ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಸುದ್ದಿಗಳು News

Posted by vidyamaana on 2024-07-06 04:30:03 |

Share: | | | | |


ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ಶನಿವಾರ (ನಾಳೆ, ಜು.6) ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ

ಪದವಿ ಪೂರ್ವ ಕಾಲೇಜುಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿ ಆದೇಶಿಸಿದ್ದಾರೆ.

 Share: | | | | |


ಎಲ್‌ಕೆಜಿ ತರಗತಿಯ ಗೋಡೆಗಳಲ್ಲಿ ಬಣ್ಣದ ಅಂಗ್ಲ ಆಕ್ಷರಗಳ ವರ್ಣಮಾಲೆ...

Posted by Vidyamaana on 2023-10-27 20:34:17 |

Share: | | | | |


ಎಲ್‌ಕೆಜಿ ತರಗತಿಯ ಗೋಡೆಗಳಲ್ಲಿ ಬಣ್ಣದ ಅಂಗ್ಲ ಆಕ್ಷರಗಳ ವರ್ಣಮಾಲೆ...

ಪುತ್ತೂರು: ಎ ಬಿ ಸಿ ಡಿ ಹೀಗೇ Zತನಕ ಇಂಗ್ಲೀಷ್ ಅಕ್ಷರಗಳು ತರಗತಿಯ ಗೋಡೆಗಳಲ್ಲಿ ಬಣ್ಣ ಬಣ್ಣಗಳಿಂದ ಬರೆಯಲಾಗಿದೆ, ಜೊತೆಗೆ ಅಕ್ಷರ ಓದಲು ಕಲಿಯುವಂತೆ ಸಹಕಾರಿಯಾಗಲು ಹೊಂದಿಕೊಂಡಿರುವ ಚಿತ್ರಗಳು, ಗೋಡೆಗಳಲ್ಲಿರುವ ಅಕ್ಷರವನ್ನು ನೋಡಿ ಪುಸ್ತಕದಲ್ಲಿ ಬರೆಯುವ ಅಬ್ಯಾಸ ಮಾಡಿಕೊಳ್ಳುವ ಹಾಲುಗಲ್ಲದ ಪುಟ್ಟ ಮಕ್ಕಳು. ಇದು ಕಂಡು ಬಂದಿದ್ದು ಕಾವು ಸರಕಾರಿ ಎಲ್‌ಕೆಜೆ ಯುಕೆಜಿ ತರಗತಿ ಕೊಠಡಿಯಲ್ಲಿ. ಮಕ್ಕಳ ಕಲಿಕೆಗೆ ನರವಾಗಲೆಂದು ಇಂಗ್ಲೀಷ್ ಅಕ್ಷರಗಳನ್ನು ಗೋಡೆಗಳಲ್ಲಿ ಜೋಡಿಸಿದ್ದು ಲಿಯೋ ಕ್ಲಬ್ ತಂಡ, ಲಯನ್ಸ್ ಕ್ಲಬ್ ನ ಸಹಬಾಗಿತ್ವದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಲಿಯೋ ಕ್ಲಬ್ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದೆ.

ಕಾವು ಸರಕಾರಿ ಪ್ರಾಥಮಿಕ ಶಾಲೆಯನ್ನು ಕಾವು ಹೇಮನಾಥ ಶೆಟ್ಟಿಯವರು ದತ್ತು ತೆಗೆದುಕೊಂಡಿದ್ದಾರೆ. ದತ್ತು ತೆಗೆದುಕೊಂಡ ಬಳಿಕ ಇಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ ಯುಕೆಜಿ ತರಗತಿಯನ್ನು ಪ್ರಾರಂಭ ಮಾಡಲಾಗಿದೆ. ಸರಕಾರ ಕೆಪಿಎಸ್ ಸ್ಕೂಲ್‌ಗಳಲ್ಲಿ ಆಂಗ್ಲ ಮಾದ್ಯಮ ತರಗತಿ ಆರಂಭ ಮಾಡುವ ಮೊದಲೇ ಕಾವು ಸರಕಾರಿ ಶಾಲೆಯಲ್ಲಿ ಇಂಗ್ಲೀಷ್ ಕ್ರಾಂತಿಯನ್ನು ಪ್ರಾರಂಭಿಸಲಾಗಿತ್ತು. ಮಕ್ಕಳ ಸಂಖ್ಯೆಯೂ ಗಣನೀಯವಾಗಿದೆ.


ಕಲಿಕೆಗೆ ಸಹಕಾರಿ

ತರಗತಿಯ ಕೊಠಡಿಯ ಗೋಡೆಗಳಲ್ಲಿ ಇಂಗ್ಲೀಷ್ ಅಕ್ಷರಮಾಲೆಯನ್ನು ಚಿತ್ರ ಸಹಿತ ಬರೆದಿರುವ ಕಾರಣ ಮಕ್ಕಳಿಗೆ ಅಕ್ಷರದ ಪರಿಚಯ ಮತ್ತು ಅಕ್ಷರವನ್ನು ಬರೆಯುವ ವಿಧಾನವನ್ನು ಸುಲಭದಲ್ಲಿ ಮನನ ಮಾಡಬಹುದಾಗಿದೆ. ಸಾಧಾರಣವಾಗಿ ಶಾಲೆಯ ಗೋಡೆಗಳಲ್ಲಿ ಪಕ್ಷಿ, ಪರಿಸರ ಸೇರಿದಂತೆ ಇತರೆ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಲಾಗುತ್ತದೆ. ಕಾವು ಶಾಲೆಯಲ್ಲಿ ಲಿಯೋ ಕ್ಲಬ್ ಮಕ್ಕಳ ಶಿಕ್ಷಣಕ್ಕೆ ನೆರವು ಆಗುವ ರೀತಿಯಲ್ಲಿ ಚಿತ್ರಗಳನ್ನು , ಅಕ್ಷರಗಳನ್ನು ಬರೆದಿರುವುದು ಮಕ್ಕಳ ಪೋಷಕರಲ್ಲೂ ಸಂತಸಕ್ಕೆ ಕಾರಣವಾಗಿದೆ. ಕಳೆದ ೨೦ ದಿನಗಳ ಹಿಂದೆ ಈ ಚಿತ್ರಗಳನ್ನು ಬಿಡಿಸಲಾಗಿದ್ದು ಆ ಬಳಿಕ ಮಕ್ಕಳ ಕಲಿಕಾ ಉತ್ಸಾಹವೂ ಇಮ್ಮಡಿಗೊಂಡಿದೆ ಮತ್ತು ಅಕ್ಷರ ಜ್ಞಾನವೂ ಮಕ್ಕಳಲ್ಲಿ ವೃದ್ದಿಯಾಗಿದೆ ಎನ್ನುತ್ತಾರೆ ಪೋಷಕರು.


ಆದೃತಿ ಯೋಜನೆಯಡಿ ನಾಲ್ಕು ಜಿಲ್ಲೆಗಳಲ್ಲಿ ಸೇವೆ

ಲಿಯೋ ಕ್ಲಬ್ ಇದರ ಆದೃತಿ ಯೋಜನೆಯಡಿ ಕ್ಲಬ್ ವ್ಯಾಪ್ತಿಯ ಹಾಸನ , ಚಿಕ್ಕಮಗಳೂರು, ಮಡಿಕೇರಿ ಮತ್ತು ದ ಕ ಜಿಲ್ಲೆಯ ಆಯ್ದ ೧೫ ಸರಕಾರಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಇದೇ ಸೇವೆ ನಡೆಯಲಿದೆ. ದ ಕ ಜಿಲ್ಲೆಯ ಕಿನ್ನಿಗೋಳಿ ಕರೆಕಾಡು, ಹಳೆಯಂಗಡಿ ಕೊಳ್ನಾಡಿ ಮುಚ್ಚಿ, ಮೂಡಬಿದ್ರೆ ಮಚ್ಚೂರು ಶಾಲೆ ಹಾಗೂ ಮಂಗಳೂರು ನಗರ ವ್ಯಾಪ್ತಿಯ ಸರಕಾರಿ ಶಾಲೆಗಳಲ್ಲಿ ವರ್ಣಮಾಲೆ ಅಕ್ಷರ ಜೋಡನಾ ಕಾರ್ಯಕ್ಕೆ ಆಯ್ಕೆಗೊಂಡಿದೆ. ಲಿಯೋ ಕ್ಲಬ್ ವತಿಯಿಂದ ಆರೋಗ್ಯ ಮೇಳ, ಉದ್ಯೋಗ ಮೇಳ, ವಿಕಲಚೇತನರ ಜೊತೆ ಸಹಭೋಜನೆ, ವ್ಯಕ್ತಿತ್ವ ವಿಕಸನ ಸಮಾವೇಶ, ಸೇರಿದಂತೆ ಇನ್ನಿತರ ಸಮಾಜಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು ಕ್ಲಬ್‌ನ ಹಿರಿಮೆಯನ್ನು ಹೆಚ್ಚಿಸಿದೆ.




ಲಿಯೋ ಕ್ಲಬ್ ಸಂಸ್ಥೆ ಈ ಸೇವೆ ಇನ್ನೊಬ್ಬರಿಗೆ ಉತ್ತೇಜನ ನೀಡುವ ಕಾರ್ಯವಾಗಿದೆ. ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ಗ್ರಾಮೀಣ ಮಕ್ಕಳ ಕಲಿಕೆಗೆ ಸಹಾಯ ಮಾಡುವ ಉದ್ದೇಶದಿಂದ ಈ ವರ್ಣ ಮಾಲೆಯನ್ನು ರಚಿಸಿದ್ದು ಇದಕ್ಕಾಗಿ ನಾನು ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಇದೇ ಸೇವೆಯನ್ನು ಕ್ಲಬ್ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಮುಂದುವರೆಸಲಿದ್ದಾರೆ. ಸಂಸ್ಥೆಯ ಮೂಲಕ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಮುಂದಿನ ಯುವ ಸಮೂಹವಕ್ಕೆ ಸಮಾಜ ಸೇವಾ ಮನೋಭಾವ ಬೆಳೆಸುವ ಕೆಲಸ ನಿರಂತರ ಆಗಬೇಕಿದ್ದು ಅದನ್ನು ಲಿಯೋ ಕ್ಲಬ್ ಮೂಲಕ ನಡೆಸಲಾಗುತ್ತಿದೆ.

ಮೆಲ್ವಿನ್ ಡಿಸೋಜಾ, ಲಯನ್ಸ್ ಜಿಲ್ಲಾ ಗವರ್‍ನರ್

ಚಿತ್ರ ಇದೆ






ಲಿಯೋ ಡಿಸ್ಟ್ರಿಕ್ಟ್ ೩೧೭ ಡಿ ಇದರ ವತಿಯಿಂದ ಕ್ಲಬ್ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಆಯ್ದ ಸರಕಾರಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ತರಗತಿ ಗಳಲ್ಲಿ ಮಕ್ಕಳ ಕಲಿಕೆಗೆ ನೆರವಾಗುವುದು ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಕೊಠಡಿಗಳಲ್ಲಿ ಆಧುನಿಕತೆಯ ಟಚಪ್‌ನೊಂದಿಗೆ ಅಕ್ಷರ ವರ್ಣ ಮಾಲೆಯನ್ನು ಚಿತ್ರದ ಮೂಲಕ ಬರೆಯಲಾಗಿದೆ. ಪ್ರಸಿದ್ದ ಆರ್ಟಿಸ್ಟ್ ಮೂಲಕ ಈ ವರ್ಣ ಮಾಲೆಯನ್ನು ರಚಿಸಲಾಗಿದೆ. ಲಿಯೋ ಕ್ಲಬ್ ಸದಸ್ಯರ ಸಹಕಾರದಿಂದ ಚಿತ್ರಕ್ಕೆ ಬಣ್ಣ ಕೊಡುವ ಕಾರ್ಯವನ್ನು ಮಾಡಲಾಗಿದೆ.  ಕ್ಲಬ್ ವತಿಯಿಂದ ಮಕ್ಕಳ ಕಲಿಕಾ ವ್ಯವಸ್ಥೆಗೆ ಒತ್ತು ನೀಡುವ ಉದ್ದೇಶವೂ ಇದರ ಹಿಂದೆ ಇದ್ದು , ಕ್ಲಬ್ ವ್ಯಾಪ್ತಿಯ ದ ಕ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ ಸೇವೆಯನ್ನು ನಡೆಸಲಾಗುವುದು. ಕ್ಲಬ್ ಯೋಜನೆಗೆ ಪೋಷಕರಿಂದ ಮತ್ತು ಸಾರ್ವಜನಿಕರಿಂದ ಅಭಿನಂದನೆಗಳು ವ್ಯಕ್ತವಾಗಿದೆ, ಸಮಾಜ ಸೇವೆ ಇನ್ನೂ ಮುಂದುವರೆಯಲಿದೆ.


ಡಾ. ರಂಜಿತಾ ಎಚ್ ಶೆಟ್ಟಿ

ಜಿಲ್ಲಾಧ್ಯಕ್ಷರು ಲಿಯೋ ಕ್ಲಬ್ ೩೧೭ಡಿ

ಚಿತ್ರ ಇದೆ



ಕಲಿಕೆಗೆ ತುಂಬಾ ಸಹಕಾರಿಯಾಗಿದೆ

ತರಗತಿಯ ಗೋಡೆಗಳಲ್ಲಿ ಇಂಗ್ಲೀಷ್ ವರ್ಣಮಾಲೆಯನ್ನು ಚಿತ್ರ ಸಹಿತ ಬರೆದಿರುವುದು ನಮಗೆ ತುಂಬಾ ಸಹಕಾರಿಯಾಗಿದೆ. ಮಕ್ಕಳಿಗೆ ಅಕ್ಷರದ ಪರಿಚಯ ಮಾಡಿಸಲು ಮತ್ತು ಬರೆಯವುದು ಮತ್ತು ಓದುವುದನ್ನು ಕಲಿಸಲು ಇದು ಪ್ರಯೋಜನಕಾರಿಯಾಗಿದ್ದು ಇತರ ಕಡೆಗೂ ಇದು ವಿಸ್ತರಣೆಯಾಗಬೇಕಿದೆ.


ವಂದಿತಾ, ಕಾವು ಶಾಲೆ ಶಿಕ್ಷಕಿ

ಲಕ್ಷ್ಮೀ ದೇವಿ ಬೆಟ್ಟಕ್ಕೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಭೇಟಿ

Posted by Vidyamaana on 2023-04-21 16:46:13 |

Share: | | | | |


ಲಕ್ಷ್ಮೀ ದೇವಿ ಬೆಟ್ಟಕ್ಕೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಭೇಟಿ

ಪುತ್ತೂರು : ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಇರುವ ಶ್ರೀ ಲಕ್ಷ್ಮೀ ದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕ್ಕೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಶುಕ್ರವಾರ ಭೇಟಿ ನೀಡಿದರು.


ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಆಶಾ ತಿಮ್ಮಪ್ಪ ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು

ಎಲೆಕ್ಷನ್‌ಗೆ ನಿಂತುಕೊಳ್ಳೋಕೆ ನನ್ನತ್ರ ದುಡ್ಡಿಲ್ಲ ಎಂದ ಹಣಕಾಸು ಸಚಿವೆ! ಇದು ನಿಜನಾ? ಇವರ ಒಟ್ಟು ಆಸ್ತಿ ಎಷ್ಟು

Posted by Vidyamaana on 2024-03-28 17:11:08 |

Share: | | | | |


ಎಲೆಕ್ಷನ್‌ಗೆ ನಿಂತುಕೊಳ್ಳೋಕೆ ನನ್ನತ್ರ ದುಡ್ಡಿಲ್ಲ ಎಂದ ಹಣಕಾಸು ಸಚಿವೆ! ಇದು ನಿಜನಾ? ಇವರ ಒಟ್ಟು ಆಸ್ತಿ ಎಷ್ಟು

ನವದೆಹಲಿ: ಕೇಂದ್ರ ಹಣಕಾಸು ಸಚಿವೆಯೇ (Finance Minister Nirmala Sitharaman) ತನ್ನ ಬಳಿ ಹಣ ಇಲ್ಲದ ಕಾರಣ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಹೇಳಿಕೆ ನೀಡಿರುವುದು ಎಲ್ಲರ ಹುಬ್ಬೇರಿಸಿದೆ. ಚುನಾವಣೆಗೆ ಬೇಕಾದಷ್ಟು ಹಣ ಇಲ್ಲದ ಕಾರಣ ನಾನು ಈ ಬಾರಿ ಚುನಾವಣೆಗೆ ನಿಲ್ಲುತ್ತಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್​​ ಟೈಮ್ಸ್ ನೌ ಶೃಂಗಸಭೆ 2024ರಲ್ಲಿ ಹೇಳಿಕೆ ನೀಡಿದ್ದಾರೆ.ಬಿಜೆಪಿ ಅಧ್ಯಕ್ಷ ನಡ್ಡಾ ಅವರು ಆಂಧ್ರಪ್ರದೇಶ ಅಥವಾ ತಮಿಳುನಾಡಿನಿಂದ ಸ್ಪರ್ಧಿಸುವ ಆಯ್ಕೆಯನ್ನು ನೀಡಿದ್ದರು. ನಾನು ಸುಮಾರ 10 ದಿನಗಳ ಕಾಲ ಯೋಚಿಸಿ ಕೊನೆಗೆ ಸ್ಪರ್ಧಿಸೋಲ್ಲ ಎಂದು ತಿಳಿಸಿದೆ. ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ. ಇನ್ನು ಚುನಾವಣೆಗೆ ನಿಲ್ಲಲು ಆಂಧ್ರಪ್ರದೇಶ ಅಥವಾ ತಮಿಳುನಾಡು ಎರಡೂ ಕಡೆ ನನಗೆ ಸಮಸ್ಯೆ ಇದೆ. ನೀವು ಯಾವ ಸಮುದಾಯದವರು ಅಥವಾ ನಿಮ್ಮ ಧರ್ಮ ಯಾವುದು ಎಂಬೆಲ್ಲಾ ವಿಷಯಗಳು ಚುನಾವಣೆಯಲ್ಲಿ ಮಾನದಂಡವಾಗುತ್ತೆ. ಅವುಗಳನ್ನು ನಾನು ಎದುರಿಸಿ ನಿಭಾಯಿಸಬಲ್ಲೆ ಎಂಬ ಭರವಸೆ ಇಲ್ಲ. ಹಾಗಾಗಿ ನಾನು ಚುನಾವಣೆಗೆ ಸ್ಪರ್ಧಿಸುವ ಪ್ರಸ್ತಾಪವನ್ನು ತಿರಸ್ಕರಿಸಿದೆ. ನನ್ನ ವಾದವನ್ನು ಪಕ್ಷ ಕೂಡ ಒಪ್ಪಿಕೊಂಡಿದೆ ಎಂದು ಸಚಿವೆ ತಿಳಿಸಿದ್ದಾರೆ.ಭಾರತದ ಹಣ ನನ್ನದಲ್ಲ


ಬೆಂಕಿ ಆರಿಸಲು ಬಂದ ಅಗ್ನಿಶಾಮಕ ವಾಹನದಲ್ಲೇ ನೀರಿಲ್ಲ! ಬಿದ್ದು..ಬಿದ್ದು ನಕ್ಕ ಜನ..!

Posted by Vidyamaana on 2024-05-19 09:34:54 |

Share: | | | | |


ಬೆಂಕಿ ಆರಿಸಲು ಬಂದ ಅಗ್ನಿಶಾಮಕ ವಾಹನದಲ್ಲೇ ನೀರಿಲ್ಲ! ಬಿದ್ದು..ಬಿದ್ದು ನಕ್ಕ ಜನ..!

ಉಡುಪಿ, ಮೇ 18: ಬೆಂಕಿ ಆರಿಸಲು ಬಂದ ಅಗ್ನಿಶಾಮಕ ದಳದ ವಾಹನದಲ್ಲಿ ನೀರಿಲ್ಲದೇ ಕಟ್ಟಡ ಸುಟ್ಟು ಹೋದ ಘಟನೆ ಆದಿ ಉಡುಪಿ ಬಳಿ ನಡೆದಿದೆ. ಈ ವಿಚಾರ ವೈರಲ್‌ ಆಗಿದ್ದು, ಘಟನೆ ಬಗ್ಗೆ ತಿಳಿದ ಕೆಲವರು ಅಗ್ನಿಶಾಮಕ ದಳ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಆಕ್ರೋಶಗೊಂಡಿದ್ದರೆ, ಇನ್ನೂ ಕೆಲವರು ಬಿದ್ದು ಬಿದ್ದು ನಕ್ಕಿದ್ದಾರೆ.

ಆದಿ ಉಡುಪಿ ಬಳಿ ಬಳಿಯ ಹೋಟೆಲ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಸ್ಥಳೀಯರು ಬ್ರಹ್ಮಗಿರಿಯಲ್ಲಿರುವ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದರು. ಅರ್ಧಗಂಟೆಯ ಬಳಿಕ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ವಾಹನ ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ತಯಾರಿ ನಡೆಸುವಾಗ ವಾಹನದಲ್ಲಿ ನೀರಿಲ್ಲ ಎನ್ನುವುದು ತಿಳಿದು ಬಂದಿದೆ

ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

Posted by Vidyamaana on 2024-07-03 19:28:29 |

Share: | | | | |


ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು:  ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.

ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.

ಟೊಪ್ಪಿ ಹೆಲ್ಮೆಟ್ ಧರಿಸಿಕೊಂಡು ವಾಹನ ಚಲಾಯಿಸಿದರೆ ಬೀಳುತ್ತೆ ದಂಡ

Posted by Vidyamaana on 2023-08-04 09:10:15 |

Share: | | | | |


ಟೊಪ್ಪಿ ಹೆಲ್ಮೆಟ್ ಧರಿಸಿಕೊಂಡು ವಾಹನ ಚಲಾಯಿಸಿದರೆ ಬೀಳುತ್ತೆ ದಂಡ

 ಪುತ್ತೂರು: ಅಪಘಾತ ಸಂದರ್ಭ ತಲೆಯನ್ನು ರಕ್ಷಿಸುವ ದೃಷ್ಟಿಯಿಂದ ಹೆಲ್ಮೆಟ್ ಧಾರಣೆಯನ್ನು ಈಗಾಗಲೇ ಕಡ್ಡಾಯ ಮಾಡಲಾಗಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅರ್ಧ ಹೆಲ್ಮೆಟ್ ಧಾರಣೆಗೆ ಮತ್ತು ಐ.ಎಸ್.ಐ ಮಾರ್ಕ್ ಇಲ್ಲದ ಹೆಲ್ಮೆಟ್ ಗಳಿಗೂ ಪುತ್ತೂರಿನಲ್ಲೂ ಶೀಘ್ರವೇ ಮುಕ್ತಿ ಸಿಗಲಿದೆ ಎಂದು ತಿಳಿದುಬಂದಿದೆ.

ಹೆಲ್ಮೆಟ್ ಕಡ್ಡಾಯ ಮಾಡುತ್ತಿದ್ದಂತೆ, ವಿವಿಧ ವಿನ್ಯಾಸದ ಹೆಲ್ಮೆಟ್‌ಗಳು ಮಾರುಕಟ್ಟೆ ಪ್ರವೇಶಿಸಿದ್ದವು. ದ್ವಿಚಕ್ರ ವಾಹನ ಸವಾರರು ವೈವಿಧ್ಯಮಯವಾದ ಹೆಲ್ಮೆಟ್‌ಗಳನ್ನು ಧರಿಸಿಕೊಂಡು ಓಡಾಡುವುದನ್ನು ಕಾಣಬಹುದು. ಇದರಲ್ಲಿ ಕೆಲವಷ್ಟೇ ಭದ್ರತೆಯನ್ನು ನೀಡಿದರೆ, ಉಳಿದವುಗಳು ಕೇವಲ ಫ್ಯಾಷನ್‌ಗಷ್ಟೇ ಸೀಮಿತವಾಗಿವೆ. ಇಂತಹ ಹೆಲ್ಮೆಟ್‌ಗಳು ಜೀವಕ್ಕೆ ಭದ್ರತೆಯನ್ನು ನೀಡುವಲ್ಲಿ ವಿಫಲವಾಗಿವೆ. ಇದರಲ್ಲಿ ಅರ್ಧ ಹೆಲ್ಮೆಟ್‌ಗಳು ಕೂಡ ಒಂದು.

ಇನ್ನು ಐ.ಎಸ್.ಐ ಮಾರ್ಕ್ ಇಲ್ಲದ ಹೆಲ್ಮೆಟ್ ಗಳು ಅಪಘಾತದ ಸಂದರ್ಭದಲ್ಲಿ ಸವಾರನಿಗೆ ರಕ್ಷಣೆ ನೀಡುವುದಿಲ್ಲ ಬದಲಾಗಿ ಇದು ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಹಲವರು ಐ.ಎಸ್.ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುತ್ತಾರೆ.

ಅರ್ಧ ಹೆಲ್ಮೆಟ್‌ಗಳು ಮುಖದ ಭಾಗಕ್ಕೆ, ಕತ್ತಿನ ಭಾಗಕ್ಕೆ ಹಾಗೂ ತಲೆಯ ಎರಡು ಬದಿಗಳಿಗೆ ರಕ್ಷಣೆಯನ್ನು ನೀಡುವುದಿಲ್ಲ. ಅಪಘಾತ ಸಂಭವಿಸಿದಾಗ ಮುಖದ ಹಾಗೂ ತಲೆಯ ಹಿಂಬದಿ ಭಾಗಕ್ಕೆ ಗಂಭೀರ ಗಾಯಗಳಾಗುವ ಸಾಧ್ಯತೆಗಳೇ ಅಧಿಕ. ಈ ಎಲ್ಲಾ ದೃಷ್ಟಿಯಿಂದ ಅರ್ಧ ಹೆಲ್ಮೆಟ್‌ಗಳಿಗೆ ಮುಕ್ತಿ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಕೆಲವೇ ದಿನಗಳಲ್ಲಿ ಪುತ್ತೂರಿನಲ್ಲಿ ಅರ್ಧ ಹೆಲ್ಮೆಟ್‌ಗಳಿಗೆ ಮತ್ತು ಐ.ಎಸ್.ಐ ಮಾರ್ಕ್ ರಹಿತ ಹೆಲ್ಮೆಟ್ ಗಳಿಗೆ ಮುಕ್ತಿ ಸಿಗುವುದು ಪಕ್ಕಾ. ಫ್ಯಾಶನ್ ಬದಲು ವಾಹನ ಸವಾರರ ಜೀವ ಉಳಿಸಲು ಒತ್ತು ನೀಡಬೇಕು ಎನ್ನುವ ಆಶಯ ಇದರ ಹಿಂದಿದೆ.

Recent News


Leave a Comment: