ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಸುದ್ದಿಗಳು News

Posted by vidyamaana on 2024-07-24 10:52:54 |

Share: | | | | |


ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಪುತ್ತೂರು : ಅಪ್ರಾಪ್ತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೆಳಿಯೂರುಕಟ್ಟೆ ನಿವಾಸಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಬೆಳಿಯೂರುಕಟ್ಟೆ ನಿವಾಸಿ ಅಪ್ರಾಪ್ತೆಗೆ ವಿವಾಹಿತ ಪ್ರಸಾದ್ ಎಂಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

 Share: | | | | |


ಸೋಶಿಯಲ್ ಡೆಮೋಕ್ರಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ತಾಲೂಕು ಸಮಿತಿ ರಚನೆ ಆಶಿಫ್ ಮುಕ್ವೆ ಅಧ್ಯಕ್ಷ, ಸುಹೈಲ್ ಬಡಕೋಡಿ ಕಾರ್ಯದರ್ಶಿ

Posted by Vidyamaana on 2024-05-29 06:32:45 |

Share: | | | | |


ಸೋಶಿಯಲ್ ಡೆಮೋಕ್ರಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ತಾಲೂಕು ಸಮಿತಿ ರಚನೆ  ಆಶಿಫ್ ಮುಕ್ವೆ ಅಧ್ಯಕ್ಷ, ಸುಹೈಲ್ ಬಡಕೋಡಿ ಕಾರ್ಯದರ್ಶಿ

ಪುತ್ತೂರು: SDTU ಇದರ ಸಹ ಸಂಘಟನೆಯಾದ ಸೋಶಿಯಲ್ ಡೆಮೋಕ್ರಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ತಾಲೂಕು ಸಮಿತಿಯ ವಾರ್ಷಿಕ ಕಾರ್ಯಕ್ರಮ ಯೂನಿಯನ್ ಅಧ್ಯಕ್ಷ ಮೊಹಮ್ಮದ್ ಕುಞ ಬಾಬ ರವರ ಅಧ್ಯಕ್ಷತೆಯಲ್ಲಿ ಪುತ್ತೂರಿನ ಮನೀಶ್ ಹಾಲ್ ನಲ್ಲಿ ನಡೆಯಿತು. ವಾರ್ಷಿಕ ವರದಿಯನ್ನು ಹಮೀದ್ ಕೆ. ಎಸ್ ವಾಚಿಸಿದರೆ, ಕಾರ್ಯದರ್ಶಿ ಹನೀಫ್ ಪೈಸಾರಿ ಸ್ವಾಗತಿಸಿದರು. ಬಳಿಕ ನೂತನ ಸಮಿತಿ ರಚನೆ ನಡೆಸಲಾಯಿತು

ಯೂನಿಯನ್ ಉಸ್ತುವಾರಿಯಾಗಿ ಶಮೀರ್ ನಾಜೂಕು, ಅಧ್ಯಕ್ಷರಾಗಿ ಆಶಿಫ್ ಮುಕ್ವೆ, ಉಪಾಧ್ಯಕ್ಷರಾಗಿ ಶಾಕಿರ್ ಬೆಳಂದೂರು, ಕಾರ್ಯದರ್ಶಿಯಾಗಿ ಸುಹೈಲ್ ಬಡಕೋಡಿ, ಜೊತೆ ಕಾರ್ಯದರ್ಶಿಯಾಗಿ ನೌಷಾದ್ ಸಾಲ್ಮರ

ಪುತ್ತೂರಿನಲ್ಲಿ ಡಿ.ವಿ. ಪತ್ರಿಕಾಗೋಷ್ಠಿ

Posted by Vidyamaana on 2023-05-02 10:50:14 |

Share: | | | | |


ಪುತ್ತೂರಿನಲ್ಲಿ ಡಿ.ವಿ. ಪತ್ರಿಕಾಗೋಷ್ಠಿ

ಪುತ್ತೂರು: ಹಿಂದೆ ನಡೆದ ಶನಿಪೂಜೆಯಲ್ಲೇ ಶನಿ ಬಿಡಿಸಿದ್ದೇವೆ ಎಂದು ಹೆಸರು ಹೇಳದೇ ಅರುಣ್ ಕುಮಾರ್ ಪುತ್ತಿಲ ಅವರ ಅಭಿಮಾನಿಗಳಿಗೆ ಡಿ.ವಿ‌ ಸದಾನಂದ ಗೌಡ ಟಾಂಗ್ ನೀಡಿದರು.

ಟ್ವಿಟ್ಟರ್, ಫೇಸ್ ಬುಕಿನಲ್ಲಿ ಪುತ್ತೂರಿಗೆ ಬರುವಂತೆ ಸವಾಲು ಹಾಕಿ ಬರೆದಿದ್ದ ಸಾಲುಗಳ ಪುಟಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಮಾಜಿ ಸಿಎಂ ಡಿ.ವಿ‌ ಸದಾನಂದ ಗೌಡ, ಅರುಣ್ ಕುಮಾರ್ ಪುತ್ತಿಲ ಹಾಗೂ ಅಶೋಕ್ ಕುಮಾರ್ ರೈ ಅವರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

ಡಿ.ವಿ. ಸದಾನಂದ ಗೌಡ ಅವರು ಪುತ್ತೂರಿನ ಶಾಸಕರಾಗಿದ್ದಾಗ ಪುತ್ತೂರು ಮಂಡಲ ಅಧ್ಯಕ್ಷರಾಗಿದ್ದವರನ್ನು ಪತ್ರಿಕಾಗೋಷ್ಠಿಯಲ್ಲಿ ಕುಳ್ಳಿರಿಸಿಯೇ ಪತ್ರಿಕಾಗೋಷ್ಠಿ ನಡೆಸಿಕೊಟ್ಟರು.

ನಾನು ಶಾಸಕರಾಗಿದ್ದಾಗ ಭಾಸ್ಕರ್ ಆಚಾರ್ ಹಿಂದಾರು, ಪುತ್ತಿಲ ಅವರು ಮುಂಡೂರು ಭಾಗದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡ್ತಾ ಇದ್ದರು. ಶನಿ ಪೂಜೆಯ ಸಂದರ್ಭ ಶನಿ ಬಿಡಿಸಿದ್ದೇವೆ ಎಂದರು. ಯಾಕಾಗಿ ಶನಿ ಬಿಡಿಸಿದ್ದೀರಿ ಎಂದು ಪ್ರಶ್ನಿಸಿದಾಗ, ಅದನ್ನು ಮಾಧ್ಯಮಗಳಲ್ಲಿ ಹಲವಾರು ಬಾರಿ ಬರೆಯಲಾಗಿದೆ. ಮತ್ತೊಮ್ಮೆ ವಿವರಣೆ ನೀಡುವ ಅಗತ್ಯವಿಲ್ಲ ಎಂದರು.

ಎನ್ ಕೌಂಟರ್ ಮಾಡ್ತಾರೆ ಎಂಬ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ದೇಶ ವಿರೋಧಿ ಚಟುಚಟಿಕೆ ಮಾಡುವ ಯಾರನ್ನೇ ಆದರೂ ಬಿಡುವುದಿಲ್ಲ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸಿಎ ದಿನಾಚರಣೆ

Posted by Vidyamaana on 2023-07-01 11:34:46 |

Share: | | | | |


ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸಿಎ ದಿನಾಚರಣೆ

ಪುತ್ತೂರು: ವಿದ್ಯಾರ್ಥಿಗಳ ಜೀವನದಲ್ಲಿ ನಿಶ್ಚಿತವಾದ ಗುರಿಯಿದ್ದರೆ ಮಾತ್ರ ಯಶಸ್ಸು ಸಾಧ್ಯ. ಗುರಿಯನ್ನು ಸಾಧಿಸುವ ಛಲ ಪ್ರತಿಯೊಬ್ಬರಲ್ಲೂ ಇರಬೇಕು. ನಿರಂತರ ಪ್ರಯತ್ನದಿಂದ ಗೆಲುವು  ಸಾಧ್ಯ ಎಂದು ಮಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಎಂ ಜಗನ್ನಾಥ ಕಾಮತ್ ಅಂಡ್ ಕೋ ಇದರ ಮ್ಯಾನೇಜಿಂಗ್ ಪಾರ್ಟ್ನರ್ ಆಗಿರುವ ಸಿಎ ಎಂ ಜಗನ್ನಾಥ ಕಾಮತ್ ಹೇಳಿದರು ಅವರು ಜುಲೈ ೧ರಂದು ಸಂತ ಫಿಲೋಮಿನ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘದ ಆಶ್ರಯದಲ್ಲಿ ನಡೆದ ವಾಣಿಜ್ಯ ಸಂಘದ ಉದ್ಘಾಟನೆ ಮತ್ತು ರಾಷ್ಟ್ರೀಯ ಸಿಎ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸಿಎ ಮಾಡಲು ವಿದ್ಯಾರ್ಥಿಗಳಿಗೆ ಲೆಕ್ಕಪತ್ರ ನಿರ್ವಹಣೆ, ಹಣಕಾಸು, ಸಾಮಾನ್ಯ ಗಣಿತ ಇನ್ನಿತರ ಕ್ಷೇತ್ರದಲ್ಲಿ ಪದವಿ ಅಗತ್ಯವಿರುತ್ತದೆ. ಸಿಎ ಮಾಡಲು ಬೇಕಾದ ಅರ್ಹತೆ ಪರಿಶ್ರಮದ ಬಗ್ಗೆ ತಿಳಿಸಿದರು.

ಮುಖ್ಯ ಅತಿಥಿಗಳಾದ ಫೈನಾನ್ಸಿಯಲ್ ಎನಾಲಿಸ್ಟ್ ಅಟ್ ಅಮೆಜಾನ್ ನ ಸಿಎ ಕೆ ಮಹಮ್ಮದ್ ಫೈರೋಜ್ ಮಾತನಾಡಿ “ವೈಫಲ್ಯವು ಯಶಸ್ಸಿನ ಮೆಟ್ಟಿಲು ಕಷ್ಟಪಟ್ಟು”. ಓದಿ ವಿಷಯವನ್ನು ಸರಿಯಾಗಿ ಗ್ರಹಿಸಿಕೊಂಡಾಗ ವಿದ್ಯಾರ್ಥಿಗಳು ಸಿಎ ಆಗಲು ಸಾಧ್ಯವಾಗುತ್ತದೆ. ನಿರಂತರ ಪರಿಶ್ರಮ ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ವಾಣಿಜ್ಯಶಾಸ್ತವನ್ನು ಅಧ್ಯಯನ ಮಾಡುವುದರಿಂದ ಹಲವಾರು ಅವಕಾಶಗಳು ಸಿಗುತ್ತದೆ. ಬ್ಯಾಂಕಿAಗ್ ಕ್ಷೇತ್ರ, ಚಾರ್ಟೆಡ್ ಅಕೌಂಟೆAಟ್ ನಂತಹ ಬೇರೆ ಬೇರೆ ಕ್ಷೇತ್ರಗಳು ವಿದ್ಯಾರ್ಥಿಗಳ ಮುಂದೆ ತೆರೆದಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ವಾಣಿಜ್ಯ ಸಂಘದ ನಿರ್ದೇಶಕರು ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ ವಿದ್ಯಾರ್ಥಿಗಳಾದ ನಿಧಾ ಅತಿಥಿಗಳನ್ನು ಸ್ವಾಗತಿಸಿ ಪ್ರತೀಕ್ಷಾ ಅತಿಥಿಗಳನ್ನು ಪರಿಚಯಿಸಿದರು. ಆಸ್ತಿಕ ವಂದಿಸಿ ನಿಶ್ಚಿತ ಕಾರ್ಯಕ್ರಮ ನಿರೂಪಿಸಿದರು

ಶಿರಾಡಿ ಘಾಟಿಯಲ್ಲಿ ಇನ್ನೋವಾ ಕಾರು ಭೀಕರ ಅಪಘಾತ:ಮೇಲ್ಕಾರ್ ಮೂಲದ ತಾಯಿ-ಮಗ ಮೃತ್ಯು; ಹಲವರಿಗೆ ಗಂಭೀರ

Posted by Vidyamaana on 2024-05-21 11:07:56 |

Share: | | | | |


ಶಿರಾಡಿ ಘಾಟಿಯಲ್ಲಿ ಇನ್ನೋವಾ ಕಾರು ಭೀಕರ ಅಪಘಾತ:ಮೇಲ್ಕಾರ್ ಮೂಲದ ತಾಯಿ-ಮಗ ಮೃತ್ಯು; ಹಲವರಿಗೆ ಗಂಭೀರ

ಸಕಲೇಶಪುರ: ಲಾರಿ ಮತ್ತು ಕಾರು ಡಿಕ್ಕಿಯಾಗಿ ತಾಯಿ-ಮಗ ಮೃತಪಟ್ಟ ಘಟನೆ ಶಿರಾಡಿ ಘಾಟ್ ನಲ್ಲಿ ನಡೆದಿದೆ.ಮೃತರನ್ನು ಪಾಣೆಮಂಗಳೂರು ಸಮೀಪದ ಬೊಂಡಾಲ ನಿವಾಸಿ ಶಬೀರ್ ಎಂಬವರ ಪತ್ನಿ ಸಫಿಯಾ(50) ಮತ್ತು ಪುತ್ರ ಮುಹಮ್ಮದ್ ಶಫೀಕ್(20) ಎಂದು ಗುರುತಿಸಲಾಗಿದೆ.ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರಿಗೆ

ಉಪ್ಪಿನಂಗಡಿ ಕಂಬಳೋತ್ಸವದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಅಭ್ಯರ್ಥಿ

Posted by Vidyamaana on 2024-03-31 14:05:26 |

Share: | | | | |


ಉಪ್ಪಿನಂಗಡಿ ಕಂಬಳೋತ್ಸವದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಅಭ್ಯರ್ಥಿ

ಉಪ್ಪಿನಂಗಡಿ: ಇಲ್ಲಿನ ವಿಜಯ - ವಿಕ್ರಮ ಜೋಡುಕರೆ ಕಂಬಳೋತ್ಸವದಲ್ಲಿ ಪಾಲ್ಗೊಂಡ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು, ಕಲಹ ಕನ್ನಡ ಸಿನಿಮಾದ ಪೋಸ್ಟರ್ ಅನಾವರಣಗೊಳಿಸಿದರು.

ಪುತ್ತೂರು ಶಾಸಕ, ಉಪ್ಪಿನಂಗಡಿ ವಿಜಯ - ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರೂ ಆಗಿರುವ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು.

ಕಂಬಳಕ್ಕೆ ತನ್ನದೇ ಆದ ವಿಶೇಷ ಕೊಡುಗೆ ನೀಡಿರುವ ವಲೇರಿಯನ್ ಡಯಾಸ್ (ಅಪ್ಪಣ್ಣ) ಅವರನ್ನು ಇದೇ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು.

ಉಪ್ಪಳ: ಮನೆಯ ಬಾಗಿಲು ಮುರಿದು ಕಳವು: 8 ಪವನ್ ಚಿನ್ನ, 45 ಸಾವಿರ ರೂ.ನಗದು ಕದ್ದು ಪರಾರಿ

Posted by Vidyamaana on 2023-02-04 04:20:01 |

Share: | | | | |


ಉಪ್ಪಳ: ಮನೆಯ ಬಾಗಿಲು ಮುರಿದು ಕಳವು: 8 ಪವನ್ ಚಿನ್ನ, 45 ಸಾವಿರ ರೂ.ನಗದು ಕದ್ದು ಪರಾರಿ

ಉಪ್ಪಳ: ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಸುಮಾರು 8 ಪವನ್ ಚಿನ್ನಾಭರಣ ಮತ್ತು 45 ಸಾವಿರ ರೂ. ನಗದು ಕಳವು ಮಾಡಿರುವ ಘಟನೆ ಉಪ್ಪಳದಲ್ಲಿ ನಡೆದಿದೆ.

     ಹಿದಾಯತ್ ಬಜಾ‌ರ್ ನ ಮುಹಮ್ಮದ್ ಸಲೀಂ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.ಸಲೀಂ ಗಲ್ಸ್‌ನಲ್ಲಿದ್ದು, ತಾಯಿ ಸಫಿಯಾ ಮನೆಗೆ ಬೀಗ ಹಾಕಿ ಸಾಲೆತ್ತೂರಿನ ಸಂಬಂಧಿಕರ ಮನೆಗೆ ತೆರಳಿದ್ದರು. ಗಲ್ಫ್ನಲ್ಲಿರುವ ಸಲೀಂ ಮೊಬೈಲ್ ಫೋನ್ ಮೂಲಕ ಮನೆಯಲ್ಲಿರುವ ಸಿಸಿ ಟಿವಿ ದೃಶ್ಯಗಳನ್ನು ಗಮನಿಸಿದಾಗ ತಡರಾತ್ರಿ ಮನೆಯೊಳಗೆ ಓರ್ವ ಮುಸುಕುಧಾರಿಯಾಗಿ ತೆರಳುತ್ತಿರುವುದು ಗಮನಕ್ಕೆ ಬಂದಿದೆ.ಇನ್ನು ತಕ್ಷಣ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಮನೆಗೆ ಬಂದು ಗಮನಿಸಿದಾಗ ಮುಂಭಾಗದ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಮೇಲಂತಸ್ತಿನಲ್ಲಿದ್ದ ಒಂದು ಮತ್ತು ಕೆಳಗಡೆ ಇದ್ದ ಮೂರು ಕಪಾಟುಗಳನ್ನು ಒಡೆದು ವಸ್ತ್ರಗಳನ್ನು ಎಸೆದಿರುವುದು ಕಂಡು ಬಂದಿದೆ.

Recent News


Leave a Comment: