ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಸುದ್ದಿಗಳು News

Posted by vidyamaana on 2024-07-03 08:00:29 |

Share: | | | | |


ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಬೆಳ್ಳಾರೆ : ಎರಡು ವರ್ಷಗಳ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣವನ್ನು ಬೆಳ್ಳಾರೆ ಪೊಲೀಸರು ಭೇದಿಸಿದ್ದಾರೆ.


ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ ನಡೆದ ಸುಮಾರು 1,48,000 ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ನಗದು ಹಣ 30,000 ರೂ. ಸೇರಿ ಒಟ್ಟು 1,78,000 ರೂ. ಮೌಲ್ಯದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ. 22/2022 ಕಲಂ 457,380 ಭಾ. ದಂ. ಸಂ ರಂತೆ ಪ್ರಕರಣ ದಾಖಲಿಸಿಕೊಂಡು, ಕಳೆದ ಎರಡು ವರ್ಷಗಳಿಂದ ತನಿಖೆ ನಡೆಸಿದ್ದು, ಪ್ರಸ್ತುತ ಪ್ರಕರಣದ ಆರೋಪಿ ಬೆಳ್ತಂಗಡಿ ನೆರಿಯಾ ನಿವಾಸಿ ಶರತ್ (24) ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಕಳವು ಮಾಡಿದ ಸೊತ್ತುಗಳನ್ನು ಪತ್ತೆ ಮಾಡಿ ಸ್ವಾದೀನಪಡಿಸಿಕೊಳ್ಳಲಾಗಿದೆ.

ಸದ್ರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಸಿ ಬಿ ರಿಷ್ಯಂತ್ ಐಪಿಎಸ್ ರವರು, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್ ಎಂ ಕೆ.ಎಸ್.ಪಿ.ಎಸ್ ಮತ್ತು ರಾಜೇಂದ್ರ ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ವಿಜಯ ಪ್ರಸಾದ್, ಪ್ರಭಾರ ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪವಿಭಾಗ ಮತ್ತು ಸುಳ್ಯ ವೃತ್ತ ನಿರೀಕ್ಷಕರಾದ ಸತ್ಯನಾರಾಯಣ ಕೆ ರವರ ನೇತೃತ್ವದಲ್ಲಿ, ಸಂತೋಷ್ ಬಿ ಪಿ ಪೊಲೀಸ್ ಉಪನಿರೀಕ್ಷಕರು, ಬೆಳ್ಳಾರೆ ಪೊಲೀಸ್ ಠಾಣೆ ಹಾಗೂ ಬೆಳ್ಳಾರೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ನವೀನ ಕೆ. ಚಂದ್ರಶೇಖರ್ ಗೌಡ, ಸಂತೋಷ್ ಜಿ. ಜೀಪು ಚಾಲಕ ಪುರಂದರ ಹಾಗೂ ಬೆರಳುಮುದ್ರೆ ಘಟಕದ ಪ್ರಶಾಂತ್ ಹೊಸಮನಿ ಮತ್ತು ಸಚಿನ್ ಬಿ. ಬಿ ರವರನ್ನೊಳಗೊಂಡು ವಿಶೇಷ ತನಿಖಾ ತಂಡವು ಕರ್ತವ್ಯ ನಿರ್ವಹಿಸಿರುತ್ತದೆ.

ಸದ್ರಿ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯನ್ನು ವ್ಯಕ್ತವಾಗಿದೆ.

 Share: | | | | |


ವಿಟ್ಲ: ಅನುಮಾನಾಸ್ಪದವಾಗಿ ಬೈಕ್ ನಲ್ಲಿ ಯುವಕರ ಸುತ್ತಾಟ

Posted by Vidyamaana on 2023-12-04 05:11:31 |

Share: | | | | |


ವಿಟ್ಲ: ಅನುಮಾನಾಸ್ಪದವಾಗಿ ಬೈಕ್ ನಲ್ಲಿ ಯುವಕರ ಸುತ್ತಾಟ

ವಿಟ್ಲ:ಸಂಜೆ ಹೊತ್ತಲ್ಲಿ ಸಂಶಯಾಸ್ಪದವಾಗಿ ಐದಾರು ಬಾರಿ ಅತ್ತಿತ್ತ ಬೈಕ್‌ನಲ್ಲಿ ಸುತ್ತಾಡುತ್ತಿದ್ದ ಯುವಕರನ್ನು ಸ್ಥಳೀಯರು ತಡೆದು ವಿಚಾರಿಸುತ್ತಿದ್ದಂತೆ ಬೈಕ್‌ ಸವಾರ ಎಸ್ಕೆಪ್ ಆದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ಳಾಡು ಗ್ರಾಮದ ಕಾಡುಮಠ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ನಡೆದಿದೆ.


ಮುಸ್ಸಂಜೆ ಹೊತ್ತಲ್ಲಿ ಸಂಶಯಾಸ್ಪದವಾಗಿ ಐದಾರು ಬಾರಿ ಅತ್ತಿತ್ತ ಬೈಕ್‌ನಲ್ಲಿ ಸುತ್ತಾಡುತ್ತಿದ್ದ ಯುವಕರನ್ನು ಸ್ಥಳೀಯರು ತಡೆದು ವಿಚಾರಿಸುತ್ತಿದ್ದಂತೆ ಬೈಕ್‌ ಸವಾರ ಎಸ್ಕೆಪ್ ಆಗಿದ್ದು, ಹಿಂಬದಿ ಸವಾರನನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.


ಹಿಂಬದಿ ಸವಾರ ಅಡ್ಯನಡ್ಕ ನಿವಾಸಿ ರಾಕೇಶ್ ಎಂದು ಗುರುತಿಸಲಾಗಿದೆ.


ಪರಾರಿಯಾದ ಬೈಕ್ ಸವಾರನ ಸಾರ್ವಜನಿಕರು ಶೋಧ ನಡೆಸುತಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಬಿಗ್ ಟ್ವಿಸ್ಟ್ : ಕೋಲಾರದಿಂದ ಸ್ಪರ್ಧಿಸದಂತೆ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸಲಹೆ

Posted by Vidyamaana on 2023-03-18 05:19:48 |

Share: | | | | |


ರಾಜ್ಯ ರಾಜಕೀಯದಲ್ಲಿ ಬಿಗ್ ಟ್ವಿಸ್ಟ್ : ಕೋಲಾರದಿಂದ ಸ್ಪರ್ಧಿಸದಂತೆ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸಲಹೆ

ನವದೆಹಲಿ :ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್​ನ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದ್ದು, 125 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆನಿನ್ನೆ ಸುಮಾರು 3 ಗಂಟೆಗಳ ಕಾಲ ನಡೆದ ಸಭೆಯಲ್ಲಿ 125 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ.71 ಮಂದಿ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್​ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಯುಗಾದಿ ಹಬ್ಬದ ನಂತರ ಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ರಾಜ್ಯ ಘಟಕದ ನಾಯಕರ ಸಲಹೆ ಮೇರೆಗೆ ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ.

ಈ ನಡುವೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಮಹತ್ವದ ಸಲಹೆಯೊದನ್ನು ನೀಡಿದ್ದು, ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿದಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಕೋಲಾರದಿಂದ ಸ್ಪರ್ಧೆ ಮಾಡಬೇಡಿ, ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಹೈಕಮಾಂಡ್ ಹೇಳಿದ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ. ನಂಜನಗೂಡು ಕ್ಷೇತ್ರದಿಂದ ಧ್ರುವನಾರಾಯಣ ಪುತ್ರ ಸ್ಪರ್ಧಿಸುತ್ತಾರೆ. ನಂಜನಗೂಡು ಕ್ಷೇತ್ರದಿಂದ ಮಹದೇವಪ್ಪ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ ಎಂದರು

ಜನವರಿ 21ರ ಕಾಂಗ್ರೆಸ್ ರಾಜ್ಯ ಮಟ್ಟದ ಸಮಾವೇಶ ರದ್ದು ; ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಮಾವೇಶ ಮುಂದೂಡಿಕೆ

Posted by Vidyamaana on 2024-01-16 04:29:25 |

Share: | | | | |


ಜನವರಿ 21ರ ಕಾಂಗ್ರೆಸ್ ರಾಜ್ಯ ಮಟ್ಟದ ಸಮಾವೇಶ ರದ್ದು ; ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಮಾವೇಶ ಮುಂದೂಡಿಕೆ

ಮಂಗಳೂರು, ಜ.16: ಜನವರಿ 21ರಂದು ಕಾಂಗ್ರೆಸ್ ಮಂಗಳೂರು ನಗರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ದಿಢೀರ್ ಮುಂದೂಡಲಾಗಿದೆ. 


ಲೋಕಸಭೆ ಚುನಾವಣೆಗೆ ಸಿದ್ಧತೆ ಸಲುವಾಗಿ ಮಂಗಳೂರಿನಲ್ಲಿ ಈ ಬಾರಿಯ ಮೊದಲ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ‌ಕಾರ್ಯಕ್ರಮ ಆಯೋಜಿಸಿ ಎಲ್ಲ ಸಿದ್ಧತೆ ನಡೆಸುತ್ತಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಮುಂದೂಡಿಕೆ ಮಾಡಿದ್ದಾರೆ. ಸಮಾವೇಶ ನಡೆಯುವ ಮು‌ಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಡಿಕೆ ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಚಿವರು ಸೇರಿದಂತೆ ಪ್ರಮುಖ ನಾಯಕರು ಬಂದಿದ್ದರು. ಮಂಗಳೂರಿನ ಡಿಸಿಸಿ ಕಚೇರಿಯಲ್ಲಿ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದ್ದರು

ನಾನು ಇಸ್ರೋ ವಿಜ್ಞಾನಿ ಎಂದು ಹೇಳಿಕೊಂಡು ತಿರುಗಾಡ್ತಿದ್ದ ಗುಜರಾತಿ ಅಂದರ್

Posted by Vidyamaana on 2023-08-30 10:06:59 |

Share: | | | | |


ನಾನು ಇಸ್ರೋ ವಿಜ್ಞಾನಿ ಎಂದು ಹೇಳಿಕೊಂಡು ತಿರುಗಾಡ್ತಿದ್ದ ಗುಜರಾತಿ ಅಂದರ್

ಸೂರತ್(ಗುಜರಾತ್):‌ ಇಸ್ರೋದ ವಿಜ್ಞಾನಿ ಎಂದು ಸುಳ್ಳು ಹೇಳಿ ಗುರುತಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ಸೂರತ್‌ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಚಂದ್ರಯಾನ-3ರ ಲ್ಯಾಂಡರ್‌ ಮಾಡ್ಯೂಲ್‌ ಅನ್ನು ವಿನ್ಯಾಸಗೊಳಿಸಿರುವುದಾಗಿ ಸೂರತ್‌ ನ ಮಾಧ್ಯಮಗಳಿಗೆ ಈತ ಸಂದರ್ಶನ ನೀಡಿರುವುದಾಗಿ ವರದಿ ತಿಳಿಸಿದೆ.ಆರೋಪಿ ಮಿಥುಲ್‌ ತ್ರಿವೇದಿ (30ವರ್ಷ) ಎಂಬಾತ ಗುಜರಾತ್‌ ನ ಸೂರತ್‌ ನಗರದಲ್ಲಿ ತನ್ನ ಟ್ಯೂಷನ್‌ ತರಗತಿಗಳಿಗೆ ಹಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಇಸ್ರೋ ವಿಜ್ಞಾನಿಯ ಸೋಗು ಹಾಕಿದ್ದು, ಈತನನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಆಗಸ್ಟ್‌ 23ರಂದು ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಸಾಫ್ಟ್‌ ಲ್ಯಾಂಡ್‌ ಆದ ನಂತರ ತ್ರಿವೇದಿ ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿದ್ದ. ಬಳಿಕ ತ್ರಿವೇದಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ವರದಿ ವಿವರಿಸಿದೆ.ತಾನು ಇಸ್ರೋದ ಏನ್ಸಿಯಂಟ್‌ ಸೈನ್ಸ್‌ ಆಪ್ಲಿಕೇಶನ್‌ ಡಿಪಾರ್ಟ್‌ ಮೆಂಟ್‌ ನ ಅಸಿಸ್ಟೆಂಟ್‌ ಚೆಯರ್‌ ಮೆನ್‌ ಎಂದು ಹೇಳಿಕೊಂಡಿದ್ದ. ಅಷ್ಟೇ ಅಲ್ಲ 2022ರ ಫೆಬ್ರವರಿ 26ರಂದು ತಾನು ನೇಮಕಗೊಂಡಿರುವುದಾಗಿ ನಕಲಿ ಅಪಾಯಿಂಟ್‌ ಮೆಂಟ್‌ ಲೆಟರ್‌ ಅನ್ನು ತೋರಿಸುತ್ತಿದ್ದ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತನಿಖೆಯಲ್ಲಿ ತ್ರಿವೇದಿಗೂ ಇಸ್ರೋ ಸಂಸ್ಥೆಗೂ ಯಾವ ಸಂಬಂಧವೂ ಇಲ್ಲ ಎಂಬುದು ತಿಳಿದು ಬಂದಿದೆ. ಈತ ಜನರ ಹಾದಿ ತಪ್ಪಿಸುವ ನಿಟ್ಟಿನಲ್ಲಿ ಇಸ್ರೋ ವಿಜ್ಞಾನಿ ಎಂದು ಸೋಗು ಹಾಕಿ ಇಸ್ರೋ ಸಂಸ್ಥೆಯ ಘನತೆಗೆ ಧಕ್ಕೆ ತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ

27 ನೇ ವಾರ್ಷಿಕೋತ್ಸವದಲ್ಲಿ ಚೇತನಾ ಹಾಸ್ಟಿಟಲ್ – ಎನ್ ಎ ಬಿ ಹೆಚ್ ಪ್ರಮಾಣ ಪತ್ರ ಹಸ್ತಾಂತರ ಕಾರ್ಯಕ್ರಮ ಆಸ್ಪತ್ರೆಗೆ ಸಹಕರಿಸಿದವರಿಗೆ, ಸಿಬ್ಬಂದಿಗಳಿಗೆ ಗೌರವ – ಸಿಬ್ಬಂದಿಗಳಿಂದ ವೈದ್ಯರಿಗೆ ಸನ್ಮಾನ.

Posted by Vidyamaana on 2023-01-28 13:01:38 |

Share: | | | | |


27 ನೇ ವಾರ್ಷಿಕೋತ್ಸವದಲ್ಲಿ ಚೇತನಾ ಹಾಸ್ಟಿಟಲ್ – ಎನ್ ಎ ಬಿ ಹೆಚ್ ಪ್ರಮಾಣ ಪತ್ರ ಹಸ್ತಾಂತರ ಕಾರ್ಯಕ್ರಮ  ಆಸ್ಪತ್ರೆಗೆ ಸಹಕರಿಸಿದವರಿಗೆ, ಸಿಬ್ಬಂದಿಗಳಿಗೆ ಗೌರವ – ಸಿಬ್ಬಂದಿಗಳಿಂದ ವೈದ್ಯರಿಗೆ ಸನ್ಮಾನ.

ಪುತ್ತೂರು: 27 ವರ್ಷಗಳ ಹಿಂದೆಯೇ ಪುತ್ತೂರಿನಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ಸ್ಥಾಪಿಸಿದ ಸಹಿತ ಹಲವು ಪ್ರಥಮಗಳಿಗೆ ಕಾರಣವಾಗಿರುವ ಪುತ್ತೂರಿನ ಚೇತನಾ ಆಸ್ಪತ್ರೆಯು 27 ನೇ ವರ್ಷದ ಸಂಭ್ರಮದಲ್ಲಿ ಆಸ್ಪತ್ರೆಯ ಆರೋಗ್ಯ ಸೇವೆಗಳನ್ನು ಗಮನಿಸಿಕೊಂಡು ನೀಡುವ ‘ಎನ್.ಎ.ಬಿ.ಎಚ್’ ಪ್ರಮಾಣಪತ್ರಕ್ಕೆ ಹಸ್ತಾಂತರ ಕಾರ್ಯಕ್ರಮ ಜ.26 ರಂದು ಸಂಜೆ ಆಸ್ಪತ್ರೆಯ ವಠಾರದಲ್ಲಿ ನಡೆಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಎನ್.ಎ.ಬಿ.ಎಚ್ ಪ್ರಮಾಣ ಪತ್ರವನ್ನು ಆಸ್ಪತ್ರೆಯ ಆಡಳಿತ ಪಾಲುದಾರ ವೈದ್ಯರಾದ ಡಾ. ಜೆ.ಸಿ.ಅಡಿಗ ಮತ್ತು ಡಾ. ಶ್ರೀಕಾಂತ್ ರಾವ್ ಅವರಿಗೆ ಹಸ್ತಾಂತರಿಸಿದರು.



ಎನ್‌ಎಬಿಹೆಚ್ ರೋಗಿಗೆ ಗುಣಮಟ್ಟ, ಸುರಕ್ಷತೆಯನ್ನು ಕೊಡುತ್ತದೆ:

ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ಕುಮಾರ್ ರೈ ಅವರು ಮಾತನಾಡಿ ಎನ್.ಎ.ಬಿ.ಹೆಚ್ ಪಡೆಯಲು ಒಂದಷ್ಟು ಮಾರ್ಗಸೂಚಿ ಇದೆ. ಆದರೆ ಇದು ರೋಗಿಗೆ ಗುಣಮಟ್ಟ ಮತ್ತು ಸುರಕ್ಷತೆಯನ್ನ ಕೊಡುವಲ್ಲಿ ಸಹಕಾರಿಯಾಗಲಿದೆ. ಇದರ ಜೊತೆಗೆ ಆಸ್ಪತ್ರೆಯ ಸಿಬ್ಬಂದಿಗಳಿಗೂ ಪ್ರಯೋಜನವಿದೆ. ಯಾಕೆಂದರೆ ಕಾಲಕ್ಕೆ ತಕ್ಕಂತೆ ವೈದ್ಯಕೀಯ ಕ್ಷೇತ್ರದಲ್ಲಿ ಅಪ್‌ಗ್ರೇಡ್ ಆಗುತ್ತಿರಬೇಕು. ಗುಣಮಟ್ಟದ ಸೇವೆ ಇಂಟರ್ ನ್ಯಾಷನಲ್ ಮಾದರಿಯಲ್ಲಿ ಇರಬೇಕಾಗುವುದು ಮುಖ್ಯ ಎಂದರು. ಪ್ರಸ್ತುತ ದಿನದಲ್ಲಿ ಇದು ಕೇವಲ ಖಾಸಗಿ ಆಸ್ಪತ್ರೆ ಮಾತ್ರವಲ್ಲ ಸರಕಾರಿ ಆಸ್ಪತ್ರೆಯಲ್ಲೂ ಕಾಯಕಲ್ಪ ಕಾರ್ಯಕ್ರಮ ಅಳವಡಿಸಲಾಗಿದೆ. ಇವತ್ತು ನಮಗೆ ಎನ್‌ಎಬಿಹೆಚ್ ಪ್ರಮಾಣ ಪತ್ರ ಸಿಕ್ಕಿದೆ ಎಂದು ಸುಮ್ಮನೆ ಇರಬಾರದು. ಇದನ್ನು ಮೈಂಟೆನೆನ್ಸ್ ಮಾಡಿಕೊಂಡು ಹೋಗಬೇಕು ಎಂದ ಅವರು ಆಸ್ಪತ್ರೆ ಮತ್ತು ವೈದ್ಯರು ಪ್ರೀತಿಯಿಂದ ಚಿಕಿತ್ಸೆ ನೀಡಬೇಕು. ಉದ್ದೇಶ ಇಟ್ಟುಕೊಂಡು ಕರ್ತವ್ಯ ಮಾಡಬಾರದು ಎಂದರು. ಸರಕಾರಿ ಆಸ್ಪತ್ರೆಯ ಕಾರ್ಯಕ್ರಮದಲ್ಲೂ ಖಾಸಗಿ ವೈದ್ಯರು ಸಹಕರಿಸುವಂತೆ ವಿನಂತಿಸಿದ ಅವರು ಈಗಾಗಲೇ ಸರಕಾರಿ ವ್ಯವಸ್ಥೆಯ ಅಡಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ. ಜೆ.ಸಿ. ಅಡಿಗ ಮತ್ತು ಡಾ. ಶ್ರೀಕಾಂತ್ ಅವರು ಕರೆದಾಗ ಬಂದು ಉತ್ತಮ ಮಾಹಿತಿ ನೀಡುತ್ತಾರೆ. ಇವತ್ತಿನ ದಿನದಲ್ಲಿ ಸರಕಾರಿ ಆಸ್ಪತ್ರೆಯು ಬಹಳ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸ್ವಂತ ಆಕ್ಸಿಜನ್ ಉತ್ಪಾದನೆ ಘಟಕವಿದೆ. ಐಸಿಯು ಇದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರು ನಮ್ಮ ಸರಕಾರಿ ಆಸ್ಪತ್ರೆಯ ಜೊತೆ ಕೈ ಜೋಡಿಸುವಂತೆ ವಿನಂತಿಸಿದರು.

ಚೇತನ ಆಸ್ಪತ್ರೆಯ ಸಾಧನೆಯ ಸರಮಾಲೆಯಲ್ಲಿ ಇನ್ನೊಂದು ಹೂವು ಸೇರಿದೆ:

ಸ್ವರ್ಣೋದ್ಯಮಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್‌ನ ಮಾಲಕ ಬಲರಾಮ ಆಚಾರ್ಯ ಅವರು ಮಾತನಾಡಿ ಚಿಕ್ಕ ಬ್ಲಡ್ ಬ್ಯಾಂಕ್‌ನ್ನು ಮಾಡಬೇಕಾದರೆ ಅದರ ಅನುಷ್ಠಾನಕ್ಕೆ ಎಷ್ಟು ಕಷ್ಟ ಇದೆ ಎಂದು ನಾನು ಸ್ವತಃ ಕಂಡು ಕೊಂಡಿದ್ದೆನೆ. ಹಾಗಿರುವಾಗ ಒಂದು ಆಸ್ಪತ್ರೆಯ ಎಲ್ಲಾ ವಿಭಾಗಗಳನ್ನು ನೋಡಿ ಪ್ರಮಾಣ ಪತ್ರ ಕೊಡಬೇಕಾದರೆ ಅಷ್ಟು ಸುಲಭದ ಮಾತಲ್ಲ. ಅದನ್ನು ಸಾಧಿಸಿದ ಚೇತನ ಆಸ್ಪತ್ರಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು. ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಗಳಿಸಿದ ಹಾಗೆ ರೋಗಿಗಳ ಪೈಕಿ ಓರ್ವ ರೋಗಿಗೆ ತೊಂದರೆ ಆದರೆ ಅದು ಕೂಡಾ ವೈದ್ಯರ ತಪ್ಪು ಆಗದೇ ಇದ್ದರೂ ಅಲ್ಲಿ ರೋಗಿಯ ಸಂಬಂಧಿಕರ ಪ್ರಶ್ನೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಇದೆ. ಆದರೆ 27 ವರ್ಷದಲ್ಲಿ ಚೇತನಾ ಆಸ್ಪತ್ರೆ ತನ್ನ ಜನಪ್ರಿಯತೆಯನ್ನು ಹೆಚ್ಚು ಹೆಚ್ಚು ಮಾಡಿಕೊಂಡು ಹೋಗಿದೆ. ಅದು ಇದರ ದೊಡ್ಡ ಸಾಧನೆ. ಈ ಸಾಧನೆಯ ಸರಮಾಲೆಯಲ್ಲಿ ಎನ್‌ಎಬಿಎಹೆಚ್ ಪ್ರಮಾಣ ಲಭಿಸಿರುವುದು ಇನ್ನೊಂದು ಹೂವು ಸೇರಿದಂತಾಗಿದೆ ಎಂದರು. ಆರೋಗ್ಯ ವಿಮೆಯ ಮೂಲಕವೇ ಇವತ್ತಿನ ಆರೋಗ್ಯ ಸುಧಾರಿಕೆ ಆಗುತ್ತಿದೆ. ಇಂತಹ ಸೌಲಭ್ಯ ಪಡೆಯಲು ಆಸ್ಪತ್ರೆಗಳು ಎನ್‌ಎಬಿಹೆಚ್ ಪ್ರಮಾಣ ಪತ್ರ ಪಡೆಯುವುದು ಬಹಳ ಮುಖ್ಯ ಎಂದರು.ಡಾ.ಜೆ.ಸಿ ಅಡಿಗ, ಡಾ. ಶ್ರೀಕಾಂತ್ ಕುಟುಂಬದ ವೈದ್ಯರಂತೆ:

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರು ಮಾತನಾಡಿ ಇವತ್ತು ಡಾ.ಜೆ.ಸಿ.ಅಡಿಗ ಮತ್ತು ಡಾ. ಶ್ರೀಕಾಂತ್ ರಾವ್ ಅವರ ಹೆಸರು ದ.ಕ.ಜಿಲ್ಲೆಯಲ್ಲಿ ಪ್ರಚಲಿತದಲ್ಲಿದೆ. ಯಾಕೆಂದರೆ ಅವರ ವೈದ್ಯಕೀಯ ಸೇವೆ ಮತ್ತು ನಿಲುವು ಇವತ್ತಿಗೂ ಅವರ ಜೊತೆ ಇದೆ. ಒಬ್ಬ ವ್ಯಕ್ತಿಯಾಗಿ, ವೈದ್ಯರಾಗಿ, ಆಸ್ಪತ್ರೆಯಲ್ಲಿ ಜನರ ಮನಸ್ಸಿನಲ್ಲಿರುವುದು ಕಷ್ಟ. ಆದರೆ ಡಾ. ಅಡಿಗ ಮತ್ತು ಡಾ.ಶ್ರೀಕಾಂತ್ ಅವರು ಅದನ್ನು ಸಾಧಿಸಿದ್ದಾರೆ ಎಂದರು. ಸುಳ್ಯದಲ್ಲಿ ನಾನು ವೈದ್ಯನಾಗಿದ್ದ ಸಂದರ್ಭದಲ್ಲಿ ಅವರನ್ನು ನಮ್ಮ ಆಸ್ಪತ್ರೆಗೆ ಬರಮಾಡಿಕೊಂಡೆ. ಆಗ ಅವರ ಹೆಸರಿನಲ್ಲಿ ನಮ್ಮ ಆಸ್ಪತ್ರೆಗೆ ರೋಗಿಗಳು ಬರಲು ಆರಂಭಿಸಿದ್ದರು. ಹಾಗೆ ಮುಂದೆ ಡಾ.ಶ್ರೀಕಾಂತ್ ಅವರು ಕೂಡಾ ಜೊತೆಗೆ ಸೇರಿದರು. ಇವರಿಬ್ಬರು ಕೂಡಾ ಪುತ್ತೂರು, ಸುಳ್ಯ, ಈಶ್ವರಮಂಗಲ, ವಿಟ್ಲ ಪರಿಸರದಲ್ಲಿ ಸೇವೆಯ ಮೂಲಕ ಜನರನ್ನು ತಲುಪುವ ಕೆಲಸ ಮಾಡಿದರು. ಅದೇಷ್ಟೋ ಮಂದಿ ಚಿಕಿತ್ಸೆಗೆ ಮಂಗಳೂರಿಗೆ ಹೋಗುತ್ತಿದ್ದವರು ತಜ್ಞ ವೈದ್ಯರಾದ ಡಾ. ಅಡಿಗ ಮತ್ತು ಶ್ರೀಕಾಂತ್ ಅವರು ಪುತ್ತೂರಿನಲ್ಲೇ ಇದ್ದಾರೆಂದು ತಿಳಿದ ಬಳಿಕ ಮಂಗಳೂರಿಗೆ ಹೋಗುವುದನ್ನು ನಿಲ್ಲಿಸಿದರು. ಇವರು ರೋಗಿಯ ಖಾಯಿಲೆಯ ಜೊತೆ ಯಾರು ಎಂಬುದನ್ನು ಗುರುತಿಸುತ್ತಿದ್ದರು. ಅದು ಬಹಳ ದೊಡ್ಡ ಸಾಧನೆ. ಇದು ವೈದ್ಯರ ದುಡ್ಡಿನ ಚಿಕಿತ್ಸೆಯಲ್ಲ. ಬದಲಾಗಿ ಮಾನವೀಯತೆ ಮತ್ತು ಸಂಬಂಧಗಳು. ಇದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಡಾ. ಜೆ.ಸಿ ಅಡಿಗರು ಮತ್ತು ಡಾ. ಶ್ರೀಕಾಂತರು ಒಬ್ಬ ಕುಟುಂಬದ ವೈದ್ಯರಂತೆ. ಯಾಕೆಂದರೆ ಅವರಿಗೆ ಕುಟುಂಬ ರೋಗಿಯೊಂದಿಗೆ ಭಾವನಾತ್ಮಕ ಸಂಬಂಧವಿದೆ.

ವೈದ್ಯಕೀಯ ವೃತ್ತಿಯಲ್ಲಿ ಚಾಲಕೀತನ ಅದು ಬೇರೆಯೇ ಆಗಿರುತ್ತದೆ. ಆದರೆ ಆತ್ಮೀಯತೆ, ನಂಬಿಕೆ ವಿಶ್ವಾಸ ಇದು ಅಡಿಗರು ಮತ್ತು ಶ್ರೀಕಾಂತರಲ್ಲಿದೆ ಎಂದ ಅವರು ಇದು ಆಸ್ಪತ್ರೆಗೂ ಏನೋ ತೊಂದರೆ ಆದಾಗಲೂ ಜನರು ವೈದ್ಯರನ್ನು ಒಳ್ಳೆಯವರೆಂದೇ ಗುರುತಿಸುತ್ತಾರೆ. ಇದು ಸಂಬಂಧವನ್ನು ವೃದ್ಧಿಸುತ್ತದೆ ಎಂದರು.


ಚೇತನಾ ಆಸ್ಪತ್ರೆಯಿಂದ ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆ:

ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೋನ್ ಕುಟ್ಹೀನಾ ಅವರು ಮಾತನಾಡಿ ಆರೋಗ್ಯಕ್ಕೆ ಸಂಬಂಧಿಸಿ ದೂರಾಲೋಚನೆಯೊಂದಿಗೆ ಡಾ. ಜೆ.ಸಿ ಅಡಿಗ, ಡಾ. ಶ್ರೀಕಾಂತ್ ಅವರು ಆರಂಭಿಸಿದ ಆಸ್ಪತ್ರೆಯಿಂದ ಇವತ್ತು ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆ. ಹೆಸರು ಮಾಡಲು ಸುಲಭವಿಲ್ಲ. ಆಸ್ಪತ್ರೆ ಮಾಡಿದ ಮೇಲೆ ಅಲ್ಲಿ ರೋಗಿಗೆ ಸಿಗುವ ಚಿಕಿತ್ಸಾ ಸೌಲಭ್ಯ ಉತ್ತಮವಾಗಿರಬೇಕು. ಇದನ್ನು ಇತರರಿಗೆ ನಾವು ಹೇಳಬೇಕು. ಆದರೆ ಅಲ್ಲಿ ಏನಾದರು ಸ್ವಲ್ಪ ಹೆಚ್ಚು ಕಡಿಮೆ ಆದರೆ ಹೇಳಬಾರದು. ಅದನ್ನು ಪರಾಂಬಿರಿಸಿ ನೋಡಬೇಕು. ಆಗ ನಾವು ಉತ್ತಮ ಕೆಲಸ ಮಾಡಿದಂತೆ. ಈ ಇಬ್ಬರು ಯುವಕರು 25 ವರ್ಷ ಹಿಂದೆ ನಿರ್ಮಾಣ ಮಾಡಿದ ಆಸ್ಪತ್ರೆ ಜನಮೆಚ್ಚುಗೆ ಪಡೆದಿದೆ. ಇವತ್ತು ಪುತ್ತೂರಿನ ಮಟ್ಟಿಗೆ ವೈದ್ಯರು ಉತ್ತಮ ಸೇವೆ ಕೊಡುವಂತಹವರಾಗಿದ್ದಾರೆ ಎಂದ ಅವರು ವೈದ್ಯರ ಕುರಿತು ಕವನ ಹಾಡಿದರು.

ವೈದ್ಯಕೀಯದಲ್ಲಿ ಸಂಕಟ ಬಂದಾಗ ನಾವೆಲ್ಲ ಒಂದಾಗಿದ್ದೇವೆ :

ಆದರ್ಶ ಆಸ್ಪತ್ರೆಯ ಡಾ. ಎಂ.ಕೆ.ಪ್ರಸಾದ್ ಅವರು ಮಾತನಾಡಿ ಅಡಿಗರು, ಶ್ರೀಕಾಂತದ್ವಯರು ಮೋಸ್ಟ್ ಇಂಟಲಿಜಂಟ್ ಮ್ಯಾನ್, ಮೋಸ್ಟ್ ಎನ್‌ಸೈಕ್ಲೋಪಿಡಿಯಾ. ನಮಗೇನಾದರೂ ಸಂಶಯ ಬಂದಾಗ ನಾವು ಕೇಳುವುದು ಅಡಿಗರನ್ನೇ ಎಂದ ಅವರು ಇಬ್ಬರು ವೈದ್ಯರು ಊರಿಗೆ ಒಳ್ಳೆಯ ಸೇವೆ ಮಾಡಿದ್ದಾರೆ. ಇವತ್ತು ಅನೇಕ ಸಂದರ್ಭದಲ್ಲಿ ನಮಗೆಲ್ಲರಿಗೂ ತೊಂದರೆ ಆಗಿದೆ. ವೈದ್ಯರಿಗೂ ಆಪತ್ತು ಬರುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯಕೀಯದಲ್ಲಿ ಸಂಕಟ ಬಂದಾಗ ನಾವೆಲ್ಲ ಒಂದಾಗಿದ್ದೇವೆ ಎಂದರು.

ಚೇತನ ಆಸ್ಪತ್ರೆ ನನ್ನ ತವರು:

ಡಾ.ಪೂರ್ಣಾ ಸಿ ರಾವ್ ಅವರು ಮಾತನಾಡಿ ಹಿಂದೆ ಯಾವ ಕೇಸು ತೆಗೆಯುವಾಗ ಭಯವಿರಲಿಲ್ಲ. ರೋಗಿಯನ್ನು ಬದುಕಿಸುವ ಚಿಂತನೆ ನಮ್ಮ ಮುಂದಿತ್ತು. ಇವತ್ತು ನಾವು ಕೇಸು ತೆಗೆದು ಕೊಳ್ಳುವ ಮುಂಚೆ ಇದರಿಂದ ನಮಗೆನಾದರೂ ಪೆಟ್ಟು ಬೀಳುತ್ತದೆಯೋ ಎಂದು ಚಿಂತನೆ ಮಾಡುವ ಪರಿಸ್ಥಿತಿ ವೈದ್ಯ ಸಮೂಹದ ಮುಂದಿರುವ ಪ್ರಶ್ನೆಯಾಗಿದೆ. ಆದ್ದರಿಂದ ಇಂತಹ ಪರಿಸ್ಥಿತಿಗೆ ಗಟ್ಟಿಯಾದ ಕಾನೂನು ಬೇಕು ಎಂದರು. ಇವತ್ತು ಮಂಗಳೂರಿಗೆ ಗೈನಕಾಲೋಜಿಸ್ಟ್‌ಗೆ ಕಂಪೇರ್ ಮಾಡಿದರೆ ನಾವು ಆರ್ಥಿಕವಾಗಿ ಹಿಂದುಳಿದ್ದಿದ್ದರೂ ಆದರೆ ರೋಗಿಯ ಪ್ರೀತಿಯಲ್ಲಿ ನಾವು ತುಂಬಾ ಎತ್ತರದಲ್ಲಿದ್ದೇವೆ. ಹಾಗಾಗಿ ಪುತ್ತೂರಿನ ಜನತೆಗೆ ನನ್ನ ಹೃತ್ಪೂರ್ವಕ ವಂದನೆ ಎಂದ ಅವರು ನಾನು ಈಗ ಪೂರ್ಣಚಂದ್ರ ಕ್ಲೀನಿಕ್ ಮಾಡಿದ್ದರೂ ನನ್ನ ತವರು ಚೇತನ ಆಸ್ಪತ್ರೆಯೇ ಆಗಿದೆ ಎಂದರು.


ಎಷ್ಟೆ ರಾತ್ರಿಯಾದರೂ ತುರ್ತು ಸಂದರ್ಭದಲ್ಲಿ ಸೇವೆ ನೀಡಿದವರು:

ಡಾ. ಶ್ರೀಕುಮಾರ್ ಅವರು ಮಾತನಾಡಿ ಹಣ ಮಾಡಲು ಚಿಕಿತ್ಸೆ ಮಾಡಬೇಡಿ, ಗುಣ ಮಾಡಲು ಚಿಕಿತ್ಸೆ ಮಾಡಿ, ಆಗ ಹಣ ತನ್ನಿಂದ ತಾನೆ ಬರುತ್ತದೆ ಈ ಮಾತು ಬಹಳ ಸತ್ಯದ ಮಾತು. ಇದಕ್ಕೆ ಪೂರಕವಾಗಿ ಡಾ. ಜೆ.ಸಿ.ಅಡಿಗ ಮತ್ತು ಡಾ. ಶ್ರೀಕಾಂತ್ ಅವರು ಉತ್ತಮ ಸೇವೆ ಮಾಡಿದ್ದಾರೆ. ಎಷ್ಟೇ ರಾತ್ರಿಯಾದರೂ ತಕ್ಷಣ ತುರ್ತು ಸಂದರ್ಭದಲ್ಲಿ ಬಂದು ರೋಗಿಯನ್ನು ಗುಣಪಡಿಸಿದ್ದಾರೆ ಎಂದರು.

ಚೇತನಾ ಅಸ್ಪತ್ರೆಯಲ್ಲಿ ಲಭ್ಯವಿರುವ ವಿಶೇಷ ಸೇವೆಗಳು:

24 ಗಂಟೆ ಕಾರ್ಯಾಚರಿಸುವ ವೈದ್ಯಕೀಯ ಸೇವೆಗಳಲ್ಲಿ ಮುಖ್ಯವಾದವುಗಳೆಂದರೆ, ಥೈರೋಕೇರ್ ಡಯಾಗ್ನಾಸ್ಟಿಕ್ನ ಸಹಯೋಗದೊಂದಿಗೆ ಕಂಪ್ಯೂಟರಿಕೃತ ಲ್ಯಾಬೊರೇಟರಿ, ಎಕ್ಸ್-ರೇ 300 ಎಂ.ಎ., ಎಕ್ಸ್-ರೇ ಯುನಿಟ್ ಮತ್ತು ಸಿ ಆರ್ಮ್ ಡಿಜಿಟಲ್ ಎಕ್ಸ್-ರೇ, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮತ್ತು ಕಲರ್ ಡಾಪ್ಲರ್, ಡಾಪ್ಲರ್ ಸ್ಕ್ಯಾನ್, ಫಾರ್ಮಸಿ ವಿಭಾಗ, ಅನುಭವಿ ತಜ್ಞ ವೈದ್ಯೆಯರ ಲಭ್ಯತೆಯೊಂದಿಗೆ ಸುಸಜ್ಜಿತ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗ, ಇಂಕ್ಯುಬೇಟರ್, ಫೊಟೋಥೆರಪಿ ಮತ್ತು ವೆಂಟಿಲೇಟರ್ ಸೌಲಭ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ತೀವ್ರ ನಿಗಾ ವಿಭಾಗ, ಹೃದಯ ಸ್ಕ್ಯಾನಿಂಗ್ಗೆ ಇಕೋಕಾರ್ಡಿಯಗ್ರಾಫಿ, ಅಸ್ತಮಾ ಚಿಕಿತ್ಸೆಗೆ ಸ್ಪೇರೋಮೀಟರ್, ವಿಡಿಯೋ ಎಂಡೋಸ್ಕೋಪಿ, ಕೋಲೊನೋಸ್ಕೋಪಿ, ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ, ಮೂತ್ರ ಜನಕಾಂಗದ ಶಸ್ತ್ರಚಿಕಿತ್ಸೆಗಾಗಿ ಕ್ರಯೋಸರ್ಜರಿ, ಫೇಕೋ ಶಸ್ತ್ರಚಿಕಿತ್ಸೆ ಸೌಲಭ್ಯದೊಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ಇವೆಲ್ಲದರ ಜೊತೆಯಲ್ಲಿ ೨೪ ಗಂಟೆ ಕಾರ್ಯನಿರ್ವಹಿಸುವ ಆಂಬುಲೆನ್ಸ್ ಸೇವೆ ಹಾಗೂ ಇಲೆಕ್ಟ್ರೋಕನ್ವಲ್ಸಿವ್ ಥೆರಪಿ ಸೌಲಭ್ಯವೂ ಇಲ್ಲಿದೆ. ಇನ್ನು ಮಲ್ಟಿಪ್ಯಾರಾ ಮಾನಿಟರ್ ಸೌಲಭ್ಯದೊಂದಿಗೆ ಹವಾನಿಯಂತ್ರಿತ ಶಸ್ತ್ರಚಿಕಿತ್ಸಾ ಕೊಠಡಿ.. ಹೀಗೆ ನಗರದ ಪ್ರಮುಖ ಭಾಗದಲ್ಲಿ ಸ್ಥಾಪನೆಗೊಂಡಿರುವ ಚೇತನಾ, ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳು, ನುರಿತ ತಜ್ಞವೈದ್ಯರು, ರೋಗಿಗಳಿಗೆ ಆಪ್ತಪಾಲನೆಯನ್ನು ಒದಗಿಸುವ ಸಿಬ್ಬಂದಿವರ್ಗ, ಇವರೆಲ್ಲರ ಒಗ್ಗಟ್ಟಿನ ಶ್ರಮದ ಫಲವಾಗಿ ‘ಚೇತನಾ’ 25 ಸಂವತ್ಸರಗಳ ಬಳಿಕವೂ ರೋಗಿಗಳ ಪಾಲಿಗೆ ಆಪ್ತಚೇತನಾಗಿ, ಆರೋಗ್ಯ ಚೇತರಿಕೆಯ ಹೆಗ್ಗುರುತಾಗಿ ಇಲ್ಲಿನವರ ಮನದಲ್ಲಿ ನೆಲೆಯಾಗಿದೆ ಎಂದು ಚೇತನಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ತನ್ನದೇ ಬಸ್ಸಿನಡಿಗೆ ಬಿದ್ದು ಮಾಂಡವಿ ಬಸ್ ಮಾಲಕ ದಯಾನಂದ ಶೆಟ್ಟಿ ಮೃತ್ಯು

Posted by Vidyamaana on 2024-03-14 15:14:13 |

Share: | | | | |


ತನ್ನದೇ ಬಸ್ಸಿನಡಿಗೆ ಬಿದ್ದು ಮಾಂಡವಿ ಬಸ್ ಮಾಲಕ ದಯಾನಂದ ಶೆಟ್ಟಿ ಮೃತ್ಯು

ಉಡುಪಿ, ಮಾ.14: ತನ್ನದೇ ಬಸ್ಸಿನಡಿಗೆ ಬಿದ್ದು ಬಸ್ ಮಾಲಕರೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ಮಣಿಪಾಲದಲ್ಲಿ ನಡೆದಿದೆ. ಮಾಂಡವಿ ಖಾಸಗಿ ಬಸ್ ಮಾಲೀಕ ದಯಾನಂದ ಶೆಟ್ಟಿ(65) ಮೃತರು. 

ಮಾಂಡವಿ ಸಂಸ್ಥೆ ಸುಮಾರು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಬಸ್‌ ಸೇವೆ ನೀಡುತ್ತಿದ್ದು, ಇತ್ತೀಚಿಗೆ ಒಂದು ಬಸ್‌ ಕೆಟ್ಟು ನಿಂತಿತ್ತು. ಈ ಹಿನ್ನೆಲೆಯಲ್ಲಿ ಮಾಲಕ ದಯಾನಂದ ಶೆಟ್ಟಿ ಬಸ್ಸನ್ನು ಮಣಿಪಾಲದ 80 ಬಡಗಬೆಟ್ಟುವಿನ ಗ್ಯಾರೇಜ್‌ ಒಂದರಲ್ಲಿ ರಿಪೇರಿಗೆ ನೀಡಿದ್ದರು. 


ಬಸ್‌ ರಿಪೇರಿಗೆ ನೀಡಿ ಕೆಲವು ದಿನ ಕಳೆದ ಹಿನ್ನೆಲೆಯಲ್ಲಿ ದಯಾನಂದ ಶೆಟ್ಟಿ ನಿನ್ನೆ ( ಮಾರ್ಚ್ 13 ) ಬಸ್‌ ನೋಡಲೆಂದು ಗ್ಯಾರೇಜ್‌ಗೆ ತೆರಳಿದ್ದು ಮುಂಭಾಗದಲ್ಲಿ ನಿಂತಿದ್ದರು. ಈ ವೇಳೆ ಅವರನ್ನು ನೋಡದೆ ಬಸ್ಸನ್ನು ಏಕಾಏಕಿ ಚಲಾಯಿಸಿದ್ದು ದಯಾನಂದ ಶೆಟ್ಟಿ ಬಸ್ಸಿನ ಚಕ್ರದಡಿಗೆ ಸಿಲುಕಿದ್ದಾರೆ. ಗ್ಯಾರೇಜ್​ನ ಮೆಕ್ಯಾನಿಕ್ ಅಜಾಗರೂಕತೆಯಿಂದ ಎಂಜಿನ್ ಸ್ಟಾರ್ಟ್ ಮಾಡಿದ್ದರಿಂದ ಬಸ್ ಮುಂದಕ್ಕೆ ಚಲಿಸಿದೆ ಎನ್ನುವ ಆರೋಪ ಕೇಳಿಬಂದಿದೆ. ಕೂಡಲೇ ಸ್ಥಳದಲ್ಲಿದ್ದವರು ದಯಾನಂದ ಶೆಟ್ಟಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.



Leave a Comment: