ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಸುದ್ದಿಗಳು News

Posted by vidyamaana on 2024-07-25 19:32:58 | Last Updated by Vidyamaana on 2024-07-25 19:32:58

Share: | | | | |


ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಬಂಟ್ವಾಳ : ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ. 

 ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ

ಬಾತಿಷಾ( 22) ಮೃತಪಟ್ಟವರು.ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.

 Share: | | | | |


ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ನಿಧನ

Posted by Vidyamaana on 2024-07-22 11:26:34 |

Share: | | | | |


ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ನಿಧನ

ಮುಕ್ಕೂರು : ಪೆರುವಾಜೆ ಗ್ರಾಮದ ಕಾನಾವು ನಿವಾಸಿ, ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ಜು.22 ರಂದು ಬೆಳಗ್ಗೆ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.



ಕಾಪು ಠಾಣೆ ಮಹಿಳಾ ಪೇದೆ ಆತ್ಮಹತ್ಯೆ ; ಕೆಎಸ್ಸಾರ್ಟಿಸಿ ಉದ್ಯೋಗಿ ಪತಿಯನ್ನು ಬಂಧಿಸಿದ ಪೊಲೀಸರು

Posted by Vidyamaana on 2024-04-01 20:14:15 |

Share: | | | | |


ಕಾಪು ಠಾಣೆ ಮಹಿಳಾ ಪೇದೆ ಆತ್ಮಹತ್ಯೆ ; ಕೆಎಸ್ಸಾರ್ಟಿಸಿ ಉದ್ಯೋಗಿ ಪತಿಯನ್ನು ಬಂಧಿಸಿದ ಪೊಲೀಸರು

ಉಡುಪಿ, ಎ.1: ಕಾಪು ಪೊಲೀಸ್ ಠಾಣೆ ಮಹಿಳಾ ಸಿಬಂದಿ ಆತ್ಮಹತ್ಯೆ ಪ್ರಕರಣ ಸಂಬಂಧಿಸಿ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. 


ಮಾ.30ರಂದು ಕಾಪು ಠಾಣೆ ಸಿಬಂದಿ, ಬಾಗಲಕೋಟ ಮೂಲದ ಜ್ಯೋತಿ (28) ತನ್ನ ಪೊಲೀಸ್ ಕ್ವಾಟ್ರಸ್ ನಲ್ಲಿ ಸಾವಿಗೆ ಶರಣಾಗಿದ್ದರು. ಇವರ ಪತಿ ರವಿಕುಮಾರ್ ಕೆಎಸ್ಸಾರ್ಟಿಸಿ ಉದ್ಯೋಗಿಯಾಗಿದ್ದು ಬೆಳಗ್ಗೆ ಕೆಲಸಕ್ಕೆ ಹೊರಡುವ ಸಂದರ್ಭದಲ್ಲಿ ಪತ್ನಿ ನೇಣಿಗೆ ಶರಣಾಗಿದ್ದರೆಂದು ತಿಳಿಸಿದ್ದರು.

ವಿಟ್ಲ : ಮಳೆಗೆ ಮರ ಬಿದ್ದು ಮನೆಗೆ ಹಾನಿ

Posted by Vidyamaana on 2023-05-12 11:28:43 |

Share: | | | | |


ವಿಟ್ಲ : ಮಳೆಗೆ ಮರ ಬಿದ್ದು ಮನೆಗೆ ಹಾನಿ

ವಿಟ್ಲ: ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ಎಂಬಲ್ಲಿ ಭಾರೀ ಮಳೆಗಾಳಿಗೆ ಮನೆ ಮೇಲೆ ಮರ ಬಿದ್ದು ಹಾನಿಗೊಂಡ ಮನೆಗೆ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಭೇಟಿ ನೀಡಿದರು. 

ಜು9: ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಪದಸ್ವೀಕಾರ

Posted by Vidyamaana on 2023-07-08 15:04:02 |

Share: | | | | |


ಜು9: ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಪದಸ್ವೀಕಾರ

ಪುತ್ತೂರು: ರೋಟರಿ ಕ್ಲಬ್‌ ಪುತ್ತೂರು ಇದರ ಪ್ರಾಯೋಜಕತ್ವದ ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನ ಪದಸ್ವೀಕಾರ ಹಾಗೂ ಜಿಲ್ಲಾ ರೋಟರ್ಯಾಕ್ಟ್ ಪ್ರತಿನಿಧಿ ಪದಸ್ವೀಕಾರ ಸಮಾರಂಭ ಜುಲೈ 9ರಂದು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಹಾಲಿನಲ್ಲಿ ನಡೆಯಲಿದೆ.

ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ರಾಹುಲ್ ಆಚಾರ್ಯ ನೇಮಕಗೊಂಡಿದ್ದು, ಕಾರ್ಯದರ್ಶಿಯಾಗಿ ಶ್ರೇಯಸ್, ಖಜಾಂಚಿಯಾಗಿ ಮಹೇಶ್ಚಂದ್ರ ಮತ್ತು ಅವರ ತಂಡ ಪದಸ್ವೀಕಾರ ಮಾಡಲಿದ್ದಾರೆ.

ರೋಟರ್ಯಾಕ್ಟ್ ಕ್ಲಬ್ ಪದಸ್ವೀಕಾರ:

ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನ ಅಧ್ಯಕ್ಷರಾಗಿ ಜ್ಯೋತಿಕಾ, ಕಾರ್ಯದರ್ಶಿಯಾಗಿ ಧನುಷಾ, ಐಪಿಪಿಯಾಗಿ ಗಣೇಶ್ ಎನ್. ಕಲ್ಲರ್ಪೆ ನೇಮಕಗೊಂಡಿದ್ದಾರೆ. ಸಭಾಪತಿಯಾಗಿ ಪ್ರೇಮಾನಂದ್ ಕಾರ್ಯನಿರ್ವಹಿಸಲಿದ್ದಾರೆ.

ಉಪಾಧ್ಯಕ್ಷರಾಗಿ ವಿಶಾಲ್, ಜತೆ ಕಾರ್ಯದರ್ಶಿಯಾಗಿ ನವೀನ್ ಚಂದ್ರ, ಕೋಶಾಧಿಕಾರಿಯಾಗಿ ಸುಕನ್ಯಾ, ಸಮುದಾಯ ಸೇವಾ ನಿರ್ದೇಶಕರಾಗಿ ವಿಜಯ್, ವೃತ್ತಿ ಸೇವಾ ನಿರ್ದೇಶಕರಾಗಿ ಪುರುಷೋತ್ತಮ್, ಅಂತಾರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ಮಹೇಶ್ಚಂದ್ರ, ಸಂಘ ಸೇವಾ ನಿರ್ದೇಶಕರಾಗಿ ಶಶಿಧರ್ ಕೆ. ಮಾವಿನಕಟ್ಟೆ, ಬುಲೆಟಿನ್ ಎಡಿಟರ್ ಆಗಿ ಶ್ರೀಕಾಂತ್ ಬಿರಾವು, ಕ್ರೀಡಾ ನಿರ್ದೇಶಕರಾಗಿ ಹಿಮಾಂಶು ಕುಮಾರ್, ಸಾಂಸ್ಕೃತಿಕ ನಿರ್ದೇಶಕರಾಗಿ ಸುಬ್ರಹ್ಮಣಿ, ಪಿ.ಆರ್.ಓ. ಆಗಿ ನವೀನ್ ಬನ್ನೂರು, ಸಾರ್ಜಂಟ್ ಆಗಿ ಮುರಳಿ ನೇಮಕಗೊಂಡಿದ್ದಾರೆ.

ಬಂಟ್ವಾಳ : ಶೋಭಾಯಾತ್ರೆಯ ಮಾರ್ಗ ಬದಲಾವಣೆಗೆ ಒಪ್ಪದ ತಾಯಿ ಶಾರದೆ

Posted by Vidyamaana on 2023-09-10 20:10:13 |

Share: | | | | |


ಬಂಟ್ವಾಳ : ಶೋಭಾಯಾತ್ರೆಯ ಮಾರ್ಗ ಬದಲಾವಣೆಗೆ ಒಪ್ಪದ ತಾಯಿ ಶಾರದೆ

ಬಂಟ್ವಾಳ: ಬೇಂಕ್ಯ ಸುಭಾಶ್ ಯುವಕ ಮಂಡಲದ ಆಶ್ರಯದಲ್ಲಿ ಶ್ರೀ ಶಾರದಾ ಪೂಜಾ ಸಮಿತಿಯ ವತಿಯಿಂದ 97ನೇ ವರ್ಷದ ಶಾರದಾ ಪೂಜಾ ಕಾರ್ಯಕ್ರಮವು ಈ ಬಾರಿ ನಾಲ್ಕು ದಿನಗಳ ಕಾಲ ಸಜೀಪಮೂಡ ಬೇಂಕ್ಯ ಶಾಲೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಈ ಹಿನ್ನಲೆಯಲ್ಲಿ ಇಂದು (ಸೆ.10) ಮೂರು ಹಂತದ ಸಿದ್ಧಾತ ಸಭೆ ನಡೆಯಿತು. ಶಾರದ ನಗರ ಮಂದಿರದಲ್ಲಿ ನಡೆದ ಎರಡನೇ ಹಂತದ ಸಭೆಯಲ್ಲಿ ತಾಯಿ ಶಾರದೆಯ ಶೋಭಯಾತ್ರೆಯ ಕುರಿತಾಗಿ ಚರ್ಚೆ ನಡೆದುಸಭೆಯಲ್ಲಿದ್ದವರು ತಮ್ಮ ತಮ್ಮ ಸಲಹೆಗಳನ್ನು ನೀಡಿದರು.

ಈ ಸಭೆಯಲ್ಲಿ ಪ್ರಮುಖವಾಗಿ ಶೋಭಯಾತ್ರೆಯ ಮಾರ್ಗ ಬದಲಾವಣೆ ಕುರಿತಾಗಿಯೂ ಚರ್ಚೆ ಕೂಡ ನಡೆಯಿತು.

ಆ ಬಳಿಕ ಸಂಘದ ಹಿರಿಯರು ಹಾಗೂ ಅಧ್ಯಕ್ಷರು, ‘ತಾಯಿ ಶಾರದೆಗೆ ಶೋಭಯಾತ್ರೆಯ ಮಾರ್ಗ ಬದಲಾವಣೆಯ ಒಪ್ಪಿಗೆ ಇದೆಯಾ..?’ ಎಂದು ಮಂಗಳಾದೇವಿ ದೇವಸ್ಥಾನದಲ್ಲಿ ಗಣೇಶ್ ಐತಾಳ್ ಅವರಲ್ಲಿ ತಾಂಬೂಲ ಪ್ರಶ್ನೆ ಇರಿಸಿದ್ದು, ಈ ಸಂದರ್ಭ ತಾಯಿ ಶಾರದೆಗೆ ಮಾರ್ಗ ಬದಲಾವಣೆಯ ಒಪ್ಪಿಗೆ ಇಲ್ಲ ಎಂದು ಪ್ರಶ್ನೆಯಲ್ಲಿ ಕಂಡು ಬಂದಿದ್ದು,’ಇಷ್ಟು ವರ್ಷ ಯಾವ ಮಾರ್ಗದಲ್ಲಿ ತಾಯಿ ಶಾರದೆಯ ಮೆರವಣಿಗೆ ಸಾಗುತ್ತಿತ್ತೋ ಅದೇ ದಾರಿಯಲ್ಲೇ ನನ್ನ ಶೋಭಯಾತ್ರೆ ನಡೆಯಲಿ..’ ಎಂದು ತಾಯಿ ಶಾರದೆ ತಾಂಬೂಲ ಪ್ರಶ್ನೆಯಲ್ಲಿ ಸೂಚಿಸಿದ್ದಾಳೆ ಎಂದು ಕಂಡುಬಂತು.

ಹೀಗಾಗಿ ಇಂದು ನಡೆದ ಮೂರನೇ ಹಂತದ ಸಭೆಯಲ್ಲಿ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದ ಹಾಗೆ ಈ ಮೊದಲಿನಂತೆ ಶೋಭಯಾತ್ರೆ ನಡೆಯುತ್ತಿದ್ದ ಮಾರ್ಗದಲ್ಲೇ ಈ ಬಾರಿಯೂ ಶೋಭಾಯಾತ್ರೆ ಸಾಗಲಿ ಎಂದು ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ತೀರ್ಮಾನಿಸಿದ್ದಾರೆ.

ಈ ಸಂದರ್ಭ ಶಾರದಾ ಪೂಜಾ ಸಮಿತಿಯ ಅಧ್ಯಕ್ಷರಾದ ವಸಂತ್ ಕುಮಾರ್ ಬರ್ಕೆ, ಮಾಜಿ ಅಧ್ಯಕ್ಷರಾದ ಶ್ರೀನಾಥ ಶೆಟ್ಟಿ, ಪಂಚಾಯತ್ ಸದಸ್ಯರಾದ ಯೋಗೀಶ್ ಬೆಳ್ಚಾಡ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ದೇವಿ ಪ್ರಸಾದ್ ಪೂಂಜಾ, ಸದಾನಂದ ಶೆಟ್ಟಿ,ಪ್ರಹ್ಲಾದ್ ಬೇಂಕ್ಯ ಹಾಗೂ ಸಂಘದ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮಂಗಳೂರು: ಮಂಗಳಾದೇವಿ ದಸರಾದಲ್ಲಿ ಹಿಂದೂಗಳ ಅಂಗಡಿಗಳಿಗೆ ಕೇಸರಿ ಧ್ವಜ ಕಟ್ಟಿ ವ್ಯಾಪಾರ ಮಾಡಲು ಕರೆ

Posted by Vidyamaana on 2023-10-17 07:27:31 |

Share: | | | | |


ಮಂಗಳೂರು: ಮಂಗಳಾದೇವಿ ದಸರಾದಲ್ಲಿ ಹಿಂದೂಗಳ ಅಂಗಡಿಗಳಿಗೆ ಕೇಸರಿ ಧ್ವಜ ಕಟ್ಟಿ ವ್ಯಾಪಾರ ಮಾಡಲು ಕರೆ

ಮಂಗಳೂರು: ಮಂಗಳಾದೇವಿ ದಸರಾದಲ್ಲಿ ಹಿಂದೂಗಳ ಅಂಗಡಿಗಳಿಗೆ ಕೇಸರಿ ಧ್ವಜ ಕಟ್ಟಿ ವ್ಯಾಪಾರ ಮಾಡಲು ಹಿಂದೂ ಸಂಘಟನೆಗಳು ಕರೆ ನೀಡಿವೆ. ಹಿಂದೂ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ದ.ಕ.ಜಿಲ್ಲಾಡಳಿತ ನಗರದ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಸಂತೆ ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೂ ಅವಕಾಶ ನೀಡಿದೆ.ಇದಕ್ಕೆ ತಕ್ಕ ಉತ್ತರ ನೀಡಲು ಹಿಂದೂ ಸಂಘಟನೆಗಳು ಈ ರೀತಿ ನಿರ್ಧಾರ ಕೈಗೊಂಡಿವೆ ಎನ್ನಲಾಗಿದೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಎಚ್ ಪಿ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ದೇವಸ್ಥಾನದ ಆಸುಪಾಸಿನಲ್ಲಿ ಹಿಂದೂಗಳಿಗೆ ಅವಕಾಶ ನೀಡಬೇಕು.ಹಿಂದೂ ದೇವರನ್ನು ನಂಬದ ಮೂರ್ತಿ ಪೂಜೆ ವಿರೋಧಿಗಳಿಗೆ ನಮ್ಮ ಉತ್ಸವದಲ್ಲಿ ಯಾಕೆ ಅವಕಾಶ ಕೊಡಬೇಕು, ಜಿಲ್ಲಾಡಳಿತದ ಈ ನೀತಿ ಹಿಂದೂ ವಿರೋಧಿಯಾಗಿದೆ ಎಂದಿದ್ದಾರೆ.



Leave a Comment: