ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-03 18:55:10 | Last Updated by Vidyamaana on 2024-07-03 18:55:10

Share: | | | | |


ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಬೆಂಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈಕಿಸನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ್ದಾನೆ.

ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.

ಕೊಲೆಗೆ ಕಾರಣವೇನು?


ಇಂದು ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಈ ವೇಳೆ ಆರೋಪಿ ವಿದ್ಯಾರ್ಥಿ ಭಾರ್ಗವ್, ಕಾಲೇಜಿಗೆ ಕುಡಿದು ಬಂದಿದ್ದಾನೆ. ಈ ಹಿನ್ನಲೆ ಸೆಕ್ಯೂರಿಟಿಗಾರ್ಡ್, ಭಾರ್ಗವ್​​​ನನ್ನು ಕಾಲೇಜಿನ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಸೆಕ್ಯೂರಿಟಿ ಗಾರ್ಡ್​ ಹಾಗೂ ವಿದ್ಯಾರ್ಥಿ ಮಧ್ಯೆ ಗಲಾಟೆ ಆಗಿದೆ. ಬಳಿಕ ಅಂಗಡಿಗೆ ಹೋಗಿ ಚಾಕು ಖರೀದಿಸಿದ್ದ ಭಾರ್ಗವ್, ನೇರವಾಗಿ ಬಂದು ಸೆಕ್ಯೂರಿಟಿ ಗಾರ್ಡ್ ಎದೆಗೆ ಐದಾರು ಬಾರಿ ಇರಿದಿದ್ದಾನೆ. ಅದು ಹೃದಯಕ್ಕೆ ಹೊಕ್ಕು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

 Share: | | | | |


ಚಂದ್ರಯಾನ ಯಶಸ್ಸಿಗೆ ಗಲ್ಫ್ ಟೂರ್ಸ್ ಉಮ್ರಾ ಯಾತ್ರಾರ್ಥಿಗಳಿಂದ ಮದೀನಾದಲ್ಲಿ ವಿಶೇಷ ಪ್ರಾರ್ಥನೆ

Posted by Vidyamaana on 2023-08-23 11:47:14 |

Share: | | | | |


ಚಂದ್ರಯಾನ ಯಶಸ್ಸಿಗೆ  ಗಲ್ಫ್ ಟೂರ್ಸ್ ಉಮ್ರಾ ಯಾತ್ರಾರ್ಥಿಗಳಿಂದ ಮದೀನಾದಲ್ಲಿ  ವಿಶೇಷ ಪ್ರಾರ್ಥನೆ

ಸೌದಿ : ಪವಿತ್ರ ಉಮ್ರಾ ನಿರ್ವಹಣೆಯಲ್ಲಿರುವ ಆಗಸ್ಟ್ ತಿಂಗಳ ಗಲ್ಫ್ ಟೂರ್ಸ್ ಉಮ್ರಾ ಯಾತ್ರಾರ್ಥಿಗಳ ತಂಡವು ಭಾರತದ  ಬಹು ನಿರೀಕ್ಷಿತ್ ಚಂದ್ರಯಾನ _3  ವಿಕ್ರಮ್ ಲ್ಯಾಂಡರ್  ಗುರಿ ತುಲಪುವಂತಾಗಳು ವಿಶೇಷ ಪ್ರಾರ್ಥನೆ ನಡೆಸಿತು.

ಯಾತ್ರಾ ತಂಡದ ಚೀಫ್ ಅಮೀರ್ ಉಸ್ತಾದ ಸಿರಾಜುದ್ದೀನ್ ಫೈಝಿ ಈ ಸಂದರ್ಭದಲ್ಲಿ

ವಿಶೇಷ ಪ್ರಾರ್ಥನೆಗೆ ನೇತೃತ್ವ ನೀಡಿದರು.

 ಟೂರ್ಸ್ ಮಾಲಕರಾದ ಸುಲೈಮಾನ್ ಹಾಜಿ,ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ,ಅಬ್ಬಾಸ್ ದಾರಿಮಿ ಕೆಲಿಂಜ,ಅಬ್ದುರ್ರಹ್ಮಾನ್ ಪೈಝಿ ಫಲಿಮಾರ್,ಖಾಲಿದ್ ಸಅದಿ ಬೇಂಗಿಲ,ಸೈದಾಲಿ ಮುಸ್ಲಿಯಾರ್, ಹಲವಾರು ಮೊಹಲ್ಲಾಗಳಿಂದ ಯಾತ್ರಾರ್ಥಿಗಳಾಗಿ ಬಂದ ಜಮಾಅತ್ ಸಮಿತಿ ಸಾರಥಿ ಗಳು, ವಿವಿಧ ಸಂಘ ಸಂಸ್ಥೆಗಳ ಯುವ ಕಾರ್ಯಕರ್ತರು ಸೇರಿದಂತೆ ಎರಡು ಯಾತ್ರಾ ತಂಡಗಳಲ್ಲಿದ್ದ ಸುಮಾರು ತೊಂಭತ್ತರಷ್ಟು ಯಾತ್ರಾರ್ಥಿಗಳು ಪಾಲ್ಗೊಂಡಿದ್ದರು.

ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 3

Posted by Vidyamaana on 2023-09-03 01:50:16 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 3

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಸೆ 3 ರಂದು



ಬೆಳಿಗ್ಗೆ 10 ಗಂಟೆಗೆ ದ ಕ ಜಿಲ್ಲಾ ಟ್ಯಾಕ್ಸಿಮೆನ್ ,ಮ್ಯಾಕ್ಸಿಕ್ಯಾಬ್  ಅಸೋಸಿಯೇಶನ್ ಸುರ್ಣಮಹೋತ್ಸವ


ಸ್ಥಳ: ಮಂಗಳೂರು ಪುರಭವನ


11 ಗಂಟೆಗೆ ಕೆಪಿಟಿ ಮಂಗಳೂರಿನಲ್ಲಿ ಅಭಿಮತ ಚಾನೆಲ್ ಉದ್ಘಾಟನೆ


12 ಗಂಟೆಗೆ ಕಂಬಳಬೆಟ್ಟುವಿನಲ್ಲಿ ಸೇವಾ ಸಹಕಾರಿ ಸಂಘ ಉದ್ಘಾಟ‌ನೆ


4 ಗಂಟೆಗೆ ಅಜ್ಜನಡ್ಕ ಸೌಹಾರ್ಧ ಫ್ರೆಂಡ್ಸ್ ವತಿಯಿಂದ ವಾಲಿಬಾಲ್ ಪಂದ್ಯಾಟ 

 ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ

ಟಿಪ್ಪರಿಗೆ ಸ್ಕೂಟರ್ ಢಿಕ್ಕಿ: ಸವಾರ ಮೃತ್ಯು | ಮೃತ ಸವಾರನ ವಿರುದ್ಧ ಪ್ರಕರಣ ದಾಖಲು

Posted by Vidyamaana on 2023-06-10 03:37:31 |

Share: | | | | |


ಟಿಪ್ಪರಿಗೆ ಸ್ಕೂಟರ್ ಢಿಕ್ಕಿ: ಸವಾರ ಮೃತ್ಯು | ಮೃತ ಸವಾರನ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಉಪ್ಪಿನಂಗಡಿ ಸಮೀಪದ ಪಂಜಳದಲ್ಲಿ ಟಿಪ್ಪರ್ ಹಾಗೂ ದ್ವಿಚಕ್ರ ನಡುವೆ ಜೂ 2 ಶುಕ್ರವಾರ ರಾತ್ರಿ ನಡೆದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ನಡೆದಿದೆ.

ಮೃತ ಸವಾರ ಮಹಮ್ಮದ್ ಅನೀಸ್ ಮೃತಪಟ್ಟವರು. ಸಹಸವಾರ ಹಮೀದ್ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.


ಬಿಸಿರೋಡ್ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿಗೆ ನೀರಕಟ್ಟೆಯಿಂದ ಬಿಸಿರೋಡ್ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸವಾರ ಅನೀಸ್ ಅವರ ಮುಖಕ್ಕೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಸಹಸವಾರ ಹಮೀದ್ ಅವರ ಕಾಲಿಗೆ ಗಾಯವಾಗಿತ್ತು.

ಗಂಭೀರ ಗಾಯಗೊಂಡಿದ್ದ ಅನೀಸ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಅನೀಸ್ ಅವರು ಮುಂಭಾಗದಿಂದ ಬರುತ್ತಿದ್ದ ಬೇರೆ ನಂಬರ್  ನ ಮೋಟಾರ್ ಸೈಕಲ್ ಸವರನಿಗೆ  ನಮಸ್ಕಾರ ಮಾಡುತ್ತಾ, ರಾಂಗ್ ಸೈಡಿನಿಂದ ವಾಹನ ಚಲಾಯಿಸುತ್ತಿದ್ದರು. ಇದರಿಂದಾಗಿ ಎದುರಿನಿಂದ ಬಂದ ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆದಿದ್ದಾರೆ ಎಂದು ಟಿಪ್ಪರ್ ಚಾಲಕ ಆಶಿಫ್ ದೂರಿನಲ್ಲಿ ತಿಳಿಸಲಾಗಿದೆ. ಆದ್ದರಿಂದ ಮೃತಪಟ್ಟ ಅನೀಸ್ ವಿರುದ್ಧ ಐಪಿಸಿ ಕಲಂ 279, 337, 304(ಎ) ಅಡಿಯಲ್ಲಿ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುರ: ಹೆದ್ದಾರಿಗೆ ಮುರಿದು ಬಿದ್ದ ಮರದ ಕೊಂಬೆ

Posted by Vidyamaana on 2024-03-12 15:57:41 |

Share: | | | | |


ಮುರ: ಹೆದ್ದಾರಿಗೆ ಮುರಿದು ಬಿದ್ದ ಮರದ ಕೊಂಬೆ

ಪುತ್ತೂರು: ಹೆದ್ದಾರಿ ಮೇಲೆ ಮರದ ಕೊಂಬೆ ಬಿದ್ದು, ದ್ವಿಚಕ್ರ ಸವಾರರು ಸ್ವಲ್ಪದರಲ್ಲೇ ಬಚಾವಾದ ಘಟನೆ ಮುರ ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯ ಪುತ್ತೂರು - ಕಬಕ ನಡುವಿನ ಮುರ ಜಂಕ್ಷನಲ್ಲೇ ಮರದ ಕೊಂಬೆ ಮುರಿದು ಬಿದ್ದಿದೆ. ಸೋಮವಾರ ಸಂಜೆಯೇ ಕೊಂಬೆ ಮುರಿದು ಬಿದ್ದಿದ್ದರೂ, ಇನ್ನೂ ಸಂಬಂಧಪಟ್ಟವರು ಕೊಂಬೆಯನ್ನು ತೆರವು ಮಾಡಿಲ್ಲ.

ರಾತ್ರಿ ಹೊತ್ತು ವಾಹನ ಸವಾರರ ಗಮನಕ್ಕೆ ಬಾರದೇ, ಅಪಾಯ ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಎರಡು ದ್ವಿಚಕ್ರ ವಾಹನ ಸವಾರರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹತ್ತೂರಿನ ಒಡೆಯ ಮಹಾಲಿಂಗೇಶ್ವರನ ಸನ್ನಿದಾನವೇ ದೊಡ್ಡ ನ್ಯಾಯದೇಗುಲ - ಇಲ್ಲೇ ನ್ಯಾಯ ತೀರ್ಮಾನ ಆಗಲಿ” : ಕಂಬಳಕ್ಕೆ ಅಪಚಾರ ಬಯಸುವವರಿಗೆ ದೇವರೇ ನೋಡಿಕೊಳ್ಳಲಿ ಎಂದು ನಡೆ ಪ್ರಾರ್ಥನೆ ನೆರವೇರಿಸಿದ ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ

Posted by Vidyamaana on 2023-02-02 04:15:00 |

Share: | | | | |


ಹತ್ತೂರಿನ ಒಡೆಯ ಮಹಾಲಿಂಗೇಶ್ವರನ ಸನ್ನಿದಾನವೇ ದೊಡ್ಡ ನ್ಯಾಯದೇಗುಲ - ಇಲ್ಲೇ ನ್ಯಾಯ ತೀರ್ಮಾನ ಆಗಲಿ” :  ಕಂಬಳಕ್ಕೆ ಅಪಚಾರ ಬಯಸುವವರಿಗೆ ದೇವರೇ ನೋಡಿಕೊಳ್ಳಲಿ ಎಂದು ನಡೆ ಪ್ರಾರ್ಥನೆ ನೆರವೇರಿಸಿದ ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ

ನಮಗೆ ಮಹಾಲಿಂಗೇಶ್ವರನ ಸನ್ನಿದಾನವೇ ದೊಡ್ಡ ನ್ಯಾಯದೇಗುಲ – ಇಲ್ಲೇ ನ್ಯಾಯ ತೀರ್ಮಾನ ಆಗಲಿ’ ಎಂದು ಕಂಬಳಕ್ಕೆ ಅಪಚಾರ ಬಯಸುವವರಿಗೆ ದೇವರೇ ನೋಡಿಕೊಳ್ಳಲಿ ಎಂದು ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯವರು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.1ರಂದು ನಡೆ ಪ್ರಾರ್ಥನೆ ನೆರವೇರಿಸಿದ್ದಾರೆ.ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಎದುರಿನ ದೇವರಮಾರು ಗದ್ದೆಯಲ್ಲಿ ಜ.28-29ರಂದು ನಡೆದ 30ನೇ ವರ್ಷದ ಕೋಟಿ-ಚೆನಯ್ಯ ಕಂಬಳ ಕೂಟ ಯಶಸ್ವಿಯಾಗಿ ನಡೆದಿದ್ದು, ಅಲ್ಲಿಗೆ ಆಗಮಿಸಿದ್ದ ನಟಿಯ ಜೊತೆ ಯಾರೋ ಅಸಭ್ಯವಾಗಿ ವರ್ತಿಸಿದ್ದಾರೆ ವರದಿಗಳು ವೈರಲ್ ಆಗಿದ್ದು. ಈ ವಿಷಯಕ್ಕೆ ಸಂಬಂಧಿಸಿದಂತೆ ಕಂಬಳ ಸಮಿತಿಯನ್ನು ಹಾಗೂ ಇತಿಹಾಸ ಪ್ರಸಿದ್ಧ ಕಂಬಳಕ್ಕೆ ಅಪಚಾರ ಬಯಸುವ ಕಾಣದ ಕೈಗಳ ವಿರುದ್ಧ ದೇವರೇ ನೋಡಿಕೊಳ್ಳಲಿ ಎಂದು ಕಂಬಳ ಸಮಿತಿ ಅಧ್ಯಕ್ಷರಾದ ಎನ್ ಚಂದ್ರಹಾಸ ಶೆಟ್ಟಿ ದೇವರ ನಡೆಯಲ್ಲಿ ನಿಂತು ಪ್ರಾರ್ಥಿಸಿದರು.ಆ ಸಂದರ್ಭ ಪ್ರಧಾನ ಅರ್ಚಕರು ವೇ| ವಸಂತ ಕೆದಿಲಾಯರು , ಬಲ್ನಾಡು ಉಳ್ಳಾಲ್ತಿ, ಕಾಣತ್ತೂರು ನಾಲ್ವರು ದೈವಂಗಳ ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವರ ಪ್ರಸಾದ ಹಾಕಿ ನಾಗದೇವರಿಗೆ ನಾಗತಂಬಿಲ ಕೊಟ್ಟು ನಡೆಯುವ ಕಂಬಳಕ್ಕೆ ಅಪಚಾರ ಬಯಸಲು ಪ್ರಯತ್ನಿಸುವವರಿಗೆ ದೇವರು ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥಿಸಿ ಕಂಬಳ ಸಮಿತಿಗೆ ಪ್ರಸಾದ ವಿತರಿಸಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಶಾಸಕಿ ಶಕುಂತಲ ಶೆಟ್ಟಿ, ಕಂಬಳ ಸಮಿತಿ ಈ ಘಟನೆಗೆ ಕಾರಣವಲ್ಲ ಎಂದು ನಟಿ ಸಾನ್ಯ ಅಯ್ಯರ್ ಹೇಳಿದ್ದಾಳೆ. ಅವಳು ಒಮ್ಮೆ ಕಾರ್ಯಕ್ರಮ ಮುಗಿಸಿ ಹೋಗಿ ನಂತರ ಬಂದದ್ದು ಆಯೋಜಕರಿಗೆ ಗೊತ್ತಿರಲಿಲ್ಲ. ಈಗಲೂ ಅವಳು ದೂರು ಕೊಟ್ಟರೆ ಅವಳ ಜೊತೆ ನಾವು ನಿಂತು ನ್ಯಾಯಕ್ಕಾಗಿ ಹೋರಾಡುತ್ತೇವೆ ಎಂದರು.ಈ ಘಟನೆಗೆ ಧರ್ಮಗಳನ್ನು ಎಳೆದು ತರುವ ಪ್ರಯತ್ನ ನಡೆದಿದೆ. ಅನ್ಯಮತಿಯ ಯಾರೂ ಅಂತ ಬರೆದವರಿಗೆ ಗೊತ್ತಿರಬಹುದು, ಗೊತ್ತಿದ್ದರೆ ಗೊತ್ತಿರುವವರು ಪೊಲೀಸ್ ದೂರು ಕೊಡಲಿ ಎಂದರು.

ಈ ಪ್ರಕರಣವನ್ನು ನನ್ನ ವಿರುದ್ಧ ಹಾಗೂ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ವಿರುದ್ಧ ಅಪಪ್ರಚಾರ ಮಾಡಲು ಕಂಬಳ ಸಮಿತಿಯನ್ನು ಎಳೆದು ಹಾಕಿದ್ದಾರೆ.

ಅನ್ಯಧರ್ಮಿಯನೋ ಅಧರ್ಮಿಯನೋ ಗೊತ್ತಿಲ್ಲ ನಮಗೆ ಮಹಾಲಿಂಗೇಶ್ವರ ಸನ್ನಿಧಾನವೇ ನ್ಯಾಯದೇಗುಲ ಇಲ್ಲಿ ನ್ಯಾಯ ತೀರ್ಮಾನ ಆಗ್ತದೆ ಎನ್ನುವ ನಂಬಿಕೆ ನಮಗಿದೆ ಎಂದರು.

ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ಈ ವರ್ಷ ಕಂಬಳ ಕೂಟ ಅದ್ಭುತ ಯಶಸ್ವಿಯಾಗಿದೆ. ಈ ಕಂಬಳ ಗದ್ದೆಯಲ್ಲಿ ಏನೇ ತಪ್ಪು ನಡೆದರೂ ತೀರ್ಪೂ ಬೇಗ ಸಿಗ್ತದೆ. ಎಷ್ಟೋ ಕಂಬಳ ಕೋಣ ಮಾಲಕರು ಸಣ್ಣ ತಪ್ಪಾದರೂ ತಪ್ಪು ಕಾಣಿಕೆ ಹಾಕುವಷ್ಟು ಅವರಿಗೆ ಸಮಸ್ಯೆ ಕಾಡುತ್ತದೆ. ಅದುದರಿಂದ ಈ ಸಮಸ್ಯೆಯನ್ನು ತಂದವರನ್ನು ದೇವರು ನೋಡಿಕೊಳ್ತಾರೆ ಎಂದರು.ನಂತರ ವರ್ಷಂಪ್ರತಿಯಂತೆ ಕಂಬಳ ಸಮಿತಿಯ ವತಿಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.

ಕಂಬಳ ಸಮಿತಿ ಕಾರ್ಯದರ್ಶಿ ದಿನೇಶ್ ಪಿ.ವಿ, ಖಜಾಂಜಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾದ ಶಿವರಾಮ ಆಳ್ವ, ಜಿನ್ನಪ್ಪ ಪೂಜಾರಿ ಮುರ, ನಿರಂಜನ್ ರೈ ಮಠಂತಬೆಟ್ಟು ಹಾಗೂ ಸದಸ್ಯರಾದ ಭಾಗ್ಯೇಶ್ ರೈ, ಪ್ರವೀಣ್ ಶೆಟ್ಟಿ ಅಳಕೆಮಜಲು, ದುರ್ಗಾಪ್ರಸಾದ್ ರೈ ಕುಂಬ್ರ, ಭಾಸ್ಕರ್ ಗೌಡ ಕೋಡಿಂಬಾಳ, ಉಮೇಶ್ ಕರ್ಕೆರ , ಗಂಗಾಧರ ಶೆಟ್ಟಿ ಪನಡ್ಕ , ಅಭಿಷೇಕ್ ಬೆಳ್ಳಿಪ್ಪಾಡಿ, ರಂಜಿತ್ ಬಂಗೇರ, ವಿಕ್ರಮ್ ಶೆಟ್ಟಿ ಅಂತರ ಕೋಡಿಂಬಾಡಿ, ಯೋಗೀಶ್ ಸಾಮಾನಿ, ಸಂತೋಷ್ ಸವಣೂರು, ಮಂಜುನಾಥ ಗೌಡ ತೆಂಕಿಲ , ಸನ್ಮಿತ್ ರೈ, ಕೃಷ್ಣಪ್ರಸಾದ್ ಆಳ್ವ, ಸನತ್ ರೈ ಒಳತ್ತಡ್ಕ, ಶಶಿರಾಜ್, ಗಣೇಶ್ ರಾಜ್ , ಜಯಪ್ರಕಾಶ್ ಬದಿನಾರು, ಸುದರ್ಶನ್ ನಾಯ್ಕ್ ಕಂಪ, ಉಮಾಶಂಕರ್ ಪಾಂಗಲಾಯಿ, ಪ್ರವೀಣ್ ನಾಯ್ಕ್, ಶಶಿಕಿರಣ್ ರೈ ಸಹಿತ ಹಲವು ಸದಸ್ಯರು ಭಾಗವಹಿಸಿದ್ದರು.ನಟಿ ಸಾನ್ಯ ಅಯ್ಯರ್ ಜೊತೆ ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ಕಂಬಳ ಗದ್ದೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನುವ ವರದಿಗಳು ಹಲವು ಮಾಧ್ಯಮಗಳಲ್ಲಿ ಪ್ರಕಟಗೊಂಡಿತು.

ಈ ವಿಚಾರವಾಗಿ ನಟಿಯೂ ಬೆಂಗಳೂರಿನಲ್ಲಿ ಸ್ಪಷ್ಟಿಕರಣ ಕೊಟ್ಟಿದ್ದು, ಆಯೋಜಕರು ನನ್ನನ್ನು ಗೌರವಯುತವಾಗಿ ಕಳಿಸಿಕೊಟ್ಟಿದ್ದಾರೆ ಎಂದಿದ್ದು, ದಕ್ಷಿಣ ಕನ್ನಡ ಎಸ್ಪಿ ಸೋನಾವಾಲಾ ಯಾವೂದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ

ತಾಜ್ ಮಹಲ್ ಆವರಣದಲ್ಲಿ ರೀಲ್ : ಯುವತಿಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್‌ ಯೋಧ Watch Video

Posted by Vidyamaana on 2024-04-07 13:42:45 |

Share: | | | | |


ತಾಜ್ ಮಹಲ್ ಆವರಣದಲ್ಲಿ ರೀಲ್ : ಯುವತಿಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್‌ ಯೋಧ  Watch Video

ನವದೆಹಲಿ: ಆಗ್ರಾದ ತಾಜ್ ಮಹಲ್ನಲ್ಲಿ ಶನಿವಾರ ಸಿಐಎಸ್‌ಎಫ್ ಜವಾನ್ ಮತ್ತು ಮಹಿಳಾ ಪ್ರವಾಸಿಗರ ನಡುವೆ ಘರ್ಷಣೆ ಭುಗಿಲೆದ್ದಿದೆ.ವರದಿಗಳ ಪ್ರಕಾರ, ತಾಜ್ ಮಹಲ್ ಆವರಣದಲ್ಲಿ ರೀಲ್ ಚಿತ್ರೀಕರಿಸುವ ಬಗ್ಗೆ ವಾಗ್ವಾದದ ನಂತರ ಜಗಳ ಪ್ರಾರಂಭವಾಯಿತು. ಈ ಘಟನೆಯ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ಮತ್ತು ಪ್ರಸ್ತುತ ವೈರಲ್ ಆಗುತ್ತಿದೆ.



Leave a Comment: