Posted by vidyamaana on 2024-07-03 18:55:10 | Last Updated by Vidyamaana on 2024-07-03 18:55:10
ಬೆಂಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.
ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈಕಿಸನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ್ದಾನೆ.
ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.
ಕೊಲೆಗೆ ಕಾರಣವೇನು?
ಇಂದು ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಈ ವೇಳೆ ಆರೋಪಿ ವಿದ್ಯಾರ್ಥಿ ಭಾರ್ಗವ್, ಕಾಲೇಜಿಗೆ ಕುಡಿದು ಬಂದಿದ್ದಾನೆ. ಈ ಹಿನ್ನಲೆ ಸೆಕ್ಯೂರಿಟಿಗಾರ್ಡ್, ಭಾರ್ಗವ್ನನ್ನು ಕಾಲೇಜಿನ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಸೆಕ್ಯೂರಿಟಿ ಗಾರ್ಡ್ ಹಾಗೂ ವಿದ್ಯಾರ್ಥಿ ಮಧ್ಯೆ ಗಲಾಟೆ ಆಗಿದೆ. ಬಳಿಕ ಅಂಗಡಿಗೆ ಹೋಗಿ ಚಾಕು ಖರೀದಿಸಿದ್ದ ಭಾರ್ಗವ್, ನೇರವಾಗಿ ಬಂದು ಸೆಕ್ಯೂರಿಟಿ ಗಾರ್ಡ್ ಎದೆಗೆ ಐದಾರು ಬಾರಿ ಇರಿದಿದ್ದಾನೆ. ಅದು ಹೃದಯಕ್ಕೆ ಹೊಕ್ಕು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.
Posted by Vidyamaana on 2023-09-24 11:14:53 |
ಹ್ರದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೂ ಆರೋಗ್ಯ ವಂತಳಾಗಿಯೇ ಕಾಣುತ್ತಿದ್ದ ಮಗು... ಸಾವಕಾಶವಾಗಿ ಶಸ್ತ್ರಕ್ರಿಯೆ ಯೊಂದನ್ನು ನಡೆಸಲು ವೈದ್ಯರು ಸೂಚಿಸಿದ್ದರು. ಈ ಮಧ್ಯೆ ಕುಟುಂಬ ಸಮೇತ ಪವಿತ್ರ ಉಮ್ರಾ ಕರ್ಮವನ್ನು ನಿರ್ವಹಿಸಿ ಬಂದಿದ್ದರು,ಮಗುವನ್ನು ಶಾಲೆಗೂ ದಾಖಲು ಮಾಡಿದ್ದರು.
ಇದ್ದಕ್ಕಿದ್ದಂತೆಯೇ ಇತ್ತೀಚೆಗೆ ಮಗು ತೀವ್ರ ಅನಾರೋಗ್ಯಳಾದಾಗ ಬೆಂಗಳೂರಿನ ನಾರಾಯಣ ಹ್ರದಯಾಲಯದಲ್ಲಿ ದಾಖಲುಮಾಡಿದ್ದರು.
ಲಕ್ಷಾಂತರ ರೂಪಾಯಿ ಗಳನ್ನು ವ್ಯಯಿಸಿ ಚಿಕಿತ್ಸೆ ಮಾಡುತ್ತಾ ಕಂದಮ್ಮಳ ಜೀವರಕ್ಷಿಸಲು ಶತಪ್ರಯತ್ನ ಪಡುತ್ತಿದ್ದರೂ ಕೊನೆಗೆ ಶಸ್ತ್ರಕ್ರಿಯೆಗೂ ಸ್ಪಂದಿಸದೆ , ಅಲ್ಲಾಹನ ಅನುಲ್ಲಂಘನೀಯ ವಿಧಿಯ ಮುಂದೆ ಆ ಮಗು ಕೊನೆಯುಸಿರೆಳೆಯಿತು. ಅಲ್ಲಾಹನೇ...! ಸಹನೆ ನೀಡು...ಮಾತಾ ಪಿತರಿಗೆ ಫಲಶ್ರುತಿಯಾದ ಸಂತಾನಗಳಲ್ಲಿ ಸೇರಿಸು.. ಸ್ವರ್ಗೋದ್ಯಾವನದಲ್ಲಿ ಒಂದು ಗೂಡಿಸು....ಆಮೀನ್...
*"ಅಲ್ಲಾಹನು ಹೇಳುತ್ತಿದ್ದಾನೆಂದು ಪ್ರವಾದಿ ಸ.ಅ.ರು ಹೇಳಿದರು: ನನ್ನ ದಾಸನಾದ ಸತ್ಯ ವಿಶ್ವಾಸಿಯ ನಿಕಟ ಬಂಧುವನ್ನು ನಾನು ಕರೆಸಿಕೊಂಡಾಗ (ಅರ್ಥಾತ್ ಮರಣಗೊಳಿಸಿದಾಗ) ಆ ಸತ್ಯವಿಶ್ವಾಸಿಯು ಸಹನೆಯೊಂದಿಗೆ ತನ್ನ ಪ್ರತಿಫಲವನ್ನು ಆಗ್ರಹಿಸಿದರೆ ಅವನಿಗೆ ಸ್ವರ್ಗ ವಲ್ಲದೆ ಬೇರೆ ಪ್ರತಿಫಲವಿಲ್ಲ."*
Posted by Vidyamaana on 2023-10-12 17:03:20 |
ವಿಟ್ಲ: ಇಬ್ಬರು ಅನ್ಯಕೋಮಿನ ಯುವಕರ ಸಹಿತ ಓರ್ವ ಹಿಂದೂ ಯುವತಿ ಪತ್ತೆಯಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಸಮೀಪ ನಡೆದಿದೆ.
ಆರಂಭದಲ್ಲಿ ಈ ಮೂವರು ಬನ್ನೊಂದರಲ್ಲಿ ಬಂದು ಕುದ್ದುಪದವಿನಲ್ಲಿ ಬಸ್ಸಿಂದ ಇಳಿದು ಅಲ್ಲೇ ಪಕ್ಕದಲ್ಲಿದ್ದ ಬಸ್ಸು ತಂಗುದಾಣದಲ್ಲಿ ಕುಳಿತಿದ್ದರು. ಈ ವೇಳೆ ಸ್ಥಳೀಯರು ಅವರನ್ನು ವಿಚಾರಿಸಿದಾಗ ಉಪ್ಪಳ ಕಡೆ ತೆರಳುವ ಇನ್ನೊಂದು ಬಸ್ಸಿನಲ್ಲಿ ಆ ಮೂವರು ಅಲ್ಲಿಂದ ತೆರಳಿ ಪೆರುವಾಯಿಯಲ್ಲಿ ಬಸ್ಸಿಂದಿಳಿದು ಅಲ್ಲೇ ಪಕ್ಕದಲ್ಲಿರುವ ಬಸ್ಸು ತಂಗುದಾಣದಾಣದಲ್ಲಿ ಕುಳಿತಿದ್ದರು. ಮಾತ್ರವಲ್ಲದೆ ಆ ಮೂವರು ತುಂಬಾ ಸಲುಗೆಯಿಂದ ಇರುವುದನ್ನು ಕಂಡ ಸ್ಥಳೀಯರು ಅವರನ್ನು ವಿಚಾರಿಸಿ ಬಳಿಕ ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಆ ಮೂವರನ್ನು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ.
Posted by Vidyamaana on 2024-01-29 09:52:17 |
ಬೆಳ್ತಂಗಡಿ : ಪಟಾಕಿ ಗೋಡೌನ್ ನಲ್ಲಿ ಪಟಾಕಿ ತಯಾರಿಕೆ ವೇಳೆ ಜ.28 ರಂದು ಸಂಜೆ ಸ್ಟೋಟ ನಡೆದಿದ್ದು. ಈ ವೇಳೆ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಶಾಂತಿ ಎಂಬವರು ನೀಡದ ದೂರಿನ ಮೇಲೆ ಮಾಲೀಕ ಬಶೀರ್ ಮೇಲೆ ಎಫ್ಐಆರ್ ದಾಖಲಾಗಿದೆ.
ಪ್ರಕರಣ ಸಂಬಂಧ ಜಾಗ ಹಾಗೂ ಪಟಾಕಿ ತಯಾರಿಕಾ ಮಾಲೀಕ ಸೈಯದ್ ಬಶೀರ್ ಘಟನೆ ಬಳಿಕ ವೇಣೂರಿನಿಂದ ಪರಾರಿಯಾಗಿದ್ದಾಗ ಖಚಿತ ಮಾಹಿತಿ ಮೇರೆ ಸುಳ್ಯದಲ್ಲಿ ವಶಕ್ಕೆ ಪಡೆದುಕೊಂಡು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
Posted by Vidyamaana on 2024-05-11 16:27:56 |
ಕೊಡಗು: ಮದುವೆ ರದ್ದಾಗಿದ್ದಕ್ಕೆ ಕೋಪಗೊಂಡ ಪಾಗಲ್ ಪ್ರೇಮಿಯೊಬ್ಬ ಬಾಲಕಿಯನ್ನು ಕೊಲೆ (Murder Case) ಮಾಡಿ ರುಂಡದೊಂದಿಗೆ ಪರಾರಿ ಆಗಿದ್ದ. ಕಾಡಿನಲ್ಲಿ ಬಚ್ಚಿಟ್ಟುಕೊಂಡಿದ್ದ ಆರೋಪಿ ಪ್ರಕಾಶ್ನನ್ನು ಸೋಮವಾರಪೇಟೆ ಪೊಲೀಸರು ಶನಿವಾರ ಬಂಧಿಸಿದ್ದರು. ಆದರೆ ಆರೋಪಿ ಸಿಕ್ಕರೂ ಬಾಲಕಿಯ ರುಂಡ ಪತ್ತೆಯಾಗಿರಲಿಲ್ಲ.ಇದೀಗ ಹತ್ಯೆ ನಡೆದ ಅನತಿ ದೂರದಲ್ಲೇ ಬಾಲಕಿಯ ತಲೆ ಪತ್ತೆಯಾಗಿದೆ. ಬಾಲಕಿಯ ತಲೆಯನ್ನು ಆರೋಪಿ ಪ್ರಕಾಶ್ ಮರದ ಮೇಲೆ ಇರಿಸಿದ್ದ. ಬಾಲಕಿಯ ತಲೆ ಹಾಗೂ ಆಕೆಯ ಚಪ್ಪಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Posted by Vidyamaana on 2023-11-02 11:03:58 |
ಮೈಸೂರು : ನಿವೃತ್ತ ಪೊಲೀಸ್ ಅಧಿಕಾರಿಗೆ ಸೇರಿದ ಕಟ್ಟಡದಲ್ಲೇ ವೇಶ್ಯಾವಾಟಿಕೆ ಜಾಲ ಬಯಲಾಗಿದ್ದು, ಮೈಸೂರಿನ ತಿ. ನರಸೀಪುರ ರಸ್ತೆಯಲ್ಲಿರುವ ಲಲಿತಮಹಲ್ ನಗರದಲ್ಲಿದ್ದ ಸಲೂನ್ ಮೇಲೆ ದಾಳಿ ಮಾಡಲಾಗಿದೆ. ಒಡನಾಡಿ ಸೇವಾ ಸಂಸ್ಥೆ ಹಾಗೂ ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ. ರಂಗಸ್ವಾಮಿ ಅವರಿಗೆ ವಾಸದ ಮನೆ ಮೇಲೆ ದಾನಿಯಾ ಸಲೂನ್ ನಡೆಯುತ್ತಿದೆ. ಕಳೆದ ಹಲವಾರು ತಿಂಗಳುಗಳಿಂದ ವೇಶ್ಯಾ ದಂಧೆ ನಡೆಯುತ್ತಿದೆ.
ದಾಳಿ ವೇಳೆ ವೇಶ್ಯಾವಾಟಿಕೆ ಕಿಂಗ್ ಪಿನ್ ಬಾಣಲಿ ಮಹೇಶ ಹಾಗೂ ಮಧು ಸುಧಾ ಬಂಧನವಾಗಿದೆ. ಇಬ್ಬರು ಗಿರಾಕಿಗಳು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಆರು ಮಂದಿ ಹೆಣ್ಣುಮಕ್ಕಳನ್ನ ರಕ್ಷಣೆ ಮಡಿದ್ದು, ಬಾಣಲಿ ಮಹೇಶನ ಆಡಿಯೋದಲ್ಲಿ ಮಾಲೀಕರ ಪ್ರಸ್ತಾಪ ನಡೆಸಿದ್ದು, ಈ ಹಿಂದೆಯೇ ಸಲೂನ್ ಮೇಲೆ ಒಡನಾಡಿ ದಾಳಿಗೆ ಪ್ಲಾನ್ ಮಾಡಿದ್ದರು.ಪೊಲೀಸರ ಜತೆ ಚರ್ಚಿಸುತ್ತಿದ್ದಂತೆ ಜೆ.ಬಿ. ರಂಗಸ್ವಾಮಿಗೆ ಮಾಹಿತಿ ಸೋರಿಕೆಯಾಗಿದೆ. ಆ ದಿನ ಸಲೂನ್ ಬಂದ್ ಮಾಡಿಸಿದ್ದರೆಂಬ ಮಾಹಿತಿ ದೊರಕಿದ್ದು, ಗಿರಾಕಿ ಜತೆ ಬಾಣಲಿ ಮಹೇಶ್ ಮಾತನಾಡಿರುವ ಆಡಿಯೋ ತುಣುಕು ಬಯಲಾಗಿದೆ. ಇವತ್ತು ರೇಡ್ ಆಗುತ್ತೆ ಅಂತಾ ಮಾಲೀಕರು ಹೇಳಿದ್ದಾರೆ. ಹಾಗಾಗಿ ಬಾಣಲಿ ಮಹೇಶ ಸಲೂನ್ ಬಂದ್ ಮಾಡಿದ್ದೇವೆ ಎಂದಿದ್ದಾರೆ. ಈ ಸಂಬಂಧ ಅಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Posted by Vidyamaana on 2023-10-13 17:34:48 |
ನವದೆಹಲಿ : ಕೇಂದ್ರ ಸರ್ಕಾರ ಹಲವು ಆಕರ್ಷಕ ಠೇವಣಿ ಯೋಜನೆಗಳನ್ನ ಪರಿಚಯಿಸುತ್ತಿದೆ. ಬೇಟಿ ಬಚಾವೋ ಬೇಟಿ ಪಡಾವೋ ಘೋಷಣೆಯ ಅಂಗವಾಗಿ ಕೇಂದ್ರ ಸರ್ಕಾರ ತಂದಿರುವ ಸುಕನ್ಯಾ ನಾಮೃದ್ಧಿ ಯೋಜನೆ ಯೋಜನೆ ಎಷ್ಟು ಮಹತ್ವ ಪಡೆದುಕೊಂಡಿದೆ ಎಂಬುದನ್ನ ಬಿಡಿಸಿ ಹೇಳಬೇಕಾಗಿಲ್ಲ.ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಮಯದಲ್ಲಿ ಆದಾಯವನ್ನ ಪಡೆಯಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯ ಭಾಗವಾಗಿ, ಗ್ರಾಹಕರು 15 ವರ್ಷಗಳವರೆಗೆ ಪಾವತಿಸಬೇಕು ಮತ್ತು 21 ವರ್ಷಗಳ ಅವಧಿಯ ನಂತರ ಹಣವನ್ನು ಪಡೆಯಬೇಕು.
ಹತ್ತನೇ ವಯಸ್ಸಿನಲ್ಲಿ ಮಗು ಈ ಯೋಜನೆಗೆ ಸೇರಬಹುದು. ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ತೆರೆಯಬಹುದು. ಈ ಖಾತೆಯನ್ನು ತೆರೆಯಲು ಐಡಿ, ವಿಳಾಸ ಪುರಾವೆ, ಜನ್ಮ ಪ್ರಮಾಣಪತ್ರ, ಹೆಣ್ಣು ಮಗು ಮತ್ತು ಆಕೆಯ ತಂದೆಯ ಭಾವಚಿತ್ರಗಳು, ಆಧಾರ್ ಕಾರ್ಡ್ ಅಗತ್ಯವಿದೆ. ಮತ್ತು ಈ ಯೋಜನೆಯಲ್ಲಿ ಕನಿಷ್ಠ ಖಾತೆ ಮೊತ್ತ ರೂ. 250 ಠೇವಣಿ ಇಡಬಹುದು ಮತ್ತು ತೆರೆಯಬಹುದು. ಗರಿಷ್ಠ ರೂ. 1.50 ಲಕ್ಷ ಠೇವಣಿ ಇಡಬಹುದು. ಖಾತೆ ತೆರೆದ ದಿನಾಂಕದಿಂದ 15 ವರ್ಷಗಳವರೆಗೆ ಹಣವನ್ನು ಠೇವಣಿ ಇಡಬೇಕು. ಅದರ ನಂತರ, ಆರು ವರ್ಷಗಳ ನಂತರ, ಅಂದರೆ 21 ವರ್ಷಗಳನಂತರ, ಪ್ರಬುದ್ಧತೆ ಬರುತ್ತದೆ. ಈ ಆರು ವರ್ಷಗಳವರೆಗೆ ಯಾವುದೇ ಠೇವಣಿ ಅಗತ್ಯವಿಲ್ಲ.
ಖಾತೆಯನ್ನು ತೆರೆದ ನಂತರ, ಯಾವುದೇ ಕಾರಣಕ್ಕೂ ಹಣವನ್ನು ಠೇವಣಿ ಮಾಡದಿದ್ದರೆ, ಖಾತೆಯು ಡೀಫಾಲ್ಟ್ ಆಗಿ ಹೋಗುತ್ತದೆ. ಖಾತೆಯನ್ನು ಪುನಃ ಸಕ್ರಿಯಗೊಳಿಸುವ ಸಂದರ್ಭದಲ್ಲಿ, ರೂ. 50 ದಂಡ ಮತ್ತು ಖಾತೆಯನ್ನು ಪುನಃ ತೆರೆಯಿರಿ. ಖಾತೆಯನ್ನು ತೆರೆದ ದಿನಾಂಕದಿಂದ 15 ವರ್ಷಗಳ ಒಳಗೆ ಮತ್ತೆ ತೆರೆಯಬಹುದು. ಏತನ್ಮಧ್ಯೆ, ಸುಕನ್ಯಾ ಸಮೃದ್ಧಿ ಯೋಜನೆ ಯೋಜನೆಯ ಮೂಲಕ ಮಗುವಿಗೆ ಮದುವೆ ಆಗುವ ವೇಳೆಗೆ ಅಥವಾ ಶಿಕ್ಷಣ ಪೂರ್ಣಗೊಳ್ಳುವ ವೇಳೆಗೆ ರೂ. ಈಗ ನೀವು 25 ಲಕ್ಷಗಳನ್ನು ಪಡೆಯಲು ತಿಂಗಳಿಗೆ ಎಷ್ಟು ಹಣವನ್ನು ಠೇವಣಿ ಮಾಡಬೇಕು ಎಂದು ಕಂಡುಹಿಡಿಯೋಣ.
ಉದಾಹರಣೆಗೆ, ನಿಮ್ಮ ಮಗುವಿಗೆ ಪ್ರಸ್ತುತ 5 ವರ್ಷವಯಸ್ಸಾಗಿದೆ ಎಂದು ಭಾವಿಸೋಣ. ಪ್ರಸ್ತುತ ಈ ಯೋಜನೆಯ ಬಡ್ಡಿ ದರವು ಶೇಕಡಾ 8 ರಷ್ಟಿದೆ. ಈ ಲೆಕ್ಕಾಚಾರದಲ್ಲಿ ವರ್ಷಕ್ಕೆ ರೂ. 55,700 ಪಾವತಿಸಬೇಕು. ಹೀಗೆ ಮಾಡುವುದರಿಂದ ನಿಮಗೆ ರೂ. 25 ಲಕ್ಷ ಕೈಗೆ ಬರುತ್ತದೆ. ಅಂದರೆ ತಿಂಗಳಿಗೆ ರೂ. ಮಗಳ ಮದುವೆ ಸಮಯದಲ್ಲಿ 4,641 ರೂ. 25 ಲಕ್ಷ ವಾಪಸ್ ಪಡೆಯಬಹುದು. ಮತ್ತು ಈ ಯೋಜನೆಯ ಮೂಲಕ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಪ್ರಕಾರ, ನೀವು ರೂ. 1.50 ಲಕ್ಷ ತೆರಿಗೆ ವಿನಾಯಿತಿ ಪಡೆಯಬಹುದು. ಠೇವಣಿಯ ಮೇಲೆ ಗಳಿಸಿದ ಬಡ್ಡಿಗೆ ನೀವು ತೆರಿಗೆ ಪಾವತಿಸಬೇಕಾಗಿಲ್ಲ. ವಾರ್ಷಿಕ ಆಧಾರದ ಮೇಲೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಮೆಚ್ಯೂರಿಟಿಯ ನಂತರ ನೀವು ಪಡೆಯುವ ಬಡ್ಡಿ ಕೂಡ ತೆರಿಗೆ ಮುಕ್ತವಾಗಿರುತ್ತದೆ.