Posted by vidyamaana on 2023-08-18 08:29:00 |
ಬೆಳ್ತಂಗಡಿ: ರೋಗಿಯೊಬ್ಬರನ್ನು ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.
ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
Posted by Vidyamaana on 2024-02-20 05:00:45 |
ಪುತ್ತೂರು: ಮರದಲ್ಲಿ ವಾಸವಾಗಿರುವ ಪಕ್ಷಿಗಳನ್ನು ತೆರವುಗೊಳಿಸಿ ಎಂದು ಕೆಲವರ ಬೊಬ್ಬೆ... ಬೇಡ ಮರದಲ್ಲಿರುವ ನೀರು ಕಾಗೆಗಳನ್ನು ನೋಯಿಸಬೇಡಿ ಎಂದು ಇನ್ನು ಕೆಲವರ ವಾದ.
ಇದು ಪುತ್ತೂರಿನ ಐತಿಹಾಸಿಕ ಅಶ್ವತ್ಥ ಕಟ್ಟೆಯ ಮರದ ಹಿಂದೆ ಇರುವ ಕಥೆ.
ಹೌದು... ಮರದಲ್ಲಿರುವ ಪಕ್ಷಿಗಳನ್ನು ಯಾಕಾದರೂ ತೆರವುಗೊಳಿಸಬೇಕು ಎಂದು ಪ್ರಶ್ನಿಸಿದರೆ - ಮರದಡಿ ಸಾಗಲು ಸಾಧ್ಯವಿಲ್ಲ. ಹಕ್ಕಿಗಳು ಹಿಕ್ಕೆ ಹಾಕುತ್ತವೆ ಎಂಬ ಉತ್ತರ ಪುತ್ತೂರಿನ ಅಷ್ಟೂ ಮಂದಿಯ ಬಾಯಿಯಿಂದ ಬರುತ್ತವೆ. ಇನ್ನು ಮುಂದೆ ಹೀಗೆ ಉತ್ತರಿಸುವಂತಿಲ್ಲ. ಕಾರಣ, ಉಪದ್ರವ ಎಂದು ನೀವು ಹೇಳುತ್ತಿದ್ದ ನೀರು ಕಾಗೆ ಸಹಿತ ಕೆಲ ಜಾತಿಯ ಪಕ್ಷಿಗಳು ಜಾಗ ಖಾಲಿ ಮಾಡಿವೆ.
ಪುತ್ತೂರಿನ ಹೃದಯ ಭಾಗದಲ್ಲಿರುವ ಈ ಅಶ್ವತ್ಥ ಮರದಡಿ ನಿಂತು ಕಣ್ಣೆತ್ತಿ ನೋಡಿ - ಒಂದೂ ಹಕ್ಕಿಗಳು ಅಲ್ಲಿಲ್ಲ.
ಆಶ್ಚರ್ಯಗೊಂಡೀರೇ... ಇದು ಸತ್ಯ. ಎಲ್ಲರ ಮೇಲೂ ಹಿಕ್ಕೆ ಹಾಕಿ, ಖ್ಯಾತಿಯಾಗಿದ್ದ ನೀರು ಕಾಗೆಗಳು ಇಂದು ಅಲ್ಲಿಲ್ಲ. ಯಾವುದೋ ಬಲವಾದ ಕಾರಣಕ್ಕೆ ಜಾಗ ಖಾಲಿ ಮಾಡಿವೆ. ಹಾಗಾದರೆ ಆ ಕಾರಣ ಯಾವುದು?
ಎಲ್ಲಿಂದಲೋ ಬಂದು ಸಂತನಾಭಿವೃದ್ಧಿ ಮಾಡಿ, ತೆರಳುತ್ತಿದ್ದ ಹಕ್ಕಿಗಳ ಬಗ್ಗೆ ಮುತ್ತಿನ ನಗರಿಯ ಜನರಿಗೆ ಅದೇನೋ ಒಲವು. ತಮ್ಮ ಮೇಲೆ ಹಿಕ್ಕೆ ಹಾಕಿದರೂ, ತಮಗೆ ತಾವೇ ಸಮಾಧಾನ ಮಾಡಿಕೊಂಡು ತೆರಳುತ್ತಿದ್ದರು. ಇನ್ನು ಕೆಲವರು ಇದನ್ನು ಹಾಸ್ಯದ ವಸ್ತುವಾಗಿ ಪರಿಗಣಿಸಿದ್ದೂ ಇದೆ. ಆದರೆ ಯಾರೂ ಕೂಡ ಈ ಹಕ್ಕಿಗಳನ್ನು ನಿರ್ನಾಮ ಮಾಡಲೇಬೇಕೆಂಬ ಹಠಕ್ಕೆ ಬಿದ್ದಿಲ್ಲ. ಇದೀಗ ಹಕ್ಕಿಗಳು ತಾವಾಗಿಯೇ ಓಡಿ ಹೋಗಿವೆ. ಈ ಹಕ್ಕಿಗಳು ಹೋಗಿದ್ದಾದರೂ ಎಲ್ಲಿಗೆ? ಹೋದದ್ದಾದರೂ ಯಾಕೆ? ಇದೆಲ್ಲಾ ಯಕ್ಷಪ್ರಶ್ನೆಯಾಗಿ ಉಳಿದಿವೆ.
ಪಕ್ಷಿಪ್ರೇಮಿಗಳೇ, ಇತ್ತ ಸ್ವಲ್ಪ ಗಮನಹರಿಸಿ. ಎಷ್ಟೋ ವರ್ಷಗಳಿಂದ ಬೀಡು ಬಿಟ್ಟಿದ್ದ ಹಕ್ಕಿಗಳು ಏಕಾಏಕೀ ಜಾಗ ಖಾಲಿ ಮಾಡಲು ಸಾಧ್ಯವೇ? ಇದರ ಹಿಂದೆ ಬಲವಾದ ಕಾರಣವೊಂದು ಇರಲೇಬೇಕು ತಾನೇ? ಆ ಕಾರಣವಾದರೂ ಏನು ಎಂಬುದನ್ನು ಪತ್ತೆ ಹಚ್ಚಲೇಬೇಕು. ಇಲ್ಲವಾದರೆ, ಪ್ರಕೃತಿಗೆ ಇಂತಹ ಬಹುದೊಡ್ಡ ಹೊಡೆತ ಮೇಲಿಂದ ಮೇಲೆ ಬೀಳುವುದು ನಿಶ್ಚಿತ.
Posted by Vidyamaana on 2023-07-19 01:54:45 |
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸ೦ಘದ ಬೆಳ್ಳಿಹಬ್ಬ ಆಚರಣೆ ಜುಲೈ19 ರಂದು ಸುಳ್ಯ ಕೇರ್ಪಳ ದ ಬಂಟರ ಭವನದಲ್ಲಿ ನಡೆಯಲಿದೆ.
ಇದರ ಅಂಗವಾಗಿ ಉದ್ಘಾಟನಾ ಸಮಾರಂಭ, ಮಾಧ್ಯಮ ವಿಚಾರ ಸಂಕಿರಣ, ಪತ್ರಕರ್ತರ ಸಮ್ಮಿಲನ, ಸಮಾರೋಪ ಸಮಾರಂಭ ಹಾಗೂ ಸನ್ಮಾನ, ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ ಎಂದು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕೊರಕ್ಕೋಡಿ ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳ ಕಾನೂನು ಸಲಹಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಉದ್ಘಾಟಿಸುವರು, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ. ಕೆ ವಿ ಚಿದಾನಂದ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು, ಗುಜರಾತ್ ಉದ್ಯಮಿ ಗ್ರೀನ್ ಹೀರೋ ಆಫ್ ಇಂಡಿಯಾ ಡಾ. ಆರ್.ಕೆ ನಾಯರ್, ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಗಂಗಾಧರ ಮಟ್ಟಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.ಸಂಜೆ 5 ರಿಂದ ಸಮಾರೋಪ ಸಮಾರಂಭ ಹಾಗೂ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ, ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಸನ್ಮಾನ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸುಳ್ಯ ಶಾಸಕಿ ಭಾಗೀರಥಿ ಮುರುಳ ಅಧ್ಯಕ್ಷತೆ ವಹಿಸುವರು, ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ,ಮಾಜಿ ಸಚಿವ ಎಸ್.ಅಂಗಾರ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ.ರೇಣುಕಾಪ್ರಸಾದ್ ಕೆ.ವಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ದ.ಕ.ಜಿಲ್ಲಾ ವಾರ್ತಾಧಿಕಾರಿ ರವಿರಾಜ್ ಹೆಚ್.ಜಿ. ಭಾಗವಹಿಸಲಿದ್ದಾರೆ. ವಿಸ್ತಾರ ನ್ಯೂಸ್ ಎಡಿಟರ್ ಇನ್ ಚೀಫ್ ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ ಡಾ. ಯು.ಪಿ.ಶಿವಾನಂದ ಹಾಗೂ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿಯವರಿಗೆ ವಿಶೇಷ ಸನ್ಮಾನ ಮತ್ತು ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ಸದಸ್ಯರಿಗೆ ಗೌರವಾರ್ಪಣೆ ನಡೆಯಲಿದೆ.
ಮಾಧ್ಯಮ ವಿಚಾರಗೋಷ್ಠಿ ಪತ್ರಕರ್ತರ ಸಮ್ಮಿಲನ : ಬೆಳ್ಳಿ ಹಬ್ಬ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾಕುಮಾರ್ ನಾರ್ಯತೆಗೆ ಮಾತನಾಡಿ, ಪೂ.11.30ರಿಂದ ಹಿರಿಯ ಪತ್ರಕರ್ತ ಶಿವ ಸುಬ್ರಹ್ಮಣ್ಯ ಅಧ್ಯಕ್ಷತೆಯಲ್ಲಿ ಮಾಧ್ಯಮ ವಿಚಾರ ಸಂಕಿರಣ ನಡೆಯಲಿದೆ. ವಿಸ್ತಾರ ನ್ಯೂಸ್ ಬೆಂಗಳೂರು ಇದರ ಸುದ್ದಿಸಂಪಾದಕ ಹರೀಶ್ ಹಾಗೂ, ಸುದ್ದಿಯಾನ ಡಿಜಿಟಲ್ ಚಾನೆಲ್ ಸಂಪಾದಕ ಹರಿಪ್ರಸಾದ್ ವಿಚಾರಮಂಡನೆ ಮಾಡಲಿದ್ದಾರೆ. ಅಪರಾಹ್ನ 3 ಗಂಟೆಯಿಂದ 5 ಗಂಟೆಯ ತನಕ ರಾಜ್ಯದ ವಿವಿಧ ಕಡೆಗಳಲ್ಲಿ ಕಾರ್ಯನಿರ್ವಹಿಸುವ ಸುಳ್ಯದ ಪತ್ರಕರ್ತರ ಸಮ್ಮಿಲನ ನಡೆಯಲಿದೆ ಎಂದು ತಿಳಿಸಿದರು. ಬೆಳಿಗ್ಗೆ 9 ರಿಂದ 10ರ ತನಕ ಸುಮನಾ ರಾವ್ ಪತ್ತೂರು ಹಾಗು ಬಳಗದವರಿಂದ ಸಂಗೀತ ಸಂಭ್ರಮ ವಿಶೇಷ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 2 ರಿಂದ 3ರ ತನಕ ರಂಗಮಯೂರಿ ಕಲಾಶಾಲೆ ಸುಳ್ಯ, ನೂಪುರ ನಾಟ್ಯ ಸಂಸ್ಥೆ ಸುಳ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7.30 ರಿಂದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಗಂಗಾಧರ ಮಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ ಕಲ್ಲಹಳ್ಳಿ, ತಾಲೂಕು ಸಂಘದ ಕೋಶಾಧಿಕಾರಿ ದಯಾನಂದ ಕಲ್ಪಾ, ಬೆಳ್ಳಿಹಬ್ಬ ಸಮಿತಿಯ ಕೋಶಾಧಿಕಾರಿ ಗಿರೀಶ್ ಅಡಪಂಗಾಯ ಇದ್ದರು.
Posted by Vidyamaana on 2023-08-18 08:29:00 |
ಬೆಳ್ತಂಗಡಿ: ರೋಗಿಯೊಬ್ಬರನ್ನು ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.
ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
Posted by Vidyamaana on 2024-02-09 11:54:53 |
ಪುತ್ತೂರು: ಶೀಘ್ರದಲ್ಲಿ ಶುಭಾರಂಭಗೊಳ್ಳಲಿರುವ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಚಿನ್ನಾಭರಣ ಸಂಸ್ಥೆಯ ಪುತ್ತೂರು ಮಳಿಗೆಗೆ ಉತ್ಸಾಹಿ ಅಭ್ಯರ್ಥಿಗಳ ಆಯ್ಕೆಗೆ ವಾಕ್-ಇನ್-ಇಂಟರ್ ವ್ಯೂ ಕರೆಯಲಾಗಿದೆ.
ಕಾಸರಗೋಡು ಮೂಲದ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಂಗಳೂರು, ಬೆಂಗಳೂರು, ಕಾಞಂಗಾಡ್, ಕಾಸರಗೋಡು, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಶಾಖೆಗಳನ್ನು ಹೊಂದಿದೆ. ಸೊಗಸಾದ ವಿನ್ಯಾಸ, ಸಾಟಿಯಿಲ್ಲದ ಶುದ್ಧತೆಯ ಮೂಲಕ ಚಿನ್ನದ ವೈವಿಧ್ಯತೆಯನ್ನು ಗ್ರಾಹಕರ ಮುಂದಿಡುವಲ್ಲಿ ಸಂಸ್ಥೆ ಈಗಾಗಲೇ ಯಶಸ್ವಿಯಾಗಿದೆ.
ಫೆ. 11ರ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ದರ್ಬೆ ಸಂತ ಫಿಲೋಮಿನಾ ಕ್ಯಾಂಪಸಿನ ಫಿಲೋಮಿನಾ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಹಾಲಿನಲ್ಲಿ ನೇರ ಸಂದರ್ಶನ ನಡೆಯಲಿದೆ.
ಹುದ್ದೆಗಳ ವಿವರ ಹೀಗಿದೆ:
ಸೇಲ್ಸ್ ಎಕ್ಸಿಕ್ಯೂಟಿವ್ – ಜ್ಯುವೆಲ್ಲರಿ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷ ಅನುಭವ ಹೊಂದಿರಬೇಕು.
ಸೇಲ್ಸ್ ಟ್ರೈನಿ – 25 ವರ್ಷದೊಳಗಿನವರಿಗೆ ಆದ್ಯತೆ.
ಕಸ್ಟಮರ್ ರಿಲೇಷನ್ಸ್ ಎಕ್ಸಿಕ್ಯೂಟಿವ್ – ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ – ದ್ವಿಚಕ್ರ ವಾಹನ ಹೊಂದಿರಲೇಬೇಕು.
ಪ್ಯಾಕಿಂಗ್ ಬಾಯ್
ಎಲೆಕ್ಟ್ರಿಷಿಯನ್
ಪ್ಯಾಂಟ್ರಿ ಬಾಯ್ಸ್
ಹೌಸ್ ಕೀಪರ್ಸ್
ಚಾಲಕರು
ಸೆಕ್ಯೂರಿಟಿ
ಅಡುಗೆಯವರು
ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ: 9945474916, 9663748916
Posted by Vidyamaana on 2023-12-17 12:35:50 |
ಬಿಹಾರ: ಅತ್ತೆಯಂದಿರ ಪಾಲಿಗೆ ಅಳಿಯ ಅಂದ್ರೆ ಮಗನ ಸಮಾನ ಅಂತಾರೆ. ಆದ್ರೆ ಇಲ್ಲಿ ಮಾತ್ರ ಅತ್ತೆ, ತನ್ನ ಅಳಿಯನನ್ನು ನೋಡಿ ನೀನೇ ನನ್ನ ನಲ್ಲ ಅಂತಿದ್ದಾಳೆ. ಅಳಿಯನೂ ಅಷ್ಟೆ. ಅತ್ತೇನೆ ನನ್ನ ಜೀವ, ಜೀವನ ಎಂದು ಹಿಂದೆ ಬಿದ್ದಿದ್ದಾನೆ. ತನ್ನ ಸ್ವಂತ ಅತ್ತೆಯನ್ನೇ ಗೆಳತಿಯಾಗಿ ಮಾಡಿಕೊಂಡಿದ್ದಾನೆ.ಬಿಹಾರದಲ್ಲಿ ಅತ್ತೆ-ಅಳಿಯನ ಪ್ರೀತಿಯ ಸುದ್ದಿ ಪೊಲೀಸ್ ಠಾಣೆಯ ವರೆಗೂ ತಲುಪಿದೆ.
ಮದುವೆಗೂ (Marriage) ಮುನ್ನ ವ್ಯಕ್ತಿ ತನ್ನ ಅತ್ತೆಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ. ಅಲ್ಲಿ ಅವನು ತನ್ನ ಸೋದರ ಸಂಬಂಧಿಯ ವಿಧವೆ ಅತ್ತೆಯೊಂದಿಗೆ ಪ್ರೀತಿ ಯಲ್ಲಿ ಸಿಲುಕಿದ್ದಾನೆ. ನಂತರ ಇಬ್ಬರೂ ರಹಸ್ಯವಾಗಿ ಭೇಟಿಯಾಗಲು ಪ್ರಾರಂಭಿಸಿದ್ದಾರೆ. ಬಿಹಾರದ ಜಮುಯಿಯಲ್ಲಿ ಈ ಘಟನೆ ನಡೆದಿರೋದಾಗಿ ವರದಿಯಾಗಿದೆ. ಅಳಿಯ ಮತ್ತು ಅತ್ತೆ ಪರಸ್ಪರ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಆಗಾಗ ರಹಸ್ಯವಾಗಿ ಭೇಟಿಯಾಗುತ್ತಿದ್ದರು.ರಾತ್ರಿ ಭೇಟಿ ಮಾಡುವಾಗ ಸಿಕ್ಕಿಬಿದ್ದ ಅತ್ತೆ-ಅಳಿಯ, ಗ್ರಾಮಸ್ಥರಿಂದ ಥಳಿತ
ಆದರೆ ಇತ್ತೀಚಿಗೆ ಅಳಿಯ ರಾತ್ರಿಯಲ್ಲಿ ತನ್ನ ಅತ್ತೆಯನ್ನು ಭೇಟಿಯಾಗಲು ಹೋಗಿದ್ದು, ಇಬ್ಬರೂ ಮೈ ಮರೆತು ಚಕ್ಕಂದವಾಡುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗ್ರಾಮಸ್ಥರು ಅಳಿಯನನ್ನು ತೀವ್ರವಾಗಿ ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಪ್ರಕರಣವು ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಹನ್ಸ್ದಿಹ್ ಗ್ರಾಮಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ.
ಬಂಕಾ ಜಿಲ್ಲೆಯ ಧೋರೈಯಾ ಗ್ರಾಮದ ನಿವಾಸಿ ಚಂದನ್ ಗೋಸ್ವಾಮಿ ಅವರ ಅತ್ತಿಗೆ ಹನ್ಸ್ದಿಹ್ ಗ್ರಾಮದಲ್ಲಿದ್ದಾರೆ. ಅವರ ಸೋದರ ಸಂಬಂಧಿ ವಿಧವೆ ಅತ್ತೆ ಕೂಡ ಅಲ್ಲಿ ವಾಸಿಸುತ್ತಿದ್ದಾರೆ. ಅತ್ತೆಯ ಮನೆಗೆ ಹೋಗುವಾಗ ಚಂದನ್ಗೆ ಆಕೆಯ ಮೇಲೆ ಪ್ರೀತಿಯಾಗಿದೆ. ಇಲ್ಲಿಂದ ಇಬ್ಬರ ನಡುವೆ ಲವ್ ಸ್ಟೋರಿ ಶುರುವಾಗಿದೆ. ಇದಾದ ನಂತರ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಅತ್ತೆಯನ್ನು ಭೇಟಿಯಾಗಲು ಚಂದನ್, ಆಗಾಗ ಹನ್ಸ್ದಿಹ್ ಗ್ರಾಮಕ್ಕೆ ಭೇಟಿ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಪೊಲೀಸರು ತನಿಖೆ (Enquiry) ನಡೆಸುತ್ತಿದ್ದಾರೆ.
Posted by Vidyamaana on 2024-05-11 22:08:40 |
ಮೈಸೂರು: ಸುಲ್ತಾನ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಯು ತನ್ನ 11ನೇ ಶಾಖೆಯನ್ನು ನಗರದ ಮೀನಾ ಬಜಾರ್ ವೃತ್ತದ ಸಮೀಪ ಸಂತ ಫಿಲೋಮಿನಾ ಚರ್ಚ್ ರಸ್ತೆಯಲ್ಲಿ ತೆರೆಯುತ್ತಿದ್ದು, ಮೇ 12ರಂದು ಬಾಲಿವುಡ್ ನಟಿ ರವೀನಾ ಟಂಡನ್ ಅವರು ಮಳಿಗೆ ಉದ್ಘಾಟಿಸಲಿದ್ದಾರೆ.
ಶಾಸಕರಾದ ತನ್ನೀರ್ ಸೇರ್, ಜಿ.ಟಿ.ದೇವೇಗೌಡ, ಕೆ.ಹರೀಶ್ ಗೌಡ, ಸಂತ ಫಿಲೋಮಿನಾ ಚರ್ಚ್ನ ಧರ್ಮದರ್ಶಿ ಸ್ಪ್ಯಾನಿ ಅಡಾ, ಮಿಸ್ ಇಂಡಿಯಾ ಯುನಿವರ್ಸ್ ಖ್ಯಾತಿಯ ಡಾ.ಹೇಮಾಮಾಲಿನಿ ಲಕ್ಷ್ಮಣ್, ವೆಲ್ವಿನ್ ಇಂಡಸ್ಟ್ರೀಸ್ನ ಗೌರ್ ನಾಜ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನೂತನ ಮಳಿಗೆಯ ಉದ್ಘಾಟನೆಯ ಅಂಗವಾಗಿ ಮೇ 31ರವರೆಗೆ ಪ್ರತಿದಿನ