ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಬಿಗ್ ಟಿಕೆಟಿನಲ್ಲಿ ಭಾರತೀಯರಿಗೆ ಬಂಪರ್ | ಬೆಂಗಳೂರು ನಿವಾಸಿಗೆ 44 ಕೋಟಿ ರೂ. ಬಹುಮಾನ ಭಾರತೀಯರಿಗೊಲಿದ 9 ಉಡುಗೊರೆ

Posted by Vidyamaana on 2023-04-04 08:43:10 |

Share: | | | | |


ಬಿಗ್ ಟಿಕೆಟಿನಲ್ಲಿ ಭಾರತೀಯರಿಗೆ ಬಂಪರ್ | ಬೆಂಗಳೂರು ನಿವಾಸಿಗೆ 44 ಕೋಟಿ ರೂ. ಬಹುಮಾನ  ಭಾರತೀಯರಿಗೊಲಿದ 9 ಉಡುಗೊರೆ

ಅಬುಧಾಬಿ: ಏ 3ರಂದು ರಾತ್ರಿ ನಡೆದ ಅಬುಧಾಬಿ ಬಿಗ್ ಟಿಕೆಟ್ 250ನೇ ಸರಣಿ ಡ್ರಾದಲ್ಲಿ ಭಾರತೀಯನೊಬ್ಬನಿಗೆ 2 ಕೋಟಿ ದಿರ್ಹಂ (INR 44 ಕೋಟಿಗೂ ಹೆಚ್ಚು) ಬಹುಮಾನ ಲಭಿಸಿದೆ. 

ಬೆಂಗಳೂರು ನಿವಾಸಿ ಅರುಣ್ ಕುಮಾರ್ ವಡಕ್ಕೆ ಕೋರೋತ್ ಅವರು ಟಿಕೆಟ್ ಸಂಖ್ಯೆ 261031ನೊಂದಿಗೆ ಪ್ರಥಮ ಬಹುಮಾನ ಪಡೆದರು. ಅವರು ಮಾರ್ಚ್ 22ರಂದು ಆನ್ಲೈನ್ನಲ್ಲಿ ಬಹುಮಾನದ ಟಿಕೆಟ್ ಖರೀದಿಸಿದ್ದಾರೆ.

ಲಾಟರಿ ನಡೆಯುವ ಸ್ಥಳದಿಂದ ಬಿಗ್ ಟಿಕೆಟ್ ಅಧಿಕಾರಿಗಳು ಅರುಣ್ ಕುಮಾರ್ ಕೋಟ್ಯಾಧಿಪತಿಯಾದ ಬಗ್ಗೆ ತಿಳಿಸಲು ಕರೆ ಮಾಡಿದ್ದರು. ಆದರೆ ಅರುಣ್ ಕುಮಾರ್ ಯಾರೋ ಮೋಸ ಮಾಡುತ್ತಿದ್ದಾರೆಂದು ಭಾವಿಸಿ ಫೋನ್ ಕಟ್ ಮಾಡಿದರು. ಬಳಿಕ ಮತ್ತೊಮ್ಮೆ ಕರೆ ಮಾಡಿ ಮಾಹಿತಿ ನೀಡಲಾಯಿತು.

ಡೀಮ್ ಕಾರ್ ಸರಣಿ ಸೇರಿದಂತೆ 11 ದೊಡ್ಡ ಟಿಕೆಟ್ ಡ್ರಾಗಳಲ್ಲಿ ಒಂಬತ್ತನ್ನು ಭಾರತೀಯರು ಗೆದ್ದಿದ್ದಾರೆ. ಬೈಟು, ಗೆಟ್ ಒನ್ ಆಫರ್ ಮೂಲಕ ಉಚಿತವಾಗಿ ಪಡೆದ ಟಿಕೆಟ್ ಮೂಲಕ 3 ಮಂದಿ ಅದೃಷ್ಟ ಖುಲಾಯಿಸಿದ್ದು ವಿಶೇಷ.

ಬಕ್ರೇನ್ನಲ್ಲಿ ನೆಲೆಸಿರುವ ಭಾರತೀಯ ಪ್ರಜೆ ಸುರೇಶ್ ಮಥನ್ ಎರಡನೇ ಬಹುಮಾನ 1 ಲಕ್ಷ ದಿರ್ಹಂ ಗೆದ್ದಿದ್ದಾರೆ. ಅವರು 018462 ಟಿಕೆಟ್ನೊಂದಿಗೆ ಅದೃಷ್ಟವನ್ನು ಪಡೆದರು. ಡ್ರಾದಲ್ಲಿ ಭಾರತೀಯ ಪ್ರಜೆ ಮೊಹಮ್ಮದ್ ಶಫೀಕ್ 333142 ಸಂಖ್ಯೆಯೊಂದಿಗೆ 90,000 ದಿರ್ಹಂ ಮತ್ತು 259107 ಸಂಖ್ಯೆಯೊಂದಿಗೆ ಇನ್ನೋರ್ವ ಭಾರತೀಯ ರಿಯಾಜ್ ತಿರುವತ್ತುತ್ತೋಡಿ ನಾಲ್ಕನೇ ಬಹುಮಾನ 80,000 ದಿರ್ಹಂ ಗಳಿಸಿದರು.

Alert :ನಿಮ್ಮ ಮೇಲೆ ಗುಪ್ತಚರ ಕಣ್ಣು - ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡುವವರು ತಪ್ಪದೇ ಇದನ್ನೊಮ್ಮೆ ಓದಿ

Posted by Vidyamaana on 2024-06-23 13:15:57 |

Share: | | | | |


Alert :ನಿಮ್ಮ ಮೇಲೆ ಗುಪ್ತಚರ ಕಣ್ಣು - ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡುವವರು ತಪ್ಪದೇ ಇದನ್ನೊಮ್ಮೆ ಓದಿ

ಬೆಂಗಳೂರು : ನಮ್ಮ ದೇಶದಲ್ಲಿ ವಯಸ್ಕರ ಅಶ್ಲೀಲ ವಿಡಿಯೋಗಳನ್ನು ನೋಡುವುದು ನಿಷೇಧಿಸಲಾಗಿದೆ, ಆದರೆ ಇದರ ಹೊರತಾಗಿಯೂ, ಅಂತಹ ವಿಷಯವು ಅಂತರ್ಜಾಲದಲ್ಲಿ ಲಭ್ಯವಿದೆ ಮತ್ತು ಅನೇಕ ಜನರು ಅಂತಹ ವಿಷಯವನ್ನು ರಹಸ್ಯವಾಗಿ ನೋಡುತ್ತಾರೆ. ಅನೇಕ ಜನರು ವಯಸ್ಕರ ವಿಷಯವನ್ನು ಬ್ರೌಸರ್ನ ಖಾಸಗಿ ಮೋಡ್ನಲ್ಲಿ ನೋಡುತ್ತಾರೆ ಮತ್ತು ಅವರು ಇದನ್ನು ಮಾಡುವುದನ್ನು ಯಾರೂ ನೋಡುತ್ತಿಲ್ಲ ಎಂದು ಭಾವಿಸುತ್ತಾರೆ, ಆದರೆ ನೀವು ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಿರುವಾಗ ಸಾವಿರಾರು ಎಐ ಬಾಟ್ ಗಳು ನಿಮ್ಮ ಮೇಲೆ ಕಣ್ಣಿಡುತ್ತವೆ.

ನಿಮ್ಮ ಮೇಲೆ ಗುಪ್ತಚರ ಕಣ್ಣು:

ನಿಮ್ಮ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೀವು ನೋಡಿದಾಗಲೆಲ್ಲಾ, ನಿಮ್ಮ ಮೊಬೈಲ್ ಸೇವಾ ಆಪರೇಟರ್ ಮೊದಲು ಅದರ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ. ಇದರೊಂದಿಗೆ, ನಿಮ್ಮ ಫೋನ್ನಲ್ಲಿರುವ ಅಪ್ಲಿಕೇಶನ್ಗಳು ಸಹ ನಿಮ್ಮ ಮೇಲೆ ಕಣ್ಣಿಟ್ಟಿವೆ. ಫೋನ್ ನಲ್ಲಿರುವ ಅಪ್ಲಿಕೇಶನ್ ಗಳು ಈ ರೀತಿಯ ವಿಷಯವನ್ನು ನೋಡುವಾಗ ಗುಪ್ತಚರ ಸಂಸ್ಥೆಯಂತೆ ನಿಮ್ಮ ಮೇಲೆ ಕಣ್ಣಿಡುತ್ತವೆ. ಅಂದರೆ, ನಿಮ್ಮ ಸಂಪೂರ್ಣ ಬ್ರೌಸಿಂಗ್ ಇತಿಹಾಸವನ್ನು ಆ ಸಮಯದಲ್ಲಿ ಟ್ರ್ಯಾಕ್ ಮಾಡಲಾಗುತ್ತದೆ.

ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳನ್ನು ಸಹ ಸ್ಕ್ಯಾನ್ ಮಾಡಲಾಗುತ್ತದೆ:

ಬುದ್ದಿ ಹೇಳಿದ್ದಕ್ಕೆ ಶಿಕ್ಷಕನಿಗೆ ಮಾರಕಾಸ್ತ್ರ ಹಿಡಿದು ವಿದ್ಯಾರ್ಥಿ ಬೆದರಿಕೆ

Posted by Vidyamaana on 2023-08-25 08:59:25 |

Share: | | | | |


ಬುದ್ದಿ ಹೇಳಿದ್ದಕ್ಕೆ ಶಿಕ್ಷಕನಿಗೆ ಮಾರಕಾಸ್ತ್ರ ಹಿಡಿದು ವಿದ್ಯಾರ್ಥಿ ಬೆದರಿಕೆ

ಮಂಡ್ಯ: ತರಗತಿಗೆ ಹಾಜರಾಗದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಕ್ಕೆ ವಿದ್ಯಾರ್ಥಿಯೊಬ್ಬ ಶಿಕ್ಷಕರ ಎದುರು ಲಾಂಗ್ ಝಳಪಿಸಿದ ಘಟನೆ ನಾಗಮಂಗಲದಲ್ಲಿ ನಡೆದಿದೆ.

ನಗರದ ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತರಗತಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಈ ಬಗ್ಗೆ ಉಪನ್ಯಾಸಕರೊಬ್ಬರು ತಿಳುವಳಿಕೆ ಹೇಳುವಂತೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿ ತಲವಾರು ಹಿಡಿದು ಉಪನ್ಯಾಸಕರಿಗೆ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಹಾಕುತ್ತಿರುವ ವೀಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎನ್ ಆರ್ ಸಿ ಸಿ- ಅಮ್ಮುಂಜ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ

Posted by Vidyamaana on 2024-06-16 17:20:11 |

Share: | | | | |


ಎನ್ ಆರ್ ಸಿ ಸಿ- ಅಮ್ಮುಂಜ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಪುತ್ತೂರು: ಕಳೆದ ಲೋಕಸಭಾ ಚುನಾವಣೆಯ ಮೊದಲು ಶಿಲಾನ್ಯಾಸಗೈದ ಕಾಮಗಾರಿಗಳು ಆರಂಭಗೊಂಡಿದೆ, ಶೀಘ್ರದಲ್ಲೇ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ಕುರಿಯ ಗ್ರಾಮದ ಎನ್ ಆರ್ ಸಿ ಸಿ - ಅಮ್ಮುಂಜ ರಸ್ತೆಯು ರೂ ೧೦ ಲಕ್ಷದಲ್ಲಿ ಕಾಂಕ್ರೀಟ್ ಆಗಿದ್ದು ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಅಧ್ಯತೆ ಮೇರೆಗೆ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಮಾಡಲಾಗುವುದು. ರಸ್ತೆ ಕಾಂಕ್ರೀಟ್ ಆಗಿಲ್ಲವೆಂದು ಬೇಜಾರುಮಾಡಬೇಡಿ ಮುಂದಿನ ದಿನಗಳಲ್ಲಿ ಅಗತ್ಯ ಬೇಡಿಕೆ ಇರುವ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಮಾಡಲಾಗುವುದು ಎಂದು ಹೇಳಿದರು. ಪಾಲಿಂಜೆ ಶ್ರೀ ಮಹಾವಿಷ್ಣು ದೇವಸ್ಥಾನದ ಅಭಿವೃದ್ದಿಗೆ ೧೦ ಲಕ್ಷ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ತಂಗಿಯನ್ನು ಕಾಮಕ್ಕೆ ಬಳಸಿಕೊಂಡ ಗಂಡ: ಸೇಡು ತೀರಿಸಿಕೊಳ್ಳಲು ಪತ್ನಿ ಮಾಡಿದ್ದೇನು ಗೊತ್ತಾ..?

Posted by Vidyamaana on 2024-02-04 09:58:00 |

Share: | | | | |


ತಂಗಿಯನ್ನು ಕಾಮಕ್ಕೆ ಬಳಸಿಕೊಂಡ ಗಂಡ: ಸೇಡು ತೀರಿಸಿಕೊಳ್ಳಲು ಪತ್ನಿ ಮಾಡಿದ್ದೇನು ಗೊತ್ತಾ..?

ಬ್ರಝಿಲ್ :15 ವರ್ಷದ ಬಾಲಕಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ಪತಿ ವಿರುದ್ಧ ಪತ್ನಿ ಮಾರಣಾಂತಿಕ ಹಲ್ಲೆ ಮಾಡಿದ್ದಾಳೆ. ಗಂಡನ ಕೈ ಕಾಲು ಕಟ್ಟಿ ಹಾಕಿದ ಪತ್ನಿ, ಒಂದೇ ಎಟಿನಲ್ಲಿ ಗಂಡನ ಮರ್ಮಾಂಗ ಕತ್ತರಿಸಿದ್ದಾಳೆ. ಬಳಿಕ ಟಾಯ್ಲೆಟ್‌ಗೆ ಹಾಕಿ ಫ್ಲಶ್ ಮಾಡಿಬಿಟ್ಟಿ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.ಆಯಟಿಬಯಾ ನಿವಾಸಿಯಾಗಿರುವ 39 ವರ್ಷದ ಪತಿಯ ಸ್ಥಿತಿ ಚಿಂತಾಜನಕವಾಗಿದೆ.ಇತ್ತ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. 


ಪತಿ ಹಾಗೂ ಪತ್ನಿ ಇಬ್ಬರು ಉದ್ಯೋಗ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಪತಿಯ ವರ್ತನೆಗಳು ಅನುಮಾನ ತರಿಸಿತ್ತು. ಕೆಲ ವಿಚಾರಗಳನ್ನು ತನ್ನಿಂದ ಮುಚ್ಚಿಡುತ್ತಿರುವ ಕುರಿತು ಅನುಮಾನಪಟ್ಟಿದ್ದಾಳೆ. ಇತ್ತ ಪತಿ ಕೆಲದಿಂದ ಬೇಗನೆ ಮನೆಗೆ ಬರುವುದು, ಕೆಲ ದಿನ ಕಲಸಕ್ಕೆ ರಜೆ ಹಾಕುವುದು ಸಾಮಾನ್ಯವಾಗಿತ್ತು. ಬರು ಬರುತ್ತಾ ಪತಿಯ ನಡೆ ಅನುಮಾನ ಹೆಚ್ಚಿಸಿದೆ.


ಪತಿಯ ಅಸಲಿ ಕತೆ ಪತ್ತೆ ಹಚ್ಚಳು ಪತ್ನಿ ನಿರ್ಧರಿಸಿದ್ದಾಳೆ. ಕೆಲಸಕ್ಕೆಂದು ತೆರಳಿದ ಪತಿಯನ್ನು ಹಿಂಬಾಸಿದ ಪತ್ನಿಗೆ ಅಚ್ಚರಿಯಾಗಿದೆ. ತನ್ನ 15 ವರ್ಷದ ತಂಗಿಯನ್ನು ಪುಸಲಾಯಿಸಿ, ಬೆದರಿಸಿ ಕಾಮಕ್ಕೆ ಬಳಸಿಕೊಂಡಿರುವುದು ಪತಿಗೆ ಗೊತ್ತಾಗಿದೆ. ಒಂದು ದಿನ ರೆಡ್ ಹ್ಯಾಂಡ್‌ಗಿ ತನ್ನ 15 ವರ್ಷದ ತಂಗಿ ಜೊತೆ ಮಲಗಿರುವಾಗಲೇ ಪತಿಯ ಕಾಮದಾಟವನ್ನು ಬಯಲು ಮಾಡಿದ್ದಾಳೆ. ಪತಿಯ ಎರಡು ಕೈ ಹಾಗೂ ಕಾಲುಗಳನ್ನು ಕಟ್ಟಿಹಾಕಿದ ಪತಿ ಮನಬಂದಂತೆ ಥಳಿಸಲು ಆರಂಭಿಸಿದ್ದಾಳೆ. ಆದರೆ ಇಷ್ಟಕ್ಕೆ ಕೋಪ ತಣ್ಣಗಾಗಲಿಲ್ಲ. ನೇರವಾಗಿ ಅಡುಮನೆಯಿಂದ ಚಾಕು ತಂದ ಪತ್ನಿ, ಪತಿಯ ಮರ್ಮಾಂಗವನ್ನೇ ಒಂದೇ ಏಟಿನಲ್ಲಿ ಕತ್ತರಿಸಿದ್ದಾಳೆ. ಬಳಿಕ ಮರ್ಮಾಂಗವನ್ನು ಟಾಯ್ಲೆಟ್‌ನಲ್ಲಿ ಬಿಸಾಡಿ ನೀರು ಹಾಕಿದ್ದಾಳೆ.


ಈ ದಾಳಿ ಬಳಿಕ ಪತ್ನಿ ನೇರವಾಗಿ ಮನೆಯಿಂದ ಹೊರಟು ಹೋಗಿದ್ದಾಳೆ. ಇತ್ತ ಚೀರಾಟ ಕೇಳಿ ಕೆಲ ದೂರದಲ್ಲಿರವ ನೆರೆಮನೆಯವರು ಆಗಮಿಸಿ ಈತನನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಪತ್ನಿ ಪೊಲೀಸ್ ಠಾಣೆಗೆ ತೆರಳಿದ್ದಾಳೆ. ಪೊಲೀಸ್ ಠಾಣೆಗೆ ತೆರಳಿದ ಪತ್ನಿ, ಶುಭ ಸಂಜೆ ಆಫೀಸರ್, ನನ್ನ ಕುರಿತು ಹೇಳಿಕೊಳ್ಳಲು ಇಲ್ಲಿಗೆ ಆಗಮಿಸಿದ್ದೇನೆ. ನನ್ನ 15 ವರ್ಷದ ತಂಗಿ ಜೊತೆ ಮಲಗಿದ ಪತ್ನಿಯ ಮರ್ಮಾಂಗವನ್ನು ಕತ್ತರಿಸಿದ್ದೇನೆ ಎಂದಿದ್ದಾಳೆ. ಮಹಿಳೆಯನ್ನು ವಶಕ್ಕೆ ಪಡೆದು ಪೊಲೀಸರು ಈಕೆಯ ಪತಿಯ ಮಾಹಿತಿ ಪಡೆದು ಆಸ್ಪತ್ರೆಗೆ ತೆರಳಿದ್ದಾರೆ.ಪತಿ ಸ್ಥಿತಿ ಚಿಂತಾಜನಕವಾಗಿದೆ. ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಅದು ಪ್ರೀತಿ, ಕಾಮವಲ್ಲ : ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಹೈಕೋರ್ಟ್ ಜಾಮೀನು!

Posted by Vidyamaana on 2024-01-15 09:21:03 |

Share: | | | | |


ಅದು ಪ್ರೀತಿ, ಕಾಮವಲ್ಲ : ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಹೈಕೋರ್ಟ್ ಜಾಮೀನು!

ಮುಂಬೈ : 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದ 26 ವರ್ಷದ ವ್ಯಕ್ತಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.ಅಮರಾವತಿ ನಿವಾಸಿಯಾಗಿರುವ ಆರೋಪಿ ಮೂರು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅವನನ್ನು ಜೈಲಿಗೆ ಹಾಕಲಾಯಿತು.ಲೈಂಗಿಕ ಕಿರುಕುಳದ ಯಾವುದೇ ದೂರು ಇಲ್ಲದೆ ಅವಳು ಆ ವ್ಯಕ್ತಿಯೊಂದಿಗೆ ಹಲವಾರು ಸ್ಥಳಗಳಲ್ಲಿ ವಾಸಿಸಿದ್ದಾಳೆ ಎಂದು ನ್ಯಾಯಾಲಯ ಗಮನಿಸಿದೆ.


ಬಾಲಕಿ ತನ್ನ ಹೇಳಿಕೆಯನ್ನು ಅಧಿಕಾರಿಗೆ ನೀಡಿದ್ದಾಳೆ, ಇದು ಬಾಲಕಿ ಪುಸ್ತಕ ಖರೀದಿಸುವ ನೆಪದಲ್ಲಿ ಆಗಸ್ಟ್ 23, 2020 ರಂದು ಮನೆಯಿಂದ ಹೊರಟು ಸ್ವಯಂಪ್ರೇರಿತವಾಗಿ ಆರೋಪಿಯೊಂದಿಗೆ ವಾಸಿಸಿದ್ದಾಳೆ ಎಂದು ತೋರಿಸುತ್ತದೆ ಎಂದು ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಫಾಲ್ಕೆ ಗಮನಿಸಿದರು.


ನಾಗ್ಪುರ ಪೀಠದ ನ್ಯಾಯಮೂರ್ತಿ ಜೋಶಿ-ಫಾಲ್ಕೆ ಅವರು ಅರ್ಜಿದಾರ ಆರೋಪಿಗಳೊಂದಿಗೆ ಇದ್ದರು ಮತ್ತು ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು. ಲೈಂಗಿಕ ಸಂಬಂಧದ ಘಟನೆಯು ಇಬ್ಬರ ನಡುವಿನ ಆಕರ್ಷಣೆಯಿಂದಾಗಿ ಎಂದು ತೋರುತ್ತದೆ, ಮತ್ತು ಅರ್ಜಿದಾರರು ಕಾಮದಿಂದ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗುವುದಿಲ್ಲ ನ್ಯಾಯಪೀಠ ಅಭಿಪ್ರಾಯಪಟ್ಟಿದೆ



Leave a Comment: