ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಸುದ್ದಿಗಳು News

Posted by vidyamaana on 2024-07-03 13:36:16 |

Share: | | | | |


ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಬೆಂಗಳೂರು (ಜು.3): ಇಲ್ಲಿನ ಹೊರವಲಯದ ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಜುಲೈ 1ರಂದು ಪ್ರೇಮಿಗಳು ನಾಪತ್ತೆಯಾಗಿದ್ದರು.

ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ಆದರೆ ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ವಿದ್ಯಾರ್ಥಿನಿ ತಲಘಟ್ಟಪುರ ಸಮೀಪದ ಅಂಜನಾಪುರ ಬಳಿ ವಾಸವಿದ್ದಳು. ಯುವಕ ಶ್ರೀಕಾಂತ್ ಕೋಣನಕುಂಟೆ ನಿವಾಸಿಯಾಗಿದ್ದ. ಇಬ್ಬರೂ ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನಲೆ ಎರಡೂ ಕಡೆಯವರ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.

ಮದುವೆಯಾಗಿದ್ದ ಶ್ರೀಕಾಂತ್!

ಶ್ರೀಕಾಂತ್ ಗೆ ಬೇರೊಬ್ಬರ ಜೊತೆಗೆ ವಿವಾಹವಾಗಿದೆ. ಆದರೂ ಅಂಜನಾಳನ್ನ ಪ್ರೀತಿ ಮಾಡ್ತಿದ್ದ. ಇಬ್ಬರು ಒಟ್ಟಿಗೆ ಬದುಕಲು ಅವಕಾಶ ಇಲ್ಲ ಎಂದು ಸಾಯೋ ನಿರ್ಧಾರ ಮಾಡಿದ್ದಾರೆ. ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದೆ. ಆತನನ್ನ ಮೇಲೆತ್ತಿದ್ದ ನಂತರ ಅಂಜನಾ ಮೃತದೇಹ ಕೂಡ ಮೇಲೆ ಬಂದಿದೆ. ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೂ ಮಾಹಿತಿ ಇರುದಿಲ್ಲ. ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆ. ಮೊಬೈಲ್ ನಲ್ಲಿ ವೀಡಿಯೊ ಮಾಡಿರುವ ಯುವತಿ ಅಂಜನಾ ಅದನ್ನ ಆಟೋದಲ್ಲಿ ಬಿಟ್ಟು ಶ್ರೀಕಾಂತ್ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯ್ತಿದ್ದೇವೆ ಎಂದು ವಿಡಿಯೋ ಮಾಡಿದ್ದಾಳೆ. ಮೊಬೈಲ್ ವಶಕ್ಕೆ ಪಡೆದುಕೊಂಡಿರೊ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 Share: | | | | |


ಇಂದು ಅಬುಧಾಬಿಯಲ್ಲಿ ದೇವಸ್ಥಾನ ಉದ್ಘಾಟಿಸಲಿರುವ ಮೋದಿ

Posted by Vidyamaana on 2024-02-14 09:52:14 |

Share: | | | | |


ಇಂದು ಅಬುಧಾಬಿಯಲ್ಲಿ ದೇವಸ್ಥಾನ ಉದ್ಘಾಟಿಸಲಿರುವ ಮೋದಿ

ಯುಎಇ: ಅರಬ್ ಎಮಿರೇಟ್ಸ್‍ನಲ್ಲಿ ನಿರ್ಮಿಸಿರುವ ಮೊಟ್ಟಮೊದಲ ಹಿಂದೂ ದೇವಾಲಯವನ್ನು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.ಈ ದೇವಸ್ಥಾನವು 27 ಎಕರೆ ಭೂಮಿಯಲ್ಲಿ ಹರಡಿಕೊಂಡಿದೆ ಎನ್ನಲಾಗಿದ್ದು, ಅಬುಧಾಬಿಯ ಅಬು ಮುರೇಖಾ ಜಿಲ್ಲೆಯಲ್ಲಿದೆಎರಡು ದಿನಗಳ ಯುಎಇ ಮತ್ತು ಖತರ್ ದೇಶಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ‌ ಮೋದಿ ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಜೊತೆಗೆ ನಿನ್ನೆ ದ್ವಿಪಕ್ಷೀಯ ಕಾರ್ಯತಂತ್ರದ ಸಹಭಾಗಿತ್ವದ ಕುರಿತು ವ್ಯಾಪಕ ಮಾತುಕತೆ ನಡೆಸಿದ್ದಾರೆ. ಬಳಿಕ ಉಭಯ ಮುಖಂಡರಿಂದ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.ಈ ಎರಡು ದಿನಗಳ ಭೇಟಿಯು 2015 ರಿಂದ ಯುಎಇಗೆ ಪ್ರಧಾನಿ ನರೇಂದ್ರ ಮೋದಿಯವರ ಏಳನೇ ಭೇಟಿ ಮತ್ತು ಕಳೆದ ಎಂಟು ತಿಂಗಳಲ್ಲಿ ಮೂರನೇ ಭೇಟಿಯಾಗಿದೆ.

ಏ.28 : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿ

Posted by Vidyamaana on 2023-04-27 05:50:02 |

Share: | | | | |


ಏ.28 : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿ

ಪುತ್ತೂರು : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿ ಏ.28 ಶುಕ್ರವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ನೇಮೋತ್ಸವದ ಅಂಗವಾಗಿ ಏ.27 ಗುರುವಾರ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಧ್ಯಾಹ್ನ 12.15 ಕ್ಕೆ ದೇವತಾ ಪ್ರಾರ್ಥನೆ, ಮಹಾಪೂಜೆ, ಸಂಜೆ 6 ಕ್ಕೆ ಶ್ರೀ ಭಟ್ಟಿ ವಿನಾಯಕ ದೇವಸ್ಥಾನದಲ್ಲಿ ರಂಗಪೂಜೆ, ರಾತ್ರಿ 7 ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, ರಾತ್ರಿ 9 ಕ್ಕೆ ತಂಬಿಲಾದಿಗಳು ನಡೆದು ಪ್ರಸಾದ ವಿತರಣೆ, 9.30 ಕ್ಕೆ ಅನ್ನಸಂತರ್ಪಣೆ ಜರಗಲಿದೆ.

ಏ.28 ಶುಕ್ರವಾರ ಬೆಳಿಗ್ಗೆ 9 ರಿಂದ ಶ್ರೀ ದಂಡನಾಯಕ ದೈವದ ವಾಲಸರಿ ನೇಮ, 10 ರಿಂದ ಶ್ರೀ ಉಳ್ಳಾಲ್ತಿ ನೇಮ, ಮಧ್ಯಾಹ್ನ 12.30 ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ 2 ರ ನಂತರ ಶ್ರೀ ಕಾಳರಾಹು ಮತ್ತು ಶ್ರೀ ಮಲರಾಯ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಶ್ರೀ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

10 ಬಿಲಿಯನ್ ವರ್ಷದ ಕ್ಯಾಲೆಂಡರ್ ನಾಲಗೆ ತುದಿಯಲ್ಲಿ | ಮೆಮೊರಿ ಪ್ರಶಾಂತ್

Posted by Vidyamaana on 2023-01-19 08:37:59 |

Share: | | | | |


10 ಬಿಲಿಯನ್ ವರ್ಷದ ಕ್ಯಾಲೆಂಡರ್ ನಾಲಗೆ ತುದಿಯಲ್ಲಿ | ಮೆಮೊರಿ ಪ್ರಶಾಂತ್

                 25 ವರ್ಷ ವಯಸ್ಸಿನ ಓರ್ವ ಭಿನ್ನ ಸಾಮರ್ಥ್ಯವುಳ್ಳ ವ್ಯಕ್ತಿ ತನ್ನ ಸ್ವಂತ ಸ್ಮರಣೆಯಲ್ಲಿ ಹತ್ತು ಮಿಲಿಯನ್ ವರ್ಷಗಳವರೆಗಿನ ಕ್ಯಾಲೆಂಡರ್ ಅನ್ನು ನೆನಪಿನಲ್ಲಿ ಉಳಿಸಬಲ್ಲ ಎಂದರೆ ನಂಬುವುದು ಸಾಧ್ಯವೇ?. ತಂತ್ರಜ್ಞಾನಗಳನ್ನು ಸೋಲಿಸಬಲ್ಲ ಈ ಯುವಕನ ಹೆಸರು ಪ್ರಶಾಂತ್. ‘ಮೆಮೊರಿ ಪ್ರಶಾಂತ್’ ಎಂದು ಕೇರಳೀ ಯರು ಪ್ರೀತಿಯಿಂದ ಕರೆಯುವ ಈತನ ಇನ್ನಷ್ಟು ಸಾಮರ್ಥ್ಯಗಳ ಬಗ್ಗೆ ತಿಳಿದರೆ ಅಚ್ಚರಿಯ ಮೇಲೆ ಅಚ್ಚರಿ ಎನ್ನಲೇಬೇಕು. ವಿಪರ್ಯಾಸವೆಂದರೆ, ಸಾಮಾನ್ಯ ಮನುಷ್ಯನಿಗೆ ಇರಬೇಕಾಗುವಷ್ಟು ದೈಹಿಕ ಸಾಮರ್ಥ್ಯ ಪ್ರಶಾಂತ್ಗೆ ಇಲ್ಲ. ಆದರೆ, ಕ್ರಿ.ಶ. ಒಂದರಿಂದ ಹತ್ತು ಕೋಟಿ ವರ್ಷಗಳವರೆಗಿನ ಕ್ಯಾಲೆಂಡರ್ನಿಂದ ಯಾವ ದಿನಾಂಕದ ವಿಶೇಷತೆಗಳೇನು? ಅದು ಯಾವ ದಿನ ಬರುತ್ತದೆ ಎಂಬುದನ್ನು ಪ್ರಶಾಂತ್ ನಿಖರವಾಗಿ ಹೇಳಬಲ್ಲರು. ಹೀಗೆ ಪ್ರಶಾಂತ್ ಮೂವತ್ತಾರು ಸಾವಿರದ ಐನೂರ ಇಪ್ಪತ್ತೈದು ಕೋಟಿ ದಿನಗಳ ಬಗೆಗಿನ ಮಾಹಿತಿಯನ್ನು ಕಂಠಪಾಠ ಮಾಡಿದ್ದಾರೆ.

        ಪ್ರಶಾಂತ್ ಒಂದು ತಿಂಗಳ ಕ್ಯಾಲೆಂಡರ್ ಮಾಡಲು ಒಂದು ನಿಮಿಷ ಸಾಕು. ಅದೇ ರೀತಿ ಒಂದು ವರ್ಷದ ಕ್ಯಾಲೆಂಡರ್ ತಯಾರಿಸಲು ಆತನಿಗೆ ಬೇಕಾಗುವ ಸಮಯ ಕೇವಲ ಹತ್ತು ನಿಮಿಷಗಳು!. ಯಾವುದೇ ವರ್ಷದ ವಿಶೇಷ ದಿನ ಗಳನ್ನು ಸೆಕೆಂಡ್ಗಳಲ್ಲಿ ಪ್ರಶಾಂತ್ ನೆನಪಿನಿಂದ ನಕಲು ಮಾಡಬಲ್ಲರು. ಅಷ್ಟೇ ಅಲ್ಲ, ಆ ದಿನಕ್ಕೆ ಈ ದಿನದಿಂದ ಎಷ್ಟು ದಿನ ಬಾಕಿ ಉಳಿದಿದೆ ಎಂಬುದನ್ನೂ ನಿಖರವಾಗಿ ಪ್ರಶಾಂತ್ ಹೇಳಬಲ್ಲರು.

        ಕೇರಳದ ತಿರುವನಂತಪುರಂ ಜಿಲ್ಲೆಯ ಕರಮನ ಬಳಿಯ ಡಿ.ಬಿ. ಸ್ಟ್ರೀಟ್ ನಿವಾಸಿಯಾಗಿರುವ ಪ್ರಶಾಂತ್, ಚಂದ್ರನ್ ಮತ್ತು ಸುಹಿತಾ ದಂಪತಿಯ ಪುತ್ರನಾಗಿದ್ದು, ಅವರ ಸಹೋದರಿ ಪ್ರಿಯಾಂಕಾಗೆ ಮದುವೆಯಾಗಿದೆ. ದೃಷ್ಟಿ ಮತ್ತು ಶ್ರವಣ ದೋಷ, ಮಾತಿನ ದುರ್ಬಲತೆ, ಹೃದಯದಲ್ಲಿ ಎರಡು ರಂಧ್ರಗಳು ಮತ್ತು ಹಲವಾರು ನರ ಸಂಬಂಧಿತ ಕಾಯಿಲೆಗಳು ಹುಟ್ಟಿನಿಂದಲೇ ಕಾಡುತ್ತಿರುವ ಇವರು, ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ಹೆಚ್ಚು ದಿನ ಬದುಕುವುದು ಸಾಧ್ಯವಿಲ್ಲ ಎಂದುಕೊಂಡಿದ್ದ ಮಗು ಅದ್ಭುತವಾಗಿ ಬೆಳೆದು ನಿಂತಿತು. ಆ ಪಯಣದಲ್ಲಿ ವಿಜ್ಞಾನ ಲೋಕವೂ ಆತನ ಎದುರಲ್ಲಿ ಬೆರಗಾಗಿ ನಿಂತಿತ್ತು. ಬಾಲ್ಯದಲ್ಲಿ ಹೆತ್ತವರು ನೀಡಿದ ಪ್ಲಾಸ್ಟಿಕ್ ಅಕ್ಷರಗಳು ಮತ್ತು ಸಂಖ್ಯೆಗಳ ಆಟಿಕೆಗಳ ಮೂಲಕ ಪ್ರಶಾಂತ್ ಅವರ ವಿಸ್ಮಯ ಜಗತ್ತು ತೆರೆಯಲ್ಪಟ್ಟಿತು.

        ಗಣಿತದಲ್ಲಿ ಆಸಕ್ತಿ ಹುಟ್ಟಿ ಕ್ಯಾಲೆಂಡರ್ ಕಂಠಪಾಠ ಮಾಡಲು ಆರಂಭಿಸಿದಾಗ ಅವರ ಜೀವನವೇ ಬದಲಾಯಿತು. ಅದಕ್ಕೆ ಕಾರಣ ಅಕ್ಕ ಪ್ರಿಯಾಂಕಾ ಉಡುಗೊರೆಯಾಗಿ ನೀಡಿದ ಮೊಬೈಲ್ ಫೋನ್. ಪ್ರಥಮವಾಗಿ ಪ್ರಶಾಂತ್ 150 ವರ್ಷಗಳ ಕ್ಯಾಲೆಂಡರ್ ಅನ್ನು ಮಂದ ದೃಷ್ಟಿಯ ಸಹಾಯದಿಂದ ಎರಡು ದಿನಗಳಲ್ಲಿ ಫೋನ್ ಮೂಲಕ ಕಂಠಪಾಠ ಮಾಡಿದರು. ನಂತರದ ಪ್ರತಿ ದಿನ, ಹೊಸ ಜ್ಞಾನವನ್ನು ನೆನಪಿನಲ್ಲಿ ನಕಲು ಮಾಡಲು ಪ್ರಾರಂಭಿಸಿದರು. ಕಣ್ಣಿಗೆ ಹತ್ತಿರವಾಗಿ ಹಿಡಿದಿರುವ ಮೊಬೈಲ್ ಫೋನ್ನೊಂದಿಗೆ ಹೆಚ್ಚಿನ ವೇಗದಲ್ಲಿ ಅವರು ಚಲಿಸುತ್ತಾರೆ. ಈ ಮಧ್ಯೆ, ಅವರು 150 ವರ್ಷಗಳ ಯಾವುದೇ ದಿನಾಂಕದ ಬಗ್ಗೆ ಯಾವುದೇ ಪ್ರಶ್ನೆಗೆ ಸರಿಯಾದ ಉತ್ತರಗಳನ್ನು ನೀಡಲು ಪ್ರಾರಂಭಿಸಿದರು. ಇದರೊಂದಿಗೆ ಪೋಷಕರು ಹತ್ತು ಸಾವಿರ ವರ್ಷಗಳ ವರೆಗಿನ ಕ್ಯಾಲೆಂಡರ್ ಅನ್ನು ಅಂತರ್ಜಾಲದಿಂದ ಡೌನ್ಲೋಡ್ ಮಾಡಿ ಕೊಟ್ಟರು. ಸರಿಯಾಗಿ ಒಂದು ವಾರದಲ್ಲಿ ಪ್ರಶಾಂತ್ ಅಷ್ಟೂ ದಿನಾಂಕಗಳನ್ನು ಕಂಠಪಾಠ ಮಾಡಿದರು. ಅವರ ಅಸಾಧಾರಣ ಸ್ಮರಣೆಶಕ್ತಿಯು ಕಾಲಕ್ರಮೇಣ ಹೆಚ್ಚಾಗತೊಡಗಿತು. 2018ರಲ್ಲಿ ಕ್ರಿ.ಶ. ಒಂದರಿಂದ ಹತ್ತು ಮಿಲಿಯನ್ ವರ್ಷಗಳ ವರೆಗಿನ ಕ್ಯಾಲೆಂಡರ್ಗಳನ್ನು ಆತ ಮನನ ಮಾಡಿಯೇ ಬಿಟ್ಟರು.

         ಜನಿಸುವಾಗಲೇ ಮಾನಸಿಕವಾಗಿಯೂ, ದೈಹಿಕವಾಗಿಯೂ ವಿಕಲತೆ ಹೊಂದಿದ್ದ ಪ್ರಶಾಂತ್, ಮೂರು ತಿಂಗಳು ಮಾತ್ರ ಜೀವಿಸುವುದು ಸಾಧ್ಯ ಎಂದು ವೈದ್ಯರು ಹೇಳಿದ್ದರು. ಆರು ತಿಂಗಳು ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆದ ಬಳಿಕ ಮಗುವನ್ನು ನಮಗೆ ಹಸ್ತಾಂತರಿಸಿದ್ದರು. ಆ ಬಳಿಕ ಹಲವಾರು ಸರ್ಜರಿಗಳ ಮೂಲಕ ಮುಖವನ್ನು ಇಂದು ಕಾಣುವ ರೀತಿಗೆ ಬದಲಾಯಿಸಿದ್ದೆವು. ಸೊಂಡಿಲಿನಂತಹ ಮೂಗು, ಪುಟ್ಟ ಕಣ್ಣುಗಳು, ದೊಡ್ಡ ಕಿವಿಗಳನ್ನು ಮಗು ಹೊಂದಿದ್ದವು. ಚಿಕಿತ್ಸೆ ನೀಡಿದ ಡಾಕ್ಟರ್ಗಳು ಮುಂಚಿತವಾಗಿ ತಿಳಿಸಿದಂತೆ, ಅತ್ಯಂತ ಕಾಳಜಿಯಿಂದ ನೋಡಿಕೊಂಡೆವು. ಇದೀಗ ಇಪ್ಪತ್ತೈದರ ಹರೆಯದಲ್ಲಿ ಪ್ರಶಾಂತ್ ಇದ್ದು, ಹಲವಾರು ರೋಗಗಳು ಆತನನ್ನು ಕಾಡುತ್ತಿದ್ದು, ಆ ನೋವು ನಮ್ಮನ್ನೂ ಕಾಡುತ್ತಿದೆ.

ಚಂದ್ರನ್ ಕೆ. (ಪ್ರಶಾಂತ್ ತಂದೆ)

ಇಂದು ಪ್ರಶಾಂತ್ ದಾಖಲೆಗಳ ಸರದಾರ. ಏಶ್ಯ ಬುಕ್ ಆಫ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಯುಆರ್ಎಫ್ ನ್ಯಾಶನಲ್ ರೆಕಾರ್ಡ್ಸ್, ಯುಆರ್ಎಫ್ ಹಾಲ್ ಆಫ್ ಫೇಮ್, ಇನ್ಕ್ರಿಡಬಲ್ ಬುಕ್ ಆಫ್ ವರ್ಲ್ಡ್ಡ್ ರೆಕಾರ್ಡ್ಸ್, ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ಡ್ ಕಿಂಗ್ಸ್ ಟಾಪ್ ರೆಕಾರ್ಡ್ಸ್, ಇನ್ಕ್ರೆಡಿಬಲ್ ಪೀಪಲ್ ಪ್ರಶಸ್ತಿ ಮತ್ತು ಭಾರತದಲ್ಲಿ ಇಪ್ಪತ್ತಕ್ಕೂ ಹೆಚ್ಚು ಅವಾರ್ಡ್ ಗಳು ಮತ್ತು ವಿದೇಶದಲ್ಲಿ ಪ್ರಶಾಂತ್ ಹೆಸರು ದಾಖಲೆ ಪುಸ್ತಕದಲ್ಲಿದೆ. 2018ರಲ್ಲಿ ಪ್ರಶಾಂತ್ ಅವರ ಸಾಧನೆಗಳೆಂದರೆ ವಂಡರ್ ಬುಕ್ ಆಫ್ ವರ್ಲ್ಡ್ಡ್ ರೆಕಾರ್ಡ್ಸ್, ವರ್ಲ್ಡ್ಡ್ ಬುಕ್ ಆಫ್ ವರ್ಲ್ಡ್ಡ್ ರೆಕಾರ್ಡ್ಸ್, ಹೈ ರೇಂಜ್ ಬುಕ್ ಆಫ್ ವರ್ಲ್ಡ್ಡ್ ರೆಕಾರ್ಡ್ಸ್ ಮತ್ತು ಗ್ಲೋಬಲ್ ರೆಕಾರ್ಡ್ಸ್. ರಾಷ್ಟ್ರಪತಿಯವರು 2016ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದ್ದು, 2017ರಲ್ಲಿ ಯುಕೆ ವಿಶ್ವ ದಾಖಲೆ ವಿಶ್ವವಿದ್ಯಾನಿಲಯದಿಂದ ಪ್ರಶಾಂತ್ ಡಾಕ್ಟರೇಟ್ ಕೂಡ ಪಡೆದುಕೊಂಡರು.

    ಹಲವು ಅಂತರ್ರಾಷ್ಟ್ರೀಯ ಪ್ರಶಸ್ತಿಗಳು, ಮೂರು ನ್ಯಾಶನಲ್ ಅವಾರ್ಡ್ಗಳಿಗೆ ಭಾಜನರಾದರೂ, ಒಂದೇ ಒಂದು ರಾಜ್ಯ ಪ್ರಶಸ್ತಿ ಲಭಿಸದಿರುವುದು ಪ್ರಶಾಂತ್ ರಲ್ಲಿ ಮಾನಸಿಕ ಮುಜುಗರವನ್ನು ಉಂಟುಮಾಡಿತ್ತು. ಕಳೆದ ಬಾರಿ ಆ ಬಗೆಗಿನ ಫೈಲ್ ಮುಂದುವರಿಸಿದ್ದರೂ, ಅದು ಆಡಳಿತಾತ್ಮಕ ವ್ಯವಸ್ಥೆಯನ್ನು ತಲುಪಿರಲಿಲ್ಲ. ಅದೂ ಅಲ್ಲದೆ, ಆ ಬಗ್ಗೆ ಹಲವಾರು ವಿವಾದಗಳೂ ಹುಟ್ಟಿಕೊಂಡಿದ್ದವು. ಆ ಬಳಿಕ ಕಳೆದ ಡಿಸೆಂಬರ್ 3ಕ್ಕೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿದವು’ ಎಂದು ಪ್ರಶಾಂತ್ರ ತಾಯಿ ಸುಹಿತಾ ಹೇಳುತ್ತಾರೆ.

        ಪ್ರಶಾಂತ್ ಎನ್ನುವ ಹೆಸರು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಕಾಣಿಸಿಕೊಳ್ಳಬೇಕಾ ಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಇದು ವಿಳಂಬವಾ ಗಿದೆ. ಅಚ್ಚರಿಯ ವಿಷಯವೆಂದರೆ, ಅಷ್ಟು ವರ್ಷಗಳ ನಿಖರತೆಯನ್ನು ಅಳೆಯುವ ಅಧಿಕೃತ ವ್ಯವಸ್ಥೆಗಳಿಲ್ಲದ ಕಾರಣ ಗಿನ್ನ್ನೆಸ್ ಅಧಿಕಾರಿಗಳು ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದ್ದಾರೆ ಎನ್ನುವುದು!. ವ್ಯಕ್ತಿಗಳ ಹೆಸರಿನಲ್ಲಿರುವ ಮಾಹಿತಿಗಳು ಗೂಗಲ್ನಲ್ಲಿ ಲಭ್ಯವಿವೆ. ಆದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಮತ್ತು ಸ್ಪರ್ಧಿಸಲು ಯಾವುದೇ ಪ್ರತಿಸ್ಪರ್ಧಿ ಇಲ್ಲದಿರುವುದೂ ಒಂದು ಕಾರಣ ಎನ್ನಲಾ ಗಿದೆ. ಪ್ರಶಾಂತ್ ತನ್ನ ಹೆಸರು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಲು ಯಾವುದೇ ಸರಕಾರ ಅಥವಾ ಪ್ರಾಧಿಕಾರದಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಅರ್ಜಿಗಾಗಿ ಕಾಯಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಗಿನ್ನೆಸ್ ದಾಖಲೆಯೂ ಪ್ರಶಾಂತ್ ಮುಂದೆ ತಲೆಬಾಗಿ ಕುಳಿತಿದೆ ಎನ್ನಬೇಕಾಗಿದೆ.

ಜ 30ಕ್ಕೆ ಮತ್ತೆ 17 ಅವಾರ್ಡ್ಗಳ ಹಸ್ತಾಂತರ!

ಪ್ರಶಾಂತ್ ಬಂಗಾಳ್ ಬುಕ್ ಆಫ್ ರೆಕಾರ್ಡ್, ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್, ಅಸ್ಸಾಂ ಬುಕ್ ಆಫ್ ರೆಕಾರ್ಡ್, ಇಂಡಿಯನ್ಸ್ ವರ್ಲ್ಡ್ ರೆಕಾರ್ಡ್, ಯುನಿವರ್ಸಲ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್, ಬೆಸ್ಟ್ ಇಂಡಿಯಾ, ಒಎಂಜಿ ಬುಕ್ ಆಫ್ ರೆಕಾರ್ಡ್, ನ್ಯಾಶನಲ್ ಬುಕ್ ಆಫ್ ರೆಕಾರ್ಡ್, ಫ್ಯೂಚರ್ ಕಲಾಂ ಆಫ್ ಇಂಡಿಯಾ ಬುಕ್ ಆಫ್ ರೆಕಾರ್ಡ್, ಅಮೇಝಿಂಗ್ ಬುಕ್ ಆಫ್ ರೆಕಾರ್ಡ್ ಮತ್ತಿತರ 17 ಅವಾರ್ಡ್ಗಳನ್ನು ಹಸ್ತಾಂತ ರಿಸುವ ಕಾರ್ಯಕ್ರಮವನ್ನು ಜ.30ರಂದು ತಿರುವನಂತಪುರದಲ್ಲಿ ಹಮ್ಮಿಕೊಳ್ಳಲಾಗಿದೆ.

ಉಡುಪಿಯಲ್ಲೂ ಪುತ್ತೂರು ಶಾಸಕರ ಹವಾ – ಅಶೋಕ್ ಕುಮಾರ್ ಸಾಮಾಜಿಕ ಕಳಕಳಿಗೆ ಮೆಚ್ಚುಗೆ

Posted by Vidyamaana on 2024-05-03 21:53:46 |

Share: | | | | |


ಉಡುಪಿಯಲ್ಲೂ ಪುತ್ತೂರು ಶಾಸಕರ ಹವಾ – ಅಶೋಕ್ ಕುಮಾರ್ ಸಾಮಾಜಿಕ ಕಳಕಳಿಗೆ ಮೆಚ್ಚುಗೆ

ಪುತ್ತೂರು : ಉಡುಪಿಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪ್ಲೇಟ್ ಶುಚಿ ಮಾಡುತ್ತಿದ್ದ ಬಾಲಕನೋರ್ವನ ಜೊತೆ ಮಾತುಕತೆ ನಡೆಸಿದ ವಿಚಾರ ಮತ್ತು ಆ ಬಾಲಕನೊಂದಿಗೆ ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದು, ಇದೀಗ ಬಾಲಕ ಶಾಸಕರಿಗೆ ಕರೆ ಮಾಡಿ ನಾನು ಕಲಿಯುತ್ತೇನೆ., ಓದು ಮುಂದುವರೆಸುತ್ತೇನೆ ಎಂದು ತಿಳಿಸಿದ್ದು, ಶಿಕ್ಷಣದ ಪೂರ್ತಿವೆಚ್ಚವನ್ನು ತಾನು ಭರಿಸುವುದಾಗಿ ಶಾಸಕರು ತಿಳಿಸಿದ್ದಾರೆ.


ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದ ಶಾಸಕರು ಅಲ್ಲಿ ಊಟ ಮಾಡಿ ಪ್ಲೇಟ್ ಇಡಲು ತೆರಳಿದಾಗ ಅಲ್ಲೋರ್ವ ಬಾಲಕ ಪ್ಲೇಟ್ ಸ್ವಚ್ಚ ಮಾಡುತ್ತಿದ್ದ. ಆತನನ್ನು ನೋಡಿದ ಶಾಸಕರು ಆತನ ಪರಿಚಯ ಮಾಡಿಕೊಂಡರು. ನೀನು ಕಲಿಯುವುದಕ್ಕೆ ಹೋಗುವುದಿಲ್ವಾ..? ಕೆಲಸಕ್ಕೆ ಯಾಕೆ ಹೋಗುತ್ತಿದ್ದಿಯ..? ಮನೆಯಲ್ಲಿ ಅಪ್ಪ ಅಮ್ಮ ಏನು ಮಾಡುತ್ತಾರೆ..? ಮನೆಯ ಪರಿಸ್ಥಿತಿ ಹೇಗಿದೆ..? ಎಂದೆಲ್ಲಾ ಆತನಲ್ಲಿ ಮಾಹಿತಿ ಪಡೆದುಕೊಂಡರು. ತನ್ನ ಮನೆಯ ವಿಚಾರವನ್ನು ಎಳೆ ಎಳೆಯಾಗಿ ಬಾಲಕ ಶಾಸಕರಲ್ಲಿ ತಿಳಿಸಿದ್ದಾನೆ. ಬಾಲಕನ ಸಂಕಷ್ಟದ ಮಾತುಗಳನ್ನು ಕೇಳಿದ ಶಾಸಕರು ನೀನು ಕಲಿಯಬೇಕು, ಕಲಿತು ಒಂದು ಒಳ್ಳೆಯ ಉದ್ಯೋಗವನ್ನು ಪಡೆದು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿ ಆತನ ಭುಜಕ್ಕೆ ಕೈ ಇಟ್ಟು ಫೋಟೋ ಕ್ಲಿಕ್ಕಿಸಿಕೊಂಡರು. ಬಾಲಕನೂ ಶಾಸಕರ ಜೊತೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ.

ಯಕ್ಷಗಾನಕ್ಕೂ ಬಂತು ನಾನು ಅಧ್ಯಕ್ಷ ಡೈಲಾಗ್

Posted by Vidyamaana on 2023-05-27 18:38:07 |

Share: | | | | |


ಯಕ್ಷಗಾನಕ್ಕೂ ಬಂತು ನಾನು ಅಧ್ಯಕ್ಷ ಡೈಲಾಗ್

     ಪತ್ತನಾಜೆಯೊಂದಿಗೆ ತುಳುನಾಡಿನ ಗಂಡುಕಲೆ ಯಕ್ಷಗಾನದ ಮೇಳಗಳು ತಮ್ಮ ಪ್ರದರ್ಶನವನ್ನು ಮುಗಿಸಿವೆ. ಇತ್ತೀಚಿನ ದಿನಗಳಲ್ಲಿ ಯಕ್ಷಗಾನದಲ್ಲಿ ಪ್ರಚಲಿತ ವಿದ್ಯಮಾನಗಳನ್ನು, ಚಲನಚಿತ್ರ ಮತ್ತು ರಾಜಕಾರಣದಲ್ಲಿ ವೈರಲ್ ಆಗುವ ಸಂಭಾಷಣೆಗಳನ್ನು ಪಾತ್ರೋಚಿತವಾಗಿ ಅಳವಡಿಸಿಕೊಂಡಿರುವುದನ್ನು ಯಕ್ಷಪ್ರಿಯರು ನೋಡಿದ್ದಾರೆ.

ಈ ಹಿಂದೆ ರಾಷ್ಟ್ರೀಯ ಪಕ್ಷವೊಂದರ ನಾಯಕರ ‘ಇವನರ್ವ..’ ಹೇಳಿಕೆ ಯಕ್ಷಗಾನದಲ್ಲೂ ವೈರಲ್ ಆಗಿ ಒಂದಿಷ್ಟು ವಿವಾದಕ್ಕೂ ಕಾರಣವಾಗಿತ್ತು. ಆ ಬಳಿಕ ಕಾಂತಾರ ಚಿತ್ರದ ಒಂದಷ್ಟು ಫೇಮಸ್ ಸಂಭಾಷಣೆಗಳೂ ಸಹ ಕೆಲವೊಂದು ಪ್ರಸಂಗಗಳಲ್ಲಿ ಯಕ್ಷ ಪಾತ್ರಧಾರಿಗಳು ಅಳವಡಿಸಿಕೊಂಡು ಯಕ್ಷಪ್ರಿಯರ ಶಿಳ್ಳೆ ಮತ್ತು ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡಿದ್ದರು.

ಇದೀಗ ಅಂತದ್ದೇ ಒಂದು ಸಂಭಾಷಣೆ ಯಕ್ಷಗಾನ ಪ್ರದರ್ಶನವೊಂದರಲ್ಲಿ ಕೇಳಿಬಂದಿದ್ದು ಆ ಸಂಭಾಷಣೆಯ ತುಣುಕು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷರು ಪಕ್ಷದ ಸಭೆಯೊಂದರಲ್ಲಿ ‘ಎಲ್ಲಾ ಕಡೆ ನೋಡ್ಕೊಂಡು ಬಂದಿದ್ದೇನೆ, ಯಾರಿಗೆ ಹೆಚ್ಚು ಚಪ್ಪಾಳೆ ಬೀಳುತ್ತೋ ಅವರಿಗೆ ಟಿಕೆಟ್ ಇಲ್ಲ.. ನಾನು ಅಧ್ಯಕ್ಷ..’ ಎಂಬ ಮಾತು ಆಮೇಲೆ ಚುನಾವಣಾ ಫಲಿತಾಂಶ ಬಂದ್ಮೇಲೆ ಒಟ್ರಾಶಿ ವೈರಲ್ ಆಗಿತ್ತು. ಅದನ್ನೇ ಕಟೀಲು 3ನೇ ಮೇಳದ ಪ್ರದರ್ಶನವೊಂದರಲ್ಲಿ ಕಲಾವಿದರಿಬ್ಬರ ನಡುವಿನ ಸಂಭಾಷಣೆಯಲ್ಲಿ ಬಂದು ನೆರೆದಿದ್ದ ಪ್ರೇಕ್ಷರನ್ನು ರಂಜಿಸಿದೆ.

ದೇವೇಂದ್ರ ಪಾತ್ರಧಾರಿ, ‘ನಾನು ಯಾರು ಬಲ್ಲೆಯಾ? ನಾನು ಅಧ್ಯಕ್ಷ.. ನಾನು ಒಂದು ಲೋಕಕ್ಕೆ ಮಾತ್ರವಲ್ಲ ಮೂರು ಲೋಕಕ್ಕೂ ಅಧ್ಯಕ್ಷ..’ ಎಂಬ ಮಾತನ್ನು ಹೇಳುವಾಗ ಇದಿರು ಪಾತ್ರಧಾರಿ ‘ಇಂದ್ರ..’ ಎಂದು ಕೈಮುಗಿದು ನಮಸ್ಕರಿಸಿ ಬಳಿಕ, ‘ನಾನು ಅಧ್ಯಕ್ಷ.. ನಾನು ಅಧ್ಯಕ್ಷ.. ಅಂತ ಹೇಳಿಕೊಂಡು ತಿರುಗಾಡಿದ್ರೆ ಸಾಲ್ದು ಅಧ್ಯಕ್ಷ ಪೀಠಕ್ಕೆ ಸರಿಯಾದ ಪ್ರವರ್ತನೆ ಬೇಕು, ಅದಲ್ದೇ ಹೋದ್ರೆ ಬರೇ ಅಧ್ಯಕ್ಷ ಅಂತ ಯಾರೂ ಕೈ ಮುಗಿಯೋದಿಲ್ಲ..’ ಎಂದು ಹೇಳುವಾಗ ಪ್ರೇಕ್ಷಕರಿಂದ ಭರ್ಜರಿ ಶಿಳ್ಳೆ ಬೀಳುತ್ತದೆ. ಇದೀಗ ಈ ವಿಡಿಯೋ ತುಣುಕನ್ನು ಹಲವರು ವಾಟ್ಸ್ಯಾಪ್ ಸ್ಟೇಟಸ್ ಹಾಕಿಕೊಂಡಿರುವುದ ಮಾತ್ರವಲ್ಲದೇ ತಮ್ಮ ಗ್ರೂಪುಗಳಲ್ಲಿ ಶೇರ್ ಮಾಡ್ತಿದ್ದಾರೆ.

ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : ಇಂದು ಸಂಭ್ರಮ ಶನಿವಾರ ಬ್ಯಾಗ್ ರಹಿತ ದಿನಾಚರಣೆ

Posted by Vidyamaana on 2023-07-15 04:27:46 |

Share: | | | | |


ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : ಇಂದು ಸಂಭ್ರಮ ಶನಿವಾರ ಬ್ಯಾಗ್ ರಹಿತ ದಿನಾಚರಣೆ

ಬೆಂಗಳೂರು : ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು ಶಾಲಾ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸಂಭ್ರಮ ಶನಿವಾರ ಹೆಸರಿನಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ರಹಿತ ದಿನಾಚರಣೆಗೆ ಇಂದಿನಿಂದ ಚಾಲನೆ ಸಿಕ್ಕಿದೆ.ರಾಜ್ಯದ ಶಾಲಾ ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡಲು ಹಾಗೂ ಮಕ್ಕಳಿಗೆ ಪಠ್ಯವನ್ನು ಹೊರೆಯಾಗಿಸದೇ ಉಲ್ಲಾಸದಿಂದ ಕಲಿಯುವಂತೆ ಮಾಡುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ಶನಿವಾರದಂದು ಬ್ಯಾಗ್ ರಹಿತ ದಿನವೆಂದು ಆಚರಿಸುವಂತೆ ಆದೇಶಿಸಲಾಗಿದೆ.2023-24 ನೇ ಸಾಲಿನಲ್ಲಿ ಪ್ರತಿ ತಿಂಗಳು 3 ನೇ ಶನಿವಾರ ಶಾಲಾ ಹಂತದಲ್ಲಿ ಸದರಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತಿಳಿಸಲಾಗಿದ್ದು, ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳಿಗಾಗಿ 10 ಸ್ವಯಂ ವಿವರಣಾತ್ಮಕ ಮಾಡ್ಯೂಲ್ ಗಳನ್ನು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಗಳನ್ನು ಸಿದ್ದಪಡಿಸಲಾಗಿದೆ.


ಸಂಭ್ರಮ ಶನಿವಾರ ದಿನದಂದು ಜಿಲ್ಲಾ ಹಂತ ಮತ್ತು ಬ್ಲಾಕ್ ಹಂತದ ಎಲ್ಲಾ ಅಧಿಕಾರಿಗಳು ಹಾಗೂ ಸಿಆರ್ ಪಿಗಳು ಕಡ್ಡಾಯವಾಗಿ ಶಾಲೆಗಳಿಗೆ ಭೇಟಿ ನೀಡಿ ಅನುಪಾಲಿಸುವುದು ಹಾಗೂ ಅಗತ್ಯ ಮಾರ್ಗದರ್ಶನ ನೀಡುವುದು ಕಾರ್ಯಕ್ರಮದ ಯಶಸ್ಸಿಗೆ ಪಾಲ್ಗೊಳ್ಳಬೇಕು ಎಂದು ಸೂಚನೆ ನೀಡಿದೆ.



Leave a Comment: