ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ನೆಲ್ಯಾಡಿ : ಚತುಷ್ಪಥ ಕಾಮಗಾರಿ ಹಿನ್ನಲೆ ಅಳವಡಿಸಿದ ಡಿವೈಡರ್ ಗೆ ಕಾರು ಢಿಕ್ಕಿ – ಮಹಿಳೆ ಮೃತ್ಯು, ಪುತ್ರ ಹಾಗೂ ಪತಿ ಗಂಭೀರ

Posted by Vidyamaana on 2023-03-30 06:23:29 |

Share: | | | | |


ನೆಲ್ಯಾಡಿ : ಚತುಷ್ಪಥ ಕಾಮಗಾರಿ ಹಿನ್ನಲೆ ಅಳವಡಿಸಿದ ಡಿವೈಡರ್ ಗೆ ಕಾರು ಢಿಕ್ಕಿ – ಮಹಿಳೆ ಮೃತ್ಯು, ಪುತ್ರ ಹಾಗೂ ಪತಿ ಗಂಭೀರ

ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ನೆಲ್ಯಾಡಿ ಸಮೀಪದ ಜ್ಞಾನೋದಯ ಬೆಥನಿ ಕಾಲೇಜು ಸಮೀಪ ಕರ್ಬಸಂಕ ಎಂಬಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಮಹಿಳೆ ಮೃತಪಟ್ಟು ಪತಿ ಮತ್ತು ಪುತ್ರ ಗಂಭೀರ ಗಾಯಗೊಂಡ ಘಟನೆ ಮಾ.30ರಂದು ಬೆಳಿಗ್ಗೆ ನಡೆದಿದೆ.ಅನ್ನಪೂರ್ಣ(50ವ.) ಮೃತ ಮಹಿಳೆ. ಇವರ ಪುತ್ರ ಅಶ್ವಿನ್(25ವ)ಹಾಗೂ ಪತಿ ಭಾಸ್ಕರ(56)ಗಂಭೀರ ವಾಗಿ ಗಾಯಗೊಂಡವರು. ಕಾರನ್ನು ಅಶ್ವಿನ್ ಚಲಾಯಿಯಿಸುತ್ತಿದ್ದು ಕಾರು ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ಚಲಿಸುತಿತ್ತು ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆಕರೆದುಕೊಂಡು ಹೋಗಲಾಗಿದೆ.

ಅಪಘಾತವು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ  ರಸ್ತೆ ಹಾಗೂ ಸೇತುವೆ ಕಾಮಾಗಾರಿ ನಡೆಯುತ್ತಿರುವ ಹಿನ್ನಲೆ ಡಿವೈಡರ್ ಆಳವಡಿಸಲಾಗಿದೆ. ಇದಕ್ಕೆ ಚಾಲಕ ಢಿಕ್ಕಿ ಹೊಡೆದಿದ್ದು ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ.

ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರವಿ ಬಿ.ಎಸ್., ಸಬ್ ಇನ್ಸೆಕ್ಟರ್ ರಾಜೇಶ್ ಕೆ.ವಿ., ನೆಲ್ಯಾಡಿ ಹೊರಠಾಣೆಯ ಹೆಡ್‌ಕಾನ್‌ಸ್ಟೇಬಲ್ ಬಾಲಕೃಷ್ಣ, ಕುಶಾಲಪ್ಪ ನಾಯ್ಕರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪುತ್ತೂರು : ಅನಾರೋಗ್ಯದಿಂದಾಗಿ ಪ್ರತಿಭಾನ್ವಿತ ವಿದ್ಯಾರ್ಥಿ ಸುಪ್ರೀತ್ ನಿಧನ

Posted by Vidyamaana on 2023-11-01 17:54:59 |

Share: | | | | |


ಪುತ್ತೂರು : ಅನಾರೋಗ್ಯದಿಂದಾಗಿ ಪ್ರತಿಭಾನ್ವಿತ ವಿದ್ಯಾರ್ಥಿ ಸುಪ್ರೀತ್ ನಿಧನ

ಪುತ್ತೂರು : ಪ್ರಾಥಮಿಕ ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಸರ್ವೆ ಸಮೀಪ ನಡೆದಿದೆ.ಸರ್ವೆ ಕಲ್ಪಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಸುಪ್ರೀತ್ ಮೃತ ಬಾಲಕ.ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಸುಪ್ರೀತ್ ರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.


ಸುಪ್ರೀತ್ ರವರು ಮುಂಡೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಕುಸುಮಾ ಪೆರಂಟೋಳು ಮತ್ತು ಕುಂಞ ಮೇಸ್ತ್ರಿ ಅವರ ಪುತ್ರ.

ಈತ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ

ಎಲ್‌ಕೆಜಿ ತರಗತಿಯ ಗೋಡೆಗಳಲ್ಲಿ ಬಣ್ಣದ ಅಂಗ್ಲ ಆಕ್ಷರಗಳ ವರ್ಣಮಾಲೆ...

Posted by Vidyamaana on 2023-10-27 20:34:17 |

Share: | | | | |


ಎಲ್‌ಕೆಜಿ ತರಗತಿಯ ಗೋಡೆಗಳಲ್ಲಿ ಬಣ್ಣದ ಅಂಗ್ಲ ಆಕ್ಷರಗಳ ವರ್ಣಮಾಲೆ...

ಪುತ್ತೂರು: ಎ ಬಿ ಸಿ ಡಿ ಹೀಗೇ Zತನಕ ಇಂಗ್ಲೀಷ್ ಅಕ್ಷರಗಳು ತರಗತಿಯ ಗೋಡೆಗಳಲ್ಲಿ ಬಣ್ಣ ಬಣ್ಣಗಳಿಂದ ಬರೆಯಲಾಗಿದೆ, ಜೊತೆಗೆ ಅಕ್ಷರ ಓದಲು ಕಲಿಯುವಂತೆ ಸಹಕಾರಿಯಾಗಲು ಹೊಂದಿಕೊಂಡಿರುವ ಚಿತ್ರಗಳು, ಗೋಡೆಗಳಲ್ಲಿರುವ ಅಕ್ಷರವನ್ನು ನೋಡಿ ಪುಸ್ತಕದಲ್ಲಿ ಬರೆಯುವ ಅಬ್ಯಾಸ ಮಾಡಿಕೊಳ್ಳುವ ಹಾಲುಗಲ್ಲದ ಪುಟ್ಟ ಮಕ್ಕಳು. ಇದು ಕಂಡು ಬಂದಿದ್ದು ಕಾವು ಸರಕಾರಿ ಎಲ್‌ಕೆಜೆ ಯುಕೆಜಿ ತರಗತಿ ಕೊಠಡಿಯಲ್ಲಿ. ಮಕ್ಕಳ ಕಲಿಕೆಗೆ ನರವಾಗಲೆಂದು ಇಂಗ್ಲೀಷ್ ಅಕ್ಷರಗಳನ್ನು ಗೋಡೆಗಳಲ್ಲಿ ಜೋಡಿಸಿದ್ದು ಲಿಯೋ ಕ್ಲಬ್ ತಂಡ, ಲಯನ್ಸ್ ಕ್ಲಬ್ ನ ಸಹಬಾಗಿತ್ವದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಲಿಯೋ ಕ್ಲಬ್ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದೆ.

ಕಾವು ಸರಕಾರಿ ಪ್ರಾಥಮಿಕ ಶಾಲೆಯನ್ನು ಕಾವು ಹೇಮನಾಥ ಶೆಟ್ಟಿಯವರು ದತ್ತು ತೆಗೆದುಕೊಂಡಿದ್ದಾರೆ. ದತ್ತು ತೆಗೆದುಕೊಂಡ ಬಳಿಕ ಇಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ ಯುಕೆಜಿ ತರಗತಿಯನ್ನು ಪ್ರಾರಂಭ ಮಾಡಲಾಗಿದೆ. ಸರಕಾರ ಕೆಪಿಎಸ್ ಸ್ಕೂಲ್‌ಗಳಲ್ಲಿ ಆಂಗ್ಲ ಮಾದ್ಯಮ ತರಗತಿ ಆರಂಭ ಮಾಡುವ ಮೊದಲೇ ಕಾವು ಸರಕಾರಿ ಶಾಲೆಯಲ್ಲಿ ಇಂಗ್ಲೀಷ್ ಕ್ರಾಂತಿಯನ್ನು ಪ್ರಾರಂಭಿಸಲಾಗಿತ್ತು. ಮಕ್ಕಳ ಸಂಖ್ಯೆಯೂ ಗಣನೀಯವಾಗಿದೆ.


ಕಲಿಕೆಗೆ ಸಹಕಾರಿ

ತರಗತಿಯ ಕೊಠಡಿಯ ಗೋಡೆಗಳಲ್ಲಿ ಇಂಗ್ಲೀಷ್ ಅಕ್ಷರಮಾಲೆಯನ್ನು ಚಿತ್ರ ಸಹಿತ ಬರೆದಿರುವ ಕಾರಣ ಮಕ್ಕಳಿಗೆ ಅಕ್ಷರದ ಪರಿಚಯ ಮತ್ತು ಅಕ್ಷರವನ್ನು ಬರೆಯುವ ವಿಧಾನವನ್ನು ಸುಲಭದಲ್ಲಿ ಮನನ ಮಾಡಬಹುದಾಗಿದೆ. ಸಾಧಾರಣವಾಗಿ ಶಾಲೆಯ ಗೋಡೆಗಳಲ್ಲಿ ಪಕ್ಷಿ, ಪರಿಸರ ಸೇರಿದಂತೆ ಇತರೆ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಲಾಗುತ್ತದೆ. ಕಾವು ಶಾಲೆಯಲ್ಲಿ ಲಿಯೋ ಕ್ಲಬ್ ಮಕ್ಕಳ ಶಿಕ್ಷಣಕ್ಕೆ ನೆರವು ಆಗುವ ರೀತಿಯಲ್ಲಿ ಚಿತ್ರಗಳನ್ನು , ಅಕ್ಷರಗಳನ್ನು ಬರೆದಿರುವುದು ಮಕ್ಕಳ ಪೋಷಕರಲ್ಲೂ ಸಂತಸಕ್ಕೆ ಕಾರಣವಾಗಿದೆ. ಕಳೆದ ೨೦ ದಿನಗಳ ಹಿಂದೆ ಈ ಚಿತ್ರಗಳನ್ನು ಬಿಡಿಸಲಾಗಿದ್ದು ಆ ಬಳಿಕ ಮಕ್ಕಳ ಕಲಿಕಾ ಉತ್ಸಾಹವೂ ಇಮ್ಮಡಿಗೊಂಡಿದೆ ಮತ್ತು ಅಕ್ಷರ ಜ್ಞಾನವೂ ಮಕ್ಕಳಲ್ಲಿ ವೃದ್ದಿಯಾಗಿದೆ ಎನ್ನುತ್ತಾರೆ ಪೋಷಕರು.


ಆದೃತಿ ಯೋಜನೆಯಡಿ ನಾಲ್ಕು ಜಿಲ್ಲೆಗಳಲ್ಲಿ ಸೇವೆ

ಲಿಯೋ ಕ್ಲಬ್ ಇದರ ಆದೃತಿ ಯೋಜನೆಯಡಿ ಕ್ಲಬ್ ವ್ಯಾಪ್ತಿಯ ಹಾಸನ , ಚಿಕ್ಕಮಗಳೂರು, ಮಡಿಕೇರಿ ಮತ್ತು ದ ಕ ಜಿಲ್ಲೆಯ ಆಯ್ದ ೧೫ ಸರಕಾರಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಇದೇ ಸೇವೆ ನಡೆಯಲಿದೆ. ದ ಕ ಜಿಲ್ಲೆಯ ಕಿನ್ನಿಗೋಳಿ ಕರೆಕಾಡು, ಹಳೆಯಂಗಡಿ ಕೊಳ್ನಾಡಿ ಮುಚ್ಚಿ, ಮೂಡಬಿದ್ರೆ ಮಚ್ಚೂರು ಶಾಲೆ ಹಾಗೂ ಮಂಗಳೂರು ನಗರ ವ್ಯಾಪ್ತಿಯ ಸರಕಾರಿ ಶಾಲೆಗಳಲ್ಲಿ ವರ್ಣಮಾಲೆ ಅಕ್ಷರ ಜೋಡನಾ ಕಾರ್ಯಕ್ಕೆ ಆಯ್ಕೆಗೊಂಡಿದೆ. ಲಿಯೋ ಕ್ಲಬ್ ವತಿಯಿಂದ ಆರೋಗ್ಯ ಮೇಳ, ಉದ್ಯೋಗ ಮೇಳ, ವಿಕಲಚೇತನರ ಜೊತೆ ಸಹಭೋಜನೆ, ವ್ಯಕ್ತಿತ್ವ ವಿಕಸನ ಸಮಾವೇಶ, ಸೇರಿದಂತೆ ಇನ್ನಿತರ ಸಮಾಜಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು ಕ್ಲಬ್‌ನ ಹಿರಿಮೆಯನ್ನು ಹೆಚ್ಚಿಸಿದೆ.




ಲಿಯೋ ಕ್ಲಬ್ ಸಂಸ್ಥೆ ಈ ಸೇವೆ ಇನ್ನೊಬ್ಬರಿಗೆ ಉತ್ತೇಜನ ನೀಡುವ ಕಾರ್ಯವಾಗಿದೆ. ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ಗ್ರಾಮೀಣ ಮಕ್ಕಳ ಕಲಿಕೆಗೆ ಸಹಾಯ ಮಾಡುವ ಉದ್ದೇಶದಿಂದ ಈ ವರ್ಣ ಮಾಲೆಯನ್ನು ರಚಿಸಿದ್ದು ಇದಕ್ಕಾಗಿ ನಾನು ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಇದೇ ಸೇವೆಯನ್ನು ಕ್ಲಬ್ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಮುಂದುವರೆಸಲಿದ್ದಾರೆ. ಸಂಸ್ಥೆಯ ಮೂಲಕ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಮುಂದಿನ ಯುವ ಸಮೂಹವಕ್ಕೆ ಸಮಾಜ ಸೇವಾ ಮನೋಭಾವ ಬೆಳೆಸುವ ಕೆಲಸ ನಿರಂತರ ಆಗಬೇಕಿದ್ದು ಅದನ್ನು ಲಿಯೋ ಕ್ಲಬ್ ಮೂಲಕ ನಡೆಸಲಾಗುತ್ತಿದೆ.

ಮೆಲ್ವಿನ್ ಡಿಸೋಜಾ, ಲಯನ್ಸ್ ಜಿಲ್ಲಾ ಗವರ್‍ನರ್

ಚಿತ್ರ ಇದೆ






ಲಿಯೋ ಡಿಸ್ಟ್ರಿಕ್ಟ್ ೩೧೭ ಡಿ ಇದರ ವತಿಯಿಂದ ಕ್ಲಬ್ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಆಯ್ದ ಸರಕಾರಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ತರಗತಿ ಗಳಲ್ಲಿ ಮಕ್ಕಳ ಕಲಿಕೆಗೆ ನೆರವಾಗುವುದು ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಕೊಠಡಿಗಳಲ್ಲಿ ಆಧುನಿಕತೆಯ ಟಚಪ್‌ನೊಂದಿಗೆ ಅಕ್ಷರ ವರ್ಣ ಮಾಲೆಯನ್ನು ಚಿತ್ರದ ಮೂಲಕ ಬರೆಯಲಾಗಿದೆ. ಪ್ರಸಿದ್ದ ಆರ್ಟಿಸ್ಟ್ ಮೂಲಕ ಈ ವರ್ಣ ಮಾಲೆಯನ್ನು ರಚಿಸಲಾಗಿದೆ. ಲಿಯೋ ಕ್ಲಬ್ ಸದಸ್ಯರ ಸಹಕಾರದಿಂದ ಚಿತ್ರಕ್ಕೆ ಬಣ್ಣ ಕೊಡುವ ಕಾರ್ಯವನ್ನು ಮಾಡಲಾಗಿದೆ.  ಕ್ಲಬ್ ವತಿಯಿಂದ ಮಕ್ಕಳ ಕಲಿಕಾ ವ್ಯವಸ್ಥೆಗೆ ಒತ್ತು ನೀಡುವ ಉದ್ದೇಶವೂ ಇದರ ಹಿಂದೆ ಇದ್ದು , ಕ್ಲಬ್ ವ್ಯಾಪ್ತಿಯ ದ ಕ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ ಸೇವೆಯನ್ನು ನಡೆಸಲಾಗುವುದು. ಕ್ಲಬ್ ಯೋಜನೆಗೆ ಪೋಷಕರಿಂದ ಮತ್ತು ಸಾರ್ವಜನಿಕರಿಂದ ಅಭಿನಂದನೆಗಳು ವ್ಯಕ್ತವಾಗಿದೆ, ಸಮಾಜ ಸೇವೆ ಇನ್ನೂ ಮುಂದುವರೆಯಲಿದೆ.


ಡಾ. ರಂಜಿತಾ ಎಚ್ ಶೆಟ್ಟಿ

ಜಿಲ್ಲಾಧ್ಯಕ್ಷರು ಲಿಯೋ ಕ್ಲಬ್ ೩೧೭ಡಿ

ಚಿತ್ರ ಇದೆ



ಕಲಿಕೆಗೆ ತುಂಬಾ ಸಹಕಾರಿಯಾಗಿದೆ

ತರಗತಿಯ ಗೋಡೆಗಳಲ್ಲಿ ಇಂಗ್ಲೀಷ್ ವರ್ಣಮಾಲೆಯನ್ನು ಚಿತ್ರ ಸಹಿತ ಬರೆದಿರುವುದು ನಮಗೆ ತುಂಬಾ ಸಹಕಾರಿಯಾಗಿದೆ. ಮಕ್ಕಳಿಗೆ ಅಕ್ಷರದ ಪರಿಚಯ ಮಾಡಿಸಲು ಮತ್ತು ಬರೆಯವುದು ಮತ್ತು ಓದುವುದನ್ನು ಕಲಿಸಲು ಇದು ಪ್ರಯೋಜನಕಾರಿಯಾಗಿದ್ದು ಇತರ ಕಡೆಗೂ ಇದು ವಿಸ್ತರಣೆಯಾಗಬೇಕಿದೆ.


ವಂದಿತಾ, ಕಾವು ಶಾಲೆ ಶಿಕ್ಷಕಿ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇಂದು ವಿಜಯೇಂದ್ರ ಪ್ರಮಾಣವಚನ ಕಮಲ ಪಾಳಯದಲ್ಲಿ ಭರ್ಜರಿ ಸಂಚಲನ

Posted by Vidyamaana on 2023-11-15 08:40:42 |

Share: | | | | |


ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇಂದು ವಿಜಯೇಂದ್ರ ಪ್ರಮಾಣವಚನ ಕಮಲ ಪಾಳಯದಲ್ಲಿ ಭರ್ಜರಿ ಸಂಚಲನ


ಬೆಂಗಳೂರು, (ನವೆಂಬರ್ 15): ರಾಜ್ಯ ಬಿಜೆಪಿಗೆ ನೂತನ ಸಾರಥಿಯಾಗಿ ಆಯ್ಕೆಯಾಗಿ ಮಿಂಚಿನ ಸಂಚಲನಕ್ಕೆ ಕಾರಣವಾಗಿರುವ ಬಿವೈ ವಿಜಯೇಂದ್ರ(BY Vijayendra )ಇಂದು(ಬುಧವಾರ) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಳಗ್ಗೆ 10ಗಂಟೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ. ಅದಕ್ಕೂ ಮೊದಲು ಬೆಳಗ್ಗೆ 9.45ಕ್ಕೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ಬಿವೈವಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುತ್ತೆ. ಬಳಿಕ ಗೋಪೂಜೆ ನೆರರೇವರಿಸಲಿದ್ದಾರೆ. ಗಣಪತಿ ಹೋಮದ ಪೂರ್ಣಾಹುತಿ ನಂತರ ವಿಜಯೇಂದ್ರಗೆ ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.ರಾತ್ರಿಯೇ ಬಿಜೆಪಿ ಕಚೇರಿಯಲ್ಲಿ ಹೋಮ, ಹವನ


ಬಿಜೆಪಿ ಕಚೇರಿಯಲ್ಲಿ ನಿನ್ನೆ ರಾತ್ರಿಯಿಂದಲೇ ಪೂಜೆ, ಹೋಮ ಹವನಗಳು ನೆರವೇರುತ್ತಿವೆ. ನಿನ್ನೆ ದುರ್ಗಾಹೋಮ, ಗಣಪತಿ ಹೋಮ ನಡೆದಿದೆ. ಇನ್ನು ಮಲ್ಲೇಶ್ವರಂನಲ್ಲಿ ರಸ್ತೆಯುದ್ಧಕ್ಕೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಎಲ್ಲೆಲ್ಲೂ ವಿಜಯೇಂದ್ರ ಪೋಸ್ಟರ್‌ಗಳು ಮಿಂಚುತ್ತಿವೆ. ಅಲ್ಲದೇ ಬಿಜೆಪಿ ಕಚೇರಿ ತಳಿರು ತೋರಣಗಳಿಂದ ಸಿಂಗಾರಗೊಂಡಿದೆ. ಕಮಲಪಾಳಯದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ.ಮೊನ್ನೆ ಮಠಮಾನ್ಯಗಳಿಗೆ ರೌಂಡ್ಸ್ ಹಾಕಿದ್ದ ವಿಜಯೇಂದ್ರ, ನಿನ್ನೆ ಮುಳುಬಾಗಿಲು ತಾಲೂಕಿನಲ್ಲಿರುವ ಕುರುಡುಮಲೆ ವಿನಾಯಕನ ದರ್ಶನ ಪಡೆದಿದ್ದರು, ಅಲ್ಲದೇ ಸಂಜೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ಶಕ್ತಿದೇವತೆ ಅಣ್ಣಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದದ್ದರು.


ವಿಜಯೇಂದ್ರ ಆಯ್ಕೆಯಿಂದಾಗಿ ಯಡಿಯೂರಪ್ಪ ವಿರೋಧಿ ಬಣ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್ ಮೌನಕ್ಕೆ ಜಾರಿದ್ದಾರೆ. ಹೀಗಾಗಿ ಇಂದಿನ ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಬಂಡಾಯ ಬಾವುಟದ ಬಿಸಿ ತಟ್ಟಲಿದ್ದು, ಹಲವು ನಾಯಕರು ಗೈರಾಗುವ ಸಾಧ್ಯತೆ ಇದೆ.ಬಿ.ವೈ.ವಿಜಯೇಂದ್ರ ಅವರು ಪಕ್ಷದ ನಾಯಕರಿಗೆ ಖುದ್ದು ಕರೆ ಮಾಡಿ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಜಿಲ್ಲಾಧ್ಯಕ್ಷರು ಸೇರಿ ಹಲವರಿಗೆ ವಿಜಯೇಂದ್ರ ಅವರೇ ಕರೆ ಮಾಡಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಆದ್ರೆ, ಇಂದಿನ ಪದಗ್ರಹಣ ಕಾರ್ಯಕ್ರಮಕ್ಕೆ ಸಿ.ಟಿ.ರವಿ ಗೈರಾಗಲಿದ್ದು, ಇನ್ನುಳಿದಂತೆ ಅಸಮಾಧಾನಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆ ಎದ್ದಿದ್ದು, ಮುಂದೆ ವಿಜಯೇಂದ್ರ ಇದೆಲ್ಲವನ್ನು ಹೇಗೆ ಸರಿದೂಗಿಸಿಕೊಂಡು ಹೋಗುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

ಬಿಜೆಪಿ ವತಿಯಿಂದ ಪಂಜಿನ ಮೆರವಣಿಗೆ | ನಳಿನ್‍ಕುಮಾರ್ ಕಟೀಲ್ ನೇತೃತ್ವದಲ್ಲಿ ವಿಭಜನ-ವಿಭೀಷಕ ಸ್ಮೃತಿ ದಿವಸ್

Posted by Vidyamaana on 2023-08-15 03:12:13 |

Share: | | | | |


ಬಿಜೆಪಿ ವತಿಯಿಂದ ಪಂಜಿನ ಮೆರವಣಿಗೆ | ನಳಿನ್‍ಕುಮಾರ್ ಕಟೀಲ್ ನೇತೃತ್ವದಲ್ಲಿ ವಿಭಜನ-ವಿಭೀಷಕ ಸ್ಮೃತಿ ದಿವಸ್

ಬೆಂಗಳೂರು: ಬಿಜೆಪಿ ಬೆಂಗಳೂರು ಉತ್ತರ ಜಿಲ್ಲೆ ವತಿಯಿಂದ ವಿಭಜನ, ವಿಭೀಷಕ ಸ್ಮೃತಿ ದಿವಸ ಕಾರ್ಯಕ್ರಮದ ಅಂಗವಾಗಿ ಇಂದು ಸಂಜೆ ಹೆಬ್ಬಾಳ ಗೆದ್ದಲಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಪಂಜಿನ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಮಂಡಲ ಕಾರ್ಯಾಲಯದ ವರೆಗೆ ಈ ಮೆರವಣಿಗೆ ನಡೆಯಿತು.ದೇಶ ವಿಭಜನೆ ಸಂದರ್ಭದಲ್ಲಿ ನಡೆದ ಕರಾಳ ದುರ್ಘಟನೆಯ ಸಂತಾಪ ಕಾರ್ಯಕ್ರಮ ಇದಾಗಿತ್ತು. ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಶಾಸಕ ಎಸ್.ಆರ್.ವಿಶ್ವನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಉತ್ತರ ಜಿಲ್ಲಾ ಅಧ್ಯಕ್ಷ ನಾರಾಯಣ ಗೌಡ, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಗೃಹ ಜ್ಯೋತಿ ಅನ್ನ ಭಾಗ್ಯ ಗೃಹ ಲಕ್ಷ್ಮೀ -ಗ್ಯಾರಂಟಿಗಳಿಗೆ ಮುಹೂರ್ತ ನಿಗದಿ- ಸಿದ್ದರಾಮಯ್ಯ

Posted by Vidyamaana on 2023-06-12 02:48:03 |

Share: | | | | |


ಗೃಹ ಜ್ಯೋತಿ ಅನ್ನ ಭಾಗ್ಯ ಗೃಹ ಲಕ್ಷ್ಮೀ -ಗ್ಯಾರಂಟಿಗಳಿಗೆ ಮುಹೂರ್ತ ನಿಗದಿ- ಸಿದ್ದರಾಮಯ್ಯ

ಬೆಂಗಳೂರು: ಮೊದಲ ಯೋಜನೆ ಅನುಷ್ಠಾನಗೊಂಡ ಬೆನ್ನಲ್ಲೇ ಇನ್ನೂ ಮೂರು ಗ್ಯಾರಂಟಿಗಳಿಗೆ ಮುಹೂರ್ತ ನಿಗದಿಯಾಗಿದೆ.

ಜುಲೈ 1ರಂದು 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಪೂರೈಸುವ “ಗೃಹ ಜ್ಯೋತಿ’ ಮತ್ತು ಮಾಸಿಕ ತಲಾ ಹತ್ತು ಕೆಜಿವರೆಗೆ ಅಕ್ಕಿ ವಿತರಿಸುವ “ಅನ್ನಭಾಗ್ಯ” ಜಾರಿಗೊಳಿಸಲಾಗುವುದು. ಇದರ ಬೆನ್ನಲ್ಲೇ ಬಹುತೇಕ ಆಗಸ್ಟ್‌ 16ರಂದು ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ “ಗೃಹಲಕ್ಷ್ಮೀ” ಗ್ಯಾರಂಟಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.


ವಿಧಾನಸೌಧ ಆವರಣದಲ್ಲಿ “ಶಕ್ತಿ’ ಯೋಜನೆಗೆ ಚಾಲನೆ ನೀಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನ ಭಾಗ್ಯ ಯೋಜನೆಯಿಂದ ವಾರ್ಷಿಕ 10,100 ಕೋಟಿ ರೂ. ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಹಿಂದಿನ ಒಂದು ವರ್ಷದ ಸರಾಸರಿ ಬಳಕೆ ಆಧರಿಸಿ ಗೃಹಬಳಕೆದಾರರ ವಿದ್ಯುತ್‌ ಸರಾಸರಿ ತೆಗೆಯಲಾಗಿದೆ. ಅದರಂತೆ ಒಂದು ಕುಟುಂಬ 70 ಯೂನಿಟ್‌ ಉಪಯೋಗಿಸುತ್ತದೆ. ಅದರ ಮೇಲೆ ಶೇ.10ರಷ್ಟು ಹೆಚ್ಚುವರಿ ಉಪಯೋಗಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಪ್ರತಿಪಕ್ಷಗಳು 200 ಯೂನಿಟ್‌ ಪೂರ್ಣ ನೀಡಿಲ್ಲ ಎಂದು ವಾದಿಸುತ್ತಿವೆ. ಸರ್ಕಾರ ನಡೆಸಿದವರು ಆಡುವ ಮಾತುಗಳೇ ಇವು ಎಂದು ತರಾಟೆಗೆ ತೆಗೆದುಕೊಂಡರು.

ಗೃಹ ಜ್ಯೋತಿ ಯೋಜನೆ ಜುಲೈ 1ರಂದು ಚಾಲನೆ ನೀಡುವುದರಿಂದ ಆಗಸ್ಟ್‌ 1ರಿಂದ ವಿತರಣೆಯಾಗುವ ಬಿಲ್‌ ಮೂಲಕ ಗ್ರಾಹಕರಿಗೆ ಇದರ ಲಾಭ ಸಿಗಲಿದೆ. ಇನ್ನು ಯುವನಿಧಿ ಅಡಿ 2022-23ನೇ ಸಾಲಿನ ಪದವೀಧರರು ಹಾಗೂ ವೃತ್ತಿಪರ ಕೋರ್ಸ್‌ಗಳನ್ನು ಪೂರೈಸಿದವರಿಗೆ ಕ್ರಮವಾಗಿ ಮಾಸಿಕ 3 ಸಾವಿರ ಹಾಗೂ 1,500 ರೂ.ಗಳನ್ನು 24 ತಿಂಗಳು ಮಾತ್ರ ಸಹಾಯಧನ ನೀಡಲಾಗುವುದು ಎಂದರು



Leave a Comment: