ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸುದ್ದಿಗಳು News

Posted by vidyamaana on 2024-07-05 17:03:24 |

Share: | | | | |


ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಳ್ತಂಗಡಿ : ಅಕ್ರಮ ಕಲ್ಲು ಕೊರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಗೆ ಹೋಗಿ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ಹಾಗೂ ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಹಾಕಿದ್ದ ಅರ್ಜಿಯನ್ನು ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ಇಂದು ವಜಾಗೊಳಿಸಿದೆ.

ಎರಡು ಪ್ರಕರಣವನ್ನು ರದ್ದು ಕೋರಿ ಹಾಕಿದ ಅರ್ಜಿಯ ಬಗ್ಗೆ ಜೂ. 5 ರಂದು(ಇಂದು) ಬೆಂಗಳೂರಿನ ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್ ಎರಡು ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ ಹಾಗೂ ಈ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರದೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

 Share: | | | | |


ನಾವು ಗ್ಯಾರಂಟಿ ಕೊಟ್ಟೂ ದಿವಾಳಿಯಾಗಿಲ್ಲ, ಮೋದಿ ನಮ್ಮ ಗ್ಯಾರಂಟಿಯನ್ನೇ ಕದ್ಬಿಟ್ಟಿದ್ದಾರೆ ; ಸಿಎಂ ಸಿದ್ದರಾಮಯ್ಯ

Posted by Vidyamaana on 2024-02-17 22:02:06 |

Share: | | | | |


ನಾವು ಗ್ಯಾರಂಟಿ ಕೊಟ್ಟೂ ದಿವಾಳಿಯಾಗಿಲ್ಲ, ಮೋದಿ ನಮ್ಮ ಗ್ಯಾರಂಟಿಯನ್ನೇ ಕದ್ಬಿಟ್ಟಿದ್ದಾರೆ ; ಸಿಎಂ ಸಿದ್ದರಾಮಯ್ಯ

ಮಂಗಳೂರು, ಫೆ.17: ಇಡೀ ದೇಶದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯ ನಮ್ಮದು. ಆದರೆ 4.30 ಲಕ್ಷ ಕೋಟಿ ರೂಪಾಯಿ ತೆರಿಗೆಯನ್ನು ಪ್ರತಿ ವರ್ಷ ಕೇಂದ್ರಕ್ಕೆ ನೀಡುತ್ತೇವೆ. ನಮಗೆ ತಿರುಗಿ ಕೋಡುತ್ತಿರೋದು ಕೇವಲ 50,527 ಕೋಟಿ. ಇದು ಅನ್ಯಾಯ ಅಲ್ವೇ.. 25 ಮಂದಿ ಎಂಪಿಗಳು ಕೋಲೆ ಬಸವರ ಥರ ಹೋಗಿದ್ದೀರಲ್ಲಾ.. ಕನ್ನಡಿಗರಿಗಾದ ಅನ್ಯಾಯವನ್ನು ನೀವು ಕೇಳಿದ್ದೀರಾ.. ನೀವು ಕನ್ನಡಿಗರಿಗೆ ದ್ರೋಹ ಮಾಡಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.


ನಗರದ ಅಡ್ಯಾರಿನಲ್ಲಿ ನಡೆದ ಎರಡು ಜಿಲ್ಲೆಗಳ ಕಾರ್ಯಕರ್ತರ ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ವೀರಾವೇಶದ ಭಾಷಣ ಮಾಡಿದರು. ದೇಶ ಮತ್ತು ರಾಜ್ಯದ ರಾಜಕೀಯವನ್ನು ಅರ್ಥ ಮಾಡಿಕೊಳ್ಳಬಲ್ಲವರು ಕರಾವಳಿ ಜನ. ಹಾಗಾಗಿ ಕೈಮುಗಿದು ಕೇಳಿಕೊಳ್ಳುತ್ತೇನೆ, ಬಿಜೆಪಿಯನ್ನು ನಂಬಬೇಡಿ, ಬಿಜೆಪಿ ಎಂದೂ ನುಡಿದಂತೆ ನಡೆದಿಲ್ಲ. ಪ್ರಧಾನಿ ಹತ್ತು ವರ್ಷಗಳ ಹಿಂದೆ ಏನೇನು ಹೇಳಿದ್ರು ಅಂತ ಮನನ ಮಾಡಿಕೊಳ್ಳಿ. ಕೋಮುವಾದ ಹೇಳೋದು ಬಿಟ್ಟರೆ, ಧರ್ಮಗಳ ನಡುವೆ ಬೆಂಕಿ ಹಚ್ಚೋದು ಬಿಟ್ಟರೆ ಬೇರೇನು ಮಾಡಿದ್ದಾರೆ. 2014ರಲ್ಲಿ ಮೋದಿ ಕೊಟ್ಟ ಭರವಸೆ ಈಡೇರಿಸಿದ್ದಾರೆಯೇ.. ಬೆಲೆಯೇರಿಕೆ ಕಡಿಮೆ ಮಾಡಿ ಅಚ್ಚೇ ದಿನ ತಂದಿದ್ದಾರೆಯೇ.. ಪೆಟ್ರೋಲ್, ಡೀಸೆಲ್ ಬೆಲೆ ಏನಾಗಿದೆ, ಗೊಬ್ಬರ, ಗ್ಯಾಸ್ ಬೆಲೆ ಏನಾಗಿದೆ ಅಂತ ಯೋಚನೆ ಮಾಡಿ ನೋಡಿ.ಗ್ಯಾರಂಟಿ ಕೊಟ್ಟರೂ ದಿವಾಳಿಯಾಗಿಲ್ಲ


ನಮ್ಮ ಕಾರ್ಯಕರ್ತರು ಪ್ರಜ್ಞಾವಂತರಿದ್ದಾರೆ, ನುಡಿದಂತೆ ನಡೆದಿದ್ದೇವೋ ಅಂತ ವಿಮರ್ಶೆ ಮಾಡುವ ಶಕ್ತಿ ಇದೆ, ನಾವು ಆರೇ ತಿಂಗಳಲ್ಲಿ ಚುನಾವಣೆಯಲ್ಲಿ ಹೇಳಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಶಕ್ತಿ ಯೋಜನೆಯಲ್ಲಿ ಬರೋಬ್ಬರಿ 155 ಕೋಟಿ ಮಹಿಳೆಯರು ಫ್ರೀಯಾಗಿ ಪ್ರಯಾಣ ಮಾಡಿದ್ದಾರೆ. ಬಿಜೆಪಿಯವರು ಯಾವತ್ತಾದರೂ ಇಂಥ ಕೆಲಸ ಮಾಡಿದ್ರಾ.. ಒಂದು ಲಕ್ಷ ಜನರು ಯುವನಿಧಿಯನ್ನು ನೋಂದಣಿ ಮಾಡಿಸಿದ್ದಾರೆ. ಈ ವರ್ಷ ಯಾವುದೇ ಮಧ್ಯವರ್ತಿ ಇಲ್ಲದೆ 36 ಸಾವಿರ ಕೋಟಿ ರೂ. ಜನರ ಖಾತೆಗೆ ನೇರವಾಗಿ ತಲುಪಿಸಿದ್ದೇವೆ, ಬಿಜೆಪಿಯವರು ಗ್ಯಾರಂಟಿ ಕೊಡಕ್ಕಾಗಲ್ಲ, ರಾಜ್ಯ ದಿವಾಳಿಯಾಗತ್ತೆ ಎಂದಿದ್ದರು. ಗ್ಯಾರಂಟಿ ಕೊಟ್ಟು ದಿವಾಳಿ ಆಗಿಲ್ಲ, ಆರ್ಥಿಕವಾಗಿ ಸುಭದ್ರವಾಗಿದ್ದೇವೆ.


ನಿನ್ನೆ 3.83 ಲಕ್ಷ ಕೋಟಿ ರೂ. ಬಜೆಟ್ ಮಾಡಿದ್ದೇನೆ. ಹಿಂದಿನ ಬಾರಿ ಬಿಜೆಪಿ 3.2 ಲಕ್ಷ ಕೋಟಿ ಬಜೆಟ್ ಮಂಡಿಸಿತ್ತು. ಆನಂತರ ನಾನು ಅಧಿಕಾರಕ್ಕೆ ಬಂದು 3.27 ಲಕ್ಷ ಕೋಟಿ ಮಧ್ಯಂತರ ಬಜೆಟ್ ಮಾಡಿದ್ದೆ. ಈಗ 46 ಸಾವಿರ ಕೋಟಿ ಹೆಚ್ಚುವರಿಯಾಗಿ 3.83 ಲಕ್ಷ ಕೋಟಿಯಾಗಿದೆ. ಬೊಕ್ಕಸ ದಿವಾಳಿಯಾದ್ರೆ ಇದನ್ನು ಮಾಡೋಕೆ ಆಗುತ್ತಾ ಮೋದಿಯವರೇ ಎಂದು ಪ್ರಶ್ನಿಸಿದರು ಸಿದ್ದರಾಮಯ್ಯ. ಈಗ ಮೋದಿ ಗ್ಯಾರಂಟಿ ಹೇಳುತ್ತಿದ್ದಾರೆ, ನಮ್ಮ ಗ್ಯಾರಂಟಿಯನ್ನೇ ಕದ್ಬಿಟ್ಟಿದ್ದಾರೆ. ಇವರು ಹೇಳಿದ್ದನ್ನು ಮಾಡಿದ್ದಾರೆಯೇ ಎಂದು ಹೇಳಿದ ಸಿದ್ದರಾಮಯ್ಯ, ಬಜೆಟ್ ಅಧಿವೇಶವನ್ನು ಬಹಿಷ್ಕರಿಸಿದ್ದು ಕರ್ನಾಟಕದ ಇತಿಹಾಸದಲ್ಲಿ ಯಾವತ್ತೂ ಆಗಿಲ್ಲ. ಬಿಜೆಪಿಯವರು ಮೊದಲೇ ಪ್ಲೇಕಾರ್ಡ್ ಹಿಡಿದು ಬಂದಿದ್ದರು. ಇವರಿಗೆ ಸತ್ಯ ತಡೆಯಕ್ಕಾಗಲ್ಲ. ಮೈಉರಿ ಬಂದಿದೆ. ನಾವು ಗ್ಯಾರಂಟಿ ಕೊಟ್ಟೂ ಇಷ್ಟೊಂದು ಕೊಡುಗೆ ಕೊಡುತ್ತೀವಲ್ಲಾ.. ಚರ್ಚೆ ಮಾಡೋದಕ್ಕೂ ಬರ್ತಾ ಇಲ್ಲ ಎಂದರು.  ಕೇಂದ್ರ ಸರಕಾರಕ್ಕೆ ರಾಜ್ಯದಿಂದ 4.30 ಲಕ್ಷ ಕೋಟಿ ಹೋಗುತ್ತಿದ್ದರೆ ಮರಳಿ ಬರೋದು 50,257 ಸಾವಿರ ಕೋಟಿ. ಅಂದರೆ ನೂರು ಕೋಟಿ ತೆರಿಗೆಯಲ್ಲಿ ವಾಪಸ್ ಬರ್ತಿರೋದು 13 ರೂ. ಮಾತ್ರ. ಇದನ್ನು ಹೇಳಿದ್ರೆ ವರಿಗೆ ಮೈಯಲ್ಲಿ ಉರಿ ಬರತ್ತೆ. ಏಳು ಕೋಟಿ ಕನ್ನಡಿಗರ ರಕ್ಷಣೆಯ ಬದ್ಧತೆ ಇದ್ರೆ ಬಿಜೆಪಿಯವರೂ ದೆಹಲಿಯಲ್ಲಿ ನಡೆಸಿದ ಧರಣಿಯಲ್ಲಿ ಭಾಗವಹಿಸಬೇಕಿತ್ತು. ಎಲ್ಲರಿಗೂ ಪತ್ರ ಬರೆದಿದ್ದೇನೆ, ಕನ್ನಡಿಗರಿಗೆ ಅನ್ಯಾಯ ಆಗಿದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಿದೆ. ಮಿಸ್ಟರ್ ಕಟೀಲ್, ಶೋಭಾ ಕರಂದ್ಲಾಜೆ ಯಾವತ್ತಾದರೂ ನೀವು ಈ ಬಗ್ಗೆ ಬಾಯಿ ಬಿಟ್ಟಿದ್ದೀರಾ.. ನಿಮಗೆ ಸ್ವಾಭಿಮಾನ ಇದ್ದರೆ, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.


14ನೇ ಹಣಕಾಸು ಆಯೋಗದಲ್ಲಿ 4.78 ಪರ್ಸೆಂಟ್ ಅನುದಾನ ಅಂತ ಇತ್ತು. 15ನೇ ಹಣಕಾಸು ಆಯೋಗ ಅದನ್ನು 3.7 ಪರ್ಸೆಂಟ್ ಮಾಡಿತ್ತು. ಇದರ ಪ್ರಕಾರ. 5400 ಕೋಟಿ ಅನುದಾನ ಕೊಡಬೇಕಿತ್ತು, ಕರ್ನಾಟಕದಿಂದಲೇ ಗೆದ್ದು ಹೋಗಿರುವ ನಿರ್ಮಲಾ ಸೀತಾರಾಮನ್ ಕೊಡಕ್ಕಾಗಲ್ಲ ಎಂದು ತಿರಸ್ಕರಿಸಿ ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ. ಮಿಸ್ಟರ್ ಅಶೋಕ, ಯಡಿಯೂರಪ್ಪ, ಬೊಮ್ಮಾಯಿ ಗೊತ್ತಾಗಲ್ವೇ.. ಟೋಪಿ ಹಾಕ್ಕೊಂಡವರು ನನ್ನ ಕಚೇರಿಗೆ ಬರಬೇಡಿ ಅಂತ ಯತ್ನಾಳ್ ಹೇಳ್ತಾರೆ, ಮೋದಿ ಸಬ್ ಕಾ ವಿಕಾಸ್, ಸಬ್ ಕಾ ಸಾಥ್ ಅಂತ ಹೇಳ್ತಾರಲ್ಲಾ..  


ಮೋದಿ ಸಿರಿವಂತರ ಪರವಾಗಿದ್ದಾರೆ


ಬಡವರಿಗೆ ಬ್ಯಾಂಕ್ ಸವಲತ್ತು ಸಿಗಬೇಕು ಅಂತ ಇಂದಿರಾ ಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ್ದರು. ಇವತ್ತು ಮೋದಿ ಬ್ಯಾಂಕನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಬಡವರ ಮೇಲೆ ತೆರಿಗೆ ಹೆಚ್ಚಿಸುತ್ತಾರೆ. ಕಾರ್ಪೊರೇಟ್ ಕಂಪನಿಗಳ 30 ಪರ್ಸೆಂಟ್ ಇದ್ದ ತೆರಿಗೆಯನ್ನು 22 ಪರ್ಸೆಂಟಿಗೆ ಇಳಿಸುತ್ತಾರೆ. ಇವರು ಶ್ರೀಮಂತರು, ಉದ್ಯಮಿಗಳ ಪರವಾಗಿದ್ದಾರೆ ಅನ್ನೋದನ್ನು ಬೇರೆ ಹೇಳಬೇಕಾ.. ನಾವು ಈ ಬಾರಿ 28ರಲ್ಲಿ 20 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಬಿಜೆಪಿಯವರ ಹಾಗೆ 28ರಲ್ಲಿ 28 ಅಂತ ಸುಳ್ಳು ಹೇಳಲ್ಲ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕರಾಗಿ ಎಚ್. ಮಹಮ್ಮದ್ ಆಲಿ ನೇಮಕ

Posted by Vidyamaana on 2024-04-19 15:04:44 |

Share: | | | | |


ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕರಾಗಿ ಎಚ್. ಮಹಮ್ಮದ್ ಆಲಿ ನೇಮಕ

ಪುತ್ತೂರು : ಕೆಪಿಸಿಸಿ ರಾಜ್ಯ ಪ್ರಚಾರ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಗೊಳಿಸಿದ್ದು, ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕರಾಗಿ ಎಚ್. ಮಹಮ್ಮದ್ ಆಲಿಯವರನ್ನು ಮಾಜಿ ಸಚಿವ ಹಾಗೂ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆಯವರು ನೇಮಕ ಗೊಳಿಸಿ ಅದೇಶಿಸಿರುತ್ತಾರೆ.

ಪಕ್ಷ ಸಂಘಟನೆಯಲ್ಲಿ ಅಪಾರ ಅನುಭವ ಇರುವ ಎಚ್. ಮಹಮ್ಮದ್ ಆಲಿ ಯವರು  ದ ಕ ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಯಾಗಿದ್ದು, 

ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ - ವೈರಲ್ ಆಯ್ತು ಅಪರೂಪದ ವಿಡಿಯೋ..!

Posted by Vidyamaana on 2023-09-28 11:51:31 |

Share: | | | | |


ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ - ವೈರಲ್ ಆಯ್ತು ಅಪರೂಪದ ವಿಡಿಯೋ..!

ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುಜರಾತ್‌ ನ ಅಹಮದಾಬಾದ್‌ ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಈ ವೇಳೆ ರೋಬೊಟ್ ಪ್ರಧಾನ ಮಂತ್ರಿಗೆ ಚಹಾ ತಂದು ಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ.ಮೋದಿ ಅವರು ಟ್ವಿಟರ್ (ಎಕ್ಸ್‌) ನಲ್ಲಿ ಆಸಕ್ತಿದಾಯಕ ವಿಡಿಯೋ ಪೋಸ್ಟ್ ಮಾಡಿದ್ದು, ಇದರಲ್ಲಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಪ್ರದರ್ಶನದಲ್ಲಿ ವಿವಿಧ ರೋಬೋಟ್ ಸ್ಟಾಲ್‌ಗಳಲ್ಲಿ ಹಲವಾರು ರೋಬೋಟಿಕ್ ಕ್ರಿಯೆಗಳನ್ನು ವೀಕ್ಷಿಸುತ್ತಿದ್ದಾರೆ. ಈ ವೇಳೆ ಪ್ರಧಾನಿ ಮತ್ತು ಸಿಎಂಗೆ ರೋಬೋಟ್ ಚಹಾವನ್ನು ನೀಡಿದೆ‌.ನೈಸರ್ಗಿಕ ವಿಕೋಪಗಳು ಅಥವಾ ಅಗ್ನಿ ಅವಘಡಗಳ ಸಂದರ್ಭದಲ್ಲಿ ಮಾನವರಿಗೆ ರೋಬೋಟ್ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಪ್ರಧಾನಿ ಮೋದಿ ಅವರು ನೋಡಿದ್ದಾರೆಂದು ಈ ಕ್ಲಿಪ್ ತೋರಿಸಿದೆ.ರೋಬೋಟ್ ಇಂಜಿನಿಯರ್‌ಗಳು ಪಿಎಂ ಮೋದಿಯವರಿಗೆ ರೋಬೋಟ್‌ಗಳು ಹೇಗೆ ಜೀವನದ ವಿವಿಧ ಹಂತಗಳಲ್ಲಿ ಶಕ್ತರಾಗಿ ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ವಿವರಿಸಿದ್ದಾರೆ.

ವೈರಲ್ ಆಯ್ತು ಅಪರೂಪದ ವಿಡಿಯೋ..!


ರೊಬೊಟಿಕ್ಸ್‌ ನೊಂದಿಗೆ ಭವಿಷ್ಯದ ಅಂತ್ಯವಿಲ್ಲದ ಸಾಧ್ಯತೆಗಳನ್ನು ಅನ್ವೇಷಿಸುವುದು! ಎಂದು ಟ್ವಿಟರ್ (ಎಕ್ಸ್) ಪೋಸ್ಟ್‌ ನಲ್ಲಿ ಪಿಎಂ ಮೋದಿ ಬರೆದುಕೊಂಡಿದ್ದಾರೆ.

ನಿಮ್ಮ ಮೊಬೈಲ್‌ ಬೇಗ ಚಾರ್ಜ್‌ ಆಗ್ಬೇಕು ಅಂದ್ರೆ ಈ ಸೆಟ್ಟಿಂಗ್ ಬದಲಾಯಿಸಿ ನೋಡಿ

Posted by Vidyamaana on 2023-08-06 09:31:21 |

Share: | | | | |


ನಿಮ್ಮ ಮೊಬೈಲ್‌ ಬೇಗ ಚಾರ್ಜ್‌ ಆಗ್ಬೇಕು ಅಂದ್ರೆ ಈ ಸೆಟ್ಟಿಂಗ್ ಬದಲಾಯಿಸಿ ನೋಡಿ

ಬೆಂಗಳೂರು : ಮೊಬೈಲ್ ಫೋನ್ ನಮಗೆ ಬಹಳ ಮುಖ್ಯವಾದ ದೈನಂದಿನ ಅಂಶವಾಗಿದೆ. ನಾವು ಒಂದು ದಿನವೂ ಮೊಬೈಲ್ ಇಲ್ಲದೆ ಇರಲು ಸಾಧ್ಯವಿಲ್ಲ. ಮೊಬೈಲ್ ಇಲ್ಲದೇ ಹೋದರೆ ನಮ್ಮ ಹಲವು ಕೆಲಸಗಳು ಸ್ಥಗಿತಗೊಳ್ಳುತ್ತವೆ. ನಾವು ನಮ್ಮ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಕೆಲಸಕ್ಕೆ ಮೊಬೈಲ್ ಅನ್ನು ಅವಲಂಬಿಸಿರುತ್ತೇವೆ.ಆದರೆ, ಹಲವು ಬಾರಿ ಮೊಬೈಲ್ ಚಾರ್ಜ್ ಆಗದೇ ಇರುವುದರಿಂದ ಸಮಸ್ಯೆ ಹೆಚ್ಚುತ್ತದೆ. ಕೆಲವೊಮ್ಮೆ ಫೋನ್ ಚಾರ್ಜಿಂಗ್ ತುಂಬಾ ನಿಧಾನವಾಗಿರುತ್ತದೆ. ಆದರೆ, ಒಂದು ಉಪಾಯದಿಂದ ನೀವು ನಿಮ್ಮ ಮೊಬೈಲ್ ಅನ್ನು ವೇಗವಾಗಿ ಚಾರ್ಜ್ ಮಾಡಬಹುದು. ನಿಮ್ಮ ಫೋನ್‌ನ ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡುವ ಮೂಲಕ, ಕೆಲವೇ ನಿಮಿಷಗಳಲ್ಲಿ ನಿಮ್ಮ ಫೋನ್ ಅನ್ನು ನೀವು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಅದೇಗೆ ಅಂತಾ ಇಲ್ಲಿ ನೋಡೋಣ ಬನ್ನಿ.


ಫೋನ್‌ನ ಈ ಸೆಟ್ಟಿಂಗ್‌ನಿಂದ ವೇಗವಾಗಿ ಹೀಗೆ ಚಾರ್ಜ್ ಮಾಡಿ


1. ಮೊದಲು ಫೋನ್ ಸೆಟ್ಟಿಂಗ್‌ನಲ್ಲಿ ʻAbout phoneʼಗೆ ಹೋಗಿ.

2. ಇಲ್ಲಿ ಕೆಳಭಾಗದಲ್ಲಿ ನೀವು ʻBuild numberʼಅನ್ನು 7-8 ಬಾರಿ ಟ್ಯಾಪ್ ಮಾಡಬೇಕು.

3. ಇದರ ನಂತರ ʻDeveloper optionsʼ ಬರುತ್ತವೆ. ಈ ಆಯ್ಕೆಯಲ್ಲಿ ಫೋನ್‌ಗೆ ಸಂಬಂಧಿಸಿದ ಹಲವುರಹಸ್ಯ ಸೆಟ್ಟಿಂಗ್‌ಗಳಿವೆ.

4. ಈಗ ʻDeveloper optionsʼಅನ್ನು ತೆರೆಯಿರಿ.

5. ʻDeveloper optionsʼನಲ್ಲಿ ಕೆಳಭಾಗದಲ್ಲಿರುವ ʻNetworkingʼ ಆಯ್ಕೆಯಲ್ಲಿ ʻSelect USB configurationʼ ಅನ್ನು ಆಯ್ಕೆಮಾಡಿ ಆಯ್ಕೆಯನ್ನು ತೆರೆಯಿರಿ.

6. ಇದರಲ್ಲಿ MTP ಸ್ವಯಂ ಆಯ್ಕೆಯಾಗಿದೆ, ಅಲ್ಲಿಂದ ನೀವು ʻChargingʼಅನ್ನು ಆಯ್ಕೆ ಮಾಡಬೇಕು.

7. ಚಾರ್ಜಿಂಗ್ ಅನ್ನು ಆಯ್ಕೆ ಮಾಡಿದ ನಂತರ, ಫೋನ್ ಮೊದಲಿಗಿಂತ ವೇಗವಾಗಿ ಚಾರ್ಜ್ ಮಾಡಲು ಪ್ರಾರಂಭಿಸುತ್ತದೆ.

ನೇತಾಜಿ ಸುಭಾಶ್ಚಂದ್ರ ಬೋಸ್‌ ಸಂಶೋಧನಾ ಮತ್ತು ಬಹುಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾಗಿ ಎಂ. ರಾಜ್ ಕುಮಾರ್ ಅಧಿಕಾರ ಸ್ವೀಕಾರ

Posted by Vidyamaana on 2023-08-28 09:14:58 |

Share: | | | | |


ನೇತಾಜಿ ಸುಭಾಶ್ಚಂದ್ರ ಬೋಸ್‌ ಸಂಶೋಧನಾ ಮತ್ತು ಬಹುಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾಗಿ ಎಂ. ರಾಜ್ ಕುಮಾರ್ ಅಧಿಕಾರ ಸ್ವೀಕಾರ

*ಬೆಂಗಳೂರು:* ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ತತ್ವ, ಆದರ್ಶಗಳು ಜನರ ನರನಾಡಿಗಳಲ್ಲಿ ಹರಿಯಬೇಕು ಎಂಬ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿರುವ ನೇತಾಜಿ ಸುಭಾಶ್ಚಂದ್ರ ಬೋಸ್‌ ರೀಸರ್ಚ್‌ ಆ್ಯಂಡ್‌ ಮಲ್ಪಿ ಡೆವಲಪ್‌ಮೆಂಟ್‌ ಟ್ರಸ್ಟ್‌ ರಜತ ಮಹೋತ್ಸವ ಆಚರಿಸಿ, ಸ್ವರ್ಣ ಮಹೋತ್ಸವದತ್ತ ಹೆಜ್ಜೆ ಇಟ್ಟಿದೆ. ನೇತಾಜಿ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಎಂ.ರಾಜ್‌ಕುಮಾರ್‌ ಇದೀಗ ಅಧಿಕಾರ ವಹಿಸಿಕೊಂಡಿದ್ದು, ಟ್ರಸ್ಟ್‌ ಇದೀಗ ನಗರದ  ಹೊರವಲಯದಲ್ಲಿ ನೇತಾಜಿ ವಿಶ್ವವಿದ್ಯಾಲಯ ಸ್ಥಾಪನೆಗೆ ನೀಲ ನಕ್ಷೆ ರೂಪಿಸಿದೆ.

‘ಈ ವಿಶ್ವವಿದ್ಯಾಲಯದ ರೂಪುರೇಷೆ ಈಗಾಗಲೇ ಸಿದ್ಧವಾಗಿದ್ದು, ಆರಂಭದಲ್ಲಿ ಟ್ರಸ್ಟ್‌ನ ಕೇಂದ್ರಸ್ಥಾನವಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ದೇಶದಲ್ಲೇ ದೊಡ್ಡದಾದ, ನೇತಾಜಿ ಅವರ 40 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗುವುದು. ಈ ಮಾದರಿ ಕ್ಯಾಂಪಸ್‌ನಲ್ಲಿ  ಕೆ.ಜಿ.ಯಿಂದ ಪಿ.ಜಿ. ತನಕ ಬೋಧನೆಯ ಸುಸಜ್ಜಿತ ಶಿಕ್ಷಣ ಸಂಸ್ಥೆಯನ್ನೂ ಸ್ಥಾಪಿಸಲಾಗುತ್ತಿದೆ. ನೇತಾಜಿ ಅವರ ಕುರಿತಾದ ಜ್ಞಾನಾರ್ಜನೆಯ ಕೇಂದ್ರವಾಗಿ ಬೆಂಗಳೂರು ಹೊರಹೊಮ್ಮಲಿದೆ’ ಎಂದು ಟ್ರಸ್ಟ್‌ನ ಅಧ್ಯಕ್ಷ ಎಂ.ರಾಜ್‌ಕುಮಾರ್ ತಿಳಿಸಿದ್ದಾರೆ.


*ನೇತಾಜಿ ಪ್ರಭಾವ:*


 ಬೆಂಗಳೂರು ಉತ್ತರ ಕಾಂಗ್ರೆಸ್‌ ಘಟಕದ ಅದ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ರಾಜ್‌ಕುಮಾರ್ ಅವರು ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರಿಂದ ಬಹಳ ಮಟ್ಟಿಗೆ ಪ್ರಭಾವಿತರಾದವರು. ದೇಶದೆಲ್ಲೆಡೆ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಜೀವನ, ಕೊಡುಗೆಯ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂಬ ಸಂಕಲ್ಪ ತೊಟ್ಟಿದ್ದು, ತಮ್ಮ ಟ್ರಸ್ಟ್‌ನ ಪದಾಧಿಕಾರಿಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.


ಪುಸ್ತಕ ಪ್ರಕಟಣೆ,  ಗ್ರಂಥಾಲಯ ಸ್ಥಾಪನೆ, ನೇತಾಜಿ ಜೀವನವನ್ನು ಯುವಜನತೆಗೆ ಪರಿಚಯಿಸುವ ಹಲವಾರು  ಕಾರ್ಯಕ್ರಮಗಳನ್ನು ತಮ್ಮ ನೇತಾಜಿ ಭವನದ ಮೂಲಕ ರೂಪಿಸಲಾಗಿದೆ. ಇನ್ನಷ್ಟು ಕಾರ್ಯಕ್ರಮಗಳ ಯೋಜನೆಯನ್ನು ಟ್ರಸ್ಟ್‌ ಹಾಕಿಕೊಂಡಿದೆ.


*ಶತಮಾನೋತ್ಸವದಲ್ಲಿ ಕಂಡ ಕನಸು*


ನೇತಾಜಿ ಅವರ ಜನ್ಮಶತಮಾನೋತ್ಸವ 1997ರಲ್ಲಿ ನಡೆದಿತ್ತು. ಅಗ ವಿಧಾನ ಪರಿಷತ್ ಸಭಾಪತಿ ಆಗಿದ್ದವರು ಡಿ.ಬಿ.ಕಲ್ಮಣ್ಕರ್‌. ಅವರು ನೇತಾಜಿ ಅವರ ಶೇಷ್ಠ ಅನುಯಾಯಿಯಾಗಿದ್ದರು. ಅವರ ಸಂಕಲ್ಪದಂತೆ ನೇತಾಜಿ ಸುಭಾಶ್ಚಂದ್ರ ಬೋಸ್‌ ರೀಸರ್ಚ್ ಆ್ಯಂಡ್ ಮಲ್ಪಿ ಡೆವಲಪ್‌ಮೆಂಟ್‌ ಟ್ರಸ್ಟ್‌ ಸ್ಥಾಪನೆಗೊಂಡಿತು. ಕಲ್ಮಣ್ಕರ್ ಅವರ ಗೌರವಾಧ್ಯಕ್ಷತೆಯಲ್ಲಿ ಹಲವು ಐಎಎಸ್‌ ಅಧಿಕಾರಿಗಳು, ಸಮಾಜ ಸೇವಕರು ಮತ್ತು ಅನೇಕ ಗಣ್ಯರ ಪಾಲ್ಗೊಳ್ಳುವಿಕೆಯೊಂದಿಗೆ ಈ ಟ್ರಸ್ಟ್‌ಗೆ ರೂಪ ದೊರೆಯಿತು. ಆಗಿನ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರೇ ನೇತಾಜಿ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.


ಟ್ರಸ್ಟ್‌ ಸ್ಥಾಪನೆಯ ಬಳಿಕ ಹಲವಾರು ಕಾರ್ಯಗಳನ್ನು ದೇಶದ ಉದ್ದಗಲಗಳಲ್ಲಿ ಮಾಡುತ್ತ ಬರಲಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನೇತಾಜಿ ಚೇತನಾ ಯಾತ್ರೆ ಕೈಗೊಳ್ಳಲಾಗಿತ್ತು. ಅದು ಕರ್ನಾಟಕದ ಎಲ್ಲಾ  ಜಿಲ್ಲಾ ಕೇಂದ್ರಗಳಿಗೂ ಸಂಚರಿಸಿತ್ತು. ಆಗ ನೇತಾಜಿ ಜೀವನ ಚರಿತ್ರೆಯನ್ನು ಬಿಂಬಿಸುವ ಪುಸ್ತಕವನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ನೀಡಲಾಗಿತ್ತು.


ಟ್ರಸ್ಟ್ ಸ್ಥಾಪನೆಯ ಬಳಿಕ ಪೋಷಣೆಯೂ ಅತ್ಯುತ್ತಮವಾಗಿಯೇ ನಡೆದಿದೆ. ನ್ಯಾಯಮೂರ್ತಿ ಆರ್.ಜೆ.ದೇಸಾಯಿ, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಕೆ.ಎಂ. ಕೋಟಿ, ಹಿರಿಯರಾದ ಜಿ.ಆರ್‌.ಶಿವಶಂಕರ, ಸಿ.ಮುನಿವೆಂಕಟಸ್ವಾಮಿ, ಹಿರಿಯ ರಾಜಕೀಯ ಧುರೀಣರಾದ ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಎಸ್‌.ಎಂ.ಕೃಷ್ಣ, ಎಚ್‌.ಕೆ.ಪಾಟೀಲ್‌ ಮೊದಲಾದವರ ಸಹಕಾರದಿಂದ ಟ್ರಸ್ಟ್‌ ಮುನ್ನಡೆಯುತ್ತ ಬಂದಿದೆ.


ವಿಧಾನಸೌಧದ ಈಶಾನ್ಯ ಭಾಗದಲ್ಲಿ 12 ಅಡಿ ಎತ್ತರದ ನೇತಾಜಿ ಪುತ್ಥಳಿ ಸ್ಥಾಪಿಸುವಲ್ಲಿ ಟ್ರಸ್ಟ್ ಪಾತ್ರ ದೊಡ್ಡದು. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಪುತ್ಥಳಿಯನ್ನು ಅನಾವರಣಗೊಳಿಸಿದ್ದರು. ನೇತಾಜಿ ಜನ್ಮದಿನದಂದು ಇಂದಿಗೂ ಮುಖ್ಯಮಂತ್ರಿಗಳು ಈ  ಪುತ್ಥಳಿಗೇ ಹಾರ ಹಾಕಿ ಸ್ಮರಿಸುತ್ತಾರೆ ಎಂಬುದು ವಿಶೇಷ.


ನೇತಾಜಿ ಹುಟ್ಟುಹಬ್ಬ ಪ್ರಯುಕ್ತ ಪ್ರತಿ ವರ್ಷ ಐದು ಮಂದಿಗೆ ನೇತಾಜಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ನೇತಾಜಿ ಭವನವಂತೂ ಇಂದು ನೇತಾಜಿ ಅವರ ಜೀವನವನ್ನು ತಿಳಿದುಕೊಳ್ಳಲು ಇರುವ ದೊಡ್ಡ ಕೇಂದ್ರವಾಗಿ ಬದಲಾಗಿದೆ. ಎನ್.ಎಸ್.ಜೋಷಿ ಸಹಿತ ಹಲವರು ಈ ಭವನ ನಿರ್ಮಾಣಕ್ಕೆ ಸಹಕರಿಸಿ‌ದ್ದಾರೆ. ನೇತಾಜಿ ಅವರ ಪುತ್ರಿ ಅನಿತಾ ಬೋಷ್‌, ಅಳಿಯ ಮಾರ್ಟಿನ್‌ ಪಫ್‌ ಅವರು ಅನೇಕ ಬಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ.


ನೇತಾಜಿ ಸುಬಾಶ್ಚಂದ್ರ ಬೋಸ್ ಅವರ ಜೀವನ ಎಲ್ಲರಿಗೂ ಆದರ್ಶ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅವರು ವಹಿಸಿದ ಪಾತ್ರವೂ ಬಹಳ ದೊಡ್ಡದು. ಅದನ್ನು ಮುಂದಿನ ಪೀಳಿಗೆಗೂ ತಿಳಿಸುವ ಅಗತ್ಯ ಇದೆ. ಈ ಉದ್ದೇಶದಿಂದಲೇ ಸ್ಥಾಪನೆಯಾದ ಟ್ರಸ್ಟ್ ಇದೀಗ ಎಂ.ರಾಜ್‌ಕುಮಾರ್ ಅವರ ಸಾರಥ್ಯದಲ್ಲಿ ತನ್ನ ಸ್ಥಾಪನೆಗೆ ನಿಜ ಉದ್ದೇಶ ಈಡೇರಿಸುತ್ತ ಮುನ್ನಡೆಯುತ್ತಿದೆ.


ಟ್ರಸ್ಟ್‌ನ ನೂತನ ಅಧ್ಯಕ್ಷರಾದ ಎಂ.ರಾಜ್‌ಕುಮಾರ್ ಅವರೊಂದಿಗೆ ಜಿ.ಆರ್.ಶಿವಶಂಕರ್ (ಪ್ರಧಾನ ಕಾರ್ಯದರ್ಶಿ), ರಾಜಯೋಗೀಂದ್ರ ವೀರಯ್ಯ ಸ್ವಾಮಿ ಶಾಸ್ತ್ರಿಮಠ ಗುರೂಜಿ (ಸಂಸ್ಥಾಪಕ ಟ್ರಸ್ಟಿ), ಗುರು ಶಾಸ್ತ್ರಿಮಠ (ಉಪಾಧ್ಯಕ್ಷ), ಸಂಜಯ್‌  ಡಿ.ಕಲ್ಮಣ್ಕರ್‌ (ಉಪಾಧ್ಯಕ್ಷ), ಡಾ.ಉಮಾ ಶೇಷಗಿರಿ (ಕಾರ್ಯದರ್ಶಿ), ಅಮರನಾಥ ಕೋಟಿ (ಖಜಾಚಿ), ರವೀಂದ್ರ ನಾರಾಯಣ ಜೋಷಿ, ಆರ್‌.ವಿಶಾಲ್‌, ಸ್ಮರಣ್‌ ಶಿವಶಂಕರ್‌, ರಾಹುಲ್ ಶೇಷಗಿರಿ, ಆದಿತ್ಯ ಸಂಜಯ್‌ ಕಲ್ಮಣ್ಕರ್ (ಟ್ರಸ್ಟಿಗಳು) ಅವರು ಈ ದೂರದೃಷ್ಟಿಯ ಯೋಜನೆಯಲ್ಲಿ ಕೈಜೋಡಿಸಿದ್ದಾರೆ.

WhatsAppನಲ್ಲಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ? ಹೇಗೆ ಸರಿಪಡಿಸುವುದು ಎಂಬುದು ಇಲ್ಲಿದೆ

Posted by Vidyamaana on 2024-01-09 04:59:00 |

Share: | | | | |


WhatsAppನಲ್ಲಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ? ಹೇಗೆ ಸರಿಪಡಿಸುವುದು ಎಂಬುದು ಇಲ್ಲಿದೆ

HATSAPP ವಿಶ್ವದ ಅತ್ಯಂತ ಜನಪ್ರಿಯ ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಆದರೆ ನೀವು ಏನು ಹೇಳುತ್ತಿದ್ದೀರಿ ಎಂಬುದರ ಕುರಿತು ಇತರ ಜನರು ಸ್ನೂಪ್ ಮಾಡಲು ಸಾಧ್ಯವಾಗದಿದ್ದರೂ, ಇತರ WhatsApp ಡೇಟಾವನ್ನು ಪ್ರಕ್ರಿಯೆಗೊಳಿಸಲಾಗುತ್ತಿಲ್ಲ ಎಂದರ್ಥವಲ್ಲನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಸೇವ್ ಆಗುತ್ತದೆ. ಇದರಿಂದ ಅವರ ಫೋನಿನ ಮೆಮೋರಿ ಕೂಡ ಬೇಗನೆ ಫುಲ್ ಆಗಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ. ಈರೀತಿ ಸ್ಟೋರೇಜ್ ಫುಲ್ ಆಗದಂತೆ ತಡೆಯಲು ಒಂದು ಟ್ರಿಕ್ ಇದೆ.


ವಾಟ್ಸ್​ಆಯಪ್​ನಲ್ಲಿ ನಿಮಗೆ ಯಾವುದೇ ಮಿಡಿಯಾ ಬಂದರೆ ಅದು ಅಟೋಮೆಟಿಕ್ ಡೌನ್​ಲೋಡ್ ಆಗಿ ಫೋನ್ ಗ್ಯಾಲರಿಯಲ್ಲಿ ಸೇವ್ ಆಗುತ್ತದೆ. ಇದನ್ನು ತಡೆಯಲು ವಾಟ್ಸ್​ಆಯಪ್ ಸೆಟ್ಟಿಂಗ್ಸ್​ನಲ್ಲಿರುವ ಸ್ಟೋರೇಜ್-ಡೇಟಾ ಆಯ್ಕೆಗೆ ತೆರಳಿ ಮಿಡಿಯಾ ಅಟೋ-ಡೌನ್​ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ಹೀಗೆ ಮಾಡಿದರೆ ಫೋಟೋ, ವಿಡಿಯೋ ಅಥವಾ ಯಾವುದೇ ಫೈಲ್​ಗಳು ನೀವು ಡೌನ್​ಲೋಡ್ ಕೊಟ್ಟರೆ ಮಾತ್ರ ಆಗುತ್ತದೆ.


ಇಂದು 16GB, 32GB, 128GB ಮೆಮೊರಿ ಹೊಂದಿರುವ ಸ್ಮಾರ್ಟ್​ಫೋನುಗಳು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB, 128GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್ ನಿಂದಾಗಿ ಫೋನುಗಳು ನಿಧಾನವಾಗುತ್ತವೆ. ಅಂತೆಯೆ ಫೋನ್​ನಲ್ಲಿರುವ ಅಪ್ಲಿಕೇಷನ್​ಗಳನ್ನು ತೆರೆದಂತೆ ಮೊಬೈಲ್​ನಲ್ಲಿ ಅದು ಸ್ಟೋರ್ ಆಗುತ್ತಾ ಹೋಗುತ್ತದೆ.


ಮೊಬೈಲ್​ನಲ್ಲಿ ಹೆಚ್ಚಿನ ಸ್ಥಳ ತಿನ್ನುವುದು ಫೋಟೋ ಮತ್ತು ವಿಡಿಯೋಗಳು. ಈ ತೊಂದರೆಯಿಂದ ದೂರವಾಗಲು ಫೋಟೋ ಮತ್ತು ವಿಡಿಯೋವನ್ನು ಮೊಬೈಲ್​ನಲ್ಲಿ ಸೇವ್ ಮಾಡುವ ಬದಲು ಕ್ಲೌಡ್ ಸ್ಟೊರೇಜ್​ನಲ್ಲಿ ಸೇವ್ ಮಾಡಬಹುದು.


WhatsApp ಡೌನ್‌ಲೋಡ್ ಸೆಟ್ಟಿಂಗ್‌ಗಳಿಗಾಗಿ ಕೆಲವು ಆಯ್ಕೆಗಳನ್ನು ಹೊಂದಿದೆ-ಅವು ಡೇಟಾ ಮತ್ತು ಸಂಗ್ರಹಣೆಯ ಬಳಕೆಯ ಮೆನುವಿನಲ್ಲಿ ಕಂಡುಬರುತ್ತವೆ. Android ಮತ್ತು iOS ಎರಡರಲ್ಲೂ ಆಯ್ಕೆಗಳು ಒಂದೇ ಆಗಿರುತ್ತವೆ. ನೀವು ಮೊಬೈಲ್ ಡೇಟಾವನ್ನು ಅವಲಂಬಿಸಿದ್ದರೆ, ವೈ-ಫೈ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿದ್ದರೆ ಅಥವಾ ಎಂದಿಗೂ ಮಾಧ್ಯಮವು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುತ್ತದೆಯೇ ಎಂಬುದನ್ನು ನೀವು ಆಯ್ಕೆ ಮಾಡಬಹುದು. ನೀವು ರೋಮಿಂಗ್‌ನಲ್ಲಿರುವಾಗ ಸ್ವಯಂಚಾಲಿತ ಡೌನ್‌ಲೋಡ್‌ಗಳನ್ನು ಮಿತಿಗೊಳಿಸುವ ಆಯ್ಕೆಯನ್ನು ಆಂಡ್ರಾಯ್ಡ್ ಹೊಂದಿದೆ.


ಡೀಫಾಲ್ಟ್ ಆಗಿ, ನೀವು ಮೊಬೈಲ್ ಡೇಟಾ ಸಂಪರ್ಕವನ್ನು ಹೊಂದಿರುವಾಗ WhatsApp ಚಿತ್ರಗಳನ್ನು ಮತ್ತು ನೀವು Wi-Fi ನೆಟ್‌ವರ್ಕ್‌ಗೆ ಸಂಪರ್ಕಗೊಂಡಾಗ ವೀಡಿಯೊವನ್ನು ಡೌನ್‌ಲೋಡ್ ಮಾಡುತ್ತದೆ. ಈ ಆಯ್ಕೆಗಳನ್ನು ಎಂದಿಗೂ ಅಥವಾ Wi-Fi ನಲ್ಲಿ ಎಲ್ಲವನ್ನೂ ಡೌನ್‌ಲೋಡ್ ಮಾಡಲು ಮಾತ್ರ ಬದಲಾಯಿಸುವುದು ಕೆಲವು ಮೊಬೈಲ್ ಡೇಟಾವನ್ನು ಉಳಿಸಲು ಸಹಾಯ ಮಾಡುತ್ತದೆ ಆದರೆ ನೀವು ಅದನ್ನು ಡೌನ್‌ಲೋಡ್ ಮಾಡಲು ಬಯಸಿದಾಗ ಪ್ರತಿ ಚಿತ್ರ ಅಥವಾ ವೀಡಿಯೊವನ್ನು ಟ್ಯಾಪ್ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯೊಂದಿಗೆ ಬರುತ್ತದೆ.



Leave a Comment: