ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 27

Posted by Vidyamaana on 2023-08-26 23:18:35 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 27

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 27 ರಂದು

ಬೆಳಿಗ್ಗೆ 10 ಕ್ಕೆತುಳು ಅಪ್ಪೆ ಕೂಟದ ವತಿಯಿಂದ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ತುಳು ಕಾರ್ಯಕ್ರಮ

11 ಗಂಟೆಗೆ ಮುರದಲ್ಲಿ‌ಶಿವ ಸದನ‌ಲೋಕಾರ್ಪಣೆ

12 ಗಂಟೆಗೆ ಬಿರ್ವೆರ್ ಸಂಘದಿಂದ ಕೆಸರುಗೊಬ್ಬು‌ ಮಂಜಲ್ಪಡ್ಪುವಿನಲ್ಲಿ

ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ(ಜೂನ್ 20)

Posted by Vidyamaana on 2023-06-20 01:32:04 |

Share: | | | | |


ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ(ಜೂನ್ 20)

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜೂ 20 ರಂದು

ಬೆಳಿಗ್ಗೆ 10  ಖಾಸಗಿ ಕಾರ್ಯಕ್ರಮ (official)

ಅಪರಾಹ್ನ 4 ಗಂಟೆಗೆ ಹಿರೆಬಂಡಾಡಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು 

ಸಂಜೆ  5 ಗಂಟೆಗೆ ಉಪ್ಪಿನಂಗಡಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಪಣೆಮಜಲಿನಲ್ಲಿ ರಸ್ತೆಗೆ ಕಂಟಕವಾಗಿದೆ ಹಿಟಾಚಿ ಸಂಚಾರ - ವೀಡಿಯೋ ಚಿತ್ರೀಕರಿಸಿ ಜಾಲತಾಣದಲ್ಲಿ ಹರಿಬಿಟ್ಟ ಸಾರ್ವಜನಿಕರು

Posted by Vidyamaana on 2023-06-07 16:04:50 |

Share: | | | | |


ಪಣೆಮಜಲಿನಲ್ಲಿ ರಸ್ತೆಗೆ ಕಂಟಕವಾಗಿದೆ  ಹಿಟಾಚಿ ಸಂಚಾರ - ವೀಡಿಯೋ ಚಿತ್ರೀಕರಿಸಿ ಜಾಲತಾಣದಲ್ಲಿ ಹರಿಬಿಟ್ಟ ಸಾರ್ವಜನಿಕರು

ಪುತ್ತೂರು: ಟಯರ್ ಇಲ್ಲದೇ, ಚೈನ್ ಸಹಾಯದಿಂದ ಮುನ್ನಡೆಯುವ ಹಿಟಾಚಿಗಳನ್ನು ರಸ್ತೆಗೆ ಇಳಿಸಬಾರದು ಎಂಬ ನಿಯಮವಿದೆ. ಈ ಕಾರಣದಿಂದ, ಹಿಟಾಚಿಗಳಿಗೆ ಆರ್.ಟಿ.ಓ. ನೋಂದಣಿಯೂ ಇರುವುದಿಲ್ಲ. ಹೀಗಿದ್ದರೂ ಪಣೆ ಮಜಲು ಪರಿಸರದಲ್ಲಿ ಹಿಟಾಚಿಯೊಂದನ್ನು ರಸ್ತೆಯಲ್ಲೇ ಕೊಂಡೊಯ್ಯುತ್ತದೆ ದೃಶ್ಯ ವೀಡಿಯೋವೊಂದರಲ್ಲಿ ಸೆರೆಯಾಗಿದೆ.

ಹಿಟಾಚಿಗಳನ್ನು ಮಣ್ಣು ಅಗೆಯಲು ಉಪಯೋಗಿಸುತ್ತಾರೆ. ಗುಡ್ಡವನ್ನು ಲೀಲಾಜಾಲವಾಗಿ ಹತ್ತಿಳಿಯಬಲ್ಲ ಈ ಹಿಟಾಚಿಗಳನ್ನು ರಸ್ತೆಗೆ ತರುವಂತೆ ಇಲ್ಲ. ತಂದದ್ದೇ ಆದರೆ, ಡಾಮರು ರಸ್ತೆ ಕಿತ್ತು ಹೋಗುತ್ತದೆ. ಇದಕ್ಕೆ ಸಾಕಷ್ಟು ನಿದರ್ಶನಗಳೂ ಇವೆ. ಆದ್ದರಿಂದ ಹಿಟಾಚಿಯನ್ನು ರಸ್ತೆಗೆ ಇಳಿಸಲು ನಿರ್ಬಂಧ ವಿಧಿಸಲಾಗಿದೆ.

ಪಣೆಮಜಲು ಪರಿಸರದ ಮುಖ್ಯರಸ್ತೆಯಲ್ಲಿ ಹಿಟಾಚಿಯೊಂದು ಬೆಳ್ಳಂಬೆಳಗೆ ತೆರಳುತ್ತಿರುವುದು ವೀಡಿಯೋದಲ್ಲಿ ಚಿತ್ರೀಕರಣಗೊಂಡಿದೆ. ರಸ್ತೆ ಹಾಳಾಗಿ ಹೋಗುತ್ತದೆ ಎನ್ನುವ ಪರಿಜ್ಞಾನವೇ ಇಲ್ಲದೇ, ನಿಯಮಗಳನ್ನು ಗಾಳಿಗೆ ತೂರಿ ಮುಖ್ಯರಸ್ತೆಯಲ್ಲೇ ಕೊಂಡೊಯ್ಯಲಾಗುತ್ತಿತ್ತು. ಯಾರೂ ನೋಡುವುದಿಲ್ಲ, ಯಾರಿಗೂ ತಿಳಿಯುವುದಿಲ್ಲ ಎಂಬ ಕಾರಣಕ್ಕೆ ಬೆಳಗ್ಗಿನ ಹೊತ್ತನ್ನೇ ಆಯ್ಕೆ ಮಾಡಿಕೊಂಡು, ಹಿಟಾಚಿ ಕೊಂಡೊಯ್ಯಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಪ್ರಜ್ಞಾವಂತ ನಾಗರಿಕರು ಕಾನೂನು ಕೈಗೆತ್ತಿಕೊಳ್ಳಲಾರರು ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಕಾನೂನು ತಿಳಿದೂ, ಹೀಗೆ ವರ್ತಿಸಿದವರಿಗೆ ಏನೆನ್ನಬೇಕು? ಸಂಬಂಧಪಟ್ಟ ಇಲಾಖೆಗಳು ಇದರ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು. ಕಾದು ನೋಡಬೇಕಿದೆ?

ಪುತ್ತೂರಿನಲ್ಲಿ ನೂರುಲ್ ಹುದಾ ರಿವೈವ್ ಸ್ನೇಹಕೂಟ, ಪ್ರಾರ್ಥನಾ ಮಜ್ಲಿಸ್

Posted by Vidyamaana on 2024-06-27 17:14:01 |

Share: | | | | |


ಪುತ್ತೂರಿನಲ್ಲಿ ನೂರುಲ್ ಹುದಾ ರಿವೈವ್ ಸ್ನೇಹಕೂಟ, ಪ್ರಾರ್ಥನಾ ಮಜ್ಲಿಸ್

ಪುತ್ತೂರು, ಜೂನ್ ೨೧: ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ದಶಮಾನೋತ್ಸವದ ಹಿನ್ನೆಲೆಯಲ್ಲಿ ಪುತ್ತೂರು ವಲಯ ಮಟ್ಟದ ರಿವೈವ್ ಸ್ನೇಹ ಕೂಟ ಹಾಗೂ ಸಮಸ್ತ ಸ್ಥಾಪಕ ದಿನದ ಅಂಗವಾಗಿ ಪ್ರಾರ್ಥನಾ ಮಜ್ಲಿಸ್  ಜೂನ್ ೨೬ರಂದು ಬುಧವಾರ ರಾತ್ರಿ ಪುತ್ತೂರು ಬೈಪಾಸ್ ರಸ್ತೆಯಲ್ಲಿರುವ ಅಶ್ಮಿ ಕಂಫರ್ಟ್‌ನಲ್ಲಿ ನಡೆಯಿತು.

ಪ್ರಾರ್ಥನಾ ಮಜ್ಲಿಸ್‌ಗೆ ಸೈಯ್ಯದ್ ಎಸ್.ಎಂ. ಯಹ್ಯಾ ತಂಳ್ ಪೋಲ್ಯ ನೇತೃತ್ವ ನೀಡಿದರು. ಸ್ನೇಹಕೂಟವನ್ನು ಪುತ್ತೂರು ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ಅವರು ಮಾತನಾಡಿ ಸಂಸ್ಥೆಯ ಬೆಳವಣಿಗೆಯಲ್ಲಿ ಎಲ್ಲರ ಸಹಕಾರವನ್ನು ಕೋರಿದರು.

ಬಹಿಷ್ಕಾರ ಕರೆ ನೀಡಿದ್ದಕ್ಕೆ ಫೆಲೆಸ್ತೀನ್ ಪರ ಗುಂಪಿನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಮೆಕ್ ಡೊನಾಲ್ಡ್ಸ್

Posted by Vidyamaana on 2023-12-31 04:39:55 |

Share: | | | | |


ಬಹಿಷ್ಕಾರ ಕರೆ ನೀಡಿದ್ದಕ್ಕೆ ಫೆಲೆಸ್ತೀನ್ ಪರ ಗುಂಪಿನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಮೆಕ್ ಡೊನಾಲ್ಡ್ಸ್

ಹೊಸದಿಲ್ಲಿ: ಸರಣಿ ಫಾಸ್ಟ್‌ಫುಡ್ ಮಳಿಗೆಗಳನ್ನು ಹೊಂದಿರುವ ಮೆಕ್‌ಡೊನಾಲ್ಡ್ಸ್ ಮಲೇಶಿಯಾವು ಇಸ್ರೇಲ್‌ ಅನ್ನು ಬೆಂಬಲಿಸುವ ಕಂಪನಿಗಳನ್ನು ಬಹಿಷ್ಕರಿಸುವಂತೆ ಕರೆಗಳನ್ನು ನೀಡಿದ್ದಕ್ಕಾಗಿ ಫೆಲೆಸ್ತೀನ್ ಪರ ಗುಂಪು ಬಿಡಿಎಸ್ ಮಲೇಶಿಯಾದಿಂದ ಆರು ಮಿಲಿಯನ್ ರಿಂಗಿಟ್ (1.3 ಮಿಲಿಯನ್ ಡಾಲರ್)ಗಳ ಮಾನನಷ್ಟ ಪರಿಹಾರವನ್ನು ಕೋರಿ ಮೊಕದ್ದಮೆಯನ್ನು ದಾಖಲಿಸಿದೆ.ಬಿಡಿಎಸ್ ಮಲೇಶಿಯಾ ವಿರುದ್ಧ ದಾವೆಯು ಕಾನೂನಿಗನುಗುಣವಾಗಿ ನಮ್ಮ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ" ಎಂದು ಮೆಕ್‌ಡೊನಾಲ್ಡ್ಸ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.


"ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ತಾನು ಬೆಂಬಲಿಸುವುದಿಲ್ಲ ಅಥವಾ ಕ್ಷಮಿಸುವುದೂ ಇಲ್ಲ ಎಂದು ಹೇಳಿರುವ ಮೆಕ್‌ಡೊನಾಲ್ಡ್ಸ್ ಮಲೇಶಿಯಾ, ಬಹಿಷ್ಕಾರ ಕರೆಯು ವೈಯಕ್ತಿಕ ನಿರ್ಧಾರವಾಗಿದೆ ಎನ್ನುವುದನ್ನು ನಾವು ತಿಳಿದುಕೊಂಡಿದ್ದೇವೆ ಮತ್ತು ಅದನ್ನು ಗೌರವಿಸುತ್ತೇವೆ, ಆದರೆ ಅದು ಸತ್ಯಾಂಶಗಳನ್ನು ಆಧರಿಸಿರಬೇಕು, ಸುಳ್ಳು ಆರೋಪಗಳನ್ನಲ್ಲ ಎಂದು ನಾವು ನಂಬಿದ್ದೇವೆ" ಎಂದು ತಿಳಿಸಿದೆ.


"ಈ ಮಾನನಷ್ಟ ಆರೋಪವನ್ನು ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ" ಎಂದು ಬಿಡಿಎಸ್ ಮಲೇಶಿಯಾ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ.ಬಿಡಿಎಸ್ ಮಲೇಶಿಯಾ 2005ರಲ್ಲಿ ಫೆಲೆಸ್ತೀನಿ ನಾಗರಿಕ ಸಮಾಜ ಸಂಸ್ಥೆಗಳು ಆರಂಭಿಸಿದ್ದ ಜಾಗತಿಕ ಬಹಿಷ್ಕಾರ, ಹೂಡಿಕೆ ಹಿಂದೆಗೆತ ಮತ್ತು ನಿರ್ಬಂಧಗಳ ಆಂದೋಲನದ ಭಾಗವಾಗಿದೆ.


ಆಂದೋಲನವು ಇಸ್ರೇಲ್ ಫೆಲೆಸ್ತೀನಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿಗಾಗಿ ಅದರ ವಿರುದ್ಧ ರಾಜಕೀಯ ಮತ್ತು ಆರ್ಥಿಕ ಕ್ರಮಗಳನ್ನು ಪ್ರತಿಪಾದಿಸುತ್ತದೆ.


ಗಾಝಾದಲ್ಲಿ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಗೆ ಪ್ರತಿಕ್ರಿಯೆಯಾಗಿ ಬಿಡಿಎಸ್ ಮಲೇಶಿಯಾ ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ ಮತ್ತು ಝರಾ ಸೇರಿದಂತೆ ಪಾಶ್ಚಾತ್ಯ ಬ್ರ್ಯಾಂಡ್‌ಗಳನ್ನು ಬಹಿಷ್ಕರಿಸುವಂತೆ ಮಲೇಶಿಯಾದ ಜನರಿಗೆ ಕರೆಗಳನ್ನು ತೀವ್ರಗೊಳಿಸಿದೆ. ಈ ಕಂಪನಿಗಳು ಫೆಲೆಸ್ತೀನಿಗಳ ಮೇಲೆ ಇಸ್ರೇಲಿ ದೌರ್ಜನ್ಯಗಳಲ್ಲಿ ಶಾಮೀಲಾಗಿವೆ ಎಂದು ಅದು ಆರೋಪಿಸಿದೆ.

BREAKING: ಈಶ್ವರಪ್ಪನ ಪುತ್ರನಿಗೂ ಶುರುವಾಯ್ತು ಅಶ್ಲೀಲ ಸಿಡಿ ಭಯ!:ಅಶ್ಲೀಲ ವಿಡಿಯೊ ಪ್ರಸಾರಕ್ಕೆ ಕೋರ್ಟ್ ನಿರ್ಬಂಧ

Posted by Vidyamaana on 2024-05-01 04:35:20 |

Share: | | | | |


BREAKING: ಈಶ್ವರಪ್ಪನ ಪುತ್ರನಿಗೂ ಶುರುವಾಯ್ತು ಅಶ್ಲೀಲ ಸಿಡಿ ಭಯ!:ಅಶ್ಲೀಲ ವಿಡಿಯೊ ಪ್ರಸಾರಕ್ಕೆ ಕೋರ್ಟ್ ನಿರ್ಬಂಧ

ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ದೃಶ್ಯಾವಳಿಗಳು ವೈರಲ್ ಆಗಿವೆ. ಈ ಸಂಬಂಧ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೂ ಆದೇಶಿಸಿದೆ. ಈ ಬೆನ್ನಲ್ಲೇ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಪುತ್ರ ಕೆ.ಇ ಕಾಂತೇಶ್ ಗೂ ಅಶ್ಲೀಲ ಸಿಡಿ ಭೀತಿ ಎದುರಾಗಿದೆ.ಹೀಗಾಗಿ ಅವರು ನಿರ್ಬಂಧಕಾಜ್ಞೆಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಬೆನ್ನಲ್ಲೇ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅವರ ಪುತ್ರ ಕೆ.ಇ ಕಾಂತೇಶ್ ಅವರಿಗೂ ಅಶ್ಲೀಲ ಸಿಡಿ ಭೀತಿ ಎದುರಾಗಿದೆ.



Leave a Comment: