Posted by vidyamaana on 2024-07-08 11:07:30 | Last Updated by Vidyamaana on 2024-07-08 11:07:30
ಮಂಗಳೂರು(ಇಟ್ಟಿಕುಳಂ): ಉಳ್ಳಾಲ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಜಳ್ ನಿಧನರಾಗಿದ್ದಾರೆ. ಕಣ್ಣೂರಿನ ಇಟ್ಟಿಕುಳಂ ನಿವಾಸಿಯಾಗಿರುವ ಹಾಗೂ ಉಳ್ಳಾಲ ಖಾಝಿಯಾಗಿದ್ದ ಇವರು ಕೂರ ತಂಜಳ್ ಎಂದೇ ಪ್ರಸಿದ್ದರಾಗಿದ್ದರು. ಅಲ್ಪಕಾಲದಿಂದ ಅನಾರೋಗ್ಯದಿಂದಿದ್ದ ಅವರು ಇಂದು ಬೆಳಿಗ್ಗೆ ನಿಧರಾಗಿದ್ದಾರೆ.
ಮೃತರು ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಇಂದು ರಾತ್ರಿ 9
ಗಂಟೆ ವೇಳೆಗೆ ಕೂರ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ. ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಇಂದು ಸಂಜೆ 5 ಗಂಟೆಗೆ ಕೂರ ಮಸೀದಿಯಲ್ಲಿ ನಡೆಯಲಿರುವ ಜನಾಝಾನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
Posted by Vidyamaana on 2024-05-03 22:21:22 |
ಮಡಿಕೇರಿ: ಅತ್ತೆಯನ್ನು ಸೊಸೆಯೇ ಹತ್ಯೆ ಮಾಡಿದ ನಿಗೂಢ ರಹಸ್ಯಕಾರಿ ಸಿನಿಮಾ ಮಾದರಿ ಘಟನೆ ಮಡಿಕೇರಿಯಲ್ಲಿ ನಡೆದಿದ್ದು, ಸಹಜ ಸಾವು ಎಂದು ನಂಬಲಾಗಿದ್ದ ಪ್ರಕರಣ ತಿರುವು ಪಡೆದುಕೊಂಡು ಕೊಲೆ ಎಂಬುದು ಬಯಲಾಗಿ ಆರೋಪಿತೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿ ತಾಲೂಕಿನ ಮರಗೋಡಿನ ನಿವಾಸಿ ಪೂವಮ್ಮ (73) ಎಂಬವರನ್ನು ಹತ್ಯೆ ಮಾಡಲಾಗಿದ್ದು, ಕೊಲೆ ಆರೋಪದಲ್ಲಿ ಸೊಸೆ ಬಿಂದು (26) ಎಂಬಾಕೆಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಳಕಿಗೆ ಬಂದಿದ್ದು ಹೇಗೆ?
ಪೂವಮ್ಮ ಅವರ ಪುತ್ರ ಶಿಕ್ಷಕರಾಗಿರುವ ಪ್ರಸನ್ನ, ಪತ್ನಿ ಬಿಂದು ಮತ್ತು ಒಂದು ವರ್ಷದ ಪುತ್ರಿಯೊಂದಿಗೆ ವಾಸವಾಗಿದ್ದರು. ಅತ್ತೆ ಮತ್ತು ಸೊಸೆ ನಡುವೆ ತೀವ್ರ ಮನಸ್ತಾಪ ಇತ್ತು ಎಂದು ತಿಳಿದು ಬಂದಿದೆ.
Posted by Vidyamaana on 2024-01-14 06:19:26 |
ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಯ್ಯಪ್ಪ ಗುಡಿಯ ಮಾಜಿ ಅರ್ಚಕ, ಸುಳ್ಯ ತಾಲೂಕಿನ ಕಲ್ಮಡ್ಕ ಎಡಕ್ಕಾನ ಗಣಪತಿ ಭಟ್ (79) ನಿಧನರಾದರು.ಮೂಲತ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಎಡಕ್ಕಾನ ನಿವಾಸಿಯಾಗಿರುವ ಗಣಪತಿ ಭಟ್ ಅವರು ಹಲವು ವರ್ಷಗಳ ಕಾಲ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿರುವ ಅಯ್ಯಪ್ಪ ಗುಡಿಯಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ಇತ್ತಿಚೆಗೆ ಅಲ್ಪಕಾಲದ ಅಸೌಖ್ಯದಿಂದ ಮಹಾವೀರ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಮೃತರು ಪತ್ನಿ ಲಕ್ಷ್ಮೀ ಭಟ್, ಪುತ್ರ ಉದ್ಯಮಿ ರಾಜಾರಾಮ್ ಭಟ್ ಎಡಕ್ಕಾನ, ಪುತ್ರಿಯರಾದ ಸಂಧ್ಯಾ ಗಣಪತಿ ಭಟ್ ಹಾಗೂ ಗೀತಾ ಗಣಪತಿ ಭಟ್ ರನ್ನು ಅಗಲಿದ್ದಾರೆ.
Posted by Vidyamaana on 2024-02-04 19:35:22 |
ಬೆಳ್ತಂಗಡಿ: ಖಾಸಗಿ ಬಸ್ಸಿನ ವೇಗದ ಅವಂತಾರದಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರು ಎಳೆದುಕೊಂಡ ಹೋದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಮಂಜೊಟ್ಟಿ ಸಮೀಪ ಫೆ.4 ರಂದು(ಇಂದು) ಸಂಜೆ ನಡೆದಿದೆ.
ಮೃತಪಟ್ಟ ಯುವಕ ಮಂಜೊಟ್ಟಿ ಸಮೀಪದ ಪರಾರಿ ನಿವಾಸಿ ಧರಣೇಂದ್ರ (24) ಎನ್ನಲಾಗಿದೆ. ಬೆಳ್ತಂಗಡಿ ಕಡೆಯಿಂದ ತನ್ನ ಮನೆ ಮಂಜೊಟ್ಟಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತಿದ್ದ ವೇಳೆ ಬೆಳ್ತಂಗಡಿ ಕಡೆಗೆ ವೇಗವಾಗಿ ಬರುತಿದ್ದ ಶ್ರೀ ದುರ್ಗಾ ಹೆಸರಿನ ಖಾಸಗಿ ಬಸ್ ಡಿಕ್ಕಿ ಹೊಡೆದು ನಂತರ ಸ್ವಲ್ಪ ದೂರ ಸ್ಕೂಟರ್ ಸಮೇತ ಬಸ್ ಎಳೆದುಕೊಂಡು ಹೋಗಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರನ ತಲೆಗೆ ಗಂಭೀರ ಗಾಯಗೊಂಡಿದ್ದು.ತಕ್ಷಣ ಸ್ಥಳೀಯರು ಉಜಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
Posted by Vidyamaana on 2023-09-20 15:25:32 |
ಬೆಂಗಳೂರು : ಚೈತ್ರ ಅಂಡ್ ಗ್ಯಾಂಗ್ 5 ಕೊಟ್ಟಿ ವಂಚನೆ ಸಂಬಂಧ ಹಾಲಾಶ್ರೀ ಸ್ವಾಮಿಜಿ ಸಿಸಿಬಿಗೆ ಲಾಕ್ ಆಗಿದ್ದೆ ರೋಚಕ ಸ್ವಾಮಿಜಿ ಅರೆಸ್ಟ್ ಹಿಂದಿದೆ ಎಸಿಪಿ ರೀನಾ ಸುವರ್ಣ ಟೆಕ್ನಿಕಲ್ ಎಫರ್ಟ್. ಸತತ ಐದು ದಿನಗಳಿಂದ ಸ್ವಾಮಿಜಿ ಹಿಂದೆ ಬಿದ್ದಿದ್ದ ಸಿಸಿಬಿ ತಂಡ.ಆದ್ರ ಮೈಸೂರಿನಿಂದ ಮಿಸ್ ಆಗಿದ್ದ ಸ್ವಾಮಿಜಿ ವೇಚ ಬದಲಿಸಿ ಮೊಬೈಲ್ ಸ್ವಿಟ್ಚ್ ಆಫ್ ಮಾಡಿ ಎಸ್ಕೇಪ್ ಆಗಿದ್ರು.ಹೈದರಬಾದ್ ಮಾಹಿತಿ ಪಡೆದು ಹೈದರಬಾದ್ ಗೂ ತೆರಳಿತ್ತು ಸಿಸಿಬಿ ಟೀಮ್. ಆದ್ರೆ ಹೈದರಾಬಾದ್ ಮಠದಿಂದ ಸ್ವಾಮಿಜಿ ಟ್ರೈನ್ ಮೂಲಕ ಕಾಶಿ ಕಡೆ ಪ್ರಯಾಣ ಮಾಡಿದ್ರು. ಹೈದರಬಾದ್ ಮಠವೊಂದರ ಕಾರ್ ನಲ್ಲೇ ಸ್ವಾಮಿಜಿ ರತಯಲ್ವೇ ಸ್ಟೇಷನ್ ಗೆ ಡ್ರಾಪ್ ಪಡೆದುಕೊಂಡಿದ್ರು. ಮಾರ್ಗ ಮಧ್ಯ ಹೈದರಬಾದ್ ನಲ್ಲಿ ಸ್ವಾಮಿಜಿ ಹೊಸ ಮೊಬೈಲ್ ಖರೀದಿ ಮಾಡಿದ್ರ.
ಸಿಸಿಬಿ ಪೊಲಿಲೀಸ್ರ ವಿಚಾರಣೆ ವೇಳೆ ಮಠದ ಕಾರು ಚಾಲಕ ಹೊಸ ಮೊಬೈಲ್ ಬಗ್ಗೆ ಮಾಹಿತಿ ನೀಡಿದ್ದ. ನಂತರ ಶುರುವಾಗಿದ್ದೆ ಅಸಲಿ ಕಹಾನಿ. ಮೊಬೈಲ್ ಐ ಎಂ ಐ ನಂಬರ್ ನಿಂದ ಸ್ವಾಮಿಜಿ ಟ್ರಾಕ್ ಮಾಡಿದ ಎಸಿಪಿ ರೀನಾ ಸುವರ್ಣ ಅಂಡ್ ಟೀಮ್. ಸ್ವಾಮಿಜಿ ಹೊಸ ಮೊಬೈಲ್ ನಿಂದ ತಮ್ಮಮಠ ಹಾಗೂ ಹೈದರಬಾದಗ ಮಠದ ಸ್ವಾಮಿಜಿ ಸಂಪರ್ಕ ಮಾಡಿದ್ರು. ಇದಾದ ಕೆಲವೇ ಹೊತ್ತಲ್ಲಿ ಸ್ವಾಮಿಜಿಗೆ ಪೊಲೀಸ್ರು ಹೈದರಬಾದ್ ಗೆ ಬಂದಿರೋ ವಿಷಯ ಕೂಡ ತಲುಪಿತ್ತು.ಹೈದರಾಬಾದ್ ನಲ್ಲಿ ತೆಗೆದುಕೊಂಡಿದ್ದ ಮೊಬೈಲ್ ಸ್ವಿಟ್ಚ್ ಆಫ್ ಮಾಡಿ ಒಡಿಶಾದಲ್ಲಿ ಹೊಸ ಸಿಮ್ಮತ್ತು ಮೊಬೈಲ್ಖರೀದಿಮಾಡಿದ್ರು. ಆದ್ರೆ ಸ್ವಾಮಿಜಿ ರೆಗ್ಯೂಲರ್ ಆಗಿ ಫೋನ್ಮಾಡಿದ್ದ ನಂಬರ್ ಮೇಲೆ ಸಿಸಿಬಿ ಕಣ್ಣಿಟ್ಟಿತ್ತು. ಮತ್ತೆ ಅದೇ ನಂಬರ್ ಗೆ ಸ್ವಾಮಿಜಿ ಕರೆ ಮಾಡಿದಾಗ ಸಿಸಿಬಿ ಟ್ರಾಕ್ ಗೆ ಮತ್ತೆ ಸ್ವಾಮಿಜಿ ಬಂದಿದ್ರು.
ಈ ಒಟ್ಟು ತನಿಖಾ ಸಮಯದಲ್ಲಿ ಮೊಬೈಲ್ ಐಎಂಇಐ ಸಿಡಿ ಆರ್ ಹಾಗೂ ಲೊಕೇಶ್ ಟ್ರೇಸ್ ಸೇರಿದಂತೆ ಎಲ್ಲಾ ಟೆಕ್ನಿಕಲ್ ಡಾಟವನ್ನ ಇದೇ ಎಸಿಪಿ ರೀನಾ ಸುವರ್ಣ ನಿರ್ವಹಿಸಿದ್ರು. ಸಿಸಿಬಿ ಕಚೇರಿಯಲ್ಲೇ ಕುಳಿತು ಈ ಎಲ್ಲಾ ಟೆಕ್ನಿಕಲ್ ಎವಿಡೆನ್ಸ್ ನ ಎಸಿಪಿ ರೀನಾ ಸುವರ್ಣ ಕಲೆಕ್ಟ್ ಮಾಡಿ ಸಿಸಿಬಿ ಸಿಬ್ಬಂದಿಗೆ ಕೊಟ್ಟಿದ್ರು . ಇದೇ ಕಾರಣಕ್ಕೆ ಸ್ವಾಮಿಜಿಯನ್ನ ಸಿಸಿಬಿ ಪೊಲೀಸ್ರು ಈಸಿಯಾಗಿ ಕ್ಯಾಚ್ ಮಾಡಲು ಸಹಕಾರಿಯಾಗಿದೆ.
Posted by Vidyamaana on 2024-01-13 06:28:44 |
ಬೆಂಗಳೂರು : ಯಾರಾದ್ರೂ ವಾಟ್ಸ್ ಅಪ್ ನಲ್ಲಿ ಹಾಯ್ ಹಲೋ ಅಂತಾ ಮೆಸೇಜ್ ಮಾಡಿದ್ರೆ ಹುಷಾರಾಗಿರಿ. ಹುಡುಗಿಯ ಡಿಪಿ ಹಾಕಿ ಹುಡುಗಿ ರೀತಿ ಹುಡಗರೇ ಚಾಟ್ ಮಾಡುತ್ತಾರೆ. ಬಣ್ಣ ಬಣ್ಣದ ಮಾತನಾಡಿ ಸೆಕ್ಸ್ ವಿಚಾರ ಮಾತಾಡಿ ನಿಮ್ಮನ್ನ ಖೆಡ್ಡಾಗೆ ಕೆಡವೋದು ಫಿಕ್ಸ್. ಆ ಖಾಸಗಿ ಫೋಟೋಗಳ ಸ್ಕ್ರೀನ್ ಶಾಟ್ ಹಾಗೂ ಸ್ಕ್ರೀನ್ ರೆಕಾರ್ಡ್ ಮಾಡಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಾರೆ.ಇದೇ ರೀತಿ ಹುಡುಗಿ ಹೆಸರಲ್ಲಿ ಬ್ಲಾಕ್ ಮೇಲ್ ಮಾಡುತಿದ್ದ ಆರೋಪಿಯನ್ನ ಉತ್ತರ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ.
ಹರಿ ಅಲಿಯಾಸ್ ನರಹರಿ ಬಂಧಿತ ಆರೋಪಿಯಾಗಿದ್ದು, ನಗರದ ಬೊಮ್ಮನಹಳ್ಳಿಯ ಎನ್ ಆರ್ ಲಾಡ್ಜ್ ಕೆಲಸ ಮಾಡುತ್ತಿದ್ದ. ಲಾಡ್ಜ್ ಗೆ ಬರುವ ಗ್ರಾಹಕರ ನಂಬರ್ ಪಡೆದು ಹುಡುಗಿ ರೀತಿಯಲ್ಲಿ ಮೆಸೇಜ್ ಮಾಡುತಿದ್ದ. ಅನಿತಾ ಎಂಬ ಹೆಸರಿನಲ್ಲಿ ಮೆಸೆಜ್ ಮಾಡುತ್ತಿದ್ದ ಆರೋಪಿ.ನಂತರ ಖಾಸಗಿ ಪೋಟೋಗಳನ್ನ ಕಳಿಸುವಂತೆ ಹೇಳುತ್ತಿದ್ದ. ನಂತರ ಅದೇ ಪೋಟೋಗಳನ್ನಿಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ವ್ಯಕ್ತಿಯೊಬ್ಬರ ಬಳಿ ಹಂತ ಹಂತವಾಗಿ 1 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ.
ವಾಟ್ಸಾಪ್ ಖಾತೆಗೆ ಹುಡುಗಿಯರು ಭಾವಚಿತ್ರ ಬಳಕೆ ಮಾಡಿಕೊಂಡು ವಂಚನೆ ಮಾಡುತಿದ್ದ ಆರೋಪಿ ಬ್ಯಾಂಕ್ ನ ಮಾಹಿತಿ ಆಧಾರ ಮೇಲೆ ಬಂಧಿಸಲಾಗಿದೆ. ಒಟ್ಟಾರೆಯಾಗಿ ಗೊತ್ತಿಲ್ಲದ ನಂಬರ್ ನಿಂದ ಯಾರಾದ್ರು ಮೇಸೆಜ್ ಮಾಡಿದ್ರೆ ಎಚ್ಚರಿಕೆಯಿಂದ ಇರುವುದು ಒಳಿತು.