Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10
ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.
Posted by Vidyamaana on 2023-12-12 19:21:56 |
ಪುತ್ತೂರು : ಡಿಸೈನಿಂಗ್ ಕ್ಷೇತ್ರದಲ್ಲಿ ಹೊಸ ಛಾಪು ಮೂಡಿಸಿರುವ ಕರಾವಳಿಯ ಗಟ್ಟಿ ಹೆಸರೇ ಆರ್ವಿ ಇಂಟರ್ ಗ್ರಾಫಿಕ್ಸ್. ಇದು ಡಿಸೈನಿಂಗ್ ಕ್ಷೇತ್ರದಲ್ಲಿ ಹೊಸತನದ ಅಲೆಯೆಬ್ಬಿಸುತ್ತಾ ಸಾಗುತ್ತಿದ್ದು, ಈ ಡಿಜಿಟಲ್ ದುನಿಯಾದಲ್ಲಿ ಪ್ರತಿಯೊಂದನ್ನೂ ಜನರ ಮನದೊಳಗೆ ಶಾಶ್ವತವಾಗಿ ಅಚ್ಚೊತ್ತುವಂತೆ ವಿಭಿನ್ನವಾಗಿ ವಿಶಿಷ್ಟವಾಗಿ ರೂಪಿಸುವ ಈ ಸಂಸ್ಥೆ ಬೆಳೆದು ಬಂದ ರೀತಿಯೂ ಅಷ್ಟೇ ಅನನ್ಯ.
ಬೆಳೆಯುತ್ತಿರುವ ಮುತ್ತಿನ ನಗರಿ ಪುತ್ತೂರಿನ ಡಿಸೈನಿಂಗ್ ಕ್ಷೇತ್ರದಲ್ಲಿ ಕಲಾತ್ಮಕತೆ-ಸೃಜನಶೀಲತೆ, ಹೊಸತನವನ್ನು ಇನ್ನಷ್ಟು ವಿನೂತನವಾಗಿಸಬೇಕೆಂಬ ಉದ್ದೇಶದಿಂದ ಗಿರೀಶ್ ರಾಜ್ ಹಾಗೂ ಜ್ಞಾನೇಶ್ ವಿಶ್ವಕರ್ಮ ಆರ್ವಿ ಇಂಟರ್ ಗ್ರಾಫಿಕ್ಸ್ ಅನ್ನು 2010ರಲ್ಲಿ ಹುಟ್ಟು ಹಾಕಿದರು. ಇವರಿಬ್ಬರ ಕ್ರಿಯಾಶೀಲ ಮನಸ್ಸುಗಳು ಒಂದಾಗಿ ಪುತ್ತೂರಿಗರ ಕನಸಿಗೆ ಬಣ್ಣ ತುಂಬುವಂತಹ ಕ್ರಿಯೇಟಿವ್ ಡಿಸೈನಿಂಗ್ ಸಂಸ್ಥೆಯೊಂದನ್ನು ತೆರೆಯಲೇಬೇಕೆಂಬ ಛಲದಿಂದ ಪುತ್ತೂರಿನ ಏಳ್ಮುಡಿಯ ಪಾಯಸ್(pais) ಬಿಲ್ಡಿಂಗಿನಲ್ಲಿ ಸಂಸ್ಥೆಯನ್ನು ಆರಂಭಿಸಿಯೇ ಬಿಟ್ಟರು.
ಇಂದು ಡಿಜಿಟಲ್ ಡಿಸೈನಿಂಗ್ ಕ್ಷೇತ್ರದಲ್ಲಿ ಅಕ್ಷರಶಃ ಕ್ರಾಂತಿ ಮಾಡುತ್ತಿರುವ ಆರ್ವಿಯು ಪುತ್ತೂರು ಮತ್ತು ಆಸುಪಾಸಿನ ಊರುಗಳ ಜನತೆ ಮತ್ತು ಸಂಸ್ಥೆಗಳನ್ನು ತನ್ನ ಅದ್ಭುತ ಕ್ರಿಯೇಟಿವಿಟಿಯಿಂದ ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿದೆ. ಶುಭ ಸಮಾರಂಭಗಳ ಆಮಂತ್ರಣ ಪತ್ರಿಕೆ, ಶಿಕ್ಷಣ-ವಾಣಿಜ್ಯ ಸಂಸ್ಥೆಗಳ ಲೋಗೋ, ಬ್ರೋಷರ್ಸ್, ಜಾಹೀರಾತು, ಡಿಜಿಟಲ್ ಎಲ್.ಇ.ಡಿ. ಬೋರ್ಡುಗಳು ಹೀಗೆ ಎಲ್ಲವನ್ನೂ, ಎಲ್ಲರೂ ವಾವ್ಹ್! ಎಂದು ಕಣ್ಣರಳಿಸಿ ನೋಡುವಂತೆ ರೂಪಿಸುತ್ತಿದೆ.
ತನ್ನೊಳಗಿನ ಕಂಟೆಂಟು- ಕಮಿಟ್ಮೆಂಟುಗಳ ಮೂಲಕ ಅಸಂಖ್ಯಾತ ಗ್ರಾಹಕ ಮನಸುಗಳೊಂದಿಗೆ ಬೆಳೆದದ್ದು ಆರ್ವಿ ಸಂಸ್ಥೆಯ ಹೆಚ್ಚುಗಾರಿಕೆ. ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಸೇವೆ ನೀಡುವ ನಿಟ್ಟಿನಲ್ಲಿ 2013ನೇ ಇಸವಿಯಲ್ಲಿ ಪುತ್ತೂರಿನ ಶ್ರೀ ಧರ್ಮಸ್ಥಳ ವಾಣಿಜ್ಯ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ತನ್ನ ಕ್ರಿಯಾಶೀಲತೆಯ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸಿಕೊಂಡಿತು. ಬ್ರಾಂಡ್ಗೆ ಪ್ರಚಾರಕ್ಕೆ ಪೂರಕವಾದ ಮಾರ್ಕೆಟಿಂಗ್ ಮೆಟೀರಿಯಲ್ ಮಾತ್ರವಲ್ಲ ಡಿಜಿಟಲ್ ಮಾಧ್ಯಮದ A to Z ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸಿರುವುದು ಆರ್ವಿಯ ಹೆಚ್ಚುಗಾರಿಕೆ.
2021ರಲ್ಲಿ ಕಸ್ಟಮೈಸ್ಡ್ ಉಡುಗೊರೆಗಳನ್ನೊಳಗೊಂಡ ಆರ್ವಿ ಗಿಫ್ಟ್ ಗ್ಯಾಲರಿಯನ್ನು ತೆರೆದು ವಿಭಿನ್ನವಾದ ಉಡುಗೊರೆಯನ್ನು ಅರಸಿ ಬರುವ ಗ್ರಾಹಕರಿಗೆ ಕಸ್ಟಮೈಸ್ಡ್ ಉಡುಗೊರೆಗಳನ್ನು ಪೂರೈಸುತ್ತಾ ಇನ್ನಷ್ಟು ಗ್ರಾಹಕರನ್ನು ತನ್ನೆಡೆಗೆ ಸೆಳೆದುಕೊಂಡಿದೆ.
ಇದೀಗ ಇನ್ನಷ್ಟು ವಿಶಾಲ ಕಚೇರಿಗೆ ಸ್ಥಳಾಂತರಗೊಂಡಿದ್ದು, ಆಧುನಿಕ ಪ್ರಿಂಟಿಂಗ್ ಮೆಷಿನರಿಗಳನ್ನು ಅಳವಡಿಸಿಕೊಂಡಿದೆ. ಈ ಮೂಲಕ ಗ್ರಾಹಕರಿಗೆ ಇನ್ನಷ್ಟು ಹೊಸತನದ ಸೇವೆ ನೀಡಲು ಸಜ್ಜಾಗಿದೆ.
ಆರ್ವಿ ಇಂಟರ್ ಗ್ರಾಫಿಕ್ಸಿನ ನೂತನ ಕಚೇರಿಯನ್ನು ಜಿ.ಎಲ್. ಸಮೂಹ ಸಂಸ್ಥೆಗಳ ಚೇರ್ಮನ್ ಜಿ.ಎಲ್. ಬಲರಾಮ ಆಚಾರ್ಯ ಅವರು ಉದ್ಘಾಟಿಸಿ, ಶುಭಹಾರೈಸಿದರು. ‘Aarvi My Print’ ಡಿಜಿಟಲ್ ಪ್ರಿಂಟಿಂಗ್ ಯುನಿಟ್ ಅನ್ನು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಮ್ಯಾನೇಜಿಂಗ್ ಡೈರೆಕ್ಟರ್ ಚೇತನ್ ಪ್ರಕಾಶ್ ಕಜೆ ಉದ್ಘಾಟಿಸಿದರು.
ಸಂಸ್ಥೆಯ ಪಾಲುದಾರರಾದ ಗಿರೀಶ್ರಾಜ್ ಎಂ.ವಿ., ಜ್ಞಾನೇಶ ವಿಶ್ವಕರ್ಮ ಅತಿಥಿಗಳನ್ನು ಸ್ವಾಗತಿಸಿದರು..
ಈ ಸಂದರ್ಭದಲ್ಲಿ 30 ವರ್ಷಗಳ ವೃತ್ತಿಶ್ರದ್ಧೆ, ಸೃಜನಾತ್ಮಕ ಸೇವೆಗಾಗಿ ಉರ್ಲಾಂಡಿ ಚಂದನ್ ಆರ್ಟ್ಸ್ನ ಚಂದ್ರಶೇಖರ ನಾಯಕ್ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಪ್ರಗತಿ ಸ್ಟಡಿ ಸೆಂಟರ್ ಸಂಚಾಲಕರಾದ ಗೋಕುಲ್ನಾಥ್ ಪಿ.ವಿ., ಪ್ರಾಂಶುಪಾಲರಾದ ಹೇಮಲತಾ ಗೋಕುಲ್, ಮೈತ್ರಿ ಎಲೆಕ್ಟ್ರಿಕ್ ನ ರವಿನಾರಾಯಣ ಎಂ., ಮಾಜಿ ಶಾಸಕರಾದ ಸಂಜೀವ ಮಠಂದೂರು, ಟ್ರೈಡೆಂಟ್ ಕ್ರಿಯೇಟಿವ್ಸ್ನ ಚರಣ್ ರಾಜ್, ಕೆನರಾ ಪ್ರೆಸ್ನ ಅರ್ಷದ್, ಅಡಿಕೆ ಪತ್ರಿಕೆಯ ನಾ ಕಾರಂತ ಪೆರಾಜೆ, ಎ.ವಿ. ನಾರಾಯಣ, ಕಾರ್ಕಳ ನ್ಯೂಸ್ನ ರಾಮಚಂದ್ರ ಬರೆಪ್ಪಾಡಿ, ಭಾವನಾ ಕಲಾ ಆರ್ಟ್ಸ್ನ ವಿಘ್ನೇಶ್ ವಿಶ್ವಕರ್ಮ, ಶರ್ಮಾ ಪ್ರಿಂಟಿಂಗ್ನ ರಾಜೇಶ ಕೃಷ್ಣಪ್ರಸಾದ್, ವಿಟ್ಲದ ನಿವೃತ್ತ ಕೃಷಿ ಅಭಿವೃದ್ಧಿ ಅಧಿಕಾರಿ ದಾಮೋದರ ಆಚಾರ್ಯ,ಸಾಯಿ ಡಿಸ್ಟ್ರಿಬ್ಯೂಟರ್ಸ್ ಮ್ಹಾಲಕ ಶೈಲೇಶ್,ಸಿಡ್ಕೋ ಸೊಸೈಟಿಯ ಅಧ್ಯಕ್ಷ ರವೀಂದ್ರ ದೇವಾ ಟ್ರೇಡರ್ಸ್, ಸಿಡ್ಕೋ ಸೊಸೈಟಿ ಮ್ಯಾನೇಜರ್ ಭಟ್ ಹಾಗೂ ಸಿಬ್ಬಂದಿಗಳು, ಶ್ರೀಮಾ ಪಾರ್ಲರ್ ಮ್ಹಾಲಕಿ ಮಾಧವಿ ಮನೋಹರ್ ರೈ, ಉದಯವಾಣಿಯ ಹರ್ಷ ಎ ಪುತ್ತೂರು , ಸುದ್ದಿ ಬಿಡುಗಡೆಯ ಶ್ರೀಧರ್, ಲೋಕೇಶ್, ಆದಿತ್ಯ, ಚಂದ್ರಕಾಂತ, ನರೇಶ್ ಜೈನ್, ಜ್ಞಾನದೀಪ ಶಿಕ್ಷಣ ಸಂಸ್ಥೆಯ ಉಮೇಶ್ ಮಣಿಕ್ಕರ, ಅಧ್ಯಾಪಕ ಗಣೇಶ್ ನಾಯಕ್, ಸಾಯಿ ಡಿಸ್ಟ್ರಿಬ್ಯೂಟರ್ಸ್ನ ಮ್ಹಾಲಕರು, ಪ್ರಸನ್ನ ರೈ ತಿಂಗಳಾಡಿ ಮುಂತಾದವರು ಭೇಟಿ ನೀಡಿ ಸಂಸ್ಥೆಗೆ ಶುಭಹಾರೈಸಿದರು.
ಅಂಬಿಕಾ ಬಾಲವಿದ್ಯಾಲಯದ ದಿನೇಶ್ ವಿಶ್ವಕರ್ಮರವರ ಕೈಚಳಕದಲ್ಲಿ ಮೂಡಿಬಂದ ಮರ ಎಲ್ಲರ ಗಮನ ಸೆಳೆದಿತ್ತು.
ಆರ್ವಿ ಸಿಬ್ಬಂದಿಗಳಾದ ಅನಿಲ್, ರಾಮ್ಗಣೇಶ್, ಶ್ವೇತಾ, ಚೈತ್ರಾ, ಸ್ಪರ್ಷ, ಲಹರಿ, ಮೌಲ್ಯ, ಶಮಿತಾ, ಸುಮಂತ್, ಧನ್ಯ, ದೀಕ್ಷಾ ಸಹಕರಿಸಿದರು. ಶ್ರೀಮತಿ ದೀವಿತಾ ಜ್ಞಾನೇಶ್, ಮಾ| ಧ್ರುವಿಜ್ ವಿಶ್ವಕರ್ಮ, ಕುಮಾರಿ ಚಿಂತನಾ, ಬೇಬಿ ಧ್ರುವಿ, ಸುದಿನ್ ವಿಶ್ವಕರ್ಮ, ವಿನಿಲ್ ವಿಶ್ವಕರ್ಮ, ಉಪಸ್ಥಿತರಿದ್ದರು.
ಹರ್ಷಿತ್ ಮರ್ಕಂಜ ಕಾರ್ಯಕ್ರಮ ನಿರೂಪಿಸಿದರು.
We Make Brands Powerful.!
Aarvi Intergraphics. First Floor, Shri Dharmasthala Building, Main Ro
non
, PutturCall : 9483833824, 8970802040
www.aarvi.in
Aarvi Intergraphcis, Design your Dreams..!
Posted by Vidyamaana on 2023-01-24 15:16:30 |
ಪುತ್ತೂರು: ಮಂಗಳವಾರ ಸಂಜೆಯಿಂದ ರಾತ್ರಿ ಸುಮಾರು 8 ಗಂಟೆಯವರೆಗೆ ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದ ಸಮೀಪದಿಂದ, ಮುಕ್ರಂಪಾಡಿ ಕೆ.ಎಸ್.ಆರ್.ಟಿ.ಸಿ. ಡಿಪೋವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನಗಳು ಒಂದರ ಹಿಂದೊಂದರಂತೆ ತೆವಳುತ್ತಾ ಸಾಗುತ್ತಿದ್ದ ದೃಶ್ಯ ಕಂಡುಬಂದಿತು.
ಇದು ಮಂಗಳವಾರ ಒಂದು ದಿನದ ಸಮಸ್ಯೆಯಲ್ಲ. ಪ್ರತಿದಿನವೂ ಇದೇ ಪರಿಸ್ಥಿತಿ. ಇದಕ್ಕೆ ಕಾರಣ, ಕೆ.ಎಸ್.ಆರ್.ಟಿ.ಸಿ. ಬಸ್ಗಳನ್ನು ರಸ್ತೆ ಬದಿ ಸರತಿ ಸಾಲಿನಲ್ಲಿ ಪಾರ್ಕಿಂಗ್ ಮಾಡುತ್ತಿರುವುದು. ರಸ್ತೆಯ ಹೆಚ್ಚಿನ ಭಾಗವನ್ನು ಬಸ್ಗಳು ಆಕ್ರಮಿಸಿಕೊಳ್ಳುವುದರಿಂದ, ಇಲ್ಲಿ ದಿನವೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಕೆಲ ವರ್ಷಗಳ ಹಿಂದೆ ಪುತ್ತೂರು ಪೇಟೆಯ ಮುಖ್ಯಭಾಗದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಹಾಗೂ ಡಿಪೋ ಇತ್ತು ಎನ್ನುವುದು ಎಲ್ಲರೂ ತಿಳಿದಿರುವ ವಿಷಯವೇ. ಅಲ್ಲಿಂದ ಡಿಪೋವನ್ನು ಮುಕ್ರಂಪಾಡಿಗೆ ವರ್ಗಾಯಿಸಲಾಯಿತು. ಪೇಟೆಯ ಬೆಳವಣಿಗೆಗೆ ತಕ್ಕಂತೆ ಹಾಗೂ ಡಿಪೋದಲ್ಲಿ ಹೆಚ್ಚಿನ ಬಸ್ಗಳನ್ನು ಪಾರ್ಕಿಂಗ್ ಮಾಡಲು ಸ್ಥಳಾವಕಾಶದ ಕಾರಣದಿಂದ ಹೊಸ ಜಾಗ ಹುಡುಕುವುದು ಅನಿವಾರ್ಯವೂ ಆಗಿತ್ತು. ಆದರೆ ಈಗ ಮತ್ತೆ ಸಾರ್ವಜನಿಕರಿಗೆ ಪುತ್ತೂರು ಕೆ.ಎಸ್.ಆರ್.ಟಿ.ಸಿ. ಹೊಸ ತಲೆನೋವು ತಂದಿತ್ತಿದೆ.
ಸಂಜೆ ಹೊತ್ತಿಗೆ ಪಾಳಿಯಿಂದ ಹಿಂದಿರುಗುವ ಬಸ್ಗಳು ಡಿಪೋ ಪ್ರವೇಶಿಸಲು, ಸಾನ್ತೋಮ್ ಗುರುಮಂದಿರದಿಂದ ಕೆ.ಎಸ್.ಆರ್.ಟಿ.ಸಿ. ಡಿಪೋದವರೆಗೆ ರಸ್ತೆ ಬದಿಯಲ್ಲೇ ಪಾರ್ಕಿಂಗ್ ಮಾಡಲಾಗುತ್ತಿದೆ. ಮಾತ್ರವಲ್ಲ, ಈಗ ಸ್ಥಳೀಯ ಪೆಟ್ರೋಲ್ ಬಂಕ್ನಲ್ಲಿ ಡೀಸಿಲ್ ತುಂಬಿಸಿಕೊಳ್ಳಲು ಬಸ್ಗಳನ್ನು ರಸ್ತೆ ಬದಿಯೇ ಸರತಿ ಸಾಲಿನಲ್ಲಿ ನಿಲ್ಲಿಸಲಾಗುತ್ತಿದೆ.
ಸಂಜೆ ಹೊತ್ತು ನಾಗರಿಕರು ಕಚೇರಿಯಿಂದ ಮನೆಗೆ ಹಿಂದಿರುಗುವ ಹೊತ್ತು. ಅಲ್ಲದೇ, ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಬಳಿಕ, ಪುತ್ತೂರು – ಸುಳ್ಯ ರಸ್ತೆಯಲ್ಲಿ ವಿಪರೀತ ವಾಹನಗಳ ಓಡಾಟ ಇದೆ. ಎಷ್ಟೆಂದರೆ, ಕೆಲ ಸಂದರ್ಭದಲ್ಲಿ ರಸ್ತೆ ದಾಟಲೂ ಸಮಯ ತೆಗೆದುಕೊಳ್ಳುವಂತಾಗಿದೆ. ಇಂತಹ ಒತ್ತಡದ ರಸ್ತೆಯಲ್ಲಿ, ಅರ್ಧದಷ್ಟು ರಸ್ತೆಯನ್ನು ಕೆ.ಎಸ್.ಆರ್.ಟಿ.ಸಿ. ಬಸ್ಗಳು ಆಕ್ರಮಿಸಿಕೊಂಡು ಬಿಟ್ಟರೆ, ಸಾರ್ವಜನಿಕರು ಹೇಗೆ ಪ್ರಯಾಣಿಸಬೇಕು? ಸಾರ್ವಜನಿಕರ ಕಷ್ಟವನ್ನು ಕೆ.ಎಸ್.ಆರ್.ಟಿ.ಸಿ. ನೋಡಿಯೂ ಸುಮ್ಮನಿದೆ ಎನ್ನುವುದೇ ದೊಡ್ಡ ದುರಂತ.
Posted by Vidyamaana on 2024-03-23 21:53:57 |
ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಇಲಾಖೆಯ ಆಯುಕ್ತ ಮನ್ಸೂರ್ ಆಲಿ 25 ಲಕ್ಷ ರೂ. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಮಂಗಳೂರು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಮನ್ಸೂರ್ ಅಲಿಯನ್ನು ಲಂಚ ಪಡೆಯುತ್ತಿರುವಾಗಲೇ ಬಂಧಿಸಿದ್ದಾರೆ.
ಟಿಡಿಆರ್ ಕ್ಲಿಯರೆನ್ಸ್ ಮಾಡುವ ವಿಚಾರದಲ್ಲಿ ಬ್ರೋಕರ್ ಸಲೀಂ ಎಂಬವನ ಸಹಕಾರದೊಂದಿಗೆ ಮನ್ಸೂರ್ ಅಲಿ ಲಂಚ ಸ್ವೀಕರಿಸುತ್ತಿದ್ದರು. ಲೋಕಾಯುಕ್ತ ಡಿವೈಎಸ್ಪಿ ಡಿವೈಎಸ್ಪಿ ಚೆಲುವರಾಜ್, ಇನ್ಸ್ಪೆಕ್ಟರ್ ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ಬಿಲ್ಡರ್ ಒಬ್ಬರು ಮಂಗಳೂರು ತಾಲೂಕು ಕುಡುಪು ಗ್ರಾಮದ ಸರ್ವೇ ನಂ. 57/ಪಿ ರಲ್ಲಿ ಒಟ್ಟು 10.8 ಎಕ್ರೆ ಜಮೀನನ್ನು ಖರೀದಿಸಿದ್ದು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪಚ್ಚನಾಡಿ ಮತ್ತು ಕುಡುಪು ಗ್ರಾಮಗಳ ಸುತ್ತಮುತ್ತ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಘನತ್ಯಾಜ್ಯ ನಿರ್ವಹಣೆಯ ಘಟಕವನ್ನು ಭವಿಷ್ಯದಲ್ಲಿ ವಿಸ್ತರಿಸುವ ಉದ್ದೇಶದಿಂದ ಸದ್ರಿ ಜಮೀನನ್ನು ಟಿ.ಡಿ.ಆರ್ ನಿಯಮದಡಿ 20ea ಮಾಡುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಫಿರ್ಯಾದಿದಾರರಿಗೆ ಹಾಗೂ ಜಮೀನಿನ ಈ ಹಿಂದಿನ ಮಾಲಕರಿಗೆ ಪತ್ರ ವ್ಯವಹಾರವಾಗಿತ್ತು. ಅದರಂತೆ ಸದ್ರಿ ಜಮೀನು 2024 ಜನವರಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಹೆಸರಿಗೆ ನೋಂದಣಿಯಾಗಿತ್ತು.
ಬಳಿಕ ಮಹಾನಗರ ಪಾಲಿಕೆಯ ಆಯುಕ್ತರು ಸದ್ರಿ ಜಮೀನಿನ ಟಿ.ಡಿ.ಆರ್ ನೀಡಲು ಮುಡಾ ಆಯುಕ್ತರಿಗೆ ಫೆಬ್ರವರಿ ತಿಂಗಳಲ್ಲಿ ಪತ್ರ ಕಳುಹಿಸಿದ್ದು, ಮುಡಾ ಆಯುಕ್ತರಾದ ಮನ್ಸೂರ್ ಆಲಿರವರು ಸದ್ರಿ ಫೈಲ್ ಅನ್ನು ಪೆಂಡಿಂಗ್ ಇಟ್ಟಿದ್ದರು. ಈ ಬಗ್ಗೆ ಬಿಲ್ಡರ್ ಮುಡಾ ಆಯುಕ್ತ ಮನ್ಸೂರ್ ಆಲಿ ಬಳಿ ಹೋಗಿ ಮಾತನಾಡಿದಾಗ 25 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
Posted by Vidyamaana on 2024-03-18 20:29:07 |
ಕಾಸರಗೋಡು: ಪೆರಿಯ ರಸ್ತೆಯಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಚಾಲಕ ಸಾವನ್ನಪ್ಪಿದ ಘಟನೆ ಮಾ.18 ರ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.. ಇಪ್ಪತ್ತು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮಂಗಳೂರಿನಿಂದ ಕಣ್ಣೂರಿಗೆ ಹೋಗುತ್ತಿದ್ದ ಮೆಹಬೂಬ್ ಬಸ್ ಅಪಘಾತಕ್ಕೀಡಾಗಿದೆ. ಗಾಯಾಳುಗಳನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಮಧೂರು ರಾಮನಗರ ಮೂಲದ ಚೇತನ್ ಕುಮಾರ್ (37) ಮೃತ ವ್ಯಕ್ತಿ. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು.ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಇದರಿಂದಾಗಿ ಈ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಸ್ಸಿನಲ್ಲಿದ್ದ ಎಲ್ಲರನ್ನೂ ಇಲ್ಲಿಂದ ಹೊರತೆಗೆದ ಬಳಿಕ ಅಗ್ನಿಶಾಮಕ ದಳದವರು ತಂದ ಕ್ರೇನ್ ಬಳಸಿ ಬಸ್ ಅನ್ನು ರಸ್ತೆ ಬದಿಗೆ ಸ್ಥಳಾಂತರಿಸಲಾಯಿತು. ಗಾಯಾಳುಗಳ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
Posted by Vidyamaana on 2023-08-24 12:42:34 |
ವಿಶ್ವಕಪ್ ಚೆಸ್ ಫೈನಲ್ ಪಂದ್ಯದಲ್ಲಿ 2 ದಶಕಗಳ ಬಳಿಕ ಫೈನಲ್ ಪ್ರವೇಶಿಸಿದ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾರ್ಲ್ ಸನ್ವಿರುದ್ಧ ಸೋಲು ಕಂಡಿದ್ದಾರೆ.
ಆದರೆ ಸೋತರೂ ಕೊಟ್ಯಂತರ ಭಾರತೀಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ವಿಶ್ವದ ನಂಬರ್ 1 ಚೆಸ್ ತಾರೆಗೆ ಎಲ್ಲಾ ರೀತಿಯಲ್ಲೂ ಪೈಪೋಟಿ ನೀಡುವಲ್ಲಿ ಪ್ರಜ್ಞಾನಂದ ಯಶಸ್ವಿಯಾಗಿದ್ದರು. ಆದರೆ ಟೈಬ್ರೇಕ್ ನಲ್ಲಿ ಮೇಲುಗೈ ಸಾಧಿಸುವ ಮೂಲಕ ಕಾರ್ಲ್ ಸೆನ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ಗುರುವಾರ ನಡೆದ ಟೈ ಬ್ರೇಕರ್ ಪಂದ್ಯದಲ್ಲಿ ಮೊದಲ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದ ಅವರು ಆ ಬಳಿಕದ ಸುತ್ತಿನಲ್ಲಿ ಡ್ರಾ ಸಾಧಿಸಿದರು. ಆದರೆ 1-0 ಮುನ್ನಡೆ ಕಾಯ್ದುಕೊಂಡ ಮ್ಯಾಗ್ನಸ್ ಕಾರ್ಲ್ ಸನ್ ಗೆದ್ದು 6ನೇ ಬಾರಿ ವಿಶ್ವ ಕಿರೀಟ ಗೆದ್ದರು. ಪ್ರಜ್ಞಾನಂದ ಅವರು ವಿಶ್ವನಾಥನ್ ಆನಂದ್ ಬಳಿಕ ಚೆಸ್ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿದ ಕೇವಲ 2ನೇ ಭಾರತೀಯ ಎನಿಸಿಕೊಂಡಿದ್ದಾರೆ
Posted by Vidyamaana on 2023-10-14 16:08:14 |
ಮೈಸೂರು: ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಒಕ್ಕಲಿಗ ಸಂಘದ ಸದಸ್ಯರು ಚಿಂತಕ ಪ್ರೊ.ಭಗವಾನ್ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಮಹಿಷಾ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರೊ.ಭಗವಾನ್, ‘ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳೆಂದು ಕುವೆಂಪು ಹೇಳಿದ್ದರು’ ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಯಿಂದ ಆಕ್ರೋಶಗೊಂಡ ಮೈಸೂರು ಚಾಮರಾಜನಗರ ಒಕ್ಕಲಿಗರ ಸಂಘದ ಸದಸ್ಯರು ನಗರದ ಕುವೆಂಪು ನಗರದಲ್ಲಿರುವ ಅವರ ಮನೆ ಮುತ್ತಿಗೆಗೆ ಯತ್ನಿಸಿದರು. ಏಕಾಏಕಿ ಓಳನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ತಡೆದರು. ಎಳೆದಾಟದಲ್ಲಿ ಗಿರೀಶ್ ಅವರಿಗೆ ಮುಖಕ್ಕೆ ಪೆಟ್ಟು ಬಿದ್ದು ರಕ್ತ ಹೊರಬಂತು. ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ, ಧಿಕ್ಕಾರ ಕೂಗಿದರು.
‘ಸಂಸ್ಕೃತಿ ಯಾವುದೆಂದು ಭಗವಾನ್ ಅವರು ಒಕ್ಕಲಿಗರಿಗೆ ತಿಳಿಸಲಿ, ಪಾಠ ಕಲಿಯುತ್ತೇವೆ. ಅವರ ಭೇಟಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಅವರನ್ನು ಗಡಿಪಾರು ಮಾಡಿ’ ಎಂದು ಪಟ್ಟು ಹಿಡಿದರು. ‘ಷರತ್ತಬದ್ಧ ಅನುಮತಿ ಇದ್ದರೂ ಪ್ರಚೋದನಕಾರಿ ಭಾಷಣ ಮಾಡಿದ್ದರ ವಿರುದ್ಧ, ಮೆರವಣಿಗೆ ನಡೆಸಿದ್ದರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು. ರಸ್ತೆ ಬದಿಯಲ್ಲಿ ಪ್ರತಿಭಟನೆ ನಡೆಸಿ ಭಗವಾನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಎಳ್ಳುನೀರು ಬಿಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಕಾವು ಹೆಚ್ಚುತ್ತಿದ್ದಂತೆ ಪೊಲೀಸರು ಉದಯರವಿ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ, ವಾಹನ ಸಂಚಾರ ನಿರ್ಬಂಧಿಸಿದರು.
ಮನೆಗೆ ನುಗ್ಗಲು ಯತ್ನಿಸಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ.ಶ್ರೀಧರ್, ಮೈಸೂರು- ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಗಿರೀಶ್, ಚೇತನ್, ಮುಖಂಡರಾದ ಸತೀಶ್ ಗೌಡ, ಸ್ವರೂಪ್ ಹಾಗೂ ಬೆಂಬಲಿಗರನ್ನು ಬಂಧಿಸಿ ಕರೆದೊಯ್ದರು. ಪರಿಸ್ಥಿತಿ ತಿಳಿಯಾದ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಗರ ಪೊಲೀಸರು ಹಾಗೂ ರಾಜ್ಯ ಮೀಸಲು ಪಡೆ ಪೊಲೀಸರನ್ನು ಮನೆಯ ಸುತ್ತ ಭದ್ರತೆಗಾಗಿ ನಿಯೋಜಿಸಲಾಗಿದೆ.