ಜ 27 : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಪುತ್ತೂರು ತಾಲೂಕು ವತಿಯಿಂದ ಪತ್ರಿಕಾ ದಿನಾಚರಣೆ, ಉಪನ್ಯಾಸ - ಸನ್ಮಾನ ಕಾರ್ಯಕ್ರಮ

ಸುದ್ದಿಗಳು News

Posted by vidyamaana on 2024-07-26 08:10:52 |

Share: | | | | |


ಜ 27 : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಪುತ್ತೂರು ತಾಲೂಕು ವತಿಯಿಂದ ಪತ್ರಿಕಾ ದಿನಾಚರಣೆ, ಉಪನ್ಯಾಸ - ಸನ್ಮಾನ ಕಾರ್ಯಕ್ರಮ

ಪುತ್ತೂರು : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಪುತ್ತೂರು ತಾಲೂಕು ವತಿಯಿಂದ ವಿವೇಕಾನಂದ ಕಾಲೇಜು(ಸ್ವಾಯತ್ತ) ಪುತ್ತೂರು ಹಾಗೂ ಪತ್ರಿಕೋದ್ಯಮ ವಿಭಾಗ ಇದರ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ, ಉಪನ್ಯಾಸ - ಸನ್ಮಾನ ಕಾರ್ಯಕ್ರಮವು ಜ 27 ಶನಿವಾರ ಅಪರಾಹ್ನ ಗಂಟೆ 2:00ರಿಂದ ಪುತ್ತೂರು ನೆಹರೂ ನಗರ ವಿವೇಕಾನಂದ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ ಇವರು ನಡೆಸಲಿದ್ದಾರೆ. ರಾಮದಾಸ್‌ ಶೆಟ್ಟಿ ವಿಟ್ಲ ಅಧ್ಯಕ್ಷರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್(ರಿ.) ಪುತ್ತೂರು ತಾಲೂಕು ಇವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ಡಾ. ಆಶಾಲತಾ. ಪಿ. ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಗೋವಿಂದದಾಸ ಕಾಲೇಜು ಸುರತ್ಕಲ್ ಇವರು ಉಪನ್ಯಾಸ ನೀಡಲಿದ್ದಾರೆ

ವೇದಿಕೆಯಲ್ಲಿ ಪ್ರೊ.ವಿ.ಬಿ.ಅರ್ತಿಕಜೆ ಗೌರವ ಸಲಹೆಗಾರರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ.) ಪುತ್ತೂರು ತಾಲೂಕು ಮತ್ತು ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತರು ಇವರನ್ನು ಡಾ ಯು.ಪಿ. ಶಿವಾನಂದ ಆಡಳಿತ ನಿರ್ದೇಶಕರು ಸುದ್ದಿ ಸಮೂಹ ಸಂಸ್ಥೆ ಪುತ್ತೂರು ಇವರು ಸನ್ಮಾನಿಸಲಿದ್ದಾರೆ.

Additional Image

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜುಬಿನ್ ಮೊಹಪಾತ್ರ ಸಹಾಯಕ ಆಯುಕ್ತರು, ಪುತ್ತೂರು ಉಪವಿಭಾಗ, ತಾರನಾಥ ಗಟ್ಟಿ ಕಾಪಿಕಾಡು ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಧ್ಯಕ್ಷರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ ಕ,ಮುರಳೀಕೃಷ್ಣ ಕೆ.ಎನ್ ಸಂಚಾಲಕರು, ವಿವೇಕಾನಂದ ಮಹಾವಿದ್ಯಾಲಯ ನೆಹರೂನಗರ ಪುತ್ತೂರು. ಶ್ಯಾಮ ಸುದರ್ಶನ್ ಭಟ್ ಹೊಸಮೂಲೆ ಮುಖ್ಯಸ್ಥರು, ಕಹಳೆ ನ್ಯೂಸ್ ಚಾನೆಲ್ ಪುತ್ತೂರು ಇವರುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 Share: | | | | |


ಏ.9 -ಜೈನ ಭವನದಲ್ಲಿ ಬಿಜೆಪಿ ಮಹಿಳಾ ಸಮಾವೇಶ

Posted by Vidyamaana on 2024-04-07 18:00:09 |

Share: | | | | |


ಏ.9 -ಜೈನ ಭವನದಲ್ಲಿ ಬಿಜೆಪಿ ಮಹಿಳಾ ಸಮಾವೇಶ

ಪುತ್ತೂರು: ಹಲವಾರು ಯೋಜನೆಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಪುತ್ತೂರಿನ ಜೈನ ಭವನದಲ್ಲಿ ಏ.9 ರಂದು ಬಿಜೆಪಿ ಮಹಿಳಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಸುಲೋಚನಾ ಜಿ.ಕೆ.ಭಟ್‍ ತಿಳಿಸಿದ್ದಾರೆ.


ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಪ್ರಧಾನಿಯವರ ಯೋಜನೆ ಕುರಿತು ತಿಳಿಸಲು ಮನೆ ಮನೆ ಭೇಟಿ, ಪ್ರತೀ ಬೂತ್‍ಗಳಲ್ಲಿ ಮಹಿಳಾ ಸಭೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತ್ರಿವಳಿ ತಲಾಖ್, ಮಹಿಳಾ ಮೀಸಲಾತಿ, ಮಹಿಳಾ ದೌರ್ಜನ್ಯಕ್ಕೆ ಕಠಿಣ ಶಿಕ್ಷೆ, ಉಜ್ವಲ ಯೋಜನೆ, ಮನೆ ನಿರ್ಮಾಣ ಮುಂತಾದ ಹಲವಾರು ಯೋಜನೆಗಳ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಪ್ರಧಾನಿಯವರು ಕಾನೂನಾತ್ಮಕವಾಗಿ ಒತ್ತು ನೀಡಿದ್ದಾರೆ ಎಂದು ತಿಳಿಸಿದರು. 

ಮೆಸ್ಕಾಂ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

Posted by Vidyamaana on 2023-08-15 15:25:16 |

Share: | | | | |


ಮೆಸ್ಕಾಂ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

ಪುತ್ತೂರು: ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಧ್ವಜಾರೋಹಣ ನಡೆಯಿತು.

ಮೆಸ್ಕಾಂ ಕಾರ್ಯ ಮತ್ತು ಪಾಲನಾ ಶಾಖೆಯ ಸಹಾಯಕ ಅಭಿಯಂತರ ರಾಜೇಶ್ ಕೆ. ಧ್ವಜಾರೋಹಣ ನೆರವೇರಿಸಿದರು. 

ವಕೀಲರಾದ ಜಗನ್ನಾಥ್ ರೈ, ಮಹಾಬಲ ಗೌಡ, ವಿರೂಪಾಕ್ಷ ಭಟ್, ಸಂಕಪ್ಪ ಗೌಡ, ಬಿಲ್ಡಿಂಗ್ ವ್ಯವಸ್ಥಾಪಕ ಜಯಂತ್ ಕುಮಾರ್, ಮೆಸ್ಕಾಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಸಂತೋಷ್ ಜಾಧವ್ ಅವರು ಧ್ವಜಾರೋಹಣ ಕಾರ್ಯಕ್ರಮ ನಡೆಸಿಕೊಟ್ಟರು, ನಬಿಸಾಬ್ ನದಾಫ್ ಅವರು ಕಾರ್ಯಕ್ರಮವನ್ನು ವಂದಿಸಿದರು.

ಹಲವು ದಾಖಲೆ ವೈಶಿಷ್ಟ್ಯಗಳೊಂದಿಗೆ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಂಪನ್ನ

Posted by Vidyamaana on 2024-01-30 19:04:19 |

Share: | | | | |


ಹಲವು ದಾಖಲೆ  ವೈಶಿಷ್ಟ್ಯಗಳೊಂದಿಗೆ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಂಪನ್ನ

ಪುತ್ತೂರು: ಜ.೨೭ ರಂದು ಬೆಳಿಗ್ಗೆ ಆರಂಭಗೊಂಡಿದ್ದ ೩೧ನೇ ವರ್ಷದ ಪುತ್ತೂರಿನ ಐತಿಹಾಸಿಕ ಕೋಟಿ ಚೆನ್ನಯ ಜೋಡು ಕರೆ ಕಂಬಳ ಜ.೨೯ರಂದು ಬೆಳಗಿನ ಜಾವ ಸಂಪನ್ನಗೊಂಡಿದೆ. ಎರಡು ಹಗಲು ಎರಡು ರಾತ್ರಿ ಕಂಬಳ ನಡೆಯುವ ಮೂಲಕ ಇತಿಹಾಸ ನಿರ್ಮಿಸಿದೆ. ಒಟ್ಟು ೬ ವಿಭಾಗಗಳ ೧೮೭ ಜೊತೆ ಕೋಣಗಳು  ಭಾಗವಹಿಸಿದ್ದು ಜ.೨೯ರಂದು ಬೆಳಿಗ್ಗೆ ೫ ಗಂಟೆಯ ಸುಮಾರಿಗೆ ಅಂತಿಮ ಸ್ಪರ್ಧೆಯು ನಡೆಯಿತು. ಬಳಿಕ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವರ್ಷಂಪ್ರತಿಯಂತೆ ಈ ಬಾರಿಯೂ ೩೧ನೇ ವರ್ಷದ ಕೋಟಿ ಚೆನ್ನಯ ಜೋಡು ಕರೆ ಕಂಬಳವು ಬಹಳ ಅದ್ದೂರಿಯಾಗಿ ವಿಜ್ರಂಭಣೆಯಿಂದ ನಡೆದು ಹೊಸ ಇತಿಹಾಸ ನಿರ್ಮಿಸಿದೆ. ಕಂಬಳವು ಯಶಸ್ವಿಯಾಗಿ ನೆರವೇರಲು ಹಲವಾರು ದಿನಗಳಿಂದ ಹಗಲು ರಾತ್ರಿ ದುಡಿದ ಕಂಬಳ ಸಮಿತಿಯ ವಿವಿಧ ಪದಾಧಿಕಾರಿಗಳಿಗೆ, ಸದಸ್ಯರಿಗೆ ಎಲ್ಲಾ ಸ್ವಯಂಸೇವಕರಿಗೆ ಕಂಬಳ ಅಭಿಮಾನಿಗಳಿಗೆ ಹಾಗೂ ಇದಕ್ಕಾಗಿ ತನು, ಮನ ,ಧನಗಳಿಂದ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿ ಮುಂದೆಯೂ ಕಂಬಳವು ಇದೇ ರೀತಿಯಾಗಿ ಯಶಸ್ವಿಯಾಗಿ ಮುಂದುವರಿಯಲು ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಇದಕ್ಕೂ ಮೊದಲು ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಕ್ಕಳ ,ಚನಿಲ ತಿಮ್ಮಪ್ಪ ಶೆಟ್ಟಿ ,ರಾಧಾಕೃಷ್ಣ ಆಳ್ವ, ಲಕ್ಷ್ಮೀನಾರಾಯಣ ಶೆಟ್ಟಿ, ಆರಿಯಡ್ಕ ಜೈರಾಜ್ ಭಂಡಾರಿ, ಸಿದ್ದನಾಥ ಎಸ್.ಕೆ. ಮೂಕಾಂಬಿಕ ಗ್ಯಾಸ್ ಏಜೆನ್ಸಿನ ಮಾಲಕ ಸಂಜೀವ ಆಳ್ವ, ಪ್ರಶಾಂತ್ ಶೆಣೈ, ನಗರಸಭಾ ಸದಸ್ಯರಾದ ರಮೇಶ್ ರೈ ನೆಲ್ಲಿಕಟ್ಟೆ , ಮುಹಮ್ಮದ್ ರಿಯಾಜ್, ಯೂಸುಫ್ ಡ್ರೀಮ್, ಶೈಲಾ ಪೈ, ಬಾಲಚಂದ್ರ, ಕೋಡಿಂಬಾಡಿ  ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಪೂಜಾರಿ ಸೂರ್ಯನಾಥ ಆಳ್ವ, ದಯಾನಂದ ರೈ ಕೋರ್ಮಂಡ, ಸಂತೋಷ್ ಕುಮಾರ್ ರೈ ಕೈಕಾರ, ಬೆಳ್ಳಿಪ್ಪಾಡಿ ಕೈಪ ಕೇಶವ ಭಂಡಾರಿ, ಬಿ ಕೆ  ಶಿವಕುಮಾರ್, ನಗರಸಭಾ ನಿಕಟಪೂರ್ವಾಧ್ಯಕ್ಷ ಜೀವಂಧರ್ ಜೈನ್, ಅರಿಯಡ್ಕ ಚಿಕ್ಕಪ್ಪ ನಾಕ್, ಡಾ. ದೀಪಕ್ ರೈ, ಕೇಶವ ಯಂ, ನರಸಿಂಹ ಕಾಮತ್, ಕಿಶೋರ್ ಕುಮಾರ್  ಬೊಟ್ಯಾಡಿ, ಬವಿನ್ ಸವಜಾನಿ, ಶರತ್ ಕುಮಾರ್ ರೈ, ಬೆಟ್ಟ ಈಶ್ವರ ಭಟ್, ಭಾಸ್ಕರ ಗೌಡ ಕೋಡಿಂಬಾಳ, ಅರಿಯಡ್ಕ ಉದಯ ಶಂಕರ ಶೆಟ್ಟಿ,ಸಂತೋಷ್ ಶೆಟ್ಟಿ ಪ್ರಸಾದ್ ಪಾಣಾಜೆ, ದಯಾನಂದ ರೈ ಮನವಳಿಕೆ, ಬೂಡಿಯಾರ್ ಪುರುಷೋತ್ತಮ ರೈ ,ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಜಿಲ್ಲಾ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ  ರಂಜಿತ್ ಬಂಗೇರ, ಪ್ರವೀಣ್ ಶೆಟ್ಟ ತಿಂಗಳಾಡಿ, ರೂಪ ರೇಖಾ ಆಳ್ವ, ಎಂ ಕುಶಲ ಪೆರಾಜೆ ,ಪ್ರವೀಣ್ ಕುಮಾರ್,  ನಿಹಾಲ್ ಪಿ. ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ,ಜಗನ್ನಾಥ ರೈ ಜಿ, ಉಮಾನಾಥ್ ಶೆಟ್ಟಿ ಪೆರ್ನೆ,ತಿಂಗಳಾಡಿ ಬಾಲಯ ಲೋಹಿತ್ ಬಂಗೇರ,ದಯಾನಂದ ರೈ, ರಾಮನಾಥ್ ವಿಟ್ಲ ,ರೂಪೇಶ್ ರೈ ಆಲಿಮಾರ ,ದಿನಕರ ರೈ, ಸುಧೀರ್ ಶೆಟ್ಟಿ, ಗಂಗಾಧರ ಶೆಟ್ಟಿ ಕೈಕಾರ, ರಾಮಣ್ಣ ಪೂಜಾರಿ, ಅಬ್ದುಲ್ ರಜಾಕ್ ಬಿ ಎಚ್, ಹರಿಪ್ರಸಾದ್ ರೈ, ಬಾಲಕೃಷ್ಣ ಆಳ್ವ ಕೊಡಾಜೆ ,ಸತೀಶ್ ರೈ ಕಟಾವು ಶಿವರಾಮ ಭಟ್ ಬಿಕರ್ನ ಕಟ್ಟೆ,  ಆಕಾಶ್ ಐತಾಳ್, ಕೃಷ್ಣ ಪ್ರಸಾದ್ ಭಂಡಾರಿ, ರವಿ ಪ್ರೊವಿಜನ್ ಸ್ಟೋರ್ , ನವೀನ್ ಶೆಟ್ಟಿ, ಶಾಪಿ ಸುಳ್ಯ, ಮೋಹನ್ ನಾಯಕ್, ಚಂದ್ರಹಾಸ ಶೆಟ್ಟಿ, ಶೀನಪ್ಪ ಪೂಜಾರಿ ಎಂ .ಜಿ. ಅಬೂಬಕ್ಕರ್ ಉಪ್ಪಿನಂಗಡಿ, ಉಮೇಶ ನಾಯಕ್, ಗಿರಿಧರ ಹೆಗ್ಡೆ, ಹರ್ಷಕುಮಾರ್ ರೈ ಮಾಡಾವು, ಕೃಷ್ಣಪ್ಪ ಸಂಪ್ಯ, ಕೃಷ್ಣಲ್ ಸ್ಟೀಲ್ ಇಂಡಸ್ಟ್ರೀಸ್‌ನ ಮಾಲಕ ಕಿರಣ್ ಡಿಸೋಜಾ, ನಿರೀಕ್ಷಿತ್  ರೈ, ಮಂಜುನಾಥ ಗೌಡ, ಯೂಸುಫ್ ಗೌಸಿಯ, ಹಾಜಿ ಯೂಸುಫ್ ಕೈಕಾರ ನ್ಯಾಯವಾದಿ ರಾಕೇಶ್  ಮಸ್ಕರೇನಸ್, ಎಂ ಪಿ ಉಮ್ಮರ್ ,ಶರೂನ್  ಸಿಕ್ವೇರಾ, ಲೋಕೇಶ್ ಪಡ್ಡಾಯೂರು, ಹರೀಶ್  ವಾಲ್ತಾಜೆ ,ಆಯ್ಕೆ ಸಪ್ಲಾಯಿಸ್ ಮಾಲಕ ಇಮ್ರಾನ್ ಖಾನ್ ಮೊದಲಾದವರು ಅತಿಥಿಗಳಾಗಿ ಆಗಮಿಸಿದ್ದರು.

ಕಂಬಳದ ಸಮಾರೋಪ ಸಮಾರಂಭದ ಆರಂಭದಲ್ಲಿ ತೀರ್ಪುಗಾರರಿಗೆ ಆರೋಗ್ಯ ಇಲಾಖೆಯವರಿಗೆ, ಶಾಮಿಯಾನ ಬ್ಯಾಂಡ್ ಸಹಿತ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ವಿಜಯಕುಮಾರ್ ಜೈನ್ ಕಂಚಿನ ಮನೆ ,ಅಪ್ಪು ಯಾನೆ ವಲೇರಿಯನ್ ಡೇಸಾ, ಅಲ್ಲಿಪಾದೆ , ರಾಜೀವ ಶೆಟ್ಟಿ ಹೆಡ್ತೂರು , ಸುದರ್ಶನ್ ನಾಯಕ್ ಕಂಪ, ರಾಜೇಶ್ ನಾಯಕ್ ನೆಲ್ಲಿಕಟ್ಟೆ, ನವೀನ್ ನಾಯಕ್ ಬೆದ್ರಾಳ, ಸದಾಶಿವ ಸಾಮಾನಿ ಸಂಪಿಗೆದಡಿ, ಸಚಿನ್ ಸರೋಳಿ, ಗೋಪಾಲ ಶೆಟ್ಟಿ, ಸುಮಿತ್ ಶೆಟ್ಟಿ, ಸುಜಿತ್ ಶೆಟ್ಟಿ, ರತ್ನಾಕರ ನಾಯಕ್, ಗಂಗಾಧರ, ಆಲಿಕುಂಞ, ಪ್ರವೀಣ್ ಸಚಿನ್ ಸರೋಳಿ ಉಮಾಶಂಕರ್ ನಾಯಕ್ ಪಾಂಗಳಾಯಿ ಮೊದಲಾದವರನ್ನು ಸನ್ಮಾನಿಸಲಾಯಿತು

 ಸಮಿತಿಯ ವಿವಿಧ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ .ಖಜಾಂಜಿ ಪಂಜಿಗುಡ್ಡೆ ಈಶ್ವರ ಭಟ್, ಸಂಚಾಲಕ ವಸಂತಕುಮಾರ್  ರೈ ದುಗ್ಗಲ, ಉಪಾಧ್ಯಕ್ಷರಾದ ಶಿವರಾಮ ಆಳ್ವ ಬಳ್ಳಮಜಲು, ಜಿನ್ನಪ್ಪ ಪೂಜಾರಿ ಮುರ, ರೋಶನ್ ರೈ ಬನ್ನೂರು, ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಗೋಪಾಲ ಕಡಂಬು ಮೂಡಬಿದ್ರೆ, ಹಸೈನಾರ್ ಬನಾರಿ, ಖಾದರ್ ಪೊಳ್ಯ ,ಪ್ರಕಾಶ ನೆಕ್ಕಿಲಾಡಿ , ಶಶಿಕಿರಣ್ ರೈ ನೂಜಿ ಬೈಲು ಪೂರ್ಣೇಶ್ ಭಂಡಾರಿ, ಶಶಿ ನೆಲ್ಲಿಕಟ್ಟೆ, ಸುರೇಶ್ ಚಿಕ್ಕ ಪುತ್ತೂರು, ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕ ವಸಂತಕುಮಾರ್ ರೈ ದುಗ್ಗಳ ಸಹಕರಿಸಿದರು.


 ಕನಹಲಗೆ: ೦೬ ಜೊತೆ  ಅಡ್ಡಹಲಗೆ: ೦೪ ಜೊತೆ

 ಹಗ್ಗ ಹಿರಿಯ: ೧೫ ಜೊತೆ  ನೇಗಿಲು ಹಿರಿಯ: ೪೦ ಜೊತೆ

 ಹಗ್ಗ ಕಿರಿಯ: ೨೫ ಜೊತೆ  ನೇಗಿಲು ಕಿರಿಯ: ೯೭ ಜೊತೆ

ಒಟ್ಟು ಕೋಣಗಳ ಸಂಖ್ಯೆ: ೧೮೭ ಜೊತೆ

ಕನಹಲಗೆ:( ೬.೫ ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )

ಬೋಳಾರ ತ್ರಿಶಾಲ್ ಕೆ ಪೂಜಾರಿ

ಹಲಗೆ ಮೆಟ್ಟಿದವರು: ಬೈಂದೂರು ಮಹೇಶ್ ಪೂಜಾರಿ

ಅಡ್ಡ ಹಲಗೆ: ಪ್ರಥಮ: ನಾರಾವಿ ಯುವರಾಜ್ ಜೈನ್

ಹಲಗೆ ಮೆಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ

ಹಲಗೆ ಮೆಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ಹಗ್ಗ ಹಿರಿಯ: ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ ಎ

ಓಡಿಸಿದವರು: ಬೈಂದೂರು ಮಂಜುನಾಥ ಗೌಡ

ದ್ವಿತೀಯ: ನೂಜಿಪ್ಪಾಡಿ ಡಾ.ಪ್ರವೀಣ್ ಹೊಳ್ಳ ಬಿ

ಓಡಿಸಿದವರು: ಬಾರಾಡಿ ಸತೀಶ್

ಹಗ್ಗ ಕಿರಿಯ:

ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗಿಶ್ ಪೂಜಾರಿ ಬಿ

ಓಡಿಸಿದವರು: ಭಟ್ಕಳ ಶಂಕರ್

ದ್ವಿತೀಯ: ನೂಜಿಪ್ಪಾಡಿ ಚಂದ್ರಶೇಖರ ಹೊಳ್ಳ ಬಿ

ಓಡಿಸಿದವರು: ಬೈಂದೂರು ಮಂಜುನಾಥ ಗೌಡ

ನೇಗಿಲು ಹಿರಿಯ:

ಪ್ರಥಮ: ಇರುವೈಲು ಪಾನಿಲ ಬಾಡ ಪೂಜಾರಿ ಎ

ಓಡಿಸಿದವರು: ಬೈಂದೂರು ಮಂಜುನಾಥ ಗೌಡ

ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ

ಓಡಿಸಿದವರು: ಮಾಳ ಆಧೀಶ್ ಪೂಜಾರಿ

ನೇಗಿಲು ಕಿರಿಯ: ( ಸಮಾನ ಬಹುಮಾನ )

ಮುನಿಯಾಲ್ ಉದಯ ಕುಮಾರ್ ಶೆಟ್ಟಿ

ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್

ಉಡುಪಿ ಬ್ರಹ್ಮಗಿರಿ ಪ್ರಥಮ ಗಣನಾಥ ಹೆಗ್ಡೆ ಬಿ

ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ

ಡಿಪೋ ವ್ಯವಸ್ಥಾಪಕಿಯಿಂದ ಕಿರುಕುಳ ಆರೋಪ: ವಿಷ ಕುಡಿದು KSRTC ನೌಕರ ಅಭಿಷೇಕ್ ಆತ್ಮಹತ್ಯೆಗೆ ಯತ್ನ

Posted by Vidyamaana on 2023-08-30 02:16:35 |

Share: | | | | |


ಡಿಪೋ ವ್ಯವಸ್ಥಾಪಕಿಯಿಂದ ಕಿರುಕುಳ ಆರೋಪ: ವಿಷ ಕುಡಿದು KSRTC ನೌಕರ ಅಭಿಷೇಕ್ ಆತ್ಮಹತ್ಯೆಗೆ ಯತ್ನ

ಕೊಡಗು: ವಿಷ ಕುಡಿದು KSRTC ನೌಕರ ಅಭಿಷೇಕ್ ಎಂಬಾತ​ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ಕೆಎಸ್​ಆರ್​ಟಿಸಿ ಡಿಪೋದಲ್ಲಿ‌ ನಡೆದಿದೆ.


ಅಸ್ವಸ್ಥಗೊಂಡ ನೌಕರ ಅಭಿಷೇಕ್​​ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಡಿಪೋ ವ್ಯವಸ್ಥಾಪಕಿ ಗೀತಾ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಈ ಕುರಿತು ಮಡಿಕೇರಿ ಟೌನ್ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.​

ಹಕ್ಕುಪತ್ರವಿದೆ..RTCಯೂ ಇದೆ.. ಜಾಗ ಮಾತ್ರ ಇಲ್ಲ..

Posted by Vidyamaana on 2023-09-09 20:20:54 |

Share: | | | | |


ಹಕ್ಕುಪತ್ರವಿದೆ..RTCಯೂ ಇದೆ.. ಜಾಗ ಮಾತ್ರ ಇಲ್ಲ..

ಪುತ್ತೂರು; `` ನಮಗೆ ಹಕ್ಕು ಪತ್ರ ಕೊಟ್ಟಿದ್ದಾರೆ, ನಮಗೆ ಕೊಟ್ಟ ಹಕ್ಕು ಪತ್ರದ ಆಧಾರದಲ್ಲಿ ಆರ್ ಟಿಸಿಯೂ ಕೊಟ್ಟಿದ್ದಾರೆ ಆದರೆ ಜಾಗ ಮಾತ್ರ ಕೊಟ್ಟಿಲ್ಲ, ಕಳೆದ ೯ ವರ್ಷಗಳಿಂದ ನಾವು ಜಾಗ ಕೊಡಿ ಎಂದು ಕಚೇರಿಗಳಿಗೆ ಅಲೆದಾಟ ಮಾಡುತ್ತಿದ್ದೇವೆ ನಮ್ಮ ನೋವನ್ನೂ ಯಾರೂ ಕೇಳಿಲ್ಲ, ನಮಗೆ ನ್ಯಾಯ ಕೊಡಿ ಎಂದು ಕೊಳ್ತಿಗೆ ಗ್ರಾಮದ ಮೇರುಸಿದ್ದಮೂಲೆಯ ಸುಮಾರು ದಲಿತ ಕುಟುಂಬಗಳು ಶಾಸಕರಾದ ಅಶೋಕ್ ರೈ ಯವರ ಬಳಿ ಬಂದು ದೂರು ನೀಡಿದ್ದು ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

೨೦೧೪ ರಲ್ಲಿ ಕೊಳ್ತಿಗೆ ಗ್ರಾಮದ ಮೇರು ಸಿದ್ದಮೂಲೆಯ ೧೮ ದಲಿತ ಕುಟುಂಬಗಳು ಮತ್ತು ೮ ಹಿಂದುಳಿದ ವರ್ಗಗಳ ಕುಟುಂಬಘಳಿಗೆ ಆಶ್ರಯ ಗ್ರಾಮೀಣ ನಿವೇಶನ ಯೋಜನೆಯಡಿ ನಿವೇಶನ ಹಕ್ಕು ಪತ್ರವನ್ನು ನೀಡಲಾಗಿದೆ. ಹಕ್ಕು ಪತ್ರ ನೀಡಿದ ಬಳಿಕ ಅದೇ ಸರ್ವೆ ನಂಬರ್‌ನಲ್ಲಿ ಆರ್ ಟಿಸಿಯನ್ನು ನೀಡಲಾಗಿದೆ. ಆದರೆ ಅದೇ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮುಂದಾದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು ಅದು ಮೀಸಲು ಅರಣ್ಯ ಜಾಗಕ್ಕೆ ಸೇರಿದೆ ಎಂದು ಅಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ಆ ಬಳಿಕ ೨೬ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಜಾಗವನ್ನೇ ಗೊತ್ತು ಮಾಡಿರಲಿಲ್ಲ. ಕಳೆದ ೯ ವರ್ಷಗಳಿಂದ ಇವರು ಕಚೇರಿಗೆ ಅಲೆದಾಟ ಮಾಡುತ್ತಿದ್ದರೂ ಇವರಿಗೆ ನ್ಯಾಯ ಸಿಕ್ಕಿರಲಿಲ್ಲ.


ಶಾಸಕರ ಭೇಟಿ ತುರ್ತು ಪರಿಹಾರ

ಹಕ್ಕು ಪತ್ರವನ್ನು ಪಡೆದುಕೊಂಡಿದ್ದ ಕೆಲವು ಕುಟುಂಬಗಳು ಶಾಸಕರಾದ ಅಶೋಕ್ ರೈಯವರನ್ನು ಭೇಟಿಯಾಗಿ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ಇಲಾಖಾ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಅಲ್ಲಿನ ಜಾಗದ ಸಮಸ್ಯೆಗಳನ್ನು ಅರಿತುಕೊಂಡರು. ಕಂದಾಯ ಇಲಾಖೆಯವರು ಹಕ್ಕು ಪತ್ರ ನೀಡಿದ ಜಾಗ ಮೀಸಲು ಅರಣ್ಯಕ್ಕೆ ಸೇರಿದ ಕಾರಣ ಅಲ್ಲಿ ಮನೆ ಕಟ್ಟಲು ಅರಣ್ಯ ಇಲಾಖೆಯಿಂದ ಆಕ್ಷೇಪ ಸಲ್ಲಿಸಿದ ಬಗ್ಗೆ ಶಾಸಕರ ಗಮನಕ್ಕೆ ತಂದರು. ಇದೇ ಸರ್ವೆ ನಂಬರ್‌ನಲ್ಲಿ ಸರಕಾರಿ ಜಾಗವನ್ನು ಗುರುತಿಸಿ ಹಕ್ಕು ಪತ್ರವನ್ನು ಪಡೆದುಕೊಂಡಿರುವ ಎಲ್ಲಾ ಕುಟುಂಬಗಳಿಗೂ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ತಾತ್ಕಾಲಿಕವಾಗಿ ಕೊಳ್ತಿಗೆಯಲ್ಲಿನ ಸರಕಾರಿ ಜಾಗದಲ್ಲಿ ಶೀಟ್ ಹಾಕಿ ಕೆಲವು ಕುಟುಂಬಗಳು ಮನೆ ನಿರ್ಮಾನ ಮಾಡಿಕೊಂಡಿದ್ದು ಅಲ್ಲಿಂದ ಬಡ ಕುಟುಂಬವನ್ನು ತೆರವು ಮಾಡದಂತೆ ಶಾಸಕರು ಸೂಚನೆ ನೀಡಿದ್ದಾರೆ.


ಶಾಸಕರು ನೋವಿಗೆ ಸ್ಪಂದಿಸಿದ್ದಾರೆ

ನಮ್ಮ ನೋವನ್ನು ಶಾಸಕರಾದ ಅಶೋಕ್ ರೈಯವರ ಬಳಿ ಹೇಳಿಕೊಂಡಾಗ ಅವರ ತಕ್ಷಣ ಸ್ಪಂದನೆ ನೀಡಿದ್ದಾರೆ. ಈಗ ನಾವು ತಾತ್ಕಾಲಿಕವಾಗಿ ಶೀಟ್ ಹಾಕಿ ಮನೆ ನಿರ್ಮಾಣ ಮಾಡಿಕೊಂಡಿದ್ದು ಅಲ್ಲೇ ವಾಸ್ತವ್ಯ ಇರುವಂತೆ ತಿಳಿಸಿದ್ದಾರೆ. ಮುಂದೆ ಇದೇ ಹಕ್ಕು ಪತ್ರವನ್ನು ಇಟ್ಟು ನ್ಯಾಯಾಲಯದ ಮೊರೆ ಹೋಗೋಣ ಎಂದು ಭರವಸೆಯನ್ನು ನೀಡಿದ್ದಾರೆ. ಇದುವರೆಗೆ ನಮ್ಮ ನೋವಿಗೆ ಯಾರೂ ಸ್ಪಂದನೆ ಮಾಡಿರಲಿಲ್ಲ. ಶಾಸಕರ ಬಳಿ ಬಂದು ನಮಗೆ ನ್ಯಾಯ ಸಿಕ್ಕಿದೆ


ಲವಕುಮಾರ್, ಫಲಾನುಭವಿ


ಹಕ್ಕುಪತ್ರ ಕೊಟ್ಟಿದ್ದಾರೆ ನಿವೇಶನ ಇಲ್ಲ

೨೬ ಬಡ ಕುಟುಂಬಗಳಿಗೆ ಹಕ್ಕು ಪತ್ರವನ್ನು ಕಂದಾಯ ಇಲಾಖೆ ನೀಡಿದೆ ಜಾಗ ಎಲ್ಲಿ ಎಂದು ತೋರಿಸಲಿಲ್ಲ, ಕಂದಾಯ ಇಲಾಖೆ ಗುರುತಿಸಿದ ಜಾಗ ಅರಣ್ಯಕ್ಕೆ ಸೇರಿದ್ದು ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಹಕ್ಕು ಪತ್ರ ಕೊಡುವಾಗ ಸರಿಯಾಗಿ ನೋಡಿಕೊಡದೇ ಇರುವುದು ತಪ್ಪು. ನ್ಯಾಯ ಕೊಡಿ ಎಂದು ನನ್ನಲ್ಲಿ ಬಂದಿದ್ದಾರೆ. ಅಧಿಕಾರಿಗಳ ಜೊತೆ ಮಾತನಾಡಿ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ್ದೇನೆ, ತಾತ್ಕಾಲಿಕವಾಗಿ ಈಗ ಶೀಟ್ ಹಾಕಿರುವ ಮನೆಯಲ್ಲೇ ವಾಸ್ತವ್ಯ ಮಾಡುವಂತೆ ತಿಳಿಸಿದ್ದೇನೆ.

ಅಶೋಕ್ ರೈ ಶಾಸಕರು ಪುತ್ತೂರು

ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿ ದಿವ್ಯಾ ನಾಪತ್ತೆ

Posted by Vidyamaana on 2024-06-01 22:54:07 |

Share: | | | | |


ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿ ದಿವ್ಯಾ ನಾಪತ್ತೆ

ಬೆಳ್ತಂಗಡಿ: ಉಜಿರೆಯ ಎಸ್.ಡಿ ಎಂ ಕಾಲೇಜಿನ ಕ್ರೀಡಾ ವಸತಿ ಶಾಲೆಯ ಪ್ರಥಮ ಪಿ.ಯು.ಸಿ ವಿಧ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿದ್ದಾಳೆ.

ಉಜಿರೆ ಶ್ರೀ ಧರ್ಮಸ್ಥಳ ಕ್ರೀಡಾ ವಸತಿ ನಿಲಯದ ಸಹಾಯಕ ನಿಲಯ ಪಾಲಕಿ ನೀಡಿರುವ ದೂರಿನಂತೆ ಬೇಲೂರಿನ ದಿವ್ಯಾ. ಎಸ್, ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪ್ರಥಮ ಪಿಯುಸಿ



Leave a Comment: