Posted by vidyamaana on 2024-06-28 19:50:37 |
ಉಪ್ಪಿನಂಗಡಿ;ಇಲ್ಲಿಗೆ ಸಮೀಪದ ಕರುವೇಲು ಜುಮಾ ಮಸೀದಿಯಲ್ಲಿ ಮರ್ಹೂಂ ಕೆಂಪಿ ಮುಸ್ತಫಾ ಹಾಜಿಯವರ ವಾರ್ಷಿಕ ಸಂಸ್ಮರಣಾ ಕಾರ್ಯಕ್ರಮವು ಇಂದು ಜುಮಾ ನಮಾಜಿನ ನಂತರ ನಡೆಯಿತು.
ಕುರ್ಅನ್ ಪಾರಾಯಣ ,ತಹ್ಲೀಲ್ ಸಮರ್ಪಣೆಯ ನಂತರ ಸ್ಥಳೀಯ ಖತೀಬ್ ಸಯ್ಯಿದ್ ಅನಸ್ ತಂಙಳ್ ದುಹಾಶಿರ್ವಚನ ಮಾಡಿ ಮುಸ್ತಪಾ ಹಾಜಿಯವರ ಗುಣಗಾನ ಮಾಡುತ್ತಾ ಸಮುದಾಯಕ್ಕಾಗಿ ತನ್ನ ಜೀವನ ಮುಡಿಪಾಗಿಟ್ಟಿದ್ದ ಹಾಜಿಯವರಲ್ಲಿ ಸಾಮಾಜಿಕ ಚಿಂತನೆ ಮೇಳೈಸಿತ್ತು.ಅವರು ನಿತ್ಯ ಸ್ಮರಣೀಯರು.ಕರವೇಲು ಮಸೀದಿಯ ಗೌರವದ್ಯಕ್ಷರಾಗಿ ನಮ್ಮ ಜಮಾತ್ ಗೆ ಅವರು ನೀಡಿದ ಕೊಡುಗೆ ಅಪಾರ ಎಂದರು.
ಮುಖ್ಯ ಭಾಷಣಗಾರರಾಗಿ ಆಗಮಿಸಿದ ಜನಾಬ್ ಎಸ್ ಬಿ ಮುಹಮ್ಮದ್ ದಾರಿಮಿ ಉಪ್ಪಿನಂಗಡಿ ಮಾತನಾಡಿ ಅವರ ಜೊತೆಗಿನ ದೀರ್ಘ ಒಡನಾಟದ ಅನುಭವವನ್ನು ಮೆಲುಕು ಹಾಕಿದರು.
ಇಂದಿನ ಯುವ ಪೀಳಿಗೆಗೆ ಕೆಂಪಿಯವರ ಆಡಳಿತ ವೈಖರಿ ಮಾದರಿಯಾಗಿದೆ.ಜಮಾತನ್ನು ಸುಧಾರಣೆಯ ಹಾದಿಯಲ್ಲಿ ಮುನ್ನಡೆಸುವಾಗ ಧರ್ಮ ಗುರುಗಳ ಜೊತೆ ಸಮಾಲೋಚನೆ ನಡೆಸುತ್ತಿದ್ದರು.ಹಿರಿಯರಿಗೆ ಗೌರವ,ಕಿರಿಯರ ಜೊತೆ ಪ್ರೀತಿ ತೋರಿದ್ದರಿಂದಲೇ ಮುಸ್ತಫಾ ಹಾಜಿ ಇಷ್ಟು ಎತ್ತರಕ್ಕೆ ಬೆಳೆದು ನಿಂತರು.
ಬಡವ ಬಲ್ಲಿದ ಎಂಬ ವ್ಯತ್ಯಾಸ ಇಲ್ಲದೆ ನ್ಯಾಯದ ಪರ ನಿಲ್ಲುವ ಧೈರ್ಯ ಅವರಿಗಿತ್ತು.
ಗಾಳಿ ಸುದ್ದಿ,ಪರಧೂಷಣೆಗೆ ನಿಂತು ಕೊಡದ ಹಾಜಿಯವರು ಎಲ್ಲವನ್ನೂ ಕೂಲಂಕುಷವಾಗಿ ಪರಾಂಬರಿಸಿ ನೋಡುತ್ತಿದ್ದರು.ತಂಟೆ ತಕರಾರು ಇದ್ದ ಉಪ್ಪಿನಂಗಡಿಯ ಅಸುಪಾಸಿನ ಬಹಳಷ್ಟು ಮೊಹಲ್ಲಾಗಳನ್ನು ಸರಿದಾರಿಗೆ ತರಲು ಹಾಜಿಯವರ ಕುಶಾಗ್ರತೆ ಬಹಳಷ್ಟು ಕೆಲಸ ಮಾಡಿತ್ತು.
ಆಯಾ ಊರಿನಲ್ಲಿ ನಾಯಕತ್ವ ಗುಣ ಇರುವವರಿಗೆ ಆಡಳಿತದ ಚುಕ್ಕಾಣಿ ವಹಿಸಿ ಕೊಡುವಲ್ಲಿ ಅವರು ನಿಪುಣರಾಗಿದ್ದರು.
ಎಂತಹ ಜಟಿಲ ಸಮಸ್ಯೆಗಳನ್ನು ಕೂಡಾ ನಿಭಾಯಿಸುವಲ್ಲಿ ಅವರದ್ದು ಎತ್ತಿದ ಕೈಯಾಗಿತ್ತು ಎನ್ನುತ್ತಾ ಹಾಜಿಯವರನ್ನು ಸ್ಮರಿಸಿದರಲ್ಲದೇ
ಉಪ್ಪಿನಂಗಡಿ ಅಸುಪಾಸಿನಲ್ಲಿ ಆ ಕಾಲದ ಹಿರಿಯರಾಗಿದ್ದ ಅಬ್ಬು ಹಾಜಿ ಮಠ,ಎಂಬಿ ಮೋನಾಕ,ಯೂಸಪಾಕ ಮಠ, ಕೆನರಾ ರಝಾಕ್ ಹಾಜಿ,ಪಳ್ಳಿಕುಞ ಹಾಜಿ,ಡಬ್ಬಲ್ ಫೋರ್ ಅಬ್ದುಲ್ ಖಾದಿರ್ ಹಾಜಿ,ಕೆಮ್ಮಾರ ಯೂಸುಪ್ ಹಾಜಿ,ಅಗ್ನಾಡಿ ಅಬೂಬಕರ್ ಹಾಜಿ,ಪೆದ್ಮಲೆ ಯೂಸುಪ್ ಹಾಜಿ,ಮೇದರಬೆಟ್ಟು ಕುಞಮೋನು ಹಾಜಿ,ಶುಕ್ರಿಯಾ ಅಬ್ಬಾಸ್ ಹಾಜಿ,ಕಡವಿನ ಬಾಗಿಲು ಅಬ್ಬು ಹಾಜಿ,ಮೋನು ಹಾಜಿ,ಐ ಹಸೈನಾರ್ ಹಾಜಿ,ಯುಟಿ ಇದ್ದಿಯಬ್ಬ ಹಾಜಿ,ಕರುವೇಲು ಮಮ್ಮಿ ಹಾಜಿ,ಮೈನಾ ಹಸನಬ್ಬ ಹಾಜಿ,ಅಬ್ದುಲ್ ರಹ್ಮಾನ್ ಬಾಬುಲ್ ಸಾಹೇಬ್ ಹಾಜಿ,ಕುದ್ಲೂರು ಹಮೀದ್ ಹಾಜಿ,ಕೆಂಪಿ ಅಬೂಬಕರ್ ,ಕೆಮ್ಮಾರ ಅಬ್ಬಾಸ್ ಹಾಜಿ,ರೈಟರ್ ಅಬೂಬಕರ್ ಹಾಜಿ,ಕರಾಯ ದೇಂತಾರು ಆದಂ ಹಾಜಿ,ಕೋಲ್ಪೆ ಅಬ್ದುಲ್ಲ ಕೋಯ ತಂಙಲ್,ಬಂಡಾಡಿ ರಝಾಕ್ ಮಾಸ್ಟರ್ ಮೊದಲಾದ ಹಲವಾರು ಅಗಲಿದ ಉಪ್ಪಿನಂಡಿ ಅಸುಪಾಸಿನ ಗೌರವಯುತ ನಾಯಕರ ಗರಡಿಯಲ್ಲಿ ಪಳಗಿದ ಮುಸ್ತಫಾ ಹಾಜಿ ಹಳೇ ಬೇರು ಹೊಸ ಚಿಗುರು ಎಂಬಂತೆ ಕಾಲದ ನಾಯಕನಾಗಿ ಹೊರಹೊಮ್ಮಿ ಬದುಕನ್ನು ದೀರ್ಘವಾಗಿ ಆಸ್ವಾದಿಸುವ ಮುನ್ನವೇ ನಮ್ಮಿಂದ ಅಗಲಿದ್ದು ಇಡೀ ಸಮಾಜಕ್ಕೆ ನಷ್ಟವಾಯಿತು ಎಂದರು.
ದೀರ್ಘ ಇಪ್ಪತ್ತು ವರ್ಷಗಳ ನನ್ನ ಸೇವಾವಧಿಯ ಅರ್ಧ ಭಾಗ ಅವರ ಅಧಿಕಾರವಧಿಯಲ್ಲಿ ಸೇವೆ ಗಯ್ಯುವ ವೇಳೆ ನನ್ನೊಂದಿಗೆ ಬಹಳ ವಿನಯ ಗೌರವದೊಂದಿಗೆ ವರ್ತಿಸುತ್ತಿದ್ದ ಮುಸ್ತಫಾ ಹಾಜಿ ಮಸೀದಿಯಿಂದ ವಿರಮಿಸಿದ ನಂತರವೂ ಪ್ರತೀ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದರಲ್ಲದೇ ಪ್ರತೀ ರಮದಾನಿನಲ್ಲಿ ಪ್ರತ್ಯೇಕ ಆಹ್ವಾನ ನೀಡಿ ಪ್ರೀತಿ ತೋರುತ್ತಿದ್ದರು.
ಇಂತಹ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಅದಕ್ಕೆ ಅಲ್ಲಾಹುವಿನ ವಿಶೇಷ ಭಾಗ್ಯ ಇರಬೇಕು ಎಂದ ದಾರಿಮಿಯವರು
ಇಂದಿನ ಕೆಲವು ಮಸೀದಿ ಸಮಿತಿಯ ಯುವಕರು ಮಸೀದಿಯ ಗುರುಗಳನ್ನು ನಡೆಸಿಕೊಳ್ಳುವ ರೀತಿಯಿಂದಾಗಿ ಮಸೀದಿ ಕೆಲಸದಿಂದ ಉಸ್ತಾದರು ದೂರ ಸರಿಯುವಂತಹ ದುಸ್ಥಿತಿ ಉಂಟಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಕರುವೇಳು ಮಸೀದಿಯ ಅಧ್ಯಕ್ಷ ತೋಜಾ ಉಮ್ಮರ್ ಹಾಗೂ ಬೆಂಗಳೂರಿನ ಉದ್ಯಮಿ ಇಕ್ಬಾಲ್ ಕರುವೇಲು ರವರ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಂದಿಗೆ ಅನ್ನದಾನ ಮಾಡಲಾಯಿತು.
Posted by Vidyamaana on 2023-10-27 07:15:15 |
ಪುತ್ತೂರು :ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಮತ್ತು ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗಳ ಲಿಖಿತ ಪರೀಕ್ಷೆಗೆ ತರಬೇತಿ ವಿದ್ಯಾಮಾತಾ ಅಕಾಡೆಮಿಯ ಪುತ್ತೂರು ಮತ್ತು ಸುಳ್ಯದಲ್ಲಿ ಪ್ರಾರಂಭವಾಗಲಿದೆ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯು ದಿನಾಂಕ 19/11/2023 ರಂದು ಹಾಗೂ ಕೆ.ಪಿ.ಎಸ್.ಸಿ ನೇಮಕಾತಿಯ ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗೆ ಲಿಖಿತ ಪರೀಕ್ಷೆಯು ದಿನಾಂಕ 4/11/2023 ಮತ್ತು 5 /11 /2023ರಂದು ನಡೆಯಲಿದ್ದು, ಈ ಎರಡು ನೇಮಕಾತಿಗಳ ಅಂತಿಮ ಹಂತದ ಪೂರ್ವ ತಯಾರಿಯ ತರಬೇತಿಯು ವಿದ್ಯಾಮಾತಾ ಅಕಾಡೆಮಿಯಲ್ಲಿ ಪ್ರಾರಂಭಗೊಂಡಿದ್ದು, ಆಸಕ್ತ ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ,
ವಿದ್ಯಾಮಾತಾ ಅಕಾಡೆಮಿಯ ಪುತ್ತೂರು, ಹಿಂದುಸ್ತಾನ್ ಕಾಂಪ್ಲೆಕ್ಸ್, ಒಂದನೇ ಮಹಡಿ, ಎಪಿಎಂಸಿ ರಸ್ತೆ ,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ.- 574201.
962 046869/9148935808
ವಿದ್ಯಾಮಾತಾ ಅಕಾಡೆಮಿ ಸುಳ್ಯ,
ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದಕ್ಷಿಣಕನ್ನಡ.
9448527606 ಅನ್ನು ಸಂಪರ್ಕಿಸಲು ಪ್ರಕಟಣೆಯು ತಿಳಿಸಿದೆ.
Posted by Vidyamaana on 2023-09-14 16:12:25 |
ಮಲ್ಪೆ, ಸೆ.14: ಕಂಟೈನರ್ ಲಾರಿಯಿಂದ ಗ್ರಾನೈಟ್ ಇಳಿಸುತ್ತಿದ್ದ ವೇಳೆ ಮೈಮೇಲೆ ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಮಲ್ಪೆ ಸಮೀಪದ ತೊಟ್ಟಂ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಒರಿಸ್ಸಾದ ಕಾರ್ಮಿಕರಾದ ಬಾಬುಲ್ಲ(35) ಮತ್ತು ಭಾಸ್ಕರ (35) ಎಂದು ಗುರುತಿಸಲಾಗಿದೆ. ತೊಟ್ಟಂನಲ್ಲಿ ನಿರ್ಮಾಣವಾಗುತ್ತಿರುವ ಮನೆ ಯೊಂದಕ್ಕೆ ಕಂಟೈನರ್ ಲಾರಿಯಲ್ಲಿ ತಂದಿದ್ದ ಗ್ರಾನೈಟ್ ಇಳಿಸುತ್ತಿದ್ದಾಗ ಲಾರಿಯೊಳಗೆ ಗ್ರಾನೈಟ್ ಜಾರಿ ಮೈಮೇಲೆ ಬಿದ್ದಿದೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ
Posted by Vidyamaana on 2024-02-04 09:14:39 |
ಪುತ್ತೂರು: ನಾನೇ ಶ್ರೇಷ್ಠ, ನನ್ನ ಧರ್ಮ ಮಾತ್ರ ಶ್ರೇಷ್ಠ ಉಳಿದವು ಶೂನ್ಯ ಎಂಬ ಭಾವನೆ ನಮ್ಮಲ್ಲಿ ಇರಬಾರದು, ಎಲ್ಲಾ ಧರ್ಮಗಳು ಒಳಿತನ್ನೇ ಕಲಿಸಿಸುತ್ತದೆ, ಧರ್ಮಗಳ ಬಗ್ಗೆ ಪರಸ್ಪರ ಅರಿತುಕೊಂಡಲ್ಲಿ ಸಮಾಜದಲ್ಲಿ ಸೌಹಾರ್ಧತೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಪುರುಷರಕಟ್ಟೆ ಮದ್ರಸ ವಠಾರದಲ್ಲಿ ನಡೆಯುತ್ತಿರುವ ಧಾರ್ಮಿಕ ಮತಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳಿಗೆ ಸಣ್ಣ ಪ್ರಾಯದಲ್ಲೇ ನಮ್ಮ ಧರ್ಮದ ಆಚಾರ ವಿಚಾರಗಳನ್ನು ಕಲಿಸಬೇಕು. ತನ್ನ ಧರ್ಮವನ್ನು ಅರಿತುಕೊಳ್ಳುವುದರ ಜೊತೆಗೆ ಸಹೋದರ ಧರ್ಮದ ಬಗ್ಗೆ ಅರಿವು ಮೂಡಿಸಿಕೊಂಡಲ್ಲಿ ಪರಸ್ಪರ ಜ್ಞಾನ ವೃದ್ದಿಯಾಗುತ್ತದೆ. ಧರ್ಮದ ಬಗ್ಗೆ ತಿಳುವಳಿಕೆಯ ಕೊರತೆಯಿಂದಲೇ ಇಂದು ಸಮಾಜದಲ್ಲಿ ಧರ್ಮ ದಂಗಲ್ಗಳು ನಡೆಯುತ್ತದೆ ಎಂದು ಹೇಳಿದರು. ಭಾರತ ವಿಸ್ವ ಗುರುವಾಗಬೇಕಾದರೆ ದೇಶದಲ್ಲಿ ಸೌಹಾರ್ಧತೆ ನೆಲಸಬೇಕು. ಸೌಹಾರ್ಧತೆಯ ಭಾಷಣ ಮಾಡಿದ ಮಾತ್ರಕ್ಕೆ ಭಾರತ ವಿಶ್ವಗುರುವಾಗಲು ಸಾಧ್ಯವಿಲ್ಲ. ದೇಶದಲ್ಲಿರುವ ಎಲ್ಲಾ ಧರ್ಮದ ಸಹೋದರರು ಅಣ್ಣ ತಮ್ಮಂದಿರಂತೆ ಬಾಳಿದರೆ ಮಾತ್ರ ನಾವು ವಿಶ್ವಕ್ಕೆ ಗುರುವಾಗಲು ಸಾಧ್ಯವಾಗುತ್ತದೆ. ಧರ್ಮ, ಜಾತಿ ಹೆಸರಿನಲ್ಲಿ ಯಾರೂ ಕಚ್ಚಾಟ ಮಾಡಬಾರದು. ಎಲ್ಲರೂ ಉಸಿರಾಡುವ ಗಾಳಿಯೊಂದೇ, ರಕ್ತವೂ ಒಂದೇ ಹೀಗಿರುವಾಗ ನಾವು ವಿಭಜನೆಯ ಹಾದಿಯನ್ನು ಹಿಡಿಯಬಾರದು.ಜನರು ಪರಸ್ಪರ ಹತ್ತಿರವಾದಾಗ ಮಾತ್ರ ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಭರತ ಭೂಮಿಯಲ್ಲಿ ಸಾಧನೆ ಮಾಡಿದವರು ಯಾರೂ ಇಲ್ಲ ಎಂದು ಹೇಳಿದರು.
ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಎಲ್ಲರನ್ನೂ ಪ್ರೀತಿಸುವುದೇ ಹಿಂದುತ್ವವಾಗಿದೆ.ಅನ್ಯ ಧರ್ಮದವರನ್ನು ದ್ವೇಷಿಸುವುದು ಹಿಂದುತ್ವ ಎಂದು ನಂಬಿಕೊಂಡ ಅಲ್ಪಜ್ಞಾನಿಗಳು ನಮ್ಮೊಳಗಿದ್ದಾರೆ. ಪರಸ್ಪರ ಸಾಹೋದರ್ಯ ಭಾನವೆಯಿದ್ದಲ್ಲಿ ಮಾತ್ರ ನಾವು ಮನುಷ್ಯರಾಗಲು ಸಾಧ್ಯವಾಗುತ್ತದೆ. ಮಾನವೀಯ ಧರ್ಮವೇ ಶ್ರೇಷ್ಟ ಎಂಬ ಭಾವನೆ ನಮ್ಮಲ್ಲಿ ಮಾಡಿದಾಗ ಸಹೋದರತ್ವ ಮೂಡುತ್ತದೆ ಅದು ಇಲ್ಲದವರು ಮನುಷ್ಯರಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಧಾರ್ಮಿಕ ಮುಖಂಡರುಗಳು ಉಪಸ್ಥಿತರಿದ್ದರು.
Posted by Vidyamaana on 2024-02-23 04:49:06 |
ಪುತ್ತೂರು : ಜೀವನದ ಜಂಜಾಟಗಳನ್ನು ಮರೆತು ಎರಡೂವರೆ ಗಂಟೆ ಸಂಪೂರ್ಣ ಮನರಂಜನೆ, ಹೊಟ್ಟೆ ತುಂಬಾ ನಗು ಬೇಕಾಂತಿದ್ದರೇ ಕನ್ನಡದಲ್ಲೊಂದು ಸದಬಿರುಚಿಯ ಸಿನಿಮಾ ಬಂದಿದೆ. ಆ ದಿನಗಳು ಖ್ಯಾತಿಯ ಕೆ ಎಂ ಚೈತನ್ಯ ನಿರ್ದೆಶಿಸಿರುವ ಅಬ್ಬಬ್ಬ ಸಿನಿಮಾ (Abbabba Film) ಸಿಲ್ವರ್ ಸ್ಟೀನ್ ಗೆ ಅಪ್ಪಳಿಸಿ ವಾರ ಕಳೆದಿದ್ದು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.ಹುಡುಗರ ಹಾಸ್ಟೇಲ್ ನಲ್ಲಿ ನಡೆಯುವ ಘಟನೆಗಳೇ ಈ ಸಿನಿಮಾದ ಕಥಾ ಹಂದರ. ಇದಕ್ಕೆ ನವಿರಾದ ಹಾಸ್ಯ ಬೆರೆಸಿ ನಿರೂಪಿಸಲಾಗಿದೆ. ಈ ಹಾಸ್ಟೇಲ್ ಗೆ ಹುಡುಗಿಯೊಬ್ಬಳ ಪ್ರವೇಶದೊಂದಿಗೆ ಕಥೆ ಟ್ವಿಸ್ಟ್ ಕಾಣಿಸುತ್ತದೆ. ಇಡಿ ಚಿತ್ರ ನಗೆ ಬುಗ್ಗೆ ಇವರೆಲ್ಲರ ಜತೆಗೆ ಪುತ್ತೂರಿನ ಸೆನ್ಸೆಷನಲ್ ಯೂಟ್ಯೂಬರ್,ಕಾಮಿಡಿ ಜತೆಗೆ ಸಂದೇಶ ನೀಡುವುದನ್ನು ಕರಗತ ಮಾಡಿಕೊಂಡಿರುವ ಧನರಾಜ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಕ್ಕು ನಗಿಸುತ್ತಾರೆ.
ಹೊಸಬರ ಈ ಪ್ರಯತ್ನ ವೃತ್ತಿಪರ ಕಲಾವಿದರಿಗೆ ಸಾಟಿ ಹೊಡೆಯುವಂತಿದೆ. ಹೀಗಾಗಿ ಸಿನಿಮಾ ನೋಡಲು ಬಂದ ಪ್ರೇಕ್ಷಕರ ಹಣಕ್ಕೆ ಮೋಸ ಆಗುವುದಿಲ್ಲ.ಇದರ ಜತೆಗೆ ಶುಕ್ರವಾರ ಅಬ್ಬಬ್ಬ ವೀಕ್ಷಿಸುವ ಪ್ರೇಕ್ಷಕರಿಗೆ ವಿಶೇಷ ರಿಯಾಯಿತಿಯಿದೆ. ಪುತ್ತೂರು ಜಿ ಎಲ್ ವನ್ ಮಾಲ್ ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಬೆಳಗ್ಗಿನ (ಫೆ.23) ಶೋ ಟಿಕೆಟ್ ದರ ಕೇವಲ ರೂ.99 ಇರಲಿದೆ.ನೂರು ವರ್ಷ ತುಂಬಿರುವ ಈ ಹಾಸ್ಟೆಲ್ಗೆ ಮೋಹಿನಿ ಕಾಟ ಬೇರೆ ಇದೆ. ಆದರೆ, ಇದನ್ನು ಹಾಸ್ಟೆಲ್ನ ಫಾದರ್ ಮಾತ್ರ ನಂಬಲ್ಲ. ಕಾಣದ ಮೋಹಿನಿ, ಕಾಣುವ ಮೋಹನಾಂಗಿ ಇಬ್ಬರ ಆಟ ಹಾಸ್ಟೆಲ್ನ ಗೇಟು ದಾಟುವುದರೊಂದಿಗೆ ಸಿನಿಮಾ ಮುಗಿಯುತ್ತದೆ. ಈ ಮೋಹಿನಿ ಯಾರು, ಹುಡುಗರ ಹಾಸ್ಟೆಲ್ನಿಂದ ಹುಡುಗಿ ತಪ್ಪಿಕೊಂಡ್ರಾ ಎನ್ನುವ ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟಿಕೊಂಡರೆ ನೀವು ಸೀದಾ ಹೋಗಿ ಸಿನಿಮಾ ನೋಡಿ.ಧನರಾಜ್, ಅವಿನಾಶ್, ಅಜಯ್ ರಾಜ್, ಅಮೃತಾ, ವಿಜಯ್ ಚೆಂಡೂರ್ ಹೀಗೆ ಎಲ್ಲರು ನಗಿಸುವ ಕೆಲಸ ಮಾಡುತ್ತಾರೆ. ಫಾದರ್ ಪಾತ್ರಧಾರಿ ಶರತ್ ಲೋಹಿತಾಶ್ವ ಅವರದ್ದು ಮಾತ್ರ ಘನ ಗಂಭೀರ ಪಾತ್ರ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ತಮ್ಮನಂತೆ ಅಬ್ಬಬ್ಬ ಚಿತ್ರದ ಹಾಸ್ಟೆಲ್ ಕತೆ..!
Posted by Vidyamaana on 2024-05-25 21:02:40 |
ಮಂಗಳೂರು: ಶಾಸಕ ಹರೀಶ್ ಪೂಂಜಾ ಠಾಣೆಯಲ್ಲೇ ಪ್ರತಿಭಟನೆ ನಡೆಸಿ ಪೊಲೀಸರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕನಾದ್ರೆ ಪೊಲೀಸರ ಜೊತೆ ಗಲಾಟೆ ಮಾಡಬಹುದಾ ಎಂದು ಕಿಡಿಕಾರಿದ್ದಾರೆ.
Posted by Vidyamaana on 2023-11-15 18:00:55 |
ಉಡುಪಿ: ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಏಕಮುಖ ಪ್ರೇಮವೇ ಕಾರಣ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿದ್ದ ಪ್ರವೀಣ್ ಅರುಣ್ ಚೌಗಲೆ(35) ಅದೇ ವಿಭಾಗದಲ್ಲಿ ಕೆಲಸ ನಿರ್ವಹಿಸುವ ಕೊಲೆಯಾದ ಐನಾಝಳೊಂದಿಗೆ ಪ್ರೇಮವಾಗಿತ್ತು. ಆದರೆ ಐನಾರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು ಎನ್ನಲಾಗಿದೆ.
ನ.12ರಂದು 36 ಬಾರಿ ಫೋನ್ ಮಾಡಿದ್ದ ಹಂತಕ ಕಳೆದ ಕೆಲವು ದಿನಗಳ ಹಿಂದೆ ಐನಾಝ್ ಹುಟ್ಟು ಹಬ್ಬಕ್ಕೆ ನೇಜಾರು ಮನೆಗೆ ಬಂದಿದ್ದ ಹಂತಕ ಆಕೆಗೆ ಉಂಗುರವನ್ನು ಎಲ್ಲರ ಮುಂದೆ ಹಾಕಿದ್ದ
ಇದರಿಂದ ಐನಾಝ್ ಮನೆಯವರ ಮುಂದೆ ಗಲಿಬಿಲಿಗೊಂಡಿದ್ದಳು. ಆ ಬಳಿಕ ಪ್ರವೀಣ್ನನ್ನು ದೂರ ಮಾಡಲು ಯತ್ನಿಸಿದ್ದಳು. ಇದರಿಂದ ಖಿನ್ನತೆಗೆ ಒಳಗಾದ ಪ್ರವೀಣ್ ಐನಾಝ್ಗೆ ನಿರಂತರ ಫೋನ್ ಮಾಡುತ್ತಿದ್ದ. ಐನಾಝ್ ಕೊಲೆಯಾದ ದಿನವೇ ಬೆಳಿಗ್ಗೆ 11 ಗಂಟೆಗೆ ದುಬೈಗೆ ಏರ್ಇಂಡಿಯಾ ವಿಮಾನದಲ್ಲಿ ಗಗನ ಸಖಿಯಾಗಿ ಕಾರ್ಯನಿರ್ವಹಿಸಲು ಹೋಗಬೇಕಿತ್ತು. ಆದರೆ ಅಂದೇ ಬೆಳಿಗ್ಗೆ ಯಮರೂಪಿಯಾಗಿ ಬಂದ ಪ್ರವೀಣ್ ಮನೆಯಲ್ಲಿದ್ದ ನಾಲ್ವರನ್ನು ಹತ್ಯೆಗೈದು ಪರಾರಿಯಾಗಿದ್ದ.
ನಾಲ್ವರನ್ನು ಹತ್ಯೆಗೈದು ಬಸ್ ಮೂಲಕ ಮಂಗಳೂರಿಗೆ ಹೋಗಿ ಅಲ್ಲಿಂದ ತನ್ನ ಹೆಕ್ಟರ್ ಕಾರಿನಲ್ಲಿ ಬೆಳಗಾವಿಗೆ ಹೋಗಿ ಪರಿಚಯದ ನೀರಾವರಿ ಇಲಾಖೆಯ ಅಧಿಕಾರಿ ಮನೆಯಲ್ಲಿ ಒಂದು ದಿನ ಅಡಗಿದ್ದ. ಅಲ್ಲಿಂದ ನೇರ ತನ್ನೂರು ಸಾಂಗ್ಲಿಗೆ ಹೋಗಿ ಅವಿತುಕೊಳ್ಳುವ ಪ್ಲಾನ್ ರೂಪಿಸಿದ್ದ ಹಂತಕ,
ಕೊಲೆಯಾದ ತಕ್ಷಣ ಎಲರ್ಟ್ ಆದ ಪೊಲೀಸರು ಐನಾಝ್ ದುಡಿಯುತ್ತಿದ್ದ ಏರ್ಪೋರ್ಟ್ಗೆ ಭೇಟಿ
ನೀಡಿ ಉದ್ಯೋಗಿಗಳ ಮಾಹಿತಿ ಕಲೆ ಹಾಕಿದ್ದಾರೆ ಅಲ್ಲಿ ರಜೆ ಹಾಕಿದ್ದ ಪ್ರವೀಣ್ ಮಾಹಿತಿ ಕಲೆ ಹಾಕಿ ಫೋನ್ ಟ್ಯಾಕ್ ಮಾಡಿದ್ದರು.
ಅದರಂತೆ ಬ್ರಹ್ಮಾವರ ಇಸ್ಪೆಕ್ಟರ್ ದಿವಾಕರ್ ಪಿ.ಎಂ ನೇತೃತ್ವದ ತಂಡ ಕುಡುಚಿ ಪೊಲೀಸರ ಸಹಾಯದಿಂದ ಹಂತಕನನ್ನು ವಶಕ್ಕೆ ಪಡೆದು ಉಡುಪಿಗೆ ಕರೆತಂದಿದ್ದಾರೆ.
ಆಂಧ್ರಪ್ರದೇಶಕ್ಕೆ ಸಾರಲು ಸಂಚು ರೂಪಿಸಿದ ಹಂತಕ
ಆರೋಪಿ ಪ್ರವೀಣ್ ಅರುಣ್ ಚೌಗಲೆ ಕುಡಚಿ ಮೂಲಕ ಮಹಾರಾಷ್ಟ್ರ ಅಥವಾ ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಹೊಂಚು ಹಾಕಿದ್ದ ಎನ್ನುವುದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಈ ಹಿಂದೆ CISF ಸಿಬ್ಬಂದಿಯಾಗಿಯೂ ಕೆಲಸ ಮಾಡಿದ್ದ ಎಂದು ಹೇಳಲಾಗಿದೆ. ಬಳಿಕ ಏಪೋರ್ಟ್ ನ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ತನಿಖೆಗೆ ನೆರವಾದ ಆರೋಪಿಯ ನಡಿಗೆಯ ಶೈಲಿ : ಮಾಹಿತಿಗಳ ಪ್ರಕಾರ, ಘಟನೆಯ ಬಳಿಕ
ಲಭ್ಯವಿದ್ದ ಸಿಸಿಟಿವಿ ಸಾಕ್ಷ್ಯಗಳನ್ನು ಪರಿಶೀಲಿಸಿದ್ದ ಪೊಲೀಸರು ಆರೋಪಿಯ ನಡಿಗೆ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು ಎನ್ನಲಾಗಿದೆ. ಇದು ಆರೋಪಿಯು ರಕ್ಷಣಾ ಇಲಾಖೆಗಳಿಗೆ ಸಂಬಂಧಿಸಿದ ವ್ಯಕ್ತಿ ಎಂಬ ಸುಳಿವು ನೀಡಿತ್ತು. ಬಳಿಕ ಆರೋಪಿ, ಅರುಣ್ ಚೌಗಲೆ ಬೆನ್ನುಬಿದ್ದ ಪೊಲೀಸರು, ಆತನನ್ನು ಬೆಳಗಾವಿಯ ಕುಡಚಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು.