ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಸುದ್ದಿಗಳು News

Posted by vidyamaana on 2024-07-08 11:07:30 | Last Updated by Vidyamaana on 2024-07-08 11:07:30

Share: | | | | |


ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಮಂಗಳೂರು(ಇಟ್ಟಿಕುಳಂ): ಉಳ್ಳಾಲ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಜಳ್ ನಿಧನರಾಗಿದ್ದಾರೆ. ಕಣ್ಣೂರಿನ ಇಟ್ಟಿಕುಳಂ ನಿವಾಸಿಯಾಗಿರುವ ಹಾಗೂ ಉಳ್ಳಾಲ ಖಾಝಿಯಾಗಿದ್ದ ಇವರು ಕೂರ ತಂಜಳ್ ಎಂದೇ ಪ್ರಸಿದ್ದರಾಗಿದ್ದರು. ಅಲ್ಪಕಾಲದಿಂದ ಅನಾರೋಗ್ಯದಿಂದಿದ್ದ ಅವರು ಇಂದು ಬೆಳಿಗ್ಗೆ ನಿಧರಾಗಿದ್ದಾರೆ.

ಮೃತರು ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಇಂದು ರಾತ್ರಿ 9

ಗಂಟೆ ವೇಳೆಗೆ ಕೂರ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ. ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಇಂದು ಸಂಜೆ 5 ಗಂಟೆಗೆ ಕೂರ ಮಸೀದಿಯಲ್ಲಿ ನಡೆಯಲಿರುವ ಜನಾಝಾನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಆ. 20ರಂದು ಪುತ್ತಿಲ ಪರಿವಾರದಿಂದ ಸಮಾಗಮ

Posted by Vidyamaana on 2023-08-19 13:25:39 |

Share: | | | | |


ಆ. 20ರಂದು ಪುತ್ತಿಲ ಪರಿವಾರದಿಂದ ಸಮಾಗಮ

ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ ಬಳಿಕ ಹುಟ್ಟಿಕೊಂಡ ಪುತ್ತಿಲ ಪರಿವಾರ ಆ. 20ರಂದು ಪುತ್ತೂರಿನ ಕೋಟೆಚಾ ಹಾಲಿನಲ್ಲಿ ಸಮಾಗಮ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಪುತ್ತಿಲ ಪರಿವಾರದ ನಗರ ಮತ್ತು ಗ್ರಾಮಾಂತರದ ಬೂತ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳಿಗೆ ಹಲವು ಪ್ರಮುಖ ಅಭ್ಯಾಗತರಿಂದ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಾಗಾರಕ್ಕೆ ಸಮಾಗಮ ಎಂದು ಹೆಸರಿಡಲಾಗಿದೆ.

ಆದಿತ್ಯವಾರ ಮಧ್ಯಾಹ್ನ 2.30ಕ್ಕೆ ಕಾರ್ಯಾಗಾರ ಪ್ರಾರಂಭವಾಗಲಿದೆ. ಪುತ್ತಿಲ ಪರಿವಾರದ ತಾಲೂಕಿನ ಎಲ್ಲಾ ಪದಾಧಿಕಾರಿಗಳು, ಗ್ರಾಮ ಸಮಿತಿ ಗೌರವ ಸಲಹೆಗಾರರು, ತಾಲೂಕಿನ ಎಲ್ಲಾ 220  ಬೂತ್ ನ  ಅಧ್ಯಕ್ಷ, ಕಾರ್ಯದರ್ಶಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ ತಿಳಿಸಿದ್ದಾರೆ.

ಸೌದಿ ಜೈಲಿನಲ್ಲಿ ಹದಿನೆಂಟು ವರ್ಷಗಳ ಸೆರೆವಾಸ ಮುಕ್ತಿಗೆ ಕಲೆಕ್ಟ್ ಆಯ್ತು 34 ಕೋಟಿ ರೂಪಾಯಿ

Posted by Vidyamaana on 2024-04-12 20:41:04 |

Share: | | | | |


ಸೌದಿ ಜೈಲಿನಲ್ಲಿ ಹದಿನೆಂಟು ವರ್ಷಗಳ ಸೆರೆವಾಸ ಮುಕ್ತಿಗೆ ಕಲೆಕ್ಟ್ ಆಯ್ತು 34 ಕೋಟಿ ರೂಪಾಯಿ

ಕೋಝಿಕ್ಕೋಡ್: ಸೌದಿ ಅರೇಬಿಯಾದಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೋಝಿಕ್ಕೋಡ್‌ನ ಕೋಡಂಪುಳ ಮೂಲದ ಅಬ್ದುಲ್ ರಹೀಮ್ ಬಿಡುಗಡೆಗೆ ನಿಧಿ ಸಂಗ್ರಹಿಸುವುದು ಇದರ ಉದ್ದೇಶವಾಗಿತ್ತು. ರಿಯಾದ್‌ನಲ್ಲಿ ಬಂಧಿಯಾಗಿರುವ ಅಬ್ದುಲ್ ರಹೀಮ್ ಬಿಡುಗಡೆಗಾಗಿ ಕೇರಳ ರಾಜ್ಯದ ಒಳಗೆ ಮತ್ತು ಹೊರಗೆ ಸರಿಸಾಟಿಯಿಲ್ಲದ ನಿಧಿ ಸಂಗ್ರಹ ನಡೆಯಿತು. ನಿಗದಿತ ಸಮಯಕ್ಕಿಂತ ಎರಡು ದಿನ ಮುಂಚಿತವಾಗಿ 34 ಕೋಟಿ ರೂ. ಪ್ರಪಂಚದ ಹಲವು ಭಾಗಗಳಿಂದ ಬಂದಿರುವ ಮಲಯಾಳಿಗಳು ಕೈಯಲ್ಲಿ ಹಣ ಸಿಕ್ಕಿತು. 18 ವರ್ಷಗಳಿಂದ ಜೈಲಿನಲ್ಲಿರುವ ಅಬ್ದುಲ್ ರಹೀಮ್ ಬಿಡುಗಡೆಗೆ ಸಂಗ್ರಹಿಸಿದ ಹಣವನ್ನು ಭಾರತೀಯ ರಾಯಭಾರಿ ಕಚೇರಿ ಮೂಲಕ ಸೌದಿ ಕುಟುಂಬಕ್ಕೆ ನೀಡಲಾಗುವುದು. 2006 ರಲ್ಲಿ, ಸೌದಿ ಅರೇಬಿಯಾದ 15 ವರ್ಷದ ಸ್ಥಳೀಯರು ಆಕಸ್ಮಿಕವಾಗಿ ಕೈ ಗಾಯದಿಂದ ಸಾವನ್ನಪ್ಪಿದರು.


ಅಬ್ದುಲ್ ರಹೀಮ್ ಬಿಡುಗಡೆಗಾಗಿ ಆರಂಭಿಸಲಾದ ಟ್ರಸ್ಟ್ ಮೂಲಕ ಪ್ರಮುಖ ನಿಧಿ ಸಂಗ್ರಹವಾಗಿತ್ತು. 31,93,46,568 ಬ್ಯಾಂಕ್ ತಲುಪಿದೆ. ಮನೆಗೆ ನೇರವಾಗಿ 2.52 ಕೋಟಿ ರೂ. ಇದರ ಪ್ರಕಾರ 34,45,46,568 ರೂ. ಬಾಬಿ ಚೆಮ್ಮನ್ನೂರ್ ನೀಡಿದ ಒಂದು ಕೋಟಿ ರೂಪಾಯಿ ಕೊಡುಗೆಯಿಂದ ಈ ಮೊತ್ತ ತಲುಪಿದೆ ಎಂದು ಹಣಕಾಸು ಸಮಿತಿಯ ಅಧಿಕಾರಿಗಳು ತಿಳಿಸಿದ್ದಾರೆ.ಅಬ್ದುಲ್ ರಹೀಮ್ ಫಾರೂಕ್ ಕೊಡಂಪುಳದವರಾಗಿದ್ದು, 18 ವರ್ಷಗಳಿಂದ ರಿಯಾದ್ ಜೈಲಿನಲ್ಲಿದ್ದಾರೆ. 

ಇಂಮ್ತಿಯಾಝ್ ಪರ್ಪುಂಜ ಹೃದಯಾಘಾತದಿಂದ ನಿಧನ

Posted by Vidyamaana on 2023-06-18 15:54:13 |

Share: | | | | |


ಇಂಮ್ತಿಯಾಝ್ ಪರ್ಪುಂಜ ಹೃದಯಾಘಾತದಿಂದ ನಿಧನ

ಪುತ್ತೂರು : ಮೂಲತ ಪರ್ಪುಂಜ ನಿವಾಸಿ ಸಂಪ್ಯ ಗ್ರಾಮಾಂತರ ಪೋಲೀಸ್ ಠಾಣೆಯ ಹಿಂಬದಿಯ ಪ್ಲಾಟ್ ನ ವಾಸವಾಗಿರುವ  ಹಾಗೂ ಪುತ್ತೂರಿನ ಸ್ಟಾರ್ ಒಪ್ಟಿಕಲ್ಸ್ ನಲ್ಲಿ ಉದ್ಯೋಗ ದಲ್ಲಿರುವ  ಇಂಮ್ತಿಯಾಝ್ ರವರು ಹೃದಯಾಘಾತದಿಂದ ಜೂ 18 ರಂದು ನಿಧನರಾದರು.ತಾಯಿ ಪತ್ನಿ, ಪುತ್ರಿಯರನ್ನು ಮತ್ತು ಸಹೋದರನ್ನು ಅಗಲಿದ್ದಾರೆ.

ಬ್ರೈಟ್ ಭಾರತ್ ಸಂಸ್ಥೆ ವತಿಯಿಂದ ಪ್ರಜ್ಞಾ ಆಶ್ರಮಕ್ಕೆ ವೀಲ್ ಚಯರ್ ಹಸ್ತಾಂತರ ಅಕ್ಕಿ ವಿತರಣೆ

Posted by Vidyamaana on 2023-10-29 10:46:39 |

Share: | | | | |


ಬ್ರೈಟ್ ಭಾರತ್ ಸಂಸ್ಥೆ ವತಿಯಿಂದ ಪ್ರಜ್ಞಾ ಆಶ್ರಮಕ್ಕೆ ವೀಲ್ ಚಯರ್ ಹಸ್ತಾಂತರ ಅಕ್ಕಿ ವಿತರಣೆ

ಪುತ್ತೂರು: ಬ್ರೈಟ್ ಭಾರತ್ ಸಂಸ್ಥೆಯ ವತಿಯಿಂದ, ಪುತ್ತೂರಿನ ಬಿರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ವೀಲ್ ಚಯರ್ ಹಸ್ತಾಂತರ ಹಾಗೂ ಆಶ್ರಮದ ಭಿನ್ನ ಸಾಮರ್ಥ್ಯದ ರೋಗಿಗಳಿಗೆ ಸಿಹಿತಿಂಡಿ ಹಾಗೂ ಅಕ್ಕಿ ವಿತರಣಾ ಕಾರ್ಯಕ್ರಮ ಅ. 28ರಂದು ಆಶ್ರಮದ ವಠಾರದಲ್ಲಿ ನಡೆಯಿತು.


  ಆಶ್ರಮಕ್ಕೆ ತೆರಳಿದ ಬ್ರೈಟ್ ಭಾರತ್ ಸಂಸ್ಥೆಯ ಪಾಲುದಾರರು, ಅಲ್ಲಿನ ಭಿನ್ನ ಸಾಮರ್ಥ್ಯದ ರೋಗಿಗಳೊಂದಿಗೆ, ಒಂದಿಷ್ಟು ಸಮಯ ಕಳೆದು, ಆಶ್ರಮಕ್ಕೆ ಬೇಕಾದ ಅಕ್ಕಿ, ವೀಲ್ ಚೆಯರ್ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಸಮಾಜ ಸೇವಕ ಅಲಿ ಪರ್ಲಡ್ಕ, ಸಂತೋಷ್ ಗೋಳಿಕಟ್ಟೆ, ಮೂರ್ತಿ ಕಲಾವಿದರಾದ ತಾರಾನಾಥ ಆಚಾರ್ಯ, ಆಶ್ರಮದ ಮುಖ್ಯಸ್ಥರಾದ ಅಣ್ಣಪ್ಪ, ಹಾಗೂ ಅವರ ಪತ್ನಿ ಜ್ಯೋತಿ ಮತ್ತು  ಬ್ರೈಟ್ ಭಾರತ್ ಸಂಸ್ಥೆಯ ಪಾಲುದಾರರು ಉಪಸ್ಥಿತರಿದ್ದರು.

ಬೆಳ್ತಂಗಡಿ : ಏಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ

Posted by Vidyamaana on 2023-06-14 02:05:46 |

Share: | | | | |


ಬೆಳ್ತಂಗಡಿ : ಏಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 2012 ರಲ್ಲಿ ದಾಖಲಾಗಿದ್ದ ಗುರುವಾಯನಕೆರೆಯಲ್ಲಿ ಅಪಘಾತವಾಗಿ ಓರ್ವನ ಸಾವಿಗೆ ಕಾರಣವಾಗಿದ್ದ ಪ್ರಕರಣದಲ್ಲಿ  ಸುಮಾರು 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿದ  ವಾರಂಟ್ಆರೋಪಿ ಸಯ್ಯದ್ ಅಬಸಾರ್ ಎಂಬವರ ಮಗ ಸಯ್ಯದ್ ಶಬೀರ್ (33) ಎಂಬಾತನನ್ನು ಜೂನ್ 12 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವ್ರಷಭ ಹಾಗು ಬಸವರಾಜ್ ರವರು  ಬೆಂಗಳೂರು  ಪೀಣ್ಯದಿಂದ ವಶಕ್ಕೆ ಪಡೆದು ಜೂನ್ 13 ರಂದು ಬೆಳ್ತಂಗಡಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ಷರತ್ತುಬದ್ದ ಜಾಮೀನಿನಲ್ಲಿ ಬಿಡುಗಡೆ ಮಾಡಿದೆ.

ಸುಳ್ಯ ಒಡಹುಟ್ಟಿದವರಿಂದಲೇ ಕೊಲೆಯಾದ ಉಸ್ಮಾನ್

Posted by Vidyamaana on 2023-07-14 08:18:06 |

Share: | | | | |


ಸುಳ್ಯ ಒಡಹುಟ್ಟಿದವರಿಂದಲೇ ಕೊಲೆಯಾದ ಉಸ್ಮಾನ್

ಸುಳ್ಯ : ತಮ್ಮಂದಿರು ಸೇರಿ ಅಣ್ಣನನ್ನು ಇರಿದು ಕೊಲೆಗೈದ ಘಟನೆ ಭೀಕರ ಘಟನೆ ಸುಳ್ಯ ಸಂಪಾಜೆಯ ಸಮೀಪದ ಚೆಂಬು ಗ್ರಾಮದಲ್ಲಿ ನಡೆದಿದೆ.


ಆಸ್ತಿ ವಿವಾದ ಹಿನ್ನಲೆಯಲ್ಲಿ ಈ ಹತ್ಯೆ ನಡೆದಿದ್ದು, ಕುದ್ರೆಪಾಯ ನಿವಾಸಿ ಉಸ್ಮಾನ್ ಹತ್ಯೆಯಾದ ದುರ್ದೈವಿ.


ಸತ್ತಾರ್, ರಫೀಕ್, ಇಸುಬು,ಅಬ್ಬಾಸ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಕೃಷಿ ಭೂಮಿ ಸುಮಾರು 50 ಎಕ್ರೆ ಜಾಗ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವಿತ್ತು. ಶುಕ್ರವಾರ ಇವರು ಚೆಂಬು ಗ್ರಾಮದ ಕುದ್ರೆಪಾಯದ ಸಮೀಪ ಇರುವ ಜಾಗಕ್ಕೆ ಹೋಗಿದ್ದರು. ಈ ವೇಳೆ ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದಿದೆ. ತೀವ್ರ ಚರ್ಚೆ ನಡೆದು ಕೋಪದ ತೀವ್ರತೆಯಲ್ಲಿ ಸಹೋದರರು ಸೇರಿ ಚೂರಿಯಿಂದ ಇರಿದು ಉಸ್ಮಾನ್ ನನ್ನು ಹತ್ಯೆ ನಡೆಸಿರುವುದಾಗಿ ತಿಳಿದುಬಂದಿದೆ.


ಉಸ್ಮಾನ್ ಕುದ್ರೆಪಾಯದಲ್ಲಿ ಭೂಮಿ ಹೊಂದಿದ್ದರು. ಅರಂತೋಡಿನಲ್ಲೂ ಇವರಿಗೆ ಜಾಗವಿದೆ ಎಂದು ತಿಳಿದು ಬಂದಿದೆ. ಸದ್ಯ ಇವರು ಪುತ್ತೂರಿನ ಸಂಪ್ಯದಲ್ಲಿ ನೆಲೆಸಿದ್ದರು ಎನ್ನಲಾಗುತ್ತಿದೆ. ಸಂಪಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Recent News


Leave a Comment: