ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಅ.6 ಮತ್ತು 7 ರಂದು ಮೂಡಬಿದ್ತೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ

Posted by Vidyamaana on 2023-10-05 21:55:47 |

Share: | | | | |


ಅ.6 ಮತ್ತು 7 ರಂದು ಮೂಡಬಿದ್ತೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ


ಪುತ್ತೂರು: ಅ.7 ಮತ್ತು 7 ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು ವಿದ್ಯಾವಂತ ಯುವಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.

ಉದ್ಯೋಗ ಮೇಳದಲ್ಲಿ 204 ಕ್ಕೂ ಮಿಕ್ಕಿ ವಿವಿಧ ಕಂಪೆನಿಗಳು ಭಾಗವಹಿಸುತ್ತಿದ್ದು ಮೇಳದಲ್ಲಿ ಭಾಗವಹಿಸುವ ಸಾವಿರಾರು‌ಮಂದಿಗೆ ಉದ್ಯೋಗ ದೊರೆಯಲಿದೆ. ಗ್ರಾಮೀಣ ಭಾಗದ ನಿರುದ್ಯೋಗಿ ವಿದ್ಯಾವಂತ ಯುವಕರು ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿಗ್ರಿ ಕಾಲೇಜು, ಐಟಿಐ ತರಬೇತಿ ಕೇಂದ್ರಗಳು, ಡಿಪ್ಲೋಮಾ ಕೋರ್ಸು‌ಮಾಡಿದವರು,ಬಿ ಎ ,ಬಿಕಾಂ, ಬಿಎಸ್ಸಿ ಹಾಗೂ ಇನ್ನಿತರ ಪಧವೀದರರು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಸಣ್ಣ ಉದ್ಯೋಗದಿಂದ ಆರಂಭಗೊಂಡು ದೊಡ್ಡ ಹುದ್ದೆಯವರೆಗೂ ಮೇಳದಲ್ಲಿ ಆಯ್ಕೆಗಳು ನಡೆಯುತ್ತದೆ ಎಂದು ಹೇಳಿದರು.


ದ ಕ ಜಿಲ್ಲೆಯವರು ಹಿಂದೇಟು ಹಾಕುತ್ತಿದ್ದಾರೆ: ವಿವೇಕ ಆಳ್ವ

ಸಭೆಯಲ್ಲಿ‌ಮಾತನಾಡಿದ‌ ಉದ್ಯೋಗ‌ಮೇಳದ ರುವಾರಿ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರಾದ ವಿವೇಕ ಆಳ್ವರವರು ಮಾತನಾಡಿ ದ ಕ ಮತ್ತು ಉಡುಪಿ ಜಿಲ್ಲೆಯವರು ಉದ್ಯೋಗ ಮೇಳಕ್ಕೆ ಬರುವುದು ಅಪರೂಪ ಎಂಬಂತಾಗಿದೆ. ಸಾವಿರಾರು ಮಂದಿ ಭಾಗವಹಿಸುವ ಮೇಳದಲ್ಲಿ‌ಬೆರಳೆಣಿಕೆಯ‌ ಮಂದಿ ಮಾತ್ರ ನಮ್ಮ‌ಜಿಲ್ಲೆಯವರು ಭಾಗವಹಿಸುತ್ತಾರೆ. ಸಾವಿರಾರು ಮಂದಿ ಮೇಳದಲ್ಲಿ ಭಾಗವಹಿಸಿ ಉದ್ಯೋಗ ಪಡೆಯುತ್ತಿದ್ದಾರೆ. ಪ್ರತಿಷ್ಟಿತ ಕಂಪೆನಿಗಳು ಭಾಗವಹಿಸುವ ಕಾರಣ ಒಳ್ಳೆಯ ಉದ್ಯೋಗ ಸಿಗುತ್ತದೆ ಎಂದು ಹೇಳಿದರು. ವಿದ್ಯಾವಂತ ಉದ್ಯೋಗ ಆಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಿ ಎಂದು‌ಮನವಿ ಮಾಡಿದರು. ಕೆಲಸ ಇಲ್ಲ ಎಂಬುದು ಸುಳ್ಳು ನಮಗೆ ಕೆಲಸ ಮಾಡಲು ಇಚ್ಚಾಶಕ್ತಿ ಇದ್ದರೆ ಸಾಕಷ್ಟು ಕೆಲಸಗಳು ಇದೆ. ವರ್ಷದ 365 ದಿನವೂ ಆಳ್ವಾಸ್ ಸಂಸ್ಥೆಯಲ್ಲಿ ಉದ್ಯೋಗ ನೋಂದಣಿ ನಡೆಯುತ್ತಿರುತ್ತದೆ ಎಂದು ಹೇಳಿದರು.


ಮೆಕ್ಯಾನಿಕ್ ,ಇಲೆಕ್ಟ್ರಿಕ್,ಐಟಿಐ, ಡಿಪ್ಲೊಮಾ ; ,2000 ಹುದ್ದೆಗಳು ಇದೆ.  ಈ ಕೋರ್ಸುಗಳನ್ನು‌ಮಾಡಿದವರಿಗೆ ಸೇರಿದಂತೆ ಇತರ ಡಿಗ್ರಿ, ಮಾಸ್ಟರ್ ಡಿಗ್ರಿಯಾದವರಿಗೂ ಸಾವಿರಾರು ಉದ್ಯೋಗ ಇದ್ದು, ವಿದೇಶಿ ಕಂಪೆನಿಗಳು‌ಮೇಳದಲ್ಲಿ ಭಾಗವಹಿಸುತ್ತಿದೆ ಎಂದು ವಿವೇಕ್ ಆಳ್ವ ತಿಳಿಸಿದರು.



ಕರೆಂಟ್ ಕಂಬ ಹತ್ತುವ ತರಬೇತಿ



ಪುತ್ತೂರು ಸೇರಿದಂತೆ ಜಿಲ್ಲೆಯಾಧ್ಯಂತ ಮೆಸ್ಕಾಂ ನಲ್ಲಿ ಕಾರ್ಮಿಕರ ಕೊರತೆ ಇದೆ. ಇದಕ್ಕಾಗಿ ಆಸಕ್ತಿ ಇರುವ ಮಂದಿಗೆ ಕರೆಂಟ್ ಕಂಬ ಹತ್ತುವ ತರಬೇತಿಯನ್ನು ನೀಡಿ ಅವರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಶಾಸಕರಾದ ಅಶೋಕ್ ರೈ ಹೇಳಿದರು. ಪೊಲೀಸ್ ಹುದ್ದೆಗೆ ಕೆಲವೇ ತಿಂಗಳಲ್ಲಿ ನೇಮಕಾತಿ ನಡೆಯಲಿದ್ದು ಪೊಲೀಸ್ ಹುದ್ದೆಗೂ ತರಬೇತಿ ನೀಡುವ ಕೆಲಸ ನಮ್ಮ ಟ್ರಸ್ಟ್ ವತಿಯಿಂದ ನಡೆಯಲಿದೆ ಎಂದು ಶಾಸಕರು ಹೇಳಿದರು.



ಉಚಿತ ಬಸ್ ವ್ಯವಸ್ಥೆ


ಆಳ್ವಾಸ್ ನಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ ಉಚಿತ ಬಸ್ ವ್ಯವಸ್ಥೆ ಇರುತ್ತದೆ. ಅ.6 ರಂದು ಬೆಳಿಗ್ಗೆ 7 ಗಂಟೆಗೆ ಪುತ್ತೂರು ಶಾಸಕರ ಕಚೇರಿಯಿಂದ ಬಸ್ ಹೊರಡಲಿದೆ. ಆಕಾಂಕ್ಷಿಗಳು ಶಾಸಕರ ಕಚೇರಿಯನ್ನು ಭೇಟಿಯಾಗಿ ಹೆಸರು‌ನೋಂದಾವಣೆ ಮಾಡಿಕೊಳ್ಳಬಹುದು ಎಂದು‌ಶಾಸಕರು ತಿಳಿಸಿದರು.


ಕಾರ್ಯಕ್ರಮದಲ್ಲಿ ಮೇಳದ ಸಂಘಟಕರಾದ ಶ್ರೀನಿವಾಸ್, ಪುತ್ತೂರು ಐಟಿಐ ಪ್ರಚಾರ್ಯರಾದ ಪ್ರಕಾಶ್ ಪೈ, ಅಕ್ಷಯ ಕಾಲೇಜಿನ ಸಂಪತ್,ಫಿಲೋಮಿನಾ ಕಾಲೇಜಿನ ಭಾರತಿ ಎಸ್ ರೈ, ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಅಪ್ಪು,ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಶ್ರೀಕಾಂತ್,ವಿಟ್ಲ ಸರಕಾರಿ ಪ್ರಥಮ ಕಾಲೇಜಿನ ಪದ್ಮನಾಭ, ಬೆಟ್ಡಂಪಾಡಿ ಕಾಲೇಜಿನಡಾ. ಕಾಂತೇಶ್,ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಗೋಪಾಲಕೃ್ಷ್ಣ ಉಪಸ್ಥಿತರಿದ್ದರು.

ರೈ ಎಜುಕೇಶನಲ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ, ಸದಸ್ಯರುಗಳಾದ ರಿತೇಶ್ ಶೆಟ್ಟಿ,  ಜಯಪ್ರಕಾಶ್ ಬದಿನಾರ್, ಯೋಗೀಸ್ ಸಾಮಾನಿ, ರಾಕೇಶ್ ರೈ ಕುದ್ಕಾಡಿ ಉಪಸ್ಥಿತರಿದ್ದರು. ಟ್ರಸ್ಟ್ ನ ಮುಖ್ಯಸ್ಥರಾದ ನಿಹಾಲ್ ಶೆಟ್ಟಿ ಸ್ವಾಗತಿಸಿದರು.‌ಮಹಮ್ಮದ್ ಬಡಗನ್ನೂರು ವಂದಿಸಿದರು.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ಭಕ್ತರಿಂದ ಸಮರ್ಪಣೆಯಾದ ಹೊರೆಕಾಣಿಕೆ

Posted by Vidyamaana on 2024-04-21 20:43:32 |

Share: | | | | |


ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ಭಕ್ತರಿಂದ ಸಮರ್ಪಣೆಯಾದ ಹೊರೆಕಾಣಿಕೆ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವೈಭವದ ಬ್ರಹ್ಮಕಲಶೋತ್ಸವಕ್ಕೆ ಶನಿವಾರ ಸಂಜೆ ಹೊರೆ ಕಾಣಿಕೆ ಸಮರ್ಪಣೆ ಮೂಲಕ ಚಾಲನೆ ನೀಡಲಾಯಿತು.

ಶನಿವಾರ ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಹೊರೆಕಾಣಿಕೆ ಮೆರವಣಿಗೆ ಶ್ರೀ ದೇವಸ್ಥಾನದಕ್ಕೆ ತೆರಳಿತು. 

ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ತೆಂಗಿಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಶಾಸಕರ ಇಂದಿನ ಕಾರ್ಯಕ್ರಮ (ಜೂ 2)

Posted by Vidyamaana on 2023-06-02 03:15:32 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ (ಜೂ 2)

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಜೂನ್ 2ರಂದು ಮಧ್ಯಾಹ್ನದ‌ ಬಳಿಕ ಕುಡಿಯುವ ನೀರಿನ‌ ವಿಷಯದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ

ಮಧ್ಯಾಹ್ನ 3 ಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ.

ಸಂಜೆ 5.30ಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಸಭೆ.

ಬಿಕಾಂ ಪದವೀಧರನ ಆಯುರ್ವೇದಿಕ್ ಕ್ಲಿನಿಕ್ ಮೇಲೆ ದಾಳಿ – ಕ್ಲಿನಿಕ್ ಸೀಝ್

Posted by Vidyamaana on 2023-12-17 16:18:09 |

Share: | | | | |


ಬಿಕಾಂ ಪದವೀಧರನ ಆಯುರ್ವೇದಿಕ್ ಕ್ಲಿನಿಕ್ ಮೇಲೆ ದಾಳಿ – ಕ್ಲಿನಿಕ್ ಸೀಝ್

ಉಡುಪಿ: ಆರೋಗ್ಯ ಇಲಾಖೆಯ ಅಧಿಕಾರಿಗಳು ರಾಜ್ಯದ ವಿವಿಧ ಜಿಲ್ಲೆಗಳ ಆಸ್ಪತ್ರೆ, ಕ್ಲಿನಿಕ್, ಲ್ಯಾಬ್ ಗಳ ಮೇಲೆ ದಾಳಿ ನಡೆಸಿ ಬಿಕಾಂ ಪದವೀಧರ ‘ಆಯುರ್ವೇದಿಕ್ ಡಾಕ್ಟರ್’ನ್ನು ಅರೆಸ್ಟ್‌ ಮಾಡಿದ್ದಾರೆ. ದಾಳಿಯಲ್ಲಿ ಇತರ ನಕಲಿ ವೈದ್ಯರು ಸಿಕ್ಕಿ ಬಿದ್ದಿದ್ದಾರೆ ಎಂದೂ ವರದಿಯಾಗಿದೆ.

ಉಡುಪಿ ಜಿಲ್ಲೆಯಲ್ಲಿ 7 ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಬಿಕಾಂ ಪದವೀಧರನೇ ಆಯುರ್ವೇದಿಕ್, ಆಲೋಪತಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದುದು ಬಯಲಾಗಿದೆ.


ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುಂಜಾಲು ಎಂಬಲ್ಲಿ ಆಯುರ್ವೇದಿಕ್ ಕ್ಲಿನಿಕ್ ಮೇಲೆ ದಾಳಿ ನಡೆಸಿದಾಗ ಬಿಕಾಂ ಪದವೀಧರನಾಗಿರುವ ಸಂದೇಶ್ ರಾವ್ ತಾನು ಆಯುರ್ವೇದಿಕ್ ವೈದ್ಯ ಎಂದು ಆಯುರ್ವೇದಿಕ್ ಸೆಂಟರ್ ತೆಗೆದಿರುವುದು ಪತ್ತೆಯಾಗಿದೆ.ಆಯುರ್ವೇದಿಕ್ ಸೆಂಟರ್ ಸೀಜ್ ಮಾಡಿರುವ ಅಧಿಕಾರಿಗಳು ಬ್ರಹ್ಮಾವರ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ

ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬಂದು ನಿಂತಿದೆ ಆಶೀರ್ವಾದದ ರೂಪದಲ್ಲಿ

Posted by Vidyamaana on 2023-11-30 14:59:40 |

Share: | | | | |


ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬಂದು ನಿಂತಿದೆ ಆಶೀರ್ವಾದದ ರೂಪದಲ್ಲಿ

ಪುತ್ತೂರು: ಹೊಸ ಮನೆ ನಿರ್ಮಿಸಬೇಕು ಎನ್ನುವದು ಎಲ್ಲರ ಕನಸು. ಆ ಕನಸು ನಿಮಗೆ ಅದೃಷ್ಟವಾಗಿ ಒಲಿದು ಬಂದರೆ ಹೇಗಿರಬಹುದು.

ಹೌದು, ಇಂತಹದ್ದೊಂದು ಅವಕಾಶ ನಿಮ್ಮ ಮುಂದಿದೆ. ಆಶೀರ್ವಾದ ಎಂಟರ್ಪ್ರೈಸಸ್ ಇಂತಹ ಹೊಸ ಅವಕಾಶವೊಂದನ್ನು ನಿಮ್ಮ ಮುಂದಿಟ್ಟಿದೆ. ಅದು ಮಾತ್ರ ಅಲ್ಲದೆ ಪ್ರತಿ ತಿಂಗಳು ಕಾರು, ಬೈಕ್, ಚಿನ್ನ, ನಗದು ಜೊತೆಗೆ ಹತ್ತು ಹಲವಾರು ಅದೃಷ್ಟಕರ ಬಹುಮಾನವನ್ನು ಆಶೀರ್ವಾದ ಲಕ್ಕಿ ಸ್ಕೀಮ್ ಮೂಲಕ ನೀವು ಪಡೆದುಕೊಳ್ಳಬಹುದು.



ಪ್ರತಿ ತಿಂಗಳು ೫೦ ಆಕರ್ಷಕ ಬಹುಮಾನವನ್ನು ಸಹ ನೀವು ಪಡೆದುಕೊಳ್ಳಬಹುದು. ತಿಂಗಳ ಉಳಿತಾಯದಲ್ಲಿ ೧೦೦೦ ರೂ.ಗಳಂತೆ ೨೦ ತಿಂಗಳು ಪಾವತಿಸಿದರೆ ಆ ಅದೃಷ್ಟಶಾಲಿಗಳು ನೀವಾಗಬಹುದು.

ಹಣ ಪಾವತಿ ಮಾಡಿದ ಪ್ರತಿ ಸದಸ್ಯರಿಗೂ ಅವರು ಕಟ್ಟಿರುವ ಮೊತ್ತಕ್ಕೆ ಬಹುಮಾನವಾಗಿ ಫ್ರಿಡ್ಜ್, ವಾಷಿಂಗ್ ಮೆಷಿನ್, ಟಿವಿ, ಇನ್ವರ್ಟರ್, ಸೋಫಾ, ಹೋಮ್ ಥಿಯೇಟರ್, ಎ/ಸಿ ಹಾಗೂ ಇತರೆ ಬಹುಮಾನಗಳನ್ನು ಪಡೆದುಕೊಳ್ಳಬಹುದು.



ಈಗಾಗಲೇ ಪುತ್ತೂರು, ಸುಳ್ಯ, ಮಡಿಕೇರಿ, ಕಾರವಾರ, ಮುಂಬೈ, ಉಡುಪಿ, ಮೈಸೂರು, ಕಾಸರಗೋಡು ಮುಂತಾದ ಸ್ಥಳಗಳಲ್ಲಿ ಆಶೀರ್ವಾದ ಎಂಟರ್ಪ್ರೈಸಸ್ ಈ ಯೋಜನೆ ಮೂಲಕ ಅದೃಷ್ಟಾಶಾಲಿಗಳನ್ನು ತಲುಪುತ್ತಿದೆ.

ಈ ಎಲ್ಲಾ ಡ್ರಾಗಳು ಆಶೀರ್ವಾದ್ ಎಂಟರ್ ಪ್ರೈಸಸ್ ಕಚೇರಿಯ ಮುಂಬಾಗದಲ್ಲೇ ನಡೆಯಲಿದೆ‌. ಅಲ್ಲದೇ ಸಂಸ್ಥೆಯ ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡಲಿದೆ. ಡ್ರಾ ಫಲತಾಂಶವನ್ನೂ ವ್ಹಾಟ್ಸ್ ಆ್ಯಪ್ ಮೂಲಕ ಎಲ್ಲಾ ಗ್ರಾಹಕರಿಗೆ ತಲುಪಿಸಲಾಗುವುದು. ಪತ್ರಿಕೆ ಹಾಗೂ ವೆಬ್ ನ್ಯೂಸ್ ಗಳಲ್ಲಿಯೂ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


1st FLOOR MOIDEEN COMOLEX  OPP SHUBHA STORE DARBE PUTTUR

+9170226 46143 - +91 70226 45143

ಆಶೀರ್ವಾದ   ಲಕ್ಕಿ ಸ್ಕೀಮ್

 ಸೇರಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಾಟ್ಸಪ್ ಲಿಂಕ್ ಬಳಸಿ

https://chat.whatsapp.com/E3SL2vBIhRd0TewMCNekql

ಎಚ್.ಡಿ.ಕೆ ಹುಟ್ಟುಹಬ್ಬ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ ಜೆಡಿಎಸ್

Posted by Vidyamaana on 2022-12-17 07:33:16 |

Share: | | | | |


ಎಚ್.ಡಿ.ಕೆ ಹುಟ್ಟುಹಬ್ಬ  ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ ಜೆಡಿಎಸ್

ಎಚ್.ಡಿ.ಕೆ ಹುಟ್ಟುಹಬ್ಬ: ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ ಜೆಡಿಎಸ್


ಪುತ್ತೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ೬೪ನೆಯ ಹುಟ್ಟು ಹಬ್ಬದ ಪ್ರಯುಕ್ತ ಶುಕ್ರವಾರ ಜೆಡಿಎಸ್ ಕಾರ್ಯಕರ್ತರು ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.

ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಸಮಿತಿ ಅಧ್ಯಕ್ಷ ಅಶ್ರಫ್ ಕಲ್ಲೇಗ ಮಾತನಾಡಿ, ಜೆಡಿಎಸ್ ವರಿಷ್ಠಿರಾದ ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ಬಡವರ ಹಾಗೂ ರೋಗಿಗಳ ಬಗ್ಗೆ ಬಹಳಷ್ಟು ಕಾಳಜಿ ವಹಿಸಿದ್ದರು. ಇಂದು ಅವರ ೬೪ನೆಯ ಹುಟ್ಟು ಹಬ್ಬವಾಗಿದ್ದು, ಆ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುತ್ತಿದ್ದೇವೆ ಎಂದರು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ, ವೈದ್ಯ ಡಾ. ಯದುರಾಜ್ ಡಿ.ಕೆ., ಜೆಡಿಎಸ್‌ನ ಮುಖಂಡರಾದ ಇಬ್ರಾಹಿಂ ಗೋಳಿಕಟ್ಟೆ, ಐ.ಸಿ. ಕೈಲಾಸ್, ಅಬ್ದುಲ್ಲ ಕೆದುವಡ್ಕ, ನಝೀರ್ ಬಪ್ಪಳಿಗೆ, ಪದ್ಮಾ ಮಣಿಯನ್, ಜಯರಾಜ್ ಅಮೀನ್, ಶಿವು ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.



Leave a Comment: