ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಮೂಡಿಗೆರೆಯಲ್ಲಿ ಮುಸ್ಲಿಂ ಯುವತಿ ಮನೆಯಲ್ಲಿ ಅಡಗಿ ಕುಳಿತಿದ್ದ ಅಜಿತ್

Posted by Vidyamaana on 2023-05-27 11:36:45 |

Share: | | | | |


ಮೂಡಿಗೆರೆಯಲ್ಲಿ ಮುಸ್ಲಿಂ ಯುವತಿ ಮನೆಯಲ್ಲಿ ಅಡಗಿ ಕುಳಿತಿದ್ದ ಅಜಿತ್

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಣಕಲ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ನೈತಿಕ ಪೊಲೀಸ್ ಗಿರಿ  ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದೆ. ಮುಸ್ಲಿಂ ಯುವತಿಯ ಜೊತೆ ಸ್ನೇಹ ಬೆಳೆಸಿದ ಆರೋಪದಲ್ಲಿ  ಅಜಿತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದ ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದ್ದು, ಯುವತಿಯ ಮನೆಯಲ್ಲೇ ಅಜಿತ್ ಸಿಕ್ಕಿಬಿದ್ದಿದ್ದ. ಯುವತಿಯ ಮನೆಯ ಕಬೋರ್ಡ್​​​ನಲ್ಲಿ ಅವಿತು ಕುಳಿತಿದ್ದ ಎಂಬ ವಿಚಾರ ಬಯಲಾಗಿದೆ.

ಅಜಿತ್ ಕಬೋರ್ಡ್​​​ನಲ್ಲಿ ಅವಿತು ಕುಳಿತಿರುವುದು ಎನ್ನಲಾದ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಯುವತಿಯ ಮನೆಯಲ್ಲಿ ಸಿಕ್ಕಿಬಿದ್ದ ಅಜಿತ್ ಮೇಲೆ ಯುವಕರ ಗುಂಪು ಹಲ್ಲೆ ಮಾಡಿತ್ತು. ಅನ್ಯಕೋಮಿನ ಯುವತಿಯೊಂದಿಗೆ ಸ್ನೇಹ ಮಾಡಿದ್ದಕ್ಕೆ ತನ್ನ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದ್ದ.

ಈ ಮಧ್ಯೆ ಅಜಿತ್ ವಿರುದ್ಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಅಜಿತ್​ಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಮೋತ್ತೇಜಕ ಮಾತ್ರೆ ತಿಂದ ಭೂಪ ಹೆಂಡತಿಯ ಪ್ರಾಣವನ್ನೇ ಕಿತ್ತುಕೊಂಡ!

Posted by Vidyamaana on 2024-02-13 20:43:06 |

Share: | | | | |


ಕಾಮೋತ್ತೇಜಕ ಮಾತ್ರೆ ತಿಂದ ಭೂಪ ಹೆಂಡತಿಯ ಪ್ರಾಣವನ್ನೇ ಕಿತ್ತುಕೊಂಡ!

ಲಕ್ನೋ: ಮದುವೆಯಾಗಿ ಏಳೇ ದಿನದಲ್ಲಿ ನವವಧುವೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿರುವುದು ವರದಿಯಾಗಿದೆ.


ಘಟನೆ ಹಿನ್ನೆಲೆ: ಫೆ.3 ರಂದು(ಶುಕ್ರವಾರ) ಯುವತಿಯ ವಿವಾಹ ಉರೈ ಮೂಲದ ವ್ಯಕ್ತಿಯೊಂದಿಗೆ ಆಗಿತ್ತು. ಯುವತಿಯ ಪೋಷಕರು ಅದಾಗಲೇ ಮೃತಪಟ್ಟಿದ್ದು, ಸಹೋದರ ಮುಂದೆ ನಿಂತು ಅದ್ಧೂರಿಯಾಗಿ ವಿವಾಹ ಮಾಡಿಸಿಕೊಟ್ಟಿದ್ದರು. ಫೆ.4 ರಂದು (ಶನಿವಾರ) ಯುವತಿ ಎಲ್ಲಾ ಶಾಸ್ತ್ರದ ಬಳಿಕ ಗಂಡನ ಮನೆಗೆ ಬಂದಿದ್ದಳು.

ಮದುವೆಯ ಮೊದಲ ರಾತ್ರಿ ಪತಿ ಕಾಮೋತ್ತೇಜಕ ಮಾತ್ರೆಗಳನ್ನು(ವರ್ಧನೆ ಮಾತ್ರೆ) ಸೇವಿಸಿ ಪತ್ನಿ ಜೊತೆ ರಾಕ್ಷಸನಂತೆ ಸಂಭೋಗವನ್ನು ನಡೆಸಿದ್ದಾನೆ. ಪರಿಣಾಮ ಪತ್ನಿಯ ಖಾಸಗಿ ಅಂಗಕ್ಕೆ ತೀವ್ರವಾದ ಗಾಯಗಳಾಗಿವೆ.

ಪತ್ನಿ ಕಾನ್ಪುರದಲ್ಲಿ ಮದುವೆ ಸಮಾರಂಭವೊಂದಕ್ಕೆ ತೆರಳಿದ್ದ ವೇಳೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ಲೈಂಗಿಕ ಉತ್ತೇಜನ ಮಾತ್ರೆಯನ್ನು ಸೇವಿಸಿ ಸಂಭೋಗ ನಡೆಸಿದ ಪರಿಣಾಮ ಮಹಿಳೆಯ ಖಾಸಗಿ ಅಂಗದಲ್ಲಿ ತೀವ್ರತರದ ಗಾಯಗಳಾಗಿದ್ದು, ಇದರಿಂದ ಸೋಂಕು ತಗುಲಿದೆ. ಫೆ.10 ರಂದು ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.ಮಹಿಳೆಯ ಸ್ಥಿತಿ ಹದಗೆಟ್ಟ ನಂತರ ಮಹಿಳೆಯನ್ನು ಸ್ತ್ರೀರೋಗತಜ್ಞರ ಬಳಿಗೆ ಕರೆದೊಯ್ಯಲಾಗಿದ್ದು,ಮಹಿಳೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುವಷ್ಟು ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.


ಪತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳೆಯ ಸಹೋದರ ಪೊಲೀಸರಿಗೆ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ಆರೋಪಿ ಪತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿರುವುದಾಗಿ ವರದಿ ತಿಳಿಸಿದೆ.

ವಿಷಯ ತಿಳಿಯುತ್ತಿದ್ದಂತೆ ಪತಿ ಹಾಗೂ ಆತನ ಮನೆಯವರು ಊರು ಬಿಟ್ಟು ಹೋಗಿದ್ದಾರೆ ಎಂದು ವರದಿ ತಿಳಿಸಿದೆ

ನೆಟ್ಟಿಗರ ಭಾವನೆಗಳನ್ನು ಅಲ್ಲಾಡಿಸಿದ ಬಡ ವಿದ್ಯಾರ್ಥಿಯ ಬರ್ತ್ ಡೇ ಪಾರ್ಟಿ

Posted by Vidyamaana on 2023-11-06 14:05:44 |

Share: | | | | |


ನೆಟ್ಟಿಗರ ಭಾವನೆಗಳನ್ನು ಅಲ್ಲಾಡಿಸಿದ ಬಡ ವಿದ್ಯಾರ್ಥಿಯ ಬರ್ತ್ ಡೇ ಪಾರ್ಟಿ

ಕೊಲಂಬೊ: ಬರ್ತ್‌ ಡೇ (BirthDay) ಬಂತೆಂದರೆ ಸಾಕು ಮಕ್ಕಳು ಖುಷಿಯಾಗುತ್ತಾರೆ. ಅದರಲ್ಲೂ ಕೇಕ್‌ ಕಟ್ಟಿಂಗ್‌, ಸರ್ಪ್ರೈಸ್‌ ಪಾರ್ಟಿ ಇದ್ದರಂತೂ ಕೇಳೋದೇ ಬೇಡ, ಅವರು ಸಂತಸದಿಂದ ತೇಲಾಡುತ್ತಾರೆ. ಆದರೆ ಬಡತನದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಆ ಭಾಗ್ಯವಿರುವುದಿಲ್ಲ.ಅಂತಹ ಹುಡುಗನೊಬ್ಬನ ಬರ್ತ್‌ಡೇಯನ್ನು ಸರ್ಪ್ರೈಸ್‌ ಆಗಿ ಆಚರಿಸಿದ ವಿಡಿಯೊ ಇದೀಗ ವೈರಲ್‌ (Viral Video) ಆಗಿದೆ. ಮೊದಲ ಬಾರಿ ತನ್ನ ಹುಟ್ಟುಹಬ್ಬವನ್ನು ಆಯೋಜಿಸಿರುವುದನ್ನು ನೋಡಿ ಆ 8ರ ಹರೆಯದ ಬಾಲಕ ಭಾವುಕನಾಗಿದ್ದಾನೆ. ಈ ವಿಡಿಯೊ ನೋಡಿ ಹಲವರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.ವಿಡಿಯೊದಲ್ಲೇನಿದೆ?


ಕೊಲಂಬಿಯಾದ ಹುಡುಗನೊಬ್ಬನ ಬರ್ತ್ ಡೇ ಪಾರ್ಟಿ ಎಲ್ಲರ ಮನ ಕಲುಕಿದ ವಿಡಿಯೋ ಇದು!!


ಕೊಲಂಬಿಯಾದ ಎಬೆಜಿಕೊದ 8 ವರ್ಷದ ಏಂಜೆಲ್ ಡೇವಿಡ್​ನ ಕುಟುಂಬದ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಹೀಗಾಗಿ ಆತನ ಹುಟ್ಟುಹಬ್ಬವನ್ನು ಆಚರಿಸುತ್ತಿರಲಿಲ್ಲ. ಎಂದಿನಂತೆ ಈ ಬಾರಿಯೂ ಆತನ ಬರ್ತ್‌ಡೇ ಬಂತು. ಆತನಿಗೆ ಸರ್ಪ್ರೈಸ್‌ ಕೊಡಲು ಶಿಕ್ಷಕರು, ಸಹಪಾಠಿಗಳು ನಿರ್ಧರಿಸಿದರು. ಅದರಂತೆ ಆತನ ಕ್ಲಾಸ್‌ ರೂಮ್‌ ಅನ್ನು ಅವನಿಗೆ ಗೊತ್ತಿಲ್ಲದಂತೆ ಅಲಂಕರಿಸಿದರು. ಎಂದಿನಂತೆ ಶಾಲೆಗೆ ಬಂದ ಡೇವಿಡ್​ ತರಗತಿಯ ಬಾಗಿಲಿನಲ್ಲೇ ನಿಂತುಬಿಟ್ಟ. ಯಾವುದನ್ನೂ ಊಹಿಸಿರದ ಅವನು ಬರ್ತ್‌ಡೇ ಸರ್ಪ್ರೈಸ್‌ ನೋಡಿ ಭಾವುಕನಾದ. ಕಣ್ಣಿನಲ್ಲಿ ನೀರು ತುಂಬಿ ಬಂತು. ಕೂಡಲೇ ಅವನ ಬಳಿ ತೆರಳಿದ ಸಹಪಾಠಿಗಳು ಪ್ರೀತಿಯಿಂದ ಅಪ್ಪಿಕೊಂಡು ಸಮಾಧಾನ ಮಾಡಿ, ಶುಭಾಶಯ ತಿಳಿಸಿದರು.ಮಕ್ಕಳ ಮುಗ್ಧತೆಗೆ ನೆಟ್ಟಿಗರು ಮನ ಸೋತಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೊವನ್ನು ಈಗಾಗಲೇ 20 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಡೇವಿಡ್‌ನ ಮುಗ್ಧತೆ ಜತೆಗೆ ಬರ್ತ್‌ಡೇ ಸರ್ಪ್ರೈಸ್‌ ಪಾರ್ಟಿ ಆಯೋಜಿಸಿದ್ದ ಶಿಕ್ಷಕರು, ಸಹಪಾಠಿಗಳಿಗೂ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಮಕ್ಕಳ ಈ ಕಪಟವಿಲ್ಲದೆ ಸ್ವಭಾವದ ಕಾರಣದಿಂದಲೇ ಅವರನ್ನು ದೇವರಿಗೆ ಹೋಲಿಸಲಾಗುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.


ನೆಟ್ಟಿಗರು ಏನಂದ್ರು?


ವಿಡಿಯೊ ನೋಡಿದ ಒಬ್ಬರಂತೂ ಭಾವುಕರಾಗಿ ʼʼಹೃದಯಸ್ಪರ್ಶಿ ವಿಡಿಯೊ. ಕೆಲವೊಂದು ನಮ್ಮ ಚಿಕ್ಕ ಪುಟ್ಟ ಕೆಲಸಗಳೇ ಇತರರ ಮೇಲೆ ಅಗಾಧವಾದ ಧನಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮಿಂದ ಇತರರಿಗೆ ಸಹಾಯ ಆಗುವುದಿದ್ದರೆ ದಯವಿಟ್ಟು ಮಾಡಿ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಇತರರಿಗೆ ಸಹಾಯಹಸ್ತ ಚಾಚಿʼʼ ಎಂದಿದ್ದಾರೆ. ಅನೇಕರಿಗಂತೂ ಬರ್ತ್‌ಡೇ ಪಾರ್ಟಿ ಮಾಡಲು ಅಥವಾ ಉಡುಗೊರೆ ಕೊಳ್ಳಲು ಸಾಧ್ಯವಾಗದ ತಮ್ಮ ಬಾಲ್ಯದ ನೆನಪು ಕಾಡಿದೆ.ಈ ಬಗ್ಗೆ ನೆಟ್ಟಿಗರೊಬ್ಬರು ತಮ್ಮ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾರೆ, ʼʼಈ ಹುಡುಗನ ಭಾವನೆ ನನಗೆ ಅರ್ಥವಾಗುತ್ತದೆ. ನಾನು 6 ವರ್ಷದವನಿದ್ದಾಗ ಬಡತನದ ಬೇಗೆಯಲ್ಲಿ ಬೇಯುತ್ತಿದ್ದೆವು. ನನ್ನ ಬರ್ತ್‌ಡೇ ದಿನ ಬೆಳಗ್ಗೆ ನಾನು ಅಳುತ್ತಿದ್ದೆ. ಕೇಕ್‌ ಮತ್ತು ಐಸ್‌ಕ್ರೀಂ ಕೊಳ್ಳಲು ಸಾಧ್ಯವಿಲ್ಲ ಎನ್ನುವುದೇ ನನ್ನ ಅಳುವಿಗೆ ಕಾರಣವಾಗಿತ್ತುʼʼ ಎಂದು ಹೇಳಿದ್ದಾರೆ. ʼʼಈ ವಿಡಿಯೊ ನೋಡಿ ಕಣ್ಣಂಚು ಒದ್ದೆಯಾಯ್ತುʼʼ ಎಂದಿದ್ದಾರೆ ಮತ್ತೊಬ್ಬರು. ʼʼನನಗೀಗ 50 ವರ್ಷ. ಆದರೂ ಈ ವಿಡಿಯೊ ನೋಡಿ ನನ್ನ ಕಣ್ಣು ತುಂಬಿ ಬಂತುʼʼ ಎಂದು ಇನ್ನೊಬ್ಬ ಭಾವುಕ ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ

ಪುತ್ತೂರು: ಬೈಟ್ ಭಾರತ್ ಸಂಸ್ಥೆಯಿಂದ ಮೆಗಾ ಪ್ರಾಜೆಕ್ಟ್: ಕೇವಲ ಒಂದು ಸಾವಿರದಂತೆ ಪಾವತಿಸಿ ಎರಡು ಬೆಡ್‌ರೂಮಿನ ಮನೆ ನಿಮ್ಮದಾಗಿಸಿ..!

Posted by Vidyamaana on 2023-09-19 07:21:02 |

Share: | | | | |


ಪುತ್ತೂರು: ಬೈಟ್ ಭಾರತ್ ಸಂಸ್ಥೆಯಿಂದ ಮೆಗಾ ಪ್ರಾಜೆಕ್ಟ್: ಕೇವಲ ಒಂದು ಸಾವಿರದಂತೆ ಪಾವತಿಸಿ ಎರಡು ಬೆಡ್‌ರೂಮಿನ ಮನೆ ನಿಮ್ಮದಾಗಿಸಿ..!

ಪುತ್ತೂರು: ತಾಲೂಕಿನಾದ್ಯಂತ ಈಗಾಗಲೇ ಹೆಸರುವಾಸಿಯಾಗಿರುವ ಬ್ರೈಟ್ ಭಾರತ್ ಸಂಸ್ಥೆಯು ಹೊಸ ಪ್ರಾಜೆಕ್ಟ್ ಅನ್ನು ಜನತೆಗೆ ಪರಿಚಯಿಸಿದ್ದು ಈಗಾಗಲೇ ಜನರು ಇದನ್ನು ಅದ್ದೂರಿಯಾಗಿ ಸ್ವೀಕರಿಸಿದ್ದು 15 ದಿನದಲ್ಲಿ ಬರೋಬ್ಬರಿ 1800 ಮಂದಿ ಸದಸ್ಯರು ಈ ಯೋಜನೆಯಡಿಯಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಈ ಒಂದು ಸ್ಕೀಂ ಪ್ರಾಜೆಕ್ಟ್ ಏನು ಯಾಕಾಗಿ ಇದರ ವಿಶೇಷತೆ ಏನು ನೀವ್ಯಾಕೆ ಸೇರಬೇಕು ಯಾರಿಗೆಲ್ಲಾ ಸೇರಬಹುದು ಎನ್ನುವಂತಹ ಪ್ರಶ್ನೆಗಳಿಗೆ ಸಂಪೂರ್ಣ ಮಾಹಿತಿ ಈ ನೀಡಲಾಗಿದೆ.


ಏನಿದು ಬ್ರೈಟ್ ಭಾರತ್!?

ಇದರ ಪೂರ್ಣ ಮಾಹಿತಿ ಏನು!? ತಿಂಗಳಿಗೆ ಎಷ್ಟು ಹಣ ಕಟ್ಟಬೇಕು ಮತ್ತು ಎಷ್ಟು ತಿಂಗಳು ಕಟ್ಟಬೇಕು? ಕೊನೆಯವರೆಗೆ ಗೆಲ್ಲದವರಿಗೆ ಏನು ಬಹುಮಾನವಿದೆ!? ಇದರ ಸದಸ್ಯರಾಗುವುದು ಹೇಗೆ ಮತ್ತು ಯಾರಿಗೆಲ್ಲ ಸೇರಬಹುದು!? ಸರ್ಫ್ರೈಸ್ ಗಿಫ್ಟ್ ಏನಿದು!? ಈ ರೀತಿಯ ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಸಂಕ್ಷಿಪ್ತ ಉತ್ತರ👇🏻


ಬ್ರೈಟ್ ಭಾರತ್ ಆರಂಭಿಸಿದ ಯೋಜನೆ ಏನು!?:-

ಬ್ರೈಟ್ ಭಾರತ್ ನಡೆಸಲು ತೀರ್ಮಾನಿಸಿದ ಈ ಯೋಜನೆ, ಬಡವರ ಕನಸಿಗೆ ಬೆಳಕಾಗುವ ಒಂದು ವಿಭಿನ್ನ ಯೋಜನೆ. ಪುತ್ತೂರು ಸುಳ್ಯ ಭಾಗದಲ್ಲಿ ಪ್ರಪ್ರಥಮವಾಗಿ ಆರಂಭವಾಗಿರುವ, ನಾಲ್ಕು ಮನೆಗಳು ಹಾಗು ಕಾರು, ಬೈಕು, ಆಕ್ಟಿವಾ, ಚಿನ್ನ, ಡೈಮಂಡ್, ನಗದು, ಹೀಗೆ ಲಕ್ಷಾಂತರ ಬಹುಮಾನಗಳ ಸುರಿಮಳೆಯೇ ಇರುವ ಒಂದು ವಿಭಿನ್ನ ಸ್ಕೀಮ್ ಯೋಜನೆಯ ಹೆಸರೇ ಬ್ರೈಟ್ ಭಾರತ್.


ಈ ಯೋಜನೆಯ ಪೂರ್ಣ ಮಾಹಿತಿ:-

ಇದೊಂದು ಸೇವಿಂಗ್ ಪ್ಲಾನ್. ಅಂದರೆ, ನಿಮ್ಮ ತಿಂಗಳ ಉಳಿತಾಯದ ಕೇವಲ ಒಂದು ಸಾವಿರ ರುಪಾಯಿಗೆ, ನಾಲ್ಕು ಮನೆ ಸೇರಿದಂತೆ ಕಾರು, ಬೈಕು, ಆಕ್ಟಿವಾ, ಚಿನ್ನ, ಡೈಮಂಡ್ ನಗದು ಸೇರಿ, ಹಲವು ಬಹುಮಾನಗಳನ್ನು ಗೆಲ್ಲಲು ಅವಕಾಶವಿರುವ ಮತ್ತು ಗೆಲ್ಲದವರಿಗೆ ಅವರು ಕಟ್ಟಿದ ಹಣಕ್ಕೆ ಹೊಂದುವ ಪ್ರೋತ್ಸಾಹಕ ಬಹುಮಾನಗಳನ್ನು ನೀಡುವ ಒಂದು ವಿಭಿನ್ನ ಸೇವಿಂಗ್ ಪ್ಲಾನ್ ಯೋಜನೆ.


ತಿಂಗಳಿಗೆ ಎಷ್ಟು ಹಣ ಕಟ್ಟಬೇಕು ಮತ್ತು ಎಷ್ಟು ತಿಂಗಳು ಕಟ್ಟಬೇಕು!?

ಈ ಸ್ಕೀಮ್ ಯೋಜನೆಗೆ ಸೇರಿದವರು, ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಯಂತೆ, ಒಟ್ಟು ಇಪ್ಪತ್ತು ತಿಂಗಳು ಕಟ್ಟಬೇಕು. ಬಹುಮಾನ ವಿಜೇತರು ಮುಂದಿನ ಕಂತು ಕಟ್ಟಬೇಕಾಗಿಲ್ಲ.


ಕೊನೆಯವರೆಗೆ ಯಾವುದೇ ಬಹುಮಾನ ಗೆಲ್ಲದವರಿಗೆ ಏನಿದೆ!?

ಒಟ್ಟು ಇಪ್ಪತ್ತು ತಿಂಗಳು ಹಣ ಕಟ್ಟಿಯೂ, ಯಾವುದೇ ಬಹುಮಾನ ವಿಜೇತರಾಗದ ಸದಸ್ಯರಿಗೆ,ನಾವು ಪೋಸ್ಟರ್ ನಲ್ಲಿ ತಿಳಿಸಿರುವಂತೆ, ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಇನ್ವರ್ಟರ್, ಸೋಫಾ, ಚಿನ್ನದ ಉಂಗುರ, ಚಿನ್ನದ ರಿಂಗ್, ಚಿನ್ನದ ಚೈನ್, ಇಷ್ಟು ಆಯ್ಕೆಗಳಲ್ಲಿ ಒಂದನ್ನು ಪಡೆದುಕೊಳ್ಳಬಹುದು. ಅರ್ಧದಲ್ಲಿ ಕಂತು ಕಟ್ಟದೆ, ಬಿಟ್ಟ ಸದಸ್ಯರಿಗೆ ಇದು ಅನ್ವಯಿಸುವುದಿಲ್ಲ.


ಇದರ ಸದಸ್ಯರಾಗುವುದು ಹೇಗೆ ಮತ್ತು ಯಾರಿಗೆಲ್ಲ ಸೇರಬಹುದು!?

ಬ್ರೈಟ್ ಭಾರತ್ ಈ ಸ್ಕೀಮ್ ಯೋಜನೆಗೆ, ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಪಾವತಿಸಲು ಸಾಧ್ಯವಿರುವ ಯಾರಿಗೆ ಬೇಕಾದರೂ ಸದಸ್ಯರಾಗಬಹುದು. ಸದಸ್ಯರಾಗಬಯಸುವವರು, ನಿಮ್ಮ ಹೆಸರು, ಸ್ಥಳ, ಮೊಬೈಲ್ ಸಂಖ್ಯೆ, ಇಷ್ಟು ಮಾಹಿತಿಯನ್ನು 6360253551- ಈ ನಂಬರಿಗೆ ಕರೆಮಾಡಿ ತಿಳಿಸಬಹುದು ಅಥವಾ ವಾಟ್ಸಾಪ್ ಮೂಲಕವು  ಮಾಡಬಹುದು.


ಸರ್ಫ್ರೈಸ್ ಗಿಫ್ಟ್ ಏನು!? ಮತ್ತು ಅದಕ್ಕೆ ಯಾರೆಲ್ಲ ಅರ್ಹರಾಗುತ್ತಾರೆ!?:

ಈ ಸ್ಕೀಮ್ ಯೋಜನೆಯಲ್ಲಿ, ಪ್ರತಿ ತಿಂಗಳು ಕೂಡ ಹತ್ತು ಸರ್ಫ್ರೈಸ್ ಗಿಫ್ಟ್ ಇರುತ್ತದೆ. ಪ್ರತಿ ತಿಂಗಳ ಡ್ರಾದ ಒಂದು ವಾರ ಮುಂಚೆ, ಅಂದರೆ ಪ್ರತಿ ತಿಂಗಳು ಒಂಬತ್ತನೇ ತಾರೀಕಿನಂದು ನಡೆಯುವ ಡ್ರಾದ ಹಣವನ್ನು, ಎರಡನೇ ತಾರೀಕಿಗಿಂತ ಮುಂಚೆ ಪಾವತಿಸಿದ ಪ್ರತಿಯೊಬ್ಬರೂ, ಈ ಸರ್ಫ್ರೈಸ್ ಗಿಫ್ಟ್ ಬಹುಮಾನಕ್ಕೆ ಅರ್ಹರಾಗುತ್ತಾರೆ. ಈ ಸರ್ಫ್ರೈಸ್ ಗಿಫ್ಟ್ ಗೆ ಅರ್ಹರಾದ ಸದಸ್ಯರಲ್ಲಿ, ಹತ್ತು ಮಂದಿಯನ್ನು ಆಯ್ಕೆಮಾಡಿ ಅವರಿಗೆ ಸರ್ಫ್ರೈಸ್ ಗಿಫ್ಟ್ ನೀಡುತ್ತಿದ್ದೇವೆ. ಈ ತಿಂಗಳ ಸರ್ಫ್ರೈಸ್ ಗಿಫ್ಟ್ ಚಿನ್ನದ ಉಂಗುರ.


ಈ ಬಗ್ಗೆ ಇನ್ನೇನಾದರೂ ಸಂಶಯಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರನ್ನು ಸಂಪರ್ಕಿಸಬಹುದು 6360253651, 7019843134 ಅಥವಾ ನಮ್ಮ ವಾಟ್ಸಾಪ್ ಗ್ರೂಪಿಗೆ ಸೇರಬಹುದು

ರಾಜ್ಯಾದ್ಯಂತ ವ್ಯಾಪಿಸುತ್ತಿದೆ ಸಾಂಕ್ರಾಮಿಕ ಡೆಂಗ್ಯೂ - ಎಚ್ಚರ ಇರಲಿ : ರಾಜ್ಯದ ಜನರಿಗೆ ಸಿಎಂ ಮನವಿ

Posted by Vidyamaana on 2023-09-11 16:32:51 |

Share: | | | | |


ರಾಜ್ಯಾದ್ಯಂತ ವ್ಯಾಪಿಸುತ್ತಿದೆ ಸಾಂಕ್ರಾಮಿಕ ಡೆಂಗ್ಯೂ - ಎಚ್ಚರ ಇರಲಿ : ರಾಜ್ಯದ ಜನರಿಗೆ ಸಿಎಂ ಮನವಿ

ಬೆಂಗಳೂರು : ಕಳೆದ ಕೆಲವು ದಿನಗಳಲ್ಲಿ ರಾಜ್ಯಾದ್ಯಂತ ಅತ್ಯಧಿಕ ಡೆಂಗ್ಯೂ ಪ್ರಕರಣಗಳು ವರದಿಯಾಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.ರಾಜ್ಯಾದ್ಯಂತ ಕಳೆದ ಕೆಲವು ದಿನಗಳಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 4 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಕಂಡುಬಂದಿದೆ. ಹೀಗಾಗಿ ಎಲ್ಲರೂ ಮನೆ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಿ, ಸೊಳ್ಳೆ ಕಡಿತದ ಬಗ್ಗೆ ಎಚ್ಚರಿಕೆ ವಹಿಸುವಂತೆ ಅವರು ಹೇಳಿದ್ದಾರೆ.ಡೆಂಗ್ಯೂ ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತನಾಡಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಔಷಧ ಸಿಂಪಡಣೆ, ನೀರು ಶೇಖರಣೆಯಾಗುವ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸುವುದು ಸೇರಿದಂತೆ ಸೊಳ್ಳೆ ನಿಯಂತ್ರಣಕ್ಕೆ ಪರಿಣಾಮಕಾರಿ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಡೆಂಗ್ಯೂ ಬಗ್ಗೆ ಭಯ ಬೇಡ, ಆದರೆ ಜಾಗೃತೆ ವಹಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇಂದು ರಾತ್ರಿ ಸೌದಿಯ ಜಿದ್ದಾದಲ್ಲಿ ಅಮರ್ ಅಕ್ಬರ್ ಅಂತೋನಿ ಟ್ರೋಫಿಯ ಫೈನಲ್ ಪಂದ್ಯ

Posted by Vidyamaana on 2023-09-22 20:06:38 |

Share: | | | | |


ಇಂದು ರಾತ್ರಿ ಸೌದಿಯ ಜಿದ್ದಾದಲ್ಲಿ ಅಮರ್ ಅಕ್ಬರ್ ಅಂತೋನಿ ಟ್ರೋಫಿಯ ಫೈನಲ್ ಪಂದ್ಯ

ಸೌದಿ ಅರೇಬಿಯಾದಲ್ಲಿರುವ ಕ್ಲಾಸಿಕ್ ಫ್ರೆಂಡ್ ಪುತ್ತೂರು, ತುಳುನಾಡು ಕ್ರಿಕೆಟ್ ಅಸೋಸಿಯೇಷನ್, ಸಿಟಿ ಬಾಯ್ಸ್ ಪುತ್ತೂರು ಇದರ ಆಶ್ರಯದಲ್ಲಿ ಅಮರ್ ಅಕ್ಬರ್ ಅಂತೋಣಿ ಸೌಹಾರ್ದ ರೋಲಿಂಗ್ ಟ್ರೋಫಿ ಟಿಪಿಎಲ್ ಸೀಸನ್ -3 ಕ್ರಿಕೆಟ್ ಪಂದ್ಯಾಟದ ಉದ್ಘಾಟನೆ ಆಗಸ್ಟ್ 11ರಂದು ಅದ್ದೂರಿಯಿಂದ ಜಿದ್ದಾದಲ್ಲಿ ನಡೆಯಿತು. ಇದರ ಫೈನಲ್ ಪಂದ್ಯ ಇಂದು (ಸೆ. 22) ರಾತ್ರಿ 10 ಗಂಟೆಗೆ ನಡೆಯಲಿದೆ.

ಅಮರ್ ಅಕ್ಬರ್ ಅಂತೋನಿ ರೋಲಿಂಗ್ ಟ್ರೋಫಿ, ಅಮರ್ ಅಕ್ಬರ್ ಅಂತೋನಿ ಲೆಜೆಂಡ್ ಕ್ರಿಕೆಟ್, ಅಮರ್ ಅಕ್ಬರ್ ಅಂತೋನಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಕೂಟದ ಫೈನಲ್ ಇದಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಜಾವೀದ್ ಮಿಯಾಂದಾದ್ ಶಾಹುಲ್ ಭೂಪಾ ಮೊಹಸೀನ್ ವಾಮಂಜೂರು, ಜಾಸಿಮ್ ಕಲ್ಲಡ್ಕ ನವಾಝ್ ಮಂಗಳ್ ಪೇಟೆ, ಅಲ್ತಾಫ್ ಕುಮಟಾ ಸಮದ್, ಫಯಾಝ್, ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ತಂಡದ ಮಾಲಕ ಹುರೈಸ್ ಬಪ್ಪಳಿಗೆ, ಅಧ್ಯಕ್ಷ ಇಫ್ರಾಜ್ ಬೆಳುವಾಯಿ, ಹುರೈಸ್ ಬಪ್ಪಳಿಗೆ, ನೌಚಾ ಮೊಟ್ಟೆತ್ತಡ್ಕ, ಸಿನಾನ್ ಪೆರ್ನೆ ಉಪಸ್ಥಿತರಿದ್ದರು.

ಮೊಹಸಿನ್ ವಾಮಂಜೂರು ಮಾಲಕತ್ವದ ಸನ್ ಮೂನ್ ವಾಮಂಜೂರು, ಸಿಬ್ಬತ್ & ಜಾವೀದ್ ಮಿಯಾಂದಾದ್ ಮಾಲಕತ್ವದ ಜಾಝ ಸ್ಪೋರ್ಟ್ಸ್ ಅಕಾಡೆಮಿ, ಜೈಸನ್ ಡಿಕೋಸ್ಟಾ ಮಾಲಕತ್ವದ ಕುಡ್ಲ ಬುಲ್ಸ್, ಯಾಸಿನ್ ಉಳ್ಳಾಲ ಹಾಗೂ ಇರ್ಷಾದ್  ಮಾಲಕತ್ವದ ನಝರ್ ಗಯ್ಸ್ ಜಿದ್ದಾ ಈ ತಂಡಗಳು ಪಂದ್ಯಾ ಕೂಟದಲ್ಲಿ ಭಾಗವಹಿಸಿದ್ದವು.

ಇದರ ಜೊತೆಗೆ ಲೆಜೆಂಡ್ ಕಪ್ ಓವರ್ ಆರ್ಮ್  ಹಳ್ಳಿ ಹುಡುಗ್ರು ಪ್ಯಾಟೆ ಕಪ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಕೂಡ ನಡೆಯಿತು.

ಅಮರ್ ಅಕ್ಬರ್ ಅಂತೋನಿ ಇದರ ಸ್ಥಾಪಕರಾದ ರಜ್ಹಾಕ್ ಬಿ ಎಚ್ ಬಪ್ಪಳಿಗೆ  ಈ ಪಂದ್ಯಕೂಟಕ್ಕೆ ಟ್ರೋಫಿಯನ್ನು ಕೊಡುಗೆಯಾಗಿ ನೀಡಿದರು. ಟಿಪಿಎಲ್ ಸೀಸನ್ 3 ಇದರ ಸಮವಸ್ತ್ರವನ್ನು ಫಯಾಜ್ ಸುದೀರ್ ರೆಂಟಲ್ ಉಡುಗೊರೆಯಾಗಿ ನೀಡಿದರು.

ನೌಷದ್ ಮೊಟ್ಟೆತ್ತಡ್ಕ, ಹುರೈಸ್ ಪುತ್ತೂರು, ಸಿನಾನ್ ಪೆರ್ನೆ, ಇಫ್ರಾಜ್ ಬೆಳುವಾಯಿ, ರಜಾಕ್ ಬಪ್ಪಳಿಗೆ ನೇತೃತ್ವದಲ್ಲಿ ಪಂದ್ಯಕೂಟ ನಡೆಯುತ್ತಿದೆ.

Recent News


Leave a Comment: