ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


3 ನೇ ಮಹಾಯುದ್ಧದ ಭೀತಿ : ಇಸ್ರೇಲ್ ಮೇಲೆ ದಾಳಿಗೆ ಇರಾನ್, ಯೆಮೆನ್, ಸಿರಿಯಾ ಮತ್ತು ಇರಾಕ್ ಸಜ್ಜು

Posted by Vidyamaana on 2024-04-14 12:55:15 |

Share: | | | | |


3 ನೇ ಮಹಾಯುದ್ಧದ ಭೀತಿ : ಇಸ್ರೇಲ್ ಮೇಲೆ ದಾಳಿಗೆ ಇರಾನ್, ಯೆಮೆನ್, ಸಿರಿಯಾ ಮತ್ತು ಇರಾಕ್ ಸಜ್ಜು

ಇಸ್ರೇಲ್ : ಇಂದು ಮುಂಜಾನೆ ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿಯು ಮೂರನೇ ಮಹಾಯುದ್ಧದ ಗಂಟೆಯನ್ನು ಬಾರಿಸಿದೆ. ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ, ಇರಾನ್ ಭಾನುವಾರ ಮುಂಜಾನೆ ಇಸ್ರೇಲ್ ಮೇಲೆ ತೀವ್ರ ದಾಳಿ ನಡೆಸಿತು. ಈ ಸಮಯದಲ್ಲಿ, ಇರಾನ್ ಇಸ್ರೇಲ್ ಮೇಲೆ ನೂರಾರು ಡ್ರೋನ್ಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಕೋಲಾಹಲವನ್ನು ಸೃಷ್ಟಿಸಿತು.ಇಂದು ಮುಂಜಾನೆ, ಇರಾನ್ ಮತ್ತು ಯೆಮೆನ್, ಸಿರಿಯಾ ಮತ್ತು ಇರಾಕ್ನ ಅನುಕಂಪ ಹೊಂದಿರುವವರು ಇಸ್ರೇಲ್ನಲ್ಲಿನ ಮಿಲಿಟರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು. ಸಂಪೂರ್ಣ ದಾಳಿಯಿಂದ ಇಸ್ರೇಲ್ ಆಘಾತಕ್ಕೊಳಗಾಗಿದೆ. ಆದಾಗ್ಯೂ, ಇಸ್ರೇಲಿ ಸೈನ್ಯವು ಈ ಹೆಚ್ಚಿನ ದಾಳಿಗಳನ್ನು ಹಿಮ್ಮೆಟ್ಟಿಸಿತು. ಇರಾನ್ ಸೇರಿದಂತೆ ಇತರ ದೇಶಗಳ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಲು ಯುಎಸ್ ಇಸ್ರೇಲ್ಗೆ ಸಹಾಯ ಮಾಡಿತು.

ಬಿಜೆಪಿ ಮುಖಂಡ ದೇವರಾಜೇಗೌಡ ಬಿಟ್ಟರೆ ಬೇರೆ ಯಾರಿಗೂ ಪೆನ್ ಡ್ರೈವ್ ಕೊಟ್ಟಿಲ್ಲ:ಮಾಜಿ ಕಾರು ಚಾಲಕ ವಿಡಿಯೋ ಬಿಡುಗಡೆ

Posted by Vidyamaana on 2024-04-30 16:46:35 |

Share: | | | | |


ಬಿಜೆಪಿ ಮುಖಂಡ ದೇವರಾಜೇಗೌಡ ಬಿಟ್ಟರೆ ಬೇರೆ ಯಾರಿಗೂ ಪೆನ್ ಡ್ರೈವ್ ಕೊಟ್ಟಿಲ್ಲ:ಮಾಜಿ ಕಾರು ಚಾಲಕ ವಿಡಿಯೋ ಬಿಡುಗಡೆ

ಹಾಸನ, ಎ.30: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್‌ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದು ತಾನು ವಿಡಿಯೋ ಇದ್ದ ಪೆನ್ ಡ್ರೈವನ್ನು ಬಿಜೆಪಿ ಮುಖಂಡ ದೇವರಾಜೇ ಗೌಡ ಬಿಟ್ಟರೆ ಬೇರೆ ಯಾರಿಗೂ ಕೊಟ್ಟಿಲ್ಲ. ಕಾಂಗ್ರೆಸ್ನವರಿಗೆ ನಾನೇ ಕೊಟ್ಟಿದ್ದಾಗಿ ಸುದ್ದಿ ಹಬ್ಬಿಸುತ್ತಿದ್ದಾರೆ. ಅದೆಲ್ಲ ಸುಳ್ಳು ಎಂದು ಹೇಳಿದ್ದಾರೆ. 


ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ್ದು, ಅದರಲ್ಲಿ ಕೆಲವು ವಿಚಾರಗಳನ್ನು ಹೇಳಿಕೊಂಡಿದ್ದಾನೆ. ‘ಹದಿನೈದು ವರ್ಷದಿಂದ ಪ್ರಜ್ವಲ್‌ ರೇವಣ್ಣ ಹಾಗೂ ಅವರ ಫ್ಯಾಮಿಲಿಗೆ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದೀನಿ. ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದೀನಿ. ನನ್ನ ಜಮೀನು ಬರೆಸಿಕೊಂಡು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ರು, ಹಿಂಸೆ ಕೊಟ್ಟಿದ್ದರು. ಆದ್ದರಿಂದ ಕೆಲಸ ಬಿಟ್ಟು ಅವರ ಮನೆಯಿಂದ ದೂರವಾಗಿದ್ದೆ. ಸೇಡು ತೀರಿಸಿಕೊಳ್ಳಲು ಕಾನೂನು ಹೋರಾಟಕ್ಕೆ ಮುಂದಾಗಿದ್ದೆ

ಮಂಗಳೂರು: ಬಕ್ರೀದ್ ಹಿನ್ನಲೆ

Posted by Vidyamaana on 2023-06-27 05:29:56 |

Share: | | | | |


ಮಂಗಳೂರು: ಬಕ್ರೀದ್ ಹಿನ್ನಲೆ

ದ.ಕ.ಜಿಲ್ಲೆಯಲ್ಲಿ ಜೂ.29ರಂದು ನಡೆಯುವ ಬಕ್ರೀದ್ ಹಬ್ಬದ ಆಚರಣೆಯ ಸಂದರ್ಭ ಜಾನುವಾರುಗಳನ್ನು ಅನಧಿಕೃತವಾಗಿ ವಧೆ ಮಾಡುವ ಮತ್ತು ಜಾನುವಾರುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವುದನ್ನು ತಡೆಗಟ್ಟುವ ಸಲುವಾಗಿ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಯಿತು.ಎಲ್ಲಾ ಇಲಾಖೆಗಳ ಸಮನ್ವಯ ಸಾಧಿಸಿ ಮುಂಬರುವ ಬಕ್ರೀದ್ ಹಬ್ಬದ ಸಂಧರ್ಭದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಭಂಗ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಅನಧಿಕೃತ ಜಾನುವಾರು ಸಾಗಾಣಿಕೆ ಕಂಡುಬಂದಲ್ಲಿ ಸಾರ್ವಜನಿಕರು 112ಕ್ಕೆ ಕರೆ ಮಾಡಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಮತ್ತು ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು


ಜಾನುವಾರು ಸಾಗಾಣಿಕೆ ಪರವಾನಿಗೆ ಅನ್ ಲೈನ್ ತಂತ್ರಾಂಶದ ಮಾಹಿತಿಯನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಂಡು ಅನಧಿಕೃತ ಜಾನುವಾರು ಸಾಗಾಣಿಕೆ ತಡೆಗಟ್ಟಲು ಸೂಚಿಸಿದರು.


ಸಭೆಯಲ್ಲಿ ಪೊಲೀಸ್ ಉಪಾಯುಕ್ತ ಅಂಶುಕುಮಾರ್, ಜಿಲ್ಲಾ ಎಸ್ಪಿ ಸಿಬಿ ರಿಷ್ಯಂತ್, ಮಹಾನಗರ ಪಾಲಿಕೆ ಆಯುಕ್ತ ರವಿಕುಮಾರ್ ಎಂ, ದ.ಕ.ಜಿಪಂ ಉಪ ಕಾರ್ಯದರ್ಶಿ ಕೆ. ಆನಂದ ಕುಮಾರ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಎನ್., ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಡಾ. ರವಿ ಡಿ.ಆರ್ ಮತ್ತಿತರರು ಉಪಸ್ಥಿತರಿದ್ದರು.

ತುಂಬಿದ ಸಭೆಯಲ್ಲಿ ಮಹಿಳೆಯ ತುಟಿಗೆ ಚುಂಬಿಸಲು ಯತ್ನಿಸಿದ ವಿದೇಶಾಂಗ ಸಚಿವ - ವೈರಲ್ ಆಯ್ತು ವಿಡಿಯೋ..

Posted by Vidyamaana on 2023-11-06 21:00:45 |

Share: | | | | |


ತುಂಬಿದ ಸಭೆಯಲ್ಲಿ ಮಹಿಳೆಯ ತುಟಿಗೆ ಚುಂಬಿಸಲು ಯತ್ನಿಸಿದ ವಿದೇಶಾಂಗ ಸಚಿವ - ವೈರಲ್ ಆಯ್ತು  ವಿಡಿಯೋ..

       ದೇಶ ಒಂದರ ವಿದೇಶಾಂಗ ಸಚಿವರು ಅಂದರೆ ಅದು ಅತ್ಯಂತ ಜವಾಬ್ದಾರಿಯುತ ಸ್ಥಾನ. ಆದರೆ ಇದೀಗ ಅಂತಹದ್ದೊಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ವಿದೇಶಾಂಗ ಸಚಿವರು ತುಂಬಿದ ಸಭೆಯಲ್ಲಿ ಮಹಿಳೆಯೊಬ್ಬರಿಗೆ ಕಿಸ್ ಮಾಡಲು ಪ್ರಯತ್ನಿಸಿದ್ದಾರೆ.ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ

ಜರ್ಮನಿಯಲ್ಲಿ ನಡೆದ ಯುರೋಪಿಯನ್ ಯೂನಿಯನ್ ಸಮ್ಮೇಳನದ ಗ್ರೂಪ್ ಫೋಟೋ ತೆಗೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.ತುಂಬಿದ ಸಭೆಯಲ್ಲಿ ಪೋಲಿ ಸಚಿವನ ಕಿಸ್ ಮಸ್‌!


ಹೌದು, ಜರ್ಮನಿಯಲ್ಲಿ ನಡೆದ ಯುರೋಪಿಯನ್ ಯೂನಿಯನ್ ಸಮ್ಮೇಳನದ ಗ್ರೂಪ್ ಫೋಟೋ

ಸೆಷನ್ ವೇಳೆ ಕ್ರೋವೆಷಿಯಾದ 65 ವರ್ಷದ ಪೋಲಿ ವಿದೇಶಾಂಗ ಸಚಿವ ಗೋರ್ಡನ್ ಗ್ರೀಕ್ ರಾಡ್ ಮನ್ತ ನ್ನ ಪಕ್ಕದಲ್ಲಿ ನಿಂತಿದ್ದ ಜರ್ಮನಿಯ ಮಹಿಳಾ ಪ್ರತಿನಿಧಿ ಅನ್ನಾಲೆನ್ ಬೇರ್ ಬಾಕ್ ಎಂಬವರಿಗೆ ಕಿಸ್ ಮಾಡಲು ಪ್ರಯತ್ನಿಸಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಈ ವಿಚಾರ ಬಿಸಿಬಿಸಿ ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ.

ನಗರ ಸಭೆ ಕಚೇರಿ ದುರಸ್ತಿಗೆ ಬೇರಿನ್ಯಾವ ಅನುದಾನ ಬಳಸ್ಬೇಕು

Posted by Vidyamaana on 2023-08-30 11:25:42 |

Share: | | | | |


ನಗರ ಸಭೆ ಕಚೇರಿ ದುರಸ್ತಿಗೆ ಬೇರಿನ್ಯಾವ ಅನುದಾನ ಬಳಸ್ಬೇಕು

ಪುತ್ತೂರು: ಶಾಸಕರ ಕಚೇರಿ ನಗರಸಭೆಯ ಕಟ್ಟಡವಾಗಿದ್ದು, ಅದನ್ನು ದುರಸ್ಥಿ ಪಡಿಸಲು ನಗರಸಭೆಯ ಅನುದಾನವನ್ನು ಬಳಸಬೇಕಲ್ಲದೆ ಬೇರೆ ಯಾವ ಅನುದಾನವನ್ನು ಬಳಕೆ ಮಾಡಬಹುದು? ಅದು ಶಾಸಕರ ಕಚೇರಿ ಹೊರತು ಅಶೋಕ್ ಕುಮಾರ್ ರೈ ಅವರ ವೈಯುಕ್ತಿಕ ಕಚೇರಿಯಲ್ಲ. ಮುಂದಿನ ದಿನ ಯಾರೆ ಶಾಸಕರಾಗಲಿ ಅವರಿಗೆ ಈ ಕಚೇರಿ ಉಪಯೋಗಕ್ಕೆ ಬರುತ್ತದೆ ಎಂದ ಬಿಜೆಪಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ನಡೆದ ಪತ್ರಿಕಾಗೋಷ್ಠಿಗೆ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು, ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಐಷಾರಮಿ ಕಚೇರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು ತೆರಿಗೆಯ ದುರುಪಯೋಗವಲ್ಲವೇ ಎಂದು ಪ್ರಶ್ನಿಸಿದ್ದಾರೆ.ಅಶೋಕ್ ಕುಮಾರ್ ರೈ ಅವರು ಶಾಸಕರಾಗಿ ಮೂರೇ ತಿಂಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳನ್ನು ಹಾಕಿಕೊಂಡು ಜನಪ್ರಿಯರಾಗುತ್ತಿದ್ದಾರೆ. ಅವರ ಜನಪ್ರಿಯತೆ ಸಹಿಸಲಾಗದೆ ಹೊಟ್ಟೆಕಿಚ್ಚಿನಿಂದ ಮಾಜಿ ಶಾಸಕ ಸಂಜೀವ ಮಠಂದೂರು ಶಾಸಕರ ನೂತನ ಕಚೇರಿ ಕುರಿತು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇವತ್ತು ಮಾಜಿ ಶಾಸಕರಿಗೆ ಕೆಲಸವಿಲ್ಲ. ಕಳೆದ ಚುನಾವಣೆಯಲ್ಲಿ ಅವರಿಗೆ ಟಿಕೇಟ್ ಕೊಡಲಿಲ್ಲ. ಇವತ್ತು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಬೇರೆ ವಿಚಾರ ತೆಗೆದು ಕೊಂಡು ಮಾದ್ಯಮದ ಮುಂದೆ ಬರುತ್ತಿದ್ದಾರೆ. ಅಶೋಕ್ ಕುಮಾರ್ ರೈ ಅವರು ತಮ್ಮನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಲ್ಲಿ ಸಭೆ ನಡೆಸಲು ಅನುಕೂಲವಾಗುವ ವ್ಯವಸ್ಥಿತವಾದ ಕಚೇರಿ ಇರಬೇಕೆಂಬ ಸುದುದ್ದೇಶದಿಂದ ಸುಸಜ್ಜಿತ ಕಚೇರಿ ನಿರ್ಮಿಸುವಂತೆ ಜಿಲ್ಲಾಡಳಿತದಲ್ಲಿ ಕೇಳಿಕೊಂಡಂತೆ ಹಿಂದಿನ ಪುರಸಭಾ ಕಟ್ಟಡದಲ್ಲಿ ನೂತನ ಕಚೇರಿ ನಿರ್ಮಾಣ ಮಾಡಲಾಗಿದೆ. ಆದರೆ ಈ ವಿಷಯವನ್ನು ತೆಗೆದುಕೊಂಡು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದಿನ ಕಚೇರಿ ಗೂಡಂಗಡಿ:

ಹಿಂದಿನ ಶಾಸಕ ಸಂಜೀವ ಮಠಂದೂರು ಅವರ ಮಿನಿ ವಿಧಾನ ಸೌಧದಲ್ಲಿರುವ ಕಚೇರಿ ಗೂಡಂಗಡಿಯಂತೆ ಇತ್ತು. ಈ ಕಚೇರಿಯಲ್ಲಿ ಸಾರ್ವಜನಿಕರಿಗೆ ಬಂದು ಭೇಟಿಯಾಗಿ ಮಾತನಾಡಲು ಸರಿಯಾದ ಸ್ಥಳಾವಕಾಶವಿರಲಿಲ್ಲ. ಅವರಿಗೆ ಸಾರ್ವಜನಿಕರಿಗೆ ತನ್ನ ಕಚೇರಿಯಿಂದ ಅನಾನುಕೂಲ ಆಗುತ್ತದೆ ಎಂಬ ಕಾಳಜಿಯೂ ಇರಲಿಲ್ಲ. ಆದರ ಈಗಿನ ಶಾಸಕರು ಸಾರ್ವಜನಿಕರಿಗಾಗಿ ವಿಶಾಲವಾದ ಕಚೇರಿ ಮಾಡಿಕೊಂಡಿದ್ದಾರೆ. ಎಂದು ಹೆಚ್.ಮಹಮ್ಮದ್ ಆಲಿ ಹೇಳಿದರು .

ಸಂಜೀವ ಮಠಂದೂರು ಅವರಿಂದ ಕೋಟ್ಯಾಂತರ ರೂಪಾಯಿ ದುರುಪಯೋಗ:

ಮಾಜಿ ಶಾಸಕ ಸಂಜೀವ ಮಠಂದೂರು ಅವರ ಅವಧಿಯಲ್ಲಿ ಸರಕಾರದ ವಿವಿಧ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ದುರುಪಯೋಗ ಆಗಿದೆ. ನಗರಸಭೆಗೆ ಸುಸಜ್ಜಿತ ಕಚೇರಿ ಇದ್ದಾಗಲೂ ಶಾಸಕ ಸಂಜೀವ ಮಠಂದೂರು ಅವರು ಹಿಂದಿನ ಪುರಸಭೆಯ ಕಟ್ಟಡ ಕೆಡವಿದಲ್ಲದೆ ಪಕ್ಕದಲ್ಲಿರುವ ಈಗಿನ ಶಾಸಕರ ಕಚೇರಿ ಕಟ್ಟಡವನ್ನು ಕೆಡವಿ ರೂ.13 ಕೋಟಿ ವೆಚ್ಚದಲ್ಲಿ ಹೊಸ ನಗರಭೆ ಕಚೇರಿ ನಿರ್ಮಿಸಲು ಹೊರಟಿದ್ದರು. ಆಗ ಜನರ ತೆರಿಗೆ ಹಣ ದುರುಪಯೋಗ ಆಗುತ್ತದೆ ಎಂದು ಅವರಿಗೆ ಗೊತ್ತಿರಲಲಿಲ್ಲವೇ? ಪುಡಾ ಕಚೇರಿಯಿಂದ ರೂ.13 ಸಾವಿರ ಬರುವ ಬಾಡಿಗೆ ನಷ್ಟ ಆಗಿದೆ ಎನ್ನುತ್ತಿರುವ ಮಾಜಿ ಶಾಸಕರಿಗೆ ಆ ಕಟ್ಟಡ ಕೆಡವಿದಾಗ ಪುಡಾದ ಬಾಡಿಗೆ, ತಳ ಅಂತಸ್ತಿನಲ್ಲಿರುವ ಹೊಟೇಲ್,ಇನ್ನಿತರ ಉದ್ಯಮದಿಂದ ಬರುವ ಬಾಡಿಗೆ ನಷ್ಟ ಆಗುತ್ತದೆ ಎಂದು ಗೊತ್ತಿರಲಿಲ್ಲವೇ? ನಗರಸಭೆಯ ವಿವಿಧ ಕಡೆಗಳಲ್ಲಿ ಹಲವು ಕಡೆ ಜನರೇ ಇಲ್ಲದಲ್ಲಿಗೆ ಪಾರ್ಕ್ ಮಾಡಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವುದು, ರಸ್ತೆ ಬದಿಯ ಇಂಟರ್ ಲಾಕ್ ತೆರವು ಮಾಡಿ ಡಾಮಾರು ಹಾಕಿಸಿರುವುದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ಮಾರ್ಟ್ ಬಸ್ ತಂಗುದಾಣ ಮಾಡಿರುವುದು, ಕೃಷಿ ಭೂಮಿ ಸಂರಕ್ಷಣೆಗೆ ಒದಗಿಸಲ್ಪಟ್ಟ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ನಿಮ್ಮ ಆಪ್ತರ ಪರಿವರ್ತನ ಭೂಮಿಗೆ ತಡೆಗೋಡೆ ಕಟ್ಟಿರುವುದು, ನಗರಸಭೆಯ ಕಚೇರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸುಸಜ್ಜಿತ ಕಚೇರಿಇದ್ದಾಗಲೂ ಬಿಜೆಪಿ ಆಡಳಿತ ಬಂದಾಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಎಸಿ ಅಳವಡಿಸಿ ಕಚೇರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು, ಮುಕ್ರಂಪಾಡಿಯಲ್ಲಿ ರೂ.50 ಲಕ್ಷದಲ್ಲಿ ಆಗುವ ಸೇತುವೆಗೆ ರೂ.1.75 ಕೋಟಿ ಖರ್ಚು ತೋರಿಸಿರುವುದು, ಇರ್ದೆ ಗ್ರಾಮದ ಬೈಲಾಡಿ ಗೋಪಾಲಕೃಷ್ಣ ದೇವಾಲಯದಿಂದ ಬೆಂದ್ರತೀರ್ಥಕ್ಕೆ ಹೋಗಲು ತೂಗು ಸೇತುವೆ ನಿರ್ಮಾಣ ಮಾಡುವ ಬದಲು ಖಾಸಗಿ ತೋಟಕ್ಕೆ ಹೋಗಲು ಸೇತುವೆ ಮಾಡಿರುವುದು, ಇದೆ ಗ್ರಾಮದ ಕೆಲ್ಲಾಡಿ ಎಂಬಲ್ಲಿ 500 ಮೀಟರ್ ಅಂತರದಲ್ಲಿ ರಸ್ತೆ ಸಂಪರ್ಕ ಇಲ್ಲದ ಗುಡ್ಡೆಗ ರೂ. 6.50 ಕೋಟಿ ಸೇತುವೆ ನಿರ್ಮಾಣ ಮಾಡಿರುವುದು ಯಾರ ತೆರಿಗೆಯ ಹಣದಲ್ಲಿ ಎಂದು ಪ್ರಶ್ನಿಸಿದ ಮಹಮ್ಮದ್ ಆಲಿಯವರು ಇದೆಲ್ಲ ದುರುಪಯೋಗವಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇವೆಲ್ಲ ಶೇ.40 ಕಮಿಷನ್ ಆಸೆಗಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಮಾಡಿದ ದುರುಪಯೋಗ ಎಂದರು. ಇವತ್ತು ಮಾಜಿ ಪುರಸಭೆ ಕಟ್ಟಡದಲ್ಲಿ ಶಾಸಕರ ಕಚೇರಿ ನಿರ್ಮಾಣಗೊಂಡಿದ್ದರಿಂದ ಅಲ್ಲಿ ಕಟ್ಟಡ ಕೆಡವುವ ಬಿಜೆಪಿಯ ಹುನ್ನಾರಕ್ಕೆ ತಡೆ ಹಿಡಿಯಲಾಗಿದೆ. ಮುಂದೆಯೂ ಅಲ್ಲಿ ನಗರಸಭೆ ಕಚೇರಿ ನಿರ್ಮಾಣ ಮಾಡಲುನಾವು ಬಿಡುವುದಿಲ್ಲ ಎಂದು ಮಹಮ್ಮದ್ ಆಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಟ‌ ಪಾಯಸ್, ಉಪಾಧ್ಯಕ್ಷ ಮಂಜುನಾಥ್ ಕೆಮ್ಮಾಯಿ ಉಪಸ್ಥಿತರಿದ್ದರು.

ಪುತ್ತೂರು KSRTCಗೆ ನವ ಚೈತನ್ಯ ನೀಡಿದ ಶಕ್ತಿ ಯೋಜನೆ

Posted by Vidyamaana on 2023-07-11 16:05:00 |

Share: | | | | |


ಪುತ್ತೂರು KSRTCಗೆ ನವ ಚೈತನ್ಯ ನೀಡಿದ ಶಕ್ತಿ ಯೋಜನೆ

ಪುತ್ತೂರು: ಶಕ್ತಿ ಯೋಜನೆ ಕಾರ್ಯರೂಪಕ್ಕೆ ಬಂದ ಮಹಿಳಾ ಪ್ರಯಾಣಿಕರ ಸಂಖ್ಯೆಯಷ್ಟೇ ಹೆಚ್ಚಳಗೊಂಡದ್ದು ಅಲ್ಲ, ಕೆ.ಎಸ್.ಆರ್.ಟಿ.ಸಿ.ಯ ಆದಾಯವೂ ಹೆಚ್ಚಳಗೊಂಡಿದೆ. ಕೆ.ಎಸ್.ಆರ್.ಟಿ.ಸಿ. ಪುತ್ತೂರು ವಿಭಾಗವೂ ಹಿಂದಿನ ತನ್ನ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಕಳೆದೊಂದು ತಿಂಗಳಿನಲ್ಲಿ ಪಡೆದುಕೊಂಡಿದೆ.

ಸಾವಿರಾರು ಬಸ್ ಪಾಸ್ ನೀಡಿದರೂ, ಲಕ್ಷಾಂತರ ಪ್ರಯಾಣಿಕರು ಓಡಾಡಿದರೂ ಕೆ.ಎಸ್.ಆರ್.ಟಿ.ಸಿ. ಪ್ರತಿವರ್ಷ ನಷ್ಟದಲ್ಲಿಯೇ ಕಾರ್ಯನಿರ್ವಹಿಸುತ್ತಿತ್ತು. ಹಾಗಾಗಿ ಪ್ರತಿವರ್ಷ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳ ಮೇಲೆ ಖರ್ಚು ಸರಿದೂಗಿಸುವ ಒತ್ತಡವೂ ಇತ್ತು. ಆದರೆ ರಾಜ್ಯ ಸರ್ಕಾರ ಚುನಾವಣೆಗೆ ಮೊದಲು ನೀಡಿದ ಭರವಸೆಯಂತೆ, ಶಕ್ತಿ ಯೋಜನೆಯನ್ನು ಜಾರಿಗೆ ತಂದ ಬಳಿಕ ಹಲವು ಬದಲಾವಣೆಗಳಿಗೆ ಕಾರಣವಾಗಿದೆ.

ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ಬಸ್ ಟಿಕೇಟ್ ಉಚಿತವಾಗಿ ನೀಡಿದ್ದು, ಇದು ಮಹಿಳಾ ಪ್ರಯಾಣಿಕರು ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿಯೇ ಓಡಾಡುವಂತೆ ಮಾಡಿದೆ. ಈ ಹಿಂದೆ ಓಡಾಡುತ್ತಿದ್ದ ಮಹಿಳಾ ಪ್ರಯಾಣಿಕರಿಗಿಂತಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಬಸ್ ಪ್ರಯಾಣವನ್ನು ಅವಲಂಭಿಸಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಲೆಕ್ಕಾಚಾರದ ಪ್ರಕಾರ ದಿನಕ್ಕೆ ಸರಾಸರಿ 30 ಸಾವಿರದಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.


ಶಕ್ತಿ ಯೋಜನೆ ಮೊದಲು – ನಂತರ:

ಶಕ್ತಿ ಯೋಜನೆಯನ್ನು ಜಾರಿಗೆ ತರುವ ಮೊದಲು ದಿನವೊಂದಕ್ಕೆ ಸರಾಸರಿ 1 ಲಕ್ಷದ 60 ಸಾವಿರದಷ್ಟು ಮಂದಿ ಪ್ರಯಾಣಿಸುತ್ತಿದ್ದರು. ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಈ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ದಿನವೊಂದಕ್ಕೆ 30 ಸಾವಿರದಷ್ಟು ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದು, 1 ಲಕ್ಷದ 90 ಸಾವಿರದಷ್ಟು ಪ್ರಯಾಣಿಕರು ಈಗ ದಿನನಿತ್ಯ ಪ್ರಯಾಣಿಸುತ್ತಿದ್ದಾರೆ. ಅಂದರೆ ದಿನವೊಂದಕ್ಕೆ ಸುಮಾರು 10ರಿಂದ 12 ಲಕ್ಷ ರೂ.ನಷ್ಟು ಆದಾಯ ಹೆಚ್ಚಳಗೊಂಡಿದೆ.


5 ಡಿಪೋ:

ಕೆ.ಎಸ್.ಆರ್.ಟಿ.ಸಿ. ಪುತ್ತೂರು ವಿಭಾಗದ ಅಡಿಯಲ್ಲಿ 5 ಡಿಪೋಗಳು ಬರುತ್ತವೆ. ಇದರಲ್ಲಿ ಪುತ್ತೂರು ಸೇರಿದಂತೆ, ಬಿ.ಸಿ.ರೋಡ್, ಧರ್ಮಸ್ಥಳ, ಸುಳ್ಯ, ಮಡಿಕೇರಿ ಡಿಪೋಗಳು ಒಳಗೊಂಡಿವೆ. ಈ 5 ಡಿಪೋಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಳಗೊಂಡಿದ್ದು, ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಕೊಂಚ ನಿಟ್ಟುಸಿರುಬಿಡುವಂತೆ ಮಾಡಿದೆ.


ಒಂದು ತಿಂಗಳ ಲೆಕ್ಕಾಚಾರ:

ಶಕ್ತಿ ಯೋಜನೆಯನ್ನು ಜಾರಿಗೆ ತಂದು ಹೆಚ್ಚು – ಕಡಿಮೆ ಒಂದು ತಿಂಗಳಾಗಿದೆ. ಈ ಒಂದು ತಿಂಗಳ ಲೆಕ್ಕಾಚಾರ ಹೀಗಿತ್ತು. ಮುಂದೆ ಹೇಗಿರಬಹುದು ಎನ್ನುವ ಊಹೆ ಇಲ್ಲ. ಆದರೆ ಸಂಸ್ಥೆ ಹೆಚ್ಚಿನ ಆದಾಯವನ್ನು ಪಡೆಯುವಂತಾಗಿರುವುದು ಅಧಿಕಾರಿಗಳಿಗೆ ಸಮಾಧಾನದ ಸಂಗತಿ.


ಕೇಂದ್ರ ಕಚೇರಿಯಿಂದ ಕ್ಲೈಮ್:

ಪ್ರತಿ ತಿಂಗಳ ಲೆಕ್ಕಾಚಾರವನ್ನು ಪುತ್ತೂರು ವಿಭಾಗದಿಂದ ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗುತ್ತದೆ. ಕೇಂದ್ರ ಕಚೇರಿಯ ಅಧಿಕಾರಿಗಳು ರಾಜ್ಯದ ಒಟ್ಟು ಲೆಕ್ಕಾಚಾರವನ್ನು ತೆಗೆದುಕೊಂಡು, ರಾಜ್ಯ ಸರಕಾರಕ್ಕೆ ಸಲ್ಲಿಸುತ್ತಾರೆ. ಬಳಿಕ ರಾಜ್ಯ ಸರ್ಕಾರ ಆ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಪ್ರತಿ ತಿಂಗಳಿಗೊಮ್ಮೆಯಂತೆ ರಾಜ್ಯ ಸರ್ಕಾರಕ್ಕೆ ಕೆ.ಎಸ್.ಆರ್.ಟಿ.ಸಿ. ಕ್ಲೈಮ್ ಮಾಡಬೇಕಾಗುತ್ತದೆ.


ಲಾಭದಾಯಕವೇ?

ಶಕ್ತಿ ಯೋಜನೆಯನ್ನು ಜಾರಿಗೆ ತಂದ ಬಳಿಕ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ಆದಾಯ ಹೆಚ್ಚಳಗೊಂಡಿದ್ದು ನಿಜ. ಆದರೆ ಸಂಸ್ಥೆ ಎಷ್ಟರಮಟ್ಟಿಗೆ ಲಾಭದಾಯಕ ಎನ್ನುವ ಮಾಹಿತಿ ಇನ್ನು ಲಭ್ಯವಾಗಿಲ್ಲ. ಶಕ್ತಿ ಯೋಜನೆಯ ಜಾರಿಯ ಬಳಿಕ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್ಸಿನಲ್ಲಿಯೇ ಪ್ರಯಾಣಿಸಲು ಮುಂದೆ ಬಂದಿದ್ದಾರೆ. ಇದು ಒಂದು ರೀತಿಯಲ್ಲಿ ಸಾರಿಗೆ ಬಸ್’ಗಳ ಪ್ರಯಾಣಕ್ಕೆ ಉತ್ತೇಜನ ನೀಡಿದಂತಾಗಿದೆ.


ತಿಂಗಳಿಗೊಮ್ಮೆ ಮಾಹಿತಿ: ಡಿಸಿ ಜಯಕರ ಶೆಟ್ಟಿ

ಶಕ್ತಿ ಯೋಜನೆಯನ್ನು ಜಾರಿಗೆ ತಂದ ಬಳಿಕ ಕೆ.ಎಸ್.ಆರ್.ಟಿ.ಸಿ. ಆದಾಯ ಹೆಚ್ಚಳಗೊಂಡಿದೆ. ಪ್ರತಿ ತಿಂಗಳಿಗೊಮ್ಮೆ ರಾಜ್ಯದ ಪ್ರತಿ ವಿಭಾಗದ ಮಾಹಿತಿಯನ್ನು ಕೇಂದ್ರ ಕಚೇರಿಗೆ ಕಳುಹಿಸಿಕೊಡಬೇಕು. ಮುಂದಿನ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಇಲ್ಲ.

ಜಯಕರ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ, ಪುತ್ತೂರು ವಿಭಾಗ, ಕೆ.ಎಸ್.ಆರ್.ಟಿ.ಸಿ.



Leave a Comment: