ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ತೀರ್ಥಹಳ್ಳಿಯ ದಾಸನಕೂಡಿಗೆಯಲ್ಲಿ ನವವಿವಾಹಿತೆ ನೇಣಿಗೆ ಶರಣು

Posted by Vidyamaana on 2024-01-18 13:39:32 |

Share: | | | | |


ತೀರ್ಥಹಳ್ಳಿಯ ದಾಸನಕೂಡಿಗೆಯಲ್ಲಿ ನವವಿವಾಹಿತೆ ನೇಣಿಗೆ ಶರಣು

ಶಿವಮೊಗ್ಗ: ಪರಸ್ಪರ ಪ್ರೀತಿಸಿ ಕಳೆದ 8 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ತೀರ್ಥಹಳ್ಳಿ (Thirthahalli) ತಾಲೂಕಿನ ದಾಸನಕೂಡಿಗೆ ಗ್ರಾಮದಲ್ಲಿ ನಡೆದಿದೆ.ಮೃತಪಟ್ಟ ನವವಿವಾಹಿತೆಯನ್ನು ಶಮಿತಾ (24) ಎಂದು ಗುರುತಿಸಲಾಗಿದೆ. ರಾತ್ರಿ ಮಲಗಲು ಮನೆಯ ಉಪ್ಪರಿಗೆಯ ಕೊಠಡಿಗೆ ತೆರಳಿದ್ದ ಶಮಿತಾ ಬೆಳಗ್ಗೆ ಬಹಳ ಹೊತ್ತಾದರೂ ಹೊರ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಮನೆಯ ಕೆಲಸದವರು ಕಿಟಕಿ ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.ನೊಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜ್ಜಳ ಗ್ರಾಮದ ಶಮಿತಾ 2023ರ ಮಾರ್ಚ್ನಲ್ಲಿ ದಾಸನಕೊಡಿಗೆಯ ವಿದ್ಯಾರ್ಥ್ ಜೊತೆ ವಿವಾಹವಾಗಿದ್ದರು. ವಿದ್ಯಾರ್ಥ್ ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವಿಭಾಗದ ಅಮಾವಾಸ್ಯೆಬೈಲು ವಲಯ ಅರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಪಾಳಿ ಕೆಲಸಕ್ಕೆ ಪತಿ ವಿದ್ಯಾರ್ಥ್ ತೆರಳಿದ್ದರು. ಮನೆಯಲ್ಲಿ ಪತಿಯ ತಂದೆ, ತಾಯಿ ಇದ್ದರು. ಕೊಠಡಿಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಆರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಲಾಗಿದೆ.ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ತಹಶೀಲ್ದಾರ್ ಜಕ್ಕನಗೌಡರ್ ಉಪಸ್ಥಿತಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಆಗುಂಬೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ

ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ ಧನೇಶ್ ಶೆಟ್ಟಿ ಆಯ್ಕೆ

Posted by Vidyamaana on 2023-11-24 12:25:24 |

Share: | | | | |


ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ  ಧನೇಶ್ ಶೆಟ್ಟಿ  ಆಯ್ಕೆ

ಮಂಗಳೂರು: ಬಂಟ್ವಾಳ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಧನೇಶ್ ಶೆಟ್ಟಿ ಇಂಡೋನೇಷಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಧನೇಶ್ ಶೆಟ್ಟಿ ಕುಕ್ಕಿಪ್ಪಾಡಿ ಹುಣಸೆ ಬೆಟ್ಟು ನಿವಾಸಿ ಮಹಾಬಲ ಶೆಟ್ಟಿ ಎಂಬವರ ಪುತ್ರರಾಗಿದ್ದಾರೆ. ಇಂಡೋನೇಷಿಯಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಇವರು ವಿವಾಹಿತರಾಗಿದ್ದು ಪತ್ನಿಯೊಂದಿಗೆ ಇಂಡೋನೇಷಿಯದ ಆರೋಗ್ಯ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಇದೀಗ ಇಂಡೋನೇಷ್ಯಾದ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಡ್ರಾಮಾ ಜೂನಿಯರ್ ಸೀಸನ್ 5 - ಕುಡ್ಲದ ರಿಷಿಕಾ ಕುಂದೇಶ್ವರ ಮತ್ತು ಕುಣಿಗಲ್‌ನ ವಿಷ್ಣು ಜಂಟಿ ವಿನ್ನರ್

Posted by Vidyamaana on 2024-04-22 13:28:29 |

Share: | | | | |


ಡ್ರಾಮಾ ಜೂನಿಯರ್ ಸೀಸನ್ 5 - ಕುಡ್ಲದ ರಿಷಿಕಾ ಕುಂದೇಶ್ವರ ಮತ್ತು ಕುಣಿಗಲ್‌ನ ವಿಷ್ಣು ಜಂಟಿ ವಿನ್ನರ್

ಮಂಗಳೂರು, ಎ.22: ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ ಸೀಸನ್ 5ರಲ್ಲಿ ಮಂಗಳೂರಿನ ರಿಷಿಕಾ ಕುಂದೇಶ್ವರ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್‌ನ ವಿಷ್ಣು ಡ್ರಾಮಾ ಜೂನಿಯರ್ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ. 

ಭಾನುವಾರ ರಾತ್ರಿ ಸೀಸನ್‌ 5ರ ವಿಜೇತರು ಯಾರು ಎಂಬುದನ್ನು ಘೋಷಿಸುವ ಮೂಲಕ ಕಾರ್ಯಕ್ರಮ ಮುಕ್ತಾಯ ಕಂಡಿದೆ. ಈ ಸಲ ಇಬ್ಬರನ್ನು ವಿಜೇತರಾಗಿ ಆಯ್ಕೆ ಮಾಡಲಾಗಿದೆ‌. ರಾಜ್ಯದ 31 ಜಿಲ್ಲೆಗಳಿಂದ ಹಲವಾರು ಬಾಲ ಪ್ರತಿಭೆಗಳನ್ನು ಆಡಿಷನ್‌ ಮೂಲಕ ಆಯ್ಕೆ ಮಾಡಲಾಗಿತ್ತು. ಮೊದಲ ವಾರದಿಂದಲೇ ಶುರುವಾದ ಮಕ್ಕಳ ಆಟ, ಫಿನಾಲೆ ಹಂತಕ್ಕೆ ಬರುವ ವರೆಗೂ ಬರೋಬ್ಬರಿ 200ಕ್ಕೂ ಅಧಿಕ ಸ್ಕಿಟ್‌ಗಳನ್ನು ಮಾಡಿ ಮುಗಿಸಿದ್ದರು. ಪುಟಾಣಿಗಳು. ಪೌರಾಣಿಕ, ಸಾಮಾಜಿಕ, ಹಾಸ್ಯ ಪ್ರಧಾನ ಎಲ್ಲ ಬಗೆಯ ಶೋಗಳಿಂದಲೇ ಈ ಸಲದ ವೇದಿಕೆಯನ್ನು ರಂಗಾಗಿಸಿದ್ದರು. 21 ವಾರ ಕರುನಾಡನ್ನು ಮನರಂಜಿಸಿದ 14 ಮಕ್ಕಳ ಪೈಕಿ ಯಾರು ವಿಜೇತರು ಎಂಬ ಕೌತುಕಕ್ಕೆ ಭಾನುವಾರ ತೆರೆಬಿದ್ದಿದೆ. ಈ ಬಾರಿ ಎಲ್ಲ14 ಮಂದಿ ಪುಟಾಣಿಗಳು ಫಿನಾಲೆ ಸುತ್ತಿನಲ್ಲಿದ್ದರು. ಆ ಪೈಕಿ ಫಿನಾಲೆ ರೌಂಡ್‌ನಲ್ಲಿ ಭದ್ರಾವತಿಯ ಇಂಚರ, ಶಿವಮೊಗ್ಗದ ಮಹಾಲಕ್ಷ್ಮೀ, ಮಂಗಳೂರಿನ ರಿಶಿಕಾ,

ಸ್ವ ಗ್ರಾಮದ ಕೋಡಿಂಬಾಡಿ ಗೆ ಭರ್ಜರಿ ಗಿಫ್ಟ್ ಕೊಟ್ಟ ಶಾಸಕರು

Posted by Vidyamaana on 2023-12-23 09:16:57 |

Share: | | | | |


ಸ್ವ ಗ್ರಾಮದ ಕೋಡಿಂಬಾಡಿ ಗೆ ಭರ್ಜರಿ ಗಿಫ್ಟ್ ಕೊಟ್ಟ ಶಾಸಕರು

ಪುತ್ತೂರು: ಶಾಸಕರಾದ ಅಶೋಕ್ ರೈ ಯವರ ಸ್ವಗ್ರಾಮ ಕೋಡಿಂಬಾಡಿಗೆ ಮೊದಲ ಬಾರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಗ್ರಾಮದ ವಿವಿಧ ರಸ್ತೆ ಕಾಮಗಾರಿಗೆ ಒಟ್ಟು ೫೫ ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಿದ್ದು ಅದರ ಶಿಲಾನ್ಯಾಸ ಕಾಮಗಾರಿ ಡಿ. ೨೨ ರಂದು ನಡೆಯಿತು.


ಕೋಡಿಂಬಡಿ ಗ್ರಾಮದ ಕೆದಿಕಂಡೆ-ಪುಣ್ಕೆತ್ತಡಿ ರಸ್ತೆ, ಕಲ್ಪನೆ -ಪಿಲಗುಂಡ ರಸ್ತೆ೧೦ ಲಕ್ಷ , ಬೆಳ್ಳಿಪ್ಪಾಡಿ ಕೊಡಿಮರ ಕಠಾರ ರಸ್ತೆ೧೦ ಲಕ್ಷ . ಕೊಡಿಮರ ಬಾರ್ತೋಲಿ ರಸ್ತೆ, ಕಜೆ ಬೆಳ್ಳಿಪ್ಪಾಡಿ ರಸ್ತೆಗೆ ೧೦ ಲಕ್ಷ , ದಾರಂದ ಕುಕ್ಕು ಬದಿನಾರು ರಸ್ತೆಗೆ ೧೦ ಲಕ್ಷ  ಒಟ್ಟು ೫೫ ಲಕ್ಷ ಅನುದಾನ ಬಿಡುಗಡೆಯಾಗಿದ್ದು ಚುನಾವಣಾ ಪೂರ್ವದಲ್ಲಿ ತನ್ನ ಗ್ರಾಮಸ್ಥರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ.


ಅನುದಾನಗಳ ಭರಪೂರವೇ ಬರುತ್ತಿದೆ

ಗ್ಯಾರಂಟಿ ಯೋಜನೆ ಮಾಡಿ ಸರಕಾರದಿಂದ ಅನುದಾನ ಬರುತ್ತಿಲ್ಲ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವವರು ಕೋಡಿಂಬಡಿಗೆ ಬಂದು ನೋಡಲಿ, ಇಂದಿನಿಂದ ಪ್ರತೀ ದಿನ ಶಿಲಾನ್ಯಾಸ ಕಾರ್ಯ ನಡೆಯುತ್ತಲೇ ಇರುತ್ತದೆ. ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ ಅಭಿವೃದ್ದಿ ಕಾರ್ಯ ನಡೆಯಲಿದೆ. ಎಲ್ಲಾ ಗ್ರಾಮಗಳಿಗೂ ಸಮಾನ ರೀತಿಯಲ್ಲಿ ಅನುದಾನವನ್ನು ಹಂಚಿಕೆ ಮಾಡುತ್ತೇನೆ. ಕ್ಷೇತ್ರದಲ್ಲಿ ಮುಂದೆ ಅಭಿವೃದ್ದಿ ಕಾರ್ಯಗಳು ನಡೆಯಲಿದ್ದು ಅಪಪ್ರಚಾರ ಮಾಡುವವರು ಒಮ್ಮೆ ಇದನ್ನು ತಿಳಿದುಕೊಳ್ಳಲಿ. ಬೆಳ್ಳಿಪ್ಪಾಡಿ ಗ್ರಾಮದ ಕಠಾರದಲ್ಲಿ ಕೆಎಂಎಫ್ ಡೈರಿ ಶಿಫ್ಟ್ ಆಗಲಿದೆ ಇದರಿಂದ ಆ ಬಾಗದ ಸಂಪೂರ್ಣವಾಗಿ ಅಭಿವೃದ್ದಿಯಾಗಲಿದೆ, ಅಲ್ಲಿನ ರಸ್ತೆಗಳಿಗೂ ಕಾಂಕ್ರೀಟ್ ಭಾಗ್ಯ ದೊರೆಯಲಿದೆ ಎಂದು ಶಾಸಕರು ಹೇಳಿದರು.


ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿ


ಪುತ್ತೂರು ವಿಧಾನಸಭಾ ಕ್ಷೆತ್ರದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲಿದೆ. ಈಗಾಗಲೇ ಕುಡಿಯುವ ನೀರು, ಕೆಎಂಎಫ್, ಕಬಕದಲ್ಲಿ ಕ್ರಿಕೆಟ್ ಮೈದಾನ, ಪುತ್ತೂರು ನಗರದಲ್ಲಿ ಚರಂಡಿ ಕಾಮಗಾರಿ, ಉಪ್ಪಿನಂಗಡಿ ದೇವಳದ ವಠಾರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯಲಿದೆ. ಚುನವಣೆ ಪೂರ್ವದಲ್ಲಿ ಜನತೆಗೆ ಕೊಟ್ಟ ಭರವಸೆಯನ್ನು ಒಂದೊಂದಾಗಿ ಈಡೇರಿಸುವ ಕೆಲಸವನ್ನು ಮಾಡಲಿದ್ದೇನೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ಬಿಜೆಪಿಯವರು ಮಂಗವೇ ಮಾಡಿದ್ದು

ನಮ್ಮ ರಸ್ತೆಯನ್ನು ಕಾಂಕ್ರೀಟ್ ಮಾಡಿಲ್ಲ, ನಾವು ಬಿಜೆಪಿ ಶಾಸಕರಿರುವಾಗ ಮನವಿ ಮಾಡಿದ್ದೆವು ಆದರೆ ನಯಾ ಪೈಸೆ ಅನುದಾನ ಕೊಟ್ಟಿಲ್ಲ, ನಾವೇನು ಪಾಕಿಸ್ತಾನದಲ್ಲಿದ್ದೇವಾ ಎಂಬ ಭಾವನೆ ನಮ್ಮಲ್ಲಿತ್ತು ಎಂದು ಸುಬ್ರಹ್ಮಣ್ಯ ಶೆಟ್ಟಿ ರೆಂಜಾಜೆ ಗುತ್ತು ಆರೋಪ ಮಾಡಿದರು. ಕೊಡ್ತೇವೆ, ಇಡ್ತೇವೆ ಎಂದು ಹೇಳಿ ನಮ್ಮನ್ನು ಬಿಜೆಪಿಯವರು ಮಂಗವೇ ಮಾಡಿದ್ದಾರೆ, ಬೆಳ್ಳಿಪ್ಪಾಡಿ -ಕಜೆ ರಸ್ತೆ ಭಾರತದಲ್ಲಿದೆ ಎಂಬುದು ಈಗ ನಮಗೆ ಅನುಭವವಾಯಿತು ಎಂದು ಹೇಳಿದರು. ಕೇಶವ ಭಂಡಾರಿ ಕೈಪ ಮಾತನಾಡಿ ನಾವು ಈ ಹಿಂದೆ ಅನುದಾನ ಕೇಳಲು ಹೋದಾಗ ನಿಮ್ಮ ಏರಿಯದಲ್ಲಿ ಓಟು ಕಮ್ಮಿ ಇದೆ , ಸ್ವಲ್ಪ ಓಟು ಹೆಚ್ಚು ಮಾಡಿಸಿ ಅನುದಾನ ಇಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು, ಆದರೆ ಇಂದು ಅದಾವುದನ್ನು ಕೇಳದೆ ನಮ್ಮ ರಸ್ತೆಗೆ ಅನುದಾನ ಇಡುವ ಮೂಲಕ ಶಾಸಕರಾದ ಅಶೋಕ್ ರೈಯವರು ಅನುದಾನ ಹಂಚಿಕೆಯಲ್ಲಿ ಅಥವಾ ಅಭಿವೃದ್ದಿ ಯಲ್ಲಿ ರಾಜಕೀಯ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಇನ್ನು ಅಭಿವೃದ್ದಿ ಪರ್ವ ಆರಂಭ: ಡಾ.ರಾಜಾರಾಂ


ಮುಂದಿನ ದಿನಗಳಲ್ಲಿ ಪುತ್ತೂರು ಕ್ಷೇತ್ರ ನಿರಂತರ ಅಭಿವೃದ್ದಿ ಹೊಂದಲಿದೆ. ಅಶೋಕ್ ರೈಯವರು ಶಾಸಕರಾಗಿ ಕೇವಲ ಏಳು ತಿಂಗಳಲ್ಲಿ ಸಾವಿರಾರು ಕೋಟಿ ಅನುದಾನವನ್ನು ತಂದಿದ್ದಾರೆ ಇದು ಯಾರಿಗೂ ಸಾಧ್ಯವಾಗಿಲ್ಲ. ಕ್ಷೇತ್ರದ ಗಲ್ಲಿಗಲ್ಲಿಗಳ ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಬಹು ಅಪೇಕ್ಷಿತ ಕಾಮಗಾರಿಗಳು ಮುಂದೆ ನಡೆಯಲಿದೆ. ಅಭಿವೃದ್ದಿ ಆಗಬೇಕಾದರೆ ಕಾಂಗ್ರೆಸ್ ಶಾಸಕರಿರಬೇಕು, ಕಾಂಗ್ರೆಸ್ ಸರಕಾರ ಇರಬೇಕು ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅದ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಹೇಳಿದರು.

ದಾರಂದಕುಕ್ಕು ಅಂಗನವಾಡಿ ಇಂಟರ್‌ಲಾಕ್ ಉದ್ಘಾಟನೆ


ದಾರಂದ ಕುಕ್ಕು ಅಂಗನವಾಡಿಯ ಅಂಗಳಕ್ಕೆ ಹಾಕಿರುವ ಇಂಟರ್ ಲಾಕ್ ವ್ಯವಸ್ಥೆಯನ್ನು ಶಾಸಕರು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮತನಾಡಿದ ಶಾಸಕರು ಪುಟ್ಟ ಮಕ್ಕಳಿಗೆ ಎಳವೆಯಲ್ಲೇ ಉತ್ತಮ ವಾತಾವರಣವನ್ನು ಕಲ್ಪಿಸಿಕೊಡಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ. ಸಣ್ಣ ಪ್ರಾಯದಲ್ಲೇ ಮಕ್ಕಳು ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡಲ್ಲಿ ಮುಂದೆ ದೊಡ್ಡವರಾದಾಗ ಅದು ಜೀವನದಲ್ಲಿ ಅಳವಡಿಕೆಯಗುತ್ತದೆ. ಅಂಗನವಾಡಿ ಕೇಂದ್ರಗಳು ಪುಟ್ಟ ಹೃದಯಗಳ ಸಮ್ಮಿಲನ ಕೇಂದ್ರವಾಗಿದೆ. ಮಕ್ಕಳನ್ನು ಅಂಗನವಾಡಿಗೆ ಸೇರಿಸುವ ಮೂಲಕ ಪೋಷಕರು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು ಇದೇ ಸಂದರ್ಬದಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯನ್ನು ಶಾಸಕರು ಗೌರವಿಸಿದರು.


ವಾರದಲ್ಲಿ ಮೂರು ದಿನ ಕ್ಯಾಂಪ್


ಸರಕಾರದ ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ಬಾರದೇ ಇರುವ ಅನೇಕ ಕುಟುಂಬಗಳಿದ್ದು ಅವರಿಗೆ ಅವರವರ ಗ್ರಾಮದಲ್ಲೇ ಕ್ಯಾಂಪ್ ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಪ್ರಭಾರ ಸಿಡಿಪಿಒ ಮಂಗಳಾರವರು ತಿಳಿಸಿದರು. ಕ್ಯಾಂಪ್ ನಡೆಸಿ ಸಮಸ್ಯೆ ಪರಿಹಾರ ಶಾಸಕರು ಇಲಾಖೆಗೆ ಸೂಚನೆಯನ್ನು ನೀಡಿದ್ದರು. ಅದರಂತೆ ಡಿ.೨೭,೨೮ ಮತ್ತು ೨೯ ರಂದು ಮೂರು ದಿನ ಎಲ್ಲಾ ಗ್ರಾಪಂ ಕಚೇರಿಗಳಲ್ಲಿ ಕ್ಯಾಂಪ್ ನಡೆಯಲಿದೆ. ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಶಾಕರು ಇದೇ ಸಂದರ್ಬದಲ್ಲಿ ಮನವಿ ಮಾಡಿದರು.


ಕೇಳಿಕೇಳಿ ಸಾಕಾಗಿ ಹೋಗಿದೆ

ದಾರಂದಕುಕ್ಕು ಬದಿನಾರು ರಸ್ತೆಗೆ ಕಾಂಕ್ರೀಟ್ ಮಾಡಿಸಿ ಎಂದು ನಮಗೆ ಕೇಳಿ ಕೇಳಿ ಸಾಕಾಗಿ ಹೋಗಿದೆ. ಕಳೆದ ೧೫ ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ ಈ ಬರಿ ನಮಗೆ ಯೋಗ ಕೂಡಿ ಬಂದಿದೆ. ನಮ್ಮ ರಸ್ತೆಗೆ ೧೦ ಲಕ್ಷ ಅನುದಾನ ಇಡುವ ಮೂಲಕ ೧೫ ವರ್ಷಗಳ ಬೇಡಿಕೆಯನ್ನು ಶಾಸಕರು ಈಡೇರಿಸಿದ್ದಾರೆ ಎಂದು ಬದಿನಾರು ನಿವಾಸಿಗಳು ಶಾಸಕರಲ್ಲಿ ತಿಳಿಸಿದರು.


ಕಾರ್ಯಕ್ರಮದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷರಾದ ಮುರಳೀಧರ್ ರೈ ಮಠಂತಬೆಟ್ಟು, ಕೋಡಿಂಬಾಡಿ ಗ್ರಾಪಂ ಅಧ್ಯಕ್ಷೆಮಲ್ಲಿಕಾ ಅಶೋಕ್ ಪೂಜರಿ, ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮೋನಪ್ಪ ಗೌಡ ಪಮ್ಮನಮಜಲು, ಕಾರ್ಯದರ್ಶಿಗಳಾದ ಯೋಗೀಶ್ ಸಾಮಾನಿ ಮಠಂತಬೆಟ್ಟು, ಬೂತ್ ಅಧ್ಯಕ್ಷರುಗಳಾದ ಪ್ರಭಾಕರ ಸಾಮಾನಿ, ಪದ್ಮನಾಭ ಶೆಟ್ಟಿ ರೆಂಜಾಜೆ, ಶಿವಪ್ರಸಾದ್ ರೈ ಮಟಂತಬೆಟ್ಟು, ವಿಕ್ರಂ ಶೆಟ್ಟಿಕೋಡಿಂಬಾಡಿ, ಕೇಶವ ಗೌಡ ಬರಮೇಲು, ಬನ್ನೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರಭಟ್, ರಾಜಶೇಖರ್ ಜೈನ್ ನೀರ್ಪಾಜೆ, ನೆಕ್ಕಿಲಾಡಿ ವಲಯ ಅಧ್ಯಕ್ಷೆ ಅನಿಮಿನೇಜಸ್, ಇಬ್ರಾಹಿಂ ಸೇಡಿಯಾಪು, ಅಶ್ರಫ್ ಬಸ್ತಿಕ್ಕಾರ್, ಮೋನಪ್ಪ ಶೆಟ್ಟಿ ಕಠಾರ, ಶ್ರೀನಿವಾಸ ಶೆಟ್ಟಿ ಕಠಾರ, ಗ್ರಾಪಂ ಸದಸ್ಯೆ ಪುಷ್ಪಾವತಿ, ಪದ್ಮಪ್ಪ ಪೂಜಾರಿ ಪರನೀರು, ಹರೀಶ್ ಕಜೆ,  ಬೆಳ್ಳಿಪ್ಪಾಡಿ ಶಾಲಾ ಮುಖ್ಯ ಗುರು ಯಶೋಧ, ಗ್ರಾಪಂ ಸದಸ್ಯೆ ಭವ್ಯ ವಿದ್ಯಾಪ್ರಸಾದ್, ಪುಷ್ಪಾ ಲೋಕಯ್ಯ ನಾಯ್ಕ, ಪ್ರೇಮ ಈಶ್ವರ ನಾಯ್ಕ, ಗಣೇಶ್ ಶೆಟ್ಟಿ ಕಠಾರ, ಉಮೇಶ್ ಶೆಟ್ಟಿ ಕಠಾರ, ವಾಸುದೇಶವ ಆಚಾರ್ಯ ಕೊಡಪಡ್ಯ,ಶೀಲಾ ಲೋಕನಾಥ ಶೆಟ್ಟಿ, ಸಂತೋಷ್ ರೈ ಕೆದಿಕಂಡೆ ಗುತ್ತು,ಚಂಧ್ರಶೇಖರ್ ರೈ ಕೆದಿಕಂಡೆ ಗುತ್ತು, ಮಾಜಿ ಮಂಡಲ ಪಂಚಾಯತ್ ಸದಸ್ಯೆ ಗಿರಿಜಾ ರೈ ಕೆದಿಕಂಡೆ ಮತ್ತಿತರರು ಉಪಸ್ಥಿತರಿದ್ದರು. ನಿರಂಜನ್ ರೈ ಮಠಂತಬೆಟ್ಟು ಸ್ವಾಗತಿಸಿದರು.ಸುದೇಶ್ ಶೆಟ್ಟಿ ವಂದಿಸಿದರು. ವಲಯ ಕಾರ್ಯದರ್ಶಿ ಯೋಗೀಶ್ ಸಾಮಾನಿ ಕಾರ್ಯಕ್ರಮ ನಿರೂಪಿಸಿದರು.

ತಾಜ್ ಮಹಲ್ ಆವರಣದಲ್ಲಿ ರೀಲ್ : ಯುವತಿಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್‌ ಯೋಧ Watch Video

Posted by Vidyamaana on 2024-04-07 13:42:45 |

Share: | | | | |


ತಾಜ್ ಮಹಲ್ ಆವರಣದಲ್ಲಿ ರೀಲ್ : ಯುವತಿಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್‌ ಯೋಧ  Watch Video

ನವದೆಹಲಿ: ಆಗ್ರಾದ ತಾಜ್ ಮಹಲ್ನಲ್ಲಿ ಶನಿವಾರ ಸಿಐಎಸ್‌ಎಫ್ ಜವಾನ್ ಮತ್ತು ಮಹಿಳಾ ಪ್ರವಾಸಿಗರ ನಡುವೆ ಘರ್ಷಣೆ ಭುಗಿಲೆದ್ದಿದೆ.ವರದಿಗಳ ಪ್ರಕಾರ, ತಾಜ್ ಮಹಲ್ ಆವರಣದಲ್ಲಿ ರೀಲ್ ಚಿತ್ರೀಕರಿಸುವ ಬಗ್ಗೆ ವಾಗ್ವಾದದ ನಂತರ ಜಗಳ ಪ್ರಾರಂಭವಾಯಿತು. ಈ ಘಟನೆಯ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ಮತ್ತು ಪ್ರಸ್ತುತ ವೈರಲ್ ಆಗುತ್ತಿದೆ.

ರೀಲ್ಸ್‌ ಹುಚ್ಚಿಗೆ ಮತ್ತೊಂದು ಬಲಿ: ರೈಲು ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಸಾವು. ಭಯಾನಕ ವಿಡಿಯೋ ಇಲ್ಲಿದೆ ನೋಡಿ

Posted by Vidyamaana on 2023-10-01 15:23:19 |

Share: | | | | |


ರೀಲ್ಸ್‌ ಹುಚ್ಚಿಗೆ ಮತ್ತೊಂದು ಬಲಿ: ರೈಲು ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಸಾವು. ಭಯಾನಕ ವಿಡಿಯೋ ಇಲ್ಲಿದೆ ನೋಡಿ

ಭಯಾನಕ ವಿಡಿಯೋ ಇಲ್ಲಿದೆ ನೋಡ


ಉತ್ತರಪ್ರದೇಶ : ರೀಲ್ ವ್ಯಾಮೋಹವು ಮತ್ತೊಂದು ಸಾವಿಗೆ ಕಾರಣವಾದ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ರೈಲು ಬರುವುದನ್ನು ಗಮನಿಸದ ಯುವಕನೊಬ್ಬ ರೈಲ್ವೇ ಹಳಿಗಳ ಮೇಲೆ ಅಜಾಗರೂಕತೆಯಿಂದ ರೀಲ್‌ ಮಾಡುವಾಗ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಘಟನೆಯ ಭಯಾನಕ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.14 ವರ್ಷದ ಫರ್ಮಾನ್ ರೈಲ್ವೆ ಹಳಿಗಳ ಮೇಲೆ ನಡೆದು ರೈಲಿಗೆ ಸಿಲುಕಿದ ಕ್ಷಣವನ್ನು ಗೊಂದಲದ ವೀಡಿಯೊ ರೆಕಾರ್ಡ್ ಮಾಡಲಾಗಿದೆಫರ್ಮಾನ್ ರೈಲು ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿರುವುದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಕೆಲವೇ ಸೆಕೆಂಡ್‌ನಲ್ಲಿ ಢಿಕ್ಕಿ ಹೊಡೆಯುವುದು ಕಂಡುಬಂದಿದೆ.

Readmore.....

ಭಯಾನಕ ವಿಡಿಯೋ ಇಲ್ಲಿದೆ ನೋಡಿ

ಯುವಕರು ಸಾಮಾಜಿಕ ಮಾಧ್ಯಮದ ಕ್ರೇಜ್‌ಗಾಗಿ ಅಜಾಗರೂಕ ಕೃತ್ಯವನ್ನು ಚಿತ್ರೀಕರಿಸುವುದನ್ನು ತೋರಿಸಿದ ರೀಲ್ ಸೆಕೆಂಡುಗಳ ನಂತರ ತೀವ್ರ ತಿರುವು ಪಡೆದುಕೊಂಡಿತು. ಅವನು ಹಳಿಗಳ ಹತ್ತಿರ ಹೆಜ್ಜೆ ಹಾಕುತ್ತಿದ್ದಂತೆ, ವೇಗವಾಗಿ ಬಂದ ರೈಲು ಅವನಿಗೆ ಡಿಕ್ಕಿ ಹೊಡೆದು ಮುಂದೆ ಸಾಗಿದೆ. ಅವರ ನಿರ್ಲಕ್ಷ್ಯದ ಕೃತ್ಯದಿಂದಾಗಿ ಅವರು ಸಾರಿಗೆಯಿಂದ ನಾಟಕೀಯವಾಗಿ ಕತ್ತರಿಸಲ್ಪಟ್ಟರು. ಅಪಘಾತದ ವೇಳೆ ಆಘಾತಕ್ಕೊಳಗಾದ ಜಾಗದಲ್ಲಿ ಫರ್ಮಾನ್‌ನ ಸ್ನೇಹಿತ ಎಂದು ಹೇಳಲಾದ ಇನ್ನೊಬ್ಬ ವ್ಯಕ್ತಿಯನ್ನು ವೀಡಿಯೊ ರೆಕಾರ್ಡ್ ಮಾಡಿದೆ.



Leave a Comment: