ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ನನ್ನ ಮಗನೆಲ್ಲಿ– ಹೆಣಗಳ ರಾಶಿಗಳ ನಡುವೆ ಮಗನನ್ನು ಹುಡುಕುತ್ತಿರುವ ತಂದೆ

Posted by Vidyamaana on 2023-06-04 05:11:56 |

Share: | | | | |


ನನ್ನ ಮಗನೆಲ್ಲಿ– ಹೆಣಗಳ ರಾಶಿಗಳ ನಡುವೆ ಮಗನನ್ನು ಹುಡುಕುತ್ತಿರುವ ತಂದೆ

         ದಶಕದ ಭೀಕರ ರೈಲು ದುರಂತಗಳಲ್ಲೇ ಒಂದು ಎಂದು ಹೇಳಲಾಗುತ್ತಿರುವ ಒಡಿಶಾ ತ್ರಿವಳಿ ರೈಲು ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆ ಮುಗಿದು ಸರಿಸುಮಾರು 300 ಜೀವಗಳು ಅಪಘಾತಕ್ಕೆ ಬಲಿಯಾಗಿ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಕಹಿ ಘಟನೆಯ ಬೆನ್ನಲ್ಲೇ ಇದೀಗ ಮೃತಪಟ್ಟ ಪ್ರಯಾಣಿಕರ ಕುಟುಂಬಸ್ಥರು ತಮ್ಮವರ ಶವಗಳನ್ನು ಹುಡುಕಲು ಒದ್ದಾಡುತ್ತಿರುವ ಒಂದೊಂದೇ ಘಟನೆಗಳು ಹೊರಜಗತ್ತಿಗೆ ಅನಾವರಣಗೊಳ್ಳುತ್ತಿದೆ.

ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಮಂಜಾದ ಕಣ್ಣಿನೊಂದಿಗೆ ಅಲ್ಲಿ ಸಾಲಾಗಿ ಮಲಗಿಸಿರುವ ನೂರಾರು ಹೆಣಗಳ ನಡುವೆ ತನ್ನ ಪುತ್ರನನ್ನು ಹುಡುಕುತ್ತಿರುವ ಈ ಬಡಪಾಯಿ ತಂದೆಯ ಸ್ಥಿತಿಯನ್ನು ಹೊರಜಗತ್ತಿಗೆ ಅನಾವರಣಗೊಳಿಸಿರುವ ವಿಡಿಯೋ ಒಂದು ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ನೋಡುಗರ ಕಣ್ಣಂಚಿನಲ್ಲೂ ನೀರುತರಿಸುವಂತಿದೆ.

ನಾವು ಚಿಕ್ಕವರಿದ್ದಾಗ ಚಿಕ್ಕ ವಸ್ತುಗಳನ್ನು ಮನೆಯಲ್ಲಿ ಕಳೆದುಕೊಂಡಾಗ ಇಡೀ ಮನೆಯನ್ನೇ ಹುಡುಕುವಂತೆ, ಯಾವುದೋ ಶುಭ ಸಮಾರಂಭಗಳಿಗೆ ಹೊರಟು ನಿಂತಾಗ ಬೀರುವಿನಿಂದ ಬಟ್ಟೆಯನ್ನು ಕಿತ್ತು ಕೆಳಗೆ ಹಾಕುವಂತೆ ಈ ತಂದೆಯೊಬ್ಬರು ಶವದ ರಾಶಿಯಲ್ಲಿ ತನ್ನ ಮಗನಿದ್ದಾನೆಯೇ ಎಂದು ಹುಡುಕಾಡುತ್ತಿರುವುದರ ಹಿಂದಿನ ಕಾತರ, ಉದ್ವೇಗ, ನೋವು ಆ ತಂದೆಗೆ ಮಾತ್ರ ತಿಳಿದಿರಲು ಸಾಧ್ಯ!

ಒಡಿಶಾದಲ್ಲಿ ರೈಲು ಅಪಘಾತದಿಂದ ಪ್ರಾಣ ಕಳೆದುಕೊಂಡ ತನ್ನ ಮಗನ ಮೃತದೇಹವನ್ನು ಈ ತಂದೆ ಶವಗಳಿಗೆ ಮುಚ್ಚಿದ ಮುಸುಕು ತೆಗೆದು ತೆಗೆದು ಹುಡುಕಿತ್ತಿದ್ದಾರೆ. ಈ ರೀತಿಯ ಸಾವು-ನೋವಿನ ಅನುಭವ ಯಾರಿಗೂ ಆಗುವುದು ಬೇಡ ಎಂದು ಹೇಳುವುದು ಸುಲಭ ಆದರೆ ಇಂತಹ ದುರಂತಗಳಾದ ಸಂದರ್ಭದಲ್ಲಿ ಸಂತ್ರಸ್ತರ ರಕ್ತ ಸಂಬಂಧಿಗಳು ಪಡುವ ಪಾಡು ಆ ದೇವರಿಗೇ ಪ್ರೀತಿ! ಆ ತಂದೆ ಮಗ ಕನಿಷ್ಠ ಗಾಳುವಾಗಿ ಬದುಕಿರಲಿ ಮತ್ತು ಶವಾಗಾರದ ಬದಲು ಆಸ್ಪತ್ರೆಯ ಬೆಡ್ ಮೇಲೆ ಈ ತಂದೆ ತನ್ನ ಮಗನನ್ನು ಭೆಟಿಯಾಗುವಂತಾಗಲಿ ಎಂಬುದಷ್ಟೇ ನಾವೀ ಸಂದರ್ಭದಲ್ಲಿ ಮಾಡಬಹುದಾದ ಹಾರೈಕೆ.

ಕೆರೆ ಮೀನು ತಿಂದು ಇಬ್ಬರು ಮೃತ: ಹಲವರು ಅಸ್ವಸ್ಥ

Posted by Vidyamaana on 2024-05-04 11:37:44 |

Share: | | | | |


ಕೆರೆ ಮೀನು ತಿಂದು ಇಬ್ಬರು ಮೃತ: ಹಲವರು ಅಸ್ವಸ್ಥ

ಕೊಣನೂರು: ಇಲ್ಲಿಗೆ ಸಮೀಪದ ಬಸವನಹಳ್ಳಿಯಲ್ಲಿ ಕೆರೆ ಮೀನು ತಿಂದು ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಗ್ರಾಮದ ರವಿಕುಮಾರ್ (46) ಹಾಗೂ ಕೆ.ಆರ್. ನಗರ ತಾಲ್ಲೂಕಿನ ಸನ್ಯಾಸಿಪುರದ ಪುಟ್ಟಮ್ಮ (50) ಮೃತಪಟ್ಟವರು. ಅಲ್ಲದೆ,15 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ನೀರಿಲ್ಲದೇ ಬತ್ತಿದ್ದ ಗ್ರಾಮದ ಕೆರೆ ಕೆಸರಿನಲ್ಲಿದ್ದ ಮೀನುಗಳನ್ನು ಗ್ರಾಮಸ್ಥರು ಹಿಡಿದು ಅಡುಗೆ ಮಾಡಿದ್ದರು. ಬಳಿಕ ಸಂತೋಷದಿಂದ ತಿಂದಿದ್ದಾರೆ

ಬಿಜೆಪಿ ನಾಯಕರ ಫೊಟೋಗೆ ಚಪ್ಪಲಿ ಹಾರ ಹಾಕಿದ ಪ್ರಕರಣ: ಆರೋಪಿಗಳಿಗೆ ಪೊಲೀಸ್ ದೌರ್ಜನ್ಯದ ಆರೋಪ

Posted by Vidyamaana on 2023-05-17 10:06:45 |

Share: | | | | |


ಬಿಜೆಪಿ ನಾಯಕರ ಫೊಟೋಗೆ ಚಪ್ಪಲಿ ಹಾರ ಹಾಕಿದ ಪ್ರಕರಣ: ಆರೋಪಿಗಳಿಗೆ ಪೊಲೀಸ್ ದೌರ್ಜನ್ಯದ ಆರೋಪ

ಪುತ್ತೂರು: ಬಿಜೆಪಿ ನಾಯಕರ ಭಾವಚಿತ್ರವಿರುವ ಬ್ಯಾನರಿಗೆ ಚಪ್ಪಲಿ ಹಾರ ಹಾಕಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾದ ಆರೋಪಿಗಳಿಗೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರ ಭಾವಚಿತ್ರವನ್ನು ಹಾಕಿ, ಅದರಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಎಂಬ ಶೀರ್ಷಿಕೆ ನೀಡಿ, ಅದಕ್ಕೆ ಚಪ್ಪಲಿ ಹಾರ ಹಾಕಿದ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 9 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು.

ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನುವ ಯುವಕರ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಡೆದಾಡಲು ಕಷ್ಟಪಡುವ ರೀತಿಯ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ.

ಈ ಬಗ್ಗೆ ಡಿವೈಎಸ್ಪಿ ಅವರಲ್ಲಿ ವಿಚಾರಿಸಿದಾಗ ಪುತ್ತೂರು ನಗರ ಠಾಣೆಯಲ್ಲಿ ಅಪರಾಧ ಸಂಖ್ಯೆ 37/23 ರಲ್ಲಿ ದಸ್ತಗಿರಿ ಮಾಡಿದ ಆರೋಪಿತರಿಗೆ ಪೊಲೀಸರು ಹಲ್ಲೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣ ಗಳಲ್ಲಿ ಸುದ್ದಿ ಪ್ರಸಾರ ವಾಗುತ್ತಿದ್ದು, ಈ ಬಗ್ಗೆ ಸತ್ಯಾಂಶ ತಿಳಿದುಕೊಳ್ಳಲು ವಿಚಾರಣೆ ಕೈಗೊಳ್ಳಲಾಗುವುದು ಎಂದಿದ್ದಾರೆ.

ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಅರಳಿದ ಪೂಕಳಂ

Posted by Vidyamaana on 2023-08-29 11:51:13 |

Share: | | | | |


ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಅರಳಿದ ಪೂಕಳಂ

ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನಲ್ಲಿ 16 ನೇ ವರ್ಷದ ಓಣಂ ಹಬ್ಬವನ್ನು ಆಚರಿಸಲಾಯಿತು. 

ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದವರು ಸೇರಿ ಪೂಕಳಂ ರಚಿಸಿದ್ದು ಸಂಸ್ಥೆಯ ಸಂಚಾಲಕರಾದ ಗೋಕುಲ್ನಾಥ್ ಪಿ. ವಿ. ಹಾಗೂ ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾ ಗೋಕುಲ್ನಾಥ್ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಓಣಂ ಹಬ್ಬದ ಆಚರಣೆಗೆ ಚಾಲನೆ ನೀಡಲಾಯಿತು.

ಸಂಸ್ಥೆಯ ಉಪನ್ಯಾಸಕಿಯರಾದ ಅನುಪಮ ಇವರು ಓಣಂ ಹಬ್ಬವನ್ನು ಆಚರಿಸುವ ರೀತಿಯ ಕುರಿತು ತಿಳಿಸಿದರು.

ಹಾಸ್ಟೆಲ್ ವಾರ್ಡನ್ ಆಗಿರುವ ಕಲಾವತಿ ಇವರು ಮಾತನಾಡಿ, ‘ಓಣಂ ಹಬ್ಬದಲ್ಲಿರುವ ವಿಶೇಷ ಖಾದ್ಯದ ಹಾಗೂ ಆಚರಣೆಯ ಕುರಿತು ಮಾಹಿತಿನೀಡಿದರು. ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್ನಾಥ್ ಅವರು ಮಾತನಾಡಿ, ‘ಈ ಹಬ್ಬದ ಆಚರಣೆಯು ನಿಮ್ಮಲ್ಲರ ಬದುಕಿನಲ್ಲಿ ಒಂದು ಸವಿ ನೆನಪಾಗಿ ಉಳಿಯಲಿ’ ಎಂದು ಹಾರೈಸಿದರು.

ಸಂಸ್ಥೆಯ ಮುಖ್ಯ ಶಿಕ್ಷಕಿ, ‘ಓಣಂ ಹಬ್ಬದ ಹೂವಿನ ಅಲಂಕಾರದಲ್ಲಿ ಬಳಸಿದ ವಿವಿಧ ಹೂವುಗಳಂತೆ ವಿದ್ಯಾರ್ಥಿಗಳ ಜೀವನವು ಸುಂದರವಾಗಲಿ’ ಎಂದು ಶುಭಹಾರೈಸಿದರು. ಕಛೇರಿ ಸಿಬ್ಬಂದಿಯಾದ ಶ್ರೀಮತಿ ಸುಷ್ಮಲತಾ ಮಾತನಾಡಿ ಶುಭಹಾರೈಸಿದರು.

ಸಂಸ್ಥೆಯ ಸಂಚಾಲಕರಾದ ಗೋಕುಲ್ನಾಥ್ ಪಿ. ವಿ. ಓಣಂ ಹಬ್ಬವನ್ನು ಕೇರಳದಲ್ಲಿ ಯಾಕೆ ಆಚರಿಸುತ್ತಾರೆ ಎನ್ನುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ‘ಕೇರಳದಲ್ಲಿ ಆಚರಿಸುವ ಅತೀ ದೊಡ್ಡ ಹಬ್ಬ ಓಣಂ ಆಗಿದ್ದು ಇದನ್ನು ಹತ್ತು ದಿನ ಆಚರಿಸುತ್ತಿದ್ದು ಹಬ್ಬದಲ್ಲಿ ವಿಶೇಷವಾಗಿ 24 ಬಗೆಯ ಖಾದ್ಯಗಳನ್ನು ಸವಿಯುದರ ಜತೆಗೆ ಮಹಾಬಲಿ ಚಕ್ರವರ್ತಿಯನ್ನು ವಿಶೇಷವಾಗಿ ಗೌರವಿಸುವುದು ಸಂಪ್ರದಾಯವಾಗಿದೆ ಎಂದು ತಿಳಿಸಿ ಓಣಂ ಹಬ್ಬದ ಶುಭಾಶಯವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಪ್ರಾಪ್ತೆ ಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೊ ಹರಿಬಿಟ್ಟ ಯುವಕ

Posted by Vidyamaana on 2024-08-13 20:58:10 |

Share: | | | | |


ಅಪ್ರಾಪ್ತೆ ಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೊ ಹರಿಬಿಟ್ಟ ಯುವಕ

ಧಾರವಾಡ: ಅಪ್ರಾಪ್ತೆ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ (Physical abuse) ಎಸಗಿರುವ ಘಟನೆ ಧಾರವಾಡ ನಗರದಲ್ಲಿ ನಡೆದಿದೆ. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಅದನ್ನು ವಿಡಿಯೊ ಮಾಡಿಕೊಂಡಿದ್ದಾನೆ.ಆಗಸ್ಟ್ 8 ರಂದು ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ರೀಲ್ಸ್‌ ಹುಚ್ಚಿಗೆ ಮತ್ತೊಂದು ಬಲಿ: ರೈಲು ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಸಾವು. ಭಯಾನಕ ವಿಡಿಯೋ ಇಲ್ಲಿದೆ ನೋಡಿ

Posted by Vidyamaana on 2023-10-01 15:23:19 |

Share: | | | | |


ರೀಲ್ಸ್‌ ಹುಚ್ಚಿಗೆ ಮತ್ತೊಂದು ಬಲಿ: ರೈಲು ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಸಾವು. ಭಯಾನಕ ವಿಡಿಯೋ ಇಲ್ಲಿದೆ ನೋಡಿ

ಭಯಾನಕ ವಿಡಿಯೋ ಇಲ್ಲಿದೆ ನೋಡ


ಉತ್ತರಪ್ರದೇಶ : ರೀಲ್ ವ್ಯಾಮೋಹವು ಮತ್ತೊಂದು ಸಾವಿಗೆ ಕಾರಣವಾದ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ರೈಲು ಬರುವುದನ್ನು ಗಮನಿಸದ ಯುವಕನೊಬ್ಬ ರೈಲ್ವೇ ಹಳಿಗಳ ಮೇಲೆ ಅಜಾಗರೂಕತೆಯಿಂದ ರೀಲ್‌ ಮಾಡುವಾಗ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಘಟನೆಯ ಭಯಾನಕ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.14 ವರ್ಷದ ಫರ್ಮಾನ್ ರೈಲ್ವೆ ಹಳಿಗಳ ಮೇಲೆ ನಡೆದು ರೈಲಿಗೆ ಸಿಲುಕಿದ ಕ್ಷಣವನ್ನು ಗೊಂದಲದ ವೀಡಿಯೊ ರೆಕಾರ್ಡ್ ಮಾಡಲಾಗಿದೆಫರ್ಮಾನ್ ರೈಲು ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿರುವುದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಕೆಲವೇ ಸೆಕೆಂಡ್‌ನಲ್ಲಿ ಢಿಕ್ಕಿ ಹೊಡೆಯುವುದು ಕಂಡುಬಂದಿದೆ.

Readmore.....

ಭಯಾನಕ ವಿಡಿಯೋ ಇಲ್ಲಿದೆ ನೋಡಿ

ಯುವಕರು ಸಾಮಾಜಿಕ ಮಾಧ್ಯಮದ ಕ್ರೇಜ್‌ಗಾಗಿ ಅಜಾಗರೂಕ ಕೃತ್ಯವನ್ನು ಚಿತ್ರೀಕರಿಸುವುದನ್ನು ತೋರಿಸಿದ ರೀಲ್ ಸೆಕೆಂಡುಗಳ ನಂತರ ತೀವ್ರ ತಿರುವು ಪಡೆದುಕೊಂಡಿತು. ಅವನು ಹಳಿಗಳ ಹತ್ತಿರ ಹೆಜ್ಜೆ ಹಾಕುತ್ತಿದ್ದಂತೆ, ವೇಗವಾಗಿ ಬಂದ ರೈಲು ಅವನಿಗೆ ಡಿಕ್ಕಿ ಹೊಡೆದು ಮುಂದೆ ಸಾಗಿದೆ. ಅವರ ನಿರ್ಲಕ್ಷ್ಯದ ಕೃತ್ಯದಿಂದಾಗಿ ಅವರು ಸಾರಿಗೆಯಿಂದ ನಾಟಕೀಯವಾಗಿ ಕತ್ತರಿಸಲ್ಪಟ್ಟರು. ಅಪಘಾತದ ವೇಳೆ ಆಘಾತಕ್ಕೊಳಗಾದ ಜಾಗದಲ್ಲಿ ಫರ್ಮಾನ್‌ನ ಸ್ನೇಹಿತ ಎಂದು ಹೇಳಲಾದ ಇನ್ನೊಬ್ಬ ವ್ಯಕ್ತಿಯನ್ನು ವೀಡಿಯೊ ರೆಕಾರ್ಡ್ ಮಾಡಿದೆ.

Recent News


Leave a Comment: