ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಸುದ್ದಿಗಳು News

Posted by vidyamaana on 2024-07-24 19:54:18 |

Share: | | | | |


ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಇದೀಗ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಲಾರಿ ಚಾಲಕ ಅರ್ಜುನ ಇನ್ನೂ ಪತ್ತೆ ಆಗಿರದ ಕಾರಣ ಶೋಧ ಕಾರ್ಯ ಮುಂದುವರೆದಿದೆ.

ಕಳೆದ 8 ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಎನ್ ಡಿ ಆರ್ ಎಫ್ ಎಚ್ ಡಿ ಆರ್ ಎಫ್ ತಂಡ ಸೇರಿದಂತೆ ಮಿಲ್ಟ್ರಿ ತಂಡ ಕೂಡ ಮಣ್ಣು ತೆರವು ಕಾರ್ಯಾಚರಣೆಗೆ ಆಗಮಿಸಿತ್ತು. ಈ ವೇಳೆ ನಿನ್ನೆಯವರೆಗೆ 8 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಹಲವರು ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ. ಟಿಂಬರ್ ಲಾರಿ ನದಿಯಲ್ಲಿ ಪತ್ತೆ ಆಗಿರುವ ಸ್ಥಿತಿಯಲ್ಲಿ ಇದೆ.ಕೇರಳ ಮೂಲದ ಲಾರಿ ನದಿಯಲ್ಲಿ ಇದೀಗ ಪತ್ತೆಯಾಗಿದೆ. ಲಾರಿ ಜೊತೆಗೆ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಲಾರಿ ಪತ್ತೆಯಾದ ಸ್ಥಳಕ್ಕೆ ಡಿಸಿ ಲಕ್ಷ್ಮಿಪ್ರಿಯ ಭೇಟಿ ನೀಡಿದ್ದಾರೆ. ಕಾರವಾರದ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣದ ಬಗ್ಗೆ ಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ

 Share: | | | | |


ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಪ್ರಾಚಿ ಪುರಾತನ ಆಭರಣಗಳ ಪ್ರದರ್ಶನ ಹಾಗೂ ಮಾರಾಟ

Posted by Vidyamaana on 2023-12-12 20:44:33 |

Share: | | | | |


ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಪ್ರಾಚಿ ಪುರಾತನ ಆಭರಣಗಳ ಪ್ರದರ್ಶನ ಹಾಗೂ ಮಾರಾಟ

ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‌ನಲ್ಲಿ ಡಿ.8 ರಿಂದ ಪ್ರಾಚಿ ಪುರಾತನ ಆಭರಣಗಳ ಪ್ರದರ್ಶನ ಹಾಗೂ ಮಾರಾಟವನ್ನು ಆಯೋಜಿಸಲಾಗಿದೆ.


ಗ್ರಾಹಕರು ಪ್ರಾಚಿ ಆ್ಯಂಟಿಕ್ ಚಿನ್ನಾಭರಣಗಳ ಖರೀದಿಗೆ ವಿಶೇಷ ರಿಯಾಯಿತಿ ಹಾಗೂ ಅಚ್ಚರಿಯ ಕೊಡುಗೆಗಳನ್ನು ಪಡೆಯುವ ಅವಕಾಶವಿದೆ.


1957ರಲ್ಲಿ ಆರಂಭಗೊಂಡ ಸಂಸ್ಥೆಯು ಆಭರಣಗಳ ಮಾರಾಟದಲ್ಲಿ ತನ್ನದೇ ಛಾಪು ಮೂಡಿಸಿದೆ. ವಿಶ್ವಾಸ, ಪರಿಶುದ್ಧತೆ, ಪರಂಪರೆ, ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸಂಸ್ಥೆ ಮನೆಮಾತಾಗಿದೆ. ಆ್ಯಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದ್ದು, ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.


ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ.


ಷರತ್ತುಗಳು ಅನ್ವಯದೊಂದಿಗೆ ಈ ಆಫರ್ ಪುತ್ತೂರು ಹಾಗೂ ಸುಳ್ಯ ಮಳಿಗೆಗಳಲ್ಲಿ ಮಾತ್ರ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ

ಫುಲ್ ಟೈಟಾಗಿ ರಸ್ತೆಯಲ್ಲೇ ತೂರಾಡಿದ ಖ್ಯಾತ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಬಿ ವಿಡಿಯೋ ವೈರಲ್

Posted by Vidyamaana on 2024-08-05 22:01:09 |

Share: | | | | |


ಫುಲ್ ಟೈಟಾಗಿ ರಸ್ತೆಯಲ್ಲೇ ತೂರಾಡಿದ ಖ್ಯಾತ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಬಿ ವಿಡಿಯೋ ವೈರಲ್

ಮುಂಬೈ :ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಡೆಯಲು ಆಗದಷ್ಟು ಫುಲ್ ಟೈಟಾಗಿ ತೂರಾಡಿದ್ದಾರೆ.ಅವರು ನಡೆಯಲು ಕಷ್ಟಪಡುತ್ತಿರುವ ಮತ್ತು ಸರಿಯಾಗಿ ನಿಲ್ಲಲು ಸಾಧ್ಯವಾಗದೇ ಬೈಕ್‌ ಹಿಡಿದುಕೊಂಡು ನಿಲ್ಲಲು ಪ್ರಯತ್ನಿಸಿದ ವಿಡಿಯೋ ವೈರಲ್ ಆಗಿದೆ.

ಕಾಂಬ್ಳಿ ಅವರು ನಡೆಯಲು ಕಷ್ಟಪಡುವುದನ್ನು ನೋಡಲಾಗದ ಕೆಲವರು ಅವರಿಗೆ ಸಹಾಯ ಮಾಡಿದ್ದಾರೆ. ಘಟನೆಯ ವೀಡಿಯೊವನ್ನು ಹಲವಾರು ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

2013ರಲ್ಲಿ ಚೆಂಬೂರಿನಿಂದ ವಾಹನ ಚಲಾಯಿಸಿಕೊಂಡು ಬರುತ್ತಿದ್ದಾಗ ಕಾಂಬ್ಳಿ ಅವರಿಗೆ ಹೃದಯಾಘಾತವಾಗಿತ್ತು. ಪೊಲೀಸ್ ಅಧಿಕಾರಿಯೊಬ್ಬರು ಲೀಲಾವತಿ ಆಸ್ಪತ್ರೆಗೆ ಕರೆದೊಯ್ದು ಪ್ರಾಣ ಉಳಿಸಿದ್ದರು. 52 ವರ್ಷ ವಯಸ್ಸಿನ ಅವರು ತಮ್ಮ ಎರಡು ಬ್ಲಾಕ್ ಅಪಧಮನಿಗಳಲ್ಲಿ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು.

ಕಾಂಬ್ಳಿ ತಮ್ಮ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ದೇಶೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಸಮೃದ್ಧ ರನ್ ಗಳಿಸುತ್ತಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎಡಗೈ ಆಟಗಾರ ಕಾಂಬ್ಳಿ 129 ಪಂದ್ಯಗಳಲ್ಲಿ 9965 ರನ್‌ಗಳಿಗೆ 59.67 ಸರಾಸರಿ ಹೊಂದಿದ್ದರು.

ಬಂಟ್ವಾಳ:ಸರಕಾರಿ ಆಸ್ಪತ್ರೆ ಪಕ್ಕವೇ ರೋಗ ಉತ್ಪಾದನಾ ಘಟಕ

Posted by Vidyamaana on 2023-03-23 07:40:43 |

Share: | | | | |


ಬಂಟ್ವಾಳ:ಸರಕಾರಿ ಆಸ್ಪತ್ರೆ ಪಕ್ಕವೇ ರೋಗ ಉತ್ಪಾದನಾ ಘಟಕ

ಬಂಟ್ವಾಳ: ಆಸ್ಪತ್ರೆಗಳಿರುವುದು ಜನರ ಆರೋಗ್ಯ ಕಾಪಾಡಲು. ಆದರೆ ಇಂತಹ ಆಸ್ಪತ್ರೆಗಳ ಪಕ್ಕವೇ ಸೊಳ್ಳೆ ಉತ್ಪಾದನಾ ತಾಣ ಇದ್ದರೆ? ಅಲ್ಲೇ ರೋಗ ಬರಿಸಿ, ನೇರವಾಗಿ ಆಸ್ಪತ್ರೆ ದಾರಿ ತೋರಿಸುವುದೇ?

ಇದು ಬಂಟ್ವಾಳ ಸರಕಾರಿ ಆಸ್ಪತ್ರೆಯ ಕಥೆ. ತಾಲೂಕು ಆಸ್ಪತ್ರೆ ಬಹಳ ಸುವ್ಯವಸ್ಥಿತವಾಗಿ ಕೆಲಸ ನಿರ್ವಹಿಸುತ್ತಿದೆ. ಆದರೆ ಆಸ್ಪತ್ರೆಯ ಪಕ್ಕದಲ್ಲಿ ಸೊಳ್ಳೆ ಉತ್ಪತ್ತಿ ಮಾಡಿ, ರೋಗ ಪಸರಿಸುವ ಚರಂಡಿಯೊಂದಿದೆ. ಇದು ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡಂತಿದೆ.


ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯ ಮುಂಭಾಗ ಮುಖ್ಯರಸ್ತೆ ಹಾದು ಹೋಗುತ್ತದೆ. ಈ ಮುಖ್ಯರಸ್ತೆಯ ಇನ್ನೊಂದು ಮಗ್ಗುಲಲ್ಲಿ ಈ ಚರಂಡಿ ಇದೆ. ಪೇಟೆ ಬೆಳೆದಂತೆ ಚರಂಡಿಗಳು ದುಸ್ಥಿತಿಯನ್ನು ತಲುಪುವುದು ಸಾಮಾನ್ಯ. ಆದರೆ ಆಸ್ಪತ್ರೆ ಪಕ್ಕದಲ್ಲೇ ಹೀಗಿದ್ದರೆ…?


ರೋಗವನ್ನು ಶಮನ ಮಾಡಬೇಕಾದ ಮಹತ್ತರ ಜವಾಬ್ದಾರಿಯನ್ನು ಆಸ್ಪತ್ರೆಗಳು ನಿರ್ವಹಿಸುತ್ತವೆ. ಅದೇ ಆಸ್ಪತ್ರೆಗಳಿಗೆ ಬಂದವರು ರೋಗವನ್ನು ಹೊತ್ತು ಕೊಂಡೊಯ್ದರೆ! ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗದೇ? ಆಸ್ಪತ್ರೆ ಸುವ್ಯವಸ್ಥಿತವಾಗಿ ಇರಬೇಕು ಎಂದು ಬಯಸುವುದು ಎಷ್ಟು ಸರಿಯೋ, ಅದೇ ರೀತಿ ಆಸ್ಪತ್ರೆಯ ಸುತ್ತಮುತ್ತಲ ಪರಿಸರವನ್ನು ಜಾಗೃತೆಯಿಂದ ಕಾಪಾಡಬೇಕಾದ ಜವಾಬ್ದಾರಿ ಸ್ಥಳೀಯಾಡಳಿತಕ್ಕಿದೆಯಲ್ಲವೇ?

ಫೆ.27: ಉಡುಪಿಗೆ ಭೇಟಿ ನೀಡಲಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ

Posted by Vidyamaana on 2023-02-26 16:07:56 |

Share: | | | | |


ಫೆ.27: ಉಡುಪಿಗೆ ಭೇಟಿ ನೀಡಲಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ

ಉಡುಪಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಫೆ.27ರ ಬೆಳಗ್ಗೆ 9:30ಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಲಿದ್ದು, ಉಡುಪಿಯ 5 ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಲಿರುವ 5 ಪ್ರಗತಿ ರಥಗಳಿಗೆ ಚಾಲನೆ ನೀಡಲಿದ್ದಾರೆ.

ಅಪರಾಹ್ನ 3:00 ಗಂಟೆಗೆ ಕಾರ್ಕಳದಲ್ಲಿ ನಡೆಯುವ ಬೃಹತ್ ಬೈಕ್ ಜಾಥಾದಲ್ಲಿ ಭಾಗವಹಿಸಿ, ಸಂಜೆ 4:00 ಗಂಟೆಗೆ ಅಜೆಕಾರಿನಲ್ಲಿ ನಡೆಯುವ ಉಡುಪಿ ಜಿಲ್ಲಾ ಮಟ್ಟದ ಯುವ ಮೋರ್ಚಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಸಚಿವ ವಿ.ಸುನೀಲ್ ಕುಮಾರ್, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್ ಕೆ.ಸಿ. ಸಹಿತ ರಾಜ್ಯ ಮತ್ತು ಜಿಲ್ಲಾ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

6 ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಿದ ಸಲಿಂಗ ಜೋಡಿ

Posted by Vidyamaana on 2023-09-15 21:51:08 |

Share: | | | | |


6 ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಿದ ಸಲಿಂಗ ಜೋಡಿ


 ಮಹಾರಾಷ್ಟ್ರ :ಪ್ರೀತಿಗೆ ಯಾವುದೇ ಧರ್ಮ, ವಯಸ್ಸು, ಬಣ್ಣ, ಸೌಂದರ್ಯ ಮುಖ್ಯವಲ್ಲ ಅಂತಾ ಹೇಳುವ ಒಂದು ಕಾಲವಿತ್ತು. ಆದರೆ ಇದೀಗ ಪ್ರೀತಿಗೆ ಲಿಂಗವೂ ಮುಖ್ಯವಲ್ಲ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೊರದೇಶದಲ್ಲಿ ಆಗುತ್ತಿದ್ದ ಸಲಿಂಗಕಾಮಿಗಳ ಮದುವೆ ಇದೀಗ ನಮ್ಮ ಭಾರತ ದೇಶದಲ್ಲೂ ನಡೆಯುತ್ತಿದೆ. ಅನೇಕ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಉಂಟು. ಇದಕ್ಕೆ ಉದಾಹರಣೆ ಮಹಾರಾಷ್ಟ್ರದ ಅವಿನಾಶ್ ಹಾಗೂ ವರುಣ್ ದಂಪತಿ.


6 ವರ್ಷಗಳ ಕಾಲ ಪ್ರೀತಿ ಮಾಡಿದ ಇವರು ಕುಟುಂಬದ ಒಪ್ಪಿಗೆ ಮೇರೆಗೆ ಲೋನಾವಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.


ತಮ್ಮ ಸಂಬಂಧ ಬಗೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಕಿ ವರುಣ ಪೋಸ್ಟ್ ಮಾಡಿದ್ದಾರೆ. 6 ವರ್ಷಗಳ ದೀರ್ಘ ಪ್ರೇಮ ಸಂಬಂಧ ಮುಗ್ಗರಿಸಿದ್ದರಿಂದ ನಾನು ತೀವ್ರ ಬೇಸರದಲ್ಲಿದ್ದೆ. 2021ರಲ್ಲಿ ಪೋಷಕರನ್ನು ನೋಡಲು ಆಗಷ್ಟೇ ಭಾರತಕ್ಕೆ ಬಂದಿದ್ದ ನಾನು ಅವಿನಾಶ್ ಅವರನ್ನು ಭೇಟಿಮಾಡಿದೆ. ನಾನು ಗಂಭೀರವಾಗಿ ಸಂಗಾತಿಯ ಹುಡುಕಾಟದಲ್ಲಿದ್ದೆ.


ನಾನು ಮತ್ತು 37 ವರ್ಷದ ಅವಿನಾಶ್ ಪರಸ್ಪರ ಪ್ರೀತಿಯಲ್ಲಿ ಬಿದ್ದೆವು.ಆದರೆ ನಮ್ಮ ಸಂಬಂಧವನ್ನು ಮೊದಮೊದಲು ಎರಡೂ ಕಡೆಯ ಪೋಷಕರು ಒಪ್ಪಲಿಲ್ಲ. ಕೊನೆಗೆ ಒಪ್ಪಿಕೊಂಡರು. ಸಾಕಷ್ಟು ಕಲ್ಯಾಣಮಂಟಪಗಳು ಬಾಡಿಗೆ ಕೊಡಲು ನಿರಾಕರಿಸಿದವು. ಕೊನೆಗೆ ಲೋನಾವಾಲದಲ್ಲಿ ಸಪ್ತಪದಿಯನ್ನು ತುಳಿದೆವು.

150 ಜನರು ಅತಿಥಿಗಳು ನಮ್ಮ ಮದುವೆಗೆ ಬಂದು ಹಾರೈಸಿದರು. ಪೋಷಕರು ಮನದುಂಬಿ ಹಾರೈಸಿದರು. ಸಿಯಾರಾ (ನಾಯಿ)ಳೊಂದಿಗೆ ನಮ್ಮ ಪುಟ್ಟ ಸಂಸಾರ ನೌಕೆ ಸಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ

ಮಾನಕ ಜ್ಯುವೆಲ್ಲರ್ಸ್ ನ ಅತ್ಯಾಧುನಿಕ-ಸರ್ವಸುಸಜ್ಜಿತ- ವಿಸ್ತಾರ ಸ್ವರೂಪದ ಹೊಸ ಶೋರೂಂ ಮೇ27ರಂದು ಶುಭಾರಂಭ

Posted by Vidyamaana on 2023-05-26 00:42:54 |

Share: | | | | |


ಮಾನಕ ಜ್ಯುವೆಲ್ಲರ್ಸ್ ನ ಅತ್ಯಾಧುನಿಕ-ಸರ್ವಸುಸಜ್ಜಿತ- ವಿಸ್ತಾರ ಸ್ವರೂಪದ ಹೊಸ ಶೋರೂಂ ಮೇ27ರಂದು ಶುಭಾರಂಭ


ಇವರ ಕುಟುಂಬವೇ ಕಳೆದ ಹಲವಾರು ದಶಕಗಳಿಂದ ಚಿನ್ನದ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಕುಟುಂಬ. ಚಿನ್ನ ಆಭರಣವಾಗಿ ರೂಪುಗೊಳ್ಳುವ ಮೊದಲು ಪರಿಶುದ್ಧತೆಗೊಳಪಡುವ ಒಂದು ಸುದೀರ್ಘ ಪ್ರಾಸೆಸ್ ಇದ್ದು ಈ ಕ್ಲಿಷ್ಟಕರ ಮತ್ತು ಅಷ್ಟೇ ವಿಶ್ವಾಸಾರ್ಹತೆಯನ್ನು ಬಯಸುವ ಒಂದು ಕೆಲಸವನ್ನು ಹಲವಾರು ವರ್ಷಗಳ ಕಾಲ ನಿಷ್ಠೆಯಿಂದ ಮಾಡಿಕೊಂಡು ಬಂದಂತಹ ಪರಿವಾರದ ಹಿನ್ನಲೆ ಆ ಬಳಿಕ ಇಂದಿಗೆ 17 ವರ್ಷಗಳ ಹಿಂದೆ ಚಿನ್ನಾಭರಣಗಳ ರಿಟೇಲ್ ವ್ಯವಹಾರಕ್ಕೆ ಕೈಹಾಕಿ ಅದರಲ್ಲಿ ಇಂದಿನವರೆಗೂ ಗ್ರಾಹಕರ ನಂಬಿಕೆಗೆ ಕುಂದು ಬರದ ರೀತಿಯಲ್ಲಿ ವ್ಯವಹಾರವನ್ನು ನಡೆಸಿಕೊಂಡು ಬಂದಿರುವ ಪುತ್ತೂರಿನ ಹೆಸರಾಂತ ‘ಮಾನಕ ಜ್ಯುವೆಲ್ಲರ್’ ಇದೀಗ ತನ್ನ ವ್ಯವಹಾರ ವ್ಯಾಪ್ತಿಯನ್ನು ವಿಸ್ತರಿಕೊಳ್ಳುವ ಪ್ರಯತ್ನದಲ್ಲಿ ಇದೇ ಮೇ 27ರಂದು ಪುತ್ತೂರು ಮುಖ್ಯರಸ್ತೆಯಲ್ಲಿರುವ ಸಿಪಿಸಿ ಪ್ಲಾಝಾದ ಎದುರುಗಡೆಯಿರುವ ಎಂ.ಎಸ್. ಕಾಂಪ್ಲೆಕ್ಸ್ ನ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ‘ಮಾನಕ’ ಬೆಳೆದುಬಂದ ರೀತಿಯ ಬಗ್ಗೆ ಮತ್ತು ಅವರ ವ್ಯವಹಾರ ವೈಶಿಷ್ಟ್ಯಗಳ ಮೇಲೆ ಬೆಳಕು ಚೆಲ್ಲುವ ವಿಶೇಷ ಪ್ರಯತ್ನ ಈ ಲೇಖನ ಮೂಲಕ ಮಾಡುತ್ತಿದ್ದೇವೆ.

ತಮ್ಮ ತಂದೆಯವರಿಗೆ ಪುತ್ತೂರಿನ ನಂಟು ಮತ್ತು ಇಲ್ಲಿನ ಜನ ಈ ವ್ಯವಹಾರದಲ್ಲಿ ತಮ್ಮ ಮೇಲೆ ತೋರಿಸಿದ ಪ್ರೀತಿ-ವಿಶ್ವಾಸಗಳ ‘ಚಿನ್ನದ ಹಾದಿ’ಯ ಬಗ್ಗೆ ‘ವಿದ್ಯಮಾನ’ಕ್ಕೆ ಸವಿವರವಾದ ಮಾಹಿತಿಯನ್ನು ಕೊಟ್ಟಿದ್ದಾರೆ ಸಂಸ್ಥೆಯ ಮಾಲಕರಾಗಿರುವ ಸಿದ್ಧನಾಥ್ ಮತ್ತು ಅವರ ಸಹೋದರಾಗಿರುವ ಸಹದೇವ್ ಮತ್ತು ಸನತ್ ಕುಮಾರ್. ಬನ್ನಿ ಪುತ್ತೂರಿನ ಚಿನ್ನದ ಉದ್ಯಮಕ್ಕೊಂದು ಹೊಸ ಮಾನವನ್ನು ತಂದುಕೊಟ್ಟ ‘ಮಾನಕ ಜ್ಯುವೆಲ್ಲರ್ಸ್’ನ ಸಾಧನೆಯ ಕಥೆಗೆ ಸ್ವಲ್ಪ ಕಿವಿಯಾಗೋಣ!

ತಮ್ಮ ದೊಡ್ಡಪ್ಪನವರ ಚಿನ್ನ ಪರಿಶುದ್ದೀಕರಣ  ಮಂಗಳೂರಿನಲ್ಲಿದ್ದ ಕಾರಣ ‘ಮಾನಕ ಜ್ಯುವೆಲ್ಲರ್ಸ್’ ಸಂಸ್ಥೆಯ ಮಾಲಕರಾದ ಸಿದ್ಧನಾಥ್ ಅವರ ತಂದೆಯವರಾದ ಶಂಕರ್ ವಿಠೋಬಾ ಕಂದಾಳೆ ಅಥವಾ ಶಂಕರ್ ವಿ.ಕೆ ಅವರು ಮಂಗಳೂರಿಗೆ ಬಂದು ಸೇರಿಕೊಳ್ತಾರೆ. ಆದರೆ ಅಲ್ಲಿಂದ ಅವರು ತಮ್ಮದೇ ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕೆಂಬ ಇಚ್ಛೆಯಿಂದ ವಿಜಯವಾಡ, ಕೊಟ್ಟಾಯಂ ಎಲ್ಲ ತಿರುಗಿ ಅಲ್ಲಿ ವ್ಯವಹಾರ ಕೈಹಿಡಿಯದೇ ಇದ್ದಾಗ ವಾಪಾಸು ಮಂಗಳೂರಿಗೆ ಬರ್ತಾರೆ. ಅಲ್ಲಿಂದ ನೇರವಾಗಿ ಸರಿಸುಮಾರು 1970ನೇ ಇಸವಿಯಲ್ಲಿ ಪುತ್ತೂರಿಗೆ ಬಂದಾಗ ಶಂಕರ್ ಅವರನ್ನು ಇಲ್ಲಿನ ಮಹಾಲಿಂಗೇಶ್ವರನೇ ಕರೆದನೋ ಎನ್ನುವಂತೆ ಅವರು ಪುತ್ತೂರಿನಲ್ಲೇ ನೆಲೆನಿಲ್ಲುವಂತ ಸನ್ನಿವೇಶವೊಂದು ಒದಗಿ ಬರುತ್ತದೆ.

ಅದು ಹೇಗಂದ್ರೆ, ಶಂಕರ್ ಅವರು ಪುತ್ತೂರಿಗೆ ಬಂದ ದಿನವೇ ಇಲ್ಲಿನ ಸ್ಥಳೀಯರೊಬ್ಬರು ಶಂಕರ್ ಅವರಿಗೆ ಬೆಂಬಲವಾಗಿ ನಿಲ್ತಾರೆ. ಅಂದ್ರೆ ಪ್ರಾರಂಭದಲ್ಲಿ ಇವರು ಮಾಡ್ತಿದ್ದಿದ್ದು ಚಿನ್ನದ ಶುದ್ಧೀಕರಣದ ಕೆಲಸ. ಈ ಕೆಲಸವನ್ನು ಮಾಡುವ ವೃತ್ತಿಪರರು ಪುತ್ತೂರಿನಲ್ಲಿ ಆ ಸಮಯದಲ್ಲಿ ಯಾರೂ ಇಲ್ಲದೇ ಇದ್ದ ಕಾರಣ ಇವರ ತಂದೆಯವರು ಪ್ರಾರಂಭಿಸಿದ ಇಲ್ಲಿನ ಕೋರ್ಟ್ ರೋಡಲ್ಲಿ ಪ್ರಾರಂಭಿಸಿದ ವರ್ಕ್ ಶಾಪೇ ಪುತ್ತೂರಿನಲ್ಲಿ ಪ್ರಪ್ರಥಮ ಚಿನ್ನದ  ಶುದ್ಧೀಕರಣ ಮಾಡುವ ಸಂಸ್ಥೆಯಾಗಿ ಪ್ರಾರಂಭಗೊಳ್ಳುತ್ತದೆ. ಹಾಗೆ ಪ್ರಾರಂಭದ ದಿನಗಳಲ್ಲಿ ಬಾಡಿಗೆ ಶಾಪ್ ನಲ್ಲಿ ಪ್ರಾರಂಭಗೊಂಡ ಈ ಚಿನ್ನದ ಶುದ್ಧೀಕರಣದ ವ್ಯವಹಾರ ಕಷ್ಟದ ಪರಿಸ್ಥಿತಿಯಲ್ಲೇ ಹಲವು ವರ್ಷಗಳ ಕಾಲ ಮುಂದುವರಿಯುತ್ತದೆ.ತಮ್ಮ ನಗುಮೊಗದ ಸೇವೆಯೊಂದಿಗೆ ಕಾಲಮಿತಿಯಲ್ಲಿ ಗ್ರಾಹಕರ ಇಚ್ಛೆಗೆ ತಕ್ಕಂತೆ ಚಿನ್ನದ ಆಭರಣಗಳನ್ನು ನೀಡುವ ಮೂಲಕ ಗ್ರಾಹಕರ ಮನಗೆದ್ದು ಕೇವಲ 18 ವರ್ಷಗಳಲ್ಲಿ ಅಪಾರ ಗ್ರಾಹಕ ಬಂಧುಗಳ ಪ್ರೀತಿಯನ್ನು ಇವರು ಗಳಿಸಿದ್ದಾರೆ.

‘ಹೀಗೆ 1992ನೇ ಇಸವಿವರೆಗೆ ಈ ಉದ್ಯಮವನ್ನೇ ನಾವು ಮುಂದುವರಿಸ್ತಾ ಬಂದೆವು. ಈ ಸಂದರ್ಭದಲ್ಲಿ ನಮಗೆ ನಾವು ನಡೆಸ್ತಿದ್ದ ಈ ಉದ್ಯಮ ಸ್ವಲ್ಪ ಡಲ್ ಆಗ್ತಿದೆ ಅನ್ನಿಸ್ತು. ಅಂದ್ರ ಚಿನ್ನದ ಶುದ್ಧೀಕರಣ  ಉದ್ಯಮದಲ್ಲಿ ನುರಿತ ಕೆಲಸಗಾರರ ಅವಶ್ಯಕತೆ ಇರ್ತದೆ, ಈ ಹಂತದಲ್ಲಿ ಸುಮಾರು ಜನ ಕೆಲಸಗಾರರು ಬಿಟ್ಟು ಹೋಗಿ ಮಾಡ್ತಿದ್ದ ಕಾರಣ ನಮಗೆ ಸ್ವಲ್ಪ ಸಮಸ್ಯೆ ಆಯ್ತು’ ಎಂಬ ವಿಚಾರವನ್ನು ಸಿದ್ಧನಾಥ್ ಅವರು ನೆನಪಿಸಿಕೊಳ್ತಾರೆ.

ಎಸ್ಸೆಸ್ಸೆಲ್ಸಿ ಮುಗಿಸಿ ಕುಟುಂಬಕ್ಕಾಗಿ ಚಿನ್ನದ ಉದ್ಯಮಕ್ಕೆ ಎಂಟ್ರಿ!

‘1992ರಲ್ಲಿ ನಾವು ನಡೆಸ್ತಿದ್ದ ಮುಂಚಿನ ವ್ಯವಹಾರದಲ್ಲಿ ಕೆಲಸಗಾರರ ತೊಂದರೆ ಕಾಣಿಸಿಕೊಂಡಾಗ ಕಲಿಕೆಯಲ್ಲಿ ಮುಂದಿದ್ರೂ ಅನಿವಾರ್ಯವಾಗಿ ಕುಟುಂಬಕ್ಕಾಗಿ ನಾನು ಓದನ್ನು ಮುಂದುವರಿಸಲಾಗದೇ ಈ ಉದ್ಯಮಕ್ಕೆ ಎಂಟ್ರಿ ಕೊಡಬೇಕಾಯ್ತು’ ಎಂದು ಸಿದ್ಧನಾಥ್ ಅವರು ತಾವು ಚಿನ್ನದ ಉದ್ಯಮ ಕ್ಷೇತ್ರವನ್ನು ಪ್ರವೇಶಿಸಿದ ಹಿನ್ನಲೆಯನ್ನು ಸ್ಮರಿಸಿಕೊಳ್ಳುತ್ತಾರೆ. ಹೀಗೆ ಒಮ್ಮೆ ಇಳಿಮುಖವಾಗಿದ್ದ ವ್ಯವಹಾರ ಸಿದ್ಧನಾಥ್ ಪ್ರವೇಶದ ಬಳಿಕ ಪರಿಶ್ರಮದಿಂದ 2000ನೇ ಇಸವಿಯಲ್ಲಿ, ಅಂದರೆ 8 ವರ್ಷಗಳಲ್ಲಿ ಮತ್ತೆ ‘ಪೀಕ್’ ಮಟ್ಟಕ್ಕೆ ಮುಟ್ಟುವಂತಾಯ್ತು ಎಂಬುದನ್ನು ಅವರು ನೆನಪಿಸಿಕೊಳ್ತಾರೆ.

ಮಾನಕ’ ಪ್ರಾರಂಭಗೊಂಡದ್ದೇ ಒಂದು ರೋಚಕ ಕಥೆ!

ಹೌದು, ಈ ಭಾಗದ ಜ್ಯುವೆಲ್ಲರಿಯವರಿಗೆ ಚಿನ್ನಗಳನ್ನು ಶುದ್ಧೀಕರಿಸಿ ಕೊಡುವ ಮತ್ತು ಆಭರಣಗಳ ತಯಾರಿಗಿಂತ ಮುಂಚಿನ ಪ್ರಾಸೆಸ್ ಗಳನ್ನು ಮಾಡಿಕೊಡುವ ವ್ಯವಹಾರ ಚೆನ್ನಾಗಿ ನಡೆಯುತ್ತಿದ್ದ ಸಮಯದಲ್ಲೇ ಸಿದ್ಧನಾಥ್ ಅವರು ಚಿನ್ನೋದ್ಯಮ ಮಳಿಗೆಯನ್ನು ಪ್ರಾರಂಭಿಸುವ ಯೋಚನೆಯೊಂದನ್ನು ಮಾಡ್ತಾರೆ. ಚಿನ್ನದ ರಿಟೇಲ್ ವ್ಯವಹಾರಕ್ಕೆ ಇಳಿಯುವುದೋ ಬೇಡವೋ ಎಂಬ ಗೊಂದಲದಲ್ಲೇ ಫೈನಲೀ 2005ರಲ್ಲಿ ಇವರು ಚಿನ್ನದ ರಿಟೇಲ್ ವ್ಯವಹಾರಕ್ಕೆ ಕೈ ಹಾಕುತ್ತಾರೆ! ಹಾಗೆ ತಂದೆಯ ಸಮರ್ಥ ಮಾರ್ಗದರ್ಶನದಲ್ಲಿ ಮತ್ತು ಮುಂದಾಳತ್ವದಲ್ಲಿ ‘ಮಾನಕ’ ಎಂಬ ಹೆಸರಿನಲ್ಲಿ ಪ್ರಾರಂಭಗೊಂಡ ಚಿನ್ನೋದ್ಯಮ ಮಳಿಗೆಯ ವ್ಯವಹಾರ ಇವತ್ತು ಪುತ್ತೂರು ಮಾತ್ರವಲ್ಲದೇ ರಾಜ್ಯಾದ್ಯಂತ ಹೆಸರು ಮಾಡುತ್ತಿರುವ ಉದ್ಯಮವಾಗಿ ಬೆಳೆದು ನಿಂತಿರುವುದು ಹೆಮ್ಮೆಯ ವಿಚಾರವೇ ಸರಿ.

ಗ್ರಾಹಕರೊಂದಿಗಿನ ಮುಕ್ತ ವ್ಯವಹಾರವೇ ‘ಮಾನಕ’ದ ಸ್ಪೆಷಾಲಿಟಿ!

‘ಹಿಂದಿನ ವ್ಯವಹಾರದಲ್ಲೇ ನಮಗೆ ಸಾಕಷ್ಟು ಗ್ರಾಹಕ ಸಂಪರ್ಕವಿದ್ದ ಕಾರಣ ನಾವು ‘ಮಾನಕ’ ಪ್ರಾರಂಭಿಸಿದಾಗ ನಮಗೆ ಗ್ರಾಹಕ ಸಂಪರ್ಕ ಬೆಳೆಸಿಕೊಳ್ಳುವುದು ಇನ್ನಷ್ಟು ಸುಲಭವಾಯಿತು. ಗ್ರಾಹಕರೊಂದಿಗೆ ನಾವು ಮುಕ್ತವಾಗಿ ಮಾತನಾಡುವುದೂ ಸಹ ನಮ್ಮ ವ್ಯವಹಾರ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿದೆ ಎಂಬುದನ್ನು ಸಿದ್ಧನಾಥ್ ಸಹೋದರರು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ. ಕೇವಲ ಒಂದೇ ಮಳಿಗೆಯನ್ನು ಹೊಂದಿದ್ದರೂ ಪುತ್ತೂರು, ವಿಟ್ಲ, ಉಪ್ಪಿನಂಗಡಿ, ಸುಳ್ಯ, ಬೆಳ್ಳಾರೆ ಭಾಗಗಳಿಂದ ಮಾತ್ರವಲ್ಲದೇ ಕರಾವಳಿ ಮತ್ತು ಮಲೆನಾಡಿನ ಭಾಗಗಳ ಗ್ರಾಹಕವರ್ಗವನ್ನು ಹೊಂದಿರುವುದು ‘ಮಾನಕ ಜ್ಯುವೆಲ್ಲರ್ಸ್’ನ ಒಂದು ವಿಶೇಷತೆಯೇ ಸರಿ!

ಕಾಂಪಿಟೇಶನ್ ಎದುರಿಸಿ ವ್ಯವಹಾರದಲ್ಲಿ ಗೆದ್ದ ‘ಮಾನಕ’!

ಪುತ್ತೂರಿನಲ್ಲಿರುವಷ್ಟು ಚಿನ್ನದ ಮಳಿಗೆಗಳು ನಮ್ಮ ಕರಾವಳಿ ಭಾಗದಲ್ಲಿ ಬೇರೆಲ್ಲೂ ಕಾಣಸಿಗುವುದಿಲ್ಲ. ಮಾನಕ ಪ್ರಾರಂಭಗೊಂಡ ಸಂದರ್ಭದಲ್ಲೇ ಪುತ್ತೂರಿನಲ್ಲಿ 70ಕ್ಕೂ ಅಧಿಕ ಚಿನ್ನದ ಮಳಿಗಗೆಳಿದ್ದವು, ಇವೆಲ್ಲದರ ನಡುವೆ ಮಾನಕ ತನ್ನ ಗ್ರಾಹಕ ಸೇವೆ, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಿಂದ ಪ್ರಾರಂಭಗೊಂಡ ಕೆಲವೇ ವರ್ಷಗಳಲ್ಲಿ ಈ ಉದ್ಯಮದಲ್ಲಿ ಹೆಚ್ಚಿನ ಹೆಸರು ಮಾಡಲು ಸಾಧ್ಯವಾಯಿತು. ಸಂಸ್ಥೆಯ ಮಾಲಕರೇ ನೇರವಾಗಿ ಗ್ರಾಹಕರೊಂದಿಗೆ ವ್ಯವಹರಿಸಿ ಗುಣಮಟ್ಟ ಮತ್ತು ಪರಿಶುದ್ಧತೆಯನ್ನು ಖಾತ್ರಿ ಮಾಡಿಕೊಳ್ಳುವುದೂ ಸಹ ಸಂಸ್ಥೆಯ ಯಶಸ್ಸಿಗೆ ಇನ್ನೊಂದು ಕಾರಣವಾಗಿದೆ.

ಮಾನಕ’ವೆಂಬ ಹೊಸ ಪ್ರಯತ್ನಕ್ಕೆ ಪ್ರೋತ್ಸಾಹದ ಸಂಜೀವನಿ ನೀಡಿದ ‘ಸಂಜೀವ ಶೆಟ್ರು’!

ಪುತ್ತೂರಿನಲ್ಲಿ ಪ್ರಾರಂಭಗೊಂಡು ಕರಾವಳಿಯಾದ್ಯಂತ ಜವಳಿ ಉದ್ಯಮದಲ್ಲಿ ತನ್ನದೇ ಖ್ಯಾತಿಯನ್ನು ಹೊಂದಿರುವ ಸಂಜೀವ ಶೆಟ್ಟಿ ವಸ್ತ್ರ ಮಳಿಗೆಯ ಹೆಸರನ್ನು ಕೇಳದವರು ಯಾರು? ಇದನ್ನು ಸ್ಥಾಪಿಸಿದ ಸಂಜೀವ ಶೆಟ್ರಿಗೂ ‘ಮಾನಕ ಜ್ಯುವೆಲ್ಲರ್ಸ್’ಗೂ ಒಂದು ಅವಿನಾಭಾವ ಸಂಬಂಧವಿದೆ ಎಂದರೆ ನಂಬಲೇಬೇಕು! ಅಂದು ಮಾನಕ ಜ್ಯುವೆಲ್ಲರ್ಸ್ ಉದ್ಘಾಟನೆಗೆ ಅತಿಥಿಯಾಗಿ ಸಂಜೀವ ಶೆಟ್ರನ್ನು ಆಹ್ವಾನಿಸಿದ್ದ ಸಂದರ್ಭದಲ್ಲಿ ಅವರು ಸಂತೋಷದಿಂದ್ಲೇ ಆಗಮಿಸಿ ಹೊಸ ಉದ್ಯಮಕ್ಕೆ ಶುಭ ಹಾರೈಸಿದ್ದರು, ಆ ಬಳಿಕ ಪ್ರತೀವರ್ಷ ಮಾನಕಕ್ಕೆ ಬಂದು ಚಿನ್ನವನ್ನು ಖರೀದಿಸಿ ಹೋಗುವ ಪರಿಪಾಠವನ್ನು ಬೆಳೆಸಿಕೊಂಡಿದ್ದರು. ಅದರಂತೆ ಇದೀಗ ಮಾನಕ ಜ್ಯುವೆಲ್ಲರ್ಸ್ ನ ನೂತನ ಸುಸಜ್ಜಿತ ಮಳಿಗೆಯ ಉದ್ಘಾಟನೆಗೆ ಸಂಜೀವ ಶೆಟ್ರ ಪುತ್ರ ಮತ್ತು ‘ಸಂಜೀವ ಶೆಟ್ಟಿ’ ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಗಿರಿಧರ ಶೆಟ್ಟಿ ಅವರನ್ನು ಆಹ್ವಾನಿಸಲಾಗಿದೆ ಆ ಮೂಲಕ ಒಂದು ತಲೆಮಾರಿನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವುದು ವಿಶೇಷವಾಗಿದೆ.

ತಂದೆಯ ಮಾರ್ಗದರ್ಶನ – ತಾಯಿಯ ಹೆಸರು – ತ್ರಿವಳಿ ಸಹೋದರರ ಪರಿಶ್ರಮವೇ ‘ಮಾನಕ’ದ ಯಶಸ್ಸಿನ ಗುಟ್ಟು!

ಚಿನ್ನ ಪರಿಶುದ್ಧಗೊಳಿಸುವ ವ್ಯವಹಾರದಿಂದ ಚಿನ್ನಾಭರಣಗಳ ರಿಟೇಲ್ ವ್ಯವಹಾರಕ್ಕೆ ಇಳಿದ ಸಂದರ್ಭದಲ್ಲಿ ಸಿದ್ಧನಾಥ್ ಅವರ ತಂದೆ ನೀಡಿದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಇವರಿಗೆ ಎಂದೆಂದೂ ಬೆನ್ನೆಲುಬಾಗಿ ನಿಂತಿದೆ. ಹಾಗೆಯೇ ತಮ್ಮ ತಾಯಿಯ ಹೆಸರಿನಲ್ಲಿ ಪ್ರಾರಂಭಿಸಿದ ರಿಟೇಲ್ ಉದ್ಯಮ ಇಂದು ಇವರ ಕೈಹಿಡಿದು ಮುನ್ನಡೆಸುತ್ತಿದೆ. ಸಿದ್ಧನಾಥ್-ಸಹದೇವ್ ಮತ್ತು ಸನತ್ ಕುಮಾರ್ ಎಂಬ ತ್ರಿವಳಿ ಸಹೋದರರ ಒಮ್ಮತದ ಪರಿಶ್ರಮ ಅವರನ್ನು ಇಂದು ಪುತ್ತೂರಿನ ಸ್ವರ್ಣೋದ್ಯಮದಲ್ಲಿ ಒಂದು ಉನ್ನತವಾದ ಸ್ಥಾನ-ಮಾನಗಳನ್ನು ಹೊಂದುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

ಇಂದಿನ ಕಾಲಮಾನ ಮತ್ತು ಹೊಸ ಗ್ರಾಹಕವರ್ಗದ ಅಭಿರುಚಿ ಮತ್ತು ಅಗತ್ಯತೆಗಳಿಗೆ ತಕ್ಕಂತೆ ವಿಸ್ತೃತವಾಗಿರುವ ಸುಸಜ್ಜಿತ ಮಳಿಗೆಯನ್ನು ಪ್ರಾರಂಭಿಸಿದರೂ ತಮ್ಮ ಗ್ರಾಹಕ ವ್ಯವಹಾರ ವಿಧಾನದಲ್ಲಿ ಯಾವುದೇ ಬದಲಾವಣೆಗಳಿಲ್ಲ ಮತ್ತು ನಮ್ಮ ಗ್ರಾಹಕರ ಚಿನ್ನಾಭರಣ ಅಗತ್ಯತೆಗಳನ್ನು ನಾವೇ ಖುದ್ದಾಗಿ ವಿಚಾರಿಸಿ ಅವರ ಮನಃತೃಪ್ತಿಪಡಿಸುವಂತ ಗ್ರಾಹಕ ಸೇವೆಯನ್ನು ನೀಡುತ್ತೇವೆ ಎಂಬ ಭರವಸೆಯನ್ನು ಸಂಸ್ಥೆಯ ಮಾಲಕರು ಇದೇ ಸಂದರ್ಭದಲ್ಲಿ ನೀಡಲು ಮರೆಯುವುದಿಲ್ಲ. ನೂತನವಾಗಿ ಪ್ರಾರಂಭಗೊಳ್ಳಲಿರುವ ‘ಮಾನಕ ಜ್ಯುವೆಲ್ಲರ್ಸ್’ನ ಸರ್ವಸುಸಜ್ಜಿತ ಮಳಿಗೆ ಗ್ರಾಹಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿ ಇವರಿಗೆ ಈ ಉದ್ಯಮದಲ್ಲಿ ಇನ್ನಷ್ಟು ಯಶಸ್ಸು ಸಿಗುವಂತೆ ಮಹಾಲಿಂಗೇಶ್ವರ ದೇವರು ಅನುಗ್ರಹಿಸಲಿ ಎಂಬ ಶುಭಹಾರೈಕೆಗಳು ನಮ್ಮದು.

Recent News


Leave a Comment: