Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34
ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.
ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
Posted by Vidyamaana on 2023-09-20 14:02:54 |
ಪುತ್ತೂರು: ಕೇಸರಿ ಶಾಲು ಧರ್ಮದ ಸಂಕೇತವಾಗಿದೆ ವಿನಾ ಯಾವುದೇ ರಾಜಕೀಯ ಪಕ್ಷದ ಸೊತ್ತಲ್ಲ, ಕೆಲವರು ಅದು ನಮ್ಮದೇ ಎಂದು ಹೇಳುತ್ತಿದ್ದಾರೆ, ಧರ್ಮದ ಹಾದಿಯಲ್ಲಿ ನಡೆಯುವ ಪ್ರತೀಯೊಬ್ಬ ವ್ಯಕ್ತಿಯೂ ತನ್ನ ಧರ್ಮವನ್ನು ಆಚರಣೆ ಮಾಡುವುದರ ಜೊತೆ ಸಹೋದರ ಧರ್ಮವನ್ನು ಗೌರವಿಸುತ್ತಾನೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಬಳಿ ಸಂತಫಿಲೋಮಿನಾ ವಿದ್ಯಾ ಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳ ಗಣೇಶೋತ್ಸವ ಸೇವಾ ಟ್ರಸ್ಟ್ , ಫಿಲೋಮಿನ ಕಾಲೇಜು ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಲ್ಲಿ ಪ್ರತೀಯೊಬ್ಬರೂ ಪರಸ್ಪರ ಸಹೋದರರಂತೆ ಬಾಳಬೇಕು, ಇಲ್ಲಿ ಯಾರೂ ಮೇಲೂ ಇಲ್ಲ ಕೀಳೂ ಇಲ್ಲ, ನಮ್ಮ ದೇಹದಲ್ಲಿ ಹರಿಯುವ ರಕ್ತ ಒಂದೇ, ಉಸಿರಾಡುವ ಗಾಳಿಯೂ ಒಂದೇ, ಕುಡಿಯುವ ನೀರೂ ಒಂದೇ ಹೀಗಿರುವಾಗ ನಮ್ಮಲ್ಲಿ ಧರ್ಮದ ಹೆಸರಲ್ಲಿ ಬೇದ ಭಾವ ಯರೂ ಮಾಡಬಾರದು. ಪರಸ್ಪರ ಶಾಂತಿ ಸೌಹಾರ್ಧತೆಯಿಂದ ಬಾಳಿ ಬದುಕಿದರೆ ಸಮಾಜದಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ. ಹಿಂಸೆಗೆ ನಾವು ಎಂದೂ ಪ್ರಚೋಧನೆ ಕೊಡಬಾರದು, ಹಿಂಸೆಯಿಂಸ ಸಾಧಿಸಿದ್ದು ಏನೂ ಇಲ್ಲ. ಒಂದೇ ತಾಯಿ ಮಕ್ಕಳಂತೆ ಬಾಳಿ ಬದಕುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾವು ಕಾರಣ ಕರ್ತರಾಗಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿರುವ ಬಹುತೇಕ ದೇವಸ್ಥಾನ, ದೈವಸ್ಥಾಮ ಮಸೀದಿ, ಚರ್ಚುಗಳು ಸರಕಾರಿ ಜಾಗದಲ್ಲಿದೆ. ಸರಕಾರ ಜಾದಲ್ಲಿರುವ ಆರಾಧನಾ ಸ್ಥಳಗಳನ್ನು ಸಕ್ರಮ ಮಾಡಲು ಅಥವಾ ಮಂದಿರದ ಹೆಸರಿನಲ್ಲಿ ಮಾಡಲು ಇದುವರೆಗೂ ಯಾರೂ ಮುಂದಾಗಿಲ್ಲ. ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿದ್ದೇನೆ ಮುಂದಿನ ದಿನಗಳಲ್ಲಿ ಅದು ಕಾನೂನಾಗಿ ಕಾರ್ಯರೂಪಕ್ಕೆ ಬರುವ ವಿಶ್ವಾಸ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಫಿಲೋಮಿನಾ ಪದವಿ ಕಾಲೇಜು ಪ್ರಾಂಶುಪಾಲರಾದ ಆಂಟನಿ ಪ್ರಕಾಶ್ ಮೊಂತೆರೋ, ಪಿಯು ಕಾಲೇಜು ಪ್ರಾಂಶುಪಾಲರಾದ ಅಶೋಕ್ ರಾಯನ್ ಕ್ರಾಸ್ತಾ, ಕಾಲೇಜು ವಾರ್ಡನ್ ರುಪೇಶ್ ತಾವ್ರೋ, ಕಾರ್ಯದರ್ಶಿ ಹೃದಯ್ ಎಸ್, ಜೊತೆ ಕಾರ್ಯದರ್ಶಿ ರಕ್ಷಾ ಅಂಚನ್, ಟ್ರಸ್ಟ್ ಗೌರವಾಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ ಉಪಸ್ಥಿತರಿದ್ದರು.ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಕ್ರಂ ಆಳ್ವ ಸ್ವಾಗತಿಸಿದರು.ವರ್ಷಾ ಕಾರ್ಯಕ್ರಮ ನಿರೂಪಿಸಿದರು.
Posted by Vidyamaana on 2023-06-10 12:02:39 |
ಹೈದರಾಬಾದ್: ವಿವಾಹಿತ ಪುರೋಹಿತರೊಬ್ಬರು ಮಹಿಳೆಯೊಬ್ಬರನ್ನು ಕೊಂದು ಅವರ ದೇಹವನ್ನು ದೇವಸ್ಥಾನದ ಬಳಿಯ ಚರಂಡಿಯಲ್ಲಿ ಅಡಗಿಸಿಟ್ಟ ಘಟನೆ ತೆಲಂಗಾಣದ ಸರೋರ್ ನಗರದಲ್ಲಿ ನಡೆದಿದೆಆರೋಪಿಯನ್ನು ಅಯ್ಯಗಾರಿ ಸಾಯಿ ಕೃಷ್ಣ ಎಂದು ಗುರುತಿಸಲಾಗಿದೆ. ಕುರುಗಂಟಿ ಅಪ್ಸರಾ ಎಂಬಾಕೆ ಮೃತ ಯುವತಿ.ಕುರುಗಂಟಿ ಅಪ್ಸರಾಳನ್ನು ಭದ್ರಾಚಲಂಗೆ ತೆರಳಲು ಮುಂದಾಗಿದ್ದ ವೇಳೆ ಶಂಶಾಬಾದ್ ಬಸ್ ನಿಲ್ದಾಣದಲ್ಲಿ ಡ್ರಾಪ್ ಮಾಡಿರುವುದಾಗಿ ಸಾಯಿಕೃಷ್ಣ ಅವರೇ ನಾಪತ್ತೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಅಂದಿನಿಂದ ಅವಳು ಯಾವುದೇ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಮೇ 3 ರಿಂದ ನಾಪತ್ತೆಯಾಗಿದ್ದಾಳೆ ಎಂದು ಪುರೋಹಿತ ಸಾಯಿ ಕೃಷ್ಣ ದೂರು ನೀಡಿದ್ದರು.
ದೂರಿನಲ್ಲಿ ಅಪ್ಸರಾ ತನ್ನ ಸೊಸೆ ಎಂದು ಸಾಯಿ ಕೃಷ್ಣ ಹೇಳಿಕೊಂಡಿದ್ದ. ತನಿಖೆ ನಡೆಸಿದ ಪೊಲೀಸರು ದೂರು ನೀಡಿದ ಸಾಯಿ ಕೃಷ್ಣನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಸಿಸಿಟಿವಿ ವಿಡಿಯೋಗಳು ಸೇರಿ ಹಲವು ಸಾಕ್ಷ್ಯಗಳು ಇದಕ್ಕೆ ಬಲ ತುಂಬಿದ್ದವು.ಪೊಲೀಸರ ಮಾಹಿತಿಯ ಪ್ರಕಾರ ಸಾಯಿ ಕೃಷ್ಣ ವಿವಾಹಿತನಾಗಿದ್ದು, ಆತನಿಗೆ ಇಬ್ಬರು ಮಕ್ಕಳಿದ್ದಾರೆ. ಅದಾಗ್ಯೂ ಅಪ್ಸರಾ ಜತೆ ಸಂಬಂಧ ಇಟ್ಟಕೊಂಡಿದ್ದ. ತನ್ನನ್ನು ಮದುವೆಯಾಗು ಎಂದು ಅಪ್ಸರಾ ಒತ್ತಾಯ ಮಾಡುತ್ತಿದ್ದಳು ಎಂದು ಸಾಯಿ ಕೃಷ್ಣ ಹೇಳಿಕೊಂಡಿದ್ದಾನೆಶಂಶಾಬಾದ್ ನಲ್ಲಿ ಅಪ್ಸರಾಳನ್ನು ಕೊಲೆ ಮಾಡಿದ್ದ ಸಾಯಿ ಕೃಷ್ಣ ಬಳಿಕ ಮೃತದೇಹವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಕಟ್ಟಿ ಸರೋರ್ ನಗರಕ್ಕೆ ಸಾಗಿಸಿದ್ದ. ಅಲ್ಲಿ ಎಂಆರ್ ಓ ಕಚೇರಿ ಬಳಿಯ ಮ್ಯಾನ್ ಹೋಲ್ ಗೆ ಮೃತದೇಹವನ್ನು ಎಸೆದಿದ್ದ. ಈ ಎಂಆರ್ ಓ ಕಚೇರಿ ಬಳಿಯ ದೇವಸ್ಥಾನದಲ್ಲಿ ಸಾಯಿ ಕೃಷ್ಣ ಅರ್ಚಕನಾಗಿದ್ದ.
Posted by Vidyamaana on 2024-02-08 16:48:29 |
ಪುತ್ತೂರು: ಸ್ವಂತ ಮನೆ ಹೊಂದುವ ನಿಮ್ಮ ಕನಸನ್ನು ನನಸು ಮಾಡುವ ಆಶೀರ್ವಾದ ಲಕ್ಕಿ ಸ್ಕೀಂನ ಮೊದಲ ಕಂತಿನ ಡ್ರಾ ಇಂದು (ಗುರುವಾರ) ಸಂಜೆ ನಡೆಯಲಿದೆ.
ವಿದ್ಯಮಾನ ಈ ಡ್ರಾ ಫಲಿತಾಂಶದ ನೇರ ಪ್ರಸಾರ ನಡೆಸಿಕೊಡಲಿದೆ.
ಹೌದು,ಸ್ವಂತ ಮನೆ, ಕಾರು ,ಎಲೆಕ್ಟ್ರಾನಿಕ್ಸ್ ವಸ್ತುಗಳು ಇದೆಲ್ಲವನ್ನೂ ಅತೀ ಕಡಿಮೆ ಕಂತಿನಲ್ಲಿ ಪಡೆಯುವ ಆಶೀರ್ವಾದ ಲಕ್ಕಿ ಸ್ಕೀಂ,ಕೈಗೆಟುಕುವ ಕಂತಿನಲ್ಲಿ ಪ್ರತಿ ತಿಂಗಳು ಮನೆಗೆ ಬೇಕಾಗುವ ವಸ್ತುಗಳನ್ನು ಗೆಲ್ತಾ ಇರಿ, ಇನ್ನು
ವಿಜೇತರಲ್ಲದವರು ತಲೆಗೆ ಕೈ ಹೊತ್ತು ಕುಳಿತುಕೊಳ್ಳುವ ಮಾತೇ ಇಲ್ಲ,ಯಾಕೆಂದರೆ , ಪ್ರತೀ ಸದಸ್ಯರಿಗೂ ಖಚಿತ ಉಡುಗೊರೆಯಾಗಿ, ಇನ್ವರ್ಟರು,ಸೋಫಾ ಸೆಟ್,ಟಿವಿ,ಫ್ರಿಡ್ಜ್, ವಾಷಿಂಗ್ ಮೆಷಿನ್ ಇನ್ನೂ ಅನೇಕ ಬಹುಮಾನಗಳು ಖಂಡಿತ..
ಇಷ್ಟು ಮಾತ್ರವಲ್ಲ,ಪ್ರತೀ ತಿಂಗಳು 50 ಸರ್ಪ್ರೈಸ್ ಚಿನ್ನದ ನಾಣ್ಯಗಳನ್ನು 50 ಸದಸ್ಯರಿಗೆ ನೀಡಲಾಗುತ್ತದೆ.
ಇದೀಗ ಆಶೀರ್ವಾದ 1,500 ಕ್ಕಿಂತಲೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿದ್ದು ಪ್ರತಿಯೊಬ್ಬ ಗ್ರಾಹಕರಿಗೂ 24/7 ಗ್ರಾಹಕ ಸೇವೆಯನ್ನು ಕೂಡ ಒದಗಿಸುತ್ತಾ ಬಂದಿದೆ.
ನಿಮ್ಮ ತಿಂಗಳ ದುಡಿಮೆಯ ಕೇವಲ ಒಂದು ಸಾವಿರ ರೂ ಹೂಡಿಕೆ ಮಾಡಿ ತಿಂಗಳ ಪ್ರತಿ ಡ್ರಾ ವಿಜೇತರಾಗಿ ಹಾಗೂ ಕನಸಿನ ಮನೆಯನ್ನು ಜೊತೆಗೆ ಎಲ್ಲಾ ಬಹುಮಾನಗಳನ್ನು ಗೆಲ್ಲಿ....ಹಾಗಾದರೆ ಇನ್ಯಾಕೆ ತಡ,ಒಂದು ಕೈ ನೋಡೇ ಬಿಡೋಣ ,ಏನಂತೀರಿ.....
ಹೆಚ್ಚಿನ ಮಾಹಿತಿಗಾಗಿ ಪುತ್ತೂರಿನಲ್ಲಿರುವ ಆಶೀರ್ವಾದ ಸಂಸ್ಥೆಗೆ ಭೇಟಿ ನೀಡಿ ಮತ್ತು ಮಾಹಿತಿಗಳನ್ನು ತಿಳಿದುಕೊಳ್ಳಿ
7022645143
7022646143
*⚡ಜೈ ತುಳುನಾಡ್ ❤️⚡*
*🚩ಮಾತ ತುಳುವಪ್ಪೆನ ಜೋಕುಳೆಗ್ ಉಡಲ್ ದಿಂಜಿ ಸೋಲ್ಮೇಲು*
*🙏🏻ಆತ್ಮೀಯರೇ,ಗೌರವ ಸೂಚಕವಾಗಿ ಮೊದಲ ಪತ್ರವನ್ನು ನಿಮ್ಮ ಮಡಿಲಿಗೆ ಅರ್ಪಿಸಿದ್ದೇನೆ ❤️*
*⚡ತುಳುನಾಡಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮನೆ ಮಾತಾಗಿರುವ ಆಶೀರ್ವಾದ⚡*
⚡ಕೊನೆಯ *3 ಬಂಪರ್ ಡ್ರಾ ಗಳಲ್ಲಿ 2bhkಯ 3 ಮನೆಗಳನ್ನು* ಗೆಲ್ಲುವ ಸುವರ್ಣಾವಕಾಶ...
⚡ಕನಸಿನ ಕಾರು *ಮಹೀಂದ್ರ ಥಾರ್ ಗೆಲ್ಲಿ...*
⚡ಚಿನ್ನದ *ನೆಕ್ಲೆಸ್* ನಿಮ್ಮದಾಗಿಸಿಕೊಳ್ಳಿ
⚡ಹಿಮಾಲಯನ್ ಬೈಕ್ ಮತ್ತು ಡಾಮಿನಾರ್ ಕೂಡ ನಿಮ್ಮದಾಗಿಸಿ
🤩 ಪ್ರತೀ ಸದಸ್ಯರಿಗೂ ಕೊನೆಯ ಖಚಿತ ಉಡುಗೊರೆಯಾಗಿ, *ಇನ್ವರ್ಟರು,ಸೋಫಾ ಸೆಟ್,ಟಿವಿ,ಫ್ರಿಡ್ಜ್, ವಾಷಿಂಗ್ ಮೆಷಿನ್* ಇನ್ನೂ ಅನೇಕ ಬಹುಮಾನಗಳು ಖಂಡಿತ..
📢ಇಷ್ಟು ಮಾತ್ರವಲ್ಲ,ಪ್ರತೀ ತಿಂಗಳು 50 ಸರ್ಪ್ರೈಸ್ ಚಿನ್ನದ ನಾಣ್ಯಗಳನ್ನು 50 ಸದಸ್ಯರಿಗೆ ನೀಡಲಾಗುತ್ತದೆ.
*📡ಫೆಬ್ರವರಿ 15 ಕ್ಕೆ ಮೊದಲ ಡ್ರಾ ,ನಿಮ್ಮ ಸ್ಥಳೀಯ ನ್ಯೂಸ್ ಚಾನೆಲ್ ನಲ್ಲಿ ನೇರ ಪ್ರಸಾರ ಇರುತ್ತದೆ📡*
*📍ನಮ್ಮ ಸಂಪೂರ್ಣ ವಿಳಾಸ ಇಲ್ಲಿದೆ,*
Opposite Shubha book store,1st floor,moideen complex Darbe,PUTTUR,D.K
574202
*ಹೆಸರು ಮತ್ತು ವಿಳಾಸ ಇಂದೇ ನೀಡಿ,*
*ನಿಮ್ಮ ಒಳ್ಳೆಯತನಕ್ಕೆ ಅದೃಷ್ಟ,* *ಇಂದಲ್ಲಾ ನಾಳೆ ಬಂದೇ ಬರುತ್ತದೆ....ಅದು ಖಂಡಿತ...*
💥ಆಶೀರ್ವಾದ ವಾಟ್ಸಪ್ ಗ್ರೂಪ್ ಸೇರಲು ಕ್ಲಿಕ್ ಮಾಡಿ
https://chat.whatsapp.com/EQZfSXbJ3Z2CjEcoHGk8ax
Posted by Vidyamaana on 2024-01-21 00:03:21 |
ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜ 21ರಂದು
ಬೆಳಿಗ್ಗೆ 10 ಗಂಟೆಗೆ ಭಾಂದವ್ಯ ಟ್ರೋಫಿ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ
11.30 ರಿಂದ ನಗರಸಭಾ ವ್ಯಾಪ್ತಿಯಲ್ಲಿ ಗುದ್ದಲಿಪೂಜೆ
ಸಂಜೆ ಅಶೋಕ್ ರೈ ಅಭಿಮಾನಿಬಳಗ ವಾಲಿಬಾಲ್ ಪಂದ್ಯಾಟ: ಕೊಯಿಲ ಶಾಲಾ ಕ್ರೀಡಾಂಗಣ ಬಡಗನ್ನೂರು
ಸಂಜೆ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಸಿಝ್ಲರ್ ಟ್ರೋಫಿ ಕ್ರಿಕೆಟ್ ಪಂದ್ಯಾಟ
ಕೊಳ್ತಿಗೆ ಷಣ್ಮುಖ ದೇವಸ್ಥಾನದಲ್ಲಿ ಜಾತ್ರೋತ್ಸವ ಕಾರ್ಯಕ್ರಮ ಭಾಗವಹಿಸಲಿದ್ದಾರೆ
Posted by Vidyamaana on 2024-02-13 17:43:25 |
ಮಂಗಳೂರು: ನಗರದ ಜೆಪ್ಪುವಿನ ಸಂತ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಮಾಜಿ ಸಚಿವರಾದ ಬಿ.ರಮಾನಾಥ ರೈ ಹಾಗೂ ವಿನಯ ಕುಮಾರ್ ಸೊರಕೆ ಅವರ ನೇತೃತ್ವದ ಜಿಲ್ಲಾ ಕಾಂಗ್ರೆಸ್ ನಿಯೋಗ ಇಂದು ಶಾಲೆಗೆ ಭೇಟಿ ನೀಡಿದೆ.
ಸಂಪೂರ್ಣ ಘಟನೆ ಹಾಗೂ ಬಳಿಕ ನಡೆದ ವಿದ್ಯಮಾನಗಳ ಕುರಿತಂತೆ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಸತ್ಯಶೋಧನಾ ತನಿಖೆಯಾಗಬೇಕು ಎಂದು ಒತ್ತಾಯಿಸಿದೆ.
ಬಳಿಕ ಮಾತನಾಡಿದ ಮಾಜಿ ಶಾಸಕ ರಮಾನಾಥ ರೈ, ಜೆರೋಸಾ ವಿದ್ಯಾಸಂಸ್ಥೆ ಘಟನೆ ಬಗ್ಗೆ ಆರೋಪ ದೊಡ್ಡ ಪ್ರಚಾರ ಆಗಿದೆ. ಅದರ ಸತ್ಯಾಸತ್ಯತೆ ವಿಮರ್ಶೆ ನಾವು ಮಾಡಬೇಕಿದೆ. ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಉಳಿಯಬೇಕು ಅನ್ನೋದು ನಮ್ಮ ಆಶಯ ಎಂದರು.
ಕೆಲವರು ಪ್ರಚೋದನೆ ಮಾಡಬಹುದು, ಆದರೆ ನಾವು ಆ ಕೂಟದಲ್ಲಿ ಇಲ್ಲ. ಇವತ್ತು ಸಂಸ್ಥೆಯ ಮುಖ್ಯಸ್ಥರ ಭೇಟಿಯಾಗಿ ಮಾತುಕತೆ ಮಾಡಿದ್ದೇವೆ. ಸರ್ಕಾರ ಇದರ ಬಗ್ಗೆ ಒಂದು ಸತ್ಯಶೋಧನ ಸಮಿತಿ ಮಾಡಬೇಕು. ಇದು ಘರ್ಷಣೆಗೆ ಕಾರಣ ಆಗಬಾರದು, ಅಹಿತಕರ ಘಟನೆ ಆಗಬಾರದು ಎಂದರು.
Posted by Vidyamaana on 2024-06-19 13:46:52 |
ವಿಜಯಪುರ: 16ವರ್ಷದ ಬಾಲಕನೊಂದಿಗೆ 28ವರ್ಷದ ವಿವಾಹಿತ ಮಹಿಳೆ ಎಸ್ಕೇಪ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 4ವರ್ಷದ ಮಗುವಿನೊಂದಿಗೆ ಅಪ್ರಾಪ್ತ ಬಾಲಕನೊಂದಿಗೆ ವಿವಾಹಿತ ಮಹಿಳೆ ಎಸ್ಕೇಪ್ ಆಗಿದ್ದು, ವಿವಾಹಿತ ಮಹಿಳೆ ನನ್ನ ಮಗನನ್ನು ಅಪರಹಿಸಿಕೊಂಡು ಹೋಗಿದ್ದಾಳೆ ಎಂದು ತಾಯಿ ಅಕ್ಕಮಹಾದೇವಿ ಆರೋಪ ಮಾಡಿದ್ದಾರೆ.