ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಸುದ್ದಿಗಳು News

Posted by vidyamaana on 2024-07-05 10:22:02 |

Share: | | | | |


ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಇಂದು ಮಂಗಳೂರಿನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಿಷ್ಯಂತ್ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆಯಾಗಿದ್ದರು.

2016 ರ ಕರ್ನಾಟಕ ಕೇಡರ್ ನ IPS ಅಧಿಕಾರಿ ಯತೀಶ್ ಎನ್ ಈ ಹಿಂದೆ ಮಂಡ್ಯ ಎಸ್ಪಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. ಇನ್ನೂ ಹಲವಾರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 Share: | | | | |


ಕಾರು ಚೇಸ್ ಮಾಡಿ ಯುವತಿಗೆ ಕಿರುಕುಳ: ಇಬ್ಬರ ಬಂಧನ

Posted by Vidyamaana on 2024-04-01 19:38:18 |

Share: | | | | |


ಕಾರು ಚೇಸ್ ಮಾಡಿ ಯುವತಿಗೆ ಕಿರುಕುಳ: ಇಬ್ಬರ ಬಂಧನ

ಬೆಂಗಳೂರು: ಕಾರಿನಲ್ಲಿ ಹೋಗುತ್ತಿದ್ದ ಯುವತಿಯೊಬ್ಬರನ್ನು ಚೇಸ್ ಮಾಡಿಕೊಂಡು ಬಂದು ಕಿರುಕುಳ ನೀಡಿದ ಇಬ್ಬರು ಬೈಕ್ ಸವಾರರನ್ನು ಬಂಧಿಸಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮಳೆಗಾಗಿ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ: ಶಾಸಕರು ಭಾಗಿ

Posted by Vidyamaana on 2024-04-28 20:17:10 |

Share: | | | | |


ಮಳೆಗಾಗಿ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ: ಶಾಸಕರು ಭಾಗಿ

ಪುತ್ತೂರು: ಮಳೆ ಇಲ್ಲದೆ ಕರಾವಳಿ ಬಿಸಿ ತಾಪದಿಂದ ಕೂಡಿದ್ದು ಜನ‌ಸಂಕಷ್ಡ ಎದುರಿಸುವಂತಾಗಿದ್ದು ಶೀಘ್ರ ಮಳೆ ಪ್ರಾಪ್ತಿಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ಶಾಸಕರ ಸೂಚನೆಯಂತೆ ಪರ್ಜನ್ಯ ಜ‌ಪ ನೆರವೇರಿತು. ಜಪ ಕಾರ್ಯಕ್ರಮದಲ್ಲಿ‌ಶಾಸಕರಾದ ಅಶೋಕ್ ರೈಭಾಗವಹಿಸಿ ಮಳೆ ಗಾಗಿ ದೇವರಲ್ಲಿ‌ಪ್ರಾರ್ಥನೆ ಮಾಡಿದರು. ಈ‌ಸಂದರ್ಭದಲ್ಲಿ ಪಂಜಿಗುಡ್ಡೆ ಈಶಗವರಭಟ್,ನ್ಯಾಯವಾದಿ ಜಗನ್ನಿವಾಸ್ ರಾವ್ , ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ,ರಂಜಿತ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರಿಗಾಗಿ ಸಹಾಯವಾಣಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

Posted by Vidyamaana on 2023-10-08 21:18:37 |

Share: | | | | |


ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರಿಗಾಗಿ ಸಹಾಯವಾಣಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು : ಇಸ್ರೇಲ್ ವಿರುದ್ಧ ಹಮಾಸ್ ಬಂಡುಕೋರರು ಮತ್ತೆ ಯುದ್ಧ ಸಾರಿಸಿದ್ದಾರೆ. ಪ್ಯಾಲೆಸ್ತೀನ್​ನ ಹಮಾಸ್​​ ಬಂಡುಕೋರರು ನಿನ್ನೆ(ಅ.07) ದಿಢೀರ್​​ ದಾಳಿ ನಡೆಸಿದ್ದು, ಈ ಯುದ್ಧದಲ್ಲಿ ಇದುವರೆಗೆ 300 ಇಸ್ರೇಲಿಯನ್ನರು ಸಾವನ್ನಪ್ಪಿದ್ದಾರೆ. ಮತ್ತು 1750 ಜನರು ಗಾಯಗೊಂಡಿದ್ದಾರೆ.ಈ ನಡುವೆ ಇಸ್ರೇಲ್‌ನಲ್ಲಿ ನಲೆಸಿರುವ ಸಾವಿರಾರು ಭಾರತೀಯರು ನೆಲೆಸಿದ್ದು, ಅದರಲ್ಲೂ ಕನ್ನಡಿಗರು ಸಹ ಇದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಅದಕ್ಕಾಗಿಯೇ ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಿದೆ.


ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಇಸ್ರೇಲ್‌ನಲ್ಲಿ ನಲೆಸಿರುವ ಎಲ್ಲ ಭಾರತೀಯರು ಸುರಕ್ಷಾ ಮತ್ತು ಜಾಗರೂಕರಾಗಿರುವಂತೆ ತಿಳಿಸಿದ್ದಾರೆ. ಜನನಿಬಿಡ ಪ್ರದೇಶಗಳ ಮೇಲೆ ರಾಕೆಟ್ ದಾಳಿ ಮುಂದುವರಿದಿದ್ದು, ಇನ್ನೊಂದೆಡೆ ಇಸ್ರೇಲ್ ಪ್ರವೇಶಿಸಿರುವ ಹಮಾಸ್ ಉಗ್ರರು ಇಸ್ರೇಲಿ ಪ್ರಜೆಗಳನ್ನು ಅಪಹರಿಸುತ್ತಿರುವ ವಿಡಿಯೋ ವೈರಲ್ ಆಗಿರುವ ಹಿನ್ನೆಲೆ ಮನೆಯಿಂದ ಆಚೆ ಬರದಂತೆ ಸೂಚಿಸಲಾಗಿದೆ. ದೇಶದ ಜನರು ಅದರಲ್ಲೂ ಕನ್ನಡಿಗರು ಸಹ ಸ್ಥಳೀಯ ಅಧಿಕಾರಿಗಳ ಸೂಚನೆ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ವಿನಂತಿಸಿಕೊಂಡಿದ್ದಾರೆ.ಅನಗತ್ಯ ಪ್ರಯಾಣಗಳನ್ನು ತಪ್ಪಿಸಬೇಕು ಮತ್ತು ಸುರಕ್ಷತಾ ಅಶ್ರಯಗಳ ಹತ್ತಿರ ಇರುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇಸ್ರೇಲಿ ಹೋಮ್ ಫ್ರಂಟ್ ಕಮಾಂಡ್ ವೆಬ್‌ಸೈಟ್ (https://www.oref.org.il/en) ಅಥವಾ ಅವರ ಸಿದ್ಧತೆ ಕರಪತ್ರವನ್ನು ನೋಡಿ. ಯಾವುದೇ ಹೆಚ್ಚಿನ ಮಾರ್ಗದರ್ಶನಕ್ಕಾಗಿ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸಂಪರ್ಕಿಸುವಂತೆ ಹೇಳಲಾಗಿದೆ.


ಸಹಾಯವಾಣಿ ತುರ್ತು ಸಂದರ್ಭದಲ್ಲಿ +97235226748 ನಲ್ಲಿ ಸಂಪರ್ಕಿಸಿ ಅಥವಾ consl.tel[email protected] ನಲ್ಲಿ e-ಮೇಲ್ ಸಂದೇಶವನ್ನು ಕಳುಹಿಸುವಂತೆ ತಿಳಿಸಲಾಗಿದೆ.


ಅಸಿಡಿಟಿಯ ಎದೆ ಉರಿಯನ್ನು ಮತ್ತು ಎದೆ ನೋವಿನ ಉರಿಯನ್ನು ಐಡೆಂಟಿಫೈ ಮಾಡೋದು ತುಂಬಾ ಸುಲಭ: ಡಾ. ಜೆ ಸಿ ಅಡಿಗ


ಅಗತ್ಯವಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ: 080222340676, 08022253707 ಎಂದು ಸರ್ಕಾರ ಸಹಾಯವಾಣಿ ಬಿಡುಗಡೆ ಮಾಡಿದೆ.

ಬೆಳ್ತಂಗಡಿ: ಅಕ್ರಮ ಮರ ಸಾಗಾಟ ಪ್ರಕರಣ; ಅರಣ್ಯಾಧಿಕಾರಿ ಅಮಾನತು

Posted by Vidyamaana on 2023-07-05 12:04:29 |

Share: | | | | |


ಬೆಳ್ತಂಗಡಿ: ಅಕ್ರಮ ಮರ ಸಾಗಾಟ ಪ್ರಕರಣ; ಅರಣ್ಯಾಧಿಕಾರಿ ಅಮಾನತು

ಬೆಳ್ತಂಗಡಿ: ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅವರನ್ನು ಕೆಲಸದಿಂದ ಅಮಾನತು ಗೊಳಿಸಿ ಪ್ರಧಾನ ಮುಖ್ಯವಾರಣ್ಯ ಸಾಮರಕ್ಷಣಾಧಿಕಾರಿ ಆದೇಶ ಹೊರಡಿಸಿರುವ ಬಗ್ಗೆ ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಕಲಂಜ ಗ್ರಾಮದಲ್ಲಿ ನಡೆದಿದ್ದ ಮರಗಳ ಅಕ್ರಮ ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ಕ್ರಮ ಕೈಗೊಂಡಿದೆ. ಕಲ್ಮಂಜ ಗ್ರಾಮದಲ್ಲಿ 2.5ಎಕ್ರೆ ಪ್ರದೇಶದಲ್ಲಿನ ಮರಗಳನ್ನು ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಕಡಿಯಲಾಗಿತ್ತು ಆದರೆ ಇಲಾಖೆ ಕಾನುನಿನ ಅಡಿಯಲ್ಲಿ ಕ್ರಮ ಕೈಗೊಳ್ಳದೆ ಸೊತ್ತುಗಳನ್ನು ಸಾಗಾಟ ಮಾಡಲು ಅವಕಾಶ ಮಾಡಿಕೊಟ್ಟು ಮರಗಳ್ಳರೊಂದಿಗೆ ಶಾಮೀಲಾಗಿದ್ದಾರೆ ಎಂಬ ಆರೋಪ ತ್ಯಾಗರಾಜ್ ಅವರ ಮೇಲಿತ್ತು.ಈ ಹಿನ್ನಲೆಯಲ್ಲಿ ಇಲಾಖಾ ತನಿಖೆ ನಡೆಸಲಾಗಿತ್ತು.ಇದೀಗ ತ್ಯಾಗರಾಜ್ ಅವರನ್ನು ಅಮಾನತು ಗೊಳಿಸಿ ಆದೆಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ವಿವಾದಗಳಿಗೆ ಕಾರಣವಾಗಿದ್ದ ಕಲಂಜದ ಅಕ್ರಮ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಅಧಿಕಾರಿಯ ತಲೆದಂಡವಾಗಿದೆ.

ಲಕ್ಷಾಂತರ ಮೌಲ್ಯದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರಿ ಅರಣ್ಯ ದಳದ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರು. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಹಾಗೂ ಇತರರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆಗಲೇ ಇಲಾಖಾ ತನಿಖೆ ಆರಂಭವಾಗಿತ್ತು. ಆದರೆ ಅಧ ಮುಂದುವರಿದ ಭಾಗವಾಗಿ ದಾಳಿ ನಡೆಸಿದ್ದ ಸಂದ್ಯಾ ಅವರನ್ನು ಬೀದರಿಗೆ ವರಗಗಾವಣೆ ಮಾಡಿ ಆದೇಶಬಂದ ಹಿನ್ನಲೆಯಲ್ಲಿ ಭಾರೀ ರಾಜಕೀಯ ವಿವಾದಗಳು ಸೃಷ್ಟಿಯಾಗಿದ್ದವು. ಅಲ್ಲದೆ ತನಿಖೆ ನಡೆಸಿದ ಹಿರಿಯ ಅಧಿಕಾರಿಗಳು ಕೆಳ ಹಂತದ ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.

ತ್ಯಾಗರಾಜ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಇದೀಗ ತ್ಯಾಗರಾಜ್ ಅವರ ವಿರುದ್ಧ ಇದೇ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗಿದೆ

ಶಾಸಕರು ಏಳು ಜನ ಪಿಎ ಗಳನ್ನು ಯಾಕೆ ಇಟ್ಟಿದ್ದಾರೆ?

Posted by Vidyamaana on 2023-09-02 13:16:53 |

Share: | | | | |


ಶಾಸಕರು ಏಳು ಜನ ಪಿಎ ಗಳನ್ನು ಯಾಕೆ ಇಟ್ಟಿದ್ದಾರೆ?

ತನ್ನ ಕಚೇರಿಗೆ ಬರುವವರನ್ನು ವಿಚಾರಿಸಲು, ಅವರ ಸಮಸ್ಯೆ ಆಲಿಸಲು ಕಚೇರಿಯಲ್ಲಿ ಜನ ಇರಬೇಕೆಂಬ ದೂರ ದೃಷ್ಟಿ ಶಾಸಕರಲ್ಲಿತ್ತು ,ಯಾರೇ ಏನೇ ಅಂದರೂ ಶಾಸಕರು ಅದರ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಿಲ್ಲ. ಕಚೇರಿಗೆ ಬರುವ ಬಡವರಿಗೆ ಸೇವೆ ಸಿಗಬೇಕೆಂಬ ಹಂಬಲ ಅವರಲ್ಲಿತ್ತು.‌ ಏಳು ಜನ ಪಿಎ ಗಳನ್ನು ಯಾಕೆ ಇಟ್ಟಿದ್ದಾರೆ ಎಂಬುದು ಕೆಲವರಿಗೆ ಅರ್ಥವಾಗಿರಬಹುದು ಆದರೆ ಕೆಲವರಿಗೆ ಅರ್ಥವಾಗದೆನೂ ಇರಬಹುದು. ಅರ್ಥ ಮಾಡಿಕೊಳ್ಳದೆ ಇರುವುದು ತಪ್ಪು ಎಂದು ಹೇಳಲಾಗದು.

ಶುಕ್ರವಾರ ಮಧ್ಯಾಹ್ನ ಊಟ ಮುಗಿಸಿ ಶಾಸಕರ ಕಚೇರಿ ಕಡೆ ತೆರಳಿದ್ದೆ. ಕಚೇರಿ ಮುಂಬಾಗಿಲ ಬಳಿ ವೃದ್ದೆ ಯೋರ್ವರು ನೆಲದ‌ಮೇಲೆ ಕುಳಿತಿದ್ದರು ಪಕ್ಕದಲ್ಲಿ ಪಿಎ ಲಿಂಗಪ್ಪರೂ ಅವರ ಜೊತೆ ಮಾತನಾಡುತ್ತಿದ್ದರೂ ಆ ಕ್ಷಣದಲ್ಲಿ ನಾನೊಂದು ಫೋಟೋ ಕ್ಲಿಕ್ಕಿಸಿದೆ. ಬಳಿಕ ನಾನೂ‌ಆ ವೃದ್ದೆ‌ತಾಯಿ ಲಿಂಗಪ್ಪರ ಬಳಿ ಹೇಳುತ್ತಿದ್ದ ಸಮಸ್ಯೆಯನ್ನೂ ಆಲಿಸಿದೆ. ಬಳಿಕ ಯಾಕೆ ನೀವು ನೆಲದ ಮೇಲೆ ಕೂತಿದ್ದೀರಿ ಎಂದು ಕೇಳಿಬಿಟ್ಟೆ. ಆಗ ಆ ಮಹಿಳೆ ನನಗೆ ಕುರ್ಚಿ ಮೇಲೆ ಕುಳಿತುಕೊಳ್ಳಲು ಆಗುತ್ತಿಲ್ಲ ಅದಕ್ಕೆ ನೆಲದ ಮೇಲೆ ಕುಳಿತೆ ನಾನು ಕುಳಿತಾಗ ಇವರೂ (ಲಿಂಗಪ್ಪ) ರೂ ಕುಳಿತರು, ನನ್ನ‌ಸಮಸ್ಯೆಗೆ ಪರಿಹಾರವನ್ನೂ ಸೂಚಿಸಿದರು ಎಂದು ಹೇಳಿದಾಗ ಶಾಸಕರು ಯಾಕೆ ಕಚೇರಿಯಲ್ಲಿ ಪಿಎ ಗಳನ್ನು ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿದವರಿಗೆ ಉತ್ತರ ಸಿಕ್ಕಿರಬಹುದು ಎಂದು‌ ಮನಸ್ಸಿನಲ್ಲೇ ಗ್ರಹಿಸಿಕೊಂಡೆ.‌


ಮುಕ್ವೆ : ಧಾರ್ಮಿಕ ಮತಪ್ರವಚನ, ಬೃಹತ್ ನಪ್ ತೇ ಶರೀಫ್ ಗೆ ಚಾಲನೆ

Posted by Vidyamaana on 2023-12-29 19:13:43 |

Share: | | | | |


ಮುಕ್ವೆ : ಧಾರ್ಮಿಕ ಮತಪ್ರವಚನ, ಬೃಹತ್ ನಪ್ ತೇ ಶರೀಫ್ ಗೆ ಚಾಲನೆ

ಪುತ್ತೂರು: ರಹ್ಮನಿಯಾ ಜುಮಾ ಮಸೀದಿ ಮುಕ್ವೆ  ಇದರ ಆಶ್ರಯದಲ್ಲಿ ನೂತನ ಮದ್ರಸ ಕಟ್ಟಡ ನಿರ್ಮಾಣದ ಅಂಗವಾಗಿ ನಡೆಯುವ  3 ದಿನಗಳ  ಧಾರ್ಮಿಕ ಮತ ಪ್ರವಚನ ಮತ್ತು ಬೃಹತ್ ನಹ್ ತೇ ಶರೀಫ್ ಕಾರ್ಯಕ್ರಮ ಡಿ.29 ರಿಂದ ಡಿ 31 ರವರೆಗೆ ಮುಕ್ವೆ ರಹ್ಮನಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದ್ದು ಡಿ. 29ರಂದು ಜುಮಾ ನಮಾಜು, ದರ್ಗಾ ಝಿಯಾರತ್ ಮಾಡಿದ ನಂತರ ಜಮಾತ್ ಕಮಿಟಿ ಅಧ್ಯಕ್ಷರಾದ ಇಬ್ರಾಹಿಂ ಮುಲಾರ್ ರವರು ಧ್ವಜಾರೋಹಣ ಮಾಡುವ ಮೂಲಕ ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ರಹ್ಮಾನಿಯಾ ಜುಮಾ ಮಸೀದಿ ಮುಕ್ವೆ, ಖತೀಬರಾದ ಅನ್ವರ್ ಅಲಿ ದಾರಿಮಿ ಅಜ್ಜಾವಾರ, ಅದ್ಯಕ್ಷ ಇಬ್ರಾಹಿಂ ಮುಲಾರು

ಸ್ವಾಗತ ಸಮಿತಿ ಅಧ್ಯಕ್ಷ ಅಶ್ರಫ್ ಚಿಕ್ಕಾಲ,ಜಮಾಅತಿನ ಸದಸ್ಯರು,ಸ್ವಾಗತ ಸಮಿತಿಯ ಪದಾದಿಕಾರಿಗಳು,ಉಸ್ತುವಾರಿಗಳು ಮತ್ತು ಸದಸ್ಯರು,ನೂರು ಹುದಾ ಜಮಾಅತ್ ಕಮಿಟಿ ಪದಾದಿಕಾರಿಗಳು ಮತ್ತು ಸದಸ್ಯರು,SKSSF ಮುಕ್ವೆ ಶಾಖೆಯ ಪದಾದಿಕಾರಿಗಳುಮತ್ತು ಸದಸ್ಯರು, ಹಯಾತುಲ್ ಇಸ್ಲಾಂ ಮದರಸ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕರು, SKSBV ಪದಾದಿಕಾರಿಗಳು ಮತ್ತುHIM ಮದರಸ  ವಿದ್ಯಾರ್ಥಿಗಳು ಮತ್ತು ಜಮಾತರು ಉಪಸ್ತಿತರಿದ್ದರು.

Recent News


Leave a Comment: