ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಸುದ್ದಿಗಳು News

Posted by vidyamaana on 2024-07-03 19:44:44 |

Share: | | | | |


ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಬುಧವಾರದಂದು ಬೆಂಗಳೂರಿನಲ್ಲಿ ಸಿ ಎಂ‌ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ತೂರಿಗೆ‌ಮೆಡಿಕಲ್ ಕಾಲೇಜು ಮತ್ತು ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.

   ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಡಿಕೆಯನ್ನು ನೆನಪಿಸಿದರು. ಬಜೆಟ್ ನಲ್ಲಿ ಈ ಬಾರಿ ಅನುಮೋದನೆಯಾಗಬೇಕು ಮತ್ತು ತನ್ನ ಕ್ಷೇತ್ರದ ಜನರ ಬಹುಕಾಲದ ಬೇಡಿಕೆಯಾದ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಕಳೆದ ಬಜೆಟ್ ನಲ್ಲಿ ಅನುಮೋದನೆಯಾಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ಇರಿಸಿದ ಕಾರಣ ನಾನು ಹೆಚ್ಚು ಒತ್ತಡ ಹಾಕಿರಲಿಲ್ಲ. ಮೆಡಿಕಲ್ ಕಾಲೇಜು ಆಗಬೇಕು‌ಎಂಬುದು‌ ನನ್ನ ಮತ್ತು ನನ್ನ ಕ್ಷೇತ್ರದ ಜನರ ಕನಸಾಗಿದೆ ಅದನ್ನು ನನಸು‌ಮಾಡಿಕೊಡಬೇಕು ಎಂದು ಸಿ ಎಂ ಅವರಲ್ಲಿ ಶಾಸಕರು ವಿನಂತಿಸಿದರು.

ಕಾಲೇಜು‌ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ ಎಂದೂ ಶಾಸಕರು ಸಿಎಂ ಅವರಲ್ಲಿ ತಿಳಿಸಿದರು.

ಹೆಚ್ಚು‌ಅನುದಾನ ಕೊಡಿ

ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಬೇಕಿದೆ. ರಸ್ತೆ, ಸರಕಾರಿ ಕಟ್ಟಡಗಳು, ಶಾಲಾ ,ಕಾಲೇಜು ಕಟ್ಟಡಗಳು, ತಡೆಗೋಡೆ ,ಬೃಹತ್ ಅಣೆಕಟ್ಟುಗಳು ಸೇರಿದಂತೆ ಕ್ಷೇತ್ರದ ಜನರಿಂದ ದಿನದಿಂದ ದಿನಕ್ಕೆ ಕಾಮಗಾರಿಯ ಬೇಡಿಕೆಗಳು ಬರುತ್ತಿದ್ದು ಈಗ ಬರುತ್ತಿರುವ ಅನುದಾನವನ್ನು ಹೆಚ್ಚು ಪ್ರಮಾಣದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ವರ್ಷಗಳಿಂದ ಇರುವ ಕೆಲವೊಂದು ಕಾಮಗಾರಿ ಬೇಡಿಕೆಗಳಿಗೆ ಅನುದಾನವನ್ನು‌ನೀಡಬೇಕಿದೆ ಈ ಕಾರಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಶಾಸಕರು‌ಮನವಿ ಸಲ್ಲಿಸಿದರು.

 Share: | | | | |


ಹೋಟೆಲ್ ಮ್ಯಾನೇಜರ್‌ ಮಹೇಶ್ ಶೆಟ್ಟಿ ಹೃದಯಾಘಾತದಿಂದ ನಿಧನ

Posted by Vidyamaana on 2024-01-10 07:29:51 |

Share: | | | | |


ಹೋಟೆಲ್ ಮ್ಯಾನೇಜರ್‌ ಮಹೇಶ್ ಶೆಟ್ಟಿ ಹೃದಯಾಘಾತದಿಂದ ನಿಧನ

ಉಡುಪಿ: ಮಂಗಳೂರಿನ ಹೆಸರಾಂತ ಹೋಟೆಲ್ ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮ್ಯಾನೇಜರ್‌ ಸೋಮವಾರ ರಾತ್ರಿ ನಿಧನ ಹೊಂದಿದ್ದಾರೆ.


ಆತ್ರಾಡಿ ಪರೀಕ ನಿವಾಸಿ ಮಹೇಶ ಶೆಟ್ಟಿ(28) ಜ.8ರಂದು ನಿಧನ ಹೊಂದಿದ್ದು, ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನುಅಗಲಿದ್ದಾರೆ.


ಇತ್ತೀಚೆಗಷ್ಟೇ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್‌ ಮುಗಿಸಿದ್ದ ಅವರು ಬಳಿಕ ಉಡುಪಿ, ಮಂಗಳೂರಿನಲ್ಲಿ ಹೋಟೆಲ್ ಮ್ಯಾನೇಜರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇವರು ಈ ಹಿಂದೆ ಆತ್ರಾಡಿಯಲ್ಲಿ ಡ್ಯಾನ್ಸ್‌ ಕ್ರಿವ್‌ ನೃತ್ಯ ತರಬೇತಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರು. ಮತ್ತೆ ಸಂಸ್ಥೆಯನ್ನು ಮುಂದುವರಿಸಬೇಕೆಂಬ ಇಚ್ಚೆಯನ್ನೂ ಹೊಂದಿದ್ದರು ಎನ್ನಲಾಗಿದೆ.

ದೆಹಲಿಯಲ್ಲಿ ತುಲಾಭಾರದ ವೇಳೆ ಕಳಚಿ ಬಿದ್ದ ತಕ್ಕಡಿ ಹಗ್ಗ; ಚಿಕ್ಕ ಗಾಯದೊಂದಿಗೆ ಪಾರಾದ ಉಡುಪಿ ಪೇಜಾವರ ಶ್ರೀ

Posted by Vidyamaana on 2023-11-03 19:24:54 |

Share: | | | | |


ದೆಹಲಿಯಲ್ಲಿ ತುಲಾಭಾರದ ವೇಳೆ ಕಳಚಿ ಬಿದ್ದ ತಕ್ಕಡಿ ಹಗ್ಗ; ಚಿಕ್ಕ ಗಾಯದೊಂದಿಗೆ ಪಾರಾದ ಉಡುಪಿ ಪೇಜಾವರ ಶ್ರೀ

ಉಡುಪಿ, ನವೆಂಬರ್ 3: ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ 60 ತುಂಬಿದ ಹಿನ್ನೆಲೆಯಲ್ಲಿ ನಡೆದ ಪ್ರಸನ್ನಾಭಿನಂದನ ಕಾರ್ಯಕ್ರಮದ ವೇಳೆ ಅಚಾತುರ್ಯ ಘಟನೆಯೊಂದು ನಡೆದಿದೆ. ಸುದೈವ ಹೆಚ್ಚಿನ ಅನಾಹುತವೇನೂ ಆಗಿಲ್ಲ. ಪ್ರಸ್ತುತ ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Shri Vishwaprasanna Tirtha Swamiji of Shri Pejawar Math) ಅವರು ದೆಹಲಿ ಪ್ರವಾಸದಲ್ಲಿದ್ದಾರೆ. ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಹತ್ವದ ಧಾರ್ಮಿಕ ಆಚರಣೆಯಾದ ಚಾತುರ್ಮಾಸ್ಯ ಕಾರ್ಯಕ್ರಮ ಪೂರ್ಣಗೊಳಿಸಿ ಬಂದ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳಿಗೆ ಭಕ್ತರು ತುಲಾಭಾರ ಸೇವೆ (thulabhara seva) ನಡೆಸುತ್ತಿದ್ದಾಗ ಈ ಅಚಾತುರ್ಯ ನಡೆದಿದೆ.


ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ತುಲಾಭಾರ ಮಾಡಲಾಗುತ್ತಿತ್ತು. ಆ ವೇಳೆ ತಕ್ಕಡಿಯ ಹಗ್ಗ ಕಳಚಿ ಬಿದ್ದಿದೆ. ತಕ್ಕಡಿಯ ಸರಳು ಪೇಜಾವರ ಶ್ರೀಗಳ ತಲೆಯ ಮೇಲೆ ಕಳಚಿ ಬಿದ್ದಿದೆ. ತಲೆಗೆ ಚಿಕ್ಕ ಗಾಯವಾಗಿದ್ದು, ಪೇಜಾವರ ಶ್ರೀಗಳು ಅನಾಹುತದಿಂದ ಪಾರಾಗಿದ್ದಾರೆ. ತರಚಿದ ಗಾಯದೊಂದಿಗೆ ಪೇಜಾವರ ಶ್ರೀಗಳು ಸುರಕ್ಷಿತವಾಗಿದ್ದಾರೆ ಎಂದು ಭಕ್ತರು ತಿಳಿಸಿದ್ದಾರೆ. ತಕ್ಕಡಿ ಕುಸಿದು ಬೀಳುತ್ತಿದ್ದಂತೆ ಭಕ್ತರು ಆತಂಕಗೊಂಡರು. ಆದರೆ ಕೈ ಸನ್ನೆಯ ಮೂಲಕ ತಮಗೆ ಏನೂ ಆಗಿಲ್ಲ ಎಂದು ಪೇಜಾವರ ಶ್ರೀ ನಗುಮುಖ ಸೂಸಿದ್ದಾರೆ.


ನಾನು ಆರಾಮವಾಗಿದ್ದೇನೆ. ಆತಂಕ ಪಡಬೇಡಿ – ಸ್ವಾಮೀಜಿ ಪ್ರತಿಕ್ರಿಯೆ


ಈ ಬಗ್ಗೆ ದೆಹಲಿಯಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ತುಲಾಭಾರ ಕಾರ್ಯಕ್ರಮದಲ್ಲಿ ತಕ್ಕಡಿ ಹಗ್ಗ ನನ್ನ ತಲೆಯ ಮೇಲೆ ಕಳಚಿ ಬಿತ್ತು. ಅದರಿಂದಾದ ಗಾಯ ಪೂರ್ಣ ಮಾಸಿಹೋಗಿದೆ. ಗಾಯದ ಕುರುಹು ಸಹ ಇಲ್ಲದಂತೆ ವಾಸಿಯಾಗಿದೆ. ದೊಡ್ಡ ಗಾಯ ಏನೂ ಆಗಿಲ್ಲ, ನಾನು ಆರಾಮವಾಗಿದ್ದೇನೆ. ಯಾರು ಗಾಬರಿಯಾಗಬೇಕಾಗಿಲ್ಲ, ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಹೇಳಿದ್ದಾರೆ

ಬಾಯ್‌ ಫ್ರೆಂಡ್‌ನೊಂದಿಗೆ ಶವವಾಗಿ ಪತ್ತೆಯಾದ ನೀಲಿ ಚಿತ್ರ ತಾರೆ

Posted by Vidyamaana on 2024-01-28 15:51:13 |

Share: | | | | |


ಬಾಯ್‌ ಫ್ರೆಂಡ್‌ನೊಂದಿಗೆ ಶವವಾಗಿ ಪತ್ತೆಯಾದ ನೀಲಿ ಚಿತ್ರ ತಾರೆ

ಅಮೆರಿಕದ ನೀಲಿ ಚಿತ್ರ ತಾರೆ ಜೆಸ್ಸಿ ಜೇನ್(43) ಮತ್ತು ಆಕೆಯ ಬಾಯ್‌ಫ್ರೆಂಡ್ ನಟ ಬ್ರೇಟ್ ಒಂದೇ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಮಿತಿ ಮೀರಿ ಮಾದಕ ವಸ್ತು ಸೇವನೆ ಮಾಡಿದ್ದಕ್ಕಾಗಿ, ಇವರಿಬ್ಬರ ಜೀವ ಹೋಗಿದೆ ಎಂದು ವರದಿಯಾಗಿದೆ.ಜೆಸ್ಸಿ ಬ್ರೇಟ್ ಜೊತೆ ಲೀವ್ ಇನ್‌ ರಿಲೇಶಿನ್‌ಶಿಪ್‌ನಲ್ಲಿ ಇದ್ದಳು. ಹಾಗಾಗಿ ಈಕೆ ಬಾಯ್‌ಫ್ರೆಂಡ್ ಮನೆಯಲ್ಲಿಯೇ ಇರುತ್ತಿದ್ದಳು. ಇಬ್ಬರೂ ಅಗತ್ಯಕ್ಕಿಂತ ಹೆಚ್ಚು ಮಾದಕ ವಸ್ತುವನ್ನು ಸೇವಿಸಿದ್ದಕ್ಕೆ, ಇವರಿಬ್ಬರು ಸಾವನ್ನಪ್ಪಿದ್ದಾರೆಂದು ಅಂದಾಜಿಸಲಾಗಿದೆ.


ಇಬ್ಬರ ಶವವೂ ಒಂದೇ ಜಾಗದಲ್ಲಿ ಸಿಕ್ಕ ಕಾರಣ, ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಜೆಸ್ಸಿ 2003ರಲ್ಲಿ ನೀಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಟಿವಿ ಕಾರ್ಯಕ್ರಮಗಳಲ್ಲೂ ಆಕೆ ಭಾಗವಹಿಸಿದ್ದರು.

ನಾಸೀರ್ ತುಂಬೆ ಹೃದಯಾಘಾತದಿಂದ ನಿಧನ

Posted by Vidyamaana on 2023-10-28 17:15:24 |

Share: | | | | |


ನಾಸೀರ್ ತುಂಬೆ ಹೃದಯಾಘಾತದಿಂದ ನಿಧನ


ತುಂಬೆ :- ತುಂಬೆ ನಿವಾಸಿಯಾಗಿರುವ ಹಾಗೂ SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ ರವರ ಸಹೋದರ ನಾಸೀರ್ ತುಂಬೆ ರವರು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಅ 28 ರಂದು ನಿಧನರಾದರು_*

ದಾಂಪತ್ಯದಲ್ಲಿ ಜಗಳವಾಡಿ ಬೇರ್ಪಟ್ಟವರ ಎಲೆಕ್ಷನ್ ಕಾದಾಟ

Posted by Vidyamaana on 2024-03-11 12:14:11 |

Share: | | | | |


ದಾಂಪತ್ಯದಲ್ಲಿ ಜಗಳವಾಡಿ ಬೇರ್ಪಟ್ಟವರ ಎಲೆಕ್ಷನ್ ಕಾದಾಟ

ಕೊಲ್ಕತ್ತಾ: ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ವಿಚ್ಛೇದಿತ ಪತಿ- ಪತ್ನಿ ಪರಸ್ಪರ ಸೆಣೆಸಲು ಅನುವು ಮಾಡಿಕೊಟ್ಟಿದೆ. ಸುಜಾತಾ ಮಂಡಲ್ ಅವರು ತಮ್ಮ ಮಾಜಿ ಪತಿ ಹಾಗೂ ಬಿಷ್ಣುಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೌಮಿತ್ರಾ ಖಾನ್ ವಿರುದ್ಧ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.


ಬಿಷ್ಣುಪುರದ ಸೌಮಿತ್ರಾ ಖಾನ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಈ ತಿಂಗಳ ಆರಂಭದಲ್ಲಿ ಘೋಷಿಸಲಾಗಿತ್ತು. ಇಂದು ಮಂಡಲ್ ಅವರನ್ನು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಕಟಿಸಲಾಗಿದೆ.


ತೃಣಮೂಲ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ್ದ 2021ರ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಈ ದಂಪತಿ ಬೇರ್ಪಟ್ಟಿತ್ತು. ಪತ್ನಿ ತೃಣಮೂಲ ಕಾಂಗ್ರೆಸ್ ಸದಸ್ಯೆಯಾಗಿ ರಾಜಕೀಯಕ್ಕೆ ಧುಮುಕಿದ ತಕ್ಷಣ ಕ್ಯಾಮೆರಾ ಮುಂದೆಯೇ ಖಾನ್ ವಿಚ್ಛೇದನ ಘೋಷಿಸಿದ್ದರು.


ಬಿಷ್ಣುಪುರ ಮೂಲದ ಖಾನ್ 2019ರ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ಆ ಸಮಯದಲ್ಲಿ ಅವರ ಪತ್ನಿ ಅವರ ಪರವಾಗಿ ಪ್ರಚಾರ ಕೈಗೊಂಡಿದ್ದರು. ರಾಜ್ಯದ 42 ಸ್ಥಾನಗಳಿಗೆ ತೃಣಮೂಲ ಕಾಂಗ್ರೆಸ್ ಭಾನುವಾರ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಪಕ್ಷ ಮುಂದಾಗಿದೆ.


ಚುನಾವಣಾ ಫಲಿತಾಂಶ ಬಂದ ಬಳಿಕವಷ್ಟೇ ವಿರೋಧ ಪಕ್ಷಗಳ ಕೂಟವನ್ನು ಸೇರುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿರುವುದು ಕಾಂಗ್ರೆಸ್ ಪಾಲಿಗೆ ದೊಡ್ಡ ಹಿನ್ನಡೆಯಾಗಿದೆ.

27 ನೇ ವಾರ್ಷಿಕೋತ್ಸವದಲ್ಲಿ ಚೇತನಾ ಹಾಸ್ಟಿಟಲ್ – ಎನ್ ಎ ಬಿ ಹೆಚ್ ಪ್ರಮಾಣ ಪತ್ರ ಹಸ್ತಾಂತರ ಕಾರ್ಯಕ್ರಮ ಆಸ್ಪತ್ರೆಗೆ ಸಹಕರಿಸಿದವರಿಗೆ, ಸಿಬ್ಬಂದಿಗಳಿಗೆ ಗೌರವ – ಸಿಬ್ಬಂದಿಗಳಿಂದ ವೈದ್ಯರಿಗೆ ಸನ್ಮಾನ.

Posted by Vidyamaana on 2023-01-28 13:01:38 |

Share: | | | | |


27 ನೇ ವಾರ್ಷಿಕೋತ್ಸವದಲ್ಲಿ ಚೇತನಾ ಹಾಸ್ಟಿಟಲ್ – ಎನ್ ಎ ಬಿ ಹೆಚ್ ಪ್ರಮಾಣ ಪತ್ರ ಹಸ್ತಾಂತರ ಕಾರ್ಯಕ್ರಮ  ಆಸ್ಪತ್ರೆಗೆ ಸಹಕರಿಸಿದವರಿಗೆ, ಸಿಬ್ಬಂದಿಗಳಿಗೆ ಗೌರವ – ಸಿಬ್ಬಂದಿಗಳಿಂದ ವೈದ್ಯರಿಗೆ ಸನ್ಮಾನ.

ಪುತ್ತೂರು: 27 ವರ್ಷಗಳ ಹಿಂದೆಯೇ ಪುತ್ತೂರಿನಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ಸ್ಥಾಪಿಸಿದ ಸಹಿತ ಹಲವು ಪ್ರಥಮಗಳಿಗೆ ಕಾರಣವಾಗಿರುವ ಪುತ್ತೂರಿನ ಚೇತನಾ ಆಸ್ಪತ್ರೆಯು 27 ನೇ ವರ್ಷದ ಸಂಭ್ರಮದಲ್ಲಿ ಆಸ್ಪತ್ರೆಯ ಆರೋಗ್ಯ ಸೇವೆಗಳನ್ನು ಗಮನಿಸಿಕೊಂಡು ನೀಡುವ ‘ಎನ್.ಎ.ಬಿ.ಎಚ್’ ಪ್ರಮಾಣಪತ್ರಕ್ಕೆ ಹಸ್ತಾಂತರ ಕಾರ್ಯಕ್ರಮ ಜ.26 ರಂದು ಸಂಜೆ ಆಸ್ಪತ್ರೆಯ ವಠಾರದಲ್ಲಿ ನಡೆಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಎನ್.ಎ.ಬಿ.ಎಚ್ ಪ್ರಮಾಣ ಪತ್ರವನ್ನು ಆಸ್ಪತ್ರೆಯ ಆಡಳಿತ ಪಾಲುದಾರ ವೈದ್ಯರಾದ ಡಾ. ಜೆ.ಸಿ.ಅಡಿಗ ಮತ್ತು ಡಾ. ಶ್ರೀಕಾಂತ್ ರಾವ್ ಅವರಿಗೆ ಹಸ್ತಾಂತರಿಸಿದರು.



ಎನ್‌ಎಬಿಹೆಚ್ ರೋಗಿಗೆ ಗುಣಮಟ್ಟ, ಸುರಕ್ಷತೆಯನ್ನು ಕೊಡುತ್ತದೆ:

ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ಕುಮಾರ್ ರೈ ಅವರು ಮಾತನಾಡಿ ಎನ್.ಎ.ಬಿ.ಹೆಚ್ ಪಡೆಯಲು ಒಂದಷ್ಟು ಮಾರ್ಗಸೂಚಿ ಇದೆ. ಆದರೆ ಇದು ರೋಗಿಗೆ ಗುಣಮಟ್ಟ ಮತ್ತು ಸುರಕ್ಷತೆಯನ್ನ ಕೊಡುವಲ್ಲಿ ಸಹಕಾರಿಯಾಗಲಿದೆ. ಇದರ ಜೊತೆಗೆ ಆಸ್ಪತ್ರೆಯ ಸಿಬ್ಬಂದಿಗಳಿಗೂ ಪ್ರಯೋಜನವಿದೆ. ಯಾಕೆಂದರೆ ಕಾಲಕ್ಕೆ ತಕ್ಕಂತೆ ವೈದ್ಯಕೀಯ ಕ್ಷೇತ್ರದಲ್ಲಿ ಅಪ್‌ಗ್ರೇಡ್ ಆಗುತ್ತಿರಬೇಕು. ಗುಣಮಟ್ಟದ ಸೇವೆ ಇಂಟರ್ ನ್ಯಾಷನಲ್ ಮಾದರಿಯಲ್ಲಿ ಇರಬೇಕಾಗುವುದು ಮುಖ್ಯ ಎಂದರು. ಪ್ರಸ್ತುತ ದಿನದಲ್ಲಿ ಇದು ಕೇವಲ ಖಾಸಗಿ ಆಸ್ಪತ್ರೆ ಮಾತ್ರವಲ್ಲ ಸರಕಾರಿ ಆಸ್ಪತ್ರೆಯಲ್ಲೂ ಕಾಯಕಲ್ಪ ಕಾರ್ಯಕ್ರಮ ಅಳವಡಿಸಲಾಗಿದೆ. ಇವತ್ತು ನಮಗೆ ಎನ್‌ಎಬಿಹೆಚ್ ಪ್ರಮಾಣ ಪತ್ರ ಸಿಕ್ಕಿದೆ ಎಂದು ಸುಮ್ಮನೆ ಇರಬಾರದು. ಇದನ್ನು ಮೈಂಟೆನೆನ್ಸ್ ಮಾಡಿಕೊಂಡು ಹೋಗಬೇಕು ಎಂದ ಅವರು ಆಸ್ಪತ್ರೆ ಮತ್ತು ವೈದ್ಯರು ಪ್ರೀತಿಯಿಂದ ಚಿಕಿತ್ಸೆ ನೀಡಬೇಕು. ಉದ್ದೇಶ ಇಟ್ಟುಕೊಂಡು ಕರ್ತವ್ಯ ಮಾಡಬಾರದು ಎಂದರು. ಸರಕಾರಿ ಆಸ್ಪತ್ರೆಯ ಕಾರ್ಯಕ್ರಮದಲ್ಲೂ ಖಾಸಗಿ ವೈದ್ಯರು ಸಹಕರಿಸುವಂತೆ ವಿನಂತಿಸಿದ ಅವರು ಈಗಾಗಲೇ ಸರಕಾರಿ ವ್ಯವಸ್ಥೆಯ ಅಡಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ. ಜೆ.ಸಿ. ಅಡಿಗ ಮತ್ತು ಡಾ. ಶ್ರೀಕಾಂತ್ ಅವರು ಕರೆದಾಗ ಬಂದು ಉತ್ತಮ ಮಾಹಿತಿ ನೀಡುತ್ತಾರೆ. ಇವತ್ತಿನ ದಿನದಲ್ಲಿ ಸರಕಾರಿ ಆಸ್ಪತ್ರೆಯು ಬಹಳ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸ್ವಂತ ಆಕ್ಸಿಜನ್ ಉತ್ಪಾದನೆ ಘಟಕವಿದೆ. ಐಸಿಯು ಇದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರು ನಮ್ಮ ಸರಕಾರಿ ಆಸ್ಪತ್ರೆಯ ಜೊತೆ ಕೈ ಜೋಡಿಸುವಂತೆ ವಿನಂತಿಸಿದರು.

ಚೇತನ ಆಸ್ಪತ್ರೆಯ ಸಾಧನೆಯ ಸರಮಾಲೆಯಲ್ಲಿ ಇನ್ನೊಂದು ಹೂವು ಸೇರಿದೆ:

ಸ್ವರ್ಣೋದ್ಯಮಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್‌ನ ಮಾಲಕ ಬಲರಾಮ ಆಚಾರ್ಯ ಅವರು ಮಾತನಾಡಿ ಚಿಕ್ಕ ಬ್ಲಡ್ ಬ್ಯಾಂಕ್‌ನ್ನು ಮಾಡಬೇಕಾದರೆ ಅದರ ಅನುಷ್ಠಾನಕ್ಕೆ ಎಷ್ಟು ಕಷ್ಟ ಇದೆ ಎಂದು ನಾನು ಸ್ವತಃ ಕಂಡು ಕೊಂಡಿದ್ದೆನೆ. ಹಾಗಿರುವಾಗ ಒಂದು ಆಸ್ಪತ್ರೆಯ ಎಲ್ಲಾ ವಿಭಾಗಗಳನ್ನು ನೋಡಿ ಪ್ರಮಾಣ ಪತ್ರ ಕೊಡಬೇಕಾದರೆ ಅಷ್ಟು ಸುಲಭದ ಮಾತಲ್ಲ. ಅದನ್ನು ಸಾಧಿಸಿದ ಚೇತನ ಆಸ್ಪತ್ರಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು. ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಗಳಿಸಿದ ಹಾಗೆ ರೋಗಿಗಳ ಪೈಕಿ ಓರ್ವ ರೋಗಿಗೆ ತೊಂದರೆ ಆದರೆ ಅದು ಕೂಡಾ ವೈದ್ಯರ ತಪ್ಪು ಆಗದೇ ಇದ್ದರೂ ಅಲ್ಲಿ ರೋಗಿಯ ಸಂಬಂಧಿಕರ ಪ್ರಶ್ನೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಇದೆ. ಆದರೆ 27 ವರ್ಷದಲ್ಲಿ ಚೇತನಾ ಆಸ್ಪತ್ರೆ ತನ್ನ ಜನಪ್ರಿಯತೆಯನ್ನು ಹೆಚ್ಚು ಹೆಚ್ಚು ಮಾಡಿಕೊಂಡು ಹೋಗಿದೆ. ಅದು ಇದರ ದೊಡ್ಡ ಸಾಧನೆ. ಈ ಸಾಧನೆಯ ಸರಮಾಲೆಯಲ್ಲಿ ಎನ್‌ಎಬಿಎಹೆಚ್ ಪ್ರಮಾಣ ಲಭಿಸಿರುವುದು ಇನ್ನೊಂದು ಹೂವು ಸೇರಿದಂತಾಗಿದೆ ಎಂದರು. ಆರೋಗ್ಯ ವಿಮೆಯ ಮೂಲಕವೇ ಇವತ್ತಿನ ಆರೋಗ್ಯ ಸುಧಾರಿಕೆ ಆಗುತ್ತಿದೆ. ಇಂತಹ ಸೌಲಭ್ಯ ಪಡೆಯಲು ಆಸ್ಪತ್ರೆಗಳು ಎನ್‌ಎಬಿಹೆಚ್ ಪ್ರಮಾಣ ಪತ್ರ ಪಡೆಯುವುದು ಬಹಳ ಮುಖ್ಯ ಎಂದರು.ಡಾ.ಜೆ.ಸಿ ಅಡಿಗ, ಡಾ. ಶ್ರೀಕಾಂತ್ ಕುಟುಂಬದ ವೈದ್ಯರಂತೆ:

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರು ಮಾತನಾಡಿ ಇವತ್ತು ಡಾ.ಜೆ.ಸಿ.ಅಡಿಗ ಮತ್ತು ಡಾ. ಶ್ರೀಕಾಂತ್ ರಾವ್ ಅವರ ಹೆಸರು ದ.ಕ.ಜಿಲ್ಲೆಯಲ್ಲಿ ಪ್ರಚಲಿತದಲ್ಲಿದೆ. ಯಾಕೆಂದರೆ ಅವರ ವೈದ್ಯಕೀಯ ಸೇವೆ ಮತ್ತು ನಿಲುವು ಇವತ್ತಿಗೂ ಅವರ ಜೊತೆ ಇದೆ. ಒಬ್ಬ ವ್ಯಕ್ತಿಯಾಗಿ, ವೈದ್ಯರಾಗಿ, ಆಸ್ಪತ್ರೆಯಲ್ಲಿ ಜನರ ಮನಸ್ಸಿನಲ್ಲಿರುವುದು ಕಷ್ಟ. ಆದರೆ ಡಾ. ಅಡಿಗ ಮತ್ತು ಡಾ.ಶ್ರೀಕಾಂತ್ ಅವರು ಅದನ್ನು ಸಾಧಿಸಿದ್ದಾರೆ ಎಂದರು. ಸುಳ್ಯದಲ್ಲಿ ನಾನು ವೈದ್ಯನಾಗಿದ್ದ ಸಂದರ್ಭದಲ್ಲಿ ಅವರನ್ನು ನಮ್ಮ ಆಸ್ಪತ್ರೆಗೆ ಬರಮಾಡಿಕೊಂಡೆ. ಆಗ ಅವರ ಹೆಸರಿನಲ್ಲಿ ನಮ್ಮ ಆಸ್ಪತ್ರೆಗೆ ರೋಗಿಗಳು ಬರಲು ಆರಂಭಿಸಿದ್ದರು. ಹಾಗೆ ಮುಂದೆ ಡಾ.ಶ್ರೀಕಾಂತ್ ಅವರು ಕೂಡಾ ಜೊತೆಗೆ ಸೇರಿದರು. ಇವರಿಬ್ಬರು ಕೂಡಾ ಪುತ್ತೂರು, ಸುಳ್ಯ, ಈಶ್ವರಮಂಗಲ, ವಿಟ್ಲ ಪರಿಸರದಲ್ಲಿ ಸೇವೆಯ ಮೂಲಕ ಜನರನ್ನು ತಲುಪುವ ಕೆಲಸ ಮಾಡಿದರು. ಅದೇಷ್ಟೋ ಮಂದಿ ಚಿಕಿತ್ಸೆಗೆ ಮಂಗಳೂರಿಗೆ ಹೋಗುತ್ತಿದ್ದವರು ತಜ್ಞ ವೈದ್ಯರಾದ ಡಾ. ಅಡಿಗ ಮತ್ತು ಶ್ರೀಕಾಂತ್ ಅವರು ಪುತ್ತೂರಿನಲ್ಲೇ ಇದ್ದಾರೆಂದು ತಿಳಿದ ಬಳಿಕ ಮಂಗಳೂರಿಗೆ ಹೋಗುವುದನ್ನು ನಿಲ್ಲಿಸಿದರು. ಇವರು ರೋಗಿಯ ಖಾಯಿಲೆಯ ಜೊತೆ ಯಾರು ಎಂಬುದನ್ನು ಗುರುತಿಸುತ್ತಿದ್ದರು. ಅದು ಬಹಳ ದೊಡ್ಡ ಸಾಧನೆ. ಇದು ವೈದ್ಯರ ದುಡ್ಡಿನ ಚಿಕಿತ್ಸೆಯಲ್ಲ. ಬದಲಾಗಿ ಮಾನವೀಯತೆ ಮತ್ತು ಸಂಬಂಧಗಳು. ಇದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಡಾ. ಜೆ.ಸಿ ಅಡಿಗರು ಮತ್ತು ಡಾ. ಶ್ರೀಕಾಂತರು ಒಬ್ಬ ಕುಟುಂಬದ ವೈದ್ಯರಂತೆ. ಯಾಕೆಂದರೆ ಅವರಿಗೆ ಕುಟುಂಬ ರೋಗಿಯೊಂದಿಗೆ ಭಾವನಾತ್ಮಕ ಸಂಬಂಧವಿದೆ.

ವೈದ್ಯಕೀಯ ವೃತ್ತಿಯಲ್ಲಿ ಚಾಲಕೀತನ ಅದು ಬೇರೆಯೇ ಆಗಿರುತ್ತದೆ. ಆದರೆ ಆತ್ಮೀಯತೆ, ನಂಬಿಕೆ ವಿಶ್ವಾಸ ಇದು ಅಡಿಗರು ಮತ್ತು ಶ್ರೀಕಾಂತರಲ್ಲಿದೆ ಎಂದ ಅವರು ಇದು ಆಸ್ಪತ್ರೆಗೂ ಏನೋ ತೊಂದರೆ ಆದಾಗಲೂ ಜನರು ವೈದ್ಯರನ್ನು ಒಳ್ಳೆಯವರೆಂದೇ ಗುರುತಿಸುತ್ತಾರೆ. ಇದು ಸಂಬಂಧವನ್ನು ವೃದ್ಧಿಸುತ್ತದೆ ಎಂದರು.


ಚೇತನಾ ಆಸ್ಪತ್ರೆಯಿಂದ ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆ:

ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೋನ್ ಕುಟ್ಹೀನಾ ಅವರು ಮಾತನಾಡಿ ಆರೋಗ್ಯಕ್ಕೆ ಸಂಬಂಧಿಸಿ ದೂರಾಲೋಚನೆಯೊಂದಿಗೆ ಡಾ. ಜೆ.ಸಿ ಅಡಿಗ, ಡಾ. ಶ್ರೀಕಾಂತ್ ಅವರು ಆರಂಭಿಸಿದ ಆಸ್ಪತ್ರೆಯಿಂದ ಇವತ್ತು ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆ. ಹೆಸರು ಮಾಡಲು ಸುಲಭವಿಲ್ಲ. ಆಸ್ಪತ್ರೆ ಮಾಡಿದ ಮೇಲೆ ಅಲ್ಲಿ ರೋಗಿಗೆ ಸಿಗುವ ಚಿಕಿತ್ಸಾ ಸೌಲಭ್ಯ ಉತ್ತಮವಾಗಿರಬೇಕು. ಇದನ್ನು ಇತರರಿಗೆ ನಾವು ಹೇಳಬೇಕು. ಆದರೆ ಅಲ್ಲಿ ಏನಾದರು ಸ್ವಲ್ಪ ಹೆಚ್ಚು ಕಡಿಮೆ ಆದರೆ ಹೇಳಬಾರದು. ಅದನ್ನು ಪರಾಂಬಿರಿಸಿ ನೋಡಬೇಕು. ಆಗ ನಾವು ಉತ್ತಮ ಕೆಲಸ ಮಾಡಿದಂತೆ. ಈ ಇಬ್ಬರು ಯುವಕರು 25 ವರ್ಷ ಹಿಂದೆ ನಿರ್ಮಾಣ ಮಾಡಿದ ಆಸ್ಪತ್ರೆ ಜನಮೆಚ್ಚುಗೆ ಪಡೆದಿದೆ. ಇವತ್ತು ಪುತ್ತೂರಿನ ಮಟ್ಟಿಗೆ ವೈದ್ಯರು ಉತ್ತಮ ಸೇವೆ ಕೊಡುವಂತಹವರಾಗಿದ್ದಾರೆ ಎಂದ ಅವರು ವೈದ್ಯರ ಕುರಿತು ಕವನ ಹಾಡಿದರು.

ವೈದ್ಯಕೀಯದಲ್ಲಿ ಸಂಕಟ ಬಂದಾಗ ನಾವೆಲ್ಲ ಒಂದಾಗಿದ್ದೇವೆ :

ಆದರ್ಶ ಆಸ್ಪತ್ರೆಯ ಡಾ. ಎಂ.ಕೆ.ಪ್ರಸಾದ್ ಅವರು ಮಾತನಾಡಿ ಅಡಿಗರು, ಶ್ರೀಕಾಂತದ್ವಯರು ಮೋಸ್ಟ್ ಇಂಟಲಿಜಂಟ್ ಮ್ಯಾನ್, ಮೋಸ್ಟ್ ಎನ್‌ಸೈಕ್ಲೋಪಿಡಿಯಾ. ನಮಗೇನಾದರೂ ಸಂಶಯ ಬಂದಾಗ ನಾವು ಕೇಳುವುದು ಅಡಿಗರನ್ನೇ ಎಂದ ಅವರು ಇಬ್ಬರು ವೈದ್ಯರು ಊರಿಗೆ ಒಳ್ಳೆಯ ಸೇವೆ ಮಾಡಿದ್ದಾರೆ. ಇವತ್ತು ಅನೇಕ ಸಂದರ್ಭದಲ್ಲಿ ನಮಗೆಲ್ಲರಿಗೂ ತೊಂದರೆ ಆಗಿದೆ. ವೈದ್ಯರಿಗೂ ಆಪತ್ತು ಬರುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯಕೀಯದಲ್ಲಿ ಸಂಕಟ ಬಂದಾಗ ನಾವೆಲ್ಲ ಒಂದಾಗಿದ್ದೇವೆ ಎಂದರು.

ಚೇತನ ಆಸ್ಪತ್ರೆ ನನ್ನ ತವರು:

ಡಾ.ಪೂರ್ಣಾ ಸಿ ರಾವ್ ಅವರು ಮಾತನಾಡಿ ಹಿಂದೆ ಯಾವ ಕೇಸು ತೆಗೆಯುವಾಗ ಭಯವಿರಲಿಲ್ಲ. ರೋಗಿಯನ್ನು ಬದುಕಿಸುವ ಚಿಂತನೆ ನಮ್ಮ ಮುಂದಿತ್ತು. ಇವತ್ತು ನಾವು ಕೇಸು ತೆಗೆದು ಕೊಳ್ಳುವ ಮುಂಚೆ ಇದರಿಂದ ನಮಗೆನಾದರೂ ಪೆಟ್ಟು ಬೀಳುತ್ತದೆಯೋ ಎಂದು ಚಿಂತನೆ ಮಾಡುವ ಪರಿಸ್ಥಿತಿ ವೈದ್ಯ ಸಮೂಹದ ಮುಂದಿರುವ ಪ್ರಶ್ನೆಯಾಗಿದೆ. ಆದ್ದರಿಂದ ಇಂತಹ ಪರಿಸ್ಥಿತಿಗೆ ಗಟ್ಟಿಯಾದ ಕಾನೂನು ಬೇಕು ಎಂದರು. ಇವತ್ತು ಮಂಗಳೂರಿಗೆ ಗೈನಕಾಲೋಜಿಸ್ಟ್‌ಗೆ ಕಂಪೇರ್ ಮಾಡಿದರೆ ನಾವು ಆರ್ಥಿಕವಾಗಿ ಹಿಂದುಳಿದ್ದಿದ್ದರೂ ಆದರೆ ರೋಗಿಯ ಪ್ರೀತಿಯಲ್ಲಿ ನಾವು ತುಂಬಾ ಎತ್ತರದಲ್ಲಿದ್ದೇವೆ. ಹಾಗಾಗಿ ಪುತ್ತೂರಿನ ಜನತೆಗೆ ನನ್ನ ಹೃತ್ಪೂರ್ವಕ ವಂದನೆ ಎಂದ ಅವರು ನಾನು ಈಗ ಪೂರ್ಣಚಂದ್ರ ಕ್ಲೀನಿಕ್ ಮಾಡಿದ್ದರೂ ನನ್ನ ತವರು ಚೇತನ ಆಸ್ಪತ್ರೆಯೇ ಆಗಿದೆ ಎಂದರು.


ಎಷ್ಟೆ ರಾತ್ರಿಯಾದರೂ ತುರ್ತು ಸಂದರ್ಭದಲ್ಲಿ ಸೇವೆ ನೀಡಿದವರು:

ಡಾ. ಶ್ರೀಕುಮಾರ್ ಅವರು ಮಾತನಾಡಿ ಹಣ ಮಾಡಲು ಚಿಕಿತ್ಸೆ ಮಾಡಬೇಡಿ, ಗುಣ ಮಾಡಲು ಚಿಕಿತ್ಸೆ ಮಾಡಿ, ಆಗ ಹಣ ತನ್ನಿಂದ ತಾನೆ ಬರುತ್ತದೆ ಈ ಮಾತು ಬಹಳ ಸತ್ಯದ ಮಾತು. ಇದಕ್ಕೆ ಪೂರಕವಾಗಿ ಡಾ. ಜೆ.ಸಿ.ಅಡಿಗ ಮತ್ತು ಡಾ. ಶ್ರೀಕಾಂತ್ ಅವರು ಉತ್ತಮ ಸೇವೆ ಮಾಡಿದ್ದಾರೆ. ಎಷ್ಟೇ ರಾತ್ರಿಯಾದರೂ ತಕ್ಷಣ ತುರ್ತು ಸಂದರ್ಭದಲ್ಲಿ ಬಂದು ರೋಗಿಯನ್ನು ಗುಣಪಡಿಸಿದ್ದಾರೆ ಎಂದರು.

ಚೇತನಾ ಅಸ್ಪತ್ರೆಯಲ್ಲಿ ಲಭ್ಯವಿರುವ ವಿಶೇಷ ಸೇವೆಗಳು:

24 ಗಂಟೆ ಕಾರ್ಯಾಚರಿಸುವ ವೈದ್ಯಕೀಯ ಸೇವೆಗಳಲ್ಲಿ ಮುಖ್ಯವಾದವುಗಳೆಂದರೆ, ಥೈರೋಕೇರ್ ಡಯಾಗ್ನಾಸ್ಟಿಕ್ನ ಸಹಯೋಗದೊಂದಿಗೆ ಕಂಪ್ಯೂಟರಿಕೃತ ಲ್ಯಾಬೊರೇಟರಿ, ಎಕ್ಸ್-ರೇ 300 ಎಂ.ಎ., ಎಕ್ಸ್-ರೇ ಯುನಿಟ್ ಮತ್ತು ಸಿ ಆರ್ಮ್ ಡಿಜಿಟಲ್ ಎಕ್ಸ್-ರೇ, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮತ್ತು ಕಲರ್ ಡಾಪ್ಲರ್, ಡಾಪ್ಲರ್ ಸ್ಕ್ಯಾನ್, ಫಾರ್ಮಸಿ ವಿಭಾಗ, ಅನುಭವಿ ತಜ್ಞ ವೈದ್ಯೆಯರ ಲಭ್ಯತೆಯೊಂದಿಗೆ ಸುಸಜ್ಜಿತ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗ, ಇಂಕ್ಯುಬೇಟರ್, ಫೊಟೋಥೆರಪಿ ಮತ್ತು ವೆಂಟಿಲೇಟರ್ ಸೌಲಭ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ತೀವ್ರ ನಿಗಾ ವಿಭಾಗ, ಹೃದಯ ಸ್ಕ್ಯಾನಿಂಗ್ಗೆ ಇಕೋಕಾರ್ಡಿಯಗ್ರಾಫಿ, ಅಸ್ತಮಾ ಚಿಕಿತ್ಸೆಗೆ ಸ್ಪೇರೋಮೀಟರ್, ವಿಡಿಯೋ ಎಂಡೋಸ್ಕೋಪಿ, ಕೋಲೊನೋಸ್ಕೋಪಿ, ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ, ಮೂತ್ರ ಜನಕಾಂಗದ ಶಸ್ತ್ರಚಿಕಿತ್ಸೆಗಾಗಿ ಕ್ರಯೋಸರ್ಜರಿ, ಫೇಕೋ ಶಸ್ತ್ರಚಿಕಿತ್ಸೆ ಸೌಲಭ್ಯದೊಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ಇವೆಲ್ಲದರ ಜೊತೆಯಲ್ಲಿ ೨೪ ಗಂಟೆ ಕಾರ್ಯನಿರ್ವಹಿಸುವ ಆಂಬುಲೆನ್ಸ್ ಸೇವೆ ಹಾಗೂ ಇಲೆಕ್ಟ್ರೋಕನ್ವಲ್ಸಿವ್ ಥೆರಪಿ ಸೌಲಭ್ಯವೂ ಇಲ್ಲಿದೆ. ಇನ್ನು ಮಲ್ಟಿಪ್ಯಾರಾ ಮಾನಿಟರ್ ಸೌಲಭ್ಯದೊಂದಿಗೆ ಹವಾನಿಯಂತ್ರಿತ ಶಸ್ತ್ರಚಿಕಿತ್ಸಾ ಕೊಠಡಿ.. ಹೀಗೆ ನಗರದ ಪ್ರಮುಖ ಭಾಗದಲ್ಲಿ ಸ್ಥಾಪನೆಗೊಂಡಿರುವ ಚೇತನಾ, ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳು, ನುರಿತ ತಜ್ಞವೈದ್ಯರು, ರೋಗಿಗಳಿಗೆ ಆಪ್ತಪಾಲನೆಯನ್ನು ಒದಗಿಸುವ ಸಿಬ್ಬಂದಿವರ್ಗ, ಇವರೆಲ್ಲರ ಒಗ್ಗಟ್ಟಿನ ಶ್ರಮದ ಫಲವಾಗಿ ‘ಚೇತನಾ’ 25 ಸಂವತ್ಸರಗಳ ಬಳಿಕವೂ ರೋಗಿಗಳ ಪಾಲಿಗೆ ಆಪ್ತಚೇತನಾಗಿ, ಆರೋಗ್ಯ ಚೇತರಿಕೆಯ ಹೆಗ್ಗುರುತಾಗಿ ಇಲ್ಲಿನವರ ಮನದಲ್ಲಿ ನೆಲೆಯಾಗಿದೆ ಎಂದು ಚೇತನಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.



Leave a Comment: