ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


Viral Video : ಬೀದಿಯಲ್ಲಿ ಶುರುವಾಗಿ ಚರಂಡಿಗೆ ತಲುಪಿದ ದಂಪತಿ ಜಗಳ, ಗಂಡನ ಸ್ಥಿತಿ ನೋಡಿ ಅಯ್ಯೋ ಎಂದ ನೆಟ್ಟಿಗರು

Posted by Vidyamaana on 2024-02-24 21:48:55 |

Share: | | | | |


Viral Video : ಬೀದಿಯಲ್ಲಿ ಶುರುವಾಗಿ ಚರಂಡಿಗೆ ತಲುಪಿದ ದಂಪತಿ ಜಗಳ, ಗಂಡನ ಸ್ಥಿತಿ ನೋಡಿ ಅಯ್ಯೋ ಎಂದ ನೆಟ್ಟಿಗರು

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡಿರ ಜಗಳ ಬೀದಿಗೆ ಬರುವುದೇ ಹೆಚ್ಚು. ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ಮುನಿಸು, ಮನಸ್ತಾಪಗಳು ಬಗೆಹರಿಸಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಬೆಳೆದು ಕೆಲವೊಮ್ಮೆ ಡೈವೋರ್ಸ್ ನೀಡುವ ಹಂತದವರೆಗೂ ತಲುಪುತ್ತದೆ.ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಗಂಡ ಹೆಂಡಿರ ಜಗಳವು ಬೀದಿಗೆ ಬಂದಿದ್ದು, ರಸ್ತೆಯಲ್ಲಿ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಕೊನೆಗೆ ಈ ಜೋಡಿಯು ಜಗಳವಾಡುತ್ತಾ ಚರಂಡಿಗೆ ಬಿದ್ದಿದ್ದು, ಅಲ್ಲಿಯೂ ಇಬ್ಬರೂ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ಶಾಕ್ ಆಗಿದ್ದಾರೆ.

ಯಾವ ಸಂಸಾರದಲ್ಲಿ ಜಗಳವಿರುವುದಿಲ್ಲ ಹೇಳಿ. ಜಗಳವಿದ್ದ ಕಡೆಯಲ್ಲಿ ಪ್ರೀತಿ ಹೆಚ್ಚಿರುತ್ತದೆ ಎನ್ನುವ ಮಾತಿದೆ. ಅತಿಯಾದ ಪ್ರೀತಿ, ಸಣ್ಣ ಪುಟ್ಟ ಮುನಿಸು ಜಗಳವಿದ್ದರೆ ಸಂಸಾರವೆನ್ನುವುದು ನೋಡಲು ಚಂದ. ಆದರೆ ಈ ಜಗಳವನ್ನೇ ದೊಡ್ಡದು ಮಾಡಿದರೆ ನಾಲ್ಕು ಗೋಡೆಗೆ ಸೀಮಿತವಾಗಿರಬೇಕಾದ ಜಗಳವು ಬೀದಿಗೆ ಬರುವುದಂತೂ ಪಕ್ಕಾ. ಇಲ್ಲೊಂದು ಜೋಡಿಯೂ ಸಂಸಾರದಲ್ಲಿನ ಜಗಳವನ್ನು ಮನೆಯಿಂದ ರಸ್ತೆಗೆ ತಂದಿದ್ದು, ಅಷ್ಟೇ ಆಗಿದ್ದರೆ ಏನು ಆಗುತ್ತಿರಲಿಲ್ಲ. ಕೊನೆಗೆ ಇವರಿಬ್ಬರ ಜಗಳವು ಚರಂಡಿಯವರೆಗೂ ತಲುಪಿದೆ. ಗಂಡ ಹೆಂಡಿರ ಜಗಳದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಇವರಿಬ್ಬರೂ ಹೊಡೆದಾಡುವ ರೀತಿ ಕಂಡು ಇದೇನಪ್ಪಾ ಹೀಗೆ ಎನ್ನುತ್ತಿದ್ದಾರೆ.ವಿಡಿಯೋದಲ್ಲಿ ಪತಿ ಪತ್ನಿಯರಿಬ್ಬರೂ ಮನೆಯಿಂದ ಹೊರಗಡೆ ರಸ್ತೆಯಲ್ಲಿ ಜಗಳವನ್ನು ಶುರು ಮಾಡಿದ್ದಾರೆ. ಬೈಕ್‌ನಲ್ಲಿ ತೆರಳುವಾಗ ಬೈಕ್ ಹಾಳಾಗಿದ್ದು, ಇದೇ ಇವರಿಬ್ಬರ ನಡುವಿನ ಜಗಳಕ್ಕೆ ಕಾರಣವಾಗಿರುವಂತೆ ಕಾಣುತ್ತಿದೆ. ಈ ವಿಡಿಯೋದ ಪ್ರಾರಂಭದಲ್ಲಿ ಗಂಡ ಬೈಕ್‌ ಅನ್ನು ತಳ್ಳಿಕೊಂಡು ಹೋಗುತ್ತಿದ್ದಾನೆ. ಹೀಗಿರುವಾಗ ಹೆಂಡತಿಯು ಗಂಡದ ಬೆನ್ನಿಗೆ ಜೋರಾಗಿ ಗುದ್ದುತ್ತಾಳೆ. ಅಲ್ಲಿಂದ ಜಗಳವು ಶುರುವಾಗಿದ್ದು, ಇಬ್ಬರೂ ಕಿತ್ತಾಡಿಕೊಳ್ಳಲು ಶುರು ಮಾಡಿದ್ದಾರೆ. ಹೀಗೆ ಜೋರಾಗಿ ಹೊಡೆದಾಡುತ್ತಲೇ ಇಬ್ಬರೂ ಚರಂಡಿಗೆ ಬಿದ್ದಿದ್ದಾರೆ. ಆದರೆ ಅಲ್ಲಿಯೂ ಜಗಳವೇನು ನಿಂತಿಲ್ಲ. ನಾರುತ್ತಿರುವ ಚರಂಡಿಯ ನೀರಿನಲ್ಲಿಯೂ ಈ ದಂಪತಿಗಳು ಹೊಡೆದಾಡಿಕೊಂಡಿದ್ದಾರೆ.


ವಿಡಿಯೋ ಇಲ್ಲಿದೆ ನೋಡಿ

Viral Video : ಬೀದಿಯಲ್ಲಿ ಶುರುವಾಗಿ ಚರಂಡಿಗೆ ತಲುಪಿದ ದಂಪತಿ ಜಗಳ, ಗಂಡನ ಸ್ಥಿತಿ ನೋಡಿ ಅಯ್ಯೋ ಎಂದ ನೆಟ್ಟಿಗರು


ಮಾನಕ ಜ್ಯುವೆಲ್ಲರ್ಸ್ ನ ಅತ್ಯಾಧುನಿಕ-ಸರ್ವಸುಸಜ್ಜಿತ- ವಿಸ್ತಾರ ಸ್ವರೂಪದ ಹೊಸ ಶೋರೂಂ ಮೇ27ರಂದು ಶುಭಾರಂಭ

Posted by Vidyamaana on 2023-05-26 00:42:54 |

Share: | | | | |


ಮಾನಕ ಜ್ಯುವೆಲ್ಲರ್ಸ್ ನ ಅತ್ಯಾಧುನಿಕ-ಸರ್ವಸುಸಜ್ಜಿತ- ವಿಸ್ತಾರ ಸ್ವರೂಪದ ಹೊಸ ಶೋರೂಂ ಮೇ27ರಂದು ಶುಭಾರಂಭ


ಇವರ ಕುಟುಂಬವೇ ಕಳೆದ ಹಲವಾರು ದಶಕಗಳಿಂದ ಚಿನ್ನದ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಕುಟುಂಬ. ಚಿನ್ನ ಆಭರಣವಾಗಿ ರೂಪುಗೊಳ್ಳುವ ಮೊದಲು ಪರಿಶುದ್ಧತೆಗೊಳಪಡುವ ಒಂದು ಸುದೀರ್ಘ ಪ್ರಾಸೆಸ್ ಇದ್ದು ಈ ಕ್ಲಿಷ್ಟಕರ ಮತ್ತು ಅಷ್ಟೇ ವಿಶ್ವಾಸಾರ್ಹತೆಯನ್ನು ಬಯಸುವ ಒಂದು ಕೆಲಸವನ್ನು ಹಲವಾರು ವರ್ಷಗಳ ಕಾಲ ನಿಷ್ಠೆಯಿಂದ ಮಾಡಿಕೊಂಡು ಬಂದಂತಹ ಪರಿವಾರದ ಹಿನ್ನಲೆ ಆ ಬಳಿಕ ಇಂದಿಗೆ 17 ವರ್ಷಗಳ ಹಿಂದೆ ಚಿನ್ನಾಭರಣಗಳ ರಿಟೇಲ್ ವ್ಯವಹಾರಕ್ಕೆ ಕೈಹಾಕಿ ಅದರಲ್ಲಿ ಇಂದಿನವರೆಗೂ ಗ್ರಾಹಕರ ನಂಬಿಕೆಗೆ ಕುಂದು ಬರದ ರೀತಿಯಲ್ಲಿ ವ್ಯವಹಾರವನ್ನು ನಡೆಸಿಕೊಂಡು ಬಂದಿರುವ ಪುತ್ತೂರಿನ ಹೆಸರಾಂತ ‘ಮಾನಕ ಜ್ಯುವೆಲ್ಲರ್’ ಇದೀಗ ತನ್ನ ವ್ಯವಹಾರ ವ್ಯಾಪ್ತಿಯನ್ನು ವಿಸ್ತರಿಕೊಳ್ಳುವ ಪ್ರಯತ್ನದಲ್ಲಿ ಇದೇ ಮೇ 27ರಂದು ಪುತ್ತೂರು ಮುಖ್ಯರಸ್ತೆಯಲ್ಲಿರುವ ಸಿಪಿಸಿ ಪ್ಲಾಝಾದ ಎದುರುಗಡೆಯಿರುವ ಎಂ.ಎಸ್. ಕಾಂಪ್ಲೆಕ್ಸ್ ನ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ‘ಮಾನಕ’ ಬೆಳೆದುಬಂದ ರೀತಿಯ ಬಗ್ಗೆ ಮತ್ತು ಅವರ ವ್ಯವಹಾರ ವೈಶಿಷ್ಟ್ಯಗಳ ಮೇಲೆ ಬೆಳಕು ಚೆಲ್ಲುವ ವಿಶೇಷ ಪ್ರಯತ್ನ ಈ ಲೇಖನ ಮೂಲಕ ಮಾಡುತ್ತಿದ್ದೇವೆ.

ತಮ್ಮ ತಂದೆಯವರಿಗೆ ಪುತ್ತೂರಿನ ನಂಟು ಮತ್ತು ಇಲ್ಲಿನ ಜನ ಈ ವ್ಯವಹಾರದಲ್ಲಿ ತಮ್ಮ ಮೇಲೆ ತೋರಿಸಿದ ಪ್ರೀತಿ-ವಿಶ್ವಾಸಗಳ ‘ಚಿನ್ನದ ಹಾದಿ’ಯ ಬಗ್ಗೆ ‘ವಿದ್ಯಮಾನ’ಕ್ಕೆ ಸವಿವರವಾದ ಮಾಹಿತಿಯನ್ನು ಕೊಟ್ಟಿದ್ದಾರೆ ಸಂಸ್ಥೆಯ ಮಾಲಕರಾಗಿರುವ ಸಿದ್ಧನಾಥ್ ಮತ್ತು ಅವರ ಸಹೋದರಾಗಿರುವ ಸಹದೇವ್ ಮತ್ತು ಸನತ್ ಕುಮಾರ್. ಬನ್ನಿ ಪುತ್ತೂರಿನ ಚಿನ್ನದ ಉದ್ಯಮಕ್ಕೊಂದು ಹೊಸ ಮಾನವನ್ನು ತಂದುಕೊಟ್ಟ ‘ಮಾನಕ ಜ್ಯುವೆಲ್ಲರ್ಸ್’ನ ಸಾಧನೆಯ ಕಥೆಗೆ ಸ್ವಲ್ಪ ಕಿವಿಯಾಗೋಣ!

ತಮ್ಮ ದೊಡ್ಡಪ್ಪನವರ ಚಿನ್ನ ಪರಿಶುದ್ದೀಕರಣ  ಮಂಗಳೂರಿನಲ್ಲಿದ್ದ ಕಾರಣ ‘ಮಾನಕ ಜ್ಯುವೆಲ್ಲರ್ಸ್’ ಸಂಸ್ಥೆಯ ಮಾಲಕರಾದ ಸಿದ್ಧನಾಥ್ ಅವರ ತಂದೆಯವರಾದ ಶಂಕರ್ ವಿಠೋಬಾ ಕಂದಾಳೆ ಅಥವಾ ಶಂಕರ್ ವಿ.ಕೆ ಅವರು ಮಂಗಳೂರಿಗೆ ಬಂದು ಸೇರಿಕೊಳ್ತಾರೆ. ಆದರೆ ಅಲ್ಲಿಂದ ಅವರು ತಮ್ಮದೇ ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕೆಂಬ ಇಚ್ಛೆಯಿಂದ ವಿಜಯವಾಡ, ಕೊಟ್ಟಾಯಂ ಎಲ್ಲ ತಿರುಗಿ ಅಲ್ಲಿ ವ್ಯವಹಾರ ಕೈಹಿಡಿಯದೇ ಇದ್ದಾಗ ವಾಪಾಸು ಮಂಗಳೂರಿಗೆ ಬರ್ತಾರೆ. ಅಲ್ಲಿಂದ ನೇರವಾಗಿ ಸರಿಸುಮಾರು 1970ನೇ ಇಸವಿಯಲ್ಲಿ ಪುತ್ತೂರಿಗೆ ಬಂದಾಗ ಶಂಕರ್ ಅವರನ್ನು ಇಲ್ಲಿನ ಮಹಾಲಿಂಗೇಶ್ವರನೇ ಕರೆದನೋ ಎನ್ನುವಂತೆ ಅವರು ಪುತ್ತೂರಿನಲ್ಲೇ ನೆಲೆನಿಲ್ಲುವಂತ ಸನ್ನಿವೇಶವೊಂದು ಒದಗಿ ಬರುತ್ತದೆ.

ಅದು ಹೇಗಂದ್ರೆ, ಶಂಕರ್ ಅವರು ಪುತ್ತೂರಿಗೆ ಬಂದ ದಿನವೇ ಇಲ್ಲಿನ ಸ್ಥಳೀಯರೊಬ್ಬರು ಶಂಕರ್ ಅವರಿಗೆ ಬೆಂಬಲವಾಗಿ ನಿಲ್ತಾರೆ. ಅಂದ್ರೆ ಪ್ರಾರಂಭದಲ್ಲಿ ಇವರು ಮಾಡ್ತಿದ್ದಿದ್ದು ಚಿನ್ನದ ಶುದ್ಧೀಕರಣದ ಕೆಲಸ. ಈ ಕೆಲಸವನ್ನು ಮಾಡುವ ವೃತ್ತಿಪರರು ಪುತ್ತೂರಿನಲ್ಲಿ ಆ ಸಮಯದಲ್ಲಿ ಯಾರೂ ಇಲ್ಲದೇ ಇದ್ದ ಕಾರಣ ಇವರ ತಂದೆಯವರು ಪ್ರಾರಂಭಿಸಿದ ಇಲ್ಲಿನ ಕೋರ್ಟ್ ರೋಡಲ್ಲಿ ಪ್ರಾರಂಭಿಸಿದ ವರ್ಕ್ ಶಾಪೇ ಪುತ್ತೂರಿನಲ್ಲಿ ಪ್ರಪ್ರಥಮ ಚಿನ್ನದ  ಶುದ್ಧೀಕರಣ ಮಾಡುವ ಸಂಸ್ಥೆಯಾಗಿ ಪ್ರಾರಂಭಗೊಳ್ಳುತ್ತದೆ. ಹಾಗೆ ಪ್ರಾರಂಭದ ದಿನಗಳಲ್ಲಿ ಬಾಡಿಗೆ ಶಾಪ್ ನಲ್ಲಿ ಪ್ರಾರಂಭಗೊಂಡ ಈ ಚಿನ್ನದ ಶುದ್ಧೀಕರಣದ ವ್ಯವಹಾರ ಕಷ್ಟದ ಪರಿಸ್ಥಿತಿಯಲ್ಲೇ ಹಲವು ವರ್ಷಗಳ ಕಾಲ ಮುಂದುವರಿಯುತ್ತದೆ.ತಮ್ಮ ನಗುಮೊಗದ ಸೇವೆಯೊಂದಿಗೆ ಕಾಲಮಿತಿಯಲ್ಲಿ ಗ್ರಾಹಕರ ಇಚ್ಛೆಗೆ ತಕ್ಕಂತೆ ಚಿನ್ನದ ಆಭರಣಗಳನ್ನು ನೀಡುವ ಮೂಲಕ ಗ್ರಾಹಕರ ಮನಗೆದ್ದು ಕೇವಲ 18 ವರ್ಷಗಳಲ್ಲಿ ಅಪಾರ ಗ್ರಾಹಕ ಬಂಧುಗಳ ಪ್ರೀತಿಯನ್ನು ಇವರು ಗಳಿಸಿದ್ದಾರೆ.

‘ಹೀಗೆ 1992ನೇ ಇಸವಿವರೆಗೆ ಈ ಉದ್ಯಮವನ್ನೇ ನಾವು ಮುಂದುವರಿಸ್ತಾ ಬಂದೆವು. ಈ ಸಂದರ್ಭದಲ್ಲಿ ನಮಗೆ ನಾವು ನಡೆಸ್ತಿದ್ದ ಈ ಉದ್ಯಮ ಸ್ವಲ್ಪ ಡಲ್ ಆಗ್ತಿದೆ ಅನ್ನಿಸ್ತು. ಅಂದ್ರ ಚಿನ್ನದ ಶುದ್ಧೀಕರಣ  ಉದ್ಯಮದಲ್ಲಿ ನುರಿತ ಕೆಲಸಗಾರರ ಅವಶ್ಯಕತೆ ಇರ್ತದೆ, ಈ ಹಂತದಲ್ಲಿ ಸುಮಾರು ಜನ ಕೆಲಸಗಾರರು ಬಿಟ್ಟು ಹೋಗಿ ಮಾಡ್ತಿದ್ದ ಕಾರಣ ನಮಗೆ ಸ್ವಲ್ಪ ಸಮಸ್ಯೆ ಆಯ್ತು’ ಎಂಬ ವಿಚಾರವನ್ನು ಸಿದ್ಧನಾಥ್ ಅವರು ನೆನಪಿಸಿಕೊಳ್ತಾರೆ.

ಎಸ್ಸೆಸ್ಸೆಲ್ಸಿ ಮುಗಿಸಿ ಕುಟುಂಬಕ್ಕಾಗಿ ಚಿನ್ನದ ಉದ್ಯಮಕ್ಕೆ ಎಂಟ್ರಿ!

‘1992ರಲ್ಲಿ ನಾವು ನಡೆಸ್ತಿದ್ದ ಮುಂಚಿನ ವ್ಯವಹಾರದಲ್ಲಿ ಕೆಲಸಗಾರರ ತೊಂದರೆ ಕಾಣಿಸಿಕೊಂಡಾಗ ಕಲಿಕೆಯಲ್ಲಿ ಮುಂದಿದ್ರೂ ಅನಿವಾರ್ಯವಾಗಿ ಕುಟುಂಬಕ್ಕಾಗಿ ನಾನು ಓದನ್ನು ಮುಂದುವರಿಸಲಾಗದೇ ಈ ಉದ್ಯಮಕ್ಕೆ ಎಂಟ್ರಿ ಕೊಡಬೇಕಾಯ್ತು’ ಎಂದು ಸಿದ್ಧನಾಥ್ ಅವರು ತಾವು ಚಿನ್ನದ ಉದ್ಯಮ ಕ್ಷೇತ್ರವನ್ನು ಪ್ರವೇಶಿಸಿದ ಹಿನ್ನಲೆಯನ್ನು ಸ್ಮರಿಸಿಕೊಳ್ಳುತ್ತಾರೆ. ಹೀಗೆ ಒಮ್ಮೆ ಇಳಿಮುಖವಾಗಿದ್ದ ವ್ಯವಹಾರ ಸಿದ್ಧನಾಥ್ ಪ್ರವೇಶದ ಬಳಿಕ ಪರಿಶ್ರಮದಿಂದ 2000ನೇ ಇಸವಿಯಲ್ಲಿ, ಅಂದರೆ 8 ವರ್ಷಗಳಲ್ಲಿ ಮತ್ತೆ ‘ಪೀಕ್’ ಮಟ್ಟಕ್ಕೆ ಮುಟ್ಟುವಂತಾಯ್ತು ಎಂಬುದನ್ನು ಅವರು ನೆನಪಿಸಿಕೊಳ್ತಾರೆ.

ಮಾನಕ’ ಪ್ರಾರಂಭಗೊಂಡದ್ದೇ ಒಂದು ರೋಚಕ ಕಥೆ!

ಹೌದು, ಈ ಭಾಗದ ಜ್ಯುವೆಲ್ಲರಿಯವರಿಗೆ ಚಿನ್ನಗಳನ್ನು ಶುದ್ಧೀಕರಿಸಿ ಕೊಡುವ ಮತ್ತು ಆಭರಣಗಳ ತಯಾರಿಗಿಂತ ಮುಂಚಿನ ಪ್ರಾಸೆಸ್ ಗಳನ್ನು ಮಾಡಿಕೊಡುವ ವ್ಯವಹಾರ ಚೆನ್ನಾಗಿ ನಡೆಯುತ್ತಿದ್ದ ಸಮಯದಲ್ಲೇ ಸಿದ್ಧನಾಥ್ ಅವರು ಚಿನ್ನೋದ್ಯಮ ಮಳಿಗೆಯನ್ನು ಪ್ರಾರಂಭಿಸುವ ಯೋಚನೆಯೊಂದನ್ನು ಮಾಡ್ತಾರೆ. ಚಿನ್ನದ ರಿಟೇಲ್ ವ್ಯವಹಾರಕ್ಕೆ ಇಳಿಯುವುದೋ ಬೇಡವೋ ಎಂಬ ಗೊಂದಲದಲ್ಲೇ ಫೈನಲೀ 2005ರಲ್ಲಿ ಇವರು ಚಿನ್ನದ ರಿಟೇಲ್ ವ್ಯವಹಾರಕ್ಕೆ ಕೈ ಹಾಕುತ್ತಾರೆ! ಹಾಗೆ ತಂದೆಯ ಸಮರ್ಥ ಮಾರ್ಗದರ್ಶನದಲ್ಲಿ ಮತ್ತು ಮುಂದಾಳತ್ವದಲ್ಲಿ ‘ಮಾನಕ’ ಎಂಬ ಹೆಸರಿನಲ್ಲಿ ಪ್ರಾರಂಭಗೊಂಡ ಚಿನ್ನೋದ್ಯಮ ಮಳಿಗೆಯ ವ್ಯವಹಾರ ಇವತ್ತು ಪುತ್ತೂರು ಮಾತ್ರವಲ್ಲದೇ ರಾಜ್ಯಾದ್ಯಂತ ಹೆಸರು ಮಾಡುತ್ತಿರುವ ಉದ್ಯಮವಾಗಿ ಬೆಳೆದು ನಿಂತಿರುವುದು ಹೆಮ್ಮೆಯ ವಿಚಾರವೇ ಸರಿ.

ಗ್ರಾಹಕರೊಂದಿಗಿನ ಮುಕ್ತ ವ್ಯವಹಾರವೇ ‘ಮಾನಕ’ದ ಸ್ಪೆಷಾಲಿಟಿ!

‘ಹಿಂದಿನ ವ್ಯವಹಾರದಲ್ಲೇ ನಮಗೆ ಸಾಕಷ್ಟು ಗ್ರಾಹಕ ಸಂಪರ್ಕವಿದ್ದ ಕಾರಣ ನಾವು ‘ಮಾನಕ’ ಪ್ರಾರಂಭಿಸಿದಾಗ ನಮಗೆ ಗ್ರಾಹಕ ಸಂಪರ್ಕ ಬೆಳೆಸಿಕೊಳ್ಳುವುದು ಇನ್ನಷ್ಟು ಸುಲಭವಾಯಿತು. ಗ್ರಾಹಕರೊಂದಿಗೆ ನಾವು ಮುಕ್ತವಾಗಿ ಮಾತನಾಡುವುದೂ ಸಹ ನಮ್ಮ ವ್ಯವಹಾರ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿದೆ ಎಂಬುದನ್ನು ಸಿದ್ಧನಾಥ್ ಸಹೋದರರು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ. ಕೇವಲ ಒಂದೇ ಮಳಿಗೆಯನ್ನು ಹೊಂದಿದ್ದರೂ ಪುತ್ತೂರು, ವಿಟ್ಲ, ಉಪ್ಪಿನಂಗಡಿ, ಸುಳ್ಯ, ಬೆಳ್ಳಾರೆ ಭಾಗಗಳಿಂದ ಮಾತ್ರವಲ್ಲದೇ ಕರಾವಳಿ ಮತ್ತು ಮಲೆನಾಡಿನ ಭಾಗಗಳ ಗ್ರಾಹಕವರ್ಗವನ್ನು ಹೊಂದಿರುವುದು ‘ಮಾನಕ ಜ್ಯುವೆಲ್ಲರ್ಸ್’ನ ಒಂದು ವಿಶೇಷತೆಯೇ ಸರಿ!

ಕಾಂಪಿಟೇಶನ್ ಎದುರಿಸಿ ವ್ಯವಹಾರದಲ್ಲಿ ಗೆದ್ದ ‘ಮಾನಕ’!

ಪುತ್ತೂರಿನಲ್ಲಿರುವಷ್ಟು ಚಿನ್ನದ ಮಳಿಗೆಗಳು ನಮ್ಮ ಕರಾವಳಿ ಭಾಗದಲ್ಲಿ ಬೇರೆಲ್ಲೂ ಕಾಣಸಿಗುವುದಿಲ್ಲ. ಮಾನಕ ಪ್ರಾರಂಭಗೊಂಡ ಸಂದರ್ಭದಲ್ಲೇ ಪುತ್ತೂರಿನಲ್ಲಿ 70ಕ್ಕೂ ಅಧಿಕ ಚಿನ್ನದ ಮಳಿಗಗೆಳಿದ್ದವು, ಇವೆಲ್ಲದರ ನಡುವೆ ಮಾನಕ ತನ್ನ ಗ್ರಾಹಕ ಸೇವೆ, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಿಂದ ಪ್ರಾರಂಭಗೊಂಡ ಕೆಲವೇ ವರ್ಷಗಳಲ್ಲಿ ಈ ಉದ್ಯಮದಲ್ಲಿ ಹೆಚ್ಚಿನ ಹೆಸರು ಮಾಡಲು ಸಾಧ್ಯವಾಯಿತು. ಸಂಸ್ಥೆಯ ಮಾಲಕರೇ ನೇರವಾಗಿ ಗ್ರಾಹಕರೊಂದಿಗೆ ವ್ಯವಹರಿಸಿ ಗುಣಮಟ್ಟ ಮತ್ತು ಪರಿಶುದ್ಧತೆಯನ್ನು ಖಾತ್ರಿ ಮಾಡಿಕೊಳ್ಳುವುದೂ ಸಹ ಸಂಸ್ಥೆಯ ಯಶಸ್ಸಿಗೆ ಇನ್ನೊಂದು ಕಾರಣವಾಗಿದೆ.

ಮಾನಕ’ವೆಂಬ ಹೊಸ ಪ್ರಯತ್ನಕ್ಕೆ ಪ್ರೋತ್ಸಾಹದ ಸಂಜೀವನಿ ನೀಡಿದ ‘ಸಂಜೀವ ಶೆಟ್ರು’!

ಪುತ್ತೂರಿನಲ್ಲಿ ಪ್ರಾರಂಭಗೊಂಡು ಕರಾವಳಿಯಾದ್ಯಂತ ಜವಳಿ ಉದ್ಯಮದಲ್ಲಿ ತನ್ನದೇ ಖ್ಯಾತಿಯನ್ನು ಹೊಂದಿರುವ ಸಂಜೀವ ಶೆಟ್ಟಿ ವಸ್ತ್ರ ಮಳಿಗೆಯ ಹೆಸರನ್ನು ಕೇಳದವರು ಯಾರು? ಇದನ್ನು ಸ್ಥಾಪಿಸಿದ ಸಂಜೀವ ಶೆಟ್ರಿಗೂ ‘ಮಾನಕ ಜ್ಯುವೆಲ್ಲರ್ಸ್’ಗೂ ಒಂದು ಅವಿನಾಭಾವ ಸಂಬಂಧವಿದೆ ಎಂದರೆ ನಂಬಲೇಬೇಕು! ಅಂದು ಮಾನಕ ಜ್ಯುವೆಲ್ಲರ್ಸ್ ಉದ್ಘಾಟನೆಗೆ ಅತಿಥಿಯಾಗಿ ಸಂಜೀವ ಶೆಟ್ರನ್ನು ಆಹ್ವಾನಿಸಿದ್ದ ಸಂದರ್ಭದಲ್ಲಿ ಅವರು ಸಂತೋಷದಿಂದ್ಲೇ ಆಗಮಿಸಿ ಹೊಸ ಉದ್ಯಮಕ್ಕೆ ಶುಭ ಹಾರೈಸಿದ್ದರು, ಆ ಬಳಿಕ ಪ್ರತೀವರ್ಷ ಮಾನಕಕ್ಕೆ ಬಂದು ಚಿನ್ನವನ್ನು ಖರೀದಿಸಿ ಹೋಗುವ ಪರಿಪಾಠವನ್ನು ಬೆಳೆಸಿಕೊಂಡಿದ್ದರು. ಅದರಂತೆ ಇದೀಗ ಮಾನಕ ಜ್ಯುವೆಲ್ಲರ್ಸ್ ನ ನೂತನ ಸುಸಜ್ಜಿತ ಮಳಿಗೆಯ ಉದ್ಘಾಟನೆಗೆ ಸಂಜೀವ ಶೆಟ್ರ ಪುತ್ರ ಮತ್ತು ‘ಸಂಜೀವ ಶೆಟ್ಟಿ’ ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಗಿರಿಧರ ಶೆಟ್ಟಿ ಅವರನ್ನು ಆಹ್ವಾನಿಸಲಾಗಿದೆ ಆ ಮೂಲಕ ಒಂದು ತಲೆಮಾರಿನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವುದು ವಿಶೇಷವಾಗಿದೆ.

ತಂದೆಯ ಮಾರ್ಗದರ್ಶನ – ತಾಯಿಯ ಹೆಸರು – ತ್ರಿವಳಿ ಸಹೋದರರ ಪರಿಶ್ರಮವೇ ‘ಮಾನಕ’ದ ಯಶಸ್ಸಿನ ಗುಟ್ಟು!

ಚಿನ್ನ ಪರಿಶುದ್ಧಗೊಳಿಸುವ ವ್ಯವಹಾರದಿಂದ ಚಿನ್ನಾಭರಣಗಳ ರಿಟೇಲ್ ವ್ಯವಹಾರಕ್ಕೆ ಇಳಿದ ಸಂದರ್ಭದಲ್ಲಿ ಸಿದ್ಧನಾಥ್ ಅವರ ತಂದೆ ನೀಡಿದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಇವರಿಗೆ ಎಂದೆಂದೂ ಬೆನ್ನೆಲುಬಾಗಿ ನಿಂತಿದೆ. ಹಾಗೆಯೇ ತಮ್ಮ ತಾಯಿಯ ಹೆಸರಿನಲ್ಲಿ ಪ್ರಾರಂಭಿಸಿದ ರಿಟೇಲ್ ಉದ್ಯಮ ಇಂದು ಇವರ ಕೈಹಿಡಿದು ಮುನ್ನಡೆಸುತ್ತಿದೆ. ಸಿದ್ಧನಾಥ್-ಸಹದೇವ್ ಮತ್ತು ಸನತ್ ಕುಮಾರ್ ಎಂಬ ತ್ರಿವಳಿ ಸಹೋದರರ ಒಮ್ಮತದ ಪರಿಶ್ರಮ ಅವರನ್ನು ಇಂದು ಪುತ್ತೂರಿನ ಸ್ವರ್ಣೋದ್ಯಮದಲ್ಲಿ ಒಂದು ಉನ್ನತವಾದ ಸ್ಥಾನ-ಮಾನಗಳನ್ನು ಹೊಂದುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

ಇಂದಿನ ಕಾಲಮಾನ ಮತ್ತು ಹೊಸ ಗ್ರಾಹಕವರ್ಗದ ಅಭಿರುಚಿ ಮತ್ತು ಅಗತ್ಯತೆಗಳಿಗೆ ತಕ್ಕಂತೆ ವಿಸ್ತೃತವಾಗಿರುವ ಸುಸಜ್ಜಿತ ಮಳಿಗೆಯನ್ನು ಪ್ರಾರಂಭಿಸಿದರೂ ತಮ್ಮ ಗ್ರಾಹಕ ವ್ಯವಹಾರ ವಿಧಾನದಲ್ಲಿ ಯಾವುದೇ ಬದಲಾವಣೆಗಳಿಲ್ಲ ಮತ್ತು ನಮ್ಮ ಗ್ರಾಹಕರ ಚಿನ್ನಾಭರಣ ಅಗತ್ಯತೆಗಳನ್ನು ನಾವೇ ಖುದ್ದಾಗಿ ವಿಚಾರಿಸಿ ಅವರ ಮನಃತೃಪ್ತಿಪಡಿಸುವಂತ ಗ್ರಾಹಕ ಸೇವೆಯನ್ನು ನೀಡುತ್ತೇವೆ ಎಂಬ ಭರವಸೆಯನ್ನು ಸಂಸ್ಥೆಯ ಮಾಲಕರು ಇದೇ ಸಂದರ್ಭದಲ್ಲಿ ನೀಡಲು ಮರೆಯುವುದಿಲ್ಲ. ನೂತನವಾಗಿ ಪ್ರಾರಂಭಗೊಳ್ಳಲಿರುವ ‘ಮಾನಕ ಜ್ಯುವೆಲ್ಲರ್ಸ್’ನ ಸರ್ವಸುಸಜ್ಜಿತ ಮಳಿಗೆ ಗ್ರಾಹಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿ ಇವರಿಗೆ ಈ ಉದ್ಯಮದಲ್ಲಿ ಇನ್ನಷ್ಟು ಯಶಸ್ಸು ಸಿಗುವಂತೆ ಮಹಾಲಿಂಗೇಶ್ವರ ದೇವರು ಅನುಗ್ರಹಿಸಲಿ ಎಂಬ ಶುಭಹಾರೈಕೆಗಳು ನಮ್ಮದು.

WhatsAppನಲ್ಲಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ? ಹೇಗೆ ಸರಿಪಡಿಸುವುದು ಎಂಬುದು ಇಲ್ಲಿದೆ

Posted by Vidyamaana on 2024-01-09 04:59:00 |

Share: | | | | |


WhatsAppನಲ್ಲಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ? ಹೇಗೆ ಸರಿಪಡಿಸುವುದು ಎಂಬುದು ಇಲ್ಲಿದೆ

HATSAPP ವಿಶ್ವದ ಅತ್ಯಂತ ಜನಪ್ರಿಯ ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಆದರೆ ನೀವು ಏನು ಹೇಳುತ್ತಿದ್ದೀರಿ ಎಂಬುದರ ಕುರಿತು ಇತರ ಜನರು ಸ್ನೂಪ್ ಮಾಡಲು ಸಾಧ್ಯವಾಗದಿದ್ದರೂ, ಇತರ WhatsApp ಡೇಟಾವನ್ನು ಪ್ರಕ್ರಿಯೆಗೊಳಿಸಲಾಗುತ್ತಿಲ್ಲ ಎಂದರ್ಥವಲ್ಲನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಸೇವ್ ಆಗುತ್ತದೆ. ಇದರಿಂದ ಅವರ ಫೋನಿನ ಮೆಮೋರಿ ಕೂಡ ಬೇಗನೆ ಫುಲ್ ಆಗಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ. ಈರೀತಿ ಸ್ಟೋರೇಜ್ ಫುಲ್ ಆಗದಂತೆ ತಡೆಯಲು ಒಂದು ಟ್ರಿಕ್ ಇದೆ.


ವಾಟ್ಸ್​ಆಯಪ್​ನಲ್ಲಿ ನಿಮಗೆ ಯಾವುದೇ ಮಿಡಿಯಾ ಬಂದರೆ ಅದು ಅಟೋಮೆಟಿಕ್ ಡೌನ್​ಲೋಡ್ ಆಗಿ ಫೋನ್ ಗ್ಯಾಲರಿಯಲ್ಲಿ ಸೇವ್ ಆಗುತ್ತದೆ. ಇದನ್ನು ತಡೆಯಲು ವಾಟ್ಸ್​ಆಯಪ್ ಸೆಟ್ಟಿಂಗ್ಸ್​ನಲ್ಲಿರುವ ಸ್ಟೋರೇಜ್-ಡೇಟಾ ಆಯ್ಕೆಗೆ ತೆರಳಿ ಮಿಡಿಯಾ ಅಟೋ-ಡೌನ್​ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ಹೀಗೆ ಮಾಡಿದರೆ ಫೋಟೋ, ವಿಡಿಯೋ ಅಥವಾ ಯಾವುದೇ ಫೈಲ್​ಗಳು ನೀವು ಡೌನ್​ಲೋಡ್ ಕೊಟ್ಟರೆ ಮಾತ್ರ ಆಗುತ್ತದೆ.


ಇಂದು 16GB, 32GB, 128GB ಮೆಮೊರಿ ಹೊಂದಿರುವ ಸ್ಮಾರ್ಟ್​ಫೋನುಗಳು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB, 128GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್ ನಿಂದಾಗಿ ಫೋನುಗಳು ನಿಧಾನವಾಗುತ್ತವೆ. ಅಂತೆಯೆ ಫೋನ್​ನಲ್ಲಿರುವ ಅಪ್ಲಿಕೇಷನ್​ಗಳನ್ನು ತೆರೆದಂತೆ ಮೊಬೈಲ್​ನಲ್ಲಿ ಅದು ಸ್ಟೋರ್ ಆಗುತ್ತಾ ಹೋಗುತ್ತದೆ.


ಮೊಬೈಲ್​ನಲ್ಲಿ ಹೆಚ್ಚಿನ ಸ್ಥಳ ತಿನ್ನುವುದು ಫೋಟೋ ಮತ್ತು ವಿಡಿಯೋಗಳು. ಈ ತೊಂದರೆಯಿಂದ ದೂರವಾಗಲು ಫೋಟೋ ಮತ್ತು ವಿಡಿಯೋವನ್ನು ಮೊಬೈಲ್​ನಲ್ಲಿ ಸೇವ್ ಮಾಡುವ ಬದಲು ಕ್ಲೌಡ್ ಸ್ಟೊರೇಜ್​ನಲ್ಲಿ ಸೇವ್ ಮಾಡಬಹುದು.


WhatsApp ಡೌನ್‌ಲೋಡ್ ಸೆಟ್ಟಿಂಗ್‌ಗಳಿಗಾಗಿ ಕೆಲವು ಆಯ್ಕೆಗಳನ್ನು ಹೊಂದಿದೆ-ಅವು ಡೇಟಾ ಮತ್ತು ಸಂಗ್ರಹಣೆಯ ಬಳಕೆಯ ಮೆನುವಿನಲ್ಲಿ ಕಂಡುಬರುತ್ತವೆ. Android ಮತ್ತು iOS ಎರಡರಲ್ಲೂ ಆಯ್ಕೆಗಳು ಒಂದೇ ಆಗಿರುತ್ತವೆ. ನೀವು ಮೊಬೈಲ್ ಡೇಟಾವನ್ನು ಅವಲಂಬಿಸಿದ್ದರೆ, ವೈ-ಫೈ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿದ್ದರೆ ಅಥವಾ ಎಂದಿಗೂ ಮಾಧ್ಯಮವು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುತ್ತದೆಯೇ ಎಂಬುದನ್ನು ನೀವು ಆಯ್ಕೆ ಮಾಡಬಹುದು. ನೀವು ರೋಮಿಂಗ್‌ನಲ್ಲಿರುವಾಗ ಸ್ವಯಂಚಾಲಿತ ಡೌನ್‌ಲೋಡ್‌ಗಳನ್ನು ಮಿತಿಗೊಳಿಸುವ ಆಯ್ಕೆಯನ್ನು ಆಂಡ್ರಾಯ್ಡ್ ಹೊಂದಿದೆ.


ಡೀಫಾಲ್ಟ್ ಆಗಿ, ನೀವು ಮೊಬೈಲ್ ಡೇಟಾ ಸಂಪರ್ಕವನ್ನು ಹೊಂದಿರುವಾಗ WhatsApp ಚಿತ್ರಗಳನ್ನು ಮತ್ತು ನೀವು Wi-Fi ನೆಟ್‌ವರ್ಕ್‌ಗೆ ಸಂಪರ್ಕಗೊಂಡಾಗ ವೀಡಿಯೊವನ್ನು ಡೌನ್‌ಲೋಡ್ ಮಾಡುತ್ತದೆ. ಈ ಆಯ್ಕೆಗಳನ್ನು ಎಂದಿಗೂ ಅಥವಾ Wi-Fi ನಲ್ಲಿ ಎಲ್ಲವನ್ನೂ ಡೌನ್‌ಲೋಡ್ ಮಾಡಲು ಮಾತ್ರ ಬದಲಾಯಿಸುವುದು ಕೆಲವು ಮೊಬೈಲ್ ಡೇಟಾವನ್ನು ಉಳಿಸಲು ಸಹಾಯ ಮಾಡುತ್ತದೆ ಆದರೆ ನೀವು ಅದನ್ನು ಡೌನ್‌ಲೋಡ್ ಮಾಡಲು ಬಯಸಿದಾಗ ಪ್ರತಿ ಚಿತ್ರ ಅಥವಾ ವೀಡಿಯೊವನ್ನು ಟ್ಯಾಪ್ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯೊಂದಿಗೆ ಬರುತ್ತದೆ.

ಮಂಗಳೂರು ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಆರೋಪ

Posted by Vidyamaana on 2023-07-26 11:13:11 |

Share: | | | | |


ಮಂಗಳೂರು  ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಆರೋಪ

ಮಂಗಳೂರು: ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಗರ್ಭಿಣಿ ಮೃತಪಟ್ಟಿರುವುದಾಗಿ ಆರೋಪಿಸಿ ಮಹಿಳೆಯ ಕುಟುಂಬ ಸದಸ್ಯರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಮಂಗಳೂರಿನಲ್ಲಿ ನಡೆದಿದೆ.


ಆಂಬುಲೆನ್ಸ್ ನಲ್ಲಿ ಶವ ಮುಂದಿಟ್ಟು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯ ಶಿಲ್ಪಾ ಆಚಾರ್ಯ ಹೆರಿಗೆ ನೋವಿನ ಹಿನ್ನೆಲೆ ಜುಲೈ 2ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಪರೀಕ್ಷಿಸಿದ ಡ್ಯೂಟಿ ಡಾಕ್ಟರ್ ಸಿಜೆರಿಯನ್ ಮಾಡಿ ಡೆಲೆವರಿ ಮಾಡಬೇಕೆಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯ ಮನೆಯವರು ವೈದ್ಯೆ ವೀಣಾಗೆ ಕರೆ ಮಾಡಿದಾಗ ಭಾನುವಾರವಾದ ಕಾರಣ ಬರಲ್ಲ ಎಂದಿದ್ದರು.



ಶಿಲ್ಪಾರ ಕುಟುಂಬದ ಮೂಲದ ಪ್ರಕಾರ, ಅದೇ ದಿನ ಡಾ. ವೀಣಾ ಅನುಪಸ್ಥಿತಿಯಲ್ಲಿ ಬೇರೆ ವೈದ್ಯರು ಶಿಲ್ಪಾರಿಗೆ ಸಿಜೆರಿಯನ್ ಮಾಡಿ ಡೆಲೆವರಿ ಮಾಡಿದ್ದಾರೆ. ಆ ಬಳಿಕ ಹೆಣ್ಣು ಮಗು ಆಗಿದೆ, ಆದರೇ ಗರ್ಭಕೋಶವನ್ನು ತೆಗೆಯಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು. ಎರಡು ದಿನಗಳ ನಂತರ ಶಿಲ್ಪಾಗೆ ಜ್ವರ ಬಂದಿದೆ ಎಂದು ಚಿಕಿತ್ಸೆ ನೀಡಿದ್ದಾರೆ. 5 ದಿನಗಳ ನಂತರ ಬ್ರೆನ್ ಮೇಜರ್ ಡ್ಯಾಮೇಜ್ ಆಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ಮೃತರ ಪತಿ ಪ್ರದೀಪ್ ಆಚಾರ್ಯ ಮಾಹಿತಿ ನೀಡಿದ್ದಾರೆ. ಆದರೆ ಜುಲೈ 25 ರಂದು ಬಾಣಂತಿ ಶಿಲ್ಪಾ ಆಚಾರ್ಯ ಮೃತಪಟ್ಟಿದ್ದು ವೈದ್ಯರ ನಿರ್ಲಕ್ಷಕ್ಕೆ ಆಕೆಯ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಆಕೆಯ ಪತಿ ಠಾಣೆಗೆ ದೂರು ನೀಡಿದ್ದಾರೆ. ಇಂದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲು ಪೊಲೀಸರು ಬಂದಿದ್ದು, ಈ ವೇಳೆ ಖಾಸಗಿ ಆಸ್ಪತ್ರೆ ಬಳಿ ಮೃತದೇಹ ತಡೆದು ಸಂಬಂಧಿಕರು, ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ .

ಮಗನ ಉತ್ತರಕ್ರಿಯೆ ನಡೆದ ಎರಡೇ ದಿನದಲ್ಲಿ ತಂದೆ ಆತ್ಮಹತ್ಯೆಗೆ ಶರಣು

Posted by Vidyamaana on 2024-01-16 15:32:09 |

Share: | | | | |


ಮಗನ ಉತ್ತರಕ್ರಿಯೆ ನಡೆದ ಎರಡೇ ದಿನದಲ್ಲಿ ತಂದೆ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ, ಜ.16: ಮಗ ಆತ್ಮಹತ್ಯೆ ಮಾಡಿಕೊಂಡ 13 ದಿನಕ್ಕೆ ತಂದೆಯೂ ಆತ್ಮಹತ್ಯೆಗೆ ಶರಣಾದ ಘಟನೆ ಉಜಿರೆಯಲ್ಲಿ ನಡೆದಿದೆ. ಉಜಿರೆ ಗ್ರಾಮದ ಪೆರ್ಲ ನಿವಾಸಿ ಯೊಗೀಶ್ ಪೂಜಾರಿ (41) ಆತ್ಮಹತ್ಯೆ ಮಾಡಿಕೊಂಡವರು.‌


ಜ.4 ರಂದು ಎಂಟನೇ ತರಗತಿ ಓದುತ್ತಿದ್ದ ಮಗ ಯಕ್ಷಿತ್ (14) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಉತ್ತರ ಕ್ರಿಯೆ ಜ.14ರಂದು ಭಾನುವಾರ ನಡೆದಿತ್ತು. ಯೋಗಿಶ್ ಪೂಜಾರಿ ಮತ್ತು ರೇಷ್ಮಾ ದಂಪತಿಯ ಪುತ್ರ ಯಕ್ಷಿತ್ (14) ಸಾವಿಗೆ ತಮ್ಮನ ಜೊತೆಗಿನ ಕ್ಷುಲ್ಲಕ ಜಗಳ ಕಾರಣ ಎನ್ನಲಾಗಿತ್ತು. 


ಆರು ವರ್ಷದ ತಮ್ಮನ ಜೊತೆ ಪದೇ ಪದೇ ಗಲಾಟೆ ನಡೆದಿತ್ತು.‌ ಈ ಸಲ ಗಲಾಟೆಯಲ್ಲಿ ತಮ್ಮ ಅಣ್ಣನ ಹೊಟ್ಟೆ ಮೇಲೆ ಕಚ್ಚಿ ಗಾಯ ಮಾಡಿದ್ದ. ಇದೇ ವಿಚಾರದಲ್ಲಿ ನೊಂದು ತಮ್ಮನ ಎದುರೇ ಯಕ್ಷಿತ್ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ. ಯಕ್ಷಿತ್ ಉಜಿರೆ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿದ್ದ. 


ಮನೆಯ ಕೊಠಡಿಯಲ್ಲೇ ತಾಯಿಯ ಸೀರೆಯನ್ನು ಬಿಗಿದುಕೊಂಡು ನೇಣಿಗೆ ಶರಣಾಗಿದ್ದ. ತಂದೆ -ತಾಯಿ ಕೆಲಸಕ್ಕೆ ಹೋದ ಬಳಿಕ ಬಾಲಕ ದುರಂತ ಸಾವಿಗೀಡಾಗಿದ್ದು ಉಜಿರೆಯ ಜನರ ಮನ ಕಲಕಿತ್ತು. ಬೆಳ್ತಂಗಡಿ ಪೊಲೀಸರು ಸ್ಥಳ ಪರಿಶೀಲಿಸಿ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದರು. ಇದೀಗ ಮಗನ ಉತ್ತರ ಕ್ರಿಯೆ ನಡೆದು ಎರಡೇ ದಿನದಲ್ಲಿ ತಂದೆಯೂ ಸಾವಿಗೆ ಶರಣಾಗಿದ್ದಾರೆ

ಶ್ರೀ ರಾಮನ ಪ್ರಾಣಪ್ರತಿಷ್ಠೆ: ಸಿಹಿತಿಂಡಿ ಹಂಚಿ ಸಂಭ್ರಮ

Posted by Vidyamaana on 2024-01-22 21:11:36 |

Share: | | | | |


ಶ್ರೀ ರಾಮನ ಪ್ರಾಣಪ್ರತಿಷ್ಠೆ: ಸಿಹಿತಿಂಡಿ ಹಂಚಿ ಸಂಭ್ರಮ

ಪುತ್ತೂರು: ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಠೆ  ಹಿನ್ನೆಲೆಯಲ್ಲಿ ಪುತ್ತೂರಿನ ರಾಧಿಕ ಪ್ಲಾಜ್ಹಾ ಹಾಗೂ  ರಾಘವೇಂದ್ರ ಕಾಂಪ್ಲೆಕ್ಸ್ ನಲ್ಲಿ 

ಲಘು ಉಪಹಾರ, ಸಿಹಿತಿಂಡಿ ಹಾಗೂ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭ ಆರ್ . ಭಾನುಪ್ರಕಾಶ್,ಜಗದೀಶ್ ಆಚಾರ್ಯ,ಕೃಷ್ಣಪ್ಪ ಗೌಡ,ರೋಹಿತ್,ನಾಗೇಶ್ ಆಚಾರ್ಯ,ಸಂತೋಷ ಬಂಬಿಲ ,ಪದ್ಮನಾಭ,ಅಭಿಷೇಕ್,ರಾಜೇಶ್ ಆಚಾರ್ಯ,ವಿನೋದ್,ಕೇಶವ ಅಭಿರಾ,ವೆಂಕಟೇಶ್,ಗಣೇಶ್ ಕೊಡಿಯಾಡಿ,ದೀಕ್ಷಿತ್,ಹರ್ಷಿತ್

ಹರೀಶ್ ಸಾವಿತ್ರಿ ಜ್ಯುವೆಲರಿ,ಕೃಷ್ಣಯ್ಯಾ ಆಚಾರ್ಯ,ಪ್ರಸಾದ್ ಸುಬ್ರಮಣ್ಯ,ಗಣೇಶ್ ವಿಟ್ಲ,ರಾಮಣ್ಣ ನಿಡ್ದ್ಪಳಿ,ಚಂದ್ರ ಸುಳ್ಯ ಉಪಸ್ಥಿತರಿದ್ದರು

Recent News


Leave a Comment: