BREAKING : ಮೈಸೂರಲ್ಲಿ ಮಹಿಳೆಯ ಭೀಕರ ಕೊಲೆ : ಪತಿಯ ವಿಮೆ ಹಣಕ್ಕಾಗಿ ಸಂಬಂಧಿಕರಿಂದಲೇ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-21 22:04:16 |

Share: | | | | |


BREAKING : ಮೈಸೂರಲ್ಲಿ ಮಹಿಳೆಯ ಭೀಕರ ಕೊಲೆ : ಪತಿಯ ವಿಮೆ ಹಣಕ್ಕಾಗಿ ಸಂಬಂಧಿಕರಿಂದಲೇ ಬರ್ಬರ ಹತ್ಯೆ

ಮೈಸೂರು : ಪತಿ ತೀರಿಹೋದ ಬಳಿಕ ಆಕೆಗೆ ಪತಿಯ ವಿಮೆಯಿಂದ ಲಕ್ಷಾಂತರ ರೂಪಾಯಿ ಹಣ ಬಂದಿತ್ತು. ಇದೆ ಆಕೆಯ ಸಂಬಂಧಿಕರ ನಿದ್ದೆಗೆಡಿಸಿದೆ. ಹಾಗಾಗಿ ಮಾರಕಾಸ್ತ್ರಗಳಿಂದ ಮಹಿಳೆಯನ್ನು ಭೀಕರವಾಗಿ ಸಂಬಂಧಿಕರೇ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಚೌಥಿ ಗ್ರಾಮದಲ್ಲಿ ನಡೆದಿದೆ.

ಹೌದು ಭಾಗ್ಯವತಿ(32) ಮೃತ ಮಹಿಳೆ. ಚೌಥಿ ಗ್ರಾಮದ ಬಸವರಾಜು ಹಾಗೂ ಯಶೋಧಮ್ಮ ದಂಪತಿ ಪುತ್ರಿಯಾದ ಇವರಿಗೆ ಸಂಪತ್ ಕುಮಾರ್ ಎಂಬುವವರ ಜೊತೆ ಮದುವೆ ಮಾಡಲಾಗಿತ್ತು. ಇಬ್ಬರು ಗಂಡು ಮಕ್ಕಳು ಕೂಡ ಇದ್ದರು. ಎಲ್ಲವೂ ಚೆನ್ನಾಗಿತ್ತು. ಆದ್ರೆ, 5 ವರ್ಷದ ಹಿಂದೆ ಪತಿ ಸಂಪತ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಪತಿಯನ್ನು ಕಳೆದುಕೊಂಡ ಆಕೆ ಧೈರ್ಯ ಕಳೆದುಕೊಳ್ಳದೆ ಇದ್ದ ಎರಡೂವರೆ ಕೃಷಿ ಜಮೀನಿನಲ್ಲಿ ಕಷ್ಟಪಟ್ಟು ದುಡಿದು ತನ್ನ ಕಾಲುಗಳ ಮೇಲೆ ನಿಂತುಕೊಂಡಿದ್ದಳು.ಜೊತೆಗೆ ಲಕ್ಷಾಂತರ ರೂ. ಹಣ ಸಂಪಾದಿಸಿದ್ದರು. ಇದರ ಜೊತೆಗೆ ಇತ್ತೀಚೆಗೆ ಪತಿಯ ವಿಮೆ ಹಣ ಸುಮಾರು 12 ಲಕ್ಷ ರೂಪಾಯಿ ಬರುವುದಿತ್ತು. ಇದು ಸಹಜವಾಗಿ ಆಕೆಯ ಸಂಬಂಧಿಕರ ಕಣ್ಣು ಕುಕ್ಕಿದೆ.

ಮಹಿಳೆಯ ಏಳಿಗೆಯನ್ನು ಸಹಿಸದೆ ಆಕೆಯ ಸಂಬಂಧಿಕರಾದ ಮುತ್ತುರಾಜ್ ಹಾಗೂ ಇತರರು ಸೇರಿಕೊಂಡು ಭಾಗ್ಯವತಿಯನ್ನು ಬರ್ಬರವಾಗಿ ಕತ್ತರಿಸಿ‌ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮುತ್ತುರಾಜ್ ಹಾಗೂ ಇತರ ಸಂಬಂಧಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 Share: | | | | |


ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ ಜು 08

Posted by Vidyamaana on 2023-07-08 00:52:56 |

Share: | | | | |


ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ ಜು 08

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜುಲೈ 8 ರಂದು.

ಬೆಳ್ಳಗ್ಗೆ 10 ಗಂಟೆಗೆ

ಸರ್ಕಾರಿ ಪ್ರಥಮ ಧರ್ಜೆ ಕಾಲೇಜು ವಿಟ್ಲ  ವಾರ್ಷಿಕೋತ್ಸವ


ಬೆಳಗ್ಗೆ 11 ಗಂಟೆಗೆ

*ಸರ್ಕಾರಿ ಪ್ರಥಮ ಧರ್ಜೆ ಕಾಲೇಜು ಜಿಡೆಕಲ್ಲು ವಾರ್ಷಿಕೋತ್ಸವ*

*ಸಂಜೆ 4 ಗಂಟೆಗೆ*

*ಆರ್ಯಾಪು ಕೃಷಿ ಪಥಿನ ಸಹಕಾರಿ ಸಂಘದಲ್ಲಿ ಇಂದಿರಾ ಸೇವಾ ಕೇಂದ್ರ ಉದ್ಘಾಟನೆ

ಸಂಜೆ 4:30

ಕುರಿಯ  ಕೃಷಿ ಪಥಿನ ಸಹಕಾರಿ ಸಂಘದಲ್ಲಿ ಇಂದಿರಾ ಸೇವಾ ಕೇಂದ್ರ ಉದ್ಘಾಟನೆ

ಸಂಜೆ 7.30 ಶ್ರೀ ಶನೀಶ್ವರ ಸನ್ನಿಧಿ ಬನ್ನೂರು ಇವರಿಂದ ಶನೀಶ್ವರ ಪೂಜೆ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದಾರೆ.

ಪೆರ್ನಾಳ್ ಸಂಭ್ರಮದ ನಡುವೆ ಆ ದುರಂತ ವಾರ್ತೆ ಮರುಕಳಿಸದಿರಲಿ

Posted by Vidyamaana on 2024-04-10 06:35:52 |

Share: | | | | |


ಪೆರ್ನಾಳ್ ಸಂಭ್ರಮದ ನಡುವೆ ಆ ದುರಂತ ವಾರ್ತೆ ಮರುಕಳಿಸದಿರಲಿ

ಕೈಯಲ್ಲೊಂದು ಮೊಬೈಲ್, ಸಂಚರಿಸಲೊಂದು ಬೈಕ್ ಸಿಕ್ಕರೆ ಹದಿಹರೆಯದ ಯುವಕರಿಗೆ ಮತ್ತೆ ಉಪದೇಶದ ಅಗತ್ಯವೂ, ಕೇಳಿಸಿಕೊಳ್ಳುವ ವ್ಯವಧಾನವೂ ತೀರಾ ಇಲ್ಲದಾಗಿದೆ.

ಹಬ್ಬದ ಸಂಭ್ರಮ ದ ಹೆಸರಿನಲ್ಲಿ ಮೈಮರೆತು ಓಡಾಡದಿರಿ.

ಕೈಯಲ್ಲಿರುವ ಬೈಕ್ ನ ನಿಯಂತ್ರಣ ನಿಮ್ಮಲ್ಲಿದ್ದರೂ ಮುಂದುಗಡೆಯಿಂದ ಬರುವ ವಾಹನದ ನಿಯಂತ್ರಣ ನಿಮ್ಮಲ್ಲಿರಲ್ಲ ಎಂಬ ಪ್ರಜ್ಞೆಯಾದರೂ ಇರಲಿ.ಸಣ್ಣ ಪ್ರಾಯದ ಯುವಕರು ರಸ್ತೆಯ ನಡುವೆ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಕಳೆದುಕೊಳ್ಳುವಾಗ ಯಾರಿಗೆ ತಾನೆ ಅದನ್ನು ಸಹಿಸಲು ಸಾಧ್ಯ.

ಆಸ್ಪತ್ರೆಯ ಶವಾಗಾರದ ಮುಂದೆ ಏನೂ ಪರಿಚಯವಿಲ್ಲದವರೇ ಜನಾಝವನ್ನು ನೋಡಿ ಬಿಕ್ಕಿ ಬಿಕ್ಕಿ ಅಳುವಾಗ, ಹೆತ್ತು ಸಾಕಿ ಸಲಹಿದ ಆ ಹೆತ್ತವರ ರೋಧನೆ ಅದೆಷ್ಟರ ಮಟ್ಟಿಗೆ ಇರಬಹುದು?

ತಾಯಿಗೆ ಸಲಾಂ ಹೇಳಿ ಮನೆಯಿಂದ ಹೊರಟ ಮಗ ಮರಳಿ ಬಂದದ್ದು ಬಿಳಿ ವಸ್ತ್ರವನ್ನು ಹೊದಿಸಿದ ರೂಪದಲ್ಲಿ ಮಯ್ಯತ್ತಾಗಿಯಾಗಿತ್ತು!

ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಗನ ಕಬರ್ ತೋಡಿದ್ದು ಸ್ವತಃ ಅಪ್ಪನೇ ಆಗಿತ್ತು!

ಇಂತಹ ಹೃದಯ ಕಲ್ಲಾಗಿಸುವ ಅದೆಷ್ಟು ಮರಣ ವಾರ್ತೆಗಳಾಗಿದೆ ಕಳೆದ ಆರೇಳು ವರ್ಷಗಳಿಂದ ನಾವು ಕಣ್ಣಾರೆ ಕಾಣುತ್ತಿರುವುದು?

ಮರಣದ ಸ್ಮರಣೆಗಿಂತ ಉತ್ತಮವಾದ ಉಪದೇಶ ಮತ್ತೊಂದಿಲ್ಲ.ಆದರೂ ಪ್ರತಿಯೊಂದು ಮರಣ ಸಂಭವಿಸಿದಾಗಲೂ ಒಂದೆರಡು ವಾರಗಳಲ್ಲಿ ನಾವದನ್ನು ಮರೆತುಬಿಡುತ್ತೇವೆ.

ನನ್ನ ಮತ ನನ್ನ ಹಕ್ಕು - ಅಬುದಾಬಿ To ಕುಂತೂರು

Posted by Vidyamaana on 2024-04-26 18:34:04 |

Share: | | | | |


ನನ್ನ ಮತ ನನ್ನ ಹಕ್ಕು - ಅಬುದಾಬಿ To ಕುಂತೂರು

ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡುವಂತೆ ಚುನಾವಣಾ ಆಯೋಗ ಎಷ್ಟೇ ಜಾಗೃತಿ ಮೂಡಿಸಿದ್ರೂ ಜನರು ಮಾತ್ರ ಅದೆಷ್ಟು ನಿರ್ಲಕ್ಷ್ಯವಹಿಸಿದ್ದಾರೆಂದರೆ ಅವರು ತಮ್ಮೂರಲ್ಲೇ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುತ್ತಿಲ್ಲ. ಕೆಲವರು ಬಿಸಿಲು ಝಳಕ್ಕೆ ಹೆದರಿ ಮನೆಯಲ್ಲಿ ಉಳಿದರೆ ಇನ್ನು ಕೆಲವರು ಮತದಾನದ ದಿನದಂದು ರಜೆ ಸಿಕ್ಕಿದ್ದಕ್ಕೆ ಟ್ರಿಪ್ ಹೋಗುತ್ತಿರೋ ಜನರ ನಡುವೆ ಕುಂತೂರು ಎಮಿರೇಟ್ಸ್ ಕ್ಲಬ್ ಇದರ ಗೌರವಾಧ್ಯಕ್ಷ ಸತ್ತಾರ್ ಯು ಕೆ ಮತದಾನ ಮಾಡುವ ಸಲುವಾಗಿಯೇ 

ಉಡುಪಿಯಲ್ಲೊಂದು ಸ್ಪೆಷಲ್ ಮದುವೆ ; ಜೆಸಿಬಿಯಲ್ಲಿ ಎಂಟ್ರಿ ಕೊಟ್ಟ ವಧು-ವರ; ಮಂಟಪದಲ್ಲೇ ನಡೆಯಿತು ಕೋಳಿ ಅಂಕ

Posted by Vidyamaana on 2023-12-13 11:27:12 |

Share: | | | | |


ಉಡುಪಿಯಲ್ಲೊಂದು ಸ್ಪೆಷಲ್ ಮದುವೆ ; ಜೆಸಿಬಿಯಲ್ಲಿ ಎಂಟ್ರಿ ಕೊಟ್ಟ ವಧು-ವರ; ಮಂಟಪದಲ್ಲೇ ನಡೆಯಿತು ಕೋಳಿ ಅಂಕ

ಉಡುಪಿಯಲ್ಲಿ ನಡೆದ ಸ್ಪೆಷಲ್ ಮದುವೆಯೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಜೆಸಿಬಿಯಲ್ಲಿ ಮದುವೆ ಹಾಲ್ ಗೆ ಎಂಟ್ರಿ ಕೊಟ್ಟ ವಧು-ವರರು ಅಲ್ಲೇ ಮಂಟಪದಲ್ಲೇ ಕೋಳಿ ಅಂಕ ನಡೆಸಿದ್ದಾರೆ.


ಅಂದ್ದಾಗೆ ಇಂತಹ ಸ್ಪೆಷಲ್ ಮ್ಯಾರೇಜ್ ನಡೆದಿರೋದು ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ. ಇಲ್ಲಿನ ಮಿಥುನ್ ಮತ್ತು ಪೂಜಾ ಮದುವೆ ಸಮಾರಂಭ ಎಲ್ಲಾ ಮದುವೆಗಳಿಂದ ವಿಭಿನ್ನವಾಗಿ ನಡೆದಿದೆ. ಇದಕ್ಕೆಲ್ಲಾ ಕಾರಣ ಅವರ ಸ್ನೇಹಿತರು ಎನ್ನಲಾಗಿದೆ.


ಗೆಳೆಯನ ಮದುವೆಯನ್ನು ವಿಭಿನ್ನವಾಗಿ ಮಾಡಬೇಕೆಂದು ಮಿಥುನ್ ಸ್ನೇಹಿತರೇ ಆ ಪರಿಸರಕ್ಕೆ ಹೊಸದಾದ ಕೆಲವು ಪರಿಕಲ್ಪನೆಯನ್ನು ಅನಾವರಣ ಮಾಡಿದ್ದಾರೆ. ಸಾಮಾನ್ಯವಾಗಿ ಮದುವೆ ಹಾಲ್‌ಗೆ ವಧು-ವರರನ್ನು ಕಾರ್‌ನಲ್ಲಿ ಕರೆತರುತ್ತಾರೆ. ಆದರೆ ಮಿಥುನ್ ಮತ್ತು ಪೂಜಾ ಜೋಡಿ ಬಂದಿದ್ದು ಜೆಸಿಬಿಯಲ್ಲಿ. ಜೆಸಿಬಿಯ ಮುಂದಿನ ಕೊಕ್ಕೆಯಲ್ಲಿ ಕುಳ್ಳಿರಿಸಿ ಜೋಡಿಯನ್ನು ಮದುವೆ ಹಾಲ್‌ನತ್ತ ಕರೆ ತರಲಾಗಿದೆ. ಜೆಸಿಬಿಯನ್ನು ಹೂವಿನಿಂದ ಸಿಂಗಾರ ಮಾಡಿ, ಸ್ಪೆಷಲ್ ಸೋಫಾವನ್ನು ಮುಂಭಾಗಕ್ಕೆ ಜೊಡಿಸಿ ಅದರಲ್ಲಿ ವರವಧು ಕುಳಿತು ಮದುವೆ ಹಾಲ್‌ಗೆ ಎಂಟ್ರಿ ಕೊಟ್ಟಿದ್ದಾರೆ.


ಇದು ಮದುವೆಗೆ ಬಂದಿದ್ದ ಎಲ್ಲರ ಮೊಗದಲ್ಲಿ ನಗು ತಂದಿದೆ. ಮದುವೆಗೆ ಜೆಸಿಬಿ ಬಳಸಿದ್ದೇ ವಿಭಿನ್ನವಾಗಿದೆ ಎಂದು ಮದುವೆಗೆ ಬಂದವರು ಮಾತನಾಡಿಕೊಳ್ಳುತ್ತಿರುವಾಗಲೇ ಮತ್ತೊಂದು ವಿಭಿನ್ನವಾದ ಘಟನೆ ಮಿಥುನ್ ಮತ್ತು ಪೂಜಾ ಜೋಡಿ ಮದುವೆಯಲ್ಲಿ ನಡೆದಿದೆ. ಇನ್ನು ಮದುವೆ ಶಾಸ್ತ್ರಗಳು ಮಗಿಯುತ್ತಿದ್ದಂತೆ ಮಿಥುನ್ ಮತ್ತು ಪೂಜಾ ಅಂಕದ ಕೋಳಿಗಳನ್ನು ಮದುವೆ ಮಂಟಪದಲ್ಲೇ ಕಾಳಗ ಮಾಡಿಸಿದ್ದಾರೆ. ವಧು ಕಡೆಯಿಂದ ಒಂದು ಕೋಳಿಯನ್ನು ಹಾಗೂ ವರನ ಕಡೆಯಿಂದ ಒಂದು ಕೋಳಿಯನ್ನು ಮದುವೆ ಮಂಟಪದಲ್ಲೇ ಕೋಳಿ ಅಂಕಣಕ್ಕೆ ಇಳಿಸಲಾಗಿದೆ. ವರ ಮಿಥುನ್‌ಗೆ ಕೋಳಿ ಅಂಕಕ್ಕೆ ಹೋಗುವ ಹವ್ಯಾಸವಿದ್ದು, ಅದಕ್ಕಾಗಿ ಗೆಳೆಯರು ಈ ಅಚ್ಚರಿ ಕೊಟ್ಟಿದ್ದಾರೆ. ಸದ್ಯ ಬ್ರಹ್ಮಾವರದ ಈ ವಿಭಿನ್ನ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ

ಸಾರ್ವಜನಿಕರೇ ಗಮನಿಸಿ : ಗುಡುಗು-ಸಿಡಿಲು ಹಾನಿಯಿಂದ ಸಂರಕ್ಷಣೆಗೆ ಈ ಕ್ರಮಗಳನ್ನು ಅನುಸರಿಸಿ

Posted by Vidyamaana on 2024-04-20 20:42:12 |

Share: | | | | |


ಸಾರ್ವಜನಿಕರೇ ಗಮನಿಸಿ :  ಗುಡುಗು-ಸಿಡಿಲು ಹಾನಿಯಿಂದ ಸಂರಕ್ಷಣೆಗೆ ಈ ಕ್ರಮಗಳನ್ನು ಅನುಸರಿಸಿ

ಬೆಂಗಳೂರು : ಆರಂಭದ ಮಳೆಗಾಲದಲ್ಲಿ ಕಂಡುಬರಬಹುದಾದ ಗುಡುಗು-ಸಿಡಿಲು ಹಾನಿಯಿಂದ ಸಂರಕ್ಷಣೆಗೆ ಅಗತ್ಯ ಕ್ರಮ ಅನುಸರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಕಂಡುಬರುವ ಮಳೆಗಾಲದ ಆರಂಭದ ಹಂತದಲ್ಲಿ ತೀವ್ರತರದ ಗುಡುಗು-ಸಿಡಿಲು ಕಂಡುಬರುವುದು ಸಾಮಾನ್ಯವಾಗಿದ್ದು, ಜೊತೆಗೆ ಬಿರುಸಾಗಿ ಗಾಳಿ ಸಹಿತ ಮಳೆ ಕಂಡುಬರುವುದು ವಾಡಿಕೆಯಾಗಿದೆ.

today head line

Posted by Vidyamaana on 2024-07-19 20:37:57 |

Share: | | | | |


today head line

sfsdf


Recent News


Leave a Comment: