ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಸುದ್ದಿಗಳು News

Posted by vidyamaana on 2024-07-23 19:43:42 |

Share: | | | | |


ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಪುಣೆ: ಅತಿ ವೇಗ ಅಪಘಾತಕ್ಕೆ ಕಾರಣವೆಂದು ತಿಳಿದರೂ ಕೂಡ ಕೆಲವು ಚಾಲಕರು ಅವಸರದಲ್ಲಿ ವೇಗವಾಗಿ ವಾಹನ ಚಲಾಯಿಸಿ ಜನರ ಜೀವಕ್ಕೆ ಆಪತ್ತು ತರುತ್ತಿದ್ದಾರೆ. ಎಲ್ಲೆಂದರಲ್ಲಿ ನಿಂತ ಜನರ ಮೇಲೂ ವಾಹನವನ್ನು ಹಾರಿಸಿಕೊಂಡು ಹೋಗುತ್ತಾರೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Hit and Run Case)ಆಗಿದೆ.ಪ್ರಿ-ಚಿಂಚ್ವಾಡ್‍ನಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಟ್ಯಾಕ್ಸಿ ಮಹಿಳೆಗೆ ಡಿಕ್ಕಿ ಹೊಡೆದು ನಂತರ ಚಾಲಕ ಅಪಘಾತದ ಸ್ಥಳದಿಂದ ಓಡಿಹೋದ ಹೊಸ ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪುಣೆಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಪಿಂಪ್ರಿ-ಚಿಂಚ್ವಾಡ್‍ನಲ್ಲಿ ಈ ಘಟನೆ ನಡೆದಿದೆ. ಈ ಹಿಟ್ ಅಂಡ್ ರನ್ ಪ್ರಕರಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊದಲ್ಲಿ ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಎದುರಿಗೆ ವೇಗವಾಗಿ ಬಂದ ಟ್ಯಾಕ್ಸಿ ಮಹಿಳಾ ಪಾದಚಾರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ರಸ್ತೆಯಲ್ಲಿದ್ದ ಇತರ ಜನರು ಆಕೆಯ ಸಹಾಯಕ್ಕಾಗಿ ಓಡಿ ಬರುತ್ತಿರುವುದು ಕಂಡುಬಂದಿದೆ. ಟ್ಯಾಕ್ಸಿಗೆ ಡಿಕ್ಕಿ ಹೊಡೆದ ಮಹಿಳೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಪಿಂಪ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಪ್ರಕರಣದ ಬಗ್ಗೆ ಪಿಂಪ್ರಿ-ಚಿಂಚ್ವಾಡ್ ಡಿಸಿಪಿ ಶಿವಾಜಿ ಪವಾರ್ ಮಾತನಾಡಿ, ಈ ಅಪಘಾತದಲ್ಲಿ ಸಂತ್ರಸ್ತೆ ರೇಖಾ ಗಾಯಗೊಂಡಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. 24 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಚಾಲಕ ಕುಡಿದಿರಲಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೇಲ್ನೋಟಕ್ಕೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಮಹಾರಾಷ್ಟ್ರದಲ್ಲಿ ವರದಿಯಾದ ಮೊದಲ ಹಿಟ್ ಅಂಡ್ ರನ್ ಪ್ರಕರಣವಲ್ಲ. ಈಗಾಗಲೇ ಹಿಟ್ ಅಂಡ್ ರನ್ ಪ್ರಕರಣ ಮತ್ತೊಂದು ಸುದ್ದಿಯಲ್ಲಿ, ವೇಗವಾಗಿ ಬಂದ ಆಡಿ ಕಾರು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಆಟೋರಿಕ್ಷಾ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮುಲುಂಡ್ ಪೊಲೀಸರು ಆಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ, ಆದರೆ ಅಪಘಾತದ ನಂತರ ಅದರ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

 Share: | | | | |


ಉಪವಾಸದ ನಡುವೆಯೂ ನೀರಿಗೆ ಬಿದ್ದವನನ್ನು ರಕ್ಷಿಸಲು ನದಿಗೆ ಜಿಗಿದ ನೇತ್ರಾವತಿ ವೀರರು

Posted by Vidyamaana on 2024-04-01 21:29:03 |

Share: | | | | |


ಉಪವಾಸದ ನಡುವೆಯೂ ನೀರಿಗೆ ಬಿದ್ದವನನ್ನು ರಕ್ಷಿಸಲು ನದಿಗೆ ಜಿಗಿದ ನೇತ್ರಾವತಿ ವೀರರು

ಬಂಟ್ವಾಳ : ನೇತ್ರಾವತಿ ನದಿಯಲ್ಲಿ ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ವೇಳೆ ನರಿಕೊಂಬು ಗ್ರಾಮದಲ್ಲಿ ನಡೆದಿದೆ.

  ನರಿಕೊಂಬು ಗ್ರಾಮದ ಬೀರಕೋಡಿ ನಿವಾಸಿ ಯೋಗೀಶ್ ಪೂಜಾರಿ ಅವರ ಪುತ್ರ ಆನುಶ್ ಮೃತಪಟ್ಟ ಯುವಕ.

ಜೂನ್ 8ರಿಂದ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿಯ ಸಹಿತ ಭಾರೀ ಮಳೆಯ ಮುನ್ನೆಚ್ಚರಿಕೆ

Posted by Vidyamaana on 2024-06-08 06:54:08 |

Share: | | | | |


ಜೂನ್ 8ರಿಂದ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿಯ ಸಹಿತ ಭಾರೀ ಮಳೆಯ ಮುನ್ನೆಚ್ಚರಿಕೆ

ಮಂಗಳೂರು, ಜೂನ್ 8: ಕರಾವಳಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಜೂನ್ 8 ಮತ್ತು 9ರಂದು ಆರೆಂಜ್ ಅಲರ್ಟ್ ಘೋಷಿಸಿದೆ.

ಸಾವಿನ ಬಗ್ಗೆ ಅನುಮಾನ : ದಫನ ಮಾಡಿದ 18 ದಿನಗಳ ಬಳಿಕ ಮರಣೋತ್ತರ ಪರೀಕ್ಷೆ

Posted by Vidyamaana on 2024-05-24 11:06:49 |

Share: | | | | |


ಸಾವಿನ ಬಗ್ಗೆ ಅನುಮಾನ : ದಫನ ಮಾಡಿದ 18 ದಿನಗಳ ಬಳಿಕ ಮರಣೋತ್ತರ ಪರೀಕ್ಷೆ

ಕನ್ಯಾನ : ಸಂಶಯಾಸ್ಪದವಾಗಿ ಮೃತಪಟ್ಟ ವ್ಯಕ್ತಿಯೊಬ್ಬರ ಶವ ದಫನ ಮಾಡಿದ ಬಳಿಕ, ಸಾವಿನಲ್ಲಿ ಸಂಶಯವಿದೆ ಎಂದು ಮೃತ ವ್ಯಕ್ತಿಯ ಸಹೋದರ ಮಂಜೇಶ್ವರ ಠಾಣೆಗೆ ದೂರು ನೀಡಿದ್ದು, ನ್ಯಾಯಾಲಯದ ಆದೇಶದಂತೆ ಕನ್ಯಾನ ಬಂಡಿತ್ತಡ್ಕ ಮಸೀದಿ ಆವರಣದಲ್ಲಿ ದಫನ ಮಾಡಿದ್ದ ಶವವನ್ನು 18 ದಿನಗಳ ಬಳಿಕ ಮೇಲೆತ್ತಿ ಮರಣೋತ್ತರ ಪರೀಕ್ಷೆಯನ್ನು ಗುರುವಾರ ನಡೆಸಲಾಯಿತು.

ಕೇರಳದ ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿ ಅಶ್ರಫ್ (44) ಅವರ ದೇಹವನ್ನು ಕನ್ಯಾನದ ಬಂಡಿತ್ತಡ್ಕದಲ್ಲಿರುವ ರಹ್ಮಾನಿಯಾ ಜುಮಾ ಮಸೀದಿ ಆವರಣದಲ್ಲಿ ದಫನ ಮಾಡಲಾಗಿತ್ತು. ಆ ಶವವನ್ನು ಬಂಟ್ವಾಳ ತಹಶೀಲ್ದಾರ್ ಡಿ.ಅರ್ಚನಾ ಭಟ್, ಮಂಜೇಶ್ವರ ಸಿಪಿಐ ರಾಜೀವ್ ಕುಮಾರ್ ಕೆ., ಕೇರಳ ಆರೋಗ್ಯ ಇಲಾಖೆಯ ಡಾ.ಹರಿಕೃಷ್ಣ ಕಾಸರಗೋಡು, ಯೆನೆಪೋಯ ವಿಧಿವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಕಿಶೋರ್ ಕುಮಾರ್ ಬಿ., ವಿಟ್ಲ ಪೊಲೀಸರ ಸಮ್ಮುಖದಲ್ಲಿ ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ದೇಹದ ಅಂಗಾಗಳ ಮಾದರಿಯನ್ನು ವಿಧಿವಿಜ್ಞಾನ ತಂಡ ಪಡೆದುಕೊಂಡಿದ್ದು, ತನಿಖೆಗಾಗಿ ಯೆನೆಪೋಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಅಧಿಕಾರಿಗಳ ಸೂಚನೆಯಂತೆ ಬಂದಿದ್ದು, ವರದಿಯನ್ನು ಕೇರಳದ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ತಲವಾರು ಪ್ರದರ್ಶಿಸಿದ ಪ್ರಕರಣ

Posted by Vidyamaana on 2023-11-11 15:02:09 |

Share: | | | | |


ಸಾರ್ವಜನಿಕ ಸ್ಥಳದಲ್ಲಿ ತಲವಾರು ಪ್ರದರ್ಶಿಸಿದ ಪ್ರಕರಣ

ಪುತ್ತೂರು: ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಛೇರಿಯ ಮುಂಭಾಗದಲ್ಲಿ ತಲ್ವಾರ್‌ನೊಂದಿಗೆ ಕಾರಿನಲ್ಲಿ ಬಂದ ತಂಡ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ.10ರಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ ಶಾಂತಿಗೋಡು ಗ್ರಾಮದ ದಿನೇಶ್ ಪಂಜಿಗ(38ವ), ನರಿಮೊಗರು ಗ್ರಾಮದ ಭವಿತ್(19ವ), ಬೊಳುವಾರು ನಿವಾಸಿ ಮನ್ವಿತ್(18ವ), ಚಿಕ್ಕಮುನ್ನೂರು ಗ್ರಾಮದ ಜಯಪ್ರಕಾಶ್(18ವ), ಚಿಕ್ಕಮುನ್ನೂರು ಗ್ರಾಮದ ಚರಣ್(23ವ), ಬನ್ನೂರು ಗ್ರಾಮದ ಮನೀಶ್(23ವ), ಕಸಬ ಗ್ರಾಮದ ವಿನೀತ್(19ವ) ಸಹಿತ ಇಬ್ಬರು ಅಪ್ರಾಪ್ತ ಪ್ರಾಯದ ಬಾಲಕರನ್ನು ಪೊಲಿಸರು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು. ನ.11ರಂದು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ಅರೋಪಿಗಳಿಗೆ ನ.15ರ ತನಕ ನ್ಯಾಯಾಂಗ ಕಸ್ಟಡಿಗೆ ನೀಡಿದ್ದಾರೆ

ಮದ್ರಸ ಚಟುವಟಿಕೆಗೆ ಶಕ್ತಿ ತುಂಬಿದ ತಕ್ವಿಯಸದರ್ ಮುಹಲ್ಲಿಂ ಸಂಗಮ

Posted by Vidyamaana on 2023-06-12 15:19:08 |

Share: | | | | |


ಮದ್ರಸ ಚಟುವಟಿಕೆಗೆ ಶಕ್ತಿ ತುಂಬಿದ ತಕ್ವಿಯಸದರ್ ಮುಹಲ್ಲಿಂ ಸಂಗಮ

ಉಪ್ಪಿನಂಗಡಿ;ಧಾರ್ಮಿಕ ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಪಡೆದ ಸಮಸ್ತ ಇಸ್ಲಾಮಿಕ್ ಮತ ವಿಧ್ಯಾಬ್ಯಾಸ ಬೋರ್ಡ್ ಅಧೀನದ ಜಂಹಿಯ್ಯತ್ತುಲ್ ಮುಹಲ್ಲಿಮೀನ್ ದಕ ಜಿಲ್ಲಾ ಸಮಿತಿಯ ಆಶ್ರಯಲ್ಲಿ ಮದ್ರಸ ಕ್ಷೇತ್ರಕ್ಕೆ ಶಕ್ತಿ ತುಂಬುವ ಸಲುವಾಗಿ ಸದರ್ ಮುಹಲ್ಲಿಂ ಸಂಗಮ ಜೂನ್ ಹನ್ನೆರಡು ಸೋಮವಾರ ಉಪ್ಪಿನಂಗಡಿಯ ಎಚ್ ಎಂ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದುಹಾಶಿರ್ವಚನದ ಮೂಲಕ ಬೆಳ್ತಂಗಡಿ ಜಿಪ್ರಿ ತಂಙಲ್ ಉದ್ಘಾಟಿಸಿ ಮುಹಲ್ಲಿಮರು ಮಾದರಿ ಯೋಗ್ಯರಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಕೇಂದ್ರೀಯ ಸಂಪನ್ನೂಲ ವ್ಯಕ್ತಿಗಳಾಗಿ ವಿಚಾರ ಮಂಡಿಸಿ ಮಾತನಾಡಿದ  ಕೊಡಗು ಅಬ್ದುರ್ಹ್ಮಾನ್ ಮುಸ್ಲಿಯಾರ್ ಮುಹಲ್ಲಿಮರ ಜವಾಬ್ದಾರಿ ಯನ್ನು ನೆನಪಿಸಿದರು.ಇನ್ನೋರ್ವ ಭಾಷಣಗಾರ ಅಸ್ಲಮ್ ಅಝ್ಹರಿ ಮಾತನಾಡಿ ತಮ್ಮ ಸ್ವಂತ ಜೀವನ ಬದಲಾದರೆ ಸಮಾಜವನ್ನು ಬದಲಾಯಿಸಲು ಸಾಧ್ಯ ಎಂದರು.ಸಮಸ್ತ ಮುಶಾವರ ಸದಸ್ಯ ಉಸ್ಮಾನುಲ್ ಪೈಝಿ ಮಾತನಾಡಿ ಉಲಮಾಗಳು ವಸ್ತ್ರ ಸಂಹಿತೆಯಲ್ಲಿ ಕೂಡಾ ಇತರರಿಗೆ ಮಾದರಿಯಾಗ ಬೇಕು  ಎಂದರು.

 ರಾಜ್ಯ ದಾರಿಮಿ ಒಕ್ಕೂಟದ ಎಸ್ ಬಿ ದಾರಿಮಿ ಯವರು ಆಗಲೇ ಆಗಮಿಸಿದ ಸ್ಪೀಕರ್ ಯುಟಿ ಖಾದರ್ ರನ್ನು ಸ್ವಾಗತಿಸಿ ಮಾತನಾಡಿ ಮುಹಲ್ಲಿಮರ ಭವಣೆ ನೀಗಿಸಲು ಸಮಾಜ ಮತ್ತು ಸರಕಾರ ಮುಂದೆ ಬರಬೇಕು.ಲಕ್ಷಾಂತರ ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ಕೊಡುವಾಗ ಕೆಲವೊಂದಿಷ್ಟು ಮದ್ರಸ ಅಧ್ಯಾಪಕರಿಗೆ ವಕಫ್ ಬೊರ್ಡ್ ಮೂಲಕ ಅನುದಾನ ಬಿಡುಗಡೆ ಗೊಳಿಸಿದರೆ ಅದು ದೊಡ್ಡ ಹೊರೆಯಾಗದು ಎಂದರು.

ಜಿಲ್ಲೆಯ ಬಹುತೇಕ ಮದ್ರಸ ಗಳು ಸಮಸ್ತದ ಆದರ್ಶದಂತೆ ನಡೆಯುತ್ತಿದೆ.ಆದರೆ ವಕಫ್ ಹಜ್ ಮೊದಲಾದ ಧಾರ್ಮಿಕ ಮಂಡಳಿಗೆ ಆಯ್ಕೆ ಮಾಡುವಾಗ ಸಮಸ್ತದ ಪ್ರತಿನಿಧಿಗಳನ್ನು ಕಡೆಗಣಿಸುವುದು ಇನ್ನು ಮುಂದೆ ಸಹಿಸಲಾಗದು ಎಂದರಲ್ಲದೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟ ಪಕ್ಷದ ಬೆನ್ನೆಲುಬಾಗಿ ನಿಲ್ಲಲು ಸಮಸ್ತದ ಅಭಿಮಾನಿಗಳು ಸದಾ ಮುಂಚೂಣಿಯಲ್ಲಿದ್ದರು.

ಕೋಮುವಾದಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿದ ಇತಿಹಾಸ ಸಮಸ್ತದ ಕಾರ್ಯಕರ್ತರಿಗೆ ಇಲ್ಲ ಎಂದು ನೆನಪಿಸಿದರು.

ಇದೇ ಸಂಧರ್ಭದಲ್ಲಿ ಸರಕಾರದ ನೂತನ ಸ್ಪೀಕರ್ ಯುಟಿ ಖಾದರ್ ನ್ನು ಸನ್ಮಾನಿಸಲಾಯಿತು.

ನಂತರ ಭಾಷಣ ಮಾಡಿದ ಸ್ಪೀಕರ್ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಾನು ಸದಾ ಬದ್ದನಾಗಿದ್ದೇನೆ.ಸಮುದಾಯದ ರಾಯಬಾರಿಗಳೆಂದರೆ ಅದು ಉಲಮಾಗಳು ಮಾತ್ರ.ಅವರ ಮಾರ್ಗದರ್ಶನ ಪಡೆದು ಮುಂದೆ ಸಾಗಿದರೆ ಇಲ್ಲಿ ಅಶಾಂತಿ ಅವ್ಯವಸ್ಥೆ ಉಂಟಾಗುವುದಿಲ್ಲ.ನನ್ನ ಇತಿಮಿತಿಯಲ್ಲಿ ಸಮಸ್ತದ ಕಾರ್ಯಕರ್ತ ರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಮಾರೋಪ ಭಾಷಣ ಮಾಡಿದ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಮಾತನಾಡಿ ಕುರ್ಅನ್ ಕಲಿಕೆಯಲ್ಲಿ ಉಂಟಾಗುವ ಲೋಪದೋಷಗಳನ್ನು ಸರಿಪಡಿಸಲು ಅಧ್ಯಾಪಕರು ಶೃದ್ದೆ ವಹಿಸ ಬೇಕೆಂದು ಕರೆ ನೀಡಿದರು.ಹಾಜಿ ಕೆಂಪಿ ಮುಸ್ತಪ ಶುಭ ಹಾರೈಸಿದರು.ಜಿಲ್ಲಾ ಜಂಯಿತ್ತುಲ್ ಮುಹಲ್ಲಿಮೀನ್ ಅಧ್ಯಕ್ಷ ಹಾಜಿ ಶಂಸುದ್ದಿನ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು.ಕಡಬ ಇಬ್ರಾಹಿಂ ದಾರಿಮಿ ಕಿರಾಅತ್ ಪಠಿಸಿದರು.

ಸಿದ್ದೀಖ್ ಪೈಝಿ ಕರಾಯ ಸ್ವಾಗತಿಸಿ ರೆಂಜಾಡಿ ದಾರಿಮಿ ವಂದಿಸಿದರು.

ಬೆಳಗ್ಗೆ ನಡೆದ ಸರಳ ಸಮಾರಂಭದಲ್ಲಿ ಕೇಂದ್ರಿಯ ಘಟಕದ ವತಿಯಿಂದ ಪ್ರತೀ ಜಿಲ್ಲೆಗೆ ಒಂದರಂತೆ ನೀಡಲಾಗುವ ಎಂಟು ಲಕ್ಷ ವೆಚ್ಚದ ಮುಹಲ್ಲಿಂ ಮಂಝಿಲ್ ಗೆ ಸಯ್ಯಿದ್ ಅನಸ್ ತಂಙಳ್ ಶಿಲಾನ್ಯಾಸ ಗೈದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಮನವಿ ವಾಚಿಸಿದರು.

ನರಿಮೊಗರಿನಲ್ಲಿ ಬದುಕಿನ ಆಧಾರ ಸ್ತಂಭಕ್ಕೇ ಢಿಕ್ಕಿ ಹೊಡೆದ ಯಮರೂಪಿ ಜಿಪು!

Posted by Vidyamaana on 2024-04-21 12:56:21 |

Share: | | | | |


ನರಿಮೊಗರಿನಲ್ಲಿ ಬದುಕಿನ ಆಧಾರ ಸ್ತಂಭಕ್ಕೇ ಢಿಕ್ಕಿ ಹೊಡೆದ ಯಮರೂಪಿ ಜಿಪು!

ಆತ್ಮೀಯ ಸಮಾಜ ಭಾಂಧವರೇ....

ನಿನ್ನೆ ದಿನಾಂಕ 17/ 4/2024 ರಂದು ರಾತ್ರಿ ನರಿಮೊಗರಿನಲ್ಲಿ ಬೈಕ್ ಗೆ  ಜೀಪು ಡಿಕ್ಕಿ ಹೊಡೆದು ಬೈಕ್ ಸವಾರ ಭಕ್ತಕೋಡಿಯ ಕಡ್ಯ ನಿವಾಸಿ ಲೋಕೇಶ್ ಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದು ಅವರ  ಜೊತೆಯಲ್ಲಿದ್ದ ಮಕ್ಕಳಾದ ದೀಪ್ತಿ (8 ವ), ಗಗನ್ (6ವ) ಜೀವನ್ಮರಣ ಹೋರಾಟದಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೃತರಾದ ಲೋಕೇಶ್ ರು ತನ್ನ ವೃದ್ಧ ತಾಯಿಗೆ ಔಷಧಿ ತೆಗೆದುಕೊಳ್ಳಲು ಹೊರಟಾಗ ನಮ್ಮನ್ನು ಜಾತ್ರೆಗೆ ಕರೆದುಕೊಂಡು ಹೋಗಿ  ಅಪ್ಪ ... ಎಂದು ಮಕ್ಕಳಿಬ್ಬರೂ ಹಠ ಮಾಡಿದ್ದಕ್ಕೆ ಜೊತೆಯಲ್ಲಿ ಕರೆದುಕೊಂಡು ಜಾತ್ರೆಯಲ್ಲಿ ಸುತ್ತಾಡಿಸಿ ಮನೆಗೆ

Recent News


Leave a Comment: