ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಜೂ 3 ಮತದಾರರಿಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ ಕೃತಜ್ಞತಾ ಸಮರ್ಪಣಾ ಸಮಾರಂಭ

Posted by Vidyamaana on 2023-06-02 16:40:34 |

Share: | | | | |


ಜೂ 3 ಮತದಾರರಿಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ ಕೃತಜ್ಞತಾ ಸಮರ್ಪಣಾ ಸಮಾರಂಭ

ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಸಂಭ್ರಮವನ್ನು ಅದ್ದೂರಿಯಾಗಿ ನಡೆಸಲು ಈ ಹಿಂದೆ ತೀರ್ಮಾನ ಮಾಡಿದ್ದು ಅದನ್ನು ರದ್ದು ಮಾಡಲಾಗಿದೆ. ಯಾವುದೇ ಮೆರವಣಿಗೆ  ಇಲ್ಲದೆ ಜೂ. 3ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಪುತ್ತೂರಿನ ಪುರಭವನದಲ್ಲಿ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಆಯೋಜನೆ ಮಾಡಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಕಾರ್ಯಕರ್ತರ ಅಪೇಕ್ಷೆಯಂತೆ ಸುಮಾರು 15 ರಿಂದ 20 ಸಾವಿರ ಕಾರ್ಯಕರ್ತರ ದೊಡ್ಡ ಮಟ್ಟದ ವಿಜಯೋತ್ಸವ ಮೆರವಣಿಗೆ ಮಾಡಬೇಕೆಂಬ ತೀರ್ಮಾನವನ್ನು ಮಾಡಿದ್ದೆವು. ಆದರೆ ಅಷ್ಟೊಂದು ಮಂದಿಯ ಮೆರವಣಿಗೆ ಮಾಡುವಾಗ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಮತ್ತು ರಸ್ತೆ ಬ್ಲಾಕ್ ಆಗಿ ವಾಹನ ಸಂಚಾರಕ್ಕೂ ಅಡಚಣೆಯಾಗುತ್ತದೆ ಎಂಬ ಕಾರಣಕ್ಕೆ ನಾವು ಪಕ್ಷದ ಮುಖಂಡರ ತೀರ್ಮಾನದಂತೆ ರ್‍ಯಾಲಿಯನ್ನು ರದ್ದು ಮಾಡಿದ್ದೇವೆ. ಕಾಂಗ್ರೆಸ್‌ನಿಂದಾಗಿ ಯಾವುದೇ ವ್ಯಕ್ತಿಗೂ ತೊಂದರೆಯಾಗಬಾರದು.  ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಮೆರವಣಿಗೆಯನ್ನು ಕೈ ಬಿಡಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

ಪುರಭವನದಲ್ಲಿ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ ಕುಮಾರ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಜಾರ್ ಶುಭಾರಂಭ

Posted by Vidyamaana on 2023-10-31 16:39:21 |

Share: | | | | |


ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಜಾರ್ ಶುಭಾರಂಭ

ಪುತ್ತೂರು: ಎಚ್.ಎಂ.ಎಸ್ ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್ ಅ.೩೦ರಂದು ಮಿತ್ತೂರಿನಲ್ಲಿ ಶುಭಾರಂಭಗೊಂಡಿತು.


ಸಂಸ್ಥೆಯ ಕಛೇರಿಯನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಯಾವುದೇ ವ್ಯವಹಾರದಲ್ಲಿ ಯಶಸ್ಸು ಕಾಣಬೇಕಾದರೆ ಪ್ರಾಮಾಣಿಕತೆ ಮುಖ್ಯ, ಪ್ರಾಮಾಣಿಕ ವ್ಯವಹಾರವನ್ನು ನಾವು ಮಾಡಿದಾಗ ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ, ಜನರ ವಿಶ್ವಾಸವೇ ಉದ್ಯಮದ ಯಶಸ್ಸಿನ ಮೂಲ ಎಂದು ಅವರು ಹೇಳಿದರು.


ನಾವು ಮಾಡುವ ವ್ಯವಹಾರವನ್ನು ನಾವು ಪ್ರೀತಿಸಬೇಕು, ಆಗ ಆ ವ್ಯವಹಾರ ಯಶಸ್ಸು ಕಾಣುತ್ತದೆ ಎಂದು ಹೇಳಿದ ಶಾಸಕರು ಭಾರತ್ ವೆಹಿಕಲ್ ಬಜಾರ್ ಅತ್ಯುತ್ತಮ ವ್ಯವಹಾರದ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿದ ಸಂಸ್ಥೆಯಾಗಿ ಬೆಳಗಲಿ ಶುಭ ಹಾರೈಸಿದರು.

ಎಚ್.ಎಂ.ಎಸ್ ಗ್ರೂಪ್ ಬೆಂಗಳೂರು ಇದರ ಸುಭೋದ್ ಬಿ ಶೆಟ್ಟಿ ಮಾತನಾಡಿ ಭಾರತ್ ವೆಹಿಕಲ್ ಬಜಾರ್ ಮೂಲಕ ಉತ್ತಮ ವಿಶ್ವಾಸಾರ್ಹ ವ್ಯವಹಾರದ ಮೂಲಕ ವಾಹನಗಳ ಖರೀದಿ, ಮಾರಾಟ ವ್ಯವಹಾರ ನಡೆಯಲಿದ್ದು ಜನರು ಪೂರ್ಣ ವಿಶ್ವಾಸದೊಂದಿಗೆ ಇಲ್ಲಿ ವ್ಯವಹರಿಸಬಹುದಾಗಿದೆ ಎಂದು ಹೇಳಿ ಸಂಸ್ಥೆಗೆ ಶುಭ ಹಾರೈಸಿದರು.

ವಾಹನಗಳ ಮಾರಾಟ ಕೇಂದ್ರವನ್ನು ಉದ್ಘಾಟಿಸಿದ ಸಯ್ಯದ್ ಮಹಮ್ಮದ್ ಮಿಹ್ರಾಜ್ ಅಲ್ ಹಾದಿ ಅಲ್ ಅಶ್‌ಅರಿ ತಂಙಳ್ ಮಾತನಾಡಿ ವಿಶ್ವಾಸಾರ್ಹ ವ್ಯವಹಾರದ ಮೂಲಕ ಭಾರತ ವೆಹಿಕಲ್ ಬಜಾರ್ ಜನರ ಮೆಚ್ಚುಗೆ ಗಳಿಸಿದ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು.

ಸರ್ವೀಸ್ ಘಟಕವನ್ನು ಉದ್ಘಾಟಿಸಿದ ತುಮಕೂರಿನ ಉದ್ಯಮಿ ಸುರೇಶ್ ಬಿ.ಎಸ್ ಮಾತನಾಡಿ ನೂತನವಾಗಿ ಶುಭಾರಂಭಗೊಂಡ ಭಾರತ್ ವೆಹಿಕಲ್ ಬಜಾರ್ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.


ನೆಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಸಮಿತಾ ಡಿ ಪೂಜಾರಿ ಮಾತನಾಡಿ ಸೇವೆ, ವಿಶ್ವಾಸ, ವ್ಯವಹಾರ ಇದು ಉತ್ತಮವಾಗಿದ್ದಾಗ ಯಾವುದೇ ಸಂಸ್ಥೆ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.


ಪತ್ರಕರ್ತ ಲತೀಫ್ ನೇರಳಕಟ್ಟೆ ಮಾತನಾಡಿ ಭಾರತ್ ವೆಹಿಕಲ್ ಬಜಾರ್ ನಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಶುಭಾರಂಭಗೊಂಡಿರುವುದು ಅತೀವ ಸಂತಸ ತಂದಿದೆ. ಇದರ ಮಾಲಕರಾದ ಅಶ್ರಫ್ ಅವರು ವೆಹಿಕಲ್ ವ್ಯವಹಾರದಲ್ಲಿ ಈಗಾಗಲೇ ಛಾಪು ಮೂಡಿಸಿದ್ದು ಈ ಸಂಸ್ಥೆ ಯಶಸ್ಸು ಕಾಣಲಿದೆ ಎಂದು ಹೇಳಿ ಶುಭ ಹಾರೈಸಿದರು.

ಯುವ ಉದ್ಯಮಿ ಬಾತಿಷಾ ಅಳಕೆಮಜಲು ಮಾತನಾಡಿ ಭಾರತ್ ವೆಹಿಕಲ್ ಬಜಾರ್ ಪ್ರಾಮಾಣಿಕ ವ್ಯವಹಾರದ ಮೂಲಕ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.


ಸಂಸ್ಥೆಯ ಕಟ್ಟಡದ ಮಾಲಕ ಎ ವೆಂಕಪ್ಪ ನಾಯ್ಕ, ಕೊಡಾಜೆ ಮದ್ರಸದ ಅಧ್ಯಾಪಕ ಜಾಫರ್ ಸಾದಿಕ್ ಅರ್ಷದಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಎಚ್.ಎಂ.ಎಸ್ ಗ್ರೂಪ್‌ನ ಚೇರ್‌ಮೆನ್ ಹರೀಶ್ ಎಂ ಶೆಟ್ಟಿ ಮಾತನಾಡಿ ವ್ಯವಹಾರದಲ್ಲಿ ಹಣಕ್ಕಿಂತಲೂ ಹೆಚ್ಚಾಗಿ ವಿಶ್ವಾಸ ಮುಖ್ಯವಾಗಿದ್ದು ೨೦೦೬ರಲ್ಲಿ ಸಣ್ಣ ಮಟ್ಟಿನಲ್ಲಿ ಪ್ರಾರಂಭಿಸಿದ ನಮ್ಮ ಸಂಸ್ಥೆ ಜನರ ವಿಶ್ವಾಸ ಗಳಿಸಿದ ಸಂಸ್ಥೆಯಾಗಿದೆ. ಅಶ್ರಫ್ ಪುತ್ತೂರು ಮತ್ತು ನಮ್ಮದು ಆಕಸ್ಮಿಕ ಭೇಟಿಯಾಗಿದ್ದು ಅವರ ಆಲೋಚನೆಯಂತೆ ನಾವು ಗೂಡ್ಸ್ ಮತ್ತು ಕಾರು, ದ್ವಿಚಕ್ರ ವಾಹನಗಳ ಸೆಕೆಂಡ್ ಹ್ಯಾಂಡ್ ವೆಹಿಕಲ್ ಯಾರ್ಡ್ ಪ್ರಾರಂಭಿಸಿದ್ದೇವೆ. ನಾವು ಅಭಿವೃದ್ಧಿ ಆಗುವುದರ ಜೊತೆಗೆ ಗ್ರಾಹಕರು ಕೂಡಾ ಅಭಿವೃದ್ಧಿ ಕಾಣಬೇಕೆನ್ನುವುದು ನಮ್ಮ ಕನಸಾಗಿದ್ದು ಅದಕ್ಕೆ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದು ಹೇಳಿದರು.


ಖಾಝಿ ಝಯ್ನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಆಗಮಿಸಿ ಶುಭ ಹಾರೈಸಿದರು

ಗೌರವಾರ್ಪಣಾ ಕಾರ್ಯಕ್ರಮ

ಸಾನ್ವಿ ಇಂಜಿನಿಯರಿಂಗ್ ವರ್ಕ್ಸ್ ಕಬಕ ಇದರ ಮನೋಹರ ಶೆಟ್ಟಿ, ಪೈಂಟರ್ ಹರೀಶ್ ನಾಯ್ಕ ಹಾಗೂ ವಿನಾಯಕ ಬೆಸ್ಟ್ ಮಾರುತಿ ಪಾಯಿಂಟ್ ಕಬಕ ಇದರ ದಿನೇಶ್ ಪಿ ಅವರನ್ನು  ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಎಚ್.ಎಂ.ಎಸ್ ಗ್ರೂಪ್‌ನ ಚೇರ್‌ಮೆನ್, ಉದ್ಯಮಿ ಹರೀಶ್ ಎಂ ಶೆಟ್ಟಿ ಅವರನ್ನು ಇದೇ ವೇಳೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು


 


ಸಯ್ಯದ್ ಇಬ್ರಾಹಿಂ ಹಂಝ ತಂಙಳ್ ಪಾಟ್ರಕೋಡಿ ದುವಾ ನೆರವೇರಿಸಿದರು.


ವೇದಿಕೆಯಲ್ಲಿ ಶಾಂತ ಬಿ ಹರೀಶ್ ಶೆಟ್ಟಿ, ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಹಾಜಿ ಕೊಡಾಜೆ(ರಾಜ್‌ಕಮಲ್), ಮಿತ್ತೂರು ಶುಭೋದಯ ಫ್ಯೂಯಲ್ಸ್‌ನ ಮಾಲಕ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಹಾಗೂ ನ್ಯಾಯವಾದಿ ರಮಾನಾಥ ರೈ ಆಗಮಿಸಿ ಶುಭ ಹಾರೈಸಿದರು.


ಭಾರತ್ ವೆಹಿಕಲ್ ಬಜಾರ್‌ನ ಮಾಲಕ ಅಶ್ರಫ್ ಪುತ್ತೂರು ಅತಿಥಿಗಳನ್ನು ಸತ್ಕರಿಸಿ ಸ್ಮರಣಿಕೆ ನೀಡಿ ಗೌರವಿಸಿದರು.


ಯೂಸುಫ್ ರೆಂಜಲಾಡಿ ಸ್ವಾಗತಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು. ಆಸಿಫ್ ಕಲ್ಲಡ್ಕ, ಶರೀಫ್ ಮಿತ್ತೂರು ಬಡಾಜೆ, ಆಸಿಫ್ ಮಠ, ಅಬ್ದುಲ್ ಖಾದರ್ ಕಬಕ ಸಹಕರಿಸಿದರು.

ಮೂರು ವಾಹನಗಳ ಮಾರಾಟ:

ಶುಭಾರಂಭ ದಿನದಂದೇ ಮೂರು ವಾಹನಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಾಯಿತು. ಖರೀದಿಸಿದ ಮೂವರಿಗೂ ಗಿಫ್ಟ್ ನೀಡಿ ಗೌರವಿಸಲಾಯಿತು

ವಿದ್ಯಾಮಾತಾ ಅಕಾಡೆಮಿಯ ಮತ್ತೊಂದು ಸಾಧನೆ – ಆರು ಮಂದಿ ಅಗ್ನಿವೀರರಾಗಿ ಆಯ್ಕೆ

Posted by Vidyamaana on 2023-09-26 21:16:40 |

Share: | | | | |


ವಿದ್ಯಾಮಾತಾ ಅಕಾಡೆಮಿಯ ಮತ್ತೊಂದು ಸಾಧನೆ – ಆರು ಮಂದಿ ಅಗ್ನಿವೀರರಾಗಿ ಆಯ್ಕೆ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ , ಇಲ್ಲಿನ ಎಪಿಎಂಸಿ ಹಿಂದೂಸ್ಥಾನ್ ಸಂಕೀರ್ಣ ಇಲ್ಲಿ ಕಾರ್ಯಚರಿಸುತ್ತಿರುವ ಹೆಸರಾಂತ ವಿದ್ಯಾ ಮಾತಾ ಅಕಾಡೆಮಿ ಮೂಲಕವೇ ಅತ್ಯುತ್ತಮ ತರಬೇತಿ ಪಡೆದುಕೊಂಡು , ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಅಗ್ನಿಪಥ್ ಮೂಲಕ 2023ರ ಸಾಲಿನ ನೇಮಕಾತಿಯಲ್ಲಿ ಅಕಾಡೆಮಿಯ ಆರು ಅಭ್ಯರ್ಥಿಗಳು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಪ್ರಥಮವಾಗಿ ಲಿಖಿತ ಪರೀಕ್ಷೆ ಬಳಿಕ, ದೈಹಿಕ ಸದೃಢತೆಯ ಪರೀಕ್ಷೆ ನಂತರ, ವೈದ್ಯಕೀಯ ಪರೀಕ್ಷೆಗಳನ್ನೂ ಎದುರಿಸುವಲ್ಲಿ ಎಲ್ಲಾ ಆಭ್ಯರ್ಥಿಗಳು ಸಮರ್ಥರಾಗಿದ್ದಾರೆ. ಇದೀಗ ಈ ಎಲ್ಲಾ ಅಭ್ಯರ್ಥಿಗಳೂ ಕೂಡ ಆಯ್ಕೆಗೊಂಡು ಭಾರತೀಯ ಸೇನೆಗೆ ಕೆಲ ದಿನಗಳಲ್ಲಿ ಸೇರ್ಪಡೆಯಾಗಲಿದ್ದಾರೆ.

ದ.ಕ ಮತ್ತು ಕೊಡುಗು ಈ ಎರಡು ಜಿಲ್ಲೆಯ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ನಿವಾಸಿ ಭವಿಷ್, ಸುಳ್ಯ ತಾಲೂಕಿನ ದೇವಚಳ್ಳ ನಿವಾಸಿಗಳಾದ ಕಾರ್ತಿಕ್ ಸಿ.ಎನ್ ಹಾಗೂ ಅಭಿಷೇಕ್‌ ದೇವಚಳ್ಳ, ಮುರುಳ್ಯ ನಿವಾಸಿ ಸೃಜನ್ ರೈ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮ ನಿವಾಸಿ ಅಭಿಷೇಕ್ ಎ ಮತ್ತು ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮ ನಿವಾಸಿ ದರ್ಶನ್ ಸಿವಿ ಆಯ್ಕೆಯಾಗಿರುವಂತಹ ವಿದ್ಯಾರ್ಥಿಗಳು.

ಇವರೆಲ್ಲಾರನ್ನೂ ಸೆ.28ರಂದು ಸುಳ್ಯದಲ್ಲಿ ಶುಭಾರಂಭಗೊಳ್ಳಲಿರುವ ವಿದ್ಯಾಮಾತಾ ಇದರ ನೂತನ ಶಾಖೆಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ವೇಳೆ ಅತಿಥಿಗಳ ಮುಖೇನ, ಸನ್ಮಾನಿಸಲಾಗುವುದು ಎಂದು ವಿದ್ಯಾಮಾತಾ ಅಕಾಡೆಮಿಯ ಅಧ್ಯಕ್ಷರಾದ ಭಾಗ್ಯೇಶ್ ರೈ ತಿಳಿಸಿದ್ದಾರೆ.


ಉದ್ಯೋಗ ಆಕಾಂಕ್ಷಿಗಳಾಗಿರುವ ಯುವ ಜನಾಂಗಕ್ಕೆ ಅಗ್ನಿಪಥ್ ಯೋಜನೆ ಉತ್ತಮ ಅವಕಾಶ. ಅಗ್ನಿವೀರರಾಗುವವರಿಗೆ 6 ತಿಂಗಳ ತರಬೇತಿ ಮೂರುವರೆ ವರ್ಷ ಕರ್ತವ್ಯ ನಿಯೋಜನೆಯಿರುತ್ತದೆ.

ಪ್ರಾರಂಭಿಕ ಹಂತದಲ್ಲಿ 21 ಸಾವಿರ ವೇತನವೂ ಇದೆ. 4 ವರುಷದ ಕರ್ತವ್ಯ ಮುಗಿಸಿ, ಹಿಂತಿರುಗುವ ವೇಳೆ ವೇತನ 22 ಲಕ್ಷ ರೂಪಾಯಿ ಸಿಗುತ್ತೆ.

ಬಳಿಕ ವಿವಿಧ ನೇಮಕಾತಿಯಲ್ಲೂ ವಿಶೇಷ ಮೀಸಲಾತಿ, 25% ಅಭ್ಯರ್ಥಿಗಳನ್ನು ಅವರ ಸೇವೆಯನ್ನು ಅವಲಂಬಿಸಿ ಕರ್ತವ್ಯದಲ್ಲಿ ಮುಂದುವರಿಸುವಿಕೆಯೂ ಇದೆ. ಯುವ ಸಮುದಾಯ ದಾರಿ ತಪ್ಪುತ್ತಿರುವ ಈ ಕಾಲಘಟ್ಟದಲ್ಲಿ, ದೇಶ ಸೇವೆ ಮಾಡುವ ಮೂಲಕ ಯುವ ಜನತೆ ಬದುಕನ್ನು ಭದ್ರವಾಗಿಸಲು ಇದಕ್ಕಿಂತ ಉತ್ತಮ ಯೋಜನೆ ಇನ್ನೊಂದಿಲ್ಲ.

ಭಾಗ್ಯೇಶ್ ರೈ

ಅಧ್ಯಕ್ಷರು ವಿದ್ಯಾಮಾತಾ ಅಕಾಡೆಮಿ.

ಕುಂಬೋಳ್ ತಂಙಳ್ ಆಶೀರ್ವಾದ ಪಡೆದ ಪುತ್ತೂರು ಶಾಸಕರು

Posted by Vidyamaana on 2023-05-25 15:29:39 |

Share: | | | | |


ಕುಂಬೋಳ್ ತಂಙಳ್ ಆಶೀರ್ವಾದ ಪಡೆದ ಪುತ್ತೂರು ಶಾಸಕರು

ಪುತ್ತೂರು: ಕುಂಬೋಳ್ ತಂಙಳ್ ಬಗ್ಗೆ ಗೊತ್ತಿಲ್ಲದವರು ಬಹಳ ಅಪರೂಪ. ಅನೇಕ ಪವಾಡಗಳಿಂದ ಜನ ಮಾನಸದಲ್ಲಿ ಪ್ರಚಾರದಲ್ಲಿರುವ ಮತ್ತು ಜಾತಿ,ಮತ, ಧರ್ಮಗಳ ಬೇದವಿಲ್ಲದೆ ಎಲ್ಲರಿಗೂ ಸಾಂತ್ವನ ನೀಡುತ್ತಿರುವ ಕುಂಬೋಳ್ ತರವಾಡಿನ ಶೈಕುನಾ ಕುಂಞಿ ಕೋಯಾ ತಂಙಳ್ ರವರು ಇಂದು ವಿಧಾನ ಸೌಧಕ್ಕೆ ಭೇಟಿ ನೀಡಿದ್ದರು. ಸೀಎಂ, ಡಿಸಿಎಂ ಸಹಿತ ಎಲ್ಲರೂ ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡರು ಮತ್ತು ಅವರಿಂದ ಆಶೀರ್ವಾದವನ್ನು ಪಡೆದರು.ಜೊತೆಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ತಂಙಳ್ ರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಬುಳೇರಿಕಟ್ಟೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

Posted by Vidyamaana on 2023-05-01 10:40:09 |

Share: | | | | |


ಬುಳೇರಿಕಟ್ಟೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು: ಬೆಲೆ ಏರಿಕೆಯ ಮೂಲಕ ಬಡವರ ಬದುಕನ್ನು ಮೂರಾಬಟ್ಟೆ ಮಾಡಿದ ಬಿಜೆಪಿ ಸರಕಾರ . ಈ ಪಕ್ಷದ ಕಾರ್ಯಕರ್ತರು ,ಮುಖಂಡರು ಬಡವರ ಮನೆಗೆ ಯಾವ ಮುಖ ಹೊತ್ತು ವೋಟು ಬಡವರ ಮನೆಗೆ ವೋಟು ಕೇಳಲು ಹೋಗುತ್ತಾರೆ ಎಂದು ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ರಾಜಾರಾಂ ಕೆ ಬಿ ಹೇಳಿದರು.

ಬುಳೇರಿಕಟ್ಟೆಯಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ. ದೇಶದಲ್ಲಿ‌ಅಚ್ಚೇದಿನ್ ಕೊಡುವುದಾಗಿ ಹೇಳಿದವರು ಬಡವರ ಅನ್ನಕ್ಕೂ ಕಲ್ಲು ಹಾಕುವ ಕೆಲಸವನ್ನು ಮಾಡಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ,ಇಂಧನ, ಅಡುಗೆ ಅನಿಲ ಬೆಲೆ ಏರಿಕೆ ಇವೆಲ್ಲವೂ ಜನರನ್ನು ಕಂಗೆಡಿಸಿದೆ. ಬೆಲೆ ಏರಿಕೆಯಿಂದ ನಾಳೆ ಏನಾಗುತ್ತದೋ ಎಂಬ ಭಯ ಜನರಲ್ಲಿ ನಿತ್ಯವೂ ಇದೆ ಎಂದು ಹೇಳಿದರು. 

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದರೆ ಎಲ್ಲಾ‌ಸಮಸ್ಯೆಗಳಿಗೆ ಪರಿಹಾರವಾಗಲಿದೆ. ಬಡವರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಜನ ಸ್ನೇಹಿ ಪ್ರಣಾಳಿಕೆಯನ್ನು ಜಾರಿ‌ಮಾಡಿದೆ. ಪುತ್ತೂರಿನಲ್ಲಿ ಅಶೋಕ್ ರೈ ಯವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ‌ಮುಂದೆ ಬರುವ ಕಾಂಗ್ರೆಸ್ ಸರಕಾರಕ್ಕೆ ಬಲ‌ಕೊಡುವ ಕೆಲಸವನ್ನು ಮಾಡಬೇಕು. ಪ್ರತೀ ಬೂತ್ ನಲ್ಲೂ ಟಾರ್ಗೆಟ್ ವೋಟು ಎಂಬ ಆಲೋಚನೆಯನ್ನು ಇಟ್ಟುಕೊಂಡು ಹೆಚ್ಚಿನ‌ಮತಗಳು ಈ ಭಾಗದಿಂದ ಕಾಂಗ್ರೆಸ್ ಗೆ ಬೀಳುವಂತೆ  ನಾವು ಕಾರ್ಯಪೃವೃತ್ತರಾಗಬೇಕು ಎಂದು‌ಹೇಳಿದರು.

ಸೈಲೆಂಟ್ ವೋಟು ಕಾಂಗ್ರೆಸ್ ಪಾಲಾಗುವಂತೆ ಪ್ರತೀಯೊಬ್ಬ ಕಾರ್ಯಕರ್ತರು ಒಟ್ಟುಗೂಡಿ ಕೆಲಸ ಮಾಡಬೇಕು. ಬಿಜೆಪಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆಯಬೇಕು ಎಂದು ಅಭ್ಯರ್ಥಿ ಅಶೋಕ್ ರೈ ಹೇಳಿದರು.

ಅಕ್ರನಸಕ್ರಮದಲ್ಲಿ ಪುತ್ತೂರಿನ ಶಾಸಕರು ಭೃಷ್ಟಾಚಾರ ಮಾಡಿದ್ದು ಅದು ಅವರ ದೊಡ್ಡ ಸಾಧನೆಯಾಗಿದೆ. ಯಾರು ಲಕ್ಷಾಂತರ ರೂ ಕೊಟ್ಟಿದ್ದಾರೋ ಅವರಿಗೆಲ್ಲಾ ಅಕ್ರಮ ಸಕ್ರಮ ಮಾಡಿಕೊಡಲಾಗಿದೆ. ನಾನು ಶಾಸಕನಾದರೆ ರಾಜಧರ್ಮ ಪಾಲನೆ ಮಾಡಲಿದ್ದೇನೆ. ಬಿಜೆಪಿಯವರು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡು ಪಕ್ಷಕ್ಕೆ ಬಲ ಕೊಡುವ ಕೆಲಸವನ್ನು ಮಾಡುವಂತೆ ಮನವಿ ಮಾಡಿದರು. ಯಾವುದೇ ತಾರತಮ್ಯ ಮಾಡದೆ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸವನ್ನು‌ ಮಾಡಿತೋರಿಸುತ್ತೇನೆ ಎಂದು ಹೇಳಿದರು. ಅಭಿವೃದ್ದಿಯಾಗಬೇಕಾದರೆ ಶಾಂತಿ,ಸೌಹಾರ್ಧತೆ ಮುಖ್ಯ. ಪುತ್ತೂರಿನಲ್ಲಿ ಎಲ್ಲಾ ಧರ್ಮದ ಜನರೂ ಒಂದೇ ತಾಯಿ‌ಮಕ್ಕಳಂತೆ ಬದುಕುವ ವಾತಾವರಣ ಸೃಷ್ಟಿಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಪ್ರವೀಣ್ ಚಂದ್ರ ಳ್ವ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

ಏ1: ಜಿಎಲ್ ವನ್ ಮಾಲ್ ನಲ್ಲಿ ಚೈನೀಸ್ ಮತ್ತು ಅರೇಬಿಯನ್ ಗ್ರಿಲ್ಡ್ ಹಾಗೂ ಜ್ಯೂಸ್ ಮತ್ತು ಶೇಕ್ಸ್ ಶುಭಾರಂಭ

Posted by Vidyamaana on 2023-03-31 12:47:43 |

Share: | | | | |


ಏ1: ಜಿಎಲ್ ವನ್ ಮಾಲ್ ನಲ್ಲಿ  ಚೈನೀಸ್ ಮತ್ತು ಅರೇಬಿಯನ್ ಗ್ರಿಲ್ಡ್ ಹಾಗೂ ಜ್ಯೂಸ್ ಮತ್ತು ಶೇಕ್ಸ್ ಶುಭಾರಂಭ

ಪುತ್ತೂರು: ಅದ್ದೂರಿಯಾಗಿ ಶುಭಾರಂಭಗೊಳ್ಳುತ್ತಿರುವ ಪುತ್ತೂರಿನ ಜಿಎಲ್ ವನ್ ಮಾಲ್ ನಲ್ಲಿ ಏಪ್ರಿಲ್ 1ರಂದು ಚೈನೀಸ್ ಮತ್ತು ಅರೇಬಿಯನ್ ಗ್ರಿಲ್ಡ್, ಜ್ಯೂಸ್ ಮತ್ತು ಶೇಕ್ಸ್ ಉದ್ಘಾಟನೆಗೊಳ್ಳಲಿದೆ. ಇದರೊಂದಿಗೆ ಜೂಸ್ ಮತ್ತು ಗ್ರಿಲ್ಡ್ ಪ್ರಿಯರಿಗಾಗಿ ವೈವಿಧ್ಯಮಯ ಐಟಂ ಗಳ ಲೋಕವೇ ತೆರೆದುಕೊಳ್ಳಲಿದೆ.

ಜಿಎಲ್ ವನ್ ಮಾಲ್ ನ ಭಾರತ್ ಸಿನಿಮಾಸ್ ಪಕ್ಕದಲ್ಲೇ ಇರುವ, ಗ್ರಿಲ್ಡ್ ಸಂಸ್ಥೆಯನ್ನು ಮಾಯಿದೇ  ದೇಸ್ ಚರ್ಚ್ ನ ಧರ್ಮಗುರುಗಳಾದ ವಂದನೀಯ ಫಾದರ್ ಲಾರೆನ್ಸ್ ಮಸ್ಕರೇನ್ಹಸ್ ಮತ್ತು ಜ್ಯೂಸ್ ಮತ್ತು ಶೇಕ್ಸ್ ಸಂಸ್ಥೆಯನ್ನು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂದನೀಯ ಫಾದರ್  ಪ್ರಕಾಶ್ ಮೊಂತೆರೊ ಉದ್ಘಾಟಿಸಲಿದ್ದಾರೆ.

ಪುತ್ತೂರಿನ ಫಾಸ್ಟ್ ಫುಡ್ ಪ್ರಿಯರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಲಿದೆ ಈ ಗ್ರಿಲ್ಡ್, ಜ್ಯೂಸ್ ಮತ್ತು ಶೇಕ್ಸ್. ತನ್ನ ಆಹ್ಲಾದಕರ ಸ್ವಾದದಿಂದ ಜನರ ಮೆಚ್ಚುಗೆ ಗಳಿಸಿದೆ.

ಜ್ಯೂಸ್ ಮತ್ತು ಶೇಕ್ಸ್ :

ಫ್ರೆಶ್ ಜೂಸ್ ಗಳಾದ, ಬಾದಾಮ್, ಮೊಜಿತೊ, ಚಿಕ್ಕು, ಪಂಚ್, ಮಾವು, ಚಾಕೊಲೇಟ್, ಕೋಲ್ಡ್ ಕಾಫಿ, ಸ್ಟ್ರಾಬೆರಿ, ಕಿತ್ತಳೆ, ಅನಾರ್, ಕಾಜು, ಡ್ರೈ ಫ್ರೂಟ್, ಬಟರ್‌ಸ್ಕಾಚ್, ಕಿತ್ತಳೆ, ಮಿಶ್ರಣ,  ಕಾಕ್‌ಟೈಲ್, ಲಸ್ಸಿ, ಅನಾನಸ್ ಜ್ಯೂಸ್‌ಗಳು ಮತ್ತು  ಶೇಕ್‌ಗಳ ವೈವಿಧ್ಯಮಯ ರುಚಿಯನ್ನು ಗ್ರಾಹಕರು ಇಲ್ಲಿ ಆಹ್ಲಾದಿಸಬಹುದು.

ಗ್ರಿಲ್ಡ್ :

ಚಿಕನ್ ಸಲಾಡ್, ಗ್ರಿಲ್ಡ್ ಚಿಕನ್ ಕಬಾಬ್ಸ್, ಬಿರಿಯಾನಿ, ಫ್ರೈಡ್ರೈಸ್, ನೂಡಲ್ಸ್ ನಂತಹ ಫಾಸ್ಡ್ ಫುಡ್ ಐಟಂಗಳು ದೊರೆಯಲಿದ್ದು, ನುರಿತ ಪಾಕ ತಜ್ಞರಿಂದ ಸ್ವಾದಿಷ್ಟಕರ ಫುಡ್ ಐಟಂಗಳು ಇಲ್ಲಿ ತಯಾರಾಗಲಿದೆ ಎಂದು ಸಂಸ್ಥೆಯ ಮ್ಹಾಲಕ ಜೀತನ್ ತಿಳಿಸಿದ್ದಾರೆ.



Leave a Comment: