ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಸುದ್ದಿಗಳು News

Posted by vidyamaana on 2024-07-03 19:28:29 |

Share: | | | | |


ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು:  ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.

ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.

ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.

 Share: | | | | |


BREAKING: ಈಶ್ವರಪ್ಪನ ಪುತ್ರನಿಗೂ ಶುರುವಾಯ್ತು ಅಶ್ಲೀಲ ಸಿಡಿ ಭಯ!:ಅಶ್ಲೀಲ ವಿಡಿಯೊ ಪ್ರಸಾರಕ್ಕೆ ಕೋರ್ಟ್ ನಿರ್ಬಂಧ

Posted by Vidyamaana on 2024-05-01 04:35:20 |

Share: | | | | |


BREAKING: ಈಶ್ವರಪ್ಪನ ಪುತ್ರನಿಗೂ ಶುರುವಾಯ್ತು ಅಶ್ಲೀಲ ಸಿಡಿ ಭಯ!:ಅಶ್ಲೀಲ ವಿಡಿಯೊ ಪ್ರಸಾರಕ್ಕೆ ಕೋರ್ಟ್ ನಿರ್ಬಂಧ

ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ದೃಶ್ಯಾವಳಿಗಳು ವೈರಲ್ ಆಗಿವೆ. ಈ ಸಂಬಂಧ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೂ ಆದೇಶಿಸಿದೆ. ಈ ಬೆನ್ನಲ್ಲೇ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಪುತ್ರ ಕೆ.ಇ ಕಾಂತೇಶ್ ಗೂ ಅಶ್ಲೀಲ ಸಿಡಿ ಭೀತಿ ಎದುರಾಗಿದೆ.ಹೀಗಾಗಿ ಅವರು ನಿರ್ಬಂಧಕಾಜ್ಞೆಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಬೆನ್ನಲ್ಲೇ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅವರ ಪುತ್ರ ಕೆ.ಇ ಕಾಂತೇಶ್ ಅವರಿಗೂ ಅಶ್ಲೀಲ ಸಿಡಿ ಭೀತಿ ಎದುರಾಗಿದೆ.

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

Posted by Vidyamaana on 2024-05-08 17:47:42 |

Share: | | | | |


ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79ವ) ಮೇ 8ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೇ.08 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ

Posted by Vidyamaana on 2023-05-07 10:12:49 |

Share: | | | | |


ಮೇ.08 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ

ಬೆಂಗಳೂರು: ರಾಜ್ಯದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶವು ಮೇ.08ರಂದು (ಸೋಮವಾರ) ಬೆಳಗ್ಗೆ 10 ಗಂಟೆಗೆ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪ್ರಕಟಣೆ ನೀಡಿದೆ. ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯೂ ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ನಡೆದಿತ್ತು. ಸೋಮವಾರ ಬೆಳಗ್ಗೆ 10 ಗಂಟೆಗೆ ಫಲಿತಾಂಶ ಪ್ರಕಟವಾಗಲಿದ್ದು, 11 ಗಂಟೆಯ ಬಳಿಕ ಜಾಲತಾಣದಲ್ಲಿ ವೀಕ್ಷಿಸಬಹುದು.

ರಾಜ್ಯ ಸರ್ಕಾರ ದಿಂದ ಕೋವಿಡ್ ಸೋಂಕಿ ನಿಂದ ಮೃತಪಟ್ಟವರ ಅಂತ್ಯ ಕ್ರಿಯೆ ಬಗ್ಗೆ ಮಹತ್ವದ ಆದೇಶ

Posted by Vidyamaana on 2024-01-11 16:45:44 |

Share: | | | | |


ರಾಜ್ಯ ಸರ್ಕಾರ ದಿಂದ ಕೋವಿಡ್ ಸೋಂಕಿ ನಿಂದ ಮೃತಪಟ್ಟವರ ಅಂತ್ಯ ಕ್ರಿಯೆ ಬಗ್ಗೆ ಮಹತ್ವದ ಆದೇಶ

ಬೆಂಗಳೂರು : ಕೋವಿಡ್-19 ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆ ನಡೆಸುವ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶವನ್ನು ಹೊರಡಿಸಿದೆ.ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದು, ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಗಳ ಅನ್ವಯ ರಾಜ್ಯದ ಜಿಲ್ಲೆಗಳಲ್ಲಿ ಹಾಗೂ ಬಿ ಬಿ ಎಂ ಪಿ ವ್ಯಾಪ್ತಿಯಲ್ಲಿ ಕೋವಿಡ್ 19 ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆಯನ್ನು ಸಾಮಾನ್ಯ ಚಿತಾಗಾರ / ಸ್ಮಶಾನ/ ರುದ್ರಭೂಮಿಯಲ್ಲಿ ನಡೆಸುವಂತೆ ಸೂಚಿಸಿದೆ.ಮುಂದುವರೆದು, ಕೋವಿಡ್ 19 ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆಯನ್ನು ನಡೆಸಲು ಬಿ ಬಿ ಎಂ ಪಿ ವ್ಯಾಪ್ತಿಯಲ್ಲಿ ಹಾಗೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಚಿತಾಗಾರ / ಸ್ಮಶಾನ/ ರುದ್ರಭೂಮಿಗಳಲ್ಲಿ ಅಂತ್ಯಕ್ರಿಯೆಗೆ ತರುವ ಮೃತದೇಹಗಳನ್ನು ಚಿತಾಗಾರ / ಸ್ಮಶಾನದ ಸಿಬ್ಬಂದಿಯು ನಿರಾಕರಿಸದೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು (N -95 ಮಾಸ್ಕ್, ಗೊವ್ ಹಾಗೂ ಪಿಪಿಇ ಕಿಟ್ ಧರಿಸುವುದು ಮತ್ತು ಅಂತ್ಯಕ್ರಿಯೆ ನಡೆಸಿದ ನಂತರ ಅವುಗಳನ್ನು ಮಾರ್ಗಸೂಚಿಯಂತೆ ವಿಲೇವಾರಿ ಮಾಡುವುದು) ಅಂತ್ಯಕ್ರಿಯೆಯನ್ನು ನಡೆಸಲು ತಿಳಿಸುವಂತೆ ಈ ಮೂಲಕ ಸೂಚಿಸಿದೆ.


ಈ ನಿಟ್ಟಿನಲ್ಲಿ, ಬಿ, ಬಿ.ಎಂ.ಪಿ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾಡಳಿತಗಳು ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಿದೆ.

ಮುಳಿಯ ಮಾನ್ಸೂನ್ ಧಮಾಕ ಇಂದೇ ಕೊನೆ

Posted by Vidyamaana on 2023-08-31 06:39:36 |

Share: | | | | |


ಮುಳಿಯ ಮಾನ್ಸೂನ್ ಧಮಾಕ ಇಂದೇ ಕೊನೆ

ಪುತ್ತೂರು: ಮುಂಗಾರಿನ ಸಿಂಚನದೊಂದಿಗೆ ಆರಂಭಗೊಂಡ ಮುಳಿಯ ಮಾನ್ಸೂನ್ ಧಮಾಕ ಇಂದು ಅಂದರೆ ಆಗಸ್ಟ್ 31ರಂದು ಕೊನೆಯಾಗಲಿದೆ.

ಮುಂಗಾರು ಮಳೆಯ ಸಂಭ್ರಮವನ್ನು ಇಮ್ಮಡಿಗೊಳಿಸಿ ಮುಳಿಯ ಜ್ಯುವೆಲ್ಸ್’ನೊಂದಿಗೆ ಎನ್ನುವ ಸಾಲಿನೊಂದಿಗೆ ಗ್ರಾಹಕರ ಮುಂದೆ ಬಂದ ಹಬ್ಬಕ್ಕೆ ಉತ್ತಮ ಸ್ಪಂದನೆ ದೊರಕಿದೆ. ಪುತ್ತೂರು ಹಾಗೂ ಬೆಳ್ತಂಗಡಿಯ ಮುಳಿಯ ಶೋರೂಂಗೆ ಆಗಮಿಸಿದ ಗ್ರಾಹಕರು, ಮುಳಿಯ ಮಾನ್ಸೂನ್ ಧಮಾಕದ ವಿಶೇಷ ಆಫರ್’ಗಳಿಗೆ ಮನಸೋತ ನಿದರ್ಶನ ಇದೆ.

ಆಯ್ದ ಆಭರಣಗಳ ಮೇಲೆ ಕಾಸ್ಟ್ ಪ್ರೈಸ್ ಸೇಲ್, ನಿಮ್ಮ ಹಳೆಯ ಚಿನ್ನಾಭರಣಗಳನ್ನು ಹೊಸ 916 ಆಭರಣಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ಅವಕಾಶವಿದ್ದು ಪ್ರತಿ ಗ್ರಾಂ ಮೇಲೆ 100 ರೂ.ಗೂ ಅಧಿಕ ಮೊತ್ತವನ್ನು ಪಡೆಯಬಹುದು. ಇದಲ್ಲದೇ, ವಿಎ ಚಾರ್ಜಸ್ ಮೇಲೆ ಶೇ. 50ರವರೆಗೆ, ವಜ್ರದ ಮೌಲ್ಯದ ಮೇಲೆ ಶೇ, 10ರವರೆಗೆ, ಬೆಳ್ಳಿ ಆಭರಣಗಳ ಮೇಲೆ ಶೇ. 5ರವರೆಗೆ ರಿಯಾಯಿತಿ ಇದೆ ಎಂದು ಪ್ರಕಟಣೆ ತಿಳಿಸಿದೆ.

ಅಂದಹಾಗೇ, ಈ ಎಲ್ಲಾ ಆಫರ್’ಗಳು ಇಂದು ಸಂಜೆಯವರೆಗೆ ಮಾತ್ರ ಲಭ್ಯವಿದೆ.

ಸಂಸತ್ತಿನೊಳಗೆ ಹೋಗಲು ವಿಸಿಟರ್ಸ್ ಪಾಸ್ ಪಡೆಯುವುದು ಹೇಗೆ? ಪ್ರೋಟೋಕಾಲ್​​ಗಳು ಹೇಗೆ?

Posted by Vidyamaana on 2023-12-13 20:12:38 |

Share: | | | | |


ಸಂಸತ್ತಿನೊಳಗೆ ಹೋಗಲು ವಿಸಿಟರ್ಸ್ ಪಾಸ್ ಪಡೆಯುವುದು ಹೇಗೆ? ಪ್ರೋಟೋಕಾಲ್​​ಗಳು ಹೇಗೆ?

 ಸಂಸತ್​​​​ ಒಳಗೆ ಬಂದು ಅಶ್ರುವಾಯು ಸಿಡಿಸಿದ ಮೈಸೂರಿನ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಮೈಸೂರು ಸಂಸದ ಪ್ರತಾಪ್​​​ ಸಿಂಹ ಅವರ ಪಿಎ ವಿಸಿಟರ್ಸ್ ಪಾಸ್ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ ವಿಸಿಟರ್ಸ್ ಪಾಸ್ ಪಡೆಯಬೇಕಾದರೆ ಏನು ಮಾಡಬೇಕು.ಅಲ್ಲಿಯ ಭದ್ರತಾ ಹಂತಗಳು ಹೇಗಿರುತ್ತದೆ ಎಂಬ ಮಾಹಿತಿ ಇಲ್ಲಿದೆ. Parliament security breach) ಉಂಟಾಗಿದ್ದು, ಸಾಗರ್​​ ಶರ್ಮ ಮತ್ತು ಮನೋರಂಜನ್‌​​ ಎಂಬ ಇಬ್ಬರು ಯುವಕರು ಸಂಸತ್​​​ ಅಧಿವೇಶದಲ್ಲಿ ನಿಂತ ಅಶ್ರುವಾಯು ಸಿಡಿಸಿದ ಘಟನೆ ನಡೆದಿದೆ. ಇದೀಗ ಒಟ್ಟು ನಾಲ್ಕು ಜನರನ್ನು ಬಂಧಿಸಿದ್ದಾರೆ. ಬಂಧನವಾಗಿರುವ ನಾಲ್ವರಲ್ಲಿ ಒಬ್ಬ ಮೈಸೂರಿನ ಮನೋಹರ್​​ ಎಂದು ಹೇಳಲಾಗಿದೆ. ಇವರಿಗೆ ಸಂಸತ್​​​ ಒಳಗೆ ಹೋಗಲು ಮೈಸೂರಿನ ಸಂಸದ ಪ್ರತಾಪ್​​​​ ಸಿಂಹ ಅವರ ಪಿಎ ಪಾಸ್​​​ ನೀಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಈ ವಿಸಿಟರ್ಸ್ ಪಾಸ್ ಎಂದರೇನು? ಸಂಸತ್​​ ಒಳಗೆ ಒಬ್ಬ ಸಾಮಾನ್ಯ ವ್ಯಕ್ತಿ ಹೋಗಬೇಕಾದರೆ ಯಾವೆಲ್ಲ ಕ್ರಮ ಮತ್ತು ಭದ್ರತೆಗಳನ್ನು ಪರಿಶೀಲನೆ ಮಾಡಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.


ಪಾಸ್​​ ಪಡೆಯುವುದು ಮತ್ತು ಪ್ರೋಟೋಕಾಲ್​​ಗಳು ಹೇಗೆ?


ಸಂಸತ್ತಿನ ಸಂಕೀರ್ಣದೊಳಗೆ ಹೋಗಲು ನೀಡುವ ಗ್ಯಾಲರಿ ಪಾಸ್‌ಗಳ ವಿತರಣೆಯ ನಿಯಂತ್ರಣ ಪ್ರೋಟೋಕಾಲ್​​​​​​ ಹೊಂದಿರುತ್ತದೆ. ಸಂಸತ್ತಿನ ಸದಸ್ಯರು ಮಾತ್ರ ಇದಕ್ಕೆ ಅರ್ಜಿ ಸಲ್ಲಿಸಬಹುದು, ಪತ್ರಕರ್ತರು, ಮಾಧ್ಯಮ ಮಿತ್ರರು ವೀಕ್ಷಕರಾಗಿ ಈ ಪಾಸ್ ಪಡೆಯಬಹುದು​​​ , ಪ್ರತಿ ಪಾಸ್‌ಗೆ ವಿಶಿಷ್ಟ ಐಡಿಯನ್ನು ನಿಗದಿಪಡಿಸಲಾಗಿದೆ. ಈಗಾಗಲೇ ಈ ಪಾಸ್​​​ ಐಡಿಯಲ್ಲೂ ಬೇರೆ ಬೇರೆ ವಿಧಗಳಿವೆ. ಪ್ರೇಕ್ಷಕರ ಗ್ಯಾಲರಿಗೆ ಪಾಸ್​​​​ ಪಡೆಯಬೇಕಾದರೆ ಸಂಸದ ಸಹಿ ಕೂಡ ಇರಬೇಕು. ಒಂದು ಪಾಸ್​​​ನಲ್ಲಿ ಇಬ್ಬರು ಹೋಗಬಹುದು. ಆ ಪಾಸಿನಲ್ಲಿ ಒಬ್ಬ ಮತ್ತು ಪ್ಲಸ್​​​ ಎಂದು ನಮೂದಿಸಿರುತ್ತಾರೆ. ಇನ್ನು ವಿದ್ಯಾರ್ಥಿಗಳು ಈ ಪಾಸ್​​​ ಪಡೆಯಬೇಕಾದರೆ ಶಾಲೆಯಿಂದ ಒಂದು ಪತ್ರವನ್ನು ಪಡೆದು, ಅದಕ್ಕೆ ಸಂಸದರ ಸಹಿ ಇದ್ದು, ನಂತರ ಹೋಗಬಹುದು.


ಭದ್ರತಾ ರಕ್ಷಕರ ಕಾರ್ಯ


ಸಂಸತ್ತಿನ ಒಳಗೆ ಹಲವು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ. ಇದನ್ನು ನೋಡಿಕೊಳ್ಳುವವರು ಜಂಟಿ ಕಾರ್ಯದರ್ಶಿ. ಇದರಲ್ಲಿ ದೆಹಲಿ ಪೊಲೀಸ್, ಸಂಸತ್ತು ರಕ್ಷಕರು ಮತ್ತು ವಿವಿಧ ಮಿತ್ರ ಭದ್ರತಾ ಏಜೆನ್ಸಿಗಳನ್ನು ಒಳಗೊಂಡಿರುತ್ತಾರೆ. ಇನ್ನು ಸಂಸತ್ತಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಬಹು-ಪದರದಿಂದ ವಿನ್ಯಾಸಗೊಳಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಸಾಂಪ್ರದಾಯಿಕ ಭದ್ರತಾ ಕ್ರಮಗಳನ್ನು ಒಳಗೊಂಡಿದೆ. ಇಲ್ಲಿ ಟೈರ್ ಕಿಲ್ಲರ್‌ಗಳು ಮತ್ತು ರೋಡ್ ಬ್ಲಾಕರ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ.


ಪ್ರದೇಶವಾರು ಜವಾಬ್ದಾರಿ


ಇನ್ನು ಇಲ್ಲಿ ಪ್ರದೇಶವಾರು ಜವಾಬ್ದಾರಿಗಳನ್ನು ಹೊಂದಿರುತ್ತದೆ. ಭದ್ರತಾ ಅಧಿಕಾರಿ/ಸಹಾಯಕ ನಿರ್ದೇಶಕರು (ಭದ್ರತೆ) ಸಂಸತ್ ಭವನದ ಕಟ್ಟಡದೊಳಗೆ ಹೋಗುವ ವ್ಯಕ್ತಿಗಳ ಪಾಸ್‌ಗಳನ್ನು ಸರಿಯಾಗಿ ಪರಿಶೀಲಿಸುತ್ತಾರೆ ಮತ್ತು ಅವರನ್ನು ಕೂಡ ಪರಿಶೀಲಿಸುತ್ತಾರೆ. ಯಾವುದೇ ಅನುಮಾನ ಬಂದರು ಅವುಗಳನ್ನು ಹಿರಿಯ ಅಧಿಕಾರಿಗಳಿಗೆ ಹೇಳುತ್ತಾರೆ. ಅಲ್ಲಿ ಅನುಮಾನಾಸ್ಪ ವಿಚಾರಗಳು ತಿಳಿದುಬಂದಲ್ಲಿ ತಕ್ಷಣ ಆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ.


ಸಂಸತ್​​​ ಗ್ಯಾಜೆಟ್‌, ಡೋರ್-ಫ್ರೇಮ್ ಮೆಟಲ್ ಡಿಟೆಕ್ಟರ್‌ ಅಳವಡಿಕೆ


ಭದ್ರತಾ ಶಸ್ತ್ರಾಗಾರವು ಡೋರ್-ಫ್ರೇಮ್ ಮೆಟಲ್ ಡಿಟೆಕ್ಟರ್‌ಗಳು, ಆಧುನಿಕ ಗ್ಯಾಜೆಟ್‌ಗಳು ಮತ್ತು ವಾಹನದ ಪ್ರವೇಶವನ್ನು ನಿಯಂತ್ರಿಸುವ ರೇಡಿಯೋ ಫ್ರೀಕ್ವೆನ್ಸಿ ಟ್ಯಾಗ್‌ಗಳನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಈ ಮೂಲಕ ಸಂಸತ್ತಿನಲ್ಲಿ ಸಂದರ್ಶಕನನ್ನು ಪರೀಕ್ಷಿಸಲಾಗುತ್ತದೆ ಮತ್ತು ಅವರ ಬ್ಯಾಗ್‌ಗಳನ್ನು ಕನಿಷ್ಠ ಮೂರು ಬಾರಿ ಪರಿಶೀಲಿಸಲಾಗುತ್ತದೆ. ಮೆಟಲ್ ಡಿಟೆಕ್ಟರ್‌ಗಳಲ್ಲಿ ಪರಿಶೀಲಿಸಿದ ನಂತರ ಮತ್ತೆ ಎರಡನೇ ಹಂತದ ಭದ್ರತಾ ತಪಾಸಣೆ ಮಾಡಲಾಗುತ್ತದೆ.ಸಂದರ್ಶಕರ ಗ್ಯಾಲರಿಗೆ ಪ್ರವೇಶಿಸುವ ಮೊದಲು ಮತ್ತೊಂದು ಭದ್ರತಾ ತಪಾಸಣೆ ಮಾಡಲಾಗುತ್ತದೆ.


ಶಸ್ತ್ರಾಸ್ತ್ರ ನಿಷೇಧ


ಸಂಸತ್ತಿನ ಕೆಲವು ಸದಸ್ಯರಿಗೆ ಭದ್ರತಾ ಸಿಬ್ಬಂದಿಗಳನ್ನು ನೀಡಲಾಗಿದೆ. ಆದರೆ ಅವರು ಅಧಿವೇಶನದ ಒಳಗೆ ಬರುವಂತಿಲ್ಲ. ಸಂಸತ್ ಭವನದ ಸಂಕೀರ್ಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರತಿ ಗೇಟ್‌ನಲ್ಲಿ ನಿಖರವಾದ ತಪಾಸಣೆ ನಂತರವೇ ಭದ್ರತಾ ಸಿಬ್ಬಂದಿಗೆ ಸಂಸತ್ತಿನ ಒಳಗೆ ಬರಬಹುದು


ಭದ್ರತಾ ಗುರುತಿಸುವಿಕೆ ಮತ್ತು ಸಮನ್ವಯ


ಸಂಸತ್ತಿನ ಒಳಗಿನ ಪ್ರವೇಶವು ವಿವಿಧ ಭದ್ರತಾ ಏಜೆನ್ಸಿಗಳ ನಡುವೆ ಗುರುತಿಸುವಿಕೆ ಮತ್ತು ಪರಿಶೀಲನೆ ಹಾಗೂ ಸಮನ್ವಯವನ್ನು ಸಾಧಿಸಲಾಗುತ್ತದೆ.ದೆಹಲಿ ಪೊಲೀಸ್, ಪಾರ್ಲಿಮೆಂಟ್ ಡ್ಯೂಟಿ ಗ್ರೂಪ್, ಇಂಟೆಲಿಜೆನ್ಸ್ ಬ್ಯೂರೋ, ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಮತ್ತು ನ್ಯಾಷನಲ್ ಸೆಕ್ಯುರಿಟಿ ಗಾರ್ಡ್‌ ಸಂಸತ್ತಿನ ಭದ್ರತಾ ಸೇವೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.



Leave a Comment: