟೆ ಮಾಡಿದ ಬಿಜೆಪಿ ಸರಕಾರ . ಈ ಪಕ್ಷದ ಕಾರ್ಯಕರ್ತರು ,ಮುಖಂಡರು ಬಡವರ ಮನೆಗೆ ಯಾವ ಮುಖ ಹೊತ್ತು ವೋಟು ಬಡವರ ಮನೆಗೆ ವೋಟು ಕೇಳಲು ಹೋಗುತ್ತಾರೆ ಎಂದು ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ರಾಜಾರಾಂ ಕೆ ಬಿ ಹೇಳಿದರು.

ಬುಳೇರಿಕಟ್ಟೆಯಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ. ದೇಶದಲ್ಲಿ‌ಅಚ್ಚೇದಿನ್ ಕೊಡುವುದಾಗಿ ಹೇಳಿದವರು ಬಡವರ ಅನ್ನಕ್ಕೂ ಕಲ್ಲು ಹಾಕುವ ಕೆಲಸವನ್ನು ಮಾಡಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ,ಇಂಧನ, ಅಡುಗೆ ಅನಿಲ ಬೆಲೆ ಏರಿಕೆ ಇವೆಲ್ಲವೂ ಜನರನ್ನು ಕಂಗೆಡಿಸಿದೆ. ಬೆಲೆ ಏರಿಕೆಯಿಂದ ನಾಳೆ ಏನಾಗುತ್ತದೋ ಎಂಬ ಭಯ ಜನರಲ್ಲಿ ನಿತ್ಯವೂ ಇದೆ ಎಂದು ಹೇಳಿದರು. 

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದರೆ ಎಲ್ಲಾ‌ಸಮಸ್ಯೆಗಳಿಗೆ ಪರಿಹಾರವಾಗಲಿದೆ. ಬಡವರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಜನ ಸ್ನೇಹಿ ಪ್ರಣಾಳಿಕೆಯನ್ನು ಜಾರಿ‌ಮಾಡಿದೆ. ಪುತ್ತೂರಿನಲ್ಲಿ ಅಶೋಕ್ ರೈ ಯವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ‌ಮುಂದೆ ಬರುವ ಕಾಂಗ್ರೆಸ್ ಸರಕಾರಕ್ಕೆ ಬಲ‌ಕೊಡುವ ಕೆಲಸವನ್ನು ಮಾಡಬೇಕು. ಪ್ರತೀ ಬೂತ್ ನಲ್ಲೂ ಟಾರ್ಗೆಟ್ ವೋಟು ಎಂಬ ಆಲೋಚನೆಯನ್ನು ಇಟ್ಟುಕೊಂಡು ಹೆಚ್ಚಿನ‌ಮತಗಳು ಈ ಭಾಗದಿಂದ ಕಾಂಗ್ರೆಸ್ ಗೆ ಬೀಳುವಂತೆ  ನಾವು ಕಾರ್ಯಪೃವೃತ್ತರಾಗಬೇಕು ಎಂದು‌ಹೇಳಿದರು.

ಸೈಲೆಂಟ್ ವೋಟು ಕಾಂಗ್ರೆಸ್ ಪಾಲಾಗುವಂತೆ ಪ್ರತೀಯೊಬ್ಬ ಕಾರ್ಯಕರ್ತರು ಒಟ್ಟುಗೂಡಿ ಕೆಲಸ ಮಾಡಬೇಕು. ಬಿಜೆಪಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆಯಬೇಕು ಎಂದು ಅಭ್ಯರ್ಥಿ ಅಶೋಕ್ ರೈ ಹೇಳಿದರು.

ಅಕ್ರನಸಕ್ರಮದಲ್ಲಿ ಪುತ್ತೂರಿನ ಶಾಸಕರು ಭೃಷ್ಟಾಚಾರ ಮಾಡಿದ್ದು ಅದು ಅವರ ದೊಡ್ಡ ಸಾಧನೆಯಾಗಿದೆ. ಯಾರು ಲಕ್ಷಾಂತರ ರೂ ಕೊಟ್ಟಿದ್ದಾರೋ ಅವರಿಗೆಲ್ಲಾ ಅಕ್ರಮ ಸಕ್ರಮ ಮಾಡಿಕೊಡಲಾಗಿದೆ. ನಾನು ಶಾಸಕನಾದರೆ ರಾಜಧರ್ಮ ಪಾಲನೆ ಮಾಡಲಿದ್ದೇನೆ. ಬಿಜೆಪಿಯವರು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡು ಪಕ್ಷಕ್ಕೆ ಬಲ ಕೊಡುವ ಕೆಲಸವನ್ನು ಮಾಡುವಂತೆ ಮನವಿ ಮಾಡಿದರು. ಯಾವುದೇ ತಾರತಮ್ಯ ಮಾಡದೆ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸವನ್ನು‌ ಮಾಡಿತೋರಿಸುತ್ತೇನೆ ಎಂದು ಹೇಳಿದರು. ಅಭಿವೃದ್ದಿಯಾಗಬೇಕಾದರೆ ಶಾಂತಿ,ಸೌಹಾರ್ಧತೆ ಮುಖ್ಯ. ಪುತ್ತೂರಿನಲ್ಲಿ ಎಲ್ಲಾ ಧರ್ಮದ ಜನರೂ ಒಂದೇ ತಾಯಿ‌ಮಕ್ಕಳಂತೆ ಬದುಕುವ ವಾತಾವರಣ ಸೃಷ್ಟಿಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಪ್ರವೀಣ್ ಚಂದ್ರ ಳ್ವ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

ಅಳಿಕೆ ಗ್ರಾಮದ ಮುಳಿಯದಲ್ಲಿ ಪ್ರಚಾರ ಸಭೆ

Posted by Vidyamaana on 2023-05-01 05:37:43 |

Share: | | | | |


ಅಳಿಕೆ ಗ್ರಾಮದ ಮುಳಿಯದಲ್ಲಿ ಪ್ರಚಾರ ಸಭೆ

ಪುತ್ತೂರು: ಕಳೆದ 5 ವರ್ಷಗಳಲ್ಲಿ ಬಿಜೆಪಿ ಮಾಡಿದ ಅಭಿವೃದ್ದಿ ಕೆಲಸವನ್ನು ಜನತೆಗೆ ತಿಳಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಸವಾಲು ಹಾಕಿದರು. ಅಲ್ಲೊ ಇಲ್ಲೋ ಕೆಲವು ಕಡೆ ರಸ್ತೆಗೆ ಡಾಮಾರು,ಸಿಮೆಂಟ್ ಹಾಕಿದ್ದನ್ನು ಬಿಟ್ಟರೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆಯೇ . ಅಕ್ರಮ ಸಕ್ರಮ ಕಡತಗಳನ್ನು ಹಣ ಕೊಡದೆ ವಿಲೇವಾರಿ ಮಾಡಿದ್ದಾರ? ಬಡವರ ಕಣ್ಣೀರೊರೆಸುವ ಕೆಲಸವನ್ನು ಬಿಜೆಪಿ ಮಾಡಿಯೇ ಇಲ್ಲ. 40% ಕಮಿಷನ್ ಹೊಡೆಯುವ ಉದ್ದೇಶದಿಂದ ಹೆಚ್ಚು ಅನುದಾನವನ್ನು ರಸ್ತೆಗೆ ಬಳಕೆ ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಮಂಜೂರು ಮಾಡಿಸಿಲ್ಲ. ಸಾವಿರಾರು ಕುಟುಂಬಗಳು ಸರಕಾರದ ವಸತಿ ಯೋಜನೆಯಲ್ಲಿ ಮನೆ ನಿವೇಶನಕ್ಕೆ ಅರ್ಜಿ ಹಾಕಿದರೂ ಬಿಜೆಪಿ ಸರಕಾರ ಮನೆ ನೀಡಿಲ್ಲ ಇದು ಬಡವರಿಗೆ ಮಾಡಿದ ಮಹಾದ್ರೋಹವಾಗಿದೆ ಎಂದು ಹೇಳಿದರು. ಸಭೆಯಲ್ಲಿ  ಕೆಪಿಸಿ ಲಸ ಸದಸ್ಯಎಂ ಎಸ್ ಮಹಮ್ಮದ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಪ್ರವೀಣ್ಚಂದ್ರ ಆಳ್ವ, ಪೆರುವಾಯಿ ಗ್ರಾಪಂ ಮಾಜಿ ಅಧ್ಯಕ್ಷೆ ಪುಷ್ಪಾ, ಬ್ಲಾಕ್ ಅಧ್ಯಕ್ಷರಾದ ಡಾ.ರಾಜರಾಂ ಕೆ ಬಿ, ವೇದನಾಥ ಸುವರ್ಣ,ಅಳಿಕೆ ಗ್ರಾಪಂ ಉಪಾಧ್ಯಕ್ಷ ಜಗದೀಶ್ ಶೆಟ್ಟಿ, ಅಳಿಕೆ ಗ್ರಾಪಂ ಮಾಜಿ ಅಧ್ಯಕ್ಷ ಪದ್ಮನಾಭ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

1 ತಿಂಗಳಿನಿಂದ ನಾಪತ್ತೆಯಾಗಿದ್ದ ಡಾ.ಬ್ರೋ ಎಲ್ಲಿದ್ದಾರೆ ಗೊತ್ತಾ? ಇಲ್ಲಿದೆ ಉತ್ತರ

Posted by Vidyamaana on 2023-12-16 15:08:12 |

Share: | | | | |


1 ತಿಂಗಳಿನಿಂದ ನಾಪತ್ತೆಯಾಗಿದ್ದ ಡಾ.ಬ್ರೋ ಎಲ್ಲಿದ್ದಾರೆ ಗೊತ್ತಾ? ಇಲ್ಲಿದೆ ಉತ್ತರ

DrBro, ನಮಸ್ಕಾರ ದೇವ್ರು ಅಂತಲೇ ವಿಡಿಯೋ ಶುರು ಮಾಡುವ ಗಗನ್ ಶ್ರೀನಿವಾಸನ್ ಯೂಟ್ಯೂಬ್ ನೋಡೋ ಜನರು ಮಾತ್ರವಲ್ಲ ಸೋಷಿಯಲ್ ಮೀಡಿಯಾ ಬಳಸೋ ಎಲ್ಲರಿಗೂ ಅತ್ಯಂತ ಅಚ್ಚು ಮೆಚ್ಚು ಅಂತಲೇ ಹೇಳಬಹುದುಕಳೆದೊಂದು ತಿಂಗಳಿಂದ ಒಂದೇ ಒಂದು ವಿಡಿಯೋ ಸಹ ಹಾಕದೆ ಎಲ್ಲಿದ್ದಾರೆ ಎಂಬ ಮಾಹಿತಿಯೂ ಇಲ್ಲದೆ ಅವರ ಅಭಿಮಾನಿಗಳು, ನೆಟ್ಟಿಗರು ಆತಂಕಕ್ಕೂ ಒಳಗಾಗಿದ್ದಾರೆ.ಕಳೆದ ಚೀನಾ ಪ್ರವಾಸ ಕೈಗೊಂಡಿದ್ದ ಅವರು ಇದಾದ ಬಳಿಕ ಒಂದೂ ವಿಡಿಯೋ ಹಂಚಿಕೊಂಡಿಲ್ಲ.


ಇನ್ನು ಇದೀಗ ಡಾ ಬ್ರೋ(Dr Bro) ಕಳೆದ ಒಂದು ತಿಂಗಳಿನಿಂದ ವಿಡಿಯೋ ಮಾಡಿಲ್ಲ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದನ್ನ ನೋಡೊದ ಗಗನ್ ಅವ್ರು ಅಭಿಮಾನಿಗಳು ಹಾಗೂ ನೆಟ್ಟಿಗರು ನಾಪತ್ತೆಯಾಗಿದ್ದಾರೆ ಗಗನ್ ಅಂತ ಸುದ್ದಿ ಹಬ್ಬಿಸಿದ್ರು. ಮಾಧ್ಯಮದವರು ಕೂಡ ಚೀನಾ ದೇಶದ ವಿಡಿಯೋ ಮಾಡಿ ಡಾ. ಬ್ರೋ ತೊಂದ್ರೇಗೆ ಸಿಲುಕಿದ್ದಾರೆ ಅಂತ ಹೇಳಿದ್ರು ಆದ್ರೆ ಇದೀಗ ಡಾ. ಬ್ರೋ ಬಗ್ಗೆ ಹೊಸ ಸುದ್ದಿಯೊಂದು ಸ್ಯಾಂಡಲ್ವುಡ್ ನಲ್ಲಿ ಹರಿದಾಡುತ್ತಿದ್ದೂ, ನಟ ಶೈನ್ ಶೆಟ್ಟಿ ಈ ಕುರಿತ ವಿಚಾರವೊಂದನ್ನ ಹಂಚಿಕೊಂಡಿದ್ದಾರೆ. ಹಾಗಾದ್ರೆ ಗಗನ್ ಎಲ್ಲಿದ್ದಾರೆ ಏನ್ ಮಾಡ್ತಿದ್ದಾರೆ? ಗಗನ್ ಬಗ್ಗೆ ಶೈನ್ ಶೆಟ್ಟಿ ಹೇಳಿದ್ದೇನು ನೋಡೋಣ ಬನ್ನಿ.ಡಾಕ್ಟರ್​​ ಬ್ರೋ(Dr Bro) ಅವ್ರ ನಿಜವಾದ ಹೆಸರು ಗಗನ್ ಶ್ರೀನಿವಾಸ್. ಇವ್ರು ಮೂಲತಃ ಬೆಂಗಳೂರಿನ ಹೊರವಲಯದವರು. ಹುಟ್ಟಿ ಬೆಳದದ್ದು ಮದ್ಯಮ‌ ವರ್ಗದ ಕುಟುಂಬದಲ್ಲಿ.ಇವ್ರ ತಂದೆ ಶ್ರೀನಿವಾಸ್​ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿಯ ಹೆಸರು ಪದ್ಮಾ ಅವರು ಮನೆಯಲ್ಲಿಯೆ ಇರುತ್ತಾರೆ. ಇನ್ನು ಗಗನ್ ಎರಡನೆ ತರಗತಿಯಲ್ಲಿ ಓದುತ್ತಿರುವಾಗಲೇ ಪೌರೋಹಿತ್ಯ ಕಲಿತು, ತಂದೆ ಇಲ್ಲದ ಸಮಯದಲ್ಲಿ ತಾವೇ ದೇವಸ್ಥಾನದ ಪೂಜೆ ಮಾಡುತ್ತಿದ್ದರು. ಡಾ ಬ್ರೋಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಹೀಗಾಗಿ ಯಾವಾಗಲೂ ಹಾಡು, ಡ್ಯಾನ್ಸ್​​ ನಿರೂಪಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರಿಂದ ಓದಿನ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿರಲಿಲ್ಲ. ಹೀಗಾಗಿ ಭರತನಾಟ್ಯ ಕಲಿತು ಭರತನಾಟ್ಯ ಕ್ಲಾಸ್‌ ಕೂಡ ನಡೆಸುತ್ತಿದ್ದರು. ಇನ್ನು ನಂತರದಲ್ಲಿ ಫೋಟೋಗ್ರಾಫಿ ವಿಡಿಯೋ ಗ್ರಾಫಿ ಕಲಿಯುತ್ತಾರೆ.ಇದಾದ ನಂತರ 2016 ರಲ್ಲಿ ತನ್ನದೇ ಆದ ಡಾಕ್ಟರ್​​ ಬ್ರೋ ಯೂಟ್ಯೂಬ್‌ ಚಾನೆಲ್ ಶುರು ಮಾಡಿದ್ರು. ಪ್ರಾರಂಭದಲ್ಲಿ ಕಾಮಿಡಿ ವಿಡಿಯೋವನ್ನು ಮಾಡಿ ಅಪ್ಲೋಡ್ ಮಾಡಿ ಸ್ವಲ್ಪ ಮಟ್ಟಿನ ಜನಪ್ರಿಯತೆ ಪಡೆದುಕೊಂಡ್ರು. ನಂತರ ಸಿನಿಮಾ ನಟ ನಟಿಯರ ಇಂಟರ್ವ್ಯೂ ಮಾಡಿ ಹಾಕುತ್ತಿದ್ರು. ಇದೆಲ್ಲಾ ಆದ ನಂತರ ಇದೀಗ ಡಾ. ಬ್ರೋ ವಿಡಿಯೋಗಳು ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ ಕಾರಣ ರಾಜ್ಯದ ಬೇರೆ ಬೇರೆ ಕಡೆ ಸುತ್ತಾಡಿ ಅಲ್ಲಿನ‌ ವಿವರ ಕೊಡಲು ಶುರುಮಾಡಿ, ಅಂತರಾಜ್ಯ, ದೇಶ, ವಿದೇಶ ಸುತ್ತಿ ಅಲ್ಲಿನ ಆಚಾರ ವಿಚಾರ ಅವ್ರ ಜೀವನ ಶೈಲಿ ಆಹಾರ ಪದ್ಧತಿ ಸೇರಿದಂತೆ ಎಲ್ಲವನು ಕೂಡ ನೋಡುಗರು ಮುಂದೆ ತಂದಿಡುತ್ತಿದ್ರು. ಇಂತ ವಿಷಯಗಳಿಂದಲೇ ಡಾ. ಬ್ರೋ ಗೆ ಅಭಿಮಾನಿ ವರ್ಗ ಹೆಚ್ಚಾಗಿದೆ. ದೇಶ ಮಾತ್ರ ಅಲ್ಲಾ ಪ್ರಪಂಚದಾದ್ಯಂತ ಇದೀಗ ಡಾ. ಬ್ರೋ ಸಕತ್ ಫೇಮಸ್ ಆಗಿದ್ದರು ಆದ್ರೆ ಕಳೆದ ಒಂದು ತಿಂಗಳಿನಿಂದ ಡಾ. ಬ್ರೋ ಎಲ್ಲಿಯೂ ಕಾಣಿಸಿಲ್ಲ, ವಿಡಿಯೋನು ಮಾಡಿಲ್ಲ ಎಲ್ಲಿ ಹೋಗಿಬಿಟ್ರು ಅಂತ ಎಲ್ರು ಕೇಳ್ತಿದ್ರು ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಡಾ ಬ್ರೋ ಎಲ್ಲಿಯೂ ಹೋಗಿಲ್ಲ ಇಲ್ಲೆ ಇದ್ದಾರೆ ನೋಡಿ ಅಂತ ಶೈನ್ ಶೆಟ್ಟಿಬರೆದುಕೊಂಡಿದ್ದಾರೆ

Recent News


Leave a Comment: