ಮೊಬೈಲ್‌ ಬಳಕೆದಾರರೇ ಗಮನಿಸಿ : ನಿಮ್ಮ ಫೋನ್ ನಲ್ಲಿರುವ ಈ ಸಣ್ಣ ರಂಧ್ರದ ಉಪಯೋಗವೇನು ಗೊತ್ತಾ?

ಸುದ್ದಿಗಳು News

Posted by vidyamaana on 2024-07-25 13:38:46 |

Share: | | | | |


ಮೊಬೈಲ್‌ ಬಳಕೆದಾರರೇ ಗಮನಿಸಿ : ನಿಮ್ಮ ಫೋನ್ ನಲ್ಲಿರುವ ಈ ಸಣ್ಣ ರಂಧ್ರದ ಉಪಯೋಗವೇನು ಗೊತ್ತಾ?

      ನಾವೆಲ್ಲರೂ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳನ್ನು ಬಳಸುತ್ತೇವೆ, ಇದು ನಮ್ಮ ಜೀವನದ ಪ್ರಮುಖ ಭಾಗವಾಗಿದೆ, ಆದರೆ ನಿಮ್ಮ ಸ್ಮಾರ್ಟ್ಫೋನ್ ಅಡಿಯಲ್ಲಿ ಸಣ್ಣ ರಂಧ್ರವನ್ನು ನೀವು ಎಂದಾದರೂ ಗಮನಿಸಿದ್ದೀರಾ, ಆದರೆ ಅದು ಏನು ಬಳಸುತ್ತದೆ ಎಂಬುದರ ಬಗ್ಗೆ ನೀವು ಯೋಚಿಸಿದ್ದೀರಾ, ಜನರು ಇದನ್ನು ಮೈಕ್ರೊಫೋನ್ ಎಂದು ಪರಿಗಣಿಸುತ್ತಾರೆ, ಇದನ್ನು ಮೈಕ್ರೊಫೋನ್ ಗ್ರಿಲ್ ಎಂದು ಕರೆಯಲಾಗುತ್ತದೆ, ಇದು ನಿರ್ದಿಷ್ಟವಾಗಿ ಶಬ್ದ ರದ್ದುಗೊಳಿಸುವ ಮೈಕ್ರೊಫೋನ್ ಗಳನ್ನು ಒಳಗೊಂಡಿದೆ.ಶಬ್ದವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಫೋನ್ ಕರೆಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ, ಅದರ ಬಗ್ಗೆ ಸಂಪೂರ್ಣ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ

ಇದು ಹೇಗೆ ಕಾರ್ಯನಿರ್ವಹಿಸುತ್ತದೆ

ಶಬ್ದ ರದ್ದುಗೊಳಿಸುವ ಮೈಕ್ರೊಫೋನ್ ನಿಮ್ಮ ಫೋನ್ನ ಪ್ರಾಥಮಿಕ ಮೈಕ್ರೊಫೋನ್ನೊಂದಿಗೆ ಕಾರ್ಯನಿರ್ವಹಿಸುತ್ತದೆ, ಇದು ಸಾಮಾನ್ಯವಾಗಿ ಮುಂಭಾಗ ಅಥವಾ ಮೇಲ್ಭಾಗದಲ್ಲಿದೆ. ಕರೆ ಸಮಯದಲ್ಲಿ, ಮುಖ್ಯ ಮೈಕ್ರೊಫೋನ್ ನಿಮ್ಮ ಧ್ವನಿಯನ್ನು ಸೆರೆಹಿಡಿಯುತ್ತದೆ, ಶಬ್ದ ರದ್ದುಗೊಳಿಸುವ ಮೈಕ್ರೊಫೋನ್ ಸುತ್ತಮುತ್ತಲಿನ ಶಬ್ದಗಳನ್ನು ತೆಗೆದುಕೊಳ್ಳುತ್ತದೆ.

ಮೈಕ್ರೊಫೋನ್ ಗ್ರಿಲ್ ನ ಪ್ರಾಮುಖ್ಯತೆ

ಮೈಕ್ರೊಫೋನ್ ಗ್ರಿಲ್ ಶಬ್ದವನ್ನು ತೆಗೆದುಹಾಕುವುದು ಅಥವಾ ತಿರುಚುವುದು ನಿಮ್ಮ ಕರೆಯ ಗುಣಮಟ್ಟದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಈ ಘಟಕವಿಲ್ಲದೆ, ಹಿನ್ನೆಲೆ ಶಬ್ದಗಳು ಹೆಚ್ಚು ಸ್ಪಷ್ಟವಾಗುತ್ತವೆ, ಸಂವಹನವನ್ನು ಕಷ್ಟಕರವಾಗಿಸುತ್ತದೆ.ಎಲ್ಲೆಲ್ಲೂ ಇಲ್ಲ

ಎಲ್ಲಾ ಸ್ಮಾರ್ಟ್ಫೋನ್ಗಳು ಶಬ್ದ-ರದ್ದುಗೊಳಿಸುವ ಮೈಕ್ರೊಫೋನ್ ಅನ್ನು ಹೊಂದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ನಿಮ್ಮ ಸಾಧನವು ಈ ವೈಶಿಷ್ಟ್ಯವನ್ನು ಹೊಂದಿದೆಯೇ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಫೋನ್ನ ಕೈಪಿಡಿಯನ್ನು ನೀವು ನೋಡಿಕೊಳ್ಳಬಹುದು.

 Share: | | | | |


ನಿವೃತ್ತ ಶಿಕ್ಷಕ ಚಂದ್ರಶೇಖರ ಕುಂಜತ್ತಾಯ ನಿಧನ

Posted by Vidyamaana on 2024-05-23 09:53:42 |

Share: | | | | |


ನಿವೃತ್ತ ಶಿಕ್ಷಕ  ಚಂದ್ರಶೇಖರ ಕುಂಜತ್ತಾಯ ನಿಧನ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ಚಂದ್ರಶೇಖರ ಕುಂಜತ್ತಾಯ ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು

ಪ್ಯಾನ್-ಆಧಾರ್ ಲಿಂಕ್ ಗೋಲ್ಮಾಲ್! ಪ್ಯಾನ್ ಕಾರ್ಡ್ ನಿಷ್ಕ್ರಿಯದ ಭಯಭಿತ್ತಿ ಸೈಬರ್ ಕೇಂದ್ರಗಳಿಂದ ಹಗಲುದರೋಡೆ

Posted by Vidyamaana on 2023-03-25 05:57:07 |

Share: | | | | |


ಪ್ಯಾನ್-ಆಧಾರ್ ಲಿಂಕ್ ಗೋಲ್ಮಾಲ್!  ಪ್ಯಾನ್ ಕಾರ್ಡ್ ನಿಷ್ಕ್ರಿಯದ ಭಯಭಿತ್ತಿ ಸೈಬರ್ ಕೇಂದ್ರಗಳಿಂದ ಹಗಲುದರೋಡೆ

ಹೊಸದಿಲ್ಲಿ: ಆಧಾರ್ ಮತ್ತು ಪ್ಯಾನ್ ಕಾರ್ಡ್ ನಂಬರ್ ಅನ್ನು ಜೋಡಣೆ ಮಾಡಲು ಮಾ.31 ಕಡೆಯ ದಿನವಾಗಿದೆ. ಗಡುವಿಗೆ ಕೆಲವೇ ದಿನಗಳಷ್ಟೇ ಜೋಡಣೆ ಮಾಡದಿದ್ದರೆ ಏ.1ರಿಂದ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.

ಈ ಆದೇಶದ ಲಾಭ ಪಡೆಯುತ್ತಿರುವ ಸೈಬರ್ ಸೆಂಟರ್ ಗಳು , ಗ್ರಾಹಕರಿಂದ ಹಗಲು ದರೋಡೆಗಿಳಿದಿವೆ. ಗ್ರಾಹಕರು ಬಂದೊಡನೆ ಆಧಾರ್ – ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ಎಂದು ಪರಿಶೀಲನೆಗೆ ಮುಂದಾಗುತ್ತಾರೆ. ಆಗಿದ್ದರೂ, ಆಗದೇ ಇದ್ದರೂ – ಲಿಂಕ್ ಆಗಿಲ್ಲ ಎಂದು ಗ್ರಾಹಕರಿಂದ 1300 ರೂ. ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆದಾಯ ತೆರಿಗೆ ಕಾಯಿದೆ 1961ರ ಪ್ರಕಾರ, ಪ್ಯಾನ್ ಕಾರ್ಡ್ ಹೊಂದಿರುವ ಎಲ್ಲರೂ ತಮ್ಮ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯ, ಒಂದು ವೇಳೆ ಲಿಂಕ್ ಮಾಡದೇ ಹೋದರೆ, ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಆಗ ಅದನ್ನು ವಿವಿಧ ಉದ್ದೇಶಗಳಿಗೆ ಬಳಸಲು ಸಾಧ್ಯವಾಗುವುದಿಲ್ಲ. ಬ್ಯಾಂಕ್ ವ್ಯವಹಾರಗಳೂ ಸೇರಿದಂತೆ ವಿವಿಧಡ ಈಗ ಪ್ಯಾನ್ ಬಳಕೆ ಕಡ್ಡಾಯವಾಗಿದೆ.

ಪ್ಯಾನ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ಗಡುವನ್ನು ಈ ಹಿಂದೆ ಹಲವಾರು ಬಾರಿ -ಪ್ಯಾನ್ ಲಿಂಕ್ನ ಸ್ಟೇಟಸ್ ಪರಿಶೀಲಿಸಬಹುದು. ವಿಸ್ತರಿಸಲಾಗಿತ್ತು. ಈಗ ಕೊನೆಯದಾಗಿ ಮಾರ್ಚ್ 31ರ ಗಡುವನ್ನು ಆದಾಯ ತೆರಿಗೆ ಇಲಾಖೆ ನೀಡಿದೆ.

ಲಿಂಕ್ ಆಗಿದೆಯೇ ಎಂದು ಚೆಕ್ ಮಾಡುವುದು ಹೇಗೆ?: 

ಆದಾಯ ತಂಗ ಇಲಾಖೆಯ ಪೋರ್ಟಲ್ https://eportal.incometax gov.in/ ಜಾಲತಾಣಕ್ಕೆ ಭೇಟಿ ನೀಡಿ, ಆಧಾರ್ ಹಾಗೂ ಪ್ಯಾನ್ ಸಂಖ್ಯೆಯನ್ನು ನಮೂದಿಸಿ ಲಿಂಕ್ ಆಗಿದೆಯೇ ಎಂದು ಚೆಕ್ ಮಾಡಬಹುದು.

ಅದೇ ರೀತಿ, ಈ ವೆಬ್, ವಿಳಾಸಕ್ಕೂ ತೆರಳಿ https://www.pan.utitsl.com/ ಆಧಾರ್ – ಪ್ಯಾನ್ ಲಿಂಕಿನ ಸ್ಟೇಟಸ್ ಪರಿಶೀಲಿಸಬಹುದು.

ಎಸ್ಎಂಎಸ್ ಮೂಲಕವೂ ಲಿಂಕ್ ಮಾಡಿ!

1.) ಮೊದಲು, UIDPAN ಫಾರ್ಮ್ಯಾಟ್ನಲ್ಲಿ ಸಂದೇಶವನ್ನು ಟೈಪ್ ಮಾಡಿ, ಅಂದರೆ, UIDPAN (ಸ್ಪೇಸ್) 12-ಅಂಕಿಯ ಆಧಾರ್ ನೊಂದಿಗೆ ನಿಮ್ಮ ಪ್ಯಾನ್ ಅನ್ನು ಲಿಂಕ್ ಸಂಖ್ಯೆ (ಸ್ಪೇಸ್) 10-ಅಂಕಿಯ PAN ಸಂಖ್ಯೆ.

2. )ನಿಮ್ಮ ನೋಂದಾಯಿತ ಸಂಖ್ಯೆಯಿಂದ 567678 ಅಥವಾ 56161 ಗೆ ಮಾತ್ರ SMS ಕಳುಹಿಸಿ.

3.) ಬಳಿಕ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಕುರಿತು ನೀವು ದೃಢೀಕರಣ ಸಂದೇಶವನ್ನು ಪಡೆಯುವಿರಿ.

.ಲಿಂಕ್ ಮಾಡಲು ಎಷ್ಟು ಶುಲ್ಕ?

ನೀವು ಇನ್ನೂ ನಿಮ್ಮ ಆಧಾರ್ ಮಾಡದೇ ಇದ್ದಲ್ಲಿ ಈಗ ನೀವು www.inco- metax.gov.in ಜಾಲತಾಣಕ್ಕೆ ಹೋಗಿ, ಅಲ್ಲಿ ಲಿಂಕ್ ಆಧಾರ್ ಎನ್ನುವ ಆಯ್ಕೆ ಯನ್ನು ಕ್ಲಿಕ್ ಮಾಡಿದರೆ, ಮಾಹಿತಿ ತೆರೆದುಕೊಳ್ಳುತ್ತದೆ. 1,000 ರೂ. ಶುಲ್ಕವನ್ನು ಪಡೆಯುವಿರಿ. ಪಾವತಿಸಿ ಲಿಂಕ್ ಮಾಡಬಹುದು.

ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ನೀಡಿದ ಉಪ್ಪಿನಂಗಡಿ ಮೂಲದ ಮದ್ರಸಾ ಶಿಕ್ಷಕ ಹಮೀದ್ ಬಂಧನ

Posted by Vidyamaana on 2023-06-16 08:23:17 |

Share: | | | | |


ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ನೀಡಿದ ಉಪ್ಪಿನಂಗಡಿ ಮೂಲದ ಮದ್ರಸಾ ಶಿಕ್ಷಕ ಹಮೀದ್ ಬಂಧನ

ಕಾಸರಗೋಡು; ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪದಡಿ ಉಪ್ಪಿನಂಗಡಿ ಮೂಲದ ಮದ್ರಸಾ ಶಿಕ್ಷಕನನ್ನು ಬಂಧಿಸಲಾಗಿದೆ.

ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಇಳಂತಿಲ ಹೌಸ್ ನಿವಾಸಿ ಅಬ್ದುಲ್ ಹಮೀದ್ (55) ಬಂಧಿತ ಆರೋಪಿ, ಕಾಸರಗೋಡಿನ ಮದ್ರಸಾದಲ್ಲಿ ಶಿಕ್ಷಕನಾಗಿದ್ದ ಅಬ್ದುಲ್ ಹಮೀದ್ ಏಳು ಮತ್ತು ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಐವರು ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ಎಂದು

ಆದೂರು ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರತ್ತೂರು ನ್ಯೂ ಮಾನಕದಲ್ಲಿ ದೀಪಾವಳಿ ಬಿಗ್ ಆಫರ್

Posted by Vidyamaana on 2023-11-13 07:45:09 |

Share: | | | | |


ಪ್ರತ್ತೂರು ನ್ಯೂ ಮಾನಕದಲ್ಲಿ ದೀಪಾವಳಿ ಬಿಗ್ ಆಫರ್

ಪುತ್ತೂರು; ಪುತ್ತೂರಿನ ಜನರ ಮನಗೆದ್ದಿರುವ ಮಾನಕ ಜುವೆಲ್ಲರ್‌ನ ಸಹ ಸಂಸ್ಥೆ ಸಿಪಿಸಿ ಪ್ಲಾಝಾದ ಎದುರಿನ ಎಂ.ಎಸ್.ಕಾಂಪ್ಲೆಕ್ಸ್‌ ನಲ್ಲಿ ನೂತನವಾಗಿ ಆರಂಭವಾಗಿರುವ ನ್ಯೂ ಮಾನಕ ಜುವೆಲ್ಲರ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಿಗ್ ಆಫರ್ ನೊಂದಿಗೆ ಆಕರ್ಷಕ ಕರಿಮಣಿ

ಮೇಳ ನಡೆಯಲಿದೆ. ನ.13 ರಂದು ಈ ಮೇಳ ಆರಂಭಗೊಳ್ಳಲಿದ್ದು ನ.14 ರ ತನಕ ಇರಲಿದೆ, ವಿವಿಧ ವಿನ್ಯಾಸದ ಆಕರ್ಷಕ ಕರಿಮಣಿಗಾಗಿ ಈಗಾಗಲೇ ಹೆಸರುವಾಸಿಯಾಗಿರುವ ಮಾನಕ ಜ್ಯುವೆಲ್ಲರ್ ಈ ವರ್ಷದ ದೀಪಾವಳಿಗೆ ಗ್ರಾಹಕರ ಮನದಿಚ್ಛೆಯಂತೆ ನವನವೀನ ಕರಿಮಣಿ ಸರಗಳನ್ನು ಮೇಳದಲ್ಲಿ ಪ್ರದರ್ಶನ ಮಾಡಲಿದೆ. ಗ್ರಾಹಕರ ಅನುಕೂಲಕ್ಕಾಗಿ ಕರಿಮಣಿ ಖರೀದಿಗೆ ಪ್ರತಿ ಗ್ರಾಂ ಮೇಲೆ  ರೂ.100 ರಿಯಾಯಿತಿ ಕೂಡ ದೊರೆಯಲಿದೆ. ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳುವ ಮೂಲಕ ಈ ವರ್ಷದ ದೀಪಾವಳಿಯನ್ನು ಮಾನಕದ ವಜ್ರಾಭರಣಗಳ ಜೊತೆಯಲ್ಲಿ ಸಂಭ್ರಮಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮೂಗರ ಭಾಷೆ ಗೇಲಿ ಮಾಡಿ ಅಪಹಾಸ್ಯ: ರೇಡಿಯೊ ಜಾಕಿ ಸೇರಿ ಇಬ್ಬರ ಬಂಧನ

Posted by Vidyamaana on 2024-07-27 01:04:24 |

Share: | | | | |


ಮೂಗರ ಭಾಷೆ ಗೇಲಿ ಮಾಡಿ ಅಪಹಾಸ್ಯ: ರೇಡಿಯೊ ಜಾಕಿ ಸೇರಿ ಇಬ್ಬರ ಬಂಧನ

ಬೆಂಗಳೂರು: ಮೂಕ ಸನ್ನೆ ಮೂಲಕ ಮಾತು ಬಾರದವರಿಗೆ ಅವಮಾನ ಮಾಡಿದ ರೇಡಿಯೋ ಜಾಕಿ ಸೇರಿ ಇಬ್ಬರನ್ನು ಸಿಸಿಬಿ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರೋಹನ್ ಕಾರಿಯಪ್ಪ ಮತ್ತು ಶರವಣ ಭಟ್ಟಾಚಾರ್ಯ ಎಂದು ಗುರುತಿಸಲಾಗಿದೆ. ಆರೋಪಿಗಳು ಕಿವುಡ ಮತ್ತು ಮೂಗರ ಭಾಷೆಯನ್ನು ಅಶ್ಲೀಲ ಮೂಕ ಸನ್ನೆ ಮೂಲಕ ಅವಮಾನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾನಕ ಜ್ಯುವೆಲ್ಲರ್ಸ್ ನ ಅತ್ಯಾಧುನಿಕ-ಸರ್ವಸುಸಜ್ಜಿತ- ವಿಸ್ತಾರ ಸ್ವರೂಪದ ಹೊಸ ಶೋರೂಂ ಮೇ27ರಂದು ಶುಭಾರಂಭ

Posted by Vidyamaana on 2023-05-26 00:42:54 |

Share: | | | | |


ಮಾನಕ ಜ್ಯುವೆಲ್ಲರ್ಸ್ ನ ಅತ್ಯಾಧುನಿಕ-ಸರ್ವಸುಸಜ್ಜಿತ- ವಿಸ್ತಾರ ಸ್ವರೂಪದ ಹೊಸ ಶೋರೂಂ ಮೇ27ರಂದು ಶುಭಾರಂಭ


ಇವರ ಕುಟುಂಬವೇ ಕಳೆದ ಹಲವಾರು ದಶಕಗಳಿಂದ ಚಿನ್ನದ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಕುಟುಂಬ. ಚಿನ್ನ ಆಭರಣವಾಗಿ ರೂಪುಗೊಳ್ಳುವ ಮೊದಲು ಪರಿಶುದ್ಧತೆಗೊಳಪಡುವ ಒಂದು ಸುದೀರ್ಘ ಪ್ರಾಸೆಸ್ ಇದ್ದು ಈ ಕ್ಲಿಷ್ಟಕರ ಮತ್ತು ಅಷ್ಟೇ ವಿಶ್ವಾಸಾರ್ಹತೆಯನ್ನು ಬಯಸುವ ಒಂದು ಕೆಲಸವನ್ನು ಹಲವಾರು ವರ್ಷಗಳ ಕಾಲ ನಿಷ್ಠೆಯಿಂದ ಮಾಡಿಕೊಂಡು ಬಂದಂತಹ ಪರಿವಾರದ ಹಿನ್ನಲೆ ಆ ಬಳಿಕ ಇಂದಿಗೆ 17 ವರ್ಷಗಳ ಹಿಂದೆ ಚಿನ್ನಾಭರಣಗಳ ರಿಟೇಲ್ ವ್ಯವಹಾರಕ್ಕೆ ಕೈಹಾಕಿ ಅದರಲ್ಲಿ ಇಂದಿನವರೆಗೂ ಗ್ರಾಹಕರ ನಂಬಿಕೆಗೆ ಕುಂದು ಬರದ ರೀತಿಯಲ್ಲಿ ವ್ಯವಹಾರವನ್ನು ನಡೆಸಿಕೊಂಡು ಬಂದಿರುವ ಪುತ್ತೂರಿನ ಹೆಸರಾಂತ ‘ಮಾನಕ ಜ್ಯುವೆಲ್ಲರ್’ ಇದೀಗ ತನ್ನ ವ್ಯವಹಾರ ವ್ಯಾಪ್ತಿಯನ್ನು ವಿಸ್ತರಿಕೊಳ್ಳುವ ಪ್ರಯತ್ನದಲ್ಲಿ ಇದೇ ಮೇ 27ರಂದು ಪುತ್ತೂರು ಮುಖ್ಯರಸ್ತೆಯಲ್ಲಿರುವ ಸಿಪಿಸಿ ಪ್ಲಾಝಾದ ಎದುರುಗಡೆಯಿರುವ ಎಂ.ಎಸ್. ಕಾಂಪ್ಲೆಕ್ಸ್ ನ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ‘ಮಾನಕ’ ಬೆಳೆದುಬಂದ ರೀತಿಯ ಬಗ್ಗೆ ಮತ್ತು ಅವರ ವ್ಯವಹಾರ ವೈಶಿಷ್ಟ್ಯಗಳ ಮೇಲೆ ಬೆಳಕು ಚೆಲ್ಲುವ ವಿಶೇಷ ಪ್ರಯತ್ನ ಈ ಲೇಖನ ಮೂಲಕ ಮಾಡುತ್ತಿದ್ದೇವೆ.

ತಮ್ಮ ತಂದೆಯವರಿಗೆ ಪುತ್ತೂರಿನ ನಂಟು ಮತ್ತು ಇಲ್ಲಿನ ಜನ ಈ ವ್ಯವಹಾರದಲ್ಲಿ ತಮ್ಮ ಮೇಲೆ ತೋರಿಸಿದ ಪ್ರೀತಿ-ವಿಶ್ವಾಸಗಳ ‘ಚಿನ್ನದ ಹಾದಿ’ಯ ಬಗ್ಗೆ ‘ವಿದ್ಯಮಾನ’ಕ್ಕೆ ಸವಿವರವಾದ ಮಾಹಿತಿಯನ್ನು ಕೊಟ್ಟಿದ್ದಾರೆ ಸಂಸ್ಥೆಯ ಮಾಲಕರಾಗಿರುವ ಸಿದ್ಧನಾಥ್ ಮತ್ತು ಅವರ ಸಹೋದರಾಗಿರುವ ಸಹದೇವ್ ಮತ್ತು ಸನತ್ ಕುಮಾರ್. ಬನ್ನಿ ಪುತ್ತೂರಿನ ಚಿನ್ನದ ಉದ್ಯಮಕ್ಕೊಂದು ಹೊಸ ಮಾನವನ್ನು ತಂದುಕೊಟ್ಟ ‘ಮಾನಕ ಜ್ಯುವೆಲ್ಲರ್ಸ್’ನ ಸಾಧನೆಯ ಕಥೆಗೆ ಸ್ವಲ್ಪ ಕಿವಿಯಾಗೋಣ!

ತಮ್ಮ ದೊಡ್ಡಪ್ಪನವರ ಚಿನ್ನ ಪರಿಶುದ್ದೀಕರಣ  ಮಂಗಳೂರಿನಲ್ಲಿದ್ದ ಕಾರಣ ‘ಮಾನಕ ಜ್ಯುವೆಲ್ಲರ್ಸ್’ ಸಂಸ್ಥೆಯ ಮಾಲಕರಾದ ಸಿದ್ಧನಾಥ್ ಅವರ ತಂದೆಯವರಾದ ಶಂಕರ್ ವಿಠೋಬಾ ಕಂದಾಳೆ ಅಥವಾ ಶಂಕರ್ ವಿ.ಕೆ ಅವರು ಮಂಗಳೂರಿಗೆ ಬಂದು ಸೇರಿಕೊಳ್ತಾರೆ. ಆದರೆ ಅಲ್ಲಿಂದ ಅವರು ತಮ್ಮದೇ ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕೆಂಬ ಇಚ್ಛೆಯಿಂದ ವಿಜಯವಾಡ, ಕೊಟ್ಟಾಯಂ ಎಲ್ಲ ತಿರುಗಿ ಅಲ್ಲಿ ವ್ಯವಹಾರ ಕೈಹಿಡಿಯದೇ ಇದ್ದಾಗ ವಾಪಾಸು ಮಂಗಳೂರಿಗೆ ಬರ್ತಾರೆ. ಅಲ್ಲಿಂದ ನೇರವಾಗಿ ಸರಿಸುಮಾರು 1970ನೇ ಇಸವಿಯಲ್ಲಿ ಪುತ್ತೂರಿಗೆ ಬಂದಾಗ ಶಂಕರ್ ಅವರನ್ನು ಇಲ್ಲಿನ ಮಹಾಲಿಂಗೇಶ್ವರನೇ ಕರೆದನೋ ಎನ್ನುವಂತೆ ಅವರು ಪುತ್ತೂರಿನಲ್ಲೇ ನೆಲೆನಿಲ್ಲುವಂತ ಸನ್ನಿವೇಶವೊಂದು ಒದಗಿ ಬರುತ್ತದೆ.

ಅದು ಹೇಗಂದ್ರೆ, ಶಂಕರ್ ಅವರು ಪುತ್ತೂರಿಗೆ ಬಂದ ದಿನವೇ ಇಲ್ಲಿನ ಸ್ಥಳೀಯರೊಬ್ಬರು ಶಂಕರ್ ಅವರಿಗೆ ಬೆಂಬಲವಾಗಿ ನಿಲ್ತಾರೆ. ಅಂದ್ರೆ ಪ್ರಾರಂಭದಲ್ಲಿ ಇವರು ಮಾಡ್ತಿದ್ದಿದ್ದು ಚಿನ್ನದ ಶುದ್ಧೀಕರಣದ ಕೆಲಸ. ಈ ಕೆಲಸವನ್ನು ಮಾಡುವ ವೃತ್ತಿಪರರು ಪುತ್ತೂರಿನಲ್ಲಿ ಆ ಸಮಯದಲ್ಲಿ ಯಾರೂ ಇಲ್ಲದೇ ಇದ್ದ ಕಾರಣ ಇವರ ತಂದೆಯವರು ಪ್ರಾರಂಭಿಸಿದ ಇಲ್ಲಿನ ಕೋರ್ಟ್ ರೋಡಲ್ಲಿ ಪ್ರಾರಂಭಿಸಿದ ವರ್ಕ್ ಶಾಪೇ ಪುತ್ತೂರಿನಲ್ಲಿ ಪ್ರಪ್ರಥಮ ಚಿನ್ನದ  ಶುದ್ಧೀಕರಣ ಮಾಡುವ ಸಂಸ್ಥೆಯಾಗಿ ಪ್ರಾರಂಭಗೊಳ್ಳುತ್ತದೆ. ಹಾಗೆ ಪ್ರಾರಂಭದ ದಿನಗಳಲ್ಲಿ ಬಾಡಿಗೆ ಶಾಪ್ ನಲ್ಲಿ ಪ್ರಾರಂಭಗೊಂಡ ಈ ಚಿನ್ನದ ಶುದ್ಧೀಕರಣದ ವ್ಯವಹಾರ ಕಷ್ಟದ ಪರಿಸ್ಥಿತಿಯಲ್ಲೇ ಹಲವು ವರ್ಷಗಳ ಕಾಲ ಮುಂದುವರಿಯುತ್ತದೆ.ತಮ್ಮ ನಗುಮೊಗದ ಸೇವೆಯೊಂದಿಗೆ ಕಾಲಮಿತಿಯಲ್ಲಿ ಗ್ರಾಹಕರ ಇಚ್ಛೆಗೆ ತಕ್ಕಂತೆ ಚಿನ್ನದ ಆಭರಣಗಳನ್ನು ನೀಡುವ ಮೂಲಕ ಗ್ರಾಹಕರ ಮನಗೆದ್ದು ಕೇವಲ 18 ವರ್ಷಗಳಲ್ಲಿ ಅಪಾರ ಗ್ರಾಹಕ ಬಂಧುಗಳ ಪ್ರೀತಿಯನ್ನು ಇವರು ಗಳಿಸಿದ್ದಾರೆ.

‘ಹೀಗೆ 1992ನೇ ಇಸವಿವರೆಗೆ ಈ ಉದ್ಯಮವನ್ನೇ ನಾವು ಮುಂದುವರಿಸ್ತಾ ಬಂದೆವು. ಈ ಸಂದರ್ಭದಲ್ಲಿ ನಮಗೆ ನಾವು ನಡೆಸ್ತಿದ್ದ ಈ ಉದ್ಯಮ ಸ್ವಲ್ಪ ಡಲ್ ಆಗ್ತಿದೆ ಅನ್ನಿಸ್ತು. ಅಂದ್ರ ಚಿನ್ನದ ಶುದ್ಧೀಕರಣ  ಉದ್ಯಮದಲ್ಲಿ ನುರಿತ ಕೆಲಸಗಾರರ ಅವಶ್ಯಕತೆ ಇರ್ತದೆ, ಈ ಹಂತದಲ್ಲಿ ಸುಮಾರು ಜನ ಕೆಲಸಗಾರರು ಬಿಟ್ಟು ಹೋಗಿ ಮಾಡ್ತಿದ್ದ ಕಾರಣ ನಮಗೆ ಸ್ವಲ್ಪ ಸಮಸ್ಯೆ ಆಯ್ತು’ ಎಂಬ ವಿಚಾರವನ್ನು ಸಿದ್ಧನಾಥ್ ಅವರು ನೆನಪಿಸಿಕೊಳ್ತಾರೆ.

ಎಸ್ಸೆಸ್ಸೆಲ್ಸಿ ಮುಗಿಸಿ ಕುಟುಂಬಕ್ಕಾಗಿ ಚಿನ್ನದ ಉದ್ಯಮಕ್ಕೆ ಎಂಟ್ರಿ!

‘1992ರಲ್ಲಿ ನಾವು ನಡೆಸ್ತಿದ್ದ ಮುಂಚಿನ ವ್ಯವಹಾರದಲ್ಲಿ ಕೆಲಸಗಾರರ ತೊಂದರೆ ಕಾಣಿಸಿಕೊಂಡಾಗ ಕಲಿಕೆಯಲ್ಲಿ ಮುಂದಿದ್ರೂ ಅನಿವಾರ್ಯವಾಗಿ ಕುಟುಂಬಕ್ಕಾಗಿ ನಾನು ಓದನ್ನು ಮುಂದುವರಿಸಲಾಗದೇ ಈ ಉದ್ಯಮಕ್ಕೆ ಎಂಟ್ರಿ ಕೊಡಬೇಕಾಯ್ತು’ ಎಂದು ಸಿದ್ಧನಾಥ್ ಅವರು ತಾವು ಚಿನ್ನದ ಉದ್ಯಮ ಕ್ಷೇತ್ರವನ್ನು ಪ್ರವೇಶಿಸಿದ ಹಿನ್ನಲೆಯನ್ನು ಸ್ಮರಿಸಿಕೊಳ್ಳುತ್ತಾರೆ. ಹೀಗೆ ಒಮ್ಮೆ ಇಳಿಮುಖವಾಗಿದ್ದ ವ್ಯವಹಾರ ಸಿದ್ಧನಾಥ್ ಪ್ರವೇಶದ ಬಳಿಕ ಪರಿಶ್ರಮದಿಂದ 2000ನೇ ಇಸವಿಯಲ್ಲಿ, ಅಂದರೆ 8 ವರ್ಷಗಳಲ್ಲಿ ಮತ್ತೆ ‘ಪೀಕ್’ ಮಟ್ಟಕ್ಕೆ ಮುಟ್ಟುವಂತಾಯ್ತು ಎಂಬುದನ್ನು ಅವರು ನೆನಪಿಸಿಕೊಳ್ತಾರೆ.

ಮಾನಕ’ ಪ್ರಾರಂಭಗೊಂಡದ್ದೇ ಒಂದು ರೋಚಕ ಕಥೆ!

ಹೌದು, ಈ ಭಾಗದ ಜ್ಯುವೆಲ್ಲರಿಯವರಿಗೆ ಚಿನ್ನಗಳನ್ನು ಶುದ್ಧೀಕರಿಸಿ ಕೊಡುವ ಮತ್ತು ಆಭರಣಗಳ ತಯಾರಿಗಿಂತ ಮುಂಚಿನ ಪ್ರಾಸೆಸ್ ಗಳನ್ನು ಮಾಡಿಕೊಡುವ ವ್ಯವಹಾರ ಚೆನ್ನಾಗಿ ನಡೆಯುತ್ತಿದ್ದ ಸಮಯದಲ್ಲೇ ಸಿದ್ಧನಾಥ್ ಅವರು ಚಿನ್ನೋದ್ಯಮ ಮಳಿಗೆಯನ್ನು ಪ್ರಾರಂಭಿಸುವ ಯೋಚನೆಯೊಂದನ್ನು ಮಾಡ್ತಾರೆ. ಚಿನ್ನದ ರಿಟೇಲ್ ವ್ಯವಹಾರಕ್ಕೆ ಇಳಿಯುವುದೋ ಬೇಡವೋ ಎಂಬ ಗೊಂದಲದಲ್ಲೇ ಫೈನಲೀ 2005ರಲ್ಲಿ ಇವರು ಚಿನ್ನದ ರಿಟೇಲ್ ವ್ಯವಹಾರಕ್ಕೆ ಕೈ ಹಾಕುತ್ತಾರೆ! ಹಾಗೆ ತಂದೆಯ ಸಮರ್ಥ ಮಾರ್ಗದರ್ಶನದಲ್ಲಿ ಮತ್ತು ಮುಂದಾಳತ್ವದಲ್ಲಿ ‘ಮಾನಕ’ ಎಂಬ ಹೆಸರಿನಲ್ಲಿ ಪ್ರಾರಂಭಗೊಂಡ ಚಿನ್ನೋದ್ಯಮ ಮಳಿಗೆಯ ವ್ಯವಹಾರ ಇವತ್ತು ಪುತ್ತೂರು ಮಾತ್ರವಲ್ಲದೇ ರಾಜ್ಯಾದ್ಯಂತ ಹೆಸರು ಮಾಡುತ್ತಿರುವ ಉದ್ಯಮವಾಗಿ ಬೆಳೆದು ನಿಂತಿರುವುದು ಹೆಮ್ಮೆಯ ವಿಚಾರವೇ ಸರಿ.

ಗ್ರಾಹಕರೊಂದಿಗಿನ ಮುಕ್ತ ವ್ಯವಹಾರವೇ ‘ಮಾನಕ’ದ ಸ್ಪೆಷಾಲಿಟಿ!

‘ಹಿಂದಿನ ವ್ಯವಹಾರದಲ್ಲೇ ನಮಗೆ ಸಾಕಷ್ಟು ಗ್ರಾಹಕ ಸಂಪರ್ಕವಿದ್ದ ಕಾರಣ ನಾವು ‘ಮಾನಕ’ ಪ್ರಾರಂಭಿಸಿದಾಗ ನಮಗೆ ಗ್ರಾಹಕ ಸಂಪರ್ಕ ಬೆಳೆಸಿಕೊಳ್ಳುವುದು ಇನ್ನಷ್ಟು ಸುಲಭವಾಯಿತು. ಗ್ರಾಹಕರೊಂದಿಗೆ ನಾವು ಮುಕ್ತವಾಗಿ ಮಾತನಾಡುವುದೂ ಸಹ ನಮ್ಮ ವ್ಯವಹಾರ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿದೆ ಎಂಬುದನ್ನು ಸಿದ್ಧನಾಥ್ ಸಹೋದರರು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ. ಕೇವಲ ಒಂದೇ ಮಳಿಗೆಯನ್ನು ಹೊಂದಿದ್ದರೂ ಪುತ್ತೂರು, ವಿಟ್ಲ, ಉಪ್ಪಿನಂಗಡಿ, ಸುಳ್ಯ, ಬೆಳ್ಳಾರೆ ಭಾಗಗಳಿಂದ ಮಾತ್ರವಲ್ಲದೇ ಕರಾವಳಿ ಮತ್ತು ಮಲೆನಾಡಿನ ಭಾಗಗಳ ಗ್ರಾಹಕವರ್ಗವನ್ನು ಹೊಂದಿರುವುದು ‘ಮಾನಕ ಜ್ಯುವೆಲ್ಲರ್ಸ್’ನ ಒಂದು ವಿಶೇಷತೆಯೇ ಸರಿ!

ಕಾಂಪಿಟೇಶನ್ ಎದುರಿಸಿ ವ್ಯವಹಾರದಲ್ಲಿ ಗೆದ್ದ ‘ಮಾನಕ’!

ಪುತ್ತೂರಿನಲ್ಲಿರುವಷ್ಟು ಚಿನ್ನದ ಮಳಿಗೆಗಳು ನಮ್ಮ ಕರಾವಳಿ ಭಾಗದಲ್ಲಿ ಬೇರೆಲ್ಲೂ ಕಾಣಸಿಗುವುದಿಲ್ಲ. ಮಾನಕ ಪ್ರಾರಂಭಗೊಂಡ ಸಂದರ್ಭದಲ್ಲೇ ಪುತ್ತೂರಿನಲ್ಲಿ 70ಕ್ಕೂ ಅಧಿಕ ಚಿನ್ನದ ಮಳಿಗಗೆಳಿದ್ದವು, ಇವೆಲ್ಲದರ ನಡುವೆ ಮಾನಕ ತನ್ನ ಗ್ರಾಹಕ ಸೇವೆ, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಿಂದ ಪ್ರಾರಂಭಗೊಂಡ ಕೆಲವೇ ವರ್ಷಗಳಲ್ಲಿ ಈ ಉದ್ಯಮದಲ್ಲಿ ಹೆಚ್ಚಿನ ಹೆಸರು ಮಾಡಲು ಸಾಧ್ಯವಾಯಿತು. ಸಂಸ್ಥೆಯ ಮಾಲಕರೇ ನೇರವಾಗಿ ಗ್ರಾಹಕರೊಂದಿಗೆ ವ್ಯವಹರಿಸಿ ಗುಣಮಟ್ಟ ಮತ್ತು ಪರಿಶುದ್ಧತೆಯನ್ನು ಖಾತ್ರಿ ಮಾಡಿಕೊಳ್ಳುವುದೂ ಸಹ ಸಂಸ್ಥೆಯ ಯಶಸ್ಸಿಗೆ ಇನ್ನೊಂದು ಕಾರಣವಾಗಿದೆ.

ಮಾನಕ’ವೆಂಬ ಹೊಸ ಪ್ರಯತ್ನಕ್ಕೆ ಪ್ರೋತ್ಸಾಹದ ಸಂಜೀವನಿ ನೀಡಿದ ‘ಸಂಜೀವ ಶೆಟ್ರು’!

ಪುತ್ತೂರಿನಲ್ಲಿ ಪ್ರಾರಂಭಗೊಂಡು ಕರಾವಳಿಯಾದ್ಯಂತ ಜವಳಿ ಉದ್ಯಮದಲ್ಲಿ ತನ್ನದೇ ಖ್ಯಾತಿಯನ್ನು ಹೊಂದಿರುವ ಸಂಜೀವ ಶೆಟ್ಟಿ ವಸ್ತ್ರ ಮಳಿಗೆಯ ಹೆಸರನ್ನು ಕೇಳದವರು ಯಾರು? ಇದನ್ನು ಸ್ಥಾಪಿಸಿದ ಸಂಜೀವ ಶೆಟ್ರಿಗೂ ‘ಮಾನಕ ಜ್ಯುವೆಲ್ಲರ್ಸ್’ಗೂ ಒಂದು ಅವಿನಾಭಾವ ಸಂಬಂಧವಿದೆ ಎಂದರೆ ನಂಬಲೇಬೇಕು! ಅಂದು ಮಾನಕ ಜ್ಯುವೆಲ್ಲರ್ಸ್ ಉದ್ಘಾಟನೆಗೆ ಅತಿಥಿಯಾಗಿ ಸಂಜೀವ ಶೆಟ್ರನ್ನು ಆಹ್ವಾನಿಸಿದ್ದ ಸಂದರ್ಭದಲ್ಲಿ ಅವರು ಸಂತೋಷದಿಂದ್ಲೇ ಆಗಮಿಸಿ ಹೊಸ ಉದ್ಯಮಕ್ಕೆ ಶುಭ ಹಾರೈಸಿದ್ದರು, ಆ ಬಳಿಕ ಪ್ರತೀವರ್ಷ ಮಾನಕಕ್ಕೆ ಬಂದು ಚಿನ್ನವನ್ನು ಖರೀದಿಸಿ ಹೋಗುವ ಪರಿಪಾಠವನ್ನು ಬೆಳೆಸಿಕೊಂಡಿದ್ದರು. ಅದರಂತೆ ಇದೀಗ ಮಾನಕ ಜ್ಯುವೆಲ್ಲರ್ಸ್ ನ ನೂತನ ಸುಸಜ್ಜಿತ ಮಳಿಗೆಯ ಉದ್ಘಾಟನೆಗೆ ಸಂಜೀವ ಶೆಟ್ರ ಪುತ್ರ ಮತ್ತು ‘ಸಂಜೀವ ಶೆಟ್ಟಿ’ ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಗಿರಿಧರ ಶೆಟ್ಟಿ ಅವರನ್ನು ಆಹ್ವಾನಿಸಲಾಗಿದೆ ಆ ಮೂಲಕ ಒಂದು ತಲೆಮಾರಿನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವುದು ವಿಶೇಷವಾಗಿದೆ.

ತಂದೆಯ ಮಾರ್ಗದರ್ಶನ – ತಾಯಿಯ ಹೆಸರು – ತ್ರಿವಳಿ ಸಹೋದರರ ಪರಿಶ್ರಮವೇ ‘ಮಾನಕ’ದ ಯಶಸ್ಸಿನ ಗುಟ್ಟು!

ಚಿನ್ನ ಪರಿಶುದ್ಧಗೊಳಿಸುವ ವ್ಯವಹಾರದಿಂದ ಚಿನ್ನಾಭರಣಗಳ ರಿಟೇಲ್ ವ್ಯವಹಾರಕ್ಕೆ ಇಳಿದ ಸಂದರ್ಭದಲ್ಲಿ ಸಿದ್ಧನಾಥ್ ಅವರ ತಂದೆ ನೀಡಿದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಇವರಿಗೆ ಎಂದೆಂದೂ ಬೆನ್ನೆಲುಬಾಗಿ ನಿಂತಿದೆ. ಹಾಗೆಯೇ ತಮ್ಮ ತಾಯಿಯ ಹೆಸರಿನಲ್ಲಿ ಪ್ರಾರಂಭಿಸಿದ ರಿಟೇಲ್ ಉದ್ಯಮ ಇಂದು ಇವರ ಕೈಹಿಡಿದು ಮುನ್ನಡೆಸುತ್ತಿದೆ. ಸಿದ್ಧನಾಥ್-ಸಹದೇವ್ ಮತ್ತು ಸನತ್ ಕುಮಾರ್ ಎಂಬ ತ್ರಿವಳಿ ಸಹೋದರರ ಒಮ್ಮತದ ಪರಿಶ್ರಮ ಅವರನ್ನು ಇಂದು ಪುತ್ತೂರಿನ ಸ್ವರ್ಣೋದ್ಯಮದಲ್ಲಿ ಒಂದು ಉನ್ನತವಾದ ಸ್ಥಾನ-ಮಾನಗಳನ್ನು ಹೊಂದುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

ಇಂದಿನ ಕಾಲಮಾನ ಮತ್ತು ಹೊಸ ಗ್ರಾಹಕವರ್ಗದ ಅಭಿರುಚಿ ಮತ್ತು ಅಗತ್ಯತೆಗಳಿಗೆ ತಕ್ಕಂತೆ ವಿಸ್ತೃತವಾಗಿರುವ ಸುಸಜ್ಜಿತ ಮಳಿಗೆಯನ್ನು ಪ್ರಾರಂಭಿಸಿದರೂ ತಮ್ಮ ಗ್ರಾಹಕ ವ್ಯವಹಾರ ವಿಧಾನದಲ್ಲಿ ಯಾವುದೇ ಬದಲಾವಣೆಗಳಿಲ್ಲ ಮತ್ತು ನಮ್ಮ ಗ್ರಾಹಕರ ಚಿನ್ನಾಭರಣ ಅಗತ್ಯತೆಗಳನ್ನು ನಾವೇ ಖುದ್ದಾಗಿ ವಿಚಾರಿಸಿ ಅವರ ಮನಃತೃಪ್ತಿಪಡಿಸುವಂತ ಗ್ರಾಹಕ ಸೇವೆಯನ್ನು ನೀಡುತ್ತೇವೆ ಎಂಬ ಭರವಸೆಯನ್ನು ಸಂಸ್ಥೆಯ ಮಾಲಕರು ಇದೇ ಸಂದರ್ಭದಲ್ಲಿ ನೀಡಲು ಮರೆಯುವುದಿಲ್ಲ. ನೂತನವಾಗಿ ಪ್ರಾರಂಭಗೊಳ್ಳಲಿರುವ ‘ಮಾನಕ ಜ್ಯುವೆಲ್ಲರ್ಸ್’ನ ಸರ್ವಸುಸಜ್ಜಿತ ಮಳಿಗೆ ಗ್ರಾಹಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿ ಇವರಿಗೆ ಈ ಉದ್ಯಮದಲ್ಲಿ ಇನ್ನಷ್ಟು ಯಶಸ್ಸು ಸಿಗುವಂತೆ ಮಹಾಲಿಂಗೇಶ್ವರ ದೇವರು ಅನುಗ್ರಹಿಸಲಿ ಎಂಬ ಶುಭಹಾರೈಕೆಗಳು ನಮ್ಮದು.

Recent News


Leave a Comment: