ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಸುದ್ದಿಗಳು News

Posted by vidyamaana on 2024-07-23 06:33:29 | Last Updated by Vidyamaana on 2024-07-23 06:33:29

Share: | | | | |


ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಮುಂಬೈ :ಫಿಟ್ನೆಸ್ ಕಾಪಾಡಿಕೊಳ್ಳಲು ಹಲವರು ಜುಂಬಾ ಡ್ಯಾನ್ಸ್ ಮೊರೆ ಹೋಗುತ್ತಾರೆ. ಪ್ರತಿ ದಿನ ಜುಂಬಾ ಡ್ಯಾನ್ಸ್ ಕ್ಲಾಸ್‌ಗೆ ತೆರಳಿ ಬೆವರು ಹರಿಸುತ್ತಾರೆ. ಹೀಗೆ ಮಹಾರಾಷ್ಟ್ರದ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಫಿಟ್ನೆಸ್‌ಗಾಗಿ ಪ್ರತಿ ದಿನ ಜುಂಬಾ ಕ್ಲಾಸ್‌ಗೆ ತೆರಳಿ ಡ್ಯಾನ್ಸ್ ಮಾಡುತ್ತಾ ಬೆವರು ಹರಿಸುತ್ತಾರೆ.

ಇಂದು ಬೆಳಗ್ಗೆ ಜುಂಬಾ ಡ್ಯಾನ್ಸ್ ಮಾಡುತ್ತಿದ್ದಂತೆ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಉದ್ಯಮಿ ಬದುಕುಳಿಯಲಿಲ್ಲ.


ಛತ್ರಪತಿ ಸಂಭಾಜಿನಗರದ ನಿವಾಸಿಯಾಗಿರುವ ಅವಲ್ಜಿತ್ ಸಿಂಗ್ ಬಾಗ್ಗಾ ಪ್ರತಿದಿನ ಜುಂಬಾ ಡ್ಯಾನ್ಸ್ ಮಾಡುತ್ತಾರೆ. ಎಂದಿನಂತೆ ಇಂದೂ ಕೂಡ ಅವಲ್ಜಿತ್ ಸಿಂಗ್ ಬಾಗ್ಗಾ ಜುಂಬಾ ಡ್ಯಾನ್ಸ್‌ಗೆ ತೆರಳಿದ್ದಾರೆ. ಅವಲ್ಜಿತ್ ಸಿಂಗ್ ರೀತಿಯಲ್ಲಿ ಇತರ ಕೆಲವರು ಜುಂಬಾ ಡ್ಯಾನ್ಸ್ ಮಾಡುತ್ತಿದ್ದಾರೆ. ಜುಂಬಾ ಕ್ಲಾಸ್ ತೆರಳಿ 15 ನಿಮಿಷಗಳ ಕಾಲ ಡ್ಯಾನ್ಸ್ ಮಾಡಿದ್ದಾರೆ. ಹಲವರು ಇದೇ ಕ್ಲಾಸ್‌ನಲ್ಲಿ ಅವಲ್ಜಿತ್ ಸಿಂಗ್ ಜೊತೆ ಡ್ಯಾನ್ಸ್ ಮಾಡಿದ್ದಾರೆ.

ಕೊನೆಯ ಸಾಲಿನ ಬದಿಯಲ್ಲಿದ್ದ ಅವಲ್ಜಿತ್ ಸಿಂಗ್ ಡ್ಯಾನ್ಸ್ ಮಾಡುತ್ತಿದ್ದಂತೆ ಹೃದಯಾಘಾತವಾಗಿದೆ. ಡ್ಯಾನ್ಸ್ ಮಾಡಲು ಸಾಧ್ಯವಾಗದೆ ನಿಂತಿದ್ದಾರೆ. ಚೇತರಿಸಿಕೊಳ್ಳಲು ಕೆಲ ಕ್ಷಣ ನಿಂತಿದ್ದಾರೆ. ಇತರರು ಡ್ಯಾನ್ಸ್‌ನಲ್ಲಿ ತಲ್ಲೀನರಾಗಿದ್ದರು. ಆದರೆ ಅವಲ್ಜಿತ್ ಸಿಂಗ್ ಚೇತರಿಸಿಕೊಳ್ಳಲಿಲ್ಲ. ಕಾರಣ ತೀವ್ರ ಹೃದಯಾಘಾತದಿಂದ ಅವಲ್ಜಿತ್ ಕುಸಿದಿದ್ದಾರೆ. ಈ ವೇಳೆ ಮೆಲ್ಲನೆ ಕುಳಿತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಅವಲ್ಜಿತ್ ಸಿಂಗ್ ಕುಸಿದು ಬೀಳುತ್ತಿದ್ದಂತೆ ಇತರರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ನೀರು ತಂದು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದಕ್ಕೂ ಅವಲ್ಜಿತ್ ಸಿಂಗ್ ಸ್ಪಂದಿಸಿಲ್ಲ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಅವಲ್ಜಿತ್ ಎತ್ತಿಕೊಂಡು ವಾಹನದ ಮೂಲಕ ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆ ದಾಖಲಿಸುವ ಮೊದಲೇ ಅವಲ್ಜಿತ್ ಸಿಂಗ್ ಬಾಗ್ಗಾ ಪ್ರಾಣ ಪಕ್ಷಿ ಹಾರಿಹೋಗಿದೆ. ತಪಾಸಣೆ ನಡೆಸಿದ ವೈದ್ಯರು ಅವಲ್ಜಿತ್ ಸಿಂಗ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.

ಜಿಮ್ ಅಭ್ಯಾಸದ ವೇಳೆ ಈ ರೀತಿ ಹೃದಯಾಘಾತಕ್ಕೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚಗೆ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಬೆಳವಣಿಗೆ ನಡುವೆ ಇದೀಗ ಉದ್ಯಮಿ ಅವಲ್ಜಿತ್ ಸಿಂಗ್ ಬಾಗ್ಗಾ ನಿಧನ ಸುದ್ದಿ ಆತಂಕ ಹೆಚ್ಚಿಸಿದೆ. ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದ ಕವಲ್ಜಿತ್ ಸಿಂಗ್ ದಿಢೀರ್ ನಿಧನ ಇದೀಗ ಮತ್ತೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

 Share: | | | | |


ರಿವೀಲ್ ಆಯ್ತು ಐಫೋನ್ 15ರಲ್ಲಿರುವ ಸ್ಪೆಷಲ್ ಫೀಚರ್ಸ್!

Posted by Vidyamaana on 2023-09-13 12:11:21 |

Share: | | | | |


ರಿವೀಲ್ ಆಯ್ತು ಐಫೋನ್ 15ರಲ್ಲಿರುವ ಸ್ಪೆಷಲ್ ಫೀಚರ್ಸ್!

ನವದೆಹಲಿ :ಆಪಲ್ ಅಧಿಕೃತವಾಗಿ 48 ಎಂಪಿ ಮುಖ್ಯ ಕ್ಯಾಮೆರಾ, 26 ಎಂಎಂ ಫೋಕಲ್ ಉದ್ದ, 2 ಮೈಕ್ರಾನ್ ಕ್ವಾಡ್ ಪಿಕ್ಸೆಲ್ ಸೆನ್ಸಾರ್ ಮತ್ತು 100 ಪ್ರತಿಶತ ಫೋಕಸ್ ಪಿಕ್ಸೆಲ್ಗಳೊಂದಿಗೆ ಬಹುನಿರೀಕ್ಷಿತ ಐಫೋನ್ 15 ಅನ್ನು ಅನಾವರಣಗೊಳಿಸಿದೆ.ಐಫೋನ್ 15 ಹೊಸ ಕ್ಯಾಮೆರಾ ವ್ಯವಸ್ಥೆಯೊಂದಿಗೆ ಬರುತ್ತದೆ ಎಂದು ಆಪಲ್ ಹೇಳಿದೆ.ಐಫೋನ್ 15 ನಲ್ಲಿ ನೈಟ್ ಮೋಡ್ ಕೂಡ ಉತ್ತಮಗೊಳ್ಳುತ್ತಿದೆ. ಐಫೋನ್ 14 ಪ್ರೊಗೆ ಶಕ್ತಿ ನೀಡಿದ ಬಯೋನಿಕ್ ಎ 16 ಚಿಪ್ ಅನ್ನು ಐಫೋನ್ 15 ನಲ್ಲಿ ಅಳವಡಿಸಲಾಗಿದೆ. ಇದು ಎ 15 ಬಯೋನಿಕ್ ಚಿಪ್ ಸೆಟ್ ಗಿಂತ ಕಡಿಮೆ ಶಕ್ತಿಯನ್ನು ಬಳಸುತ್ತದೆ. ಇದರರ್ಥ ಐಫೋನ್ 15 ಪ್ರೊ ಮಾದರಿಗಳು ಹೆಚ್ಚು ಶಕ್ತಿಯುತ ಚಿಪ್ ಅನ್ನು ಹೊಂದಿರುತ್ತವೆ. ಐಫೋನ್ 15 ಬಣ್ಣ-ತುಂಬಿದ ಬ್ಯಾಕ್ ಗ್ಲಾಸ್ ಮತ್ತು ಹೊಸ ಬಾಹ್ಯರೇಖೆಯ ಅಂಚನ್ನು ಹೊಂದಿದೆ. ಡೈನಾಮಿಕ್ ಐಲ್ಯಾಂಡ್ ಅನ್ನು ಈ ವರ್ಷದ ಪ್ರೊ ಅಲ್ಲದ ಐಫೋನ್ ಮಾದರಿಗಳಲ್ಲಿಯೂ ಸೇರಿಸಲಾಗಿದೆ.ಐಫೋನ್ 15 ಸುಧಾರಿತ ಬೊಕೆ ಪರಿಣಾಮಕ್ಕಾಗಿ ಸುಧಾರಿತ ಪೋರ್ಟ್ರೇಟ್ ಮೋಡ್ ನೊಂದಿಗೆ ಬರುತ್ತದೆ, ಇದು ಪ್ರಾಣಿಗಳು ಮತ್ತು ಮಾನವ ವಿಷಯಗಳ ಚಿತ್ರಗಳನ್ನು ಕ್ಲಿಕ್ ಮಾಡುವಾಗ ಸ್ವಯಂಚಾಲಿತವಾಗಿ ಪೋರ್ಟ್ರೇಟ್ ಮೋಡ್ ಗೆ ಬದಲಾಯಿಸಲು ಯಂತ್ರ ಕಲಿಕೆ (ಎಂಎಲ್) ಅನ್ನು ಬಳಸುತ್ತದೆ. ಐಫೋನ್ 15 ಅನ್ನು ಯುಎಸ್ನಲ್ಲಿ 799 ಡಾಲರ್ ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿದೆ.


ಇದು ಕಳೆದ ವರ್ಷದ ಐಫೋನ್ 14 ಮೂಲ ಮಾದರಿಯಂತೆಯೇ ಇದೆ. ಆಪಲ್ ಪ್ರಕಾರ, ಐಫೋನ್ 15 ಪ್ಲಸ್ ಮಾದರಿಯ ಬೆಲೆ 899 ಡಾಲರ್. ಐಫೋನ್ 15 ಯುಎಸ್ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ನೊಂದಿಗೆ ಬಂದ ಮೊದಲ ಐಫೋನ್ ಮಾದರಿಯಾಗಿದೆ. ಐಫೋನ್ ಮಾದರಿಗಳನ್ನು ಚಾರ್ಜ್ ಮಾಡಲು ಆಪಲ್ ಯಾವಾಗಲೂ ಮಿಂಚಿನ ಕೇಬಲ್ ಗಳನ್ನು ಬಳಸುತ್ತಿತ್ತು ಆದರೆ ಐಫೋನ್ 15 ಸರಣಿಯೊಂದಿಗೆ ಅದು ಬದಲಾಗಿದೆ. ಯುಎಸ್ಬಿ-ಸಿ ಚಾರ್ಜಿಂಗ್ "ಸಾರ್ವತ್ರಿಕವಾಗಿದೆ" ಎಂದು ಆಪಲ್ ಹೇಳಿದೆ.ವೀಡಿಯೊಗಳನ್ನು ಸ್ಟ್ರೀಮಿಂಗ್ ಮಾಡುವಾಗ ಮತ್ತು ಆಟಗಳನ್ನು ಆಡುವಾಗ ಸುಗಮ ಗ್ರಾಫಿಕ್ಸ್ಗಾಗಿ 5-ಕೋರ್ ಜಿಪಿಯು ಶೇಕಡಾ 50 ರಷ್ಟು ಹೆಚ್ಚು ಮೆಮೊರಿ ಬ್ಯಾಂಡ್ವಿಡ್ತ್ ಹೊಂದಿದೆ. ಹೊಸ 16-ಕೋರ್ ನ್ಯೂರಲ್ ಎಂಜಿನ್ ಪ್ರತಿ ಸೆಕೆಂಡಿಗೆ ಸುಮಾರು 17 ಟ್ರಿಲಿಯನ್ ಕಾರ್ಯಾಚರಣೆಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ.


ಐಒಎಸ್ 17 ನಲ್ಲಿ ಲೈವ್ ವಾಯ್ಸ್ಮೇಲ್ ಟ್ರಾನ್ಸ್ಕ್ರಿಪ್ಷನ್ಗಳು ಮತ್ತು ಥರ್ಡ್-ಪಾರ್ಟಿ ಅಪ್ಲಿಕೇಶನ್ ಅನುಭವಗಳಂತಹ ವೈಶಿಷ್ಟ್ಯಗಳಿಗಾಗಿ ಇನ್ನೂ ವೇಗವಾಗಿ ಯಂತ್ರ ಕಲಿಕೆ ಗಣನೆಗಳನ್ನು ಸಕ್ರಿಯಗೊಳಿಸುತ್ತದೆ - ಇವೆಲ್ಲವೂ ಸುರಕ್ಷಿತ ಎನ್ಕ್ಲೇವ್ ಬಳಸಿ ನಿರ್ಣಾಯಕ ಗೌಪ್ಯತೆ ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ರಕ್ಷಿಸುತ್ತವೆ.ಭಾರತದಲ್ಲಿ ಐಫೋನ್ 15 ಬೆಲೆ, ಲಭ್ಯತೆ ಮತ್ತು ಬಣ್ಣಗಳು


ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಗುಲಾಬಿ, ಹಳದಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ 128 ಜಿಬಿ, 256 ಜಿಬಿ ಮತ್ತು 512 ಜಿಬಿ ಕಾನ್ಫಿಗರೇಶನ್ ಗಳಲ್ಲಿ ಕ್ರಮವಾಗಿ 79,900 ಮತ್ತು 89,900 ರೂ.ಗಳಿಂದ ಪ್ರಾರಂಭವಾಗುತ್ತದೆ.


ಆಸ್ಟ್ರೇಲಿಯಾ, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಜಪಾನ್, ಮೆಕ್ಸಿಕೊ, ಯುಎಇ, ಯುಕೆ ಮತ್ತು ಯುಎಸ್ ಸೇರಿದಂತೆ 40 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿನ ಖರೀದಿದಾರರು ಸೆಪ್ಟೆಂಬರ್ 15 ರಿಂದ ಬೆಳಿಗ್ಗೆ 5 ಗಂಟೆಗೆ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಅನ್ನು ಪೂರ್ವ-ಆರ್ಡರ್ ಮಾಡಲು ಸಾಧ್ಯವಾಗುತ್ತದೆ.ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಸೆಪ್ಟೆಂಬರ್ 29 ರ ಶುಕ್ರವಾರದಿಂದ ಮಕಾವೊ, ಮಲೇಷ್ಯಾ, ಟರ್ಕಿಯೆ, ವಿಯೆಟ್ನಾಂ ಮತ್ತು 17 ಇತರ ದೇಶಗಳು ಮತ್ತು ಪ್ರದೇಶಗಳಲ್ಲಿ ಲಭ್ಯವಿರುತ್ತದೆ.


"ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಸೃಜನಶೀಲತೆಯನ್ನು ಪ್ರೇರೇಪಿಸುವ ಅತ್ಯಾಕರ್ಷಕ ಕ್ಯಾಮೆರಾ ಆವಿಷ್ಕಾರಗಳು, ಅರ್ಥಗರ್ಭಿತ ಡೈನಾಮಿಕ್ ದ್ವೀಪ ಮತ್ತು ಸಾಬೀತುಪಡಿಸಿದ ಶಕ್ತಿಯುತ ಕಾರ್ಯಕ್ಷಮತೆಗಾಗಿ ಎ 16 ಬಯೋನಿಕ್ ಚಿಪ್ನೊಂದಿಗೆ ದೊಡ್ಡ ಮುನ್ನಡೆಯನ್ನು ಪ್ರತಿನಿಧಿಸುತ್ತದೆ" ಎಂದು ಆಪಲ್ನ ವಿಶ್ವವ್ಯಾಪಿ ಐಫೋನ್ ಉತ್ಪನ್ನ ಮಾರ್ಕೆಟಿಂಗ್ ಉಪಾಧ್ಯಕ್ಷ ಕೈಯಾನ್ ಡ್ರಾನ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸೂಪರ್-ಹೈ-ರೆಸಲ್ಯೂಶನ್ ಫೋಟೋಗಳಿಗಾಗಿ ಹೊಸ 24 ಎಂಪಿ ಡೀಫಾಲ್ಟ್, ಹೊಸ 2 ಎಕ್ಸ್ ಟೆಲಿಫೋಟೋ ಆಯ್ಕೆ ಮತ್ತು ಮುಂದಿನ ಪೀಳಿಗೆಯ ಭಾವಚಿತ್ರಗಳನ್ನು ಒಳಗೊಂಡಿರುವ 48 ಎಂಪಿ ಮುಖ್ಯ ಕ್ಯಾಮೆರಾದೊಂದಿಗೆ ನಾವು ಈ ವರ್ಷ ಕಂಪ್ಯೂಟೇಶನಲ್ ಫೋಟೋಗ್ರಫಿಯ ಶಕ್ತಿಯನ್ನು ಹೊಸ ಫೀಚರ್ ಹೊಂದಿದೆ.

ಶಾಂತಿ ಕದಡಿದರೆ ಬಜರಂಗದಳ ನಿಷೇಧ:ಪ್ರಿಯಾಂಕ್ ಖರ್ಗೆ

Posted by Vidyamaana on 2023-05-24 11:23:35 |

Share: | | | | |


ಶಾಂತಿ ಕದಡಿದರೆ ಬಜರಂಗದಳ  ನಿಷೇಧ:ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ಶಾಂತಿ ಕದಡಿದರೆ ಬಜರಂಗದಳ ಮತ್ತು ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ತಮ್ಮ ಸರಕಾರ ನಿಷೇಧಿಸುತ್ತದೆ ಮತ್ತು ಬಿಜೆಪಿ ನಾಯಕತ್ವವು ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ ಪಾಕಿಸ್ತಾನಕ್ಕೆ ಹೋಗಬಹುದು ಎಂದು ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಪುನರುಚ್ಚರಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್, ”ಕರ್ನಾಟಕವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ, ಶಾಂತಿ ಕದಡಿದರೆ ಅದು ಬಜರಂಗದಳ ಅಥವಾ ಆರ್‌ಎಸ್‌ಎಸ್ ಎಂದು ಪರಿಗಣಿಸುವುದಿಲ್ಲ, ಕಾನೂನು ಕೈಗೆತ್ತಿಕೊಂಡಾಗ ನಿಷೇಧ ಹೇರಲಾಗುವುದು” ಎಂದು ಖರ್ಗೆ ಹೇಳಿದ್ದಾರೆ.ಹಿಜಾಬ್, ಹಲಾಲ್ ಕಟ್ ಮತ್ತು ಗೋಹತ್ಯೆ ಕಾನೂನುಗಳ ಮೇಲಿನ ನಿಷೇಧವನ್ನು ಸರಕಾರ ಹಿಂಪಡೆಯಲಿದೆ. ಸಮಾಜದಲ್ಲಿ ಕಾನೂನು ಮತ್ತು ಪೊಲೀಸರ ಭಯವಿಲ್ಲದೆ ಕೆಲವು ಅಂಶಗಳು ಮುಕ್ತವಾಗಿ ವಿಹರಿಸುತ್ತಿವೆ. ಮೂರು ವರ್ಷಗಳಿಂದ ಈ ಪ್ರವೃತ್ತಿ ನಡೆಯುತ್ತಿದೆ” ಎಂದರು.

”ಜನರು ವಿರೋಧ ಪಕ್ಷದಲ್ಲಿ ಕೂರಿಸಲು ಕಾರಣವೇನು ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ಕೇಸರಿಕರಣ ತಪ್ಪು ಎಂದು ಹೇಳಿದ್ದೇವೆ, ಎಲ್ಲರೂ ಅನುಸರಿಸಬಹುದಾದ ಬಸವಣ್ಣನವರ ತತ್ವಗಳನ್ನು ಕಾಂಗ್ರೆಸ್ ಅನುಸರಿಸುತ್ತದೆ” ಎಂದರು.

ಪುತ್ತೂರು : ಎ.ಸಿ.ಗಿರೀಶ್ ನಂದನ್ ವರ್ಗಾವಣೆ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ

Posted by Vidyamaana on 2023-07-14 11:39:40 |

Share: | | | | |


ಪುತ್ತೂರು : ಎ.ಸಿ.ಗಿರೀಶ್ ನಂದನ್ ವರ್ಗಾವಣೆ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ

ಪುತ್ತೂರು : ಉಪವಿಭಾಗಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗಿರೀಶ್‌ ನಂದನ್‌ ಅವರ ವರ್ಗಾವಣೆ ಆದೇಶಕ್ಕೆ ಕರ್ನಾಟಕ ಅಡ್ಮಿನಿಸ್ಟ್ರೇಟಿವ್‌ ಟ್ರಿಬ್ಯೂನಲ್‌ ತಡೆಯಾಜ್ಞೆ ನೀಡಿದೆ.


ಅವಧಿಪೂರ್ವ ಮತ್ತು ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಎತ್ತಿನಹೊಳೆ ಯೋಜನೆಯ ವಿಶೇಷ ಭೂ ಸ್ವಾಧೀನ ಅಧಿಕಾರಿ ಹುದ್ದೆಗೆ ಮತ್ತೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಗಿರೀಶ್‌ ನಂದನ್‌ ಕೆಎಟಿ ಗೆ ದೂರು ದಾಖಲಿಸಿದ್ದರು.


ದೂರು ಸ್ವೀಕರಿಸಿದ ಕೆಎಟಿ ವರ್ಗಾವಣೆ ಆದೇಶಕ್ಕೆ ತಡೆ ನೀಡಿದೆ.


ಈ ಹಿಂದೆ ಗಿರೀಶ್‌ ನಂದನ್‌ ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸರಕಾರ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ನೋಟೀಸ್‌ ಜಾರಿಗೊಳಿಸಿ ತನಿಖಾಧಿಕಾರಿಯನ್ನು ನೇಮಿಸಿತ್ತು.


ಈ ನಡುವೆ ವಿಚಾರಣೆ ಪೂರ್ಣಗೊಳ್ಳುವುದಕ್ಕೆ ಮೊದಲು ಅವರನ್ನು ಹಾಸನ ಮೆಡಿಕಲ್‌ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ವರ್ಗಾವಣೆಗೊಳಿಸಿತ್ತು.


ತದನಂತರ 2-2-2022ರಲ್ಲಿ ಪುತ್ತೂರು ಉಪವಿಭಾಗಧಿಕಾರಿಯಾಗಿ ವರ್ಗಾವಣೆಗೊಳಿಸಿತ್ತು.


ತನ್ನ ವಿರುದ್ಧದ ತನಿಖೆ ಪೂರ್ಣಗೊಳ್ಳುವುದಕ್ಕೆ ಮೊದಲು ಮತ್ತೆ ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಅವಧಿ ಪೂರ್ವ ವರ್ಗಾವಣೆ ಮಾಡಿರುವ ಬಗ್ಗೆ ಗಿರೀಶ್‌ ನಂದನ್‌ ಕೆಎಟಿ ಗೆ ದೂರು ದಾಖಲಿಸಿದ್ದರು.


ದೂರು ದಾಖಲಿಸಿದ ಕೆಎಟಿ ಮುಂದಿನ ಆದೇಶದವರೆಗೆ ಸರಕಾರದ ವರ್ಗಾವಣೆ ಆದೇಶಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.

ಅರಿಯಡ್ಕ: ದಲಿತ ಕಾಲನಿಗೆ ಅಶೋಕ್ ರೈ ಭೇಟಿ ಮತ ಯಾಚನೆ

Posted by Vidyamaana on 2023-04-26 06:37:19 |

Share: | | | | |


ಅರಿಯಡ್ಕ: ದಲಿತ ಕಾಲನಿಗೆ ಅಶೋಕ್ ರೈ ಭೇಟಿ ಮತ ಯಾಚನೆ

ಪುತ್ತೂರು: ಅರಿಯಡ್ಕ ಗ್ರಾಮದ ಶೇಕಮಲೆ ದಲಿತ ಕಾಲನಿಗೆ ಕಾಂಗ್ರೆಸ್  ಅಭ್ಯರ್ಥಿ ಅಶೋಕ್ ರೈ ಭೇಟಿ ನೀಡಿ ಮತ ಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಕಾಲನಿಗೆ ತೆರಳುವ ರಸ್ತೆಯಲ್ಲಿ ಹೊಳೆ ಇದ್ದು ಅದಕ್ಕೆ ಸೇತುವೆ ಇಲ್ಲದೆ ಸಮಸ್ಯೆಯಾಗಿದ್ದು ಮಳೆಗಾಲದಲ್ಲಿ ಶಾಲೆಗೆ ಮಕ್ಕಳು ತೆರಳಲೂ ಸಾಧ್ಯವಾಗುತ್ತಿಲ್ಲ. ಸೇತುವೆ ನಿರ್ಮಾಣ ಮಾಡಿಕೊಡುವಂತೆ ಕಾಲನಿ ನಿವಾಸಿಗಳು ಮನವಿ ಮಾಡಿದರು.

ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಂಭ್ರಮದ ಚಾಲನೆ:ಭವ್ಯ ಮೆರವಣಿಗೆಯಲ್ಲಿ ವೈಭವದ ಹಸಿರು ಹೊರೆ ಕಾಣಿಕೆ ಸಮರ್ಪಣೆ

Posted by Vidyamaana on 2023-01-12 12:21:23 |

Share: | | | | |


ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಂಭ್ರಮದ ಚಾಲನೆ:ಭವ್ಯ ಮೆರವಣಿಗೆಯಲ್ಲಿ ವೈಭವದ ಹಸಿರು ಹೊರೆ ಕಾಣಿಕೆ ಸಮರ್ಪಣೆ

ಕಾಣಿಯೂರು: ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ಜ 11ರಂದು ಸಂಭ್ರಮದ ಚಾಲನೆ ನೀಡಲಾಯಿತು.

ಬಜರಂಗದಳ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ; ಆರ್. ಅಶೋಕ್

Posted by Vidyamaana on 2024-02-23 14:48:48 |

Share: | | | | |


ಬಜರಂಗದಳ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ; ಆರ್. ಅಶೋಕ್

ಮಂಗಳೂರು: ಬಜರಂಗದಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಎಂದು ಹೇಳಿ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದ ಬಿಜೆಪಿಯ ವಿಪಕ್ಷ ನಾಯಕ ಆರ್. ಅಶೋಕ್, ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರ ಕ್ಷಮೆ ಕೇಳಿದ್ದಾರೆ.


ಜ್ಞಾನವಾಪಿ ದೇವಸ್ಥಾನದ ಬಗ್ಗೆ ರಾಮನಗರದ ವಕೀಲರೊಬ್ಬರು ಅವಹೇಳನಕಾರಿ ಶಬ್ದ ಹಾಕಿದ್ದರು. ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬಂದಾಗ, ನಾನು ಕೂಡ ಗೃಹ ಸಚಿವನಾಗಿದ್ದೆ. ನೀವು ಮುಸ್ಲಿಮರಿಂದ ಒತ್ತಡ ಇದೆಯೆಂದು ಕ್ರಮ ಜರುಗಿಸದೇ ಇರಬಾರದು. ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಬೇಕು. ಹಿಂದೆ ಪಬ್ ದಾಳಿ ಸಂದರ್ಭದಲ್ಲಿ ಬಜರಂಗದಳ ಕಾರ್ಯಕರ್ತರ ಮೇಲೂ ಗೂಂಡಾ ಕಾಯ್ದೆ ಹಾಕಿದ್ದೆ. ಒತ್ತಡ ಇದೆಯೆಂದು ಸುಮ್ಮನೆ ಬಿಡಲಿಲ್ಲ ಎಂದು ಹೇಳಿದ್ದೆ. ಇದರಿಂದ ಬಜರಂಗದಳ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ.


ನಾನು ಕೂಡ ಹತ್ತು ವರ್ಷ ಬಜರಂಗದಳ ಕಾರ್ಯಕರ್ತನಾಗಿದ್ದೆ. ಕ್ಷಮೆ ಕೇಳುವುದರಿಂದ ಯಾವುದೇ ವಿಷಾದನೂ ಇಲ್ಲ, ನೋವೂ ಇಲ್ಲ. ಬಜರಂಗದಳ ಕಾರ್ಯಕರ್ತರೂ ನಮ್ಮವರೇ. ಆದ್ದರಿಂದ ಈ ವಿಚಾರವನ್ನು ಇಲ್ಲಿಗೆ ಮುಕ್ತಾಯ ಮಾಡಿ ಎಂದು ಅಶೋಕ್ ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ. ಅಶೋಕ್ ಅವರನ್ನು ವಿಪಕ್ಷ ನಾಯಕ ಸ್ಥಾನದಿಂದ ಕಿತ್ತು ಹಾಕಬೇಕೆಂದು ಕರಾವಳಿ ಮತ್ತು ಮಲೆನಾಡಿನಲ್ಲಿ ಬಜರಂಗದಳ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದರು. ಅಲ್ಲದೆ, ವಿಶ್ವಹಿಂದು ಪರಿಷತ್, ಬಜರಂಗದಳ ಪ್ರಮುಖರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿಯಾಗಿ ಕ್ರಮಕ್ಕೆ ಆಗ್ರಹಿಸಿದ್ದರು.

Recent News


Leave a Comment: