Posted by vidyamaana on 2024-07-26 15:01:18 |
ಪುತ್ತೂರು: 33 ವರ್ಷಗಳ ಹಿಂದೆಯೇ ನಾಡಿನ ಶೈಕ್ಷಣಿಕ ಕ್ರಾಂತಿಗೆ ನಾಂದಿಯನ್ನು ಹಾಡಿದ ಬಾಸೆಲ್ ಮಿಷನ್ ಸಂಸ್ಥೆಯ ಮೂಲದಿಂದ ಸುದಾನ ವಿದ್ಯಾಸಂಸ್ಥೆಗಳ ಉದಯವಾಗಿದ್ದು ಇದೀಗ ವಿಸ್ತರಿತ ಶೈಕ್ಷಣಿಕ ಸೇವೆಯಲ್ಲೊಂದು ಹೊಸ ಹೆಜ್ಜೆಯನ್ನಿರಿಸಿದ ಸುದಾನ ಸಮೂಹ ಶಿಕ್ಷಣ ಸಂಸ್ಥೆಯು ಸುದಾನ ಕ್ಯಾಂಪಸ್ಸಿನಲ್ಲಿ ಸುಧಾನ ಪದವಿ ಪೂರ್ವ ಕಾಲೇಜ್ ಅನ್ನು ಪ್ರಾರಂಭಿಸಿದೆ. ಇದರ ಉದ್ಘಾಟನಾ ಕಾರ್ಯಕ್ರಮವು ಜು.27 ರಂದು ಸಂಸ್ಥೆಯ ಸುದಾನ ಎಡ್ವರ್ಡ್ ಸಭಾಂಗಣದಲ್ಲಿ ಜರಗಲಿದೆ.
ನೂತನ ಸುದಾನ ಪದವಿ ಪೂರ್ವ ಕಾಲೇಜ್ ಅನ್ನು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಣ್ಣರವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಅಧ್ಯಕ್ಷ ರೆ.ವಿಜಯ ಹಾರ್ವಿನ್ರವರು ವಹಿಸಿಕೊಳ್ಳಲಿದ್ದಾರೆ.
ಗೌರವ ಅತಿಥಿಗಳಾಗಿ ಪ್ರತ್ತೂರಿನ ಮಾಜಿ ಶಾಸಕರಾದ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, ಸಂಜೀವ ಮಠಂದೂರು, ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಯಪಾಲ ಸುಪ್ರೀತ್ ಕೆ.ಸಿರವರು ಉಪಸ್ಥಿತರಿರಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಗೌರವ ಅತಿಥಿಗಳಾಗಿ ಪ್ರತ್ತೂರಿನ ಮಾಜಿ ಶಾಸಕರಾದ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, ಸಂಜೀವ ಮಠಂದೂರು, ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ.ಸಿರವರು ಉಪಸ್ಥಿತರಿರಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
Posted by Vidyamaana on 2024-08-13 23:05:34 |
ಬೆಂಗಳೂರು : ಎಐಸಿಸಿಯಿಂದ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಿಗೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಮಾಡಿದೆ. ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಸೌಮ್ಯ ರೆಡ್ಡಿ ಅವರನ್ನು ನೇಮಿಸಲಾಗಿದೆ.
Posted by Vidyamaana on 2024-06-24 06:15:55 |
ಪುತ್ತೂರು: ಒಳ್ಳೆ ವಿಚಾರಗಳನ್ನು ನಮ್ಮ ಸಂಸ್ಕೃತಿಗೆ ಅಳವಡಿಸಿಕೊಳ್ಳುವುದು ಹಿರಿಯರಿಂದ ನಡೆದು ಬಂದ ಸಂಪ್ರದಾಯವಾಗಿದೆ. ಈ ನಿಟ್ಟಿನಲ್ಲಿ ಮುಳಿಯದ ವತಿಯಿಂದ ಅಪ್ಪಂದಿರ ದಿನಕ್ಕೆ ವಿಶೇಷ ಸ್ಥಾನವನ್ನು ನೀಡಿ ಆಚರಣೆಗೆ ತರಲಾಗಿದೆ. ಐದು ಶೋರೂಂ ನಲ್ಲಿ ಸೇರಿದ ಜನರನ್ನು ನೋಡಿದರೆ ಮಹತ್ವವಿದೆ ಎಂಬುದು ತಿಳಿಯುತ್ತದೆ ಎಂದು ಮುಳಿಯ ಜ್ಯುವೆಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು.
ಶನಿವಾರ ಪುತ್ತೂರು ಶಾಖೆಯಲ್ಲಿ ಮುಳಿಯ ಜ್ಯುವೆಲ್ಸ್ ವತಿಯಿಂದ ವಿಶ್ವ ಅಪ್ಪಂದಿರ ದಿನದ ಅಂಗವಾಗಿ ಚಿನ್ನದಂತ ಅಪ್ಪ ನನ್ನ ಅಪ್ಪ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಂದೆಯವರು ಸಂಸ್ಥೆ ನಡೆಸುವ ಸಮಯದಲ್ಲಿ ೯೧೬ ಚಿನ್ನಾಭರಣ ಎಂಬ ವ್ಯವಸ್ಥೆ ಇಲ್ಲದಿದ್ದರೂ, ಅವರ ಕಾಲದಲ್ಲಿ ನೀಡಿದ ಚಿನ್ನಾಭರಣಗಳು ಅದೇ ಗುಣಮಟ್ಟದಲ್ಲಿತ್ತು. ಆ ಪ್ಯೂರಿಟಿಯನ್ನು ಅಂದು ಗ್ರಾಹಕರಿಗೆ ನೀಡಿದ ಕಾರಣದಿಂದ ಇಂದಿಗೂ ಮುಳಿಯದ ಹೆಸರು ಉತ್ತಮವಾಗಿ ಉಳಿದುಕೊಂಡಿದೆ. ಸಂಸ್ಥೆಯ ಬೆಳವಣಿಗೆಯಲ್ಲೂ ಇದು ಮಹತ್ವದ ಪಾತ್ರವನ್ನು ವಹಿಸಿದೆ ಎಂದು ತಿಳಿಸಿದರು.
Posted by Vidyamaana on 2024-05-11 13:39:56 |
ಮಡಿಕೇರಿ: ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮೂರ್ನಾಡು ಪಟ್ಟಣದಲ್ಲಿ ನಡೆದಿದೆ
ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಮೂರ್ನಾಡಿನ ಆರಿಫ್ (34) ಮೃತ ದುರ್ದೈವಿ.
Posted by Vidyamaana on 2023-07-31 15:58:06 |
ಪುತ್ತೂರು: ಮನೆಯನ್ನು ಟಾರ್ಗೆಟ್ ಮಾಡಿ, ಹೊಂಚು ಹಾಕಿ ಸಂಚು ರೂಪಿಸಿ, ಕನ್ನ ಹಾಕುವ ಹೊರರಾಜ್ಯದ ಕಳ್ಳರ ತಂಡ ಪುತ್ತೂರಿಗೆ ಎಂಟ್ರಿ ನೀಡಿದೆ! ಹಾಗಾಗಿ ನಿಮ್ಮ ಮನೆಗೆ ಬೀಗ ಹಾಕಿ, ಹೊರಗಡೆ ಹೋಗುವಾಗ ಎಚ್ಚರ ವಹಿಸಿ.
ಅರೆ! ಹೊರರಾಜ್ಯದ ಕಳ್ಳರ ಗುಂಪು ನಮ್ಮ ಮನೆಯೊಳಗೆ ಹೇಗೆ ಬರುವುದು? ನಮ್ಮ ಮನೆಯೊಳಗೆ ಏನಿದೆ ಎಂದು ಅವರಿಗೆ ತಿಳಿಯುವುದಾದರೂ ಹೇಗೆ? ಎಂಬಿತ್ಯಾದಿ ಪ್ರಶ್ನೆ ನಿಮ್ಮ ಮನದೊಳಗೆ ಮೂಡಬಹುದು. ಹೀಗೆಂದು ಹೇಳಿ, ಕಳ್ಳರ ತಂಡವನ್ನು ಉಪೇಕ್ಷೆ ಮಾಡದಿರಿ. ಕಾರಣ, ಪುತ್ತೂರು ಪೇಟೆಯಲ್ಲಿ ಹಾಡಹಗಲೇ ಮನೆಯೊಂದಕ್ಕೆ ನುಗ್ಗಿರುವ ಕಳ್ಳರು, ಸ್ವಲ್ಪದರಲ್ಲೇ ಎಸ್ಕೇಪ್ ಆಗಿದ್ದಾರೆ.
ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಕಳ್ಳರು ಒಂದು ಸಣ್ಣ ಸುಳಿವನ್ನು ಬಿಟ್ಟುಹೋಗಿಲ್ಲ. ಹೆಚ್ಚೇಕೆ, ಕಳ್ಳರ ಕೈಬೆರಳಿನ ಗುರುತೂ ಪತ್ತೆಯಾಗಿಲ್ಲ. ಹಾಗೆಂದು ಬಂಗಲೆಯಂತಹ ಮನೆ ಪೂರ್ತಿ ತಡಕಾಡಿದ್ದಾರೆ. ಕೈಗೆ ಸಿಕ್ಕ ಸಣ್ಣ ಪುಟ್ಟ ವಸ್ತುಗಳನ್ನು ದೋಚಿದ್ದಾರೆ. ಮಾತ್ರವಲ್ಲ, ಮನೆಯಲ್ಲಿ ಕೃತ್ಯದ ಸಚಿತ್ರ ಮಾಹಿತಿ ನೀಡಬೇಕಿದ್ದ ಸಿಸಿ ಕ್ಯಾಮರಾದ ಇಡೀಯ ಸೆಟ್ಟನ್ನೇ ಹೊತ್ತೊಯ್ದಿದ್ದಾರೆ. ಅಚ್ಚರಿ ಪಡಬೇಕಾದ ವಿಚಾರವೇನೆಂದರೆ, ಮನೆಯ ಬಾಗಿಲನ್ನು ಗ್ಯಾಸ್ ಕಟ್ಟರಿನಂತಹ ಆಯುಧದಿಂದ ತುಂಡರಿಸಿ ಒಳ ನುಗ್ಗುತ್ತಾರೆ ಎನ್ನುವುದು. ಸೋಮವಾರ ಮನೆಯೊಳಗೆ ನುಗ್ಗಿದ ಕಳ್ಳರು, ಮಾಡಿರುವ ರಾದ್ಧಾಂತ ನೋಡಿದರೆ – ಪ್ರೊಫೆಷನಲ್ ಕಳ್ಳರು ಎನ್ನುವುದು ಸ್ಪಷ್ಟ.
ಆದ್ದರಿಂದ ಮನೆಯಿಂದ ಹೊರ ಹೋಗುವಾಗ ಸ್ಥಳೀಯರ ಗಮನಕ್ಕೆ ತನ್ನಿ. ಒಂದು ದಿನ ಮನೆ ಬಿಟ್ಟು ಹೋಗುತ್ತೀರಿ ಎಂದರೆ, ಸ್ಥಳೀಯ ಪೊಲೀಸ್ ಠಾಣೆಯ ಗಮನಕ್ಕೆ ತನ್ನಿ. ಇನ್ನು, ಬೆಲೆಬಾಳುವ ಚಿನ್ನಾಭರಣಗಳನ್ನು ಸೇಫ್ ಲಾಕರಿನಲ್ಲೋ, ಬ್ಯಾಂಕ್ ಲಾಕರಿನಲ್ಲೋ ಇಡುವುದನ್ನು ಮಾತ್ರ ಮರೆಯದಿರಿ.
ಸ್ಥಳೀಯರ ಸಹಕಾರ!!??:
ಹೊರರಾಜ್ಯದ ಕಳ್ಳರಿಗೆ ನಮ್ಮ ಮನೆಯ ಮಾಹಿತಿ ತಿಳಿಯುವುದಾದರೂ ಹೇಗೆ ಎನ್ನುವ ಯಕ್ಷಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡುತ್ತದೆ. ಉತ್ತರ ಸುಲಭವೇ ಇದೆ. ಹೊರರಾಜ್ಯದ ಕಳ್ಳರು, ಸ್ಥಳೀಯರ ನೆರವು ಪಡೆದುಕೊಳ್ಳದೇ ಏಕಾಏಕೀ ನುಗ್ಗಲು ಸಾಧ್ಯವೇ ಇಲ್ಲ. ಏಕೆಂದರೆ, ಮನೆಯವರು ಎಷ್ಟು ಹೊತ್ತಿಗೆ ಹೊರಹೋಗುತ್ತಾರೆ, ಪುನಃ ಎಷ್ಟು ಹೊತ್ತಿಗೆ ಹಿಂದಿರುಗಿ ಬರುತ್ತಾರೆ ಎನ್ನುವ ಸ್ಪಷ್ಟ ಮಾಹಿತಿ ಅವರಲ್ಲಿರುತ್ತದೆ. ಅದು ಹಾಡಹಗಲೇ ಆದರೂ ಸರಿ, ಸ್ಥಳೀಯರಿಗೆ ಸಂದೇಹವೇ ಬಾರದ ರೀತಿಯಲ್ಲಿ ಕನ್ನ ಹಾಕುತ್ತಾರೆ. ಮನೆಯ ಬಾಗಿಲು ಎಷ್ಟೇ ಗಟ್ಟಿಯಾಗಿರಲಿ, ಅದನ್ನು ಮುರಿಯುವ ಆಯುಧಗಳು ಅವರಲ್ಲಿರುತ್ತವೆ ಎನ್ನುವುದು ಸೋಮವಾರದ ಘಟನೆಯಿಂದ ಸಾಬೀತಾಗಿದೆ. ಇಷ್ಟೇಲ್ಲಾ ಯೋಜನೆ ರೂಪಿಸಬೇಕಾದರೆ, ಸ್ಥಳೀಯರ ಸಹಕಾರ ಖಂಡಿತಾ ಪಡೆದುಕೊಂಡಿರಲೇಬೇಕು ಅಲ್ಲವೇ?
ಹೈಫೈ ಕಳ್ಳರು:
ಜನಸಂಖ್ಯೆ ಹೆಚ್ಚಿರುವ ಪ್ರದೇಶವನ್ನೇ ಆಯ್ಕೆ ಮಾಡಿಕೊಳ್ಳುವ ಕಳ್ಳರು, ಸ್ಥಳೀಯರ ಗಮನಕ್ಕೂ ಬಾರದಂತೆ ಕೃತ್ಯ ಎಸಗಿ ಕಣ್ಮರೆಯಾಗುತ್ತಾರೆ. ಪೇಟೆಯಲ್ಲಿ ಹತ್ತಿರತ್ತಿರ ಮನೆಗಳಿದ್ದರೂ, ಪಕ್ಕದ ಮನೆಯಲ್ಲೇನೂ ನಡೆಯುತ್ತಿದೆ ಎನ್ನುವುದು ತಿಳಿಯುವುದೇ ಇಲ್ಲ. ಅಂದರೆ ಪೇಟೆಯ ಲೋಪಗಳನ್ನು ತಮ್ಮ ಕೃತ್ಯಕ್ಕೆ ಬಳಸಿಕೊಳ್ಳುವ ತಂಡವಿದು. ಈ ತಂಡ ಕಾರಿನಲ್ಲೇ ತಿರುಗಾಡುತ್ತಾ, ಯಾರಿಗೂ ಸಂದೇಹ ಬಾರದಂತೆ ಕಾರ್ಯಾಚರಿಸುತ್ತದೆ ಎನ್ನುವುದು ಸೋಮವಾರದ ಘಟನೆಯಿಂದ ತಿಳಿದುಬಂದಿದೆ.
Posted by Vidyamaana on 2024-01-29 14:54:31 |
ಪುತ್ತೂರು; ಗ್ರಾಮೀಣ ಭಾಗದ ಬಡವರು ಸರಕಾರಿ ಜಾಗದಲ್ಲಿಮನೆ ಕಟ್ಟಿಕೊಂಡಿದ್ದರೆ ಅವರಿಗೆ ಹಕ್ಕು ಪತ್ರ ಕೊಡಬೇಕು, 94 ಸಿ ಅರ್ಜಿ ಜೊತೆಗೆ ಗ್ರಾಮದ ಪಿಡಿಒಗಳಿಂದ ದೃಡೀಕರಣ ಪತ್ರ ಬೇಕು ಎಂದು ತಹಶಿಲ್ದಾರ್ ಹೇಳುತ್ತಿದ್ದು ಯಾವುದೇ ಕಾರಣಕ್ಕೂ ಪಿಡಿಒಗಳಿಂದ ದೃಡೀಕರಣ ಪತ್ರ ಕೇಳಬೇಡಿಎಂದುಶಾಸಕರಾದ ಅಶೋಕ್ ರೈ ತಹಶಿಲ್ದಾರ್ ಗೆ ಸೂಚನೆ ನೀಡಿದರು.
ತಾಪಂ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿಮಾತನಾಡಿದ ಶಾಸಕರು ಈ ಸೂಚನೆಯನ್ನು ನೀಡಿದ್ದಾರೆ.
ಹಕವಾರು 94 ಸಿ ಅರ್ಜಿಗಳು ಪಿಡಿಒ ದೃಡೀಕರಣ ಪತ್ರವಿಲ್ಲದ ಕಾರಣಕ್ಕೆ ವಿಲೇವಾರಿಯಾಗಿಲ್ಲ ಎಂದು ಸಭೆಗೆ ತಹಶಿಲ್ದಾರ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ಎರಡು ವರ್ಷದ ಹಿಂದೆ ಬಂದ ಪಿಡಿಒಗೆ ಹತ್ತು ವರ್ಷಗಳಿಂದ ಆ ಮನೆ ಅಲ್ಲಿದೆ ಎಂಬ ಮಾಹಿತಿ ಇರ್ಲಿಕ್ಕಿಲ್ಲ.ಅಕ್ಕಪಕ್ಕದ ಮನೆಯವರಲ್ಲಿ ಕೇಳಿ ದೃಡೀಕರಣ ಮಾಡಿ ದೃಡೀಕರಣ ಪತ್ರವಿಲ್ಲದೆ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿಮಾಡಬೇಕು. ಬಡವರು ಮನೆ ಕಟ್ಟಿರುವ ಜಾಗಕ್ಕೆ ಅರ್ಜಿ ಹಾಕಿದ್ದಾರೆ, ಅವರಿಗೆ ಮನೆ ಕಟ್ಟಿಕೊಂಡ ಜಾಗ ಬಿಟ್ಟು ಬೇರೆ ಜಾಗ ಇಲ್ಲ.ಬಡವರಿಗೆ ತೊಂದರೆ ನೀಡುವ ಕೆಲಸವನ್ನು ಯಾರೂ ಮಾಡಬಾರದು. 94 ಸಿ ಯ ಎಷ್ಟು ಅರ್ಜಿ ಯಾವ ಕಾರಣಕ್ಕೆ ಬಾಕಿಯಾಗಿದೆ ಎಂಬುದನ್ನು ನನ್ನಗಮನಕ್ಕೆ ತರಬೇಕು ಎಂದುಶಾಸಕರು ಸೂಚನೆ ನೀಡಿದರು.
Posted by Vidyamaana on 2023-03-15 09:47:10 |
ಪುತ್ತೂರು: ಇಲ್ಲಿನ ಪುಣಚದಲ್ಲಿ ಬುಧವಾರ ಮಧ್ಯಾಹ್ನ ಮಳೆಯಾಗಿದೆ.ಪುತ್ತೂರು ತಾಲೂಕಿನಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು, ಗುಡುಗಿನ ಸದ್ದು ಕೇಳಿಬರುತ್ತಿತ್ತು.
ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತುಸು ತಂಪೆರೆದಿದೆ. ಇನ್ನು ಕೆಲ ದಿನ ಮಳೆ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಇತ್ತೀಚೆಗೆ ಹವಾಮಾನ ಇಲಾಖೆ, ಕರಾವಳಿ ಸಹಿತ ರಾಜ್ಯದ ಹಲವೆಡೆ ಮುಂದಿನ ಐದು ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿತ್ತು. ಇದೀಗ, ಹವಾಮಾನ ಇಲಾಖೆಯ ವರದಿ ನಿಜವಾಗಿದೆ.