Posted by vidyamaana on 2024-07-24 10:52:54 |
ಪುತ್ತೂರು : ಅಪ್ರಾಪ್ತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೆಳಿಯೂರುಕಟ್ಟೆ ನಿವಾಸಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.
ಬೆಳಿಯೂರುಕಟ್ಟೆ ನಿವಾಸಿ ಅಪ್ರಾಪ್ತೆಗೆ ವಿವಾಹಿತ ಪ್ರಸಾದ್ ಎಂಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
Posted by Vidyamaana on 2024-04-16 13:37:56 |
ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು.
ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ ಪ್ರಚಾರ ಕಾರ್ಯಕ್ಕೆ ಮುಂದಾದ ಪದ್ಮರಾಜ್ ಆರ್. ಪೂಜಾರಿ ಅವರು, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ರೋಡ್ ಶೋ ಆರಂಭಿಸಿದರು. ಪುತ್ತೂರು ಪೇಡೆಯಾದ್ಯಂತ ಸಂಚರಿಸಿದ ರೋಡ್ ಶೋ, ವಿಟ್ಲ ಬಸ್ ನಿಲ್ದಾಣದಲ್ಲಿ ಸಮಾಪನಗೊಂಡಿತು. ಬಳಿಕ ವಿಟ್ಲ ಸಂತೆ ಮಾರುಕಟ್ಟೆಗೆ ತೆರಳಿ ಮತ ಯಾಚನೆ ನಡೆಸಿದರು.
ರೋಡ್ ಶೋ ಉದ್ದಕ್ಕೂ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅಭ್ಯರ್ಥಿಗೆ ಸಾಥ್ ನೀಡಿದರು.
Posted by Vidyamaana on 2024-06-14 15:34:19 |
ಬೆಂಗಳೂರು :ಬಿಎಸ್ ಯಡಿಯೂರಪ್ಪ ವಿರುದ್ಧ ಅರೆಸ್ಟ್ ವಾರೆಂಟ್ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವಾಗ? ನನಗೆ ಗೊತ್ತಿಲ್ಲ? ನಾನು ಮೀಟಿಂಗ್ನಲ್ಲಿದ್ದೇನೆ ನೀವು ಹೇಳಿದ್ಮೇಲೆ ಗೊತ್ತಾಗಿದ್ದು. ನನಗೆ ಈ ವಿಚಾರದಲ್ಲಿ ತಿಳಿವಳಿಕೆ ಇಲ್ಲ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು
Posted by Vidyamaana on 2024-08-04 06:18:29 |
ರಾಮನಗರ : ಮುಡಾ ಪ್ರಕರಣ ವಿರೋಧಿಸಿ ನಡೆಯುತ್ತಿರುವ ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಬಿಜೆಪಿಯ ಮಾಜಿ ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಪಾದಯಾತ್ರೆಯಲ್ಲಿ ಹಾಜರಾಗಿ ಹೆಜ್ಜೆ ಹಾಕಿದ್ದಾರೆ.ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ವಿಚಾರ ಮುಂದಿಟ್ಟು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರೀತಂಗೌಡ ವಿರುದ್ಧ ಆಕ್ರೋಶ ಹೊರಹಾಕಿ ಪಾದಯಾತ್ರೆಗೆ ಬರುವುದನ್ನು ವಿರೋಧಿಸಿದ್ದರು.
Posted by Vidyamaana on 2023-05-14 12:22:12 |
ಪುತ್ತೂರು: ಚುನಾವಣಾ ಪ್ರಚಾರಕ್ಕೆಂದು ಪಕ್ಷದ ವತಿಯಿಂದ ಎಲ್ಲಾ ಸೌಲಭ್ಯವನ್ನು ಮಾಡಿಕೊಟ್ಟಿದ್ದು , ಸೌಲಭ್ಯವನ್ನೇ ಬಳಸಿಕೊಂಡಿದ್ದ ಪಕ್ಷವೊಂದರ ನಾಯಕನೋರ್ವ ಪ್ರಚಾರಕ್ಕೆ ತೆರಳದೆ ಮನೆಯಲ್ಲೇ ಮಲಗಿದ್ದರು ಎಂಬ ವಿಚಾರ ಬಹಿರಂಗವಾಗಿದ್ದು ಮತ ಎಣಿಕೆಯ ದಿನ ಈ ವಿಚಾರದ ಬಗ್ಗೆ ಕಾರ್ಯಕರ್ತರೊಳಗೆ ಭಾರೀ ಚರ್ಚೆಯಾಗಿದೆ.
ನಾನು ಪ್ರಚಾರಕ್ಕೆ ತೆರಳಬೇಕಾದರೆ ನನಗೆ ಕಾರು ಕೊಡಬೇಕು, ಕಾರಿಗೊಂಡು ಡ್ರೈವರ್ ಕೊಡಬೇಕು ಮತ್ತು ಖರ್ಚಿಗೂ ಕೊಡಬೇಕು ಎಂದು ಪಕ್ಷದ ಅಭ್ಯರ್ಥಿಯಲ್ಲಿ ಹೇಳಿಕೊಂಡಿದ್ದ ಆ ನಾಯಕ. ನನ್ನ ಕಾರಲ್ಲಿ ಯಾರೂ ಬರಕೂಡದು ನನ್ನದೇ ಆದ ಕೆಲವೊಂದು ಏರಿಯಾ ಇದೆ ಅಲ್ಲಿಗೆ ನಾನೊಬ್ಬನೇ ಪ್ರಚಾರಕ್ಕೆ ತೆರಳಿದರೆ ಮಾತ್ರ ಓಟು ಸಿಗುವುದು ಅವರೆಲ್ಲರೂ ನನ್ನದೇ ಜನ ಎಂದೆಲ್ಲಾ ಹೇಳಿ ನಂಬಿಸಿದ್ದ ಆ ನಾಯಕ ಕಾರು ಮತ್ತು ಖರ್ಚಿನ ಹಣದೊಂದಿಗೆ ತೆರಳಿ ಎಲ್ಲಾ ದಿನವೂ ಮನೆಯಲ್ಲೇ ಮಲಗಿದ್ದ ಎನ್ನಲಾಗಿದೆ. ಮನೆಯಲ್ಲಿ ನಾಯಕ ಮಲಗಿದ್ದ ಬಗ್ಗೆ ಕಾರಿನ ಚಾಲಕ ಯಾರಲ್ಲೋ ತಮಾಷೆಗೆ ಹೇಳಿದ್ದಾನೆ. ತಮಾಷೆಗೆ ಹೇಳಿದ ವಿಚಾರ ಅಭ್ಯರ್ಥಿಯ ಕಿಚಿಗೂ ಮುಟ್ಟಿದೆ ಎನ್ನಲಾಗಿದೆ.
ಚುನಾವಣೆ ಮುಗಿದಿದೆ, ಪ್ರಚಾರವೂ ಮುಗಿದಿದೆ ಎಲ್ಲವೂ ಮುಗಿದ ಬಳಿಕ ಮಲಗಿದ ನಾಯಕ ಎದ್ದಿರಬಹುದು ಎಂದು ವ್ಯಂಗ್ಯವಾಡುತ್ತಿರುವ ಕಾರ್ಯಕರ್ತರು ಆ ನಾಯಕನ ಪಕ್ಷದಿಂದ ಉಚ್ಚಾಟನೆ ಮಾಡಿ ಅವರಿಗೆ ಫುಲ್ ರೆಸ್ಟ್ ಕೊಡಬೇಕೆಂದು ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ್ದಾರೆ. ಈ ನಾಯಕ ಯಾರು ಎಂಬ ಕುತೂಹಲ ನಿಮಗಿರಬಹುದು ಈ ಕುತೂಹಲಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಆ ವ್ಯಕ್ತಿ ಯಾರು ಎಂಬುದು ನಾವೇ ತಿಳಿಸಲಿದ್ದೇವೆ ಅಲ್ಲಿಯವರೆಗೆ ವೈಟ್ ಮಾಡಿ....
Posted by Vidyamaana on 2024-06-19 13:46:52 |
ವಿಜಯಪುರ: 16ವರ್ಷದ ಬಾಲಕನೊಂದಿಗೆ 28ವರ್ಷದ ವಿವಾಹಿತ ಮಹಿಳೆ ಎಸ್ಕೇಪ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 4ವರ್ಷದ ಮಗುವಿನೊಂದಿಗೆ ಅಪ್ರಾಪ್ತ ಬಾಲಕನೊಂದಿಗೆ ವಿವಾಹಿತ ಮಹಿಳೆ ಎಸ್ಕೇಪ್ ಆಗಿದ್ದು, ವಿವಾಹಿತ ಮಹಿಳೆ ನನ್ನ ಮಗನನ್ನು ಅಪರಹಿಸಿಕೊಂಡು ಹೋಗಿದ್ದಾಳೆ ಎಂದು ತಾಯಿ ಅಕ್ಕಮಹಾದೇವಿ ಆರೋಪ ಮಾಡಿದ್ದಾರೆ.
Posted by Vidyamaana on 2023-07-09 05:57:26 |
ಮಂಗಳೂರು: ಕಾರ್ಮಿಕನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಮಾಡಿರುವ ಘಟನೆ ನಗರದ ಮುಳಿಹಿತ್ಲುವಿನಲ್ಲಿ ನಡೆದಿದೆ.
ಉತ್ತರ ಭಾರತ ಮೂಲದ ಗಜ್ಞಾನ್ ಅಲಿಯಾಸ್ ಜಗು ಎಂಬ ಕಾರ್ಮಿಕನನ್ನು ಮಶುಪಾ ಜನರಲ್ ಸ್ಟೋರ್ ಮಾಲೀಕ ತೌಸಿಫ್ ಹುಸೈನ್ ಎಂಬಾತ ಕೊಲೆ ಮಾಡಿರುವುದಾಗಿ ಹೇಳಲಾಗಿದೆ.
ಬೆಂಕಿ ಹಚ್ಚಿ ಕೊಂದ ಬಳಿಕ ಆರೋಪಿ ವಿದ್ಯುತ್ ಶಾಕ್ ಎಂದು ಪೊಲೀಸ್ ದೂರು ನೀಡಿದ್ದಾನೆ. ಶನಿವಾರ ಬೆಳಗ್ಗೆ 7.30 ಕ್ಕೆ ಕೃತ್ಯ ಎಸಗಿದ್ದು, ಬಳಿಕ ಮಧ್ಯಾಹ್ನ 1.30 ಕ್ಕೆ ವೆನ್ಲಾಕ್ ಆಸ್ಪತ್ರೆಗೆ ರವಾನೆ ಮಾಡಿ ವಿದ್ಯುತ್ ಶಾಕ್ ನಿಂದ ಘಟನೆ ಅಂತಾ ತಿರುಚಲು ಯತ್ನಿಸಿದ್ದಾನೆ.
ಆದರೆ ಪೊಲೀಸರ ಅನುಮಾನದಿಂದ ವಿಚಾರಿಸಿದಾಗ ಕೃತ್ಯ ಬಯಲಾಗಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ತೌಸಿಫ್ ಹುಸೈನ್ ಅನ್ನು ಪೊಲೀಸರು ಬಂಧಿಸಿದ್ದಾರೆ.