ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಸುದ್ದಿಗಳು News

Posted by vidyamaana on 2024-07-22 23:30:36 |

Share: | | | | |


ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ   ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಪುತ್ತೂರು: ಲಾರಿಯೊಂದರ ಟಯರ್ ಜೋಡಣೆ ವೇಳೆ ಟಯ‌ರ್ ರಿಂಗ್ ಚಿಮ್ಮಿ ಟಯರ್ ಸಮೇತ ಎಸೆಯಲ್ಪಟ್ಟ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಜು.22ರಂದು ರಾತ್ರಿ ನಡೆದಿದೆ.

ಲಾರಿಯೊಂದು ಟಯರ್ ಪಂಚರ್ ಆಗಿ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು. ಅದರ ಚಾಲಕ ಕರಾಯಕ್ಕೆ ಹೋಗಿ ಟಯರ್ ಪಂಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯ‌ರ್ ತಂದಿದ್ದರು. ಟಯರ್ ಜೋಡಣೆ ಮಾಡಲು ಕರಾಯದಿಂದಲೇ ಬಂದ ಟಯರ್ ಕಾರ್ಮಿಕ ಜೋಡಣೆ ವೇಳೆ ಟಯರ್‌ನ ರಿಂಗ್ ಹೊರಚಿಮ್ಮಿದ ರಭಸಕ್ಕೆ ಟಯರ್‌ ಸಮೇತ  ಕರಾಯ ಜನತಾ ಕಾಲೋನಿ ಕರೀಂ ರವರ ಮಗ ರಶೀದ್ ತುಸು ದೂರ ಎಸೆಯಲ್ಪಟ್ಟಿದ್ದಾರೆ. ತಕ್ಷಣ ತೀವ್ರ ಗಾಯಗೊಂಡ ಕಾರ್ಮಿಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

 Share: | | | | |


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

Posted by Vidyamaana on 2023-07-23 12:44:06 |

Share: | | | | |


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಮಂಗಳೂರು : ಹವಾಮಾನ ಇಲಾಖೆಯು ಮುಂದಿನ 24 ಗಂಟೆಗಳಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಈ 11 ಜಿಲ್ಲೆಯಲ್ಲಿ ಶಿವಮೊಗ್ಗ ಜಿಲ್ಲೆಯೂ ಸೇರ್ಪಡೆಗೊಂಡಿದೆ.ಬೆಳಗಾವಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಸಂಭವ್ಯವಿದೆ.ಬಾಗಲಕೋಟೆ, ಚಿತ್ರದುರ್ಗ, ಗದಗ ಮತ್ತು ಮೈಸೂರಿನಲ್ಲಿ ಚದುರಿದ ಮಳೆ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ವಿಜಯನಗರ ರಾಯಚೂರು, ಚಾಮರಾಜ್ ನಗರ ಮತ್ತು ಮಂಡ್ಯದಲ್ಲಿ ತುಂತುರು ಮಳೆ ಬೀಳುವ ಸಾಧ್ಯತೆ ಇದೆ. ಕಲ್ಬುರ್ಗಿಯಲ್ಲಿ ಅತಿಸಾಧಾರಣ ಮಳೆ ಬೀಳುವ ಸಂಭವವಿದೆ.


ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಆಗುಂಬೆ, ಹೊಸನಗರದ ಸೊನಾಲೆ, ತ್ರಿಣಿವೆ, ಸುಳಗೋಡು, ಮೇಲಿನ ಬೆಸಿಗೆ, ನಗರ, ಮುಂಬಾರು ತೀರ್ಥಹಳ್ಳಿಯ ಹಾದಿಗಲ್ಲು, ಬಿದರಗೋಡು, ಹೊನ್ನೆತಾಳುವಿನಲ್ಲಿ ಉತ್ತಮ ಮಳೆಯಾಗಿದೆ.ಜಿಲ್ಲೆಯ ಪ್ರಮುಖ ಜಲಾಶಯಗಳ ಮಟ್ಟ

ಚಿಕ್ಕಮಗಳೂರಿನ 10 ಗ್ರಾಮಪಂಚಾಯಿತಿಗಳಲ್ಲಿ ಉತ್ತಮ ಮಳೆತಾಗಿದ್ದು ಇದರಿಂದ ತುಂಗ ಜಲಾಶಯದಲ್ಲಿ ಒಳಹರಿವು ಹೆಚ್ಚಳವಾಗಿದೆ. ನಿನ್ನೆ ರಾತ್ರಿ 35 ಸಾವಿರ ಕ್ಯೈಸೆಕ್ ನೀರು ಹರಿಬರುತ್ತಿದ್ದು ಬೆಳಗಿನ ಜಾವದ ಸಮಯದಲ್ಲಿ ಮಳೆ ಕಡಿಮೆಯಾದ ಕಾರಣ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿತ್ತು.


ಈಗ ಮಳೆ ಹೆಚ್ಚಾದ ಕಾರಣ 40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ತುಂಗ ನದಿಯ ಗಾಜನೂರು ಜಲಾಶಯದಲ್ಲಿ 21 ಗೇಟು ತೆರೆದು ಹರಿಬಿಡಲಾಗುತ್ತಿದೆ.ಅದರಂತೆ ಭದ್ರೆಯ ಒಖಹರಿವು ಹೆಚ್ಚಳವಾಗಿದೆ. 186 ಅಡಿ ಎತ್ತರದ ಜಲಾಶಯದಲ್ಲಿ ಪ್ರಸ್ತುತ 145ಅಡಿ ನೀರು ಸಂಗ್ರಹವಾಗಿದೆ. 12165 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇಷ್ಟು ಹೊತ್ತಿಗೆ ಭದ್ರ ಡ್ಯಾಂ ತುಂಬಿ ಗೇಟ್ ಓಪನ್ ಮಾಡಲಾಗಿತ್ತು. 184 ಅಡಿ ನೀರು ಸಂಗ್ರಹವಾಗಿತ್ತು. ಜು.18, 2022 ರಂದು ಜಲಾಶಯದಿಂದ ನದಿಗೆ ನೀರು ಹರಿಸಲಸಗಿತ್ತು.


ಅದರಂತೆ ಲಿಂಗನ ಮಕ್ಕಿ ಜಲಾಶಯದಲ್ಲಿ 52,374 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1819 ಅಡಿ ಎತ್ತರದ ಜಲಾಶಯದಲ್ಲಿ ಸಧ್ಯಕ್ಕೆ 1770.70 ಅಡಿ ನೀರು ಸಂಗ್ರಹವಾಗಿದೆ. ನಿನ್ನೆ 1767.30 ಅಡಿ ನೀರು ಸಂಗ್ರಹವಾಗಿತ್ತು. ಒಳಹರಿವು ಹೆಚ್ಚಳದಿಂದ ಮೂರು ಅಡಿ ಹೆಚ್ಚಳವಾಗಿದೆ. ಕಳೆದ ವರ್ಷ ಈ ದಿನ 1797 ಅಡಿ ನೀರು ಸಂಗ್ರಹವಾಗಿದೆ.

ಹೆಂಡ್ತಿ ಹೇಳಿದ ಒಂದೇ ಒಂದು ಮಾತಿಗೆ ಡಿಸಿ ಹುದ್ದೆಗೆ ರಾಜೀನಾಮೆ: ಸಂಸದ ಸಸಿಕಾಂತ್ ಸೆಂಥಿಲ್

Posted by Vidyamaana on 2024-09-03 18:02:45 |

Share: | | | | |


ಹೆಂಡ್ತಿ ಹೇಳಿದ ಒಂದೇ ಒಂದು ಮಾತಿಗೆ ಡಿಸಿ ಹುದ್ದೆಗೆ ರಾಜೀನಾಮೆ: ಸಂಸದ ಸಸಿಕಾಂತ್ ಸೆಂಥಿಲ್

ಮಂಗಳೂರಿನಲ್ಲಿ ನಾನು ಜಿಲ್ಲಾಧಿಕಾರಿಯಾಗಿದ್ದಾಗ ಹೆಂಡತಿಯೊಟ್ಟಿಗೆ ಕುಳಿತು ಟಿವಿ ನೋಡುವಾಗ, ಆಕೆ ನೀನು ಕಾಲೇಜು ದಿನಗಳಲ್ಲಿ ಎಷ್ಟು ರೆಬೆಲ್ ಆಗಿದ್ದೆ ನೆನಪಿದೆಯಾ.? ಎಂದು ಹೇಳಿದಳು. ಈ ಒಂದೇ ಒಂದು ಮಾತಿನಿಂದ ರಾತ್ರಿಯಿಡೀ ಮನಸ್ಸಿಗೆ ಭಾರಿ ನೋವುಂಟಾಯಿತು.

ಮರುದಿನ ಬೆಳಗ್ಗೆ ನನ್ನ ಹೆಂಡತಿಗೆ ಡಿಸಿ ಹುದ್ದೆಗೆ ರಾಜೀನಾಮೆ ಕೊಡುವುದಾಗಿ ತಿಳಿಸಿದೆ. ಆಗ 3 ದಿನದಲ್ಲಿ ನನ್ನ ಎಲ್ಲ ಬಾಕಿ ಕೆಲಸ ಮುಕ್ತಾಯಗೊಳಿಸಿ ಐಎಎಸ್ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ತಮಿಳುನಾಡು ಸಂಸದ ಸಸಿಕಾಂತ್ ಸೇಂಥಿಲ್ ತಮ್ಮ ರಾಜೀನಾಮೆ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಮಾಣಿ-ಮೈಸೂರು ಹೆದ್ದಾರಿಯ ಶೇಖಮಲೆಯಲ್ಲಿ ಗುಡ್ಡ ಕುಸಿತ : ಪುತ್ತೂರು-ಸುಳ್ಯ ಸಂಚಾರ ಬಂದ್!

Posted by Vidyamaana on 2024-07-30 13:10:03 |

Share: | | | | |


ಮಾಣಿ-ಮೈಸೂರು ಹೆದ್ದಾರಿಯ ಶೇಖಮಲೆಯಲ್ಲಿ ಗುಡ್ಡ ಕುಸಿತ : ಪುತ್ತೂರು-ಸುಳ್ಯ ಸಂಚಾರ ಬಂದ್!

ಪುತ್ತೂರು : ಮಾಣಿ-ಮೈಸೂರು ಹೆದ್ದಾರಿಯ ಶೇಖಮಲೆ ಶಾಲೆಯ ಬಳಿ ಗುಡ್ಡ ಕುಸಿತ ಸಂಭವಿಸಿದೆ.

ಜಾರ್ಖಂಡಿನಲ್ಲಿ ರಾತ್ರಿ ತಂಗಿದ್ದ ಸ್ಪೇನ್ ಮೂಲದ ಬ್ಲಾಗರ್ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ವಿಡಿಯೋ ಮಾಡಿ ನೋವು ಹಂಚಿಕೊಂಡ ಯುವತಿ

Posted by Vidyamaana on 2024-03-12 07:37:45 |

Share: | | | | |


ಜಾರ್ಖಂಡಿನಲ್ಲಿ ರಾತ್ರಿ ತಂಗಿದ್ದ ಸ್ಪೇನ್ ಮೂಲದ ಬ್ಲಾಗರ್ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ  ವಿಡಿಯೋ ಮಾಡಿ ನೋವು ಹಂಚಿಕೊಂಡ ಯುವತಿ

ನವದೆಹಲಿ, ಮಾ.12: ಬೈಕಿನಲ್ಲಿ ವಿಶ್ವ ಪರ್ಯಟನೆ ಹೊರಟಿದ್ದ ಸ್ಪೈನ್ ಮೂಲದ ಬ್ಲಾಗರ್ ಯುವತಿಯನ್ನು ಜಾರ್ಖಂಡಿನಲ್ಲಿ ಏಳು ಜನರು ಸೇರಿ ಸಾಮೂಹಿಕ ಅತ್ಯಾಚಾರಗೈದ ಘಟನೆ ನಡೆದಿದ್ದು, ಘಟನೆ ಸಂಬಂಧಿಸಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಯುವತಿ ತನ್ನ ಮೇಲಾದ ಹಲ್ಲೆ, ಅತ್ಯಾಚಾರ ಕೃತ್ಯದ ಬಗ್ಗೆ ವಿಡಿಯೋ ಮಾಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಕುಂದು ಬಂದಿದೆ.


28 ವರ್ಷದ ಯುವತಿ ಮತ್ತು ಆಕೆಯ ಬಾಯ್ ಫ್ರೆಂಡ್ ಜೊತೆಯಾಗಿ ಕಳೆದ ಆರು ತಿಂಗಳಿನಿಂದ ಭಾರತದಲ್ಲಿ ಪ್ರತ್ಯೇಕ ದ್ವಿಚಕ್ರ ವಾಹನಗಳಲ್ಲಿ ಸುತ್ತಾಡಿದ್ದರು. ಮಾ.2ರಂದು ಜಾರ್ಖಂಡ್ ರಾಜಧಾನಿ ರಾಂಚಿಯಿಂದ 300 ಕಿಮೀ ದೂರದ ದುಮ್ಕಾ ಜಿಲ್ಲೆಯ ಕುರುಮಹತ್ ಎಂಬಲ್ಲಿ ರಾತ್ರಿ ತಂಗಿದ್ದರು. ಸಂಜೆಯ ವೇಳೆಗೆ ಕಾಡು ಆವರಿಸಿದ ಜಾಗದಲ್ಲಿ ರಾತ್ರಿ ತಂಗಲು ಟೆಂಟ್ ಹಾಕಿದ್ದರು. 7.30ರ ವೇಳೆಗೆ ಹೊರಗೆ ಇಬ್ಬರು ಕಾಣಿಸಿಕೊಂಡಿದ್ದು ಆನಂತರ ಮೊಬೈಲಿನಲ್ಲಿ ಮಾತನಾಡುತ್ತಲೇ ಮತ್ತೆ ಐವರನ್ನು ಸ್ಥಳಕ್ಕೆ ಕರೆಸಿದ್ದಾರೆ. ಆನಂತರ, ಸ್ಥಳೀಯ ಭಾಷೆ ಮತ್ತು ನಡುವೆ ಇಂಗ್ಲಿಷ್ ಶಬ್ದಗಳನ್ನು ಮಾತನಾಡುತ್ತ ಹತ್ತಿರ ಬಂದಿದ್ದು ಜಗಳ ಶುರು ಮಾಡಿದ್ದಾರೆ.  ಯುವತಿಯ ಬಾಯ್ ಫ್ರೆಂಡ್ ಮೇಲೆ ಹಲ್ಲೆಗೈದು ಕಟ್ಟಿ ಹಾಕಿದ್ದಾರೆ. ನಂತರ, ಯುವತಿ ಮೇಲೂ ಹಲ್ಲೆಗೈದು ಸರಣಿಯಾಗಿ ಒಬ್ಬರ ಮೇಲೆ ಮತ್ತೊಬ್ಬರಂತೆ ಅತ್ಯಾಚಾರ ನಡೆಸಿದ್ದಾರೆ. 7.30ರಿಂದ ಹತ್ತು ಗಂಟೆಯ ವರೆಗೂ ಕೃತ್ಯ ಮುಂದುವರಿಸಿದ್ದಾರೆ. ಬಳಿಕ ಯುವಕರು ಅಲ್ಲಿಂದ ಬಿಟ್ಟು ಹೋಗಿದ್ದಾರೆ. ವಿದೇಶಿಗರು ಬಳಿಕ ನೇರವಾಗಿ ಸ್ಥಳೀಯ ಹನ್ಸಿದಿಯಾ ಠಾಣೆಗೆ ತೆರಳಿ ದೂರು ನೀಡಿದ್ದು, ತಡರಾತ್ರಿ ಪೊಲೀಸರು ಯುವತಿಯ ಹೇಳಿಕೆ ದಾಖಲು ಮಾಡಿದ್ದಾರೆ. ಕೃತ್ಯದ ಬಗ್ಗೆ ಯುವತಿ ಬಳಿಕ ವಿಡಿಯೋ ಮಾಡಿದ್ದು, ತನಗಾದ ಹಲ್ಲೆ, ಅತ್ಯಾಚಾರವನ್ನು ಹೇಳಿಕೊಂಡಿದ್ದಾಳೆ. ಯುವಕರು ಕುಡಿತದ ನಶೆಯಲ್ಲಿದ್ದರು. ಅಲ್ಲದೆ, ಕೃತ್ಯದ ಬಳಿಕ ತಮ್ಮಲ್ಲಿದ್ದ ಸ್ವಿಸ್ ಚೂರಿ, ವಾಚ್, ಪ್ಲಾಟಿನಂ ರಿಂಗ್, ಕಿವಿಯೋಲೆ, ಬ್ಲಾಕ್ ಪರ್ಸ್, ಕ್ರೆಡಿಟ್ ಕಾರ್ಡ್, 11 ಸಾವಿರ ರೂ. ನಗದು, 300 ಯುಎಸ್ ಡಾಲರ್ ಕರೆನ್ಸಿಯನ್ನೂ ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಳುಭಾರತದ ಜನರು ಒಳ್ಳೆಯವರು


ಅತ್ಯಾಚಾರ, ಹಲ್ಲೆ ಘಟನೆಯಾದರೂ ಆಕೆ ತನ್ನ ಬೈಕ್ ಸುತ್ತಾಟವನ್ನು ನಿಲ್ಲಿಸಿಲ್ಲ. ಯುವತಿ ಬಿಹಾರ ಮೂಲಕ ನೇಪಾಳ ತಲುಪಿದ್ದು, ಅಲ್ಲಿ ತಲುಪಿದ ಕೂಡಲೇ ಮತ್ತೊಂದು ವಿಡಿಯೋ ಮಾಡಿದ್ದಾಳೆ. ನಾವು ಭಾರತದಲ್ಲಿ ಆರು ತಿಂಗಳಲ್ಲಿ 20 ಸಾವಿರ ಕಿಮೀ ಸುತ್ತಾಡಿದ್ದೇವೆ. ಭಾರತದ ಜನರು ಒಳ್ಳೆಯವರು. ನಮಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಕೆಲವು ಕ್ರಿಮಿನಲ್ ಗಳು ಹೊರತುಪಡಿಸಿ ಉಳಿದೆಲ್ಲ ಕಡೆ ಜನ ಒಳ್ಳೆಯವರಿದ್ದಾರೆ. ನಾವು ಅಲ್ಲಿನ ಪರಿಸರ ಒಳ್ಳೆಯದಾಗಿತ್ತು ಎಂದು ದುಮ್ಕಾ ಜಿಲ್ಲೆಯ ಕಾಡಿನ ಬಳಿ ರಾತ್ರಿ ತಂಗಲು ನಿರ್ಧಾರ ಮಾಡಿದ್ದೆವು. ಅಲ್ಲಿ ಕ್ರಿಮಿನಲ್ಗಳಿದ್ದಾರೆಂದು ತಿಳಿದಿರಲಿಲ್ಲ. 20 ಸಾವಿರ ಕಿಮೀ ಸುತ್ತಾಟದಲ್ಲಿ ಎಲ್ಲಿಯೂ ನಾವು ತೊಂದರೆ ಅನುಭವಿಸಿಲ್ಲ. ಮೊದಲ ಬಾರಿಗೆ ಇಂತಹ ಅನುಭವ ಆಗಿದೆ ಎಂದು ಹೇಳಿದ್ದಾಳೆ.

ಕೈಯಾರೆ ಭವಿಷ್ಯ ಹಾಳುಮಾಡಿಕೊಂಡ ಉಪ್ಪಿನಂಗಡಿಯ 8 ವಿದ್ಯಾರ್ಥಿಗಳು

Posted by Vidyamaana on 2023-06-13 10:05:21 |

Share: | | | | |


ಕೈಯಾರೆ ಭವಿಷ್ಯ ಹಾಳುಮಾಡಿಕೊಂಡ ಉಪ್ಪಿನಂಗಡಿಯ 8 ವಿದ್ಯಾರ್ಥಿಗಳು

ಉಪ್ಪಿನಂಗಡಿ: ಹೊಡೆದಾಟ, ಬಡಿದಾಟ, ಹಲ್ಲೆ, ಮಾರಾಮಾರಿ… ಇತ್ಯಾದಿಗಳು ವಿದ್ಯಾರ್ಥಿಗಳಿಗೆ ಮಾದರಿಯಾಗುತ್ತಿದೆಯೇ?

ಇಂತಹದ್ದೊಂದು ಆತಂಕಕಾರಿ ಅಂಶ ಉಪ್ಪಿನಂಗಡಿಯಲ್ಲಿ ನಡೆದ ವಿದ್ಯಾರ್ಥಿಗಳ ಹೊಡೆದಾಟದ ನಂತರ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗೆ ಕಾರಣವಾಗಿದೆ. ಓದಿನಲ್ಲಿ ನಿರತರಾಗಬೇಕಿದ್ದ ವಿದ್ಯಾರ್ಥಿಗಳು ಹೊಡೆದಾಡಿಕೊಂಡರೆ ಹೇಗೆ? ಇದಕ್ಕೆ ಕಾರಣ ಏನು? ಎಂಬಿತ್ಯಾದಿ ಪ್ರಶ್ನೆಗಳು ಸುಳಿದಾಡತೊಡಗಿದೆ.


ಹೌದು. ಸಾರ್ವಜನಿಕರು ಪ್ರಶ್ನೆ ಹಾಕಿರುವುದರಲ್ಲೂ ಅರ್ಥವಿದೆ. ವಿದ್ಯಾರ್ಥಿಗಳು ಆವೇಶದಲ್ಲಿ ಬಡಿದಾಡಿಕೊಳ್ಳುವುದು ವಯೋ ಸಹಜ ಧರ್ಮ ಇರಬಹುದು. ಆದರೆ ನಂತರದ ಪರಿಸ್ಥಿತಿ…? ವಿದ್ಯಾರ್ಥಿಯೊಬ್ಬ ಪೊಲೀಸ್ ಠಾಣೆ, ಕೋರ್ಟ್ ಎಂದು ಸುತ್ತುತ್ತಾ ಜೀವನ ಹಾಳು ಮಾಡಿಕೊಂಡರೆ ಆತನ ಭವಿಷ್ಯದ ಗತಿಯೇನು? ಆತನನ್ನೇ ನಂಬಿಕೊಂಡು, ಕನಸು ಕಾಣುತ್ತಾ ತಮ್ಮ ಜೀವನ ಸವೆಸುತ್ತಿರುವ ಮನೆಯವರ ಗತಿಯೇನು? ಇದಕ್ಕೆಲ್ಲಾ ಉತ್ತರ ಕಂಡುಕೊಳ್ಳಬೇಕಾದ ಜವಾಬ್ದಾರಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರದ್ದು ಮಾತ್ರವಲ್ಲ, ಸಾರ್ವಜನಿಕರದ್ದೂ ಇದೆ ಅಲ್ಲವೇ?


ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡಿದ್ದಾರೆ ಎನ್ನುವುದಷ್ಟೇ ಇಲ್ಲಿ ವಿಷಯವಲ್ಲ. ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ ಎನ್ನುವುದು ಬೇಸರದ ಸಂಗತಿ. ಇದಕ್ಕೆ ಕಾಲೇಜಿನಿಂದಲೇ ಕಡಿವಾಣ ಹಾಕುವ ಅಗತ್ಯವಿದೆ. ಇಲ್ಲದೇ ಹೋದರೆ, ಉಳಿದ ವಿದ್ಯಾರ್ಥಿಗಳಿಗೂ ಇದು ಮಾದರಿಯಾದೀತು. ಇದಕ್ಕೆ ಅವಕಾಶ ನೀಡಬಾರದು ಎನ್ನುವ ಕಳಕಳಿ ಸಾರ್ವಜನಿಕರದ್ದು.


ಘಟನೆ:

ಉಪ್ಪಿನಂಗಡಿ ಬಸ್ ನಿಲ್ದಾಣ ಪರಿಸರದಲ್ಲಿ ವಿದ್ಯಾರ್ಥಿಗಳ ಗುಂಪಿನೊಳಗೆ ವಾಗ್ವಾದ ಉಂಟಾಗಿ ಹೊಡೆದಾಟದಲ್ಲಿ ತೊಡಗಿದ್ದ 8 ಮಂದಿ ಕಾಲೇಜು ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆ 160ರ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಕ್ಷುಲ್ಲಕ ಕಾರಣವನ್ನು ಮುಂದಿರಿಸಿ ಬಸ್ ನಿಲ್ದಾಣದಲ್ಲಿ ಸಂಘರ್ಷ ನಿರತ ವಿದ್ಯಾರ್ಥಿಗಳ ಗುಂಪನ್ನು ಕರ್ತವ್ಯದಲ್ಲಿದ್ದ ಪೊಲೀಸರು ಸಮಾಧಾನಿಸಿ ಚದುರಿಸಲು ಯತ್ನಿಸಿದರೂ ಲೆಕ್ಕಿಸದೆ

ದೂಡಾಟ ಹೊಡೆದಾಟದಲ್ಲಿ ತೊಡಗಿದ್ದ ಉಪ್ಪಿನಂಗಡಿ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಾದ ಗಿರೀಶ್ (21) , ಅಭಿತ್ (20) , ಧನುಷ್ (19) , ಮೋಹನ್‌ (19) ನಂದನ್ (19), ವಿನ್ಯಾಸ್ (18) , ರೂಪೇಶ್ (20) ಹಿತೇಶ್ (19), ಎಂಬವರನ್ನು ವಶಕ್ಕೆ ಪಡೆದು ಅವರ ವಿರುದ್ಧ ಸಾರ್ವಜನಿಕ ಶಾಂತಿಭಂಗದ ಆರೋಪದನ್ವಯ ಪೊಲೀಸ್ ಸಿಬ್ಬಂದಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಟೆರೇಸ್ ನಿಂದ ಬಿದ್ದು ಮುಖ್ಯ ಶಿಕ್ಷಕ ಸುಂದರ್ ಮೃತ್ಯು

Posted by Vidyamaana on 2024-05-03 20:42:57 |

Share: | | | | |


ಟೆರೇಸ್ ನಿಂದ ಬಿದ್ದು ಮುಖ್ಯ ಶಿಕ್ಷಕ ಸುಂದರ್ ಮೃತ್ಯು

ಉಡುಪಿ (ಮೇ 3): ಟೆರೇಸ್ ನಿಂದ ಬಿದ್ದು ಮುಖ್ಯ ಶಿಕ್ಷಕ ಸಾವನ್ನಪ್ಪಿರುವ ಘಟನೆ ಉಡುಪಿಯ ಅಜೆಕಾರು ಸಮೀಪದ ಎಣ್ಣೆಹೊಳೆಯಲ್ಲಿ ನಡೆದಿದೆ.

Recent News


Leave a Comment: