ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಕೇರಳದಲ್ಲಿ ಚಿಕನ್ ಶವರ್ಮಾ ತಿಂದ ರಾಹುಲ್ ಮೃತ್ಯು : ಹೊಟೇಲ್‌ಗೆ ಬೀಗ

Posted by Vidyamaana on 2023-10-26 22:22:40 |

Share: | | | | |


ಕೇರಳದಲ್ಲಿ ಚಿಕನ್ ಶವರ್ಮಾ ತಿಂದ ರಾಹುಲ್ ಮೃತ್ಯು : ಹೊಟೇಲ್‌ಗೆ ಬೀಗ

ಕೊಚ್ಚಿ: ನಗರದ ಹೊಟೇಲೊಂದರಿಂದ ಆನ್​ಲೈನ್​ ಮೂಲಕ ಚಿಕನ್ ಶವರ್ಮಾ ತರಿಸಿ ತಿಂದ ಯುವಕ ತೀವ್ರ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.


ಕೊಟ್ಟಾಯಂ ಮೂಲದ ರಾಹುಲ್​ ನಾಯರ್ (24) ಮೃತ ಯುವಕ.  ಕೊಟ್ಟಾಯಂ ಮೂಲದ ರಾಹುಲ್​ ಆನ್​ಲೈನ್ ಮೂಲಕ ‘ಲೇ ಹಯಾತ್’ ಎಂಬ ​ ರೆಸ್ಟೋರೆಂಟ್​ನಿಂದ ಚಿಕನ್ ಶವರ್ಮಾವನ್ನು ತರಿಸಿಕೊಂಡಿದ್ದಾನೆ. ಅದನ್ನು ತಿಂದ ಬಳಿಕ ಇದ್ದಕ್ಕಿದ್ದ ಹಾಗೆ ತೀವ್ರ ಅನಾರೋಗ್ಯಕ್ಕೀಡಾಗಿ ಕಾಕ್ಕನಾಡುನಲ್ಲಿನ ಸನ್​ರೈಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕಿತ್ಸೆ ಬಳಿಕ ಕೊಂಚ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದು, ಬಳಿಕ  ಹೊಟ್ಟೆಯಲ್ಲಿ ನೋವು ಕಾಣಿಸಿದ್ದರಿಂದ ಅಕ್ಟೋಬರ್ 22 ರಂದು ಆಸ್ಪತ್ರೆಗೆ ಮತ್ತೆ ದಾಖಲು ಆಗಿದ್ದನು ಎನ್ನಲಾಗಿದೆ.


ಎರಡನೇ ಸಲ ಆಸ್ಪತ್ರೆ ಸೇರಿದ ಯುವಕನ ಸ್ಥಿತಿ ಗಂಭೀರವಾಗುತ್ತಾ ಹೋಗಿದ್ದು, ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ರಿಲೀಸ್ ಮಾಡಿರುವ ಹೆಲ್ತ್ ಬುಲೆಟಿನ್ ಅಲ್ಲಿ ಯುವಕನ ಕಿಡ್ನಿ ಹಾಗೂ ಲೀವರ್ ಹಾನಿಯಾಗಿದ್ದು ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.  ಕಿಡ್ನಿ ಮತ್ತು ಲಿವರ್ ಹಾಳಾಗಲು ಕಾರಣ ದೇಹದಲ್ಲಿ ವಿಷ ಸೇರಿರುವುದು ಪಕ್ಕಾ. ಇದು ಆತ ತಿಂದ ಚಿಕನ್ ಶವರ್ಮಾ ಪದಾರ್ಥದಿಂದ ಆಗಿದಿಯೋ ಅಥವಾ ಬೇರೆ ಆಹಾರದಿಂದ ಆಗಿದಿಯೋ ಅನ್ನೋದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ವೈದ್ಯರು  ಹೇಳಿದ್ದಾರೆ.


ಮೃತ ಯುವಕನ ಸಂಬಂಧಿಕರು ರೆಸ್ಟೋರೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಸರ್ಕಾರದ ಆದೇಶದಂತೆ ಅದನ್ನು ಮುಚ್ಚಲಾಗಿದೆ. ರೆಸ್ಟೋರೆಂಟ್ ಮಾಲಕರ ವಿರುದ್ಧ ತೃಕ್ಕಾಕರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಹಸಿ ಮೊಟ್ಟೆ, ಬೇಯಿಸದ ಎಣ್ಣೆ, ಬೆಳ್ಳುಳ್ಳಿ ಸೇರಿಸಿ ಮಾಡುವ ಮಸಾಲೆಯೊಂದು ಶವರ್ಮಾ ಜೊತೆ ಹೇರಳವಾಗಿ ಬೆರೆಸಲಾಗುತ್ತಿದ್ದು, ಆ ಬಿಳಿಯಾದ ಪದಾರ್ಥ ಸ್ವಲ್ಚ ಹಳೆಯದಾದರೂ ವಿಷವಾಗಿ ಮಾರ್ಪಾಡಾಗುತ್ತೆ ಎಂದು ಹೇಳಲಾಗುತ್ತಿದೆ. ಇಂತಹ ಪದಾರ್ಥ ತಿಂದು ಸಾವನ್ನಪ್ಪಿದ ಇತರ ಘಟನೆಗಳೂ ಇವೆ. ತಿಂಡಿಪ್ರಿಯರು ಎಚ್ಚರವಾಗಬೇಕಾಗಿದೆ ಎಂದು ನಾಗರಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಬನ್ನೂರು : ಧರೆ ಕುಸಿದು ಮಜೀದ್ ರವರ ಮನೆಗೆ ಹಾನಿ ಮಣ್ಣಿನಡಿಯಲ್ಲಿ ಸಿಲುಕಿದ ಮಕ್ಕಳು - ಅಪಾಯದಿಂದ ಪಾರು

Posted by Vidyamaana on 2024-06-27 07:26:59 |

Share: | | | | |


ಬನ್ನೂರು :  ಧರೆ ಕುಸಿದು ಮಜೀದ್ ರವರ ಮನೆಗೆ ಹಾನಿ ಮಣ್ಣಿನಡಿಯಲ್ಲಿ ಸಿಲುಕಿದ ಮಕ್ಕಳು - ಅಪಾಯದಿಂದ ಪಾರು

ಪುತ್ತೂರು: ತಾಲೂಕಿನೆಲ್ಲೆಡೆ ಭಾರಿ ಮಳೆಗೆ ಅನೇಕ ಕಡೆ ಧರೆ ಕುಸಿದ ಘಟನೆ ನಡೆಯುತ್ತಿದ್ದು ಪುತ್ತೂರು ಬನ್ನೂರಿನ ಜೈನರಗುರಿ ಸಮೀಪ ಮಜೀದ್ ಎಂಬರ ಮನೆ ಮೇಲೆ ಧರೆ ಕುಸಿದ ಪರಿಣಾಮ ಮನೆ ಹಾನಿಗೊಂಡ ಮತ್ತು ನಿದ್ದೆಯಲ್ಲಿದ್ದ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ ಘಟನೆ ಜೂ.27 ರ ನಸುಕಿನ ಜಾವ ನಡೆದಿದೆ

ಮಂಗಳೂರು : ಖಾಸಗಿ ಬಸ್ಸಿನ ಧಾವಂತಕ್ಕೆ ಪಾದಚಾರಿ ವ್ಯಕ್ತಿ ಬಲಿ ; ಅಪರಿಚಿತನ ಪತ್ತೆಗೆ ಪೊಲೀಸರ ಮನವಿ

Posted by Vidyamaana on 2023-10-24 06:43:19 |

Share: | | | | |


ಮಂಗಳೂರು : ಖಾಸಗಿ ಬಸ್ಸಿನ ಧಾವಂತಕ್ಕೆ ಪಾದಚಾರಿ ವ್ಯಕ್ತಿ ಬಲಿ ; ಅಪರಿಚಿತನ ಪತ್ತೆಗೆ ಪೊಲೀಸರ ಮನವಿ

ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್ ಬಳಿಯ ರಾವ್ ಅಂಡ್ ರಾವ್ ಸರ್ಕಲ್ ನಲ್ಲಿ ಖಾಸಗಿ ಬಸ್ಸಿನ ಧಾವಂತಕ್ಕೆ ಪಾದಚಾರಿ ಒಬ್ಬರು ಬಸ್ಸಿನಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಸಂಜೆ ಸಂಭವಿಸಿದೆ.


ಮಂಗಳೂರಿನ ಸ್ಟೇಟ್ ಬ್ಯಾಂಕ್ ವೃತ್ತದಿಂದ ಕೊಣಾಜೆ ಬಳಿಯ ಹೂಹಾಕುವ ಕಲ್ಲು ಎಂಬಲ್ಲಿಗೆ ತೆರಳುತ್ತಿದ್ದ ಖಾಸಗಿ ಬಸ್ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ತಿರುವು ಪಡೆಯುತ್ತಿದ್ದಂತೆ ವ್ಯಕ್ತಿಯೊಬ್ಬರು ಅಡ್ಡ ಬಂದಿದ್ದು ನೇರವಾಗಿ ಬಸ್ಸಿನ ಮುಂದಿನ ಚಕ್ರದಡಿಗೆ ಬಿದ್ದು ಸಾವು ಕಂಡಿದ್ದಾರೆ. 


ವ್ಯಕ್ತಿಯ ತಲೆ ಪೂರ್ತಿ ಛಿದ್ರಗೊಂಡಿದ್ದು ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಖ ಛಿದ್ರಗೊಂಡಿದ್ದರಿಂದ ವ್ಯಕ್ತಿಯ ಮುಖ ಪರಿಚಯವೂ ಇಲ್ಲದೆ ಮೃತರ ಪತ್ತೆ ಸಾಧ್ಯವಾಗಿಲ್ಲ. ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದು ಪಾಂಡೇಶ್ವರ ಪೊಲೀಸರು ಸೆಕ್ಷನ್ 304 ಅಡಿ ಕೊಲೆಗೆ ಸಮಾನ ಆಗಬಲ್ಲ ಅಪರಾಧ ಎಸಗಿದ್ದಾಗಿ ಪ್ರಕರಣ ದಾಖಲಿಸಿದ್ದಾರೆ. ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.‌


ವ್ಯಕ್ತಿ 40-42 ವಯಸ್ಸಿನವರು ಎನ್ನಲಾಗುತ್ತಿದ್ದು ಅಪರಿಚಿತನ ಪತ್ತೆಗಾಗಿ ಸಂಶಯ ಇದ್ದವರು ಪಾಂಡೇಶ್ವರ ಠಾಣೆಗೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ. ಶವವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇಡಲಾಗಿದೆ.

ಕೆಟಿಎಂ ಕಪ್ ಸಿಸನ್ 2 - 2024ರ ಸ್ಪರ್ಧೆಗೆ ಮನ್ವಿತ್ ಕುಮಾ‌ರ್, ವಿಜಯ ಕುಮಾರ್ ಆಯ್ಕೆ

Posted by Vidyamaana on 2024-03-23 19:39:14 |

Share: | | | | |


ಕೆಟಿಎಂ ಕಪ್ ಸಿಸನ್ 2 - 2024ರ ಸ್ಪರ್ಧೆಗೆ  ಮನ್ವಿತ್ ಕುಮಾ‌ರ್, ವಿಜಯ ಕುಮಾರ್ ಆಯ್ಕೆ

ಪುತ್ತೂರು: ಕೊಯಂಬುತ್ತೂರಿನ ಕೆಎಆರ್‌ಐ ಮೊಟಾ‌ರ್ ಸ್ಪೀಡ್‌ವೇಯಲ್ಲಿ ಮಾ 24 ರಂದು ನಡೆಯುವ ದೇಶದ ಅತೀ ದೊಡ್ಡ ಬೈಕ್ ರೇಸ್ ಕೆಟಿಎಂ ಕಪ್ ಸಿಸನ್ 2 -2024ರ ಸ್ಪರ್ಧೆಗೆ ಪುತ್ತೂರಿನ ಬೊಳುವಾರು ಆಕ್ಸಿಸ್ ಬ್ಯಾಂಕ್‌ ಬಳಿಯ ಆಕ್ವಾ ಫ್ಲ್ಯಾಶ್ ಡಿಟೇಲಿಂಗ್ ಮತ್ತು ಕಾರ್‌ವಾಶ್ ಸಂಸ್ಥೆಯ ಮಾಲಕ ಬೆದ್ರಳ ಮುಕೈ ನಿವಾಸಿ ಲಕ್ಷ್ಮಿ ನರಸಿಂಹ ಮೂರ್ತಿ ಇವರ ಪುತ್ರ

 ಮನ್ವಿತ್ ಕುಮಾರ್ ಮತ್ತು ವಿಜಯ  ಪೆರ್ಲಂಪಾಡಿ ನಿವಾಸಿ ದಾಸಪ್ಪ ಗೌಡ ಮತ್ತು ರಾಧಮ್ಮ ದಂಪತಿಯ ಪುತ್ರ ವಿಜಯ ಕುಮಾರ್ ಆಯ್ಕೆಯಾಗಿದ್ದಾರೆ

ವೈರತ್ವ ಮರೆತು ಪಾಕ್ ಆಟಗಾರರ ಜೊತೆ ಸುಂದರ ಕ್ಷಣಗಳನ್ನು ಕಳೆದ ಕೊಹ್ಲಿ; ವಿರಾಟ್ ನಡೆಗೆ ಅಭಿಮಾನಿಗಳು ಫಿದಾ

Posted by Vidyamaana on 2023-09-02 22:49:33 |

Share: | | | | |


ವೈರತ್ವ ಮರೆತು ಪಾಕ್ ಆಟಗಾರರ ಜೊತೆ ಸುಂದರ ಕ್ಷಣಗಳನ್ನು ಕಳೆದ ಕೊಹ್ಲಿ; ವಿರಾಟ್ ನಡೆಗೆ ಅಭಿಮಾನಿಗಳು ಫಿದಾ

   ಕ್ರಿಕೆಟ್ ಜಗತ್ತಿನ ಅತಿದೊಡ್ಡ ಕಾಳಗಕ್ಕೆ ಭಾರತ-ಪಾಕಿಸ್ತಾನ ತಂಡಗಳು (India vs Pakistan) ಸಜ್ಜಾಗಿವೆ. ಶ್ರೀಲಂಕಾದ ಪಲ್ಲೆಕೆಲೆ ಮೈದಾನವು ಬದ್ಧವೈರಿ ತಂಡಗಳ ಕಾದಾಟಕ್ಕೆ ಸಾಕ್ಷಿಯಾಗಲಿದೆ. 2022ರ ಟಿ20 ವಿಶ್ವಕಪ್ (T20 World Cup 2022) ನಂತರ ಮತ್ತೆ ಮುಖಾಮುಖಿಯಾಗುತ್ತಿರುವ ಉಭಯ ತಂಡಗಳ ಆಟಗಾರರು, ಮಹತ್ವದ ಪಂದ್ಯಕ್ಕೂ ಮುನ್ನ ಉಭಯ ಕುಶಲೋಪರಿ ವಿಚಾರಿಸಿ ಗಮನ ಸೆಳೆದರುಸೆಪ್ಟೆಂಬರ್ 1ರಂದು, ಶುಕ್ರವಾರ 2 ತಂಡಗಳು ಒಟ್ಟಿಗೆ ಅಭ್ಯಾಸ ನಡೆಸಿದ ವೇಳೆ ಈ ಅದ್ಭುತ ಕ್ಷಣಗಳು ಕಂಡುಬಂದವು.


ಒಂದೆಡೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಮರವನ್ನೇ ಸಾರಿದ್ದರೆ, ಮತ್ತೊಂದೆಡೆ ಮೈದಾನದಲ್ಲಿ ಅಭಿಮಾನಿಗಳು ಕೆಲ ಸಮಯ ಕಳೆದು ತಮಾಷೆ ಮಾಡುತ್ತಿದ್ದ ಕ್ಷಣಗಳು ಎಲ್ಲರ ಮನಗೆದ್ದವು. ಅದರಲ್ಲೂ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಪಾಕ್ ಆಟಗಾರರೊಂದಿಗೆ ವೈರತ್ವ ಮರೆತು ನಗುನಗುತ್ತಾ, ತಮಾಷೆ ಮಾಡುತ್ತಾ, ಆತ್ಮಿಯತೆಯಿಂದ ಮಾತನಾಡುತ್ತಾ ಹೆಚ್ಚು ಸಮಯ ಕಳೆದರು. ಇದರ ವಿಡಿಯೋ, ಫೋಟೋಗಳು ಸಖತ್​ ವೈರಲ್ ಆಗುತ್ತಿವೆ.


ಸಿಕ್ಸರ್​ ಸಿಡಿಸಿದ್ದ ರವೂಫ್​​ಗೆ ಕೊಹ್ಲಿ ಅಪ್ಪುಗೆ


ಕಳೆದ ವರ್ಷ ನಡೆದ ಟಿ20 ವಿಶ್ವಕಪ್​ನಲ್ಲಿ ಗೆಲ್ಲಲೇಬೇಕಾದ ಒತ್ತಡದ ಸಮಯದಲ್ಲಿ ಕೊಹ್ಲಿ ಸಿಡಿಸಿದ್ದ ರೋಚಕ ಸಿಕ್ಸರ್​​ಗಳನ್ನು ಯಾರು ತಾನೆ ಮರೆಯುತ್ತಾರೆ ಹೇಳಿ. ಹ್ಯಾರಿಸ್ ರವೂಫ್ ಬೌಲಿಂಗ್​​ನಲ್ಲಿ ನಂಬಲು ಅಸಾಧ್ಯವಾದ ಎಸೆತಗಳಿಗೆ ಕೊಹ್ಲಿ 2 ಸಿಕ್ಸರ್​ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ನೆಟ್ಸ್​​​ನಲ್ಲಿ ಬಹಳಹೊತ್ತು ಸಮಯ ಕಳೆದ ಕೊಹ್ಲಿ, ರವೂಫ್​ ಅವರನ್ನು ಭೇಟಿಯಾಗಿ ಹಸ್ತಲಾಘವ ಮಾಡಿದ್ದು ಅಲ್ಲದೆ ಅಪ್ಪುಗೆ ನೀಡಿದರು. ಇಬ್ಬರು ಸಹ ಕೆಲಹೊತ್ತು ಮಾತನಾಡಿದರು. ಟಿ20 ವಿಶ್ವಕಪ್​ ಬಳಿಕ ಈ ಇಬ್ಬರ ಭೇಟಿ ಇದೇ ಮೊದಲ ಬಾರಿಗೆ ಆಗಿದೆ.ರವೂಫ್​ ಭೇಟಿಯ ನಂತರ ಕೊಹ್ಲಿ ಶತ್ರು ರಾಷ್ಟ್ರದ ಇತರೆ ಆಟಗಾರರ ಜೊತೆ ಸಮಯ ಕಳೆದರು. ಪಾಕ್​ನ ಸ್ಪಿನ್ ಆಲ್‌ರೌಂಡರ್ ಶಾದಾಬ್ ಖಾನ್ ಮತ್ತು ವೇಗಿ ಶಾಹೀನ್ ಅಫ್ರಿದಿ ಅವರೊಂದಿಗೆ ಮಾತನಾಡುತ್ತಾ ತಮಾಷೆ ಮಾಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಶಾಹೀನ್ ಶಾ ಅಫ್ರಿದಿ ಜೊತೆ ಖುಷಿಯಾಗಿ ಮಾತನಾಡಿ ಆನಂದಿಸಿದರು. ಶಾದಾಬ್ ಅವರ ಬ್ಯಾಟ್ ಹಿಡಿದು ಕೊಹ್ಲಿ ಶಾಡೋ ಬ್ಯಾಟಿಂಗ್ ಕೂಡ ನಡೆಸಿದರು.


ಕೊಹ್ಲಿ ನಡೆದ ಉಭಯ ದೇಶಗಳ ಅಭಿಮಾನಿಗಳು ಫಿದಾ


ಕೊಹ್ಲಿ, ಪಾಕಿಸ್ತಾನ ಆಟಗಾರರೊಂದಿಗೆ ತುಂಬಾ ಆತ್ಮಿಯತೆಯಿಂದ ಮಾತನಾಡಿದ್ದು, ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ. ವಿರಾಟ್ ಆಧುನಿಕ ಕ್ರಿಕೆಟ್ ದಿಗ್ಗಜನಾಗಿದ್ದರೂ, ತುಂಬಾ ಸರಳತೆಯಿಂದ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತ ಅವರ ನಡೆ ಕಂಡು ಭಾರತ-ಪಾಕಿಸ್ತಾನದ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಭಿಮಾನಿಗಳ ಹೃದಯ ಗೆದ್ದಿರುವ ಈ ವಿಡಿಯೋಗಳು ನೆಟ್​ನಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.

20 ಅಡಿ ಎತ್ತರಕ್ಕೆ ಹಾರಿ ಮರಕ್ಕೆ ಅಪ್ಪಳಿಸಿದ ಕಾರು! ಮೂವರು ಭಾರತೀಯ ಮಹಿಳೆಯರ ಸಾವು

Posted by Vidyamaana on 2024-04-28 06:19:08 |

Share: | | | | |


20 ಅಡಿ ಎತ್ತರಕ್ಕೆ ಹಾರಿ ಮರಕ್ಕೆ ಅಪ್ಪಳಿಸಿದ ಕಾರು! ಮೂವರು ಭಾರತೀಯ ಮಹಿಳೆಯರ ಸಾವು

ನ್ಯೂಯಾರ್ಕ್​: ಅಮೆರಿಕಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ (Ro

non

Accident) ಭಾರತದ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಗುಜರಾತ್‌ನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ ಮೃತ ದುರ್ದೈವಿಗಳಾಗಿದ್ದಾರೆ.ದಕ್ಷಿಣ ಕೆರೊಲಿನಾದ ಗ್ರೀನ್‌ವಿಲ್ಲೆ ಕೌಂಟಿಯ ಸೇತುವೆಯೊಂದರ ಮೇಲಿಂದ ಎಸ್‌ಯುವಿ ಉರುಳಿದ ಬಿದ್ದಿದ್ದರಿಂದ ಮೂವರು ಮೃತಪಟ್ಟಿದ್ದಾರೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ದಾಖಲಾಗಿದ್ದಾರೆ

Recent News


Leave a Comment: