ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ಸುದ್ದಿಗಳು News

Posted by vidyamaana on 2024-07-24 23:15:54 |

Share: | | | | |


ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯಕ್ಕೆ ಯುವತಿಯೋರ್ವಳನ್ನು ಯುವಕನೋರ್ವ ಬೈಕ್ ನಲ್ಲಿ ಕಾಡಿಗೆ ಕರೆದುಕೊಂಡು ಬಂದಿದ್ದು, ಈ ಬಗ್ಗೆ ತಿಳಿಯುತ್ತಲೇ ಹಲವಾರು ಮಂದಿ ಕಾಡಿನಲ್ಲಿ ಹುಡುಕಾಡಿದ್ದಾರೆನ್ನಲಾಗಿದೆ.

ಜನ ಸೇರುತ್ತಿದ್ದಂತೆ ಅರೆ ನಗ್ನ ಸ್ಥಿತಿಯಲ್ಲಿ ಬೈಕ್, ಬಟ್ಟೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಯುವಕ-ಯುವತಿ ಪರಾರಿಯಾಗಿದ್ದಾರೆನ್ನಲಾಗಿದೆ.

ಸಾರ್ವಜನಿಕರ ಮಾಹಿತಿ ಹಿನ್ನಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾಡಿನಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ಮಾತ್ರೆಗಳು, ಕಾಂಡೋಮ್, ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಪುತ್ತೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬೈಟ್ ಭಾರತ್ ಪರಿಚಯಿಸುತ್ತಿರುವ ಅತೀ ದೊಡ್ಡ ಪ್ರಾಜೆಕ್ಟ್

Posted by Vidyamaana on 2023-10-19 12:53:03 |

Share: | | | | |


ಪುತ್ತೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬೈಟ್ ಭಾರತ್ ಪರಿಚಯಿಸುತ್ತಿರುವ ಅತೀ ದೊಡ್ಡ ಪ್ರಾಜೆಕ್ಟ್

ಜಾಹಿರಾತು :


   ಬ್ರೈಟ್ ಭಾರತ್ ಆರಂಭಿಸಿದ, ನಾಲ್ಕು ಮನೆಯ ವಿಶಿಷ್ಟ ಸ್ಕೀಮ್ ಯೋಜನೆ ಇದಾಗಿದ್ದು,

ಇದರ ಪೂರ್ಣ ವಿವರ ಕೆಳಗಿದೆ.

ಸೇರಿದ ಯಾವ ಗ್ರಾಹಕರಿಗೂ ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಕೂಡ ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳಿರುವ ವಿಭಿನ್ನ ಯೋಜನೆ ಇದಾಗಿದ್ದು. ಬಡವರ ಸ್ವಂತ ಮನೆಯ ಕನಸನ್ನು ಬ್ರೈಟ್ ಭಾರತ್‌ನ ಈ ಯೋಜನೆ ನನಸು ಮಾಡಲಿದೆ.


ಬ್ರೈಟ್ ಭಾರತ್ ಸದಸ್ಯರಾಗುವುದು ಹೇಗೆ!?


ಬ್ರೈಟ್ ಭಾರತ್ ಸದಸ್ಯರಾಗಲು ನಿಮ್ಮ ಹೆಸರು, ಸ್ಥಳ, ಮೊಬೈಲ್ ನಂಬರ್, ಇಷ್ಟು ಮಾಹಿತಿಯನ್ನು 8867340630/9606590729 /8867340630

ಈ ನಂಬರ್‌ಗೆ ವಾಟ್ಸಪ್ ಮಾಡಬಹುದು ಅಥವಾ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು.


ಬ್ರೈಟ್ ಭಾರತ್ ಯೋಜನೆಯ ಬಗ್ಗೆ ಮಾಹಿತಿ

ವಿಶೇಷವಾಗಿ ಇದೊಂದು ಉಳಿತಾಯ ಯೋಜನೆಯಾಗಿದ್ದು, ಪ್ರತಿ ತಿಂಗಳ ತಮ್ಮ ಉಳಿತಾಯದ ಸಾವಿರ ರೂಪಾಯಿಯನ್ನು ಇಪ್ಪತ್ತು ತಿಂಗಳು ಪಾವತಿಸಿ, ನಾಲ್ಕು ಮನೆ ಸೇರಿದಂತೆ, ಆರು ಆಕ್ವೀವಾ, ಎರಡು ಬೈಕ್, ಚಿನ್ನ, ಡೈಮಂಡ್, ನಗದು ಸೇರಿದಂತೆ, ಪ್ರತೀ ತಿಂಗಳು ಕೂಡ ಲಕ್ಷಾಂತರ ಬೆಲೆಯ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಬ್ರೈಟ್ ಭಾರತ್ ನೀಡಿದೆ. ಕೊನೆಯವರೆಗೆ ಯಾವುದೇ ಬಹುಮಾನ ಗೆಲ್ಲದ ಸದಸ್ಯರಿಗೆ ಅವರು ಕಟ್ಟಿದ ಹಣಕ್ಕೆ ಹೊಂದುವಂತ ಬೆಲೆಯ ಪ್ರೋತ್ಸಾಹಕ ಬಹುಮಾನಗಳು ಸೇರಿದ ಪ್ರತಿಯೊಬ್ಬ ಸದಸ್ಯರಿಗೂ ಲಭಿಸಲಿದೆ‌. ಜೊತೆಗೆ ಎಲ್ಲಾ ಸರ್ಕಾರಿ ತೆರಿಗೆಗಳನ್ನು ಪಾವತಿಸಿ, ಪಾರದರ್ಶಕವಾಗಿ ನಡೆಯುವ ಬಡವರ ಕನಸಿನ ಯೋಜನೆ ಇದಾಗಿದ್ದು. ಪ್ರತಿಯೊಬ್ಬರಿಗೂ ಇದರ ಸದಸ್ಯತ್ವವನ್ನು ಪಡೆಯಬಹುದು.

ಯಾರಿಗೆಲ್ಲ ಸೇರಬಹುದು

ಬ್ರೈಟ್ ಭಾರತ್ ನಲ್ಲಿ ಪ್ರತಿಯೊಬ್ಬರಿಗೂ ಸದಸ್ಯರಾಗಲು ಮುಕ್ತ ಅವಕಾಶವಿದೆ, ಈಗಾಗಲೇ ಕರ್ನಾಟಕ ಕೇರಳದ ಜೊತೆಗೆ ಅನಿವಾಸಿ ಭಾರತೀಯರು ಕೂಡ ಸದಸ್ಯರಾಗಿದ್ದಾರೆ. ಈಗಾಗಲೇ ಸಾವಿರಾರು ಮಂದಿ ತಮ್ಮ ಹೆಸರು ನೋಂದಾಯಿಸಿ ರಿಜಿಸ್ಟರ್ ಆಗಿದ್ದು, ಈ ಕನಸಿನ ಯೋಜನೆಯಲ್ಲಿ ನಿಮಗೂ ಸದಸ್ಯರಾಗಬಹುದು.


ಸ್ವಂತ ಮನೆ ಅನ್ನುವುದು ಹಲವರಿಗೆ ಕನಸು ಮಾತ್ರವಾಗಿ ಉಳಿದಿರುವ ಈ ದಿನದಲ್ಲಿ, ಅವರ ಕನಸಿನ ಮನೆಯನ್ನು ಈ ಯೋಜನೆಯ ಮೂಲಕ ನೀಡಬೇಕು, ಅದರ ಜೊತೆಗೆ ಯಾರಿಗೂ ನಷ್ಟವಿಲ್ಲದ ರೀತಿಯಲ್ಲಿ, ಸೇರಿದ ಪ್ರತಿಯೊಬ್ಬ ಸದಸ್ಯರಿಗೂ, ಅವರು ಕಟ್ಟಿದ ಹಣಕ್ಕೆ ಸರಿಸಮಾನವಾದ ಪ್ರೋತ್ಸಾಹಕ ಬಹುಮಾನಗಳನ್ನು ನೀಡಿ, ಲಾಭದ ಉದ್ದೇಶಕ್ಕಿಂತಲೂ, ಅವರ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಅನ್ನುವುದು ಬ್ರೈಟ್ ಭಾರತ್‌ನ ಪಾಲುದಾರರ ಮಾತು.


ಬ್ರೈಟ್ ಭಾರತ್‌ನ ಮೊದಲ ಡ್ರಾ ನವೆಂಬರ್ ತಿಂಗಳಲ್ಲಿ ನಡೆಯಲಿದ್ದು, ಮೊದಲ ತಿಂಗಳಲ್ಲೇ ಮೂರು ಅದೃಷ್ಟಶಾಲಿಗಳಿಗೆ ಆಕ್ಟೀವಾ ಗೆಲ್ಲುವ ಅವಕಾಶವಿದೆ. ಜೊತೆಗೆ ಪ್ರತಿ ತಿಂಗಳು ಕೂಡ ಬೈಕು, ಆಕ್ಟೀವಾ, ಚಿನ್ನ, ಡೈಮಂಡ್, ನಗದು ಬಹುಮಾನವಿದ್ದು, ಹದಿನಾರನೇ ತಿಂಗಳಿನಲ್ಲಿ ಕಾರು ಗೆಲ್ಲುವ ಅವಕಾಶವಿದೆ. ಜೊತೆಗೆ 17-18-19-20 ಈ ನಾಲ್ಕು ತಿಂಗಳಿನಲ್ಲಿ ನಾಲ್ಕು ಸುಸಜ್ಜಿತ ಮನೆ ಗೆಲ್ಲುವ ಅವಕಾಶವನ್ನು ಬ್ರೈಟ್ ಭಾರತ್ ನೀಡಿದ್ದು, ಅದೃಷ್ಟವಂತರು ಎರಡು ಬೆಡ್‌ರೂಮಿನ ಹೊಸ ಮನೆಯನ್ನು ಹೊಸ ಮನೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.


ಬ್ರೈಟ್ ಭಾರತ್ ನ ಪ್ರಧಾನ ಕಚೇರಿಯೂ ಪುತ್ತೂರಿನಲ್ಲಿ ಸಧ್ಯದಲ್ಲೇ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಶುಭಾರಂಭಗೊಳ್ಳಲಿದ್ದು, ಪ್ರತಿಯೊಬ್ಬರಿಗೂ ಬ್ರೈಟ್ ಭಾರತ್ ಸದಸ್ಯರಾಗಲು ಮುಕ್ತ ಅವಕಾಶವಿದೆ.

ಸದಸ್ಯರಾಗಲು ಅಥವಾ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ್ನ ನಂಬರನ್ನು ಸಂಪರ್ಕಿಸಬಹುದು.

8867340630 / 9606590729/8867340630

ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ

Posted by Vidyamaana on 2024-06-24 14:11:13 |

Share: | | | | |


ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ

ಪ್ರಮಾಣ ವಚನ ಸ್ವೀಕರಿಸಿ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದ ಸಿಟಿ ರವಿ, ಕಿವಿ ಹಿಂಡಿ ಅಭಿನಂದಿಸಿದ ಸಿಎಂ!

ಬೆಂಗಳೂರು : ಕರ್ನಾಟಕದ ವಿಧಾನ ಪರಿಷತ್‌ಗೆ ನೂತನವಾಗಿ ಆಯ್ಕೆಯಾಗಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ವಿಧಾನಸೌಧಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಿತು. ನೂತನ ಪರಿಷತ್ ಸದಸ್ಯರಿಗೆ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಪ್ರಮಾಣ ವಚನ (MLC Oath Ceremony) ಬೋಧಿಸಿದರು

ವಿಧಾನಸಭೆ, ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನೂತನ 17 ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಸಿದ್ದರಾಮಯ್ಯ, ಕಾನೂನು ಹಾಗೂ ಸಂಸದೀಯ ಸಚಿವ ಎಚ್‌ಕೆ ಪಾಟೀಲ್ ಸೇರಿ ಹಲವರು ಭಾಗಿಯಾದರು. ಇದರೊಂದಿಗೆ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ 11 ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವೂ ನಡೆಯಿತು.

ಫೇಸ್‌ಬುಕ್‌ ಸುಂದರಿ ಹಿಂದೆ ಬಿದ್ದ 60 ವರ್ಷದ ಅರ್ಚಕ! ಚಾಟಿಂಗ್ ಮಾಡಿದ ಯುವತಿಯಿಂದ ಲಕ್ಷ ಲಕ್ಷ ಚೀಟಿಂಗ್

Posted by Vidyamaana on 2024-08-22 12:09:46 |

Share: | | | | |


ಫೇಸ್‌ಬುಕ್‌ ಸುಂದರಿ ಹಿಂದೆ ಬಿದ್ದ 60 ವರ್ಷದ ಅರ್ಚಕ! ಚಾಟಿಂಗ್ ಮಾಡಿದ ಯುವತಿಯಿಂದ ಲಕ್ಷ ಲಕ್ಷ ಚೀಟಿಂಗ್

ಮಂಡ್ಯ : 60 ವರ್ಷದ ಅರ್ಚಕನ ಜೊತೆ ಚಾಟಿಂಗ್ ಮಾಡಿದ ಯುವತಿ ಚೀಟಿಂಗ್ ಮಾಡಿರುವ ಆರೋಪ ಕೇಳಿ ಬಂದಿದೆ. ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದ ಯುವತಿ ಮಂಡ್ಯದ ಪಾಂಡವಪುರ ಮೂಲದ ಅರ್ಚಕನಿಗೆ ಲಕ್ಷ ಲಕ್ಷ ಹಣ ಪಂಗನಾಮ ಹಾಕಿದ್ದಾಳೆ. ಅರ್ಚಕ ಈಗ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.

ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ‌ ವಿಜಯ್ ಕುಮಾರ್ ಹಣ ಕಳೆದುಕೊಂಡಿದ್ದು, ಇದೀಗ ಪೂಜಾರಪ್ಪ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮಂಡ್ಯ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ‌ ವಿಜಯ್ ಕುಮಾರ್ ಕುಟುಂಬದಿಂದ ದೂರವಾಗಿ ಒಬ್ಬರೇ ವಾಸಿಸುತ್ತಿದ್ದು, ಇವರಿಗೆ ಕೆಲ ದಿನಗಳ ಹಿಂದೆ ಫೇಸ್​ಬುಕ್​ನಲ್ಲಿ ಸಿರಿ ಶ್ರೇಷ ಸರಿತಾ ಎಂಬ ಸುಂದರಿ ಪರಿಚಯವಾಗಿದ್ದಾಳೆ.

ಹೀಗಾಗಿ ಫೇಸ್​ಬುಕ್ ಸುಂದರಿ ಸಿರಿ ಜೊತೆ ಪ್ರತಿ ದಿನ ಚಾಟಿಂಗ್ ಮಾಡುತ್ತಿದ್ದರು. ಅರ್ಚಕ ವಿಜಯ್ ಕುಮಾರ್ ಹಿನ್ನಲೆ ತಿಳಿದುಕೊಂಡ ಯುವತಿ ವಸತಿ, ಆರೋಗ್ಯ ಅಂತ ಹೇಳಿ ಹಂತ ಹಂತವಾಗಿ ಹಣ ಪೀಕಿದ್ದಾಳೆ. ಹೀಗೆ ಬರೋಬ್ಬರಿ 1 ಲಕ್ಷದ 40 ಸಾವಿರದಷ್ಟು ಹಣವನ್ನು ಲಪಟಾಯಿಸಿದ್ದಾಳೆ.

ಸೆ.2 ರಿಂದ 24: ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ

Posted by Vidyamaana on 2023-09-01 16:45:23 |

Share: | | | | |


ಸೆ.2 ರಿಂದ 24: ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಲೋಕ ಕಲ್ಯಾಣಾರ್ಥ, ಸಮಗ್ರತೆ, ಹಿಂದೂ ಬಾಂಧವರ ಏಕತೆಗಾಗಿ, ಮನಸ್ಸಿನ ಏಕಾಗ್ರತೆ ಸಿದ್ದಿಗಾಗಿ ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ ಸೆ.2 ರಿಂದ 24ರ ತನಕ ಭಕ್ತರು ಮನೆ ಮನೆಯಲ್ಲಿ ” ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ ಎಂಬ ಸರಳ ಸೂತ್ರದಲ್ಲಿ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ತಿಳಿಸಿದ್ದಾರೆ.ಅವರು ಶ್ರೀ ದೇವಳದ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ದೇವಳದಲ್ಲಿ ಬೇರೆ ಬೇರೆ ರೀತಿಯಲ್ಲಿ ಶತರುದ್ರ, 1008 ಕಾಯಿ ಗಣಪತಿ ಹೋಮ ಸಹಿತ ವಿವಿಧ ಕಾರ್ಯಕ್ರಮಗಳು ದೇವರ ಸಾನಿಧ್ಯಕ್ಕಾಗಿ ಆಗಾಗ ನಡೆಯುತ್ತಿದೆ. ಅದೇ ರೀತಿಯಲ್ಲಿ ದೇವರ ಅನುಗ್ರಹ, ಹಿಂದು ಬಾಂದವರ ಏಕತೆಗಾಗಿ, ಲೋಕಕಲ್ಯಾಣಾರ್ಥವಾಗಿ ಏಕಾದಶಕೋಟಿ ಮಹಾಲಿಂಗೇಶ್ವರ ಜಪಯಜ್ಞ ಮಾಡುವ ಸಂಕಲ್ಪ ಮಾಡಿದಂತೆ ಮಹಾಲಿಂಗೇಶ್ವರ ದೇವರ ಪ್ರತಿಯೊಬ್ಬ ಭಕ್ತರು ಶ್ರೀದೇವರ ನಾಮವನ್ನು ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ ಎಂಬ ಸರಳ ಸೂತ್ರದಲ್ಲಿ 11,880 ಬಾರಿ ಈ ಜಪವನ್ನು ಮಾಡಬೇಕು. ಸೆ.2 ರಿಂದ ದಿನಕ್ಕೆ 1080 ಜಪದಂತೆ 11 ದಿನಗಳ ಜಪ ಮಾಡಬೇಕು. ಇದು ನಿರಂತರ ಮಾಡಬೇಕಾಗಿಲ್ಲ. ಅಸೌಕ್ಯದ ಸಂದರ್ಭದಲ್ಲಿ ಸಮಸ್ಯೆ ಆಗದಂತೆ 23 ದಿನ ಕಾಲವಕಾಶ ನೀಡಲಾಗಿದೆ. ಜಪವನ್ನು ಅವರವರ ಮನೆಯಲ್ಲೇ ಮಾಡಲಾಗುತ್ತದೆ. ಆದರೆ ಸಂಕಲ್ಪ ಮಾತ್ರ ಆಯಾ ಭಾಗದ ಧಾರ್ಮಿಕ ಕೇಂದ್ರ, ಧಾರ್ಮಿಕ ಶಿಕ್ಷಣ ಕೇಂದ್ರದಲ್ಲಿ ಮಾಡಬೇಕು ಎಂದು ತಿಳಿಸಿದರು

ಏಕಾಗ್ರತೆ ಜಾಗೃತವಾಗಬೇಕಾದರೆ ನಿರಂತರ ಜಪ

ಮಾಡಬೇಕು:

ಬ್ರಹ್ಮಶ್ರೀ ವೇ ಮೂ ರವೀಶ್ ತಂತ್ರಿ ಕುಂಟಾರು ಅವರು ಮಾತನಾಡಿ ಮನುಷ್ಯನಲ್ಲಿರುವ ಏಕಾಗ್ರತೆಗಾಗಿ ಕಲಿಯುಗದಲ್ಲಿ ಸಂಘಟಿತರಾಗಿ ದೇವರನ್ನು ಭಜಿಸಬೇಕು. ಆಗಮ ಶಾಸ್ತ್ರದಲ್ಲಿ ದೈವಿಕವಾಗಿ ಕಾರ್ಯಗಳು ನಡೆಯುವ ಸಂದರ್ಭ ದೇವತಾ ಚೈತನ್ಯಕ್ಕೆ ಅರ್ಚಕರು ಸಮರ್ಪಣೆ ಮಾಡಬೇಕು. ಅಷ್ಟು ಮಾತ್ರವಲ್ಲದೆ ಜನತೆಯು ಬಂದು ಅಲ್ಲಿ ಸಮರ್ಪಣಾ ಭಾವದಿಂದ ಬರುವ ಪ್ರಕ್ರಿಯೆ ನಡೆಯಬೇಕು. ಆ ರೀತಿ ಭಕ್ತರು ಸೇರಿದಾಗ ಚೈತನ್ಯ ವೃದ್ಧಿಯಾಗುತ್ತದೆ. ಇವತ್ತು ದೇವಾಲಯದಲ್ಲಿ ನಾವು ಮಾಡಿಕೊಂಡು ಬರುವ ಭಜನೆ, ನಾಮಸಂಕೀರ್ತನೆ, ಪಾರಾಯಣ ಕೂಡಾ ಚೈತನ್ಯ ವೃದ್ಧಿಗೆ ಪೂರಕವಾಗಿ ಇರುವಂತಹದ್ದು, ಒಂದೊಂದು ದೇವರಿಗೂ ಒಂದೊಂದು ಸಂಖ್ಯಾ ಪ್ರಾದಾನ್ಯತೆ ಇದೆ. ಶಿವ ದೇವರಿಗೆ ಪ್ರಾದಾನ್ಯತೆ ಇರುವುದು ಏಕಾದಶ ಸಂಖ್ಯೆ. ಆ ಪ್ರಾದಾನ್ಯತೆಯೊಂದಿಗೆ ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ ಮಾಡುವ ತೀರ್ಮಾನ ಮಾಡಿರುವುದು. ಈ ಜಪ ಮಾಡವುದಿರಂದ ಆ ಪರಿಸರದಲ್ಲಿರುವ ಎಲ್ಲಾ ಋಣಾತ್ಮಕ ಚೈತನ್ಯಗಳು ದೂರವಾಗುತ್ತದೆ. ವ್ಯಕ್ತಿಗತವಾಗಿ ನಾವು ಜಪಮಾಡಿಕೊಂಡು ಬರುವಾಗ ನಮ್ಮ ಆತ್ಮದಲ್ಲಿರುವ ಪಾಪತ್ವ ಕೂಡಾ ತೊಲಗುತ್ತದೆ. ಇವತ್ತು ನಮ್ಮಲ್ಲಿರುವ ಆಧ್ಯಾತ್ಮಿಕವಾಗಿರುವ ಚೈತನ್ಯ ವೃದ್ಧಿ ಕಡಿಮೆ ಆಗಿರುವುದರಿಂದ ಚಾಂಚಾಲ್ಯತೆ ಹುಟ್ಟಿದೆ. ಇದರಿಂದ ವಿಶ್ವಾಸ, ಮನಸ್ಸನ್ನು ದೃಢವಾಗಿ ಇಟ್ಟುಕೊಳ್ಳಲಾಗುವುದಿಲ್ಲ. ನಮ್ಮಲ್ಲಿರುವಏಕಾಗ್ರತೆ ಜಾಗೃತವಾಗಬೇಕು. ಏಕಾಗ್ರತೆ ಜಾಗೃತವಾಗಬೇಕಾದರೆ ನಾವು ನಿರಂತರವಾಗಿ ಜಪ ಮಾಡಿಕೊಂಡು ಬರಬೇಕು ಎಂದು ಅವರು ಹೇಳಿದ ಅವರು ಈ ಎಲ್ಲಾ ಉದ್ದೇಶವಿರಿಸಿಕೊಂಡು ನಮ್ಮ ಮುಂದೆ ಪವಿತ್ರವಾಗಿರುವ ಕ್ಷೇತ್ರದದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಬೋದಿಸಿರುವ ಬ್ರಹ್ಮಕಲಶ ಎಲ್ಲವು ಸಾಂಗವಾಗಿ ನೆರವೇರಬೇಕಾದರೆ ಈ ಎಲ್ಲಾ ಭಕ್ತಕೋಟಿ ಜನರು ಪರಿಪೂರ್ಣ ಸಮರ್ಪಣಾ ಭಾವದಿಂದ ದೇವಸನ್ನಿಧಿ ಸೇರಿಕೊಂಡಾಗ ಪೂರ್ಣ ಆಗುತ್ತದೆ. ಆ ಸಂಕಲ್ಪದಲ್ಲಿ ಈ ಕಾರ್ಯ ಮಾಡುತ್ತಿದ್ದೇವೆ. ಇದರಲ್ಲಿ ಬೇಕಾಗಿರುವುದು ಮನುಷ್ಯನ ಭಕ್ತಿ ಮತ್ತು ಶ್ರದ್ಧೆ ಮಾತ್ರ. ಭಕ್ತಿ ಸಮರ್ಪಣೆಯಿಂದ ಮಾಡುವ ಯಾವುದೇ ವಿಚಾರಗಳಿಗೂ ಕೂಡಾ ಯಾವುದೇ ಕಟ್ಟು ಪಾಡು ಧರ್ಮಶಾಸ್ತ್ರ ಇರಿಸಿಲ್ಲ. ಎಲ್ಲಿಯೂ ಬೇಕಾದರೂ ದೇವರ ನಾಮ ಸಂಕೀರ್ತನೆ ಮಾಡಬಹುದು. 1080 ನಾಮಜಪ ಮಡುವ ಸಂದರ್ಭದಲ್ಲಿ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಶುಚೀರ್ಭೂತರಾಗಿ ಜಪ ಮಾಡುವ ಮೂಲಕ ಅವರ ಆನ್ನೋದ್ದಾರ ಆಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ಬಿ.ಕೆ.ವೀಣಾ ಉಪಸ್ಥಿತರಿದ್ದರು.ಸಂಕಷ್ಟಹರ ಚತುರ್ಥಿಯಿಂದ ಪ್ರಾರಂಭ: ಜಪ ಮಾಡುವವರು ತಮ್ಮ ಮನೆಗಳಲ್ಲಿ ಪ್ರಾತಃಕಾಲ ಅಥವಾ ಸಾಯಂಕಾಲ ಅಥವಾ ಎರಡು ಹೊತ್ತು ತಮ್ಮ ಅನುಕೂಲದಂತೆ ಶುಚೀರ್ಭೂತರಾಗಿ ದೇವರ ಮುಂದೆ ಮಣೆ, ಚಾಪೆ ಅಥವಾ ಮೇಲೆ ಕುಳಿತು, ದೀಪ ಹಚ್ಚಿ ಹಣೆಗೆ ಗಂಧ / ವಿಭೂತಿ/ಕುಂಕುಮ ಹಚ್ಚಿ ದಿನಕ್ಕೆ 1080 ಬಾರಿ ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ ಎಂಬ ಜಪ ಮಾಡುವುದು. 108 ನಾಣ್ಯಗಳ ಮೂಲಕ ಪ್ರತಿದಿನ 1080 ಜಪ, ಹಾಗು 11 ದಿನಗಳಲ್ಲಿ 11,880 ಜಪ ಮಾಡುವುದು. ಮನೆಗೆ ಒಂದರ ಜಪ ಮಾಡಿದ 108 ನಾಣ್ಯಗಳನ್ನು ಸಮರ್ಪಿಸಿ ರೂ. 108 ರ ಸೇವಾಚೀಟಿ ಮಾಡಿಸಿಕೊಳ್ಳುವುದು. 108 ಜಪಕ್ಕೆ ಒಂದು ಸಲದಂತೆ ಒಟ್ಟು 11,880 ಜಪಕ್ಕೆ 110 ಸಲ ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ ಎಂದು ಬರೆಯುವುದು. ಸಂಕಷ್ಟಹರ ಚತುರ್ಥಿಯಿಂದ ಪ್ರಾರಂಭ ಮಾಡಿ 11 ದಿನ ಪರ್ಯಂತ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಾದಿಗಳ ಮನೆಮನೆಗಳಲ್ಲಿ ಮಾಡುವ ಜಪದಿಂದ ಲೋಕ ಕಲ್ಯಾಣವಾಗಲಿ ಎಂದು ಸರ್ವರೂ ಪ್ರಾರ್ಥಿಸುವುದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾಹಿತಿ ನೀಡಿದರು. ದೇವಸ್ಥಾನದಲ್ಲಿ ಮತ್ತು ಕೆಲವು ಕಡೆಗಳಲ್ಲಿ ಸೆ.2ರಂದು ಸಂಕಲ್ಪ ನಡೆಯುತ್ತದೆ. ಉಳಿದ ಕಡೆ ಬೇರೆ ದಿನ ಸಂಕಲ್ಪ ಮಾಡಬಹುದು. ದೇವಸ್ಥಾನ ಸೇರಿ 108 ಕಡೆಗಳಲ್ಲಿ ಈ ಸಂಕಲ್ಪ ಕಾರ್ಯಕ್ರಮ ನಡೆಯುತ್ತದೆ. ದೇವಸ್ಥಾನ. ಧಾರ್ಮಿಕ ಕೇಂದ್ರ, ಭಜನಾ ಮಂದಿರ, ಧಾರ್ಮಿಕ ಶಿಕ್ಷಣ ಕೇಂದ್ರ, ಕೆಲವೊಂದು ಶಾಲೆಗಳಲ್ಲೂ ಜಪ ಯಜ್ಞ ನಡೆಯುತದೆ ಎಂದರು.

ಪತ್ರಕರ್ತೆಯ ಮೃತದೇಹ ಕೆರೆಯಲ್ಲಿ ಪತ್ತೆ

Posted by Vidyamaana on 2024-08-29 06:24:03 |

Share: | | | | |


ಪತ್ರಕರ್ತೆಯ ಮೃತದೇಹ ಕೆರೆಯಲ್ಲಿ ಪತ್ತೆ

ಬಾಂಗ್ಲಾದೇಶದ ಪತ್ರಕರ್ತೆ ಸಾರಾ ರಹನುಮಾ ಅವರ ಮೃತದೇಹ ಬುಧವಾರ ಢಾಕಾದ ಹತಿರ್ಜೀಲ್ ಕೆರೆಯಲ್ಲಿ ಪತ್ತೆಯಾಗಿದೆ.33 ವರ್ಷದ ಸಾರಾ ಬಂಗಾಳಿ ಭಾಷೆಯ ಸುದ್ದಿವಾಹಿನಿಯ ನ್ಯೂಸ್‍ರೂಂ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಉಪ್ಪಿನಂಗಡಿ ಬಿ ಆರ್ ಅಂಬೇಡ್ಕರ್ ವಸತಿ‌ ಶಾಲೆಯಲ್ಲಿ ವಾರ್ಷಿಕೋತ್ಸವ

Posted by Vidyamaana on 2024-01-01 13:35:14 |

Share: | | | | |


ಉಪ್ಪಿನಂಗಡಿ ಬಿ ಆರ್ ಅಂಬೇಡ್ಕರ್ ವಸತಿ‌ ಶಾಲೆಯಲ್ಲಿ ವಾರ್ಷಿಕೋತ್ಸವ

ಪುತ್ತೂರು: ನಗರದ ಹೊರವಲಯದ‌ಪಡ್ಡಾಯೂರಿನಲ್ಲಿರುವ ಅಂಬೇಡ್ಕರ್ ವಸತಿ‌ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವಲ್ಲಿ ಪ್ರಯತ್ನ ಮಾಡುತ್ತೇನೆ ಮತ್ತು ತಾಲೂಕಿನಲ್ಲಿ ಬಾಡಿಗೆ ಕಟ್ಟಡದಲ್ಲಿರುವ ವಸತಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಪಡ್ಡಾಯೀರಿನಲ್ಲಿರುವ ಉಪ್ಪಿನಂಗಡಿ ಅಂಬೇಡ್ಕರ್ ವಸತಿ‌ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಸತಿ‌ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಇಲ್ಲಿನ ಶಿಕ್ಷಣ‌ಮತ್ತು ಇತರೆ  ಸೌಲಭ್ಯಗಳು ಚೆನ್ನಾಗಿರುವ ಬಗ್ಗೆ ಪೋಷಕರು ತಿಳಿಸಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರತಿಭೆಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕರು ಹೇಳಿದರು.ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದ ಶಿಕ್ಷಣವನ್ನು‌ನೀಡಬೇಕಿದೆ ಎಂದು ಹೇಳಿದರು.


ವೇದಿಕೆಯಲ್ಲಿಶಿಕ್ಷಕ‌ರಕ್ಷಕ‌ಸಮಿತಿ ಅಧ್ಯಕ್ಷ ರವೀಂದ್ರ ರೈ,  ಸಮಾಜ ಕಲ್ಯಾಣ ಇಲಾಖೆ ಮೆನಜರ್ ಕೃಷ್ಣ ಕುಮಾರ್,  ಶಾಲಾ ಪ್ರಾಂಶುಪಾಲರಾದ ಸತೀಶ್ ಟಿ , ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದಮುರಳೀದರ್ ಜಿ,ಪುಂಜಾಲಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆಯ ಪ್ರಾಂಶುಪಾಲರಾದ ಸಂತೋಷ್ ಕುಮಾರ್,ಎಸ್ ಜಿ ಎಂ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀನಿವಾಸ,ಮೊರಾರ್ಜಿ ದೇಸಾಯಿ ವಸತಿ ಶಾಲೆ ಪುತ್ತೂರು ಪ್ರಾಂಶುಪಾಲರಾದ ಅರುಣ್ ಕುಮಾರ್, ಸಿಆರ್ ಪಿ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಣಕಿ ವಾಣಿ ಸ್ವಾಗತಿಸಿದರು.



Leave a Comment: