ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಸುದ್ದಿಗಳು News

Posted by vidyamaana on 2024-07-08 14:36:42 |

Share: | | | | |


ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಬೆಂಗಳೂರು : ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ದಿಯಾ ಮಂಡೋಲ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.ದಿಯಾ ಮಂಡೋಲ್ ಪಶ್ಚಿಮ ಬಂಗಾಳ‌ ಮೂಲದವಳಾಗಿದ್ದು, ಮದರ್ ಥೆರೆಸಾ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದಳು.

ಮೂರು ದಿನಗಳ ಹಿಂದೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ದಿಯಾ ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಸ್ಟೆಲ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹಪಾಠಿಗಳು ರೂಮಿಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

 Share: | | | | |


ಗೃಹಜ್ಯೋತಿಗೆ ಇದುವರೆಗೂ ಅರ್ಜಿ ಸಲ್ಲಿಸದವರಿಗೆ ಉಚಿತ ವಿದ್ಯುತ್ ಇಲ್ವಾ

Posted by Vidyamaana on 2023-07-13 17:07:27 |

Share: | | | | |


ಗೃಹಜ್ಯೋತಿಗೆ ಇದುವರೆಗೂ ಅರ್ಜಿ ಸಲ್ಲಿಸದವರಿಗೆ ಉಚಿತ ವಿದ್ಯುತ್ ಇಲ್ವಾ

ಚಿಕ್ಕಮಗಳೂರು : ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಇಂದಿನಿಂದ (ಜುಲೈ 1) ಜಾರಿಗೆ ಬರುತ್ತಿದೆ. ಆದರೆ, ಅರ್ಜಿ ಹಾಕದವರಿಗೆ ಉಚಿತ ವಿದ್ಯುತ್ ಇಲ್ಲ, ಅರ್ಜಿ ಹಾಕದೇ ಉಚಿತ ಹೇಗೆ ಕೊಡೋದು. ಜುಲೈ ಕೊನೆ ವಾರದೊಳಗೆ ಅರ್ಜಿ ಸಲ್ಲಿಸಿದವರಿಗೆ ಉಚಿತ ವಿದ್ಯುತ್ ಯೋಜನೆಯ ಲಾಭ ಸಿಗಲಿದೆ ಎಂದು ಇಂಧನ


ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈಗಾಗಲೇ 86.5 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಜುಲೈ 1ರಿಂದ ಎಲ್ಲರಿಗೂ ಉಚಿತ ವಿದ್ಯುತ್ ಸಿಗಲಿದೆ. ಜೂನ್ ತಿಂಗಳಿನ ವಿದ್ಯುತ್ ಬಿಲ್ ಜುಲೈ ತಿಂಗಳಲ್ಲಿ ಬರಲಿದೆ. ಗೃಹಜ್ಯೋತಿ ಯೋಜನೆಗೆ ಅರ್ಹತೆ ಹೊಂದಿರುವವರಿಗೆ ಆಗಸ್ಟ್ ಒಂದಕ್ಕೆ ಈ ಯೋಜನೆಯ ಲಾಭ ಸಿಗಲಿದೆ ಎಂದು ಹೇಳಿದರು.ಗೃಹ ಜ್ಯೋತಿ ಯೋಜನೆಗೆ ಅರ್ಜಿ ಹಾಕದವರು ಬೇಗ ಹಾಕಬೇಕು. ಕೆಇಬಿ ಆಫೀಸ್‌ಗೆ ಹೋಗಿ ಅರ್ಜಿಯನ್ನು ಕೊಡಬಹುದು. ಅರ್ಜಿ ಹಾಕಲು ಈಗ ಅಷ್ಟು ಸಮಸ್ಯೆ ಇಲ್ಲ, ಒತ್ತಡ ಕಡಿಮೆ ಆಗಿದೆ. ಅರ್ಜಿ ಹಾಕಲು ಯಾವುದೇ ಡೆಡ್‌ಲೈನ್ ಅನ್ನು ನಾವು ನೀಡಿಲ್ಲ. ಆದರೆ, ಅರ್ಜಿ ಹಾಕದಿದ್ದರೆ ಉಚಿತ ವಿದ್ಯುತ್ ಸಿಗುವುದಿಲ್ಲ. ಅರ್ಜಿ ಹಾಕಲೇಬೇಕು. ಅರ್ಜಿ ಸಲ್ಲಿಸುವುದು ತಡವಾದರೆ, ಸೌಲಭ್ಯ ಸಿಗುವುದು ಕೂಡ ವಿಳಂಬ ಆಗುತ್ತದೆ ಎಂದರು.ಆಗಸ್ಟ್ 1 ರಿಂದ ಜುಲೈ ತಿಂಗಳಿನಿಂದ ಬಿಲ್ಲಿಂಗ್ ಮಾಡುತ್ತೇವೆ. ಅಷ್ಟರೊಳಗೆ ಅರ್ಜಿಯನ್ನು ಸಲ್ಲಿಸಿದ್ದವರಿಗೆ ಉಚಿತ ವಿದ್ಯುತ್ ಯೋಜನೆಯ ಸೌಲಭ್ಯ ಸಿಗುತ್ತದೆ. ಅರ್ಜಿ ಹಾಕದಿದ್ದರೆ ಮುಂದಿನ ತಿಂಗಳ ಬಿಲ್‌ನಲ್ಲಿ ವಿನಾಯಿತಿ ಸಿಗಲ್ಲ. ಎಲ್ಲರೂ ಆದಷ್ಟು ಬೇಗ ಅರ್ಜಿ ಹಾಕುವುದು ಒಳ್ಳೆಯದು. ಇನ್ನು ಟೈಂ ಇದೆ, ಬೇಗ ಅರ್ಜಿ ಹಾಕಲಿ ಎಂದು ಕೆಜೆ ಜಾರ್ಜ್ ಜನರಿಗೆ ಕರೆ ನೀಡಿದರು.ಶನಿವಾರದಿಂದ ಯೋಜನೆ ಜಾರಿ!


ಕಾಂಗ್ರೆಸ್ ಸರ್ಕಾರ ತಾನೂ ಚುನಾವಣೆ ವೇಳೆ ಘೋಷಿಸಿದಂತೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡುವ ಯೋಜನೆ ಗೃಹಜ್ಯೋತಿ ಜುಲೈ 1ರಿಂದ ಜಾರಿಯಾಗಿದೆ. ಜೂನ್ 18ರಿಂದಲೇ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈಗಾಗಲೇ 86 ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ಕಳೆದ ಒಂದು ವರ್ಷದ ವಿದ್ಯುತ್ ಬಳಕೆಯ ಪ್ರಮಾಣದ ಸರಾಸರಿ ಜೊತೆಗೆ ಹೆಚ್ಚುವರಿ ಶೇ.10ರಷ್ಟು ವಿದ್ಯುತ್ ಅನ್ನು ಉಚಿತವಾಗಿ ಸರ್ಕಾರ ನೀಡಲಿದೆ. 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಉಚಿತ ವಿದ್ಯುತ್ ಲಾಭ ಜನರಿಗೆ ಸಿಗುವುದಿಲ್ಲ.ಶನಿವಾರದಿಂದ ಯೋಜನೆ ಜಾರಿ!


ಕಾಂಗ್ರೆಸ್ ಸರ್ಕಾರ ತಾನೂ ಚುನಾವಣೆ ವೇಳೆ ಘೋಷಿಸಿದಂತೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡುವ ಯೋಜನೆ ಗೃಹಜ್ಯೋತಿ ಜುಲೈ 1ರಿಂದ ಜಾರಿಯಾಗಿದೆ. ಜೂನ್ 18ರಿಂದಲೇ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈಗಾಗಲೇ 86 ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ಕಳೆದ ಒಂದು ವರ್ಷದ ವಿದ್ಯುತ್ ಬಳಕೆಯ ಪ್ರಮಾಣದ ಸರಾಸರಿ ಜೊತೆಗೆ ಹೆಚ್ಚುವರಿ ಶೇ.10ರಷ್ಟು ವಿದ್ಯುತ್ ಅನ್ನು ಉಚಿತವಾಗಿ ಸರ್ಕಾರ ನೀಡಲಿದೆ. 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಉಚಿತ ವಿದ್ಯುತ್ ಲಾಭ ಜನರಿಗೆ ಸಿಗುವುದಿಲ್ಲ.ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ಸೇವಾಸಿಂಧು ಪೋರ್ಟಲ್ ಅನ್ನು ರೂಪಿಸಲಾಗಿದೆ. ಮೊದಲ ವಾರ ಸರ್ವರ್ ಬ್ಯುಸಿಯಿಂದ ಜನರು ಅರ್ಜಿ ಸಲ್ಲಿಸಲು ಪರದಾಡಿದ್ದರು. ಈಗ ಸರ್ವರ್ ಸಮಸ್ಯೆ ಅಷ್ಟೊಂದು ಕಾಣುತ್ತಿಲ್ಲ. ಈಗ ಅರ್ಜಿಯನ್ನು ಜನರ ತಮ್ಮ ಮೊಬೈಲ್ ಮತ್ತು ಕಂಪ್ಯೂಟರ್‌ಗಳಲ್ಲಿ ಸಲ್ಲಿಸಬಹುದಾಗಿದೆ

ಬಡವು ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ವತಿಯಿಂದ ಬಡ ಕುಟುಂಬಕ್ಕೆ ದೈನಂದಿನ ದಿನಸಿ ಸಾಮಾಗ್ರಿಗಳ ನೆರವು

Posted by Vidyamaana on 2023-07-23 17:17:55 |

Share: | | | | |


ಬಡವು ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ವತಿಯಿಂದ ಬಡ ಕುಟುಂಬಕ್ಕೆ ದೈನಂದಿನ ದಿನಸಿ ಸಾಮಾಗ್ರಿಗಳ ನೆರವು

ಮಂಜೇಶ್ವರ : ಬಡವು ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ  ಯೋಜನೆಯ 57ನೇ ಸೇವಾ ಕಾರ್ಯವು ಉಪ್ಪಳ ಸಮೀಪದ ಪೈವಳಿಕೆ ಲಾಲ್‌‌ಬಾಗ್ ಬೋಳಂಗಳ ನಿವಾಸಿ  ಕಲ್ಯಾಣಿ ಕೃಷ್ಣ ದಂಪತಿಗಳ ಕುಟುಂಬಕ್ಕೆ ದೈನಂದಿನ ದಿನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ಜು 23ರಂದು ನಡೆಯಿತು . ಇವರ ಮನೆಯು ಶೋಚನಿಯಾವಸ್ಥೆಯಲ್ಲಿದ್ದು,  ಮುಪ್ಪಿನ ಕಾಲದಲ್ಲಿ ದುಡಿದು ಸಾಕಾಬೇಕಾದ ಮಕ್ಕಳ ಅನಾರೋಗ್ಯ ಇನ್ನೊಂದು ಕಡೆ.  ಈ ಪರಿಸ್ಥಿತಿಯಲ್ಲಿ ಕಲ್ಯಾಣಿಯವರಿಗೆ ದಿಕ್ಕು ತೋಚದ ಪರಿಸ್ಥಿತಿ.. ಮೂರು ಮಂದಿಯ ಚಿಕಿತ್ಸೆಯ ವೆಚ್ಚ, ಮನೆಯ ಖರ್ಚು ವೆಚ್ಚ ಹೀಗೆ ಆರ್ಥಿಕವಾಗಿ ನೊಂದ ಕುಟುಂಬಕ್ಕೆ ಸೇವೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಾಯಂಜನಿ ಯುವ ಬಳಗ ಸಂಸ್ಥಾಪಕರಾದ ರಂಜಿತ್ ಕುಮಾರ್, ಅಧ್ಯಕ್ಷರಾದ ಅಜಯ್ ರಾಜ್ ಉಪ್ಪಳ, ಸದಸ್ಯರಾದ ನವೀನ್ ಗುರಿಕಾರ, ನವೀನ್, ಟೀಮ್ ಮಂಜುಶ್ರೀ ತುಳುನಾಡ್ (ರಿ.) ಸಂಸ್ಥೆಯ ಗೌರವಾಧ್ಯಕ್ಷರು ಸದಾಶಿವ ಹೊಸಬೆಟ್ಟು, ಸಂಸ್ಥಾಪಕರು ರಾಜ್ಯ ಘಟಕ ಸಲಹೆಗಾರರು ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸ್ಥಾಪಕ ಅಧ್ಯಕ್ಷರು ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕರು ರಾಜ್ಯ ಅದ್ಯಕ್ಷರು ವಂಶಿ ಪಂಡಿತ್ ಕಣ್ಣೂರು, ಸಂಸ್ಥಾಪಕರು ರಾಜ್ಯ ಸಮಿತಿ ಪ್ರಚಾರ ಅಧ್ಯಕ್ಷರು ಸಚಿನ್ ಜಿ ಮಣೇಲ್‌ಬೈಲ್, ರಾಜ್ಯ ಸಮಿತಿ ಸದಸ್ಯರಾದ ಶರಣ್ ಜಿ ಮಣೇಲ್‌ಬೈಲ್, ರಮೇಶ್ ಕುಲಾಲ್ ನಾರಾಯಣ ಮಂಗಲ, ಮಹಿಳಾ ಘಟಕದ ಸದಸ್ಯರಾದ ಅಮಿತಾ ಶೆಟ್ಟಿ, ಬಬಿತಾ ಶೆಟ್ಟಿ, ಪೂರ್ಣಿಮ ರಾವ್ ಮುಂತಾದವರು ಉಪಸ್ಥಿತರಿದ್ದರು.

ಅ.30: ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಜಾರ್ ಶುಭಾರಂಭ

Posted by Vidyamaana on 2023-10-11 21:28:27 |

Share: | | | | |


ಅ.30: ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಜಾರ್ ಶುಭಾರಂಭ

ಪುತ್ತೂರು: HMS ಗ್ರೂಪ್ಸ್ ನವರ ಉಪಯೋಗಿಸಿದ ಕಾರುಗಳು ಮತ್ತು ಗೂಡ್ಸ್ ವಾಹನಗಳ ಮಾರಾಟ, ಖರೀದಿ ಮತ್ತು ವಿನಿಮಯ ಕೇಂದ್ರ ಕಬಕ ಸಮೀಪದ ಮಿತ್ತೂರು ಮಸೀದಿ ಬಳಿ ಅ.30ರಂದು ಶುಭಾರಂಭಗೊಳ್ಳಲಿದೆ.


ಇನ್ಸೂರೆನ್ಸ್, ಕಾರ್ ಸರ್ವೀಸ್ ಘಟಕ ಹಾಗೂ ವೆಹಿಕಲ್ ಲೋನ್ ಸೌಲಭ್ಯ ಕೂಡಾ ಇರಲಿದೆ. ಶುಭಾರಂಭ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಭಾರತ್ ವೆಹಿಕಲ್ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಪಕ್ಷಕ್ಕಿಂತ ದೊಡ್ಡ ಮಿತ್ರನಿಲ್ಲ- ಪಕ್ಷ ಬಿಟ್ಟು ಹೋದವರು ಮಿತ್ರನೂ ಅಲ್ಲ- ಪಾಲುದಾರನೂ ಅಲ್ಲ

Posted by Vidyamaana on 2023-05-02 10:12:45 |

Share: | | | | |


ಪಕ್ಷಕ್ಕಿಂತ ದೊಡ್ಡ ಮಿತ್ರನಿಲ್ಲ- ಪಕ್ಷ ಬಿಟ್ಟು ಹೋದವರು ಮಿತ್ರನೂ ಅಲ್ಲ- ಪಾಲುದಾರನೂ ಅಲ್ಲ

ಪುತ್ತೂರು: ಪಕ್ಷಕ್ಕೆ ತನಗೆ ಎಲ್ಲಾ ಹುದ್ದೆಗಳನ್ನು ನೀಡಿದೆ. ಪಕ್ಷಕ್ಕೆ ತಾನು ಬದ್ಧನಾಗಿರದೇ ಇದ್ದರೆ, ತಾನು ಪ್ರಾಣಿಯಂತೆ. ಆದ್ದರಿಂದ ಪಕ್ಷದಿಂದ ಹೊರಹೋದವರು ತನ್ನ ಮಿತ್ರನೂ ಅಲ್ಲ, ಪಾಲದಾರನೂ ಅಲ್ಲ ಎಂದು ಮಾಜಿ ಸಿಎಂ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ಪುತ್ತೂರಿನ ಬಿಜೆಪಿ‌‌ ಚುನಾವಣಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಸಂದರ್ಭ, ನಿಮ್ಮ ಆಪ್ತಮಿತ್ರ ಅಶೋಕ್ ರೈ ಅವರು ಕಾಂಗ್ರೆಸಿಗೆ ಸೇರಿದ್ದಾರೆ ಎಂದಾಗ, ತಾನು ಆಪ್ತಮಿತ್ರನಲ್ಲ. ಆಪ್ತಮಿತ್ರ ವಿಷ್ಣುವರ್ಧನ್ ಎಂದಾಗ ಎಲ್ಲರೂ ನಗೆಗಡಲಲ್ಲಿ ತೆಲಿದರು.

ನಾನು ಈಗ್ಲೂ ಹೇಳ್ತೇನೆ, ಬಿಜೆಪಿಯಲ್ಲಿ ಇರುವವರಿಗೆ ನಾನು ಆಪ್ತ ಮಿತ್ರ, ಪಕ್ಷದವರಿಗೆ ನಾನು ಪಾಲುದಾರ. ಪಕ್ಷ ಬಿಟ್ಟು ಹೋದವರಿಗೆ ನಾನು ಆಪ್ತ ಮಿತ್ರನೂ ಅಲ್ಲ, ಪಾಲುದಾರನೂ ಅಲ್ಲ. ಅಶೋಕ್ ರೈಗೆ ನಾನು ಸಹಕಾರ ಮಾಡಿದ್ದೇನೆ ಎನ್ನುವುದನ್ನು ರುಜುವಾತು ಪಡಿಸಿದರೆ, ನೀವು ಹೇಳಿದಂತೆ ನಾನು ಕೇಳ್ತೆನೆ ಎಂದು ಡಿ.ವಿ ಸದಾನಂದ ಗೌಡ ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಂಜೀವ ಮಠಂದೂರು, ಅಭ್ಯರ್ಥಿ ಆಶಾ ತಿಮ್ಮಪ್ಪ, ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಪಿ‌.ಜಿ. ಜಗನ್ನಿವಾಸ್ ರಾವ್, ಗೋಪಾಲಕೃಷ್ಣ ಹೇರಳೆ ಮೊದಲಾದವರು ಉಪಸ್ಥಿತರಿದ್ದರು.

ಅಂಕಪಟ್ಟಿ ನೈಜತೆ ಪರಿಶೀಲನೆ ಶುಲ್ಕದಲ್ಲಿ ವಿನಾಯಿತಿ: ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ಕೆ ಅಭಿನಂದನೆ

Posted by Vidyamaana on 2023-05-26 10:10:57 |

Share: | | | | |


ಅಂಕಪಟ್ಟಿ ನೈಜತೆ ಪರಿಶೀಲನೆ ಶುಲ್ಕದಲ್ಲಿ ವಿನಾಯಿತಿ: ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ಕೆ ಅಭಿನಂದನೆ

ಪುತ್ತೂರು: ಅಂಕಪಟ್ಟಿ ನೈಜತೆ ಪರಿಶೀಲನೆಯ ದುಬಾರಿ ಶುಲ್ಕದ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಅವರ ಗಮನಕ್ಕೆ ತಂದಾಗ, ಕುಲ ಸಚಿವರ ಜೊತೆ ಮಾತನಾಡಿ ಶುಲ್ಕ ಕಡಿಮೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಡ ವಿದ್ಯಾರ್ಥಿಗಳ, ಬಡ ಉದ್ಯೋಗ ಆಕಾಂಕ್ಷಿತರ ಪರವಾಗಿ ಧ್ವನಿ ಎತ್ತಿದ ಅಶೋಕ್ ಕುಮಾರ್ ರೈ ಅವರ ಕಾರ್ಯ ಅಭಿನಂದನಾರ್ಹ ಎಂದು ಜಿ.ಪಿ.ಎಸ್.ಟಿ.ಆರ್. (ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ) ಅಭ್ಯರ್ಥಿ ಗಣೇಶ್ ತಿಳಿಸಿದ್ದಾರೆ.

ಉದ್ಯೋಗಕ್ಕಾಗಿ ಅಂಕಪಟ್ಟಿ ನೈಜತೆ ಪರಿಶೀಲನೆಯನ್ನು ವಿಶ್ವವಿದ್ಯಾಲಯ ಮಾಡುತ್ತದೆ. ಹೀಗೆ ಒಂದು ಅಂಕಪಟ್ಟಿಯ ಪರಿಶೀಲನೆಗೆ 1500 ರೂ. ಶುಲ್ಕ ವಿಧಿಸಲಾಗುತ್ತದೆ. ಅಂದರೆ ಎಲ್ಲಾ ಅಂಕಪಟ್ಟಿಗಳ ನೈಜತೆ ಪರಿಶೀಲನೆಗೆ 13500 ರೂ. ಶುಲ್ಕ ತಗುಲುತ್ತದೆ. ಉದ್ಯೋಗಕ್ಕಾಗಿ ಹಾತೊರೆಯುವ ಅಭ್ಯರ್ಥೀಗಳು ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಲು ಪರದಾಡುವ ಪರಿಸ್ಥಿತಿ ಇದೆ. ಆದ್ದರಿಂದ ಇದರ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು, ಶುಲ್ಕ ಕಡಿಮೆ ಮಾಡುವಂತೆ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಕುಮಾರ್ ರೈ ಅವರಿಗೆ ಫೋನ್ ಮಾಡಿ ತಿಳಿಸಲಾಗಿತ್ತು.

ಕೂಡಲೇ ಸ್ಪಂದಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಮಂಗಳೂರು ವಿಶ್ವವಿದ್ಯಾಲಯದ ಕುಲ ಸಚಿವರ ಜೊತೆ ಮಾತನಾಡಿದ್ದರು. ಇದರ ಪರಿಣಾಮ ಎಂಬಂತೆ ನಿನ್ನೆ ನಡೆದ ಸಿಂಡಿಕೇಟ್ ಸಭೆ ಅಂಕಪಟ್ಟಿ ನೈಜತೆ ಪರಿಶೀಲನೆಯ ಶುಲ್ಕವನ್ನು ಕಡಿಮೆ ಮಾಡಲು ಅನುಮೋದನೆ ನೀಡಲಾಗಿದೆ. ಹೀಗಾಗಿ 1500 ರೂ. ಇದ್ದ ಶುಲ್ಕವನ್ನು 500 ರೂ.ಗೆ ಇಳಿಸಲಾಗಿದೆ. ಇದಕ್ಕೆ ಕಾರಣರಾದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದ.ಕ. ಲೋಕಸಭಾ ಚುನಾವಣಾ ಕಾಂಗ್ರೆಸ್‌ ಪ್ರಚಾರ ಸಮಿತಿಗೆ ಈಶ್ವರ ಭಟ್ ಪಂಜಿಗುಡ್ಡೆ,ಮುರಳಿಧರ ರೈ ಮಠಂತಬೆಟ್ಟು ಆಯ್ಕೆ

Posted by Vidyamaana on 2024-04-05 17:12:57 |

Share: | | | | |


ದ.ಕ. ಲೋಕಸಭಾ ಚುನಾವಣಾ ಕಾಂಗ್ರೆಸ್‌ ಪ್ರಚಾರ ಸಮಿತಿಗೆ ಈಶ್ವರ ಭಟ್ ಪಂಜಿಗುಡ್ಡೆ,ಮುರಳಿಧರ ರೈ ಮಠಂತಬೆಟ್ಟು ಆಯ್ಕೆ

ಪುತ್ತೂರು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಉಸ್ತುವಾರಿಯಾಗಿರುವ ಬಿ. ರಮಾನಾಥ ರೈ ಅವರ ನೇತೃತ್ವದ ಚುನಾವಣಾ ಪ್ರಚಾರ ಸಮಿತಿಗೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ



Leave a Comment: