ಉಪ್ಪಿನಂಗಡಿ : ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೋ ಚಿತ್ರೀಕರಣ :ಪೆರಿಯಡ್ಕ ನಿವಾಸಿ ರೆಹಮಾನ್ ಪೊಲೀಸ್ ವಶಕ್ಕೆ

ಸುದ್ದಿಗಳು News

Posted by vidyamaana on 2024-07-22 17:34:57 |

Share: | | | | |


ಉಪ್ಪಿನಂಗಡಿ : ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೋ ಚಿತ್ರೀಕರಣ :ಪೆರಿಯಡ್ಕ ನಿವಾಸಿ ರೆಹಮಾನ್ ಪೊಲೀಸ್ ವಶಕ್ಕೆ

ಉಪ್ಪಿನಂಗಡಿ: ಹಿಂದೂ ಯುವತಿ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡಿದ ರಹಿಮಾನ್ ಎಂಬಾತನ ಸ್ಥಳೀಯರು ಪೊಲೀಸರಿಗೆ ಹಿಡಿದು ಕೊಟ್ಟ ಘಟನೆ ಜು.21ರಂದು ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಮಾಡುತ್ತಿದ್ದ ರಹಿಮಾನ್ ನನ್ನು ಸ್ಥಳೀಯರು ಹಿಡಿದು ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದ ಅರುಣ್ ಕುಮಾರ್ ಪುತ್ತಿಲ, ಆರೋಪಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಸಿಸಿಟಿವಿಗೆ ಒತ್ತಾಯ: ಈಗಾಗಲೇ ಉಪ್ಪಿನಂಗಡಿಯಲ್ಲಿ ಹಿಂದೂಗಳನ್ನು ಕೇಂದ್ರೀಕರಿಸಿ ಹಲವು ಘಟನೆಗಳು ನಡೆದಿದ್ದು, 2ವರ್ಷದ ಹಿಂದೆ ಮೀನು ಅಂಗಡಿಗೆ ಬೆಂಕಿ ಹಾಕಿದ್ದು ಇನ್ನೂ ಪತ್ತೆಯಾಗಿಲ್ಲ.

ಈ ಘಟನೆಯಲ್ಲಿ ಆರೋಪಿಯನ್ನು ಊರಾವರೇ ಹಿಡಿದುಕೊಟ್ಟಿದ್ದಾರೆ. ಪೆರಿಯಡ್ಕ ಜಂಕ್ವನ್ ನಲ್ಲಿ ಪೊಲೀಸ್ ಇಲಾಖೆಯ ಸಿಸಿಟಿವಿ ಅಗತ್ಯತೆ ಇದೆ ಎಂದು ಠಾಣಾಧಿಕಾರಿಯಲ್ಲಿ ಮನವಿ ಮಾಡಿದರು.

 Share: | | | | |


7ಲಕ್ಷ ರೂ.ಮೊತ್ತದ ಚೆಕ್ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

Posted by Vidyamaana on 2023-09-24 07:31:17 |

Share: | | | | |


7ಲಕ್ಷ ರೂ.ಮೊತ್ತದ ಚೆಕ್ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

ಮಣಿಪಾಲ: ಆಟೊ ರಿಕ್ಷಾದಲ್ಲಿ ಮರೆತು ಬಿಟ್ಟು ಹೋದ 7ಲಕ್ಷ ರೂ. ಮೊತ್ತದ ಚೆಕ್‌ ಹಾಗೂ ದಾಖಲೆ ಪತ್ರವನ್ನು ರಿಕ್ಷಾ ಚಾಲಕ ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.


ಕುಂದಾಪುರ ನಿವಾಸಿ ಅನಂತ ದೇವಾಡಿಗ ಎಂಬವರು ಸೆ.18ರಂದು ಮಣಿಪಾಲ ರಿಕ್ಷಾ ನಿಲ್ದಾಣದಿಂದ ಸತೀಶ್ ಎಂಬವರ ರಿಕ್ಷಾದಲ್ಲಿ ಮಣಿಪಾಲದಿಂದ ಉಡುಪಿಗೆ ಬಾಡಿಗೆ ಮಾಡಿಕೊಂಡು ತೆರಳಿದ್ದರು. ಈ ವೇಳೆ ಅವರು ತಮ್ಮ ಕೈಯಲ್ಲಿದ್ದ ಚೆಕ್‌ ಹಾಗೂ ದಾಖಲಾತಿಗಳನ್ನು ರಿಕ್ಷಾದಲ್ಲಿಯೇ ಬಿಟ್ಟು ಹೋಗಿದ್ದರು. ಬಾಡಿಗೆ ಮುಗಿಸಿ ಮಣಿಪಾಲಕ್ಕೆ ಬಂದ ರಿಕ್ಷಾದಲ್ಲಿ ದಾಖಲಾತಿ ಬಿಟ್ಟು ಹೋಗಿ ರುವುದು ಸತೀಶ್ ಅವರ ಗಮನಕ್ಕೆ ಬಂತು.


ಈ ವಿಚಾರವನ್ನು ಸತೀಶ್, ತಮ್ಮ ಸಂಘದ ಅಧ್ಯಕ್ಷ ವಿಜಯ್ ಪುತ್ರನ್ ಹಿರೇಬೆಟ್ಟು ಅವರಿಗೆ ತಿಳಿಸಿದರು. ಬಳಿಕ ವಾರಸುದಾರರನ್ನು ಪತ್ತೆ ಹಚ್ಚ ಲಾಯಿತು.


ಮಣಿಪಾಲ ಪೊಲೀಸ್‌ ನಿರೀಕ್ಷಕ ದೇವರಾಜ್ ಹಾಗೂ ಎಸ್ಥೆಗಳಾದ ಅಕ್ಷಯ ಕುಮಾರಿ, ರಾಘವೇಂದ್ರ ಹಾಗೂ ಮನೋಹರ್ ಕುಮಾರ್‌ ಮೂಲಕ ಚೆಕ್‌ ಹಾಗೂ ದಾಖಲಾತಿಗಳನ್ನು ಹಸ್ತಾಂತರಿಸಲಾಯಿತು.

ಮಂಗಳೂರು: ವಿದ್ಯಾರ್ಥಿಗಳಿಗೆ ನೈಟ್ ಪಾರ್ಟಿ ಆಯೋಜನೆ, ಪಬ್ ಮಾಲೀಕರ ವಿರುದ್ಧ ಪೊಲೀಸ್ ಪ್ರಕರಣ

Posted by Vidyamaana on 2024-07-27 02:11:24 |

Share: | | | | |


ಮಂಗಳೂರು: ವಿದ್ಯಾರ್ಥಿಗಳಿಗೆ ನೈಟ್ ಪಾರ್ಟಿ ಆಯೋಜನೆ, ಪಬ್ ಮಾಲೀಕರ ವಿರುದ್ಧ ಪೊಲೀಸ್ ಪ್ರಕರಣ

ಮಂಗಳೂರು : ವಿದ್ಯಾರ್ಥಿಗಳಿಗೆ ನೈಟ್ ಪಾರ್ಟಿ ಆಯೋಜನೆ ಮಾಡಿದ ಆರೋಪದ ಮೇರೆಗೆ ಮಂಗಳೂರಿನ ಪಬ್ ವಿರುದ್ಧ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮಂಗಳೂರು ನಗರದ ದೇರೆಬೈಲ್‌ ಕೊಂಚಾಡಿಯಲ್ಲಿರುವ ಬಾರ್‌ ಮತ್ತು ಪಬ್ ಒಂದರಲ್ಲಿ ಸ್ಟೂಡೆಂಟ್ಸ್‌ ವೆಡ್ನೆಸ್ ಡೇ ನೈಟ್‌ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಮುಕ್ತವಾಗಿ ಆಹ್ವಾನಿಸಿದ್ದಾರೆ.

ಸಂಜೆ 7ಗಂಟೆಯಿಂದ ಮಧ್ಯರಾತ್ರಿ ವರೆಗೆ ಈ ಕಾರ್ಯಕ್ರಮವನ್ನು ಆಯೋಜಿಸಲು ಸಮಯ ನಿಗದಿಪಡಿಸಲಾಗಿತ್ತು. 

ಕಾರ್ಯಕ್ರಮದಲ್ಲಿ ಆಹಾರ, ಮದ್ಯ, ಮ್ಯೂಸಿಕ್‌, ಮನೋರಂಜನಾ ಕಾರ್ಯಕ್ರಮಗಳಿರುವುದಾಗಿ ಪ್ರಚಾರ ಮಾಡಲಾಗಿತ್ತು. ಇಷ್ಟು ಮಾತ್ರವಲ್ಲದೆ ವಿದ್ಯಾರ್ಥಿಗಳು ಸ್ಕೂಲ್‌ ಐಡಿ (ಗುರುತು ಕಾರ್ಡ್‌) ತೋರಿಸಿದರೆ ಬಿಲ್‌ನಲ್ಲಿ ಶೇ.15ರಷ್ಟು ಕಡಿತದ ಆಫರ್‌ ನೀಡಲಾಗಿತ್ತು. ಈ ಇವೆಂಟ್‌ಗೆ ವಿದ್ಯಾರ್ಥಿನಿಯರು (ಹುಡುಗಿಯರು) ಬಂದರೆ ಅವರಿಗೆ ಫ್ರೀ ಶೂಟರ್ಸ್ (ಸ್ಪೆಷಲ್‌ ಆಫರ್‌) ನೀಡುವ ಭರವಸೆಯನ್ನು ನೀಡಲಾಗಿತ್ತು.

ಇದೀಗ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಮಂಗಳೂರು ಪೊಲೀಸರು ಕಾರ್ಯಕ್ರಮ ಆಯೋಜನೆ ಮಾಡಿದ್ದ ಪಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳ ಮತ್ತು ಮಂಗಳೂರು ಪೊಲೀಸ್ ಅಧಿಕಾರಿಗಳು ಇದೀಗ ಪಬ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಮಾಹಿತಿ ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದ ಮಂಗಳೂರಿನ ದೇರೆಬೈಲ್‌ನಲ್ಲಿರುವ ಹೋಟೆಲ್ ಲಾಲ್‌ಬಾಗ್ ಇನ್ (ಲಿಕ್ಕರ್ ಲಾಂಜ್ ಬಾರ್) ಪಬ್‌ನ ಪ್ರಚಾರದ ಪೋಸ್ಟರ್ ಆಧಾರದ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ.

ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಆಂಧ್ರಪ್ರದೇಶ ರಾಜ್ಯಪಾಲರಾಗಿ ಆಗಿ ನೇಮಕ

Posted by Vidyamaana on 2023-02-12 10:44:47 |

Share: | | | | |


ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಆಂಧ್ರಪ್ರದೇಶ ರಾಜ್ಯಪಾಲರಾಗಿ ಆಗಿ ನೇಮಕ

ನವದೆಹಲಿ; ಮೂಡಬಿದರೆ ಮೂಲದ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಆಂಧ್ರಪ್ರದೇಶ ಗವರ್ನರ್ ಆಗಿ ನೇಮಕವಾಗಿದ್ದಾರೆ. ಆಂಧ್ರಪ್ರದೇಶದ ಹಾಲಿ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ.ನೇಮಕಾತಿಗೆ ರಾಷ್ಟ್ರಪತಿ ದೌಪದಿ ಮುರ್ಮು ಅಂಕಿತ ಹಾಕಿದ್ದಾರೆ.

ಎಸ್.ಅಬ್ದುಲ್ ನಜೀರ್ ಅವರು ದಕ್ಷಿಣ ಕನ್ನಡದ ಬೆಳುವಾಯಿ ಮೂಲದವರಾಗಿದ್ದು, ಐತಿಹಾಸಿಕ ಅಯೋಧ್ಯೆ ರಾಮಜನ್ಮ ಭೂಮಿ ತೀರ್ಪು ನೀಡಿದ ಬೆಂಚ್ ಸದಸ್ಯರಾಗಿದ್ದ ಎಸ್.ಅಬ್ದುಲ್ ನಜೀರ್ ಅವರು ಜನವರಿ 14ರಂದು ನಿವೃತ್ತರಾಗಿದ್ದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನ್ಯಾಯಾಲಯ ಸಂಕೀರ್ಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಜಸ್ಟಿಸ್ ನಜೀರ್ ಅವರು 1958ರ ಜನವರಿ 5ರಂದು ಜನಿಸಿದರು. ಫೆಬ್ರವರಿ 18, 1983 ರಂದು ವಕೀಲರಾಗಿ ನೋಂದಾಯಿಸಿಕೊಂಡರು. ಕರ್ನಾಟಕ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಿದ ಅವರು 2003ರ ಮೇ 12 ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

ಜಾಹೀರಾತು ಬ್ಲಾಕ್‌ ಮಾಡುವ ಯೂಟ್ಯೂಬ್‌ ಬಳಕೆದಾರರಿಗೆ ಬ್ರೇಕ್‌ ಹಾಕಿದ ಗೂಗಲ್‌; ವೀಕ್ಷಕರಿಗೆ 3 ಆಯ್ಕೆ ನೀಡಿದ ಯೂಟ್ಯೂಬ್‌

Posted by Vidyamaana on 2023-10-25 15:45:27 |

Share: | | | | |


ಜಾಹೀರಾತು ಬ್ಲಾಕ್‌ ಮಾಡುವ ಯೂಟ್ಯೂಬ್‌ ಬಳಕೆದಾರರಿಗೆ ಬ್ರೇಕ್‌ ಹಾಕಿದ ಗೂಗಲ್‌; ವೀಕ್ಷಕರಿಗೆ 3 ಆಯ್ಕೆ ನೀಡಿದ ಯೂಟ್ಯೂಬ್‌

ಯೂಟ್ಯೂಬ್‌ ಬಳಕೆ ಜಾಗತಿಕವಾಗಿ ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಎಲ್ಲರೂ ಗೂಗಲ್‌ನ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಲು ಬಯಸುತ್ತಾರೆ. ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಸುದ್ದಿ, ಸಿನಿಮಾ, ಮನರಂಜನೆ, ಮಾಹಿತಿಯ ವಿಡಿಯೋಗಳನ್ನು ನೋಡಲು ಎಲ್ಲರೂ ಬಯಸುತ್ತಾರೆ. ಈ ರೀತಿ ಯೂಟ್ಯೂಬ್‌ನಲ್ಲಿ ವೀಕ್ಷಣೆ ಮಾಡುವಾಗ ಕಾಣಿಸುವ ಜಾಹೀರಾತುಗಳು ಸಾಕಷ್ಟು ಜನರಿಗೆ ಕಿರಿಕಿರಿ ಉಂಟು ಮಾಡುತ್ತಾರೆ.ಇಂತಹ ಕಿರಿಕಿರಿ ತಪ್ಪಿಸಲು ಕೆಲವು ಜಾಣರು ಆಡ್‌ ಬ್ಲಾಕರ್‌ ಸಾಫ್ಟ್‌ವೇರ್‌ಗಳನ್ನು ಬಳಸುತ್ತಾರೆ. ಈ ರೀತಿ ಜನರು ಆಡ್‌ ಬ್ಲಾಕರ್‌ ಬಳಸಿ ಯೂಟ್ಯೂಬ್‌ ಸೇವೆ ಪಡೆಯುವುದನ್ನು ತಪ್ಪಿಸಲು ಮತ್ತು ಇಂತಹ ಬಳಕೆದಾರರನ್ನು ಕಂಡುಹಿಡಿಯಲು ಗೂಗಲ್‌ ಆರಂಭಿಸಿದೆ.


ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಲು ಆಡ್‌ ಬ್ಲಾಕರ್‌ ಸಾಫ್ಟ್‌ವೇರ್‌ ಬಳಸುವವರಿಗೆ ಗೂಗಲ್‌ನ ಸೇವೆಗಳನ್ನು ಕಡಿತ ಮಾಡಲಾಗುತ್ತಿದೆ. ಎಲ್ಲಾದರೂ ಯೂಟ್ಯೂಬ್‌ ವೀಕ್ಷಿಸುವಾಗ ಆಡ್‌ ಬ್ಲಾಕಿಂಗ್‌ ಸಾಫ್ಟ್‌ವೇರ್‌ ಪತ್ತೆಯಾದರೆ ನಿಮಗೆ ಯೂಟ್ಯೂಬ್‌ನಲ್ಲಿ ಪಾಪ್‌ಅಪ್‌ ಸಂದೇಶ ಕಾಣಿಸಲಿದೆ. ಆ ಸಂದೇಶದಲ್ಲಿ ಈ ರೀತಿ ಆಡ್‌ ಬ್ಲಾಕರ್‌ ಬಳಸಬಾರದು ಎಂಬ ವಿವರದ ಜತೆಗೆ ಮೂರು ಆಯ್ಕೆಗಳನ್ನು ನೀಡಲಾಗುತ್ತದೆ.


ಆ ಯೂಟ್ಯೂಬ್‌ ಅಲಾರ್ಟ್‌ನಲ್ಲಿ ಈ ರೀತಿ ಬರೆದಿರುತ್ತದೆ. ಯೂಟ್ಯೂಬ್‌ ಬಳಸುವಾಗ ಆಡ್‌ ಬ್ಲಾಕರ್‌ ಬಳಸುವುದನ್ನು ನಿಷೇಧಿಸಲಾಗಿದೆ. ಜಾಹೀರಾತುಗಳು ಈ ಸೇವೆಯ ಅಗತ್ಯ ಭಾಗವಾಗಿದೆ. ನೀವು ಯೂಟ್ಯೂಬ್‌ ಪ್ರೀಮಿಯಂಗೆ ಹಣ ಪಾವತಿಸಿದರೆ ಮಾತ್ರ ಜಾಹೀರಾತು ಕಾಣಿಸುವುದಿಲ್ಲ.ನಿಮಗೆ ಒಟ್ಟು ಮೂರು ಆಯ್ಕೆಗಳು ಇವೆ. ನೀವು ಯೂಟ್ಯೂಬ್‌ ಜಾಹೀರಾತುಗಳಿಗೆ ಅನುಮತಿ ನೀಡುವುದು. ಯೂಟ್ಯೂಬ್‌ನಲ್ಲಿ ಜಾಹೀರಾತು ಕಾಣಿಸುವುದನ್ನು ತಡೆಯುವುದನ್ನು ನಿಲ್ಲಿಸಲು ಆಡ್‌ ಬ್ಲಾಕರ್‌ ಆಯ್ಕೆಯನ್ನು ಯೂಟ್ಯೂಬ್‌ ಈ ಸಂದರ್ಭದಲ್ಲಿ ಪ್ರದರ್ಶಿಸುತ್ತದೆ. ಅಥವಾ ಯೂಟ್ಯೂಬ್‌ ಪ್ರೀಮಿಯಂಗೆ ಸೈನ್‌ಅಪ್‌ ಆಗಿ. ಅಥವಾ ಈ ಸಂದೇಶ ಇಗ್ನೋರ್‌ ಮಾಡಿ. ಈ ರೀತಿ ಮೂರು ಆಯ್ಕೆ ನೀಡುತ್ತದೆ. ಸಂದೇಶ ಇಗ್ನೋರ್‌ ಮಾಡಿದ ಬಳಿಕವೂ ನೀವು ಆಡ್‌ ಬ್ಲಾಕರ್‌ ಬಳಸುವುದು ಖಾತ್ರಿಯಾದರೆ ಯೂಟ್ಯೂಬ್‌ ಸೇವೆ ಸ್ಥಗಿತಗೊಳ್ಳಲಿದೆ.


ಎಲ್ಲಾದರೂ ನೀವು ಯೂಟ್ಯೂಬ್‌ನ ಈ ಎಚ್ಚರಿಕೆಯನ್ನು ಕಡೆಗಣಿಸಿದ್ದೀರಿ ಎಂದಿರಲಿ. ಮತ್ತೆ ನೀವು ಹಲವು ವಿಡಿಯೋಗಳನ್ನು ನೋಡಬಹುದು. ಈ ಸಂದರ್ಭದಲ್ಲಿ ನೀವು ಆಡ್‌ ಬ್ಲಾಕರ್‌ ಮೂಲಕ ಜಾಹೀರಾತುಗಳಿಗೆ ತಡೆ ನೀಡುತ್ತಿದ್ದೀರಾ ಎಂದು ಪರಿಶೀಲಿಸುತ್ತದೆ. ಮೂರು ಸ್ಟ್ರೈಕ್‌ ಬಳಿಕ ನಿಮಗೆ ಯೂಟ್ಯೂಬ್‌ ವೀಕ್ಷಣೆಗೆ ಅವಕಾಶ ಇರುವುದಿಲ್ಲ.


ಬಹುತೇಕರು ಆನ್‌ಲೈನ್‌ ಬಳಸುವಾಗ ಆಡ್‌ ಬ್ಲಾಕರ್‌ಗಳನ್ನು ಬಳಸುತ್ತಾರೆ. ವೆಬ್‌ಸೈಟ್‌ಗಳಲ್ಲಿ ಜಾಹೀರಾತುಗಳು ಕಾಣಿಸದಂತೆ ಮಾಡಲು ಈ ರೀತಿ ಮಾಡುತ್ತಾರೆ. ಈ ರೀತಿಯ ಆಡ್‌ ಬ್ಲಾಕರ್‌ಗಳು ನಿಮ್ಮ ಕಂಪ್ಯೂಟರ್‌ಗಳಿಗೂ ಹಾನಿ ಮಾಡಬಹುದು. ನಿಮ್ಮ ಕಂಪ್ಯೂಟರ್‌ನ ಸುರಕ್ಷತೆಗೂ ತೊಂದರೆ ನೀಡಬಹುದು. ನಿಮ್ಮ ಇಂಟರ್‌ನೆಟ್‌ ಚಟುವಟಿಕೆ ಮೇಲೆ ನಿಗಾ ಇಡಬಹುದು. ಕೆಲವೊಂದು ಆಡ್‌ ಬ್ಲಾಕರ್‌ಗಳು ಉತ್ತಮ ಸೇವೆ ನೀಡುತ್ತವೆ. ಖಾಸಗಿತನಕ್ಕೆ ಧಕ್ಕೆಯಾಗದಂತೆ ಸೇವೆ ನೀಡುತ್ತಾವೆ.


ಕಳೆದ ಹಲವು ವರ್ಷಗಳಿಂದ ಯೂಟ್ಯೂಬ್‌ ಈ ಆಡ್‌ ಬ್ಲಾಕರ್‌ಗಳನ್ನು ಗಮನಿಸುತ್ತಿತ್ತು. ಈ ರೀತಿ ಬಳಸುವ ಜನರ ಬಗ್ಗೆ ಮೌನವಾಗಿದ್ದಿತ್ತು. ಇದೀಗ ಈ ಮೂಲಕ ತನ್ನ ಸೇವೆಯನ್ನು ದುರುಪಯೋಗ ಪಡಿಸಿಕೊಳ್ಳುವವರಿಗೆ ಯೂಟ್ಯೂಬ್‌ ವೀಕ್ಷಣೆಗೆ ಅವಕಾಶ ನೀಡದೆ ಇರಲು ನಿರ್ಧರಿಸಿದೆ. ಇದರಿಂದ ಯೂಟ್ಯೂಬ್‌ ಪ್ರೀಮಿಯಂ ಬಳಕೆದಾರರ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಯಿದೆ.


ಈ ರೀತಿ ಅಲಾರ್ಟ್‌ ಸಂದೇಶ ಬರುವ ತನಕ ನಿರಾಂತಕವಾಗಿ ಇತರರು ಯೂಟ್ಯೂಬ್‌ನಲ್ಲಿ ಆಡ್‌ ಬ್ಲಾಕರ್‌ ಬಳಕೆ ಮುಂದುವರೆಸಬಹುದು.

ಹಾಸನದಲ್ಲಿ ಸಂಚಲನ ಮೂಡಿಸಿದ ಪ್ರಭಾವಿ ರಾಜಕಾರಣಿಯ ಪೆನ್‌ಡ್ರೈವ್‌!!!

Posted by Vidyamaana on 2024-04-24 20:42:30 |

Share: | | | | |


ಹಾಸನದಲ್ಲಿ ಸಂಚಲನ ಮೂಡಿಸಿದ ಪ್ರಭಾವಿ ರಾಜಕಾರಣಿಯ ಪೆನ್‌ಡ್ರೈವ್‌!!!

ಹಾಸನ: ಲೋಕಸಭೆ ಚುನಾವಣೆಗೆ ಇನ್ನೆರಡು ದಿನ ಉಳಿದಿರುವಂತೆ, ಜಿಲ್ಲೆಯ ರಾಜಕೀಯ ಯುವ ನಾಯಕರೊಬ್ಬರ ಖಾಸಗಿ ಚಟುವಟಿಕೆಗಳ ಮಾಹಿತಿಯುಳ್ಳ ಪೆನ್ ಡ್ರೈವ್‌ಗಳು ಪಾರ್ಕ್, ಕ್ರೀಡಾಂಗಣ ಹಾಗೂ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ದೊರೆಯುತ್ತಿವೆ ಎಂಬ ವದಂತಿ ಹರಡಿದ್ದು, ಸಂಚಲನ ಮೂಡಿಸಿದೆ.

ಯುವ ನಾಯಕರೊಬ್ಬರ ಖಾಸಗಿ ಚಟುವಟಿಕೆಗಳಿರುವ ವಿಡಿಯೋಗಳನ್ನು ಪೆನ್ ಡ್ರೈವ್‌ಗಳಲ್ಲಿ ತುಂಬಿ ಅನಾಮಧೇಯವಾಗಿ ಹರಡಲಾಗುತ್ತಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆದಿದೆ.

7 ನವಜಾತ ಶಿಶುಗಳನ್ನು ಕೊಂದ ನರ್ಸ್​; ವೈದ್ಯನ ಜತೆಗಿನ ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?

Posted by Vidyamaana on 2023-08-20 10:29:32 |

Share: | | | | |


7 ನವಜಾತ ಶಿಶುಗಳನ್ನು ಕೊಂದ ನರ್ಸ್​; ವೈದ್ಯನ ಜತೆಗಿನ ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?

ಲಂಡನ್‌: ಬ್ರಿಟನ್ನಿನ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ​ಒಬ್ಬಳು ಅಕ್ರಮ ಸಂಬಂಧ, ವಿಕೃತ ಸಂತೋಷಕ್ಕಾಗಿ ಏಳು ನವಜಾತ ಶಿಶುಗಳನ್ನು ಕೊಂದು, ಇನ್ನೂ ಆರು ಶಿಶುಗಳನ್ನು ಕೊಲ್ಲಲು ಯತ್ನಿಸಿದ ನರ್ಸ್​​ಗೆ ಕೋರ್ಟ್​​​ ಶಿಕ್ಷೆ ಪ್ರಕಟಿಸಿದೆ.ಬ್ರಿಟನ್‌ನ ಆಸ್ಪತ್ರೆಯೊಂದರ ನವಜಾತ ಶಿಶು ಘಟಕದಲ್ಲಿ ಒಂದು ವರ್ಷದ ಅವಧಿಯಲ್ಲಿ ಏಳು ಮಕ್ಕಳನ್ನು ಕೊಂದಿದ್ದಲ್ಲದೆ, ಇನ್ನೂ ಆರು ಮಕ್ಕಳ ಕೊಲೆಗೆ ಪ್ರಯತ್ನ ನಡೆಸಿದ್ದ ಪ್ರಕರಣದಲ್ಲಿ ನರ್ಸ್ ಒಬ್ಬಳನ್ನು ತಪ್ಪಿತಸ್ಥೆ ಎಂದು ಕೋರ್ಟ್ ಪ್ರಕಟಿಸಿದೆ.ನಡೆದಿದ್ದೇನು?: 2015 ಹಾಗೂ 2016ರ ನಡುವೆ ಇಂಗ್ಲೆಂಡ್‌ನ ಕೌಂಟೆಸ್‌ ಚೆಸ್ಟರ್‌ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ನಿಗೂಢ ಸರಣಿ ಸಾವು ಸಂಭವಿಸಿತ್ತು. ಈ ಸಂಬಂಧ 2018ರಲ್ಲಿ ಲೂಸಿ ವಿರುದ್ಧ ದೂರು ದಾಖಲಾಗಿತ್ತು.


ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸರಣಿ ಸಾವು ಸಂಭವಿಸುತ್ತಿರುವ ಬಗ್ಗೆ ಆಡಳಿತ ಮಂಡಳಿ ಸಭೆ ನಡೆಸಿದಾಗ ಅಲ್ಲಿನ ಮಕ್ಕಳ ವೈದ್ಯರಲ್ಲಿ ಒಬ್ಬರಾದ ಭಾರತೀಯ ಮೂಲದ ಡಾ.ರವಿ ಜಯರಾಮ್‌ ಎಂಬುವರು ಲೂಸಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಪೊಲೀಸ್‌ ತನಿಖೆಯಲ್ಲೂ ಆಕೆಯ ವಿರುದ್ಧ ಹೇಳಿಕೆ ನೀಡಿದ್ದರು. ಆದರೆ, ಆಸ್ಪತ್ರೆಯ ಆಡಳಿತ ಮಂಡಳಿಯು ಡಾ.ರವಿ ಅವರ ಹೇಳಿಕೆಯನ್ನು ಆಕ್ಷೇಪಿಸಿ, ಕಿಲ್ಲರ್‌ ನರ್ಸ್‌ ಬಳಿಯೇ ಕ್ಷಮೆ ಕೇಳುವಂತೆ ಅವರಿಗೆ ಸೂಚಿಸಿತ್ತು.ಆದರೆ ನವಜಾತ ಶಿಶುಗಳ ಸಾವಿನ ಪ್ರರಣದ ಬೆನ್ನು ಹತ್ತಿದ್ದ ಪೊಲೀಸರ ಬಲೆಗೆ ಬಿದ್ದವಳೆ ಬ್ರಿಟನ್‌ನ ಚೆಸ್ಟರ್ ಹಾಸ್ಪಿಟಲ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಲೂಸಿ ಲೆಟ್ಬಿ ಎಂಬಾಕೆ. ಬಳಿಕ ಪೊಲೀಸರು ತನಿಖೆ ನಡೆಸಿದಾಗ ನರ್ಸ್‌ ಮನೆಯಲ್ಲಿ ಆಕೆ ಬರೆದಿಟ್ಟಿದ್ದ ನೋಟ್‌ಗಳು ಪತ್ತೆಯಾಗಿದ್ದವು. ಈ ಮೂಲವನ್ನಿಟ್ಟುಕೊಂಡು ತನಿಖೆ ಕೈಗೊಂಡರು.


ಅಕ್ಟೋಬರ್‌ನಿಂದಲೂ ಉತ್ತರ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ವಿಚಾರಣೆ ನಡೆಸಿ ಕೋರ್ಟ್​​ ಲೂಶಿಯಾ ದೋಷಿ ಎಂದು ತೀರ್ಪು ನೀಡಿದೆ. ಆದರೆ ತನಿಖೆಯಲ್ಲಿ ಹಾಗೂ ಕೋರ್ಚ್‌ನಲ್ಲಿ ಆಕೆ ತಾನು ಯಾರನ್ನೂ ಕೊಂದಿಲ್ಲ ಎಂದೇ ವಾದಿಸಿದ್ದಳು. ಹೀಗಾಗಿ ಸರಣಿ ಶಿಶುಗಳ ಹತ್ಯೆಯ ಕಾರಣ ಇನ್ನೂ ನಿಗೂಢವಾಗಿದೆ. ಆದರೆ ಮೃತ ಶಿಶುಗಳ ಪೋಷಕರು ಹಾಗೂ ವಕೀಲರು ಆಕೆಯ ಕ್ರೂರ ಕೃತ್ಯದ ಕುರಿತಾಗಿ ಕೆಲವು ಕೆಲವು ಮಾಹಿತಿಯನ್ನು ನೀಡಿದ್ದಾರೆಮಕ್ಕಳನ್ನು ಕ್ರೂರವಾಗಿ ಕೊಲ್ಲುತ್ತಿದ್ದಳು:

ನವಜಾತ ಶಿಶುಗಳ ರಕ್ತನಾಳಕ್ಕೆ ಖಾಲಿ ಇಂಜೆಕ್ಷನ್‌ ಚುಚ್ಚಿ ಅಥವಾ ಇನ್ಸುಲಿನ್‌ ಓವರ್‌ಡೋಸ್‌ ನೀಡಿ ಅಥವಾ ಹೊಟ್ಟೆಗೆ ನ್ಯಾಸೋಗ್ಯಾಸ್ಟ್ರಿಕ್‌ ಟ್ಯೂಬ್‌ ಮೂಲಕ ಹಾಲು ಅಥವಾ ಗಾಳಿಯನ್ನು ತುಂಬಿ ಲೂಸಿ ಕ್ರೂರವಾಗಿ ಕೊಲ್ಲುತ್ತಿದ್ದಳು. ತಾನು ನರ್ಸ್‌ ಆಗಿದ್ದ ಆಸ್ಪತ್ರೆಯಲ್ಲಿ ಲೂಸಿ ಐದು ಗಂಡು ಶಿಶು, ಎರಡು ಹೆಣ್ಣು ಶಿಶುಗಳನ್ನು ಕೊಂದಿದ್ದಾಳೆ. ಇನ್ನೂ ಆರು ಶಿಶುಗಳನ್ನು ಕೊಲ್ಲಲು ಯತ್ನಿಸಿದ್ದಾಳೆ.


ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?: ಲೂಸಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ವಿವಾಹಿತ ವೈದ್ಯರೊಂದಿಗೆ ಲೂಸಿ ಅಕ್ರಮ ಸಂಬಂಧ ಹೊಂದಿದ್ದಳು, ಶಿಶುಗಳು ಗಂಭೀರ ಸ್ಥಿತಿಯಲ್ಲಿದ್ದಾಗ ಕರೆಸುತ್ತಿದ್ದರಂತೆ. ಶಿಶುವಿಗೆ ಆರೋಗ್ಯ ಸಮಸ್ಯೆಯಾದಾಗ ಆ ವೈದ್ಯರನ್ನು ಆಕೆಯನ್ನು ಕರೆಯಬೇಕಿತ್ತು. ಆಗ ವೈದ್ಯನ ಗಮನ ಸೆಳೆಯುವುದಕ್ಕಾಗಿ ಶಿಶುಗಳನ್ನು ಕೊಲ್ಲುತ್ತಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕೆ ನರ್ಸ್ ವಿವಾಹಿತ ವೈದ್ಯನನ್ನ ನೋಡುವ ಸಲುವಾಗಿ ಈ ರೀತಿ ಕೃತ್ಯ ಎಸಗಿದ್ದಾಳೆ ಎಂದು ಆರೋಪ ಮಾಡಲಾಗಿದೆಶಿಶು ಸಾವನ್ನಪ್ಪಿದ ಬಳಿಕ ವಾರ್ಡ್‌ನಲ್ಲಿ ಪೋಷಕರು ಅಳುವುದನ್ನು ನೋಡಿ ಲೂಸಿ ವಿಕೃತ ಸಂತೋಷ ಅನುಭವಿಸುತ್ತಿದ್ದಳು. ಶಿಶುಗಳಿಗೆ ಇಂಜೆಕ್ಷನ್‌ ಚುಚ್ಚಿದ ಬೇರೆ ನರ್ಸ್‌ಗಳನ್ನು ಕರೆದುಕೊಂಡು ಬಂದು ಈ ಮಗು ಸಾಯುತ್ತದೆ ಎಂದು ಹೇಳುವ ಮೂಲಕ ತನಗೆ ಎಲ್ಲವೂ ಮೊದಲೇ ತಿಳಿಯುತ್ತದೆ ಎಂದು ಆಕೆಗೆ ಬಿಂಬಿಸುತ್ತಿದ್ದಳು.

Recent News


Leave a Comment: