ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಪುತ್ತೂರು: ಪ್ರಿಂಟಿಂಗ್ ಪ್ರೆಸ್ ಮಾಲೀಕ ಪದ್ಮಯ್ಯ ಗೌಡ ಆತ್ಮಹತ್ಯೆ

Posted by Vidyamaana on 2023-08-18 03:25:27 |

Share: | | | | |


ಪುತ್ತೂರು: ಪ್ರಿಂಟಿಂಗ್ ಪ್ರೆಸ್ ಮಾಲೀಕ ಪದ್ಮಯ್ಯ ಗೌಡ ಆತ್ಮಹತ್ಯೆ

ಪುತ್ತೂರು: ಅಡ್ಯನಡ್ಕದಲ್ಲಿ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದ ಪುತ್ತೂರು ತಾಲ್ಲೂಕಿನ ಕಬಕ ಗ್ರಾಮದ ಪೋಳ್ಯ ನಿವಾಸಿ ಪದ್ಮಯ್ಯ ಗೌಡ (50) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಪುತ್ತೂರಿನ ಕೆನರಾ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಪದ್ಮಯ್ಯ ಗೌಡ ಅವರು ಕೆಲ ವರ್ಷದ ಹಿಂದೆ ಅಡ್ಯನಡ್ಕದಲ್ಲಿ ಪ್ರಿಂಟಿಂಗ್ ಪ್ರೆಸ್ ಆರಂಭಿಸಿ, ಅಲ್ಲೇ ಬಾಡಿಗೆ ಮನೆಯೊಂದರಲ್ಲಿ ವಾಸ್ಯವ್ಯವಿದ್ದುಕೊಂಡು ವಾರಕ್ಕೊಮ್ಮೆ ಪೋಳ್ಯದಲ್ಲಿರುವ ಮನೆಗೆ ಹೋಗುತ್ತಿದ್ದರು.ಸೋಮವಾರ ಪದ್ಮಯ್ಯ ಗೌಡ ಅವರ ಸ್ಕೂಟರ್ ಪೋಳ್ಯ ಮನೆಗೆ ಹೋಗುವ ರಸ್ತೆ ಬದಿಯಲ್ಲಿ ಕಂಡು ಬಂದಿತ್ತು. ಅವರ ಮೊಬೈಲಿಗೆ ಕರೆ ಮಾಡಿದಾಗ ಪೋನ್ ರಿಂಗಣಿಸುತ್ತಿತ್ತು. ಇದರ ಜಾಡು ಹಿಡಿದು ಹುಡುಕಾಡಿದಾಗ ಮನೆ ಸಮೀಪದ ತೋಟದ ಬಾವಿಯ ಬಳಿ ಪದ್ಮನಾಭ ಗೌಡ ಅವರ ಬಟ್ಟೆ ಪತ್ತೆಯಾಗಿತ್ತು. ಬಾವಿಯಲ್ಲಿ ಹುಡುಕಾಡಿದಾಗ ಶವ ಪತ್ತೆಯಾಗಿದೆ.


ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವು ಕಡಿದಾಗ ಬಾಯಲ್ಲಿ ಕಚ್ಚಿ ವಿಷ ಹೀರದಿರಿ | ಎಚ್ಚರೆಚ್ಚರ, ಕೆಯ್ಯೂರು ಘಟನೆಯ ಅನುಕರಣೆ ಬೇಡ | ವೈದ್ಯರ ಎಚ್ಚರಿಕೆ ಮಾತು ಇಲ್ಲಿದೆ ಓದಿ

Posted by Vidyamaana on 2023-03-22 17:49:05 |

Share: | | | | |


ಹಾವು ಕಡಿದಾಗ ಬಾಯಲ್ಲಿ ಕಚ್ಚಿ ವಿಷ ಹೀರದಿರಿ | ಎಚ್ಚರೆಚ್ಚರ, ಕೆಯ್ಯೂರು ಘಟನೆಯ ಅನುಕರಣೆ ಬೇಡ | ವೈದ್ಯರ ಎಚ್ಚರಿಕೆ ಮಾತು ಇಲ್ಲಿದೆ ಓದಿ

ಪುತ್ತೂರು: ಹಾವು ಕಡಿದಾಕ್ಷಣ ಏನು ಮಾಡಬೇಕು? ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ಆದ್ದರಿಂದ ನೇರವಾಗಿ ಆಸ್ಪತ್ರೆಗೋ, ಉರಗ ತಜ್ಞರಲ್ಲಿಗೋ ಕರೆದೊಯ್ಯುತ್ತಾರೆ. ಇವೆರಡನ್ನು ಬಿಟ್ಟು, ಸ್ವತಃ ಪ್ರಥಮ ಚಿಕಿತ್ಸೆ ನೀಡುವ ಸಾಹಸಕ್ಕೂ ಕೆಲವರು ಮುಂದಾಗುತ್ತಾರೆ.

ದಯವಿಟ್ಟು ಗಮನಿಸಿ! ಇಂತಹ ತಪ್ಪೊಂದನ್ನು ಅಪ್ಪಿತಪ್ಪಿಯೂ ಮಾಡಬೇಡಿ.

ಹಿಂದಿನ ಕಾಲದಲ್ಲಿ ನಾಟಿ ವೈದ್ಯರು ಹಾವು ಕಡಿತಕ್ಕೆ ಚಿಕಿತ್ಸೆ ನೀಡುತ್ತಿದ್ದರು. ತೀರಾ ವಿಕೋಪಕ್ಕೆ ಹೋದ ಸಂದರ್ಭಗಳಲ್ಲೂ, ರೋಗಿಗಳು ಹುಷಾರಾಗಿದ್ದ ನಿದರ್ಶನಗಳನ್ನು ನಾವು ಕೇಳಿದ್ದೇವೆ. ಆದರೆ, ಅವರು ಯಾವ ರೀತಿ ಚಿಕಿತ್ಸೆ ನೀಡುತ್ತಿದ್ದರು ಎನ್ನುವುದು ನಮಗೆ ತಿಳಿದಿದೆಯೇ? ಖಂಡಿತಾ ಇಲ್ಲ.

ಉರಗ ತಜ್ಞರು ಅಥವಾ ನಾಟಿ ವೈದ್ಯರು, ಹಾವು ಕಡಿತಕ್ಕೆ ಚಿಕಿತ್ಸೆ ನೀಡುವಾಗ ಸಾಕಷ್ಟು ಮುಂಜಾಗ್ರತೆ ಕೈಗೊಳ್ಳುತ್ತಿದ್ದರು. ಇಂದು ವೈದ್ಯರ ಬಳಿಗೆ ಹೋದರೂ, ಅವರು ಮುಂಜಾಗ್ರತಾ ಕ್ರಮ ಕೈಗೊಂಡೇ ಚಿಕಿತ್ಸೆ ನೀಡುತ್ತಾರೆ. ರೋಗಿಯನ್ನು ದಾಖಲು ಮಾಡಿಸಿಕೊಂಡು, ಸಂಬಂಧಿಸಿದ ಇಂಜೆಕ್ಷನ್ ನೀಡುತ್ತಾರೆ. ಸೂಕ್ತ ಚಿಕಿತ್ಸೆ ನೀಡಿ, ರೋಗಿಯನ್ನು ವಿಷದಿಂದ ಮುಕ್ತರನ್ನಾಗಿ ಮಾಡುತ್ತಾರೆ.

ಬಾಯಲ್ಲಿ ವಿಷ ಹೀರಿದರೆ ಏನಾಗುತ್ತೆ?

  ಕೆಯ್ಯೂರು ಘಟನೆಯ ಅನುಕರಣೆ ಬೇಡ,ಹಾವಿನ ವಿಷ ನಮ್ಮ ರಕ್ತಕ್ಕೆ ಸೇರಿದರೆ ಸಾವು ಗ್ಯಾರೆಂಟಿ. ಹಾವು ಕಚ್ಚಿದಾಗ, ಬಾಯಲ್ಲಿ ಕಚ್ಚಿ ಆ ಭಾಗದಿಂದ ರಕ್ತ ಹೀರಿ ತೆಗೆಯಲೇಬಾರದು. ಒಂದು ವೇಳೆ ತೆಗೆದರೆ, ಬಾಯಲ್ಲಿ ಹುಣ್ಣು ಅಥವಾ ಸಣ್ಣ ಗಾಯ ಅಥವಾ ಹಲ್ಲಿನ ವಸಡಿನಲ್ಲಿ ಗಾಯಗಳಿದ್ದರೆ, ವಿಷ ನೇರವಾಗಿ ರಕ್ತಕ್ಕೆ ಸೇರಿಕೊಳ್ಳುತ್ತದೆ. ಅದರಲ್ಲೂ ತಲೆಗೇರುವುದೇ ಹೆಚ್ಚು. ಇದರಿಂದ ಹಾವು ಕಚ್ಚಿದ ವ್ಯಕ್ತಿಗಿಂತಲೂ, ವಿಷವನ್ನು ಹೀರಿದ ವ್ಯಕ್ತಿಯೇ ಬೇಗ ಮೃತಪಡುವ ಸಾಧ್ಯತೆ ಅಧಿಕ ಎನ್ನುತ್ತಾರೆ ಪುತ್ತೂರು ಡಾಕ್ಟರ್ಸ್ ಫಾರಂ  ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಅವರು.

ಬಾಲಕಿಗೆ ಪ್ರಶಂಸೆ:

ತಾಯ ಪ್ರಾಣ ಉಳಿಸಲು ಕೆಯ್ಯೂರಿನ ವಿದ್ಯಾರ್ಥಿನಿಗೆ ಅನ್ಯ ದಾರಿ ಕಾಣಲಿಲ್ಲ.  ನಾನು ಕೆಲವು ಸಿನಿಮಾಗಳಲ್ಲಿ ಈ ರೀತಿಯ ಚಿತ್ರಣ ನೋಡಿದ್ದೆ ಅದರಂತೆ ಹಾವು ಕಚ್ಚಿದ ಜಾಗಕ್ಕೆ ಬಾಯಿ ಇಟ್ಟು ರಕ್ತವನ್ನು ಹೀರಿ  ತೆಗೆದಿದ್ದೇನೆ. ಆಕೆಯ ಧೈರ್ಯಕ್ಕೆ ಶಹಬ್ಬಾಶ್ ಹೇಳಲೇಬೇಕು. ಹಾಗೆಂದು, ಇದನ್ನೇ ಇತರರು ಅನುಕರಿಸುವುದು ತಪ್ಪು.

ಕೆಯ್ಯೂರಿನ ಶ್ರಮ್ಯ ಅವರು ಅಪಾಯದಿಂದ ಪಾರಾಗಿದ್ದಾರೆ. ಇದಕ್ಕೆ ಕಾರಣಗಳು ಏನೇ ಇರಬಹುದು. ಆದರೆ, ಇದನ್ನು ಇತರರು ಅನುಸರಿಸಿದರೆ, ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಮರೆಯದಿರಿ.

ಓಮ್ನಿ – ಬೈಕ್ ಢಿಕ್ಕಿ: ಗಂಭೀರ ಗಾಯಗೊಂಡಿದ್ದ ಸವಾರ ಕೆಮ್ಮಾಯಿ ನಿವಾಸಿ ನಾರಾಯಣ್ ಮೃತ್ಯು

Posted by Vidyamaana on 2023-08-14 16:18:39 |

Share: | | | | |


ಓಮ್ನಿ – ಬೈಕ್ ಢಿಕ್ಕಿ: ಗಂಭೀರ ಗಾಯಗೊಂಡಿದ್ದ ಸವಾರ  ಕೆಮ್ಮಾಯಿ ನಿವಾಸಿ  ನಾರಾಯಣ್ ಮೃತ್ಯು

ಪುತ್ತೂರು: ಮುಕ್ರಂಪಾಡಿಯಲ್ಲಿ ನಡೆದ ಒಮ್ನಿ ಕಾರು ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.


ಮೃತಪಟ್ಟವರನ್ನು ಮೂಲತಃ ಕೆಮ್ಮಾಯಿ ನಿವಾಸಿ, ಉಪ್ಪಳಿಗೆಯ ಅಜಲಡ್ಕದಲ್ಲಿ ವಾಸವಾಗಿರುವ ನಾರಾಯಣ್ ಎಂದು ಗುರುತಿಸಲಾಗಿದೆ. ಇವರಿಗೆ ಸುಮಾರು 28 ವರ್ಷ ಎಂದು ಅಂದಾಜಿಸಲಾಗಿದೆ.


ಅಜಲಡ್ಕದ ತನ್ನ ಚಿಕ್ಕಪ್ಪನ ಮನೆಯಲ್ಲಿದ್ದುಕೊಂಡು, ಅಡಿಕೆ ತೆಗೆಯುವ, ಅಡಿಕೆಗೆ ಮದ್ದು ಬಿಡುವ ಕೆಲಸ ಮಾಡಿಕೊಂಡಿದ್ದರು ನಾರಾಯಣ್.

ಆ. 13ರ ರಾತ್ರಿ ಮುಕ್ರಂಪಾಡಿಯಲ್ಲಿ ಬೈಕ್ ಮತ್ತು ಮಾರುತಿ ಒಮ್ನಿ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ, ಎದುರು ಬಂದ ಒಮ್ನಿ ಕಾರಿಗೆ ಬೈಕ್ ಢಿಕ್ಕಿಯಾಗಿತ್ತು ಎಂದು ಹೇಳಲಾಗಿದೆ.


ಗಂಭೀರವಾಗಿ ಗಾಯಗೊಂಡಿದ್ದ ನಾರಾಯಣ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದಿದ್ದು, ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

RCB ಬೆನ್ನು ಬಿಡದ ಬ್ಯಾಡ್ ಲಕ್ !!!; ಕೆಕೆಆರ್ ಎದುರು 1 ರನ್ ಸೋಲು

Posted by Vidyamaana on 2024-04-22 07:29:22 |

Share: | | | | |


RCB ಬೆನ್ನು ಬಿಡದ ಬ್ಯಾಡ್ ಲಕ್ !!!; ಕೆಕೆಆರ್ ಎದುರು 1 ರನ್ ಸೋಲು

ಕೋಲ್ಕತಾ : ಈಡನ್ ಗಾರ್ಡನ್ಸ್ ನಲ್ಲಿ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದೇ ಒಂದು ರನ್ ನಿಂದ ಸೋಲು ಅನುಭವಿಸಿದ್ದು ತಂಡದ ದುರಾದೃಷ್ಟಕ್ಕೆ ಸಾಕ್ಷಿಯಾಯಿತು.ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಕೆಕೆಆರ್ ಪರ ಓಪನರ್ ಫಿಲ್ ಸಾಲ್ಟ್ ಅವರ ಆಕ್ರಮಣಕಾರಿ 48 ರನ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು.ಗುರಿ ಬೆನ್ನಟ್ಟಿದ ಆರ್ ಸಿಬಿ ಆರಂಭಿಕ ಆಘಾತ ಅನುಭವಿಸಿತು. 7 ರನ್ ಗಳಿಸಿ ನಾಯಕ ಫ್ಲೆಸಿಸ್ ಔಟಾದರೆ, ಕೊಹ್ಲಿ 18 ರನ್ ಗಳಿಸಿದ್ದ ವೇಳೆ ನಿರ್ಗಮಿಸಿದರು. ಆ ಬಳಿಕ ಭರವಸೆಯ ನಿರ್ಣಾಯಕ ಆಟವಾಡಿದ ವಿಲ್ ಜ್ಯಾಕ್ಸ್ 55(32 ಎಸೆತ) ರನ್ ಗಳಿಸಿ ಔಟಾದರು. ಅವರಿಗೆ ಸಾಥ್ ನೀಡಿದ ರಜತ್ ಪಾಟಿದಾರ್ 52 (23 ಎಸೆತ) ರನ್ ಗಳಿಸಿ ಔಟಾದರು.

ಹತ್ತೂರ ಒಡೆಯನ ಸನ್ನಿಧಾನಕ್ಕೆ ನವೀನ ಸ್ಪರ್ಶ

Posted by Vidyamaana on 2023-11-21 17:58:54 |

Share: | | | | |


ಹತ್ತೂರ ಒಡೆಯನ ಸನ್ನಿಧಾನಕ್ಕೆ ನವೀನ ಸ್ಪರ್ಶ

ಪುತ್ತೂರು: ಕರಾವಳಿ ಭಾಗ ಧಾರ್ಮಿಕತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಪುತ್ತೂರನ್ನು ಟೂರಿಸಂ ಪ್ರದೇಶ ಆಗುವ ನಿಟ್ಟಿನಲ್ಲಿ ಮಾನ್ಯತೆ ನೀಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಮಾಸ್ಟರ್ ಪ್ಲಾನ್ ಸಹಿತ ಮಾಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ನವೀಕೃತಗೊಂಡಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ಸಭಾಭವನದ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.



ಈಗಾಗಲೇ ಅಭಿವೃದ್ಧಿ ಕಾರ್ಯಕ್ರಮಗಳಲ್ಲೊಂದಾದ ಸಭಾಭವನ ಸಮರ್ಪಣೆ ಕಾರ್ಯ ನಡೆದಿದೆ. ಮುಂದಿನ ದಿನಗಳಲ್ಲಿ ಕೆರೆಯಲ್ಲಿ ಕಾರಂಜಿ, ಕೆರೆಯ ಬಳಿ ಇರುವ ಮಹಿಳಾ ಠಾಣೆ ಸ್ಥಳಾಂತರ, ತೋಡಿಗೆ ತಡೆಗೋಡೆ, ಕಂಬಳ ಗದ್ದೆ ಸ್ಥಳಾಂತರ ಹೀಗೆ ಹಲವು ಮಾಸ್ಟರ್ ಪ್ಲಾನ್ ತಯಾರಿಸಿ ಸರಕಾರಕ್ಕೆ ಕಳುಹಿಸುವ ಕೆಲಸ ಆಗಲಿದೆ ಎಂದು ತಿಳಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್.ಭಟ್ ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. 

ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಈಗಾಗಲೇ ವ್ಯವಸ್ಥಾಪನಾ ಅಧ್ಯಕ್ಷರು ಮನವಿ ಮಾಡಿದಂತೆ ಬಿಎಸ್‍ ಎನ್‍ಎಲ್  ರಸ್ತೆಯ ಕುರಿತು ಮಾಹಿತಿ ಇಲ್ಲ. ಮಾಹಿತಿ ಪಡಕೊಂಡು ಸೂಕ್ತ ಸಹಕಾರ ನೀಡುತ್ತೇನೆ ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಈಗಾಗಲೇ ದೇವಸ್ಥಾನದ ಅಭಿವೃದ್ಧಿಯ ಕುರಿತ ಮಾಸ್ಟರ್ ಪ್ಲ್ಯಾನ್ ಮಾಡುವಲ್ಲಿ ಯಶಸ್ವಿಯಾಗಿದೆ. ಸಾರ್ವಜನಿಕ ಬಳಕೆಗೆ ಸಭಾಭವನ ಒಳ್ಳೆಯ ರೀತಿಯಲ್ಲಿ ಉಪಯೋಗವಾಗಲಿ ಎಂದರು. 

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ, ದೇವಸ್ಥಾನಕ್ಕೆ ಪ್ರವೇಶಿಸುವ ರಸ್ತೆ ಇಕ್ಕಟ್ಟಾಗಿದ್ದು, ಪಕ್ಕದಲ್ಲಿರುವ ಬಿಎಸ್‍ ಎನ್‍.ಎಲ್ ನವರಿಗೆ ಬಹಳ ವರ್ಷಗಳ ಹಿಂದೆ ಜಾಗ ಮಾರಾಟ ಮಾಡಲಾಗಿದೆ. ಅದನ್ನು ಪುನಃ ಪಡೆದುಕೊಳ್ಳುವ ಅವಕಾಶ ಇದೆ. ಈ ಕುರಿತು ಸಹಾಯಕ ಆಯುಕ್ತರಲ್ಲಿ ಪರಿಶೀಲಿಸುವಂತೆ ಮನವಿ ಮಾಡಿದರು. ಕುರಿಯದಲ್ಲಿ ದೇವಸ್ಥಾನದ ಹೆಸರಿಗೆ 19 ಎಕ್ರೆ ಜಾಗ ಆರ್ ಟಿಸಿ ಆಗಿದೆ. ಅಲ್ಲಿ ಗೋಲೋಕ ಉತ್ಸವ ಮಾಡುವ ಕುರಿತು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಶುಭ ಹಾರೈಸಿದರು. ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ, ಶೇಖರ್ ನಾರಾವಿ, ರಾಮದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಡಾ.ಸುಧಾ ಎಸ್‍. ರಾವ್, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಕೆ.ವಿ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಕಾಮಗಾರಿಗೆ ದೇಣಿಗೆ ನೀಡಿದವರನ್ನು, ಇಂಜಿನಿಯರ್ ಗಳನ್ನು  ಗೌರವಿಸಲಾಯಿತು. 

ತನ್ವಿ ಈಶ್ವರ ಚಂದ್ರ ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯೆ ವೀಣಾ ಬಿ.ಕೆ. ಸ್ವಾಗತಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. 

ಸಭಾ ಕಾರ್ಯಕ್ರಮದ ಮೊದಲು ಶ್ರೀ ಮಹಾಲಿಂಗೇಶ್ವರ ದೇವರ ನಡೆಯಿಂದ ಭತ್ತ, ಅಕ್ಕಿ ಕಳಸದೊಂದಿಗೆ, ಹೂ, ಬಂಗಾರ, ಬೆಳ್ಳಿ, ಹಣ, ಅರಿಶಿನ ಕುಂಕುಮ/ ಕಲಶಗಳು , ತರಕಾರಿ, ತೆಂಗಿನ ಕಾಯಿ, ಅಡಿಕೆ ಗೊನೆ, ಕಾಫಿ, ಹಣ್ಣುಗಳು/ಧಾನ್ಯಗಳು, ತುಳಸಿ ಗಿಡ, ತುಪ್ಪ, ಹಾಲು, ಮಗು /ಶಿಶು, ಮುತ್ತೈದೆಯರು, ದಂಪತಿಗಳು,  ಸುವಸ್ತುಗಳೊಂದಿಗೆ ಮಂಗಳವಾದ್ಯ, ಪ್ರಾಜ್ವಲ್ಯಮಾನ ದೀಪ, ಕಲಶ ಹಿಡಿದ ಮಹಿಳೆಯರ ಸಹಿತ ಮೆರವಣಿಗೆ ಮೂಲಕ ತೆರಳಿ ಸಭಾಭವನ ಪ್ರವೇಶಿಸಲಾಯಿತು.

ಗುಂಡು ಹಾರಿಸಿ ನಟೋರಿಯಸ್ ರೌಡಿ ರೋಹಿದಾಸ್‌ ಕೆ. ಆಲಿಯಾಸ್‌ ಆಕಾಶಭವನ ಶರಣ್‌ ಬಂಧನ

Posted by Vidyamaana on 2024-01-10 04:29:14 |

Share: | | | | |


ಗುಂಡು ಹಾರಿಸಿ ನಟೋರಿಯಸ್ ರೌಡಿ ರೋಹಿದಾಸ್‌ ಕೆ. ಆಲಿಯಾಸ್‌ ಆಕಾಶಭವನ ಶರಣ್‌ ಬಂಧನ

ಮಂಗಳೂರು, ಜ.10: ನಟೋರಿಯಸ್ ರೌಡಿ ಆಕಾಶಭವನ್ ಶರಣ್ ಬೆನ್ನು ಬಿದ್ದಿದ್ದ ಮಂಗಳೂರಿನ ಸಿಸಿಬಿ ಪೊಲೀಸರು ಆತನನ್ನು ಕಡೆಗೂ ಬಲೆಗೆ ಹಾಕಿದ್ದು ರೋಚಕ ಮಿಸ್ಟರಿ. ಮೂರು ದಿನಗಳ ಹಿಂದೆ ಕಾವೂರಿನಲ್ಲಿ ಬಂಧಿಸಲು ಹೋಗಿದ್ದಾಗ ಪೊಲೀಸರ ಮೇಲೆಯೇ ಕಾರು ಹಾಯಿಸಿದ್ದ ರೌಡಿಯನ್ನು ಬಂಧಿಸಲೇಬೇಕೆಂದು ಪೊಲೀಸರು ಬೆನ್ನು ಬಿದ್ದಿದ್ದರು. ಕೊನೆಗೆ, ಮಲ್ಪೆಯಲ್ಲಿ ಅಡಗಿದ್ದಾನೆಂಬ ಮಾಹಿತಿ ಪಡೆದು ಅಲ್ಲಿಂದ ಚೇಸಿಂಗ್ ಮಾಡಿಕೊಂಡು ಬಂದು ಕಡೆಗೂ ಮಂಗಳೂರಿನಲ್ಲಿ ಅಡ್ಡಹಾಕಿ ಬಂಧಿಸಿದ್ದಾರೆ.


ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಒಟ್ಟು ಪ್ರಕರಣದ ಪಿನ್ ಟು ಪಿನ್ ಮಾಹಿತಿಯನ್ನು ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ಎರಡು ಜಿಲ್ಲೆಯಲ್ಲಿ ಆತನ ಮೇಲೆ ಸುಮಾರು 25ಕ್ಕೂ ಹೆಚ್ಚು ಕೇಸುಗಳಿವೆ. ಜೈಲಿನಲ್ಲಿ ಕೊಲೆಯತ್ನ, ಸುಳ್ಯದ ಕೊಲೆ ಪ್ರಕರಣ ಸೇರಿದಂತೆ ಕೊಲೆ, ಕೊಲೆಯತ್ನ ಸೇರಿ 20ಕ್ಕೂ ಹೆಚ್ಚು ಪ್ರಕರಣ ಮಂಗಳೂರಿನಲ್ಲೇ ಇವೆ. ಹಲವಾರು ಪ್ರಕರಣಗಳಲ್ಲಿ ಅರೆಸ್ಟ್ ವಾರೆಂಟ್ ಇತ್ತು. ಹೀಗಾಗಿ 15 ದಿನಗಳಿಂದ ಶರಣ್ ಬಂಧನ ಮಾಡುವುದಕ್ಕಾಗಿ ನಮ್ಮ ಪೊಲೀಸರು ಹಿಂದೆ ಬಿದ್ದಿದ್ದರು.ಮೂರು ದಿನಗಳ ಹಿಂದೆ ಕಾವೂರಿನಲ್ಲಿ ಅಪಾರ್ಟ್ಮೆಂಟ್ ನಲ್ಲಿದ್ದ ಮಾಹಿತಿ ಅರಿತು ಬಂಧನಕ್ಕೆ ಬಲೆ ಬೀಸಿದ್ದರು. ಆ ಸಂದರ್ಭದಲ್ಲಿ ಪೊಲೀಸರ ಮೇಲೆ ಕಾರು ಹಾಯಿಸಿ ಪರಾರಿಯಾಗಿದ್ದ ಬಗ್ಗೆ ಕಾವೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ಈ ನಡುವೆ, ಆತನಿಗೆ ಯಾರೆಲ್ಲ ಸಪೋರ್ಟ್ ಮಾಡಿದ್ದಾರೆಂದು ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಶರತ್ ಭಂಡಾರಿ, ಮಯೂರಿ, ನೀಲಾ ಮತ್ತಿತರರನ್ನು ವಶಕ್ಕೆ ಪಡೆದು ಮಾಹಿತಿ ಪಡೆಯಲಾಗಿತ್ತು. ಮಲ್ಪೆಯಲ್ಲಿ ಮನೆಯೊಂದರಲ್ಲಿ ಅಡಗಿದ್ದಾನೆಂದು ಮಾಹಿತಿ ತಿಳಿದು ಇಂದು ಬೆಳಗ್ಗೆ ಸಿಸಿಬಿ ಎಸ್ಐ ಸುದೀಪ್ ಮತ್ತು ಶರಣಪ್ಪ ಅವರ ತಂಡ ಉಡುಪಿಗೆ ತೆರಳಿತ್ತು.ಪೊಲೀಸರು ಮಲ್ಪೆ ತಲುಪಿದಾಗ ಶರಣ್ ತಪ್ಪಿಸಿಕೊಂಡಿದ್ದ. ಆಶ್ರಯ ಕೊಟ್ಟಿದ್ದ ಮಂಜೇಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬಿಳಿ ಐ20 ಕಾರಿನಲ್ಲಿ ಪರಾರಿಯಾಗಿರುವುದು ತಿಳಿದುಬಂದಿತ್ತು. ಟೋಲ್ ಗೇಟ್ ನಲ್ಲಿ ಚೆಕ್ ಮಾಡಿದಾಗ ಮಂಗಳೂರಿಗೆ ಬಂದಿರುವುದು ತಿಳಿದು ಪೊಲೀಸರು ಬೆನ್ನತ್ತಿ ಬಂದಿದ್ದರು. ಪಂಪ್ವೆಲ್ ನಲ್ಲಿ ಐ20 ಕಾರಿನಲ್ಲಿ ಒಬ್ಬಂಟಿಯಾಗಿ ಕಂಕನಾಡಿ ಕಡೆಗೆ ಎಸ್ಕೇಪ್ ಆಗಿರುವುದು ತಿಳಿದು ಚೇಸ್ ಮಾಡಲಾಗಿತ್ತು. ಜೆಪ್ಪು ಕುದ್ಪಾಡಿಯಲ್ಲಿ ನಮ್ಮ ಪೊಲೀಸ್ ತಂಡ ಖಾಸಗಿ ಕಾರಿನಲ್ಲಿ ಆತನನ್ನು ಅಡ್ಡಹಾಕಿತ್ತು. ಕುದ್ಪಾಡಿಯಲ್ಲಿ ಡೆಡ್ ಎಂಡ್ ಆಗಿದ್ದರಿಂದ ಯು ಟರ್ನ್ ಪಡೆಯುತ್ತಲೇ ಪೊಲೀಸರು ಸುತ್ತುವರಿದಿದ್ದಾರೆ. ಅಷ್ಟರಲ್ಲಿ ತನ್ನ ಕೈಲಿದ್ದ ಚೂರಿಯನ್ನು ತೋರಿಸಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ನಮ್ಮ ತಂಡದ ಪ್ರಕಾಶ್ ಎಂಬ ಪೇದೆಯ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಸಿಸಿಬಿ ಎಸ್ಐ ಸುದೀಪ್ ಅವರು ಕಾಲಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ. ಪ್ರಕಾಶ್ ಅವರನ್ನೂ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಶರಣ್ ಕಾಲಿಗೆ ಗಾಯಗೊಂಡಿದ್ದು ಅಪಾಯ ಏನೂ ಆಗಿಲ್ಲ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.ಆಕಾಶಭವನ್ ಶರಣ್ ಮಂಗಳೂರಿನ ನಟೋರಿಯಸ್ ರೌಡಿಯಾಗಿದ್ದು, 25ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದಾನೆ. ಹಲವು ಕೇಸುಗಳಲ್ಲಿ ಅರೆಸ್ಟ್ ವಾರೆಂಟ್ ಇದ್ದರೂ ಒಂಟಿ ತೋಳದ ರೀತಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಸುಳ್ಯದ ಕೆವಿಜಿ ಆಡಳಿತಾಧಿಕಾರಿಯ ಕೊಲೆ ಪ್ರಕರಣದಲ್ಲಿ ಈತನ ಮೇಲಿನ ಆರೋಪ ಸಾಬೀತಾಗಿದ್ದು, ದೋಷಿಯೆಂದು ಕೋರ್ಟ್ ತೀರ್ಪು ನೀಡಿದೆ. ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದರಿಂದ ಶಿಕ್ಷೆಯಿಂದ ಪಾರಾಗಿದ್ದಾನೆ. ಮಂಗಳೂರಿನಲ್ಲಿ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಪರವಾಗಿ ಹಫ್ತಾ ವಸೂಲಿ ಮಾಡುತ್ತಿದ್ದಾನೆ ಎಂದು ಹೇಳಲಾಗಿತ್ತು. ಈ ಬಗ್ಗೆ ಕಮಿಷನರ್ ಬಳಿ ಕೇಳಿದಾಗ, ಅಂಡರ್ ವರ್ಲ್ಡ್ ಸಂಪರ್ಕ ಇರುವ ಮಾಹಿತಿ ಇದೆ. ಆ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ.



Leave a Comment: