ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


77ನೇ ಸ್ವಾತಂತ್ರ್ಯೋತ್ಸವ ಆಚರಣೆಗಾಗಿ ಆಕರ್ಷಣ್ ಇಂಡಸ್ಟ್ರೀಸ್ ನೀಡಿದೆ ವಿಶೇಷ ಕೊಡುಗೆ

Posted by Vidyamaana on 2024-08-10 05:25:50 |

Share: | | | | |


77ನೇ ಸ್ವಾತಂತ್ರ್ಯೋತ್ಸವ ಆಚರಣೆಗಾಗಿ ಆಕರ್ಷಣ್ ಇಂಡಸ್ಟ್ರೀಸ್ ನೀಡಿದೆ ವಿಶೇಷ ಕೊಡುಗೆ

ಪುತ್ತೂರು: 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುತ್ತೂರಿನ ಪ್ರತಿಷ್ಠಿತ ಆಕರ್ಷಣ್ ಇಂಡಸ್ಟ್ರೀಸ್ ವಿಶೇಷ ಕೊಡುಗೆಗಳನ್ನು ಗ್ರಾಹಕರ ಕೈಗೆ ನೀಡುತ್ತಿದೆ. ಅದರಲ್ಲೂ, ಸೈನಿಕರಿಗಾಗಿ ಇನ್ನೂ ಹೆಚ್ಚಿನ ರಿಯಾಯಿತಿಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ.

ಈ ಎಲ್ಲಾ ಕೊಡುಗೆಗಳು ಆಗಸ್ಟ್ 10ರಿಂದ 14ರವರೆಗೆ ಅಂದರೆ ಕೇವಲ 5 ದಿನಗಳು ಮಾತ್ರ ಇರಲಿವೆ.

ಆಕರ್ಷಣ್ ರೆಡಿವಾಲ್:

ರೆಡಿವಾಲ್ – ರೆಡಿಮೇಡ್ ಕಂಪೌಂಡ್ ಗಳಿಗೆ ಇಗೀಗ ಹೆಚ್ಚಿನ ಬೇಡಿಕೆ ಕೇಳಿಬರುತ್ತಿದೆ. ಈ ಆಫರ್ ನಡಿ ನೀವು ಖರೀದಿ ಮಾಡಿದರೆ ರೆಡಿವಾಲ್ – ರೆಡಿಮೇಡ್ ಕಂಪೌಂಡ್ ಗಳನ್ನು ಉಚಿತವಾಗಿ ಅಳವಡಿಸಿಕೊಡಲಾಗುವುದು. ಇದರೊಂದಿಗೆ ಬೇಲಿಕಂಬ, ಪೆಪ್ಪರ್ ಪೋಲ್ (PEPPER POLE) ಅನ್ನು ಬುಕ್ ಮಾಡಿದಲ್ಲಿ, ಸಾಗಾಟದ ವೆಚ್ಚವನ್ನು ಉಚಿತವಾಗಿ ಪಡೆಯಬಹುದು.

ನಿಮ್ಮ ಮನೆಗೆ ಕೇವಲ ಎರಡೇ ದಿನದಲ್ಲಿ ಕಂಪೌಂಡ್ ನಿರ್ಮಿಸಲು ಸಾಧ್ಯ ಎನ್ನುವುದನ್ನು ಆಕರ್ಷಣ್ ರೆಡಿವಾಲ್ ನಿರೂಪಿಸಿದೆ. Prestressed Technologyಯಿಂದ ತಯಾರಿಸಿದ ಉತ್ಕೃಷ್ಟ ಗುಣಮಟ್ಟದ ಕಂಬಿಯನ್ನು ಉಪಯೋಗಿಸಿ ತಯಾರಿಸಿದ ರೆಡಿವಾಲ್ ರೆಡಿಮೇಡ್ ಕಂಪೌಂಡ್ ಬೇಡಿಕೆಯ ಉತ್ಪನ್ನವಾಗಿದೆ.

ಪೆಪ್ಪರ್ ಪೋಲ್ (Pepper Pole)


ಪುತ್ತೂರು ಮುಸ್ಲಿಂ ಸಮುದಾಯ ಒಕ್ಕೂಟದಿಂದ ಯು.ಟಿ.ಖಾದರ್ ಅಶೋಕ್ ರೆ ಗೆ ಸನ್ಮಾನ

Posted by Vidyamaana on 2023-06-25 05:56:15 |

Share: | | | | |


ಪುತ್ತೂರು ಮುಸ್ಲಿಂ ಸಮುದಾಯ ಒಕ್ಕೂಟದಿಂದ ಯು.ಟಿ.ಖಾದರ್  ಅಶೋಕ್ ರೆ ಗೆ ಸನ್ಮಾನ

ಪುತ್ತೂರು : ಯುವಕ ಸಮುದಾಯ ಸಮಾಜ ಕಟ್ಟುವವಲ್ಲಿ ನಿರತರಾಗಬೇಕೇ ಹೊರತು ಬಿಕ್ಕಟ್ಟು ಸೃಷ್ಠಿಸಬಾರದು. ಅದೇ ರೀತಿ ಸಮಸ್ಯೆಯನ್ನು ಬಗೆಹರಿಸಬೇಕು ಹೊರತು ಸಮಸ್ಯೆಯನ್ನು ಸೃಷ್ಠಿಸುವ ಕೆಲಸ ಮಾಡಬಾರದು ಎಂದು ನೂತನ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.


ಅವರು ಪುತ್ತೂರಿನ ಮುಸ್ಲಿಂ ಸಮುದಾಯ ಒಕ್ಕೂಟದ ವತಿಯಿಂದ ಶನಿವಾರ ಸಂಜೆ ಇಲ್ಲಿನ ಪುರಭವನದಲ್ಲಿ ನೂತನ ಸ್ಪೀಕರ್ ಯು.ಟಿ. ಖಾದರ್ ಮತ್ತು ಶಾಸಕ ಅಶೋಕ್ ಕುಮಾರ್ ರೆ‘ ಅವರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.


ಯುವ ಸಮುದಾಯ ಉತ್ತಮ ನಡೆಯೊಂದಿಗೆ ಮುಂದುವರಿದಲ್ಲಿ ಸಮಾಜ ನಿಮ್ಮ ಹಿಂದೆ ಬರುತ್ತದೆ. ಮುಂದಿನ ಪೀಳಿಗೆ ಸೌಹಾದಯುತ ಯೋಗ್ಯ ಬದುಕು ಕಲ್ಪಿಸುವ ಕೆಲಸ ಮಾಡದಿದ್ದಲ್ಲಿ ಸಮಾಜ ಎಂದಿಗೂ ನಮ್ಮನ್ನು ಕ್ಷಮಿಸಲಾರದು. ಮುಸ್ಲಿಂ ಸಮುದಾಯ ಒಕ್ಕೂಟವು ಕೇವಲ ಮುಸ್ಲಿಮರಿಗೆ ಮಾತ್ರವಲ್ಲದೆ ಎಲ್ಲರ ನೋವು ಅನ್ಯಾಯಗಳಿಗೂ ಸ್ಪಂದಿಸುವ ಕೆಲಸ ಮಾಡಬೇಕು. ದುಷ್ಟತನ ಮುಕ್ತ ಮತ್ತು ದ್ವೇಷ ಮುಕ್ತ ಸಮಾಜ ನಿರ್ಮಾಣಕ್ಕೆ ಈ ಸಂಘಟನೆ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದ ಅವರು, ಟೀಕೆ ಟಿಪ್ಪಣಿಗಳು ಸ್ವಾಭಾವಿಕ ಇದೊಂದು ಪ್ರಜಾಪ್ರಭುದ ಸೌಂದರ್ಯ. ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.


ಶಾಸಕ ಅಶೋಕ್ ಕುಮಾರ್ ರೆ‘ ಮಾತನಾಡಿ, ಹಿಂದೂ ಮತ್ತು ಮುಸ್ಲಿಮರ ನಡುವೆ ಅಗಾಭವಾಗಿದ್ದ ಪ್ರೀತಿ ಇದೀಗ ರಾಜಕೀಯ ಕಾರಣಕ್ಕಾಗಿ ದೂರವಾಗಿದೆ. ಯುವ ಸಮುದಾಯದಲಿ ವಿಷಬೀಜ ಬಿತ್ತಲಾಗುತ್ತಿದೆ. ಇದನ್ನು ತಡೆಯುವಲ್ಲಿ ಎಲ್ಲಾ ‘ಧರ್ಮಗುರುಗಳು ಪ್ರಯತ್ನ ನಡೆಸಬೇಕಾಗಿದೆ. ನಾನು ಸಹಾಯ ಮಾಡುತ್ತಿರುವ ಸಂದರ್ಭದಲ್ಲಿ ಎಂದೂ ಪಕ್ಷ, ಜಾತಿ, ಧರ್ಮಗಳನ್ನು ನೋಡಿಲ್ಲ. ಎಲ್ಲಾ ಬಡವರಿಗೂ ಕೈಲಾದ ಸಹಾಯ ಮಾಡಿದ್ದೇನೆ. ಮುಸ್ಲಿಂ ಧರ್ಮದವರು ಯಾರನ್ನೂ ವಿರೋಧಿಸುವವರಲ್ಲ. ಬದಲಿಗೆ ಎಲ್ಲರನ್ನೂ ಪ್ರೀತಿಸುವವರು ಅವರಿಗೆ ಅದೇ ಪ್ರೀತಿಯನ್ನು ಹಿಂದಿರುಗಿಸುವ ಕೆಲಸವಾದಲ್ಲಿ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. ನಾನು ಎಲ್ಲಾ ಜಾತಿ ಧರ್ಮಗಳನ್ನು ಒಟ್ಟಾಗಿ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆ ಎಂದರು.


ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮುನೀರ್, ಮುಸ್ಲಿಂ ಸಮುದಾಯಕ್ಕೆ ಓಲೈಕೆ ಬೇಕಾಗಿಲ್ಲ. ಆದರೆ ನಮ್ಮನ್ನು ಪರಿಗಣಿಸಿ, ತಪ್ಪು ಮಾಡಿದರೆ ಬೆಂಬಲ ನೀಡಬೇಕಾಗಿಲ್ಲ. ಆದರೆ ನಮ್ಮನ್ನು ಬೇರೆಯಾಗಿರಿಸುವ ಕೆಲಸ ಮಾಡಬೇಡಿ. ಈ ಜಿಲ್ಲೆಯಲ್ಲಿ ಎಲ್ಲವೂ ಸಿಗುತ್ತದೆ ಆದರೆ ಸಾಮಾಜಿಕ ಸಾಮರಸ್ಯದ ಕೊರತೆಯಿದೆ ಅದನ್ನು ಇಲ್ಲಿನ ಶಾಸಕರು ಬದಲಾಯಿಸುವ ಮೂಲಕ ನೀಗಿಸಬೇಕು ಎಂದರು.


ಯು.ಟಿ. ಖಾದರ್ ಕೇವಲ ಉಳ್ಳಾಲಕ್ಕೆ, ಅಥವಾ ಜಿಲ್ಲೆಗೆ ಸೀಮಿತರಲ್ಲ. ರಾಜ್ಯದಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಎಲ್ಲಾ ಸಮುದಾಯವನ್ನು ಒಪ್ಪಿಕೊಂಡವರು ಸಮುದಾಯದ ನಾಯಕರಾಗುತ್ತಾರೆ ಎಂಬುದಕ್ಕೆ ಯು.ಟಿ. ಖಾದರ್ ಸಾಕ್ಷಿಯಾಗಿದ್ದಾರೆ.


ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಸೆಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು.  ಕಾವು ಮಾಡನ್ನೂರು ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ್ ಎಡ್ವೊಕೇಟ್ ಹನೀಫ್ ಹುದವಿ, ಕಂಬಳಬೆಟ್ಟು ಜನಪ್ರಿಯ ಶಿಕ್ಷಣ ಸಂಸ್ಥೆಯ ಎಂಡಿ ಡಾ. ಬಿ.ಕೆ. ಅಬ್ದುಲ್ ಬಶೀರ್,ಮೊಹಮ್ಮದ್ ಬಡಗನ್ನೂರು, ಮಾಜಿ ಜಿ.ಪಂ ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿದರು. ವೇದಿಕೆಯಲ್ಲಿ ಹಲವಾರು ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ನೇತಾರರು ಉಪಸ್ಥಿತರಿದ್ದರು.


ಮಹಮ್ಮದ್ ಬಡಗನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. .ನಗರ ಸಭಾ ಸದಸ್ಯ ರಿಯಾಜ್ ಪರ್ಲಡ್ಕ, ನಗರ ಕಾಂಗ್ರೆಸ್‌ ಅಧ್ಯಕ್ಷ ಹೆಚ್.ಮಹಮ್ಮದ್‌ ಅಲಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಶಕೂ‌ರ್ ಹಾಜಿ,ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಎಲ್‌.ಟಿ ಅಬ್ದುಲ್ ರಝಾಕ್, ಅರಿಯಡ್ಕ ಅಬ್ದುಲ್‌ ರಹಿಮಾನ್ ಹಾಜಿ, ಶಕೂ‌ರ್ ಹಾಜಿ ಕಲ್ಲೆಗ, ಕಾಶೀಂ ಹಾಜಿ ಮಿತ್ತೂರು, ಅಝೀಜ್ ಬುಶ್ರಾ, ಜುನೈದ್ ಪಿ.ಕೆ., ಕೆ.ಪಿ.ಅಹಮದ್ ಹಾಜಿ ಆಕರ್ಷಣೆ, ನಗರಸಭಾ ಸದಸ್ಯ ಯೂಸೂಫ್, ಅಬ್ದುಲ್ ರಹಿಮಾನ್ ಹಾಜಿ ಹಾಗೂ ಎಲ್ಲಾ ಜಮಾಅತ್‌ನ ಅಧ್ಯಕ್ಷರು ಅತಿಥಿಗಳಾಗಿ ಆಗಮಿಸಿದ್ದರು.ಒಕ್ಕೂಟದ ಕಾರ್ಯಕ್ರಮ ನಿರ್ದೇಶಕ ಸಿನಾನ್ ಪರ್ಲಡ್ಕ, ಶರೀಫ್ ಬಲ್ನಾಡು, ಸಿದ್ದೀಕ್ ಸುಲ್ತಾನ್‌, ರಶೀದ್‌ ಪರ್ಲಡ್ಯ, ಸಾಹುಲ್ ಹಮೀದ್‌ ಕಂಬಳಬೆಟ್ಟು, ಅನ್ವರ್ ಕಬಕ, ಶರೀಫ್  ಆಶೀವ್  ಸಹಿತ ಕಾರ್ಯಕ್ರಮದ ಸಂಘಟಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಬಾತೀ‌ಶ್ ಅಳಕೆಮಜಲು ಸ್ವಾಗತಿಸಿದರು. ನೌಫಲ್ ಕುಡ್ತಮುಗೇರ್ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರು : ತುರ್ತು ಕಾಮಗಾರಿ ನಿಮಿತ್ತ ಇಂದು(ಜೂ 22)ವಿದ್ಯುತ್ ನಿಲುಗಡೆ!!!

Posted by Vidyamaana on 2023-06-21 23:17:59 |

Share: | | | | |


ಪುತ್ತೂರು : ತುರ್ತು ಕಾಮಗಾರಿ ನಿಮಿತ್ತ ಇಂದು(ಜೂ 22)ವಿದ್ಯುತ್ ನಿಲುಗಡೆ!!!

ಪುತ್ತೂರು: 110/33/11 ಕೆವಿ ವುತ್ತೂರು ವಿದ್ಯುತ್ ಉಪಕೇಂದ್ರದಲ್ಲಿ 110ಕೆಪಿ ಮತ್ತು 33ಕೆ.ಎ ಲೈನ್ ಬೇ, ಪರಿವರ್ತಕ ಮತ್ತು 11ಕೆವಿ ಫೀಡರುಗಳ ಪಾಲನಾ ಕಾರ್ಯ ಹಮ್ಮಿಕೊ೦ಡಿರುವುದರಿಂದ ಜೂ.22 (ಗುರುವಾರ) ಪೂರ್ವಾಹ್ನ 10ರಿಂದ ಸಾಯಂಕಾಲ 4 ಗಂಟೆಯವರೆಗೆ 33ಕೆ.ವಿ ಪುತ್ತೂರು-ಕಡಬ-ಸುಬ್ರಹ್ಮಣ, 33ಕೆಪಿ ಪುತ್ತೂರು-ಕುಂಬ-ಬೆಳ್ಳಾರೆ, 33ಕೆ.ಎ ಪುತ್ತೂರು-ಸುಳ್ಯ ಹಾಗೂ 33ಕೆ.ಎ ಪುತ್ತೂರು-ಸವಣೂರು-ನೆಲ್ಯಾಡಿ ವಿದ್ಯುತ್ ಮಾರ್ಗಗಳ ವಿದ್ಯುತ್‌ ನಿಲುಗಡೆ ಮಾಡಲಾಗುವುದು. ಆದ್ದರಿಂದ 110/33/11 ಕೆವಿ ಪುತ್ತೂರು ಹಾಗೂ 33/11ಕೆವಿ ಕಡಬ, ನೆಲ್ಯಾಡಿ, ಸವಣೂರು, ಬಿಂದು ಮತ್ತು ಕಂಪ್ಯೂ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ ಫೀಡರ್‌ಗಳಿಂದ ಎದ್ಯುತ್‌ ಸರಬರಾಜಾಗುವ ವಿದ್ಯುತ್‌ ಬಳಕೆದಾರರು ಗಮನಿಸಿ ಸಹಕರಿಸಬೇಕೆಂದು ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಡೀಪ್‌ ಫೇಕ್‌ ಕಂಟಕ ; ಭಾರತೀಯ ವ್ಯವಸ್ಥೆಯ ಅತ್ಯಂತ ದೊಡ್ಡ ಬೆದರಿಕೆ ಇದು ಬಹಳ ಜಾಗರೂಕರಾಗಿರಬೇಕು ಎಂದ ಪ್ರಧಾನಿ ಮೋದಿ

Posted by Vidyamaana on 2023-11-17 19:56:03 |

Share: | | | | |


ಡೀಪ್‌ ಫೇಕ್‌ ಕಂಟಕ ; ಭಾರತೀಯ  ವ್ಯವಸ್ಥೆಯ ಅತ್ಯಂತ ದೊಡ್ಡ ಬೆದರಿಕೆ ಇದು ಬಹಳ ಜಾಗರೂಕರಾಗಿರಬೇಕು ಎಂದ ಪ್ರಧಾನಿ ಮೋದಿ

ಹೊಸದಿಲ್ಲಿ, ನ.17: ಡೀಪ್‌ ಫೇಕ್‌ ಗಳು ಪ್ರಸ್ತುತ ಭಾರತೀಯ ವ್ಯವಸ್ಥೆಯು ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.


ಇದು ಸಮಾಜದಲ್ಲಿ ಅವ್ಯವಸ್ಥೆಯನ್ನು ಉಂಟುಮಾಡಬಹುದು. ಹೆಚ್ಚುತ್ತಿರುವ ಸಮಸ್ಯೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಬೇಕು ಎಂದು ಪ್ರಧಾನಿ ಮಾಧ್ಯಮಗಳಿಗೆ ಒತ್ತಾಯಿಸಿದರು.


ದೆಹಲಿಯ ಬಿಜೆಪಿಯ ಪ್ರಧಾನ ಕಛೇರಿಯಲ್ಲಿ ಬಿಜೆಪಿಯ ದೀಪಾವಳಿ ಮಿಲನ್ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಡೀಪ್‌ ಫೇಕ್‌ ಗಳಿಗಾಗಿ ಕೃತಕ ಬುದ್ಧಿಮತ್ತೆಯನ್ನು ದುರುಪಯೋಗಪಡಿಸಿಕೊಳ್ಳುವಾಗ ನಾಗರಿಕರು ಮತ್ತು ಮಾಧ್ಯಮಗಳು ಬಹಳ ಜಾಗರೂಕರಾಗಿರಬೇಕು ಎಂದು ಹೇಳಿದರು.


ಪ್ರಜಾಪ್ರಭುತ್ವದ ಸಮಗ್ರತೆಗೆ ಡೀಪ್‌ಫೇಕ್‌ಗಳು ಹೇಗೆ ಗಣನೀಯ ಸವಾಲುಗಳನ್ನು ಒಡ್ಡುತ್ತಿವೆ? ನಕಲಿ ಮತ್ತು ನೈಜ ಕ್ಲಿಪ್‌ಗಳ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟಕರವಾಗಿದೆ. ಇದು ಇತ್ತೀಚೆಗೆ ರಾಜಕಾರಣಿಗಳನ್ನೂ ಗುರಿ ಮಾಡಲಾಗುತ್ತಿದೆ, ಕೃತಕ ವಾಯ್ಸ್‌ಓವರ್‌, ನಕಲಿ ವೀಡಿಯೋ ಕ್ಲಿಪ್‌ಗಳನ್ನು ಬಳಸಿ ರಾಜಕಾರಣಿಗಳನ್ನ ಗುರಿಯಾಗಿಸಲಾಗುತ್ತಿದೆ. ಇಂತಹ ಎಲ್ಲ ಸಮಸ್ಯೆಗಳ ಬಗ್ಗೆ ಅರಿತುಕೊಂಡು ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಕಿವಿಮಾತು ಹೇಳಿದ್ದಾರೆ.


ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗರ್ಬಾ ನೃತ್ಯ ಮಾಡುತ್ತಿರುವ ಡೀಪ್‌ ಫೇಕ್‌ ವಿಡಿಯೋ ಉಲ್ಲೇಖಿಸಿ ಮಾತನಾಡಿದ್ದು, ತಾನು ಚಿಕ್ಕಂದಿನಿಂದಲೂ ಗರ್ಬಾ ನೃತ್ಯ ಮಾಡಿಲ್ಲ ಎಂದು ಹೇಳಿದ್ದಾರೆ.


ವೈರಲ್‌ ವೀಡಿಯೋದಲ್ಲಿ ಪ್ರಧಾನಿಯನ್ನೇ ಹೋಲುವ ವ್ಯಕ್ತಿಯೊಬ್ಬರು ಕೆಲ ಮಹಿಳೆಯರೊಂದಿಗೆ ನೃತ್ಯ ಮಾಡುವುದು ಕಂಡುಬಂದಿತ್ತು. ಆದ್ರೆ ಮಾಧ್ಯಮ ಸಂಸ್ಥೆಯೊಂದು ಅದನ್ನು ಫ್ಯಾಕ್ಟ್‌ಚೆಕ್‌ಗೆ ಒಳಪಡಿಸಿದಾಗ ವೀಡಿಯೋದಲ್ಲಿದ್ದ ವ್ಯಕ್ತಿ ಪ್ರಧಾನಿಯಲ್ಲ, ವಿಕಾಸ್‌ ಮಹಂತೆ ಎನ್ನುವ ನಟ‌ ಎಂದು ತಿಳಿದುಬಂದಿತ್ತು.


ಇತ್ತೀಚೆಗೆ ಡೀಪ್‌ ಫೇಕ್‌ ವೀಡಿಯೋಗಳು ಹೆಚ್ಚಾಗುತ್ತಿದ್ದು, ಸಹಜವಾಗಿಯೇ ನಟಿಯರಿಗೆ ಆತಂಕ ಹೆಚ್ಚಿಸಿದೆ. ಇಂತಹ ವಿಡಿಯೋಗಳನ್ನು ಮಾಡುವವರ ವಿರುದ್ಧ ಆದಷ್ಟು ಬೇಗ ಕಠಿಣ ಕ್ರಮಕ್ಕೆ ಮುಂದಾಗಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನಟಿ ರಶ್ಮಿಕಾ ಮಂದಣ್ಣ ಅವರ ಬಳಿಕ ಕಾಜೋಲ್, ಕತ್ರಿನಾ ಕೈಫ್‌ ಅವರ ಡೀಪ್‌ಫೇಕ್ ವೀಡಿಯೋಗಳೂ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ

27 ನೇ ವಾರ್ಷಿಕೋತ್ಸವದಲ್ಲಿ ಚೇತನಾ ಹಾಸ್ಟಿಟಲ್ – ಎನ್ ಎ ಬಿ ಹೆಚ್ ಪ್ರಮಾಣ ಪತ್ರ ಹಸ್ತಾಂತರ ಕಾರ್ಯಕ್ರಮ ಆಸ್ಪತ್ರೆಗೆ ಸಹಕರಿಸಿದವರಿಗೆ, ಸಿಬ್ಬಂದಿಗಳಿಗೆ ಗೌರವ – ಸಿಬ್ಬಂದಿಗಳಿಂದ ವೈದ್ಯರಿಗೆ ಸನ್ಮಾನ.

Posted by Vidyamaana on 2023-01-28 13:01:38 |

Share: | | | | |


27 ನೇ ವಾರ್ಷಿಕೋತ್ಸವದಲ್ಲಿ ಚೇತನಾ ಹಾಸ್ಟಿಟಲ್ – ಎನ್ ಎ ಬಿ ಹೆಚ್ ಪ್ರಮಾಣ ಪತ್ರ ಹಸ್ತಾಂತರ ಕಾರ್ಯಕ್ರಮ  ಆಸ್ಪತ್ರೆಗೆ ಸಹಕರಿಸಿದವರಿಗೆ, ಸಿಬ್ಬಂದಿಗಳಿಗೆ ಗೌರವ – ಸಿಬ್ಬಂದಿಗಳಿಂದ ವೈದ್ಯರಿಗೆ ಸನ್ಮಾನ.

ಪುತ್ತೂರು: 27 ವರ್ಷಗಳ ಹಿಂದೆಯೇ ಪುತ್ತೂರಿನಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ಸ್ಥಾಪಿಸಿದ ಸಹಿತ ಹಲವು ಪ್ರಥಮಗಳಿಗೆ ಕಾರಣವಾಗಿರುವ ಪುತ್ತೂರಿನ ಚೇತನಾ ಆಸ್ಪತ್ರೆಯು 27 ನೇ ವರ್ಷದ ಸಂಭ್ರಮದಲ್ಲಿ ಆಸ್ಪತ್ರೆಯ ಆರೋಗ್ಯ ಸೇವೆಗಳನ್ನು ಗಮನಿಸಿಕೊಂಡು ನೀಡುವ ‘ಎನ್.ಎ.ಬಿ.ಎಚ್’ ಪ್ರಮಾಣಪತ್ರಕ್ಕೆ ಹಸ್ತಾಂತರ ಕಾರ್ಯಕ್ರಮ ಜ.26 ರಂದು ಸಂಜೆ ಆಸ್ಪತ್ರೆಯ ವಠಾರದಲ್ಲಿ ನಡೆಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಎನ್.ಎ.ಬಿ.ಎಚ್ ಪ್ರಮಾಣ ಪತ್ರವನ್ನು ಆಸ್ಪತ್ರೆಯ ಆಡಳಿತ ಪಾಲುದಾರ ವೈದ್ಯರಾದ ಡಾ. ಜೆ.ಸಿ.ಅಡಿಗ ಮತ್ತು ಡಾ. ಶ್ರೀಕಾಂತ್ ರಾವ್ ಅವರಿಗೆ ಹಸ್ತಾಂತರಿಸಿದರು.



ಎನ್‌ಎಬಿಹೆಚ್ ರೋಗಿಗೆ ಗುಣಮಟ್ಟ, ಸುರಕ್ಷತೆಯನ್ನು ಕೊಡುತ್ತದೆ:

ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ಕುಮಾರ್ ರೈ ಅವರು ಮಾತನಾಡಿ ಎನ್.ಎ.ಬಿ.ಹೆಚ್ ಪಡೆಯಲು ಒಂದಷ್ಟು ಮಾರ್ಗಸೂಚಿ ಇದೆ. ಆದರೆ ಇದು ರೋಗಿಗೆ ಗುಣಮಟ್ಟ ಮತ್ತು ಸುರಕ್ಷತೆಯನ್ನ ಕೊಡುವಲ್ಲಿ ಸಹಕಾರಿಯಾಗಲಿದೆ. ಇದರ ಜೊತೆಗೆ ಆಸ್ಪತ್ರೆಯ ಸಿಬ್ಬಂದಿಗಳಿಗೂ ಪ್ರಯೋಜನವಿದೆ. ಯಾಕೆಂದರೆ ಕಾಲಕ್ಕೆ ತಕ್ಕಂತೆ ವೈದ್ಯಕೀಯ ಕ್ಷೇತ್ರದಲ್ಲಿ ಅಪ್‌ಗ್ರೇಡ್ ಆಗುತ್ತಿರಬೇಕು. ಗುಣಮಟ್ಟದ ಸೇವೆ ಇಂಟರ್ ನ್ಯಾಷನಲ್ ಮಾದರಿಯಲ್ಲಿ ಇರಬೇಕಾಗುವುದು ಮುಖ್ಯ ಎಂದರು. ಪ್ರಸ್ತುತ ದಿನದಲ್ಲಿ ಇದು ಕೇವಲ ಖಾಸಗಿ ಆಸ್ಪತ್ರೆ ಮಾತ್ರವಲ್ಲ ಸರಕಾರಿ ಆಸ್ಪತ್ರೆಯಲ್ಲೂ ಕಾಯಕಲ್ಪ ಕಾರ್ಯಕ್ರಮ ಅಳವಡಿಸಲಾಗಿದೆ. ಇವತ್ತು ನಮಗೆ ಎನ್‌ಎಬಿಹೆಚ್ ಪ್ರಮಾಣ ಪತ್ರ ಸಿಕ್ಕಿದೆ ಎಂದು ಸುಮ್ಮನೆ ಇರಬಾರದು. ಇದನ್ನು ಮೈಂಟೆನೆನ್ಸ್ ಮಾಡಿಕೊಂಡು ಹೋಗಬೇಕು ಎಂದ ಅವರು ಆಸ್ಪತ್ರೆ ಮತ್ತು ವೈದ್ಯರು ಪ್ರೀತಿಯಿಂದ ಚಿಕಿತ್ಸೆ ನೀಡಬೇಕು. ಉದ್ದೇಶ ಇಟ್ಟುಕೊಂಡು ಕರ್ತವ್ಯ ಮಾಡಬಾರದು ಎಂದರು. ಸರಕಾರಿ ಆಸ್ಪತ್ರೆಯ ಕಾರ್ಯಕ್ರಮದಲ್ಲೂ ಖಾಸಗಿ ವೈದ್ಯರು ಸಹಕರಿಸುವಂತೆ ವಿನಂತಿಸಿದ ಅವರು ಈಗಾಗಲೇ ಸರಕಾರಿ ವ್ಯವಸ್ಥೆಯ ಅಡಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ. ಜೆ.ಸಿ. ಅಡಿಗ ಮತ್ತು ಡಾ. ಶ್ರೀಕಾಂತ್ ಅವರು ಕರೆದಾಗ ಬಂದು ಉತ್ತಮ ಮಾಹಿತಿ ನೀಡುತ್ತಾರೆ. ಇವತ್ತಿನ ದಿನದಲ್ಲಿ ಸರಕಾರಿ ಆಸ್ಪತ್ರೆಯು ಬಹಳ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸ್ವಂತ ಆಕ್ಸಿಜನ್ ಉತ್ಪಾದನೆ ಘಟಕವಿದೆ. ಐಸಿಯು ಇದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರು ನಮ್ಮ ಸರಕಾರಿ ಆಸ್ಪತ್ರೆಯ ಜೊತೆ ಕೈ ಜೋಡಿಸುವಂತೆ ವಿನಂತಿಸಿದರು.

ಚೇತನ ಆಸ್ಪತ್ರೆಯ ಸಾಧನೆಯ ಸರಮಾಲೆಯಲ್ಲಿ ಇನ್ನೊಂದು ಹೂವು ಸೇರಿದೆ:

ಸ್ವರ್ಣೋದ್ಯಮಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್‌ನ ಮಾಲಕ ಬಲರಾಮ ಆಚಾರ್ಯ ಅವರು ಮಾತನಾಡಿ ಚಿಕ್ಕ ಬ್ಲಡ್ ಬ್ಯಾಂಕ್‌ನ್ನು ಮಾಡಬೇಕಾದರೆ ಅದರ ಅನುಷ್ಠಾನಕ್ಕೆ ಎಷ್ಟು ಕಷ್ಟ ಇದೆ ಎಂದು ನಾನು ಸ್ವತಃ ಕಂಡು ಕೊಂಡಿದ್ದೆನೆ. ಹಾಗಿರುವಾಗ ಒಂದು ಆಸ್ಪತ್ರೆಯ ಎಲ್ಲಾ ವಿಭಾಗಗಳನ್ನು ನೋಡಿ ಪ್ರಮಾಣ ಪತ್ರ ಕೊಡಬೇಕಾದರೆ ಅಷ್ಟು ಸುಲಭದ ಮಾತಲ್ಲ. ಅದನ್ನು ಸಾಧಿಸಿದ ಚೇತನ ಆಸ್ಪತ್ರಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು. ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಗಳಿಸಿದ ಹಾಗೆ ರೋಗಿಗಳ ಪೈಕಿ ಓರ್ವ ರೋಗಿಗೆ ತೊಂದರೆ ಆದರೆ ಅದು ಕೂಡಾ ವೈದ್ಯರ ತಪ್ಪು ಆಗದೇ ಇದ್ದರೂ ಅಲ್ಲಿ ರೋಗಿಯ ಸಂಬಂಧಿಕರ ಪ್ರಶ್ನೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಇದೆ. ಆದರೆ 27 ವರ್ಷದಲ್ಲಿ ಚೇತನಾ ಆಸ್ಪತ್ರೆ ತನ್ನ ಜನಪ್ರಿಯತೆಯನ್ನು ಹೆಚ್ಚು ಹೆಚ್ಚು ಮಾಡಿಕೊಂಡು ಹೋಗಿದೆ. ಅದು ಇದರ ದೊಡ್ಡ ಸಾಧನೆ. ಈ ಸಾಧನೆಯ ಸರಮಾಲೆಯಲ್ಲಿ ಎನ್‌ಎಬಿಎಹೆಚ್ ಪ್ರಮಾಣ ಲಭಿಸಿರುವುದು ಇನ್ನೊಂದು ಹೂವು ಸೇರಿದಂತಾಗಿದೆ ಎಂದರು. ಆರೋಗ್ಯ ವಿಮೆಯ ಮೂಲಕವೇ ಇವತ್ತಿನ ಆರೋಗ್ಯ ಸುಧಾರಿಕೆ ಆಗುತ್ತಿದೆ. ಇಂತಹ ಸೌಲಭ್ಯ ಪಡೆಯಲು ಆಸ್ಪತ್ರೆಗಳು ಎನ್‌ಎಬಿಹೆಚ್ ಪ್ರಮಾಣ ಪತ್ರ ಪಡೆಯುವುದು ಬಹಳ ಮುಖ್ಯ ಎಂದರು.ಡಾ.ಜೆ.ಸಿ ಅಡಿಗ, ಡಾ. ಶ್ರೀಕಾಂತ್ ಕುಟುಂಬದ ವೈದ್ಯರಂತೆ:

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರು ಮಾತನಾಡಿ ಇವತ್ತು ಡಾ.ಜೆ.ಸಿ.ಅಡಿಗ ಮತ್ತು ಡಾ. ಶ್ರೀಕಾಂತ್ ರಾವ್ ಅವರ ಹೆಸರು ದ.ಕ.ಜಿಲ್ಲೆಯಲ್ಲಿ ಪ್ರಚಲಿತದಲ್ಲಿದೆ. ಯಾಕೆಂದರೆ ಅವರ ವೈದ್ಯಕೀಯ ಸೇವೆ ಮತ್ತು ನಿಲುವು ಇವತ್ತಿಗೂ ಅವರ ಜೊತೆ ಇದೆ. ಒಬ್ಬ ವ್ಯಕ್ತಿಯಾಗಿ, ವೈದ್ಯರಾಗಿ, ಆಸ್ಪತ್ರೆಯಲ್ಲಿ ಜನರ ಮನಸ್ಸಿನಲ್ಲಿರುವುದು ಕಷ್ಟ. ಆದರೆ ಡಾ. ಅಡಿಗ ಮತ್ತು ಡಾ.ಶ್ರೀಕಾಂತ್ ಅವರು ಅದನ್ನು ಸಾಧಿಸಿದ್ದಾರೆ ಎಂದರು. ಸುಳ್ಯದಲ್ಲಿ ನಾನು ವೈದ್ಯನಾಗಿದ್ದ ಸಂದರ್ಭದಲ್ಲಿ ಅವರನ್ನು ನಮ್ಮ ಆಸ್ಪತ್ರೆಗೆ ಬರಮಾಡಿಕೊಂಡೆ. ಆಗ ಅವರ ಹೆಸರಿನಲ್ಲಿ ನಮ್ಮ ಆಸ್ಪತ್ರೆಗೆ ರೋಗಿಗಳು ಬರಲು ಆರಂಭಿಸಿದ್ದರು. ಹಾಗೆ ಮುಂದೆ ಡಾ.ಶ್ರೀಕಾಂತ್ ಅವರು ಕೂಡಾ ಜೊತೆಗೆ ಸೇರಿದರು. ಇವರಿಬ್ಬರು ಕೂಡಾ ಪುತ್ತೂರು, ಸುಳ್ಯ, ಈಶ್ವರಮಂಗಲ, ವಿಟ್ಲ ಪರಿಸರದಲ್ಲಿ ಸೇವೆಯ ಮೂಲಕ ಜನರನ್ನು ತಲುಪುವ ಕೆಲಸ ಮಾಡಿದರು. ಅದೇಷ್ಟೋ ಮಂದಿ ಚಿಕಿತ್ಸೆಗೆ ಮಂಗಳೂರಿಗೆ ಹೋಗುತ್ತಿದ್ದವರು ತಜ್ಞ ವೈದ್ಯರಾದ ಡಾ. ಅಡಿಗ ಮತ್ತು ಶ್ರೀಕಾಂತ್ ಅವರು ಪುತ್ತೂರಿನಲ್ಲೇ ಇದ್ದಾರೆಂದು ತಿಳಿದ ಬಳಿಕ ಮಂಗಳೂರಿಗೆ ಹೋಗುವುದನ್ನು ನಿಲ್ಲಿಸಿದರು. ಇವರು ರೋಗಿಯ ಖಾಯಿಲೆಯ ಜೊತೆ ಯಾರು ಎಂಬುದನ್ನು ಗುರುತಿಸುತ್ತಿದ್ದರು. ಅದು ಬಹಳ ದೊಡ್ಡ ಸಾಧನೆ. ಇದು ವೈದ್ಯರ ದುಡ್ಡಿನ ಚಿಕಿತ್ಸೆಯಲ್ಲ. ಬದಲಾಗಿ ಮಾನವೀಯತೆ ಮತ್ತು ಸಂಬಂಧಗಳು. ಇದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಡಾ. ಜೆ.ಸಿ ಅಡಿಗರು ಮತ್ತು ಡಾ. ಶ್ರೀಕಾಂತರು ಒಬ್ಬ ಕುಟುಂಬದ ವೈದ್ಯರಂತೆ. ಯಾಕೆಂದರೆ ಅವರಿಗೆ ಕುಟುಂಬ ರೋಗಿಯೊಂದಿಗೆ ಭಾವನಾತ್ಮಕ ಸಂಬಂಧವಿದೆ.

ವೈದ್ಯಕೀಯ ವೃತ್ತಿಯಲ್ಲಿ ಚಾಲಕೀತನ ಅದು ಬೇರೆಯೇ ಆಗಿರುತ್ತದೆ. ಆದರೆ ಆತ್ಮೀಯತೆ, ನಂಬಿಕೆ ವಿಶ್ವಾಸ ಇದು ಅಡಿಗರು ಮತ್ತು ಶ್ರೀಕಾಂತರಲ್ಲಿದೆ ಎಂದ ಅವರು ಇದು ಆಸ್ಪತ್ರೆಗೂ ಏನೋ ತೊಂದರೆ ಆದಾಗಲೂ ಜನರು ವೈದ್ಯರನ್ನು ಒಳ್ಳೆಯವರೆಂದೇ ಗುರುತಿಸುತ್ತಾರೆ. ಇದು ಸಂಬಂಧವನ್ನು ವೃದ್ಧಿಸುತ್ತದೆ ಎಂದರು.


ಚೇತನಾ ಆಸ್ಪತ್ರೆಯಿಂದ ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆ:

ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೋನ್ ಕುಟ್ಹೀನಾ ಅವರು ಮಾತನಾಡಿ ಆರೋಗ್ಯಕ್ಕೆ ಸಂಬಂಧಿಸಿ ದೂರಾಲೋಚನೆಯೊಂದಿಗೆ ಡಾ. ಜೆ.ಸಿ ಅಡಿಗ, ಡಾ. ಶ್ರೀಕಾಂತ್ ಅವರು ಆರಂಭಿಸಿದ ಆಸ್ಪತ್ರೆಯಿಂದ ಇವತ್ತು ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆ. ಹೆಸರು ಮಾಡಲು ಸುಲಭವಿಲ್ಲ. ಆಸ್ಪತ್ರೆ ಮಾಡಿದ ಮೇಲೆ ಅಲ್ಲಿ ರೋಗಿಗೆ ಸಿಗುವ ಚಿಕಿತ್ಸಾ ಸೌಲಭ್ಯ ಉತ್ತಮವಾಗಿರಬೇಕು. ಇದನ್ನು ಇತರರಿಗೆ ನಾವು ಹೇಳಬೇಕು. ಆದರೆ ಅಲ್ಲಿ ಏನಾದರು ಸ್ವಲ್ಪ ಹೆಚ್ಚು ಕಡಿಮೆ ಆದರೆ ಹೇಳಬಾರದು. ಅದನ್ನು ಪರಾಂಬಿರಿಸಿ ನೋಡಬೇಕು. ಆಗ ನಾವು ಉತ್ತಮ ಕೆಲಸ ಮಾಡಿದಂತೆ. ಈ ಇಬ್ಬರು ಯುವಕರು 25 ವರ್ಷ ಹಿಂದೆ ನಿರ್ಮಾಣ ಮಾಡಿದ ಆಸ್ಪತ್ರೆ ಜನಮೆಚ್ಚುಗೆ ಪಡೆದಿದೆ. ಇವತ್ತು ಪುತ್ತೂರಿನ ಮಟ್ಟಿಗೆ ವೈದ್ಯರು ಉತ್ತಮ ಸೇವೆ ಕೊಡುವಂತಹವರಾಗಿದ್ದಾರೆ ಎಂದ ಅವರು ವೈದ್ಯರ ಕುರಿತು ಕವನ ಹಾಡಿದರು.

ವೈದ್ಯಕೀಯದಲ್ಲಿ ಸಂಕಟ ಬಂದಾಗ ನಾವೆಲ್ಲ ಒಂದಾಗಿದ್ದೇವೆ :

ಆದರ್ಶ ಆಸ್ಪತ್ರೆಯ ಡಾ. ಎಂ.ಕೆ.ಪ್ರಸಾದ್ ಅವರು ಮಾತನಾಡಿ ಅಡಿಗರು, ಶ್ರೀಕಾಂತದ್ವಯರು ಮೋಸ್ಟ್ ಇಂಟಲಿಜಂಟ್ ಮ್ಯಾನ್, ಮೋಸ್ಟ್ ಎನ್‌ಸೈಕ್ಲೋಪಿಡಿಯಾ. ನಮಗೇನಾದರೂ ಸಂಶಯ ಬಂದಾಗ ನಾವು ಕೇಳುವುದು ಅಡಿಗರನ್ನೇ ಎಂದ ಅವರು ಇಬ್ಬರು ವೈದ್ಯರು ಊರಿಗೆ ಒಳ್ಳೆಯ ಸೇವೆ ಮಾಡಿದ್ದಾರೆ. ಇವತ್ತು ಅನೇಕ ಸಂದರ್ಭದಲ್ಲಿ ನಮಗೆಲ್ಲರಿಗೂ ತೊಂದರೆ ಆಗಿದೆ. ವೈದ್ಯರಿಗೂ ಆಪತ್ತು ಬರುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯಕೀಯದಲ್ಲಿ ಸಂಕಟ ಬಂದಾಗ ನಾವೆಲ್ಲ ಒಂದಾಗಿದ್ದೇವೆ ಎಂದರು.

ಚೇತನ ಆಸ್ಪತ್ರೆ ನನ್ನ ತವರು:

ಡಾ.ಪೂರ್ಣಾ ಸಿ ರಾವ್ ಅವರು ಮಾತನಾಡಿ ಹಿಂದೆ ಯಾವ ಕೇಸು ತೆಗೆಯುವಾಗ ಭಯವಿರಲಿಲ್ಲ. ರೋಗಿಯನ್ನು ಬದುಕಿಸುವ ಚಿಂತನೆ ನಮ್ಮ ಮುಂದಿತ್ತು. ಇವತ್ತು ನಾವು ಕೇಸು ತೆಗೆದು ಕೊಳ್ಳುವ ಮುಂಚೆ ಇದರಿಂದ ನಮಗೆನಾದರೂ ಪೆಟ್ಟು ಬೀಳುತ್ತದೆಯೋ ಎಂದು ಚಿಂತನೆ ಮಾಡುವ ಪರಿಸ್ಥಿತಿ ವೈದ್ಯ ಸಮೂಹದ ಮುಂದಿರುವ ಪ್ರಶ್ನೆಯಾಗಿದೆ. ಆದ್ದರಿಂದ ಇಂತಹ ಪರಿಸ್ಥಿತಿಗೆ ಗಟ್ಟಿಯಾದ ಕಾನೂನು ಬೇಕು ಎಂದರು. ಇವತ್ತು ಮಂಗಳೂರಿಗೆ ಗೈನಕಾಲೋಜಿಸ್ಟ್‌ಗೆ ಕಂಪೇರ್ ಮಾಡಿದರೆ ನಾವು ಆರ್ಥಿಕವಾಗಿ ಹಿಂದುಳಿದ್ದಿದ್ದರೂ ಆದರೆ ರೋಗಿಯ ಪ್ರೀತಿಯಲ್ಲಿ ನಾವು ತುಂಬಾ ಎತ್ತರದಲ್ಲಿದ್ದೇವೆ. ಹಾಗಾಗಿ ಪುತ್ತೂರಿನ ಜನತೆಗೆ ನನ್ನ ಹೃತ್ಪೂರ್ವಕ ವಂದನೆ ಎಂದ ಅವರು ನಾನು ಈಗ ಪೂರ್ಣಚಂದ್ರ ಕ್ಲೀನಿಕ್ ಮಾಡಿದ್ದರೂ ನನ್ನ ತವರು ಚೇತನ ಆಸ್ಪತ್ರೆಯೇ ಆಗಿದೆ ಎಂದರು.


ಎಷ್ಟೆ ರಾತ್ರಿಯಾದರೂ ತುರ್ತು ಸಂದರ್ಭದಲ್ಲಿ ಸೇವೆ ನೀಡಿದವರು:

ಡಾ. ಶ್ರೀಕುಮಾರ್ ಅವರು ಮಾತನಾಡಿ ಹಣ ಮಾಡಲು ಚಿಕಿತ್ಸೆ ಮಾಡಬೇಡಿ, ಗುಣ ಮಾಡಲು ಚಿಕಿತ್ಸೆ ಮಾಡಿ, ಆಗ ಹಣ ತನ್ನಿಂದ ತಾನೆ ಬರುತ್ತದೆ ಈ ಮಾತು ಬಹಳ ಸತ್ಯದ ಮಾತು. ಇದಕ್ಕೆ ಪೂರಕವಾಗಿ ಡಾ. ಜೆ.ಸಿ.ಅಡಿಗ ಮತ್ತು ಡಾ. ಶ್ರೀಕಾಂತ್ ಅವರು ಉತ್ತಮ ಸೇವೆ ಮಾಡಿದ್ದಾರೆ. ಎಷ್ಟೇ ರಾತ್ರಿಯಾದರೂ ತಕ್ಷಣ ತುರ್ತು ಸಂದರ್ಭದಲ್ಲಿ ಬಂದು ರೋಗಿಯನ್ನು ಗುಣಪಡಿಸಿದ್ದಾರೆ ಎಂದರು.

ಚೇತನಾ ಅಸ್ಪತ್ರೆಯಲ್ಲಿ ಲಭ್ಯವಿರುವ ವಿಶೇಷ ಸೇವೆಗಳು:

24 ಗಂಟೆ ಕಾರ್ಯಾಚರಿಸುವ ವೈದ್ಯಕೀಯ ಸೇವೆಗಳಲ್ಲಿ ಮುಖ್ಯವಾದವುಗಳೆಂದರೆ, ಥೈರೋಕೇರ್ ಡಯಾಗ್ನಾಸ್ಟಿಕ್ನ ಸಹಯೋಗದೊಂದಿಗೆ ಕಂಪ್ಯೂಟರಿಕೃತ ಲ್ಯಾಬೊರೇಟರಿ, ಎಕ್ಸ್-ರೇ 300 ಎಂ.ಎ., ಎಕ್ಸ್-ರೇ ಯುನಿಟ್ ಮತ್ತು ಸಿ ಆರ್ಮ್ ಡಿಜಿಟಲ್ ಎಕ್ಸ್-ರೇ, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮತ್ತು ಕಲರ್ ಡಾಪ್ಲರ್, ಡಾಪ್ಲರ್ ಸ್ಕ್ಯಾನ್, ಫಾರ್ಮಸಿ ವಿಭಾಗ, ಅನುಭವಿ ತಜ್ಞ ವೈದ್ಯೆಯರ ಲಭ್ಯತೆಯೊಂದಿಗೆ ಸುಸಜ್ಜಿತ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗ, ಇಂಕ್ಯುಬೇಟರ್, ಫೊಟೋಥೆರಪಿ ಮತ್ತು ವೆಂಟಿಲೇಟರ್ ಸೌಲಭ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ತೀವ್ರ ನಿಗಾ ವಿಭಾಗ, ಹೃದಯ ಸ್ಕ್ಯಾನಿಂಗ್ಗೆ ಇಕೋಕಾರ್ಡಿಯಗ್ರಾಫಿ, ಅಸ್ತಮಾ ಚಿಕಿತ್ಸೆಗೆ ಸ್ಪೇರೋಮೀಟರ್, ವಿಡಿಯೋ ಎಂಡೋಸ್ಕೋಪಿ, ಕೋಲೊನೋಸ್ಕೋಪಿ, ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ, ಮೂತ್ರ ಜನಕಾಂಗದ ಶಸ್ತ್ರಚಿಕಿತ್ಸೆಗಾಗಿ ಕ್ರಯೋಸರ್ಜರಿ, ಫೇಕೋ ಶಸ್ತ್ರಚಿಕಿತ್ಸೆ ಸೌಲಭ್ಯದೊಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ಇವೆಲ್ಲದರ ಜೊತೆಯಲ್ಲಿ ೨೪ ಗಂಟೆ ಕಾರ್ಯನಿರ್ವಹಿಸುವ ಆಂಬುಲೆನ್ಸ್ ಸೇವೆ ಹಾಗೂ ಇಲೆಕ್ಟ್ರೋಕನ್ವಲ್ಸಿವ್ ಥೆರಪಿ ಸೌಲಭ್ಯವೂ ಇಲ್ಲಿದೆ. ಇನ್ನು ಮಲ್ಟಿಪ್ಯಾರಾ ಮಾನಿಟರ್ ಸೌಲಭ್ಯದೊಂದಿಗೆ ಹವಾನಿಯಂತ್ರಿತ ಶಸ್ತ್ರಚಿಕಿತ್ಸಾ ಕೊಠಡಿ.. ಹೀಗೆ ನಗರದ ಪ್ರಮುಖ ಭಾಗದಲ್ಲಿ ಸ್ಥಾಪನೆಗೊಂಡಿರುವ ಚೇತನಾ, ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳು, ನುರಿತ ತಜ್ಞವೈದ್ಯರು, ರೋಗಿಗಳಿಗೆ ಆಪ್ತಪಾಲನೆಯನ್ನು ಒದಗಿಸುವ ಸಿಬ್ಬಂದಿವರ್ಗ, ಇವರೆಲ್ಲರ ಒಗ್ಗಟ್ಟಿನ ಶ್ರಮದ ಫಲವಾಗಿ ‘ಚೇತನಾ’ 25 ಸಂವತ್ಸರಗಳ ಬಳಿಕವೂ ರೋಗಿಗಳ ಪಾಲಿಗೆ ಆಪ್ತಚೇತನಾಗಿ, ಆರೋಗ್ಯ ಚೇತರಿಕೆಯ ಹೆಗ್ಗುರುತಾಗಿ ಇಲ್ಲಿನವರ ಮನದಲ್ಲಿ ನೆಲೆಯಾಗಿದೆ ಎಂದು ಚೇತನಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಅನೈತಿಕ ಸಂಬಂಧಕ್ಕೆ ಅಡ್ಡಿ : ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ

Posted by Vidyamaana on 2024-06-23 06:09:17 |

Share: | | | | |


ಅನೈತಿಕ ಸಂಬಂಧಕ್ಕೆ ಅಡ್ಡಿ : ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ

ಚಿಕ್ಕಮಗಳೂರು : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣವೊಂದನ್ನು ಬೇಧಿಸಿರುವ ಜಿಲ್ಲೆಯ ಸಖರಾಯಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಹತ್ಯೆಯಾದ ವ್ಯಕ್ತಿಯ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪತ್ನಿ ಹಾಗೂ ಆಕೆಯ ಪ್ರಿಯಕರನಿಂದಲೇ ಹತ್ಯೆಯಾದ ಪತಿಯನ್ನು ದೊಡ್ಡಬೀರನಹಳ್ಳಿ ಗ್ರಾಮದ ಜಯಣ್ಣ(40) ಎಂದು ಗುರುತಿಸಲಾಗಿದೆ. ಜಯಣ್ಣ ಅವರ ಪತ್ನಿ ಶೃತಿ ಹಾಗೂ ಆಕೆಯ ಪ್ರಿಯಕರ ಕಿರಣ್‍ಕುಮಾರ್ ಹತ್ಯೆ ಆರೋಪಿಗಳಾಗಿದ್ದಾರೆ.


ದೊಡ್ಡಬೀರನಹಳ್ಳಿ ಗ್ರಾಮದ ಜಯಣ್ಣ ಎಂಬವರು ಶೃತಿ ಎಂಬವರನ್ನು ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಆರಂಭದಲ್ಲಿ ದಂಪತಿ ಸಂಸಾರ ಚೆನ್ನಾಗಿಯೇ ಇತ್ತು. ಕೆಲ ವರ್ಷಗಳ ಬಳಿಕ ಶೃತಿ ತನ್ನ ಸಂಬಂಧಿಯೊಂದಿಗೆ ಸಲುಗೆಯಿಂದಿದ್ದು, ಈ ಸಲುಗೆ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಪತ್ನಿ ಹಾಗೂ ಆಕೆಯ ಸಂಬಂಧಿ ನಡುವಿನ ಅನೈತಿಕ ಸಂಬಂಧ ಪತಿ ಜಯಣ್ಣನ ಗಮನಕ್ಕೆ ಬಂದಿದ್ದು, ಇದರಿಂದ ಕುಪಿತನಾದ ಆತ ಇಬ್ಬರೊಂದಿಗೆ ಜಗಳವಾಡಿದ್ದ ಎನ್ನಲಾಗಿದೆ. ಈ ವಿಚಾರ ಸಂಬಂಧ ಜಯಣ್ಣ ಹಾಗೂ ಆಕೆಯ ಪತ್ನಿಯೊಂದಿಗೆ ಆಗಾಗ್ಗೆ ಜಗಳ ನಡೆಯುತ್ತಿದ್ದರೂ ಶೃತಿ ತನ್ನ ಸಂಬಂಧಿಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧವನ್ನು ಮುಂದುವರಿಸಿದ್ದಳು ಎಂದು ತಿಳಿದು ಬಂದಿದೆ.



Leave a Comment: