ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ 78 ನೇ ಸ್ವಾತಂತ್ರ್ಯ ದಿನಾಚರಣೆ

Posted by Vidyamaana on 2024-08-17 06:39:10 |

Share: | | | | |


SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ 78 ನೇ ಸ್ವಾತಂತ್ರ್ಯ ದಿನಾಚರಣೆ

ಪುತ್ತೂರು :78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಪಕ್ಷದ ಕಚೇರಿಯಲ್ಲಿ ನಡೆಯಿತು.

ಧ್ವಜಾರೋಹಣವನ್ನು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ನೆರವೇರಿಸಿದರು.

ರೈತರೇ ನಡೆಸಿದ ಹೋರಾಟ

Posted by Vidyamaana on 2023-08-16 07:14:31 |

Share: | | | | |


ರೈತರೇ ನಡೆಸಿದ ಹೋರಾಟ

ಪರತಂತ್ರ್ಯದಲ್ಲೂ 14 ದಿನಗಳ ಸ್ವತಂತ್ರ ಆಡಳಿತ: ಹೀಗಿತ್ತು ನೋಡಿ ಸುಧಾರಣಾ ಕ್ರಮಗಳು

ರೈತರೇ ನಡೆಸಿದ ಹೋರಾಟ, ರಕ್ಕಸಪಟ್ಟ (ಮಲರಾಯ) ದೈವದ ಪಾಡ್ದನದಲ್ಲೂ ಉಲ್ಲೇಖ

ಸ್ವಾತಂತ್ರ್ಯೋತ್ಸವದ ವಿಶೇಷ ಲೇಖನ…


ಬ್ರಿಟಿಷರ ಸೊಕ್ಕನ್ನು ಮುರಿದು 14 ದಿನ ಸ್ವತಂತ್ರ ಆಡಳಿತ ನಡೆಸಿದ ಖ್ಯಾತಿ ತುಳುನಾಡ ರೈತರದ್ದು. ಮಂಗಳೂರಿನಿಂದ ಬ್ರಿಟಿಷರನ್ನು ಓಡಿಸಿ, 1837ರ ಏ. 5ರಿಂದ 19ರವರೆಗೆ ಅಂದರೆ 14 ದಿನಗಳ ಕಾಲ ಆಡಳಿತ ನಡೆಸುವಲ್ಲಿ ಶಕ್ತರಾದರು. ಏ. 5ರಂದು ಬ್ರಿಟಿಷರ ಬಾವುಟ ಮುರಿದು, ಸ್ವತಂತ್ರ ಆಡಳಿತದ ಬಾವುಟ ಹಾರಿಸಿದ ದಿನ. ಏ. 19ರ ರಾತ್ರಿ ಬ್ರಿಟಿಷರು ಮುತ್ತಿಗೆ ಹಾಕಿ, ತುಳುನಾಡ ರೈತರ ಆಡಳಿತವನ್ನು, ಹೋರಾಟವನ್ನು ಹತ್ತಿಕ್ಕಿದ ದಿನ. ಈ ನಡುವಿನ 14 ದಿನಗಳ ಆಡಳಿತ ಹಾಗೂ ಆಡಳಿತವನ್ನು ಪಡೆಯಲು ನಡೆಸಿದ ಹೋರಾಟ ಜನಮಾನಸದಲ್ಲಿ ಸದಾ ಹಸಿರು.

ಮಾಹಿತಿ ತಂತ್ರಜ್ಞಾನ ಇನ್ನೂ ಬೆಳೆದಿರದ ದಿನಗಳವು. ಹಾಗಾಗಿ 14 ದಿನಗಳ ಕಾಲ ನಡೆಸಿದ ಆಡಳಿತ ಹೇಗಿತ್ತು ಎನ್ನುವುದರ ಪೂರ್ಣ ಮಾಹಿತಿ ಸಿಗುವುದು ಕಷ್ಟವೇ. ಬ್ರಿಟಿಷರನ್ನು ಒದ್ದೋಡಿಸಿದ ನಾಯಕರು ಆಡಳಿತ ಚುಕ್ಕಾಣಿ ಹಿಡಿಯುತ್ತಿದ್ದಂತೆ, ರೈತರು ತಮ್ಮೂರಿಗೆ ಮರಳಿ ಬೇಸಾಯದಲ್ಲಿ ತೊಡಗಿಕೊಂಡರು. ಮರಳಿ ಬಂದ ಬ್ರಿಟಿಷರು ಆಡಳಿತ ನಡೆಸುತ್ತಿದ್ದ ನಾಯಕರನ್ನು ಹಿಡಿದು ಗಲ್ಲಿಗೇರಿಸಿದರು. ಮುಂದೆ ಬೋಪು ದಿವಾನ ಎನ್ನುವವ ತನ್ನ ವೈಯಕ್ತಿಕ ಸೈನ್ಯದ ನೆರವಿನಿಂದ, ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ರೈತರನ್ನು ಹಿಡಿದು ಬ್ರಿಟಿಷರಿಗೊಪ್ಪಿಸಿದ. ಹಾಗಾಗಿ 14 ದಿನಗಳ ಪೂರ್ಣ ಚಿತ್ರಣ ಸಿಗುವುದು ಕಷ್ಟವೇ ಆಯಿತು. ಸಿಕ್ಕ ಮಾಹಿತಿಗಳ ದಾಖಲೀಕರಣ ನಡೆದಿದೆ.

ಹಣದ ಬದಲು ವಸ್ತು ರೂಪದ ಕಂದಾಯ:

ರಾಜರ ಕಾಲದಲ್ಲಿ ರೈತರು ಬೆಳೆದ ಧಾನ್ಯಗಳನ್ನು, ಸುವಸ್ತುಗಳನ್ನು ಕಂದಾಯ ರೂಪದಲ್ಲಿ ನೀಡಲಾಗುತ್ತಿತ್ತು. ಆದರೆ ಬ್ರಿಟಿಷರು ಇದನ್ನು ತೆಗೆದು, ಹಣದ ರೂಪದಲ್ಲೇ ಕಂದಾಯ ನೀಡಬೇಕೆಂದು ಕಾನೂನು ರೂಪಿಸಿದರು. ಇದು ರೈತರಿಗೆ ತಲೆನೋವಾಯಿತು. ಹಣದ ರೂಪಕ್ಕೆ ಧಾನ್ಯಗಳನ್ನು ಬದಲಾಯಿಸುವಾಗ, ರೈತರು ಇನ್ನಷ್ಟು ನಷ್ಟವನ್ನೇ ಅನುಭವಿಸಿದರು. ಒಟ್ಟಿನಲ್ಲಿ ಕಂದಾಯ ಪಾವತಿ ಮಾಡುವಾಗ ಎರಡೆರಡು ಪಟ್ಟಿನಷ್ಟು ನಷ್ಟವನ್ನು ಅನುಭವಿಸುವಂತಾಯಿತು. ಹಾಗಾಗಿ ಆಡಳಿತ ಸಿಕ್ಕ ತುಳುನಾಡ ರೈತರ ಎರಡನೇ ಪ್ರಮುಖ ಸುಧಾರಣೆಯೇ ಕಂದಾಯದ ಪ್ರಮಾಣವನ್ನು ಶೇ. 50ರಿಂದ ಶೇ. 10ಕ್ಕೆ ಇಳಿಸಿದ್ದು ಹಾಗೂ ಕಂದಾಯವನ್ನು ವಸ್ತು ರೂಪದಲ್ಲಿ ನೀಡಬಹುದು ಎಂದು ಬದಲಾಯಿಸಿದ್ದು. ರಾಜರುಗಳ ಕಾಲದಲ್ಲಿ ಶೇ. 10ರಷ್ಟು ಕಂದಾಯ ವಿಧಿಸಲಾಗುತ್ತಿತ್ತು.

ಇದರೊಂದಿಗೆ 3 ವರ್ಷಗಳ ಕಾಲ ಯಾವುದೇ ಕಂದಾಯ ಕಟ್ಟಬೇಕಾಗಿಲ್ಲ ಎಂಬ ಆದೇಶವೂ ಸಿದ್ಧಗೊಂಡಿತ್ತು ಎಂದೂ ಹೇಳಲಾಗುತ್ತಿದೆ.

ಉಪ್ಪು, ಹೊಗೆಸೊಪ್ಪಿನ ಕರ ಇಳಿಕೆ:

ಬ್ರಿಟಿಷ್ ವಿರೋಧಿ ಅಲೆ ಮೂಡಲು ಪ್ರಮುಖ ಕಾರಣವೇ ದಿನನಿತ್ಯದ ವಸ್ತುಗಳ ಮೇಲೆ ಕರ ಹೆಚ್ಚಳ ಮಾಡಿದ್ದು. ಅದರಲ್ಲೂ ದಿನನಿತ್ಯದ ಅಡುಗೆಗೆ ಬಳಸುತ್ತಿದ್ದ ಉಪ್ಪು ಉತ್ಪಾದನೆ ಹಾಗೂ ವೀಳ್ಯದೆಲೆ ಮೊದಲಾದವಕ್ಕೆ ಬಳಸುತ್ತಿದ್ದ ಹೊಗೆಸೊಪ್ಪು ಬೆಳೆಸಬಹುದು ಎಂಬ ಹಕ್ಕನ್ನು ಬಂಟ್ವಾಳದ ರಂಗ ಬಾಳಿಗ ಎನ್ನುವವರಿಗೆ ಮಾತ್ರ ನೀಡಲಾಗಿತ್ತು. ಇದನ್ನು ಹಲವಾರು ಮಂದಿ ವಿರೋಧಿಸಿದರು. ಪರಿಣಾಮ ಹೋರಾಟ ರೂಪು ಪಡೆಯಿತು. ಆದ್ದರಿಂದ ತುಳುನಾಡ ರೈತರ ಆಡಳಿತದ ಮೊದಲ ಆಡಳಿತ ಸುಧಾರಣೆಯೇ ಉಪ್ಪು ಹಾಗೂ ಹೊಗೆಸೊಪ್ಪಿನ ಕರವನ್ನು ಕಡಿಮೆ ಮಾಡಿದ್ದು ಹಾಗೂ ಯಾರೂ ಕೂಡ ಮಾರಾಟ ಮಾಡಬಹುದು ಎನ್ನುವ ಕಾನೂನು ಜಾರಿ ಮಾಡಿರುವುದು.

ಪುತ್ತೂರು, ಸುಳ್ಯ ಮರಳಿ ಕೊಡಗಿನ ತೆಕ್ಕೆಗೆ:

ಅಮರ ಸುಳ್ಯ ಹಾಗೂ ಪುತ್ತೂರು ಇಕ್ಕೇರಿ ರಾಜವಂಶಸ್ಥರಲ್ಲಿತ್ತು. ಅದನ್ನು ಹಾಲಿಗಾಗಿ ಹಾಲೇರಿ ರಾಜವಂಶಸ್ಥರಿಗೆ ದಾನವಾಗಿ ನೀಡಿದ್ದರು. ಈ ಪ್ರದೇಶವನ್ನು ಬ್ರಿಟಿಷರು ವಶಪಡಿಸಿಕೊಂಡಿದ್ದರು. ರೈತರು ಈ ಪ್ರದೇಶವನ್ನು ಮರಳಿ ವಶಪಡಿಸಿಕೊಂಡಾಗ, ಪುತ್ತೂರು ಹಾಗೂ ಅಮರ ಸುಳ್ಯವನ್ನು ಕೊಡಗಿಗೆ ಸೇರಿಸಿಬಿಟ್ಟರು.

ಹೀಗೆ ಒಟ್ಟು 14 ದಿನಗಳ ಕಾಲ ಜನಪರ ಆಡಳಿತವನ್ನು ನೀಡಲು ರೈತ ಮುಖಂಡರು ಪ್ರಯತ್ನಿಸಿದರು. ಆದರೆ ಏ. 19ರ ರಾತ್ರಿ ಬ್ರಿಟಿಷರು ದಾಳಿ ನಡೆಸಿ, ಕಳಕೊಂಡ ಪ್ರದೇಶವನ್ನು ಮರು ವಶಪಡಿಸಿಕೊಂಡರು. ಸ್ವಾತಂತ್ರ್ಯ ಹೋರಾಟಗಾರರಾದ ರೈತರು ಅಳವಡಿಸಿಕೊಂಡ ಸುಧಾರಣಾ ಕ್ರಮಗಳನ್ನು ಜಾರಿ ಮಾಡಲು ಸಾಧ್ಯವಾಗದೇ ಹೋಯಿತು. ಆದರೆ ಇತಿಹಾಸದ ಪುಟದಲ್ಲಿ ಭದ್ರ ಸ್ಥಾನವನ್ನು ಪಡೆದಿದೆ. ಅದರಲ್ಲೂ ಜನಪದದ ತಿರುಳು ಎಂದೇ ಕರೆಯಲ್ಪಡುವ ದೈವಗಳ ಪಾಡ್ದನದಲ್ಲೂ ಇದರ ಉಲ್ಲೇಖ ಆಗಿದೆ ಎನ್ನುವುದು ವಿಶೇಷ.

ಪುತ್ತೂರು ತಾಲೂಕಿನ ಅರಿಯಡ್ಕದಲ್ಲಿ ಆರಾಧನೆ ಪಡೆದುಕೊಳ್ಳುವ ರಕ್ಕಸಪಟ್ಟ ದೈವದ ಪಾಡ್ದನದಲ್ಲಿ ಕಲ್ಯಾಣಪ್ಪನ ದಂಡಿನ ಪ್ರಸ್ತಾಪ ಬರುತ್ತದೆ. ವಿಟ್ಲ ಸೀಮೆಯಲ್ಲಿ ಹೆಚ್ಚು ಆರಾಧನೆ ಪಡೆದುಕೊಳ್ಳುವ ಮಲರಾಯ ದೈವವೇ ಈ ರಕ್ಕಸಪಟ್ಟ ದೈವ. ಅರಿಯಡ್ಕಕ್ಕೆ ತೆಗೆದುಕೊಂಡು ಬಂದು ಆರಾಧನೆ ಪಡೆದುಕೊಂಡ ಬಳಿಕ ರಕ್ಕಸಪಟ್ಟ ದೈವವಾಗಿ ಆರಾಧನೆ ಪಡೆದುಕೊಳ್ಳುತ್ತದೆ. ಆಗಿನ ಆಚಾರ – ವಿಚಾರ, ಆಗು-ಹೋಗುಗಳ ಪ್ರಸ್ತಾಪವನ್ನು ಈ ಪಾಡ್ದನದಲ್ಲಿ ನೋಡಲು ಸಾಧ್ಯ. ಅದೇ ಹೊತ್ತಿನ ವಿದ್ಯಮಾನ ಕಲ್ಯಾಣಪ್ಪನ ದಂಡು ಆಗಿರುವುದರಿಂದ, ಪಾಡ್ದನದಲ್ಲೂ ಪ್ರಸ್ತಾಪ ಆಗಿದೆ.

ಬೆಳ್ತಂಗಡಿ : ವಿದ್ಯುತ್ ತಂತಿ ಗೆ ಏಣಿ ತಾಗಿ ವ್ಯಕ್ತಿ ಸಾವು

Posted by Vidyamaana on 2023-11-25 11:06:48 |

Share: | | | | |


ಬೆಳ್ತಂಗಡಿ : ವಿದ್ಯುತ್ ತಂತಿ ಗೆ ಏಣಿ ತಾಗಿ ವ್ಯಕ್ತಿ ಸಾವು

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ  ಮಲ್ಲರ್ಮಾಡಿ ಎಂಬಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ತಾಗಿ,  ವಿದ್ಯುತ್‌ಶಾಕ್‌ಗೆ ಒಳಗಾಗಿ ಕಾರ್ಮಿಕ ಸಾವನ್ನಪ್ಪಿದ  ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

 ಧರ್ಮಸ್ಥಳ ಗ್ರಾಮದ ಮಲ್ಲರ್ಮಾಡಿ ನಿವಾಸಿ ಬಾಲಕೃಷ್ಣ ಶೆಟ್ಟಿ (46)  ಮೃತಪಟ್ಟವರಾಗಿದ್ದಾರೆ. ಅವರು ಇಂದು ಬೆಳಿಗ್ಗೆ ಸ್ಥಳೀಯ ಬೊಮ್ಮಣ್ಣ ಗೌಡ ಎಂಬವರ ಮನೆಗೆ ತೋಟದ ಕೆಲಸಕ್ಕೆ ಹೋಗಿದ್ದು, ತೋಟದಲ್ಲಿ ಸೊಪ್ಪು ಕಡಿಯಲು ಅಲ್ಯೂಮಿನಿಯಂ ಏಣಿಯನ್ನು ಎತ್ತಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ತೋಟದ ನಡುವಿನಲ್ಲಿ ಹಾದುಹೋಗಿದ್ದ ವಿದ್ಯುತ್‌ಲೈನ್‌ಗೆ ತಾಗಿ ವಿದ್ಯುತ್‌ಶಾಕ್ ತಗಲಿದೆ, ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದ ಅವರನ್ನು. ಕೂಡಲೇ  ಉಜಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದರೂ ಆವೇಳೆಗೆ ಅವರು ಮೃತಪಟ್ಟಿದ್ದರು. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೆಸ್ಕಾಂ ಇಲಾಖೆಯ ಅಧಿಕಾರಿಗಳೂ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.


*ವಿದ್ಯುತ್ ಲೈನ್ ಸಮಸ್ಯೆ:* ಕಳೆದ ಐದು ,ಆರು ವರ್ಷಗಳಿಂದ ತೋಟದ ಮಧ್ಯೆ ಹಾದು ಹೋಗಿರುವ ವಿದ್ಯುತ್ ಲೈನ್ ಬದಲಾಯಿಸಲು ಮೆಸ್ಕಾಂ , ಡಿಸಿಗೆ ಮನವಿ ಮಾಡಿದ್ದರು. ಇಲ್ಲಿವರೆಗೂ ಮೆಸ್ಕಾಂ ಇಲಾಖೆ ಇದರ ಬಗ್ಗೆ ಗಮನಹರಿಸಿಲ್ಲ. ಅದಲ್ಲದೆ ವಿದ್ಯುತ್ ಲೈನ್ ಹಾದುಹೋಗಿರುವ ತೆಂಗಿನ ಮರ , ಅಡಕೆ ಮರ ಸುಟ್ಟ ಹೋಗುತ್ತಿದೆ‌. ಇಲ್ಲಿಗೆ ಯಾವ ಮೆಸ್ಕಾಂ ಸಿಬ್ಬಂದಿ ಮರ ,ಗೆಲ್ಲು ಕಡಿಯಲು ಬರುವುದಿಲ್ಲ ಎಲ್ಲವನ್ನೂ ನಾವು ಸರಿಪಡಿಸಬೇಕಾದ ಪರಿಸ್ಥಿತಿ ಇದೆ‌‌‌. ಹಲವು ಮಂದಿಗೆ ವಿದ್ಯುತ್ ಶಾಕ್ ಹೊಡೆದು ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ ಎಂದು ಮೆಸ್ಕಾಂ ವಿರುದ್ದ ಊರವರು ಮಾಧ್ಯಮ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ : ಏ.16, 17 ರಂದು ವಾಹನ ಸಂಚಾರದಲ್ಲಿ ಬದಲಾವಣೆ | ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ

Posted by Vidyamaana on 2023-04-15 23:28:53 |

Share: | | | | |


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ : ಏ.16, 17 ರಂದು ವಾಹನ ಸಂಚಾರದಲ್ಲಿ ಬದಲಾವಣೆ | ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ : ಏ.16, 17 ರಂದು ವಾಹನ ಸಂಚಾರದಲ್ಲಿ ಬದಲಾವಣೆ | ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ


ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಏ.16 ಹಾಗೂ 17 ರಂದು ವಾಹನದಟ್ಟಣಿ ಜಾಸ್ತಿಯಾಗುವ ಹಿನ್ನಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಹಾಗೂ ವಾಹನ ಪಾರ್ಕಿಂಗ್‍ ಗೆ ಸ್ಥಳ ಗುರುತಿಸಲಾಗಿದೆ ಎಂದು ಪುತ್ತೂರು ಸಂಚಾರ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.

ಏ.16 ಭಾನುವಾರ ಬಲ್ನಾಡಿನಿಂಡ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ಕಿರುವಾಳು ಆಗಮನ ಹಾಗೂ ಏ.17 ರ ಬ್ರಹ್ಮರಥೋತ್ಸವ ಇರುವುದರಿಂದ ಜನದಟ್ಟಣಿ ಜತೆಗೆ ವಾಹನದಟ್ಟಣಿ ಜಾಸ್ತಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಅಲ್ಲದೆ ನಿಗದಿಪಡಿಸಿದ ಸ್ಥಳದಲ್ಲೇ ತಮ್ಮ ವಾಹನಗಳನ್ನು ಪಾರ್ಕಿಂಗ್‍ ಮಾಡಬೇಕಾದ್ದು ಕಡ್ಡಾಯವಾಗಿದೆ.

ಏ.16 ರಂದು ಕಿರುವಾಳು ಆಗಮನ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಸಂದರ್ಭದಲ್ಲಿ ಸಂಪ್ಯ ಕಡೆಯಿಂದ ಕಬಕ, ಮಂಗಳೂರು ಕಡೆಗೆ ಹೋಗುವ ವಾಹನಗಳು ದರ್ಬೆ ಅಶ್ವಿನಿ ವೃತ್ತ, ಬೆದ್ರಾಳ, ಸಾಲ್ಮರ, ಪಡೀಲ್ ಮೂಲಕ ಸಂಚರಿಸುವುದು. ಮಂಗಳೂರು, ವಿಟ್ಲ ಕಬಕ ಕಡೆಗಳಿಂದ ಬರುವ ವಾಹನಗಳು ಲಿನೆಟ್ ವೃತ್ತ, ಬೊಳುವಾರು ವೃತ್ತ, ಪಡೀಲ್, ಕೊಟೇಚಾ ಹಾಲ್ ಕ್ರಾಸ್, ಸಾಲ್ಮರ, ಎಪಿಎಂಸಿ ರಸ್ತೆಯಾಗಿ ದರ್ಬೆ‍ ಅಶ್ವಿನಿ ವೃತ್ತವಾಗಿ ಸಂಚರಿಸುವುದು.

ಏ.16 ಹಾಗೂ 17 ರಂದು ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಂಜೆ 4 ರ ನಂತರ ಬಸ್ ನಿಲ್ದಾಣದಿಂದ ಹೊರಡುವ ಎಲ್ಲಾ ಸಾರಿಗೆ ಬಸ್‍ ಗಳು ಎಂಟಿ ರಸ್ತೆ ಮೂಲಕ ತೆರಳಿ, ಎಡಕ್ಕೆ ತಿರುಗಿ ಪರ್ಲಡ್ಕ ಬೈಪಾಸ್ ಮೂಲಕ ತೆರಳಬೇಕು. ಮಂಗಳೂರು ಕಡೆಯಿಂದ ಬರುವ ಎಲ್ಲಾ ಬಸ್‍ ಗಳು ಬೊಳುವಾರು-ಪಡೀಲ್-ಎಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸುವುದು. ಉಪ್ಪಿನಂಗಡಿ ಕಡೆಯಿಂದ ಬರುವ ಬಸ್‍ ಗಳು ಪಡೀಲ್-ಕೊಟೇಚಾ ಹಾಲ್-ಸಾಲ್ಮರ ಕ್ರಾಸ್, ಎಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು. ಸುಳ್ಯ, ಮಡಿಕೇರಿ ಕಡೆಯಿಂದ ಬರುವ ಬಸ್ ಗಳು ಮುಖ್ಯರಸ್ತೆಯಿಂದ ಸಾಗಿ ಅರುಣಾ ಚಿತ್ರ ಮಂದಿರದ ಮೂಲಕ ಸಾಗಿ ಬಸ್ ನಿಲ್ದಾಣಕ್ಕೆ ಸಂಚರಿಸುವುದು.

ನೆಹರೂನಗರ, ಬೊಳುವಾರು ಕಡೆಗಳಿಂದ ಬರುವ ಆಟೋ ರಿಕ್ಷಾಗಳು ಮಯೂರ ಇನ್‍ ಲ್ಯಾಂಡ್ ಬಳಿ ಪ್ರಯಾಣಿಕರನ್ನು ಇಳಿಸಿ, ಉರ್ಲಾಂಡಿ ಕ್ರಾಸ್ ಮೂಲಕ ವಾಪಾಸು ಸಂಚರಿಸುವುದು. ದರ್ಬೆ ಕಡೆಯಿಂದ ಬರುವ ಆಟೋ ರಿ್ಕ್ಷಾಗಳು ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸಿ ವಾಪಾಸ್ ಸಂಚರಿಸುವುದು. ಪರ್ಲಡ್ಕ ಕಡೆಯಿಂದ ಬರುವ ರಿ್ಕ್ಷಾಗಳು ಕಿಲ್ಲೆ ಮೈದಾನದ ಬಳಿ ಪ್ರಯಾಣಿಕರನ್ನು ಇಳಿಸಿ ಸಂಚರಿಸುವುದು.

ವಾಹನ ಪಾರ್ಕಿಂಗ್ :

ಉಪ್ಪಿನಂಗಡಿ, ಬನ್ನೂರು ಕಡೆಯಿಂದ ಬರುವ ಭಕ್ತರ ವಾಹನಗಳಿಗೆ ಎಪಿಎಂಸಿ ಆವರಣ, ಕೊಂಬೆಟ್ಟು ಸರಕಾರಿ ಪ್ರೌಢಶಾಲಾ ಮೈದಾನ, ಕೊಂಬೆಟ್ಟು ಬಂಟರಭವನ, ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಾರ್ಕ್‍ ಮಾಡುವುದು, ಸಂಪ್ಯ, ಸುಳ್ಯ, ಬೆಟ್ಟಂಪಾಡಿ, ಪಾಣಾಜೆ, ಪರ್ಲಡ್ಕ ಪುರುಷರಕಟ್ಟೆಯಿಂದ ಬರುವ ವಾಹನಗಳಿಗೆ ತೆಂಕಿಲ ಗೌಡ ಸಮುದಾಯ ಭವನ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಕಿಲ್ಲೆ ಮೈದಾನದಲ್ಲಿ ಪಾರ್ಕ್ ಮಾಡುವುದು. ವಿಟ್ಲ, ಕಬಕ, ನೆಹರುನಗರದಿಂದ ಬರುವ ವಾಹನಗಳು ಜೈನಭವನದ ಬಳಿ, ದರ್ಶನ್ ಹಾಲ್ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕ್‍ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪುತ್ತೂರು : ಶಾಸಕರಿಗೆ ಅಭಿನಂದನೆ ಸಲ್ಲಿಸಿ ಅಳವಡಿಸಿದ ಫ್ಲೆಕ್ಸ್ ಗೆ ಹಾನಿ : ಠಾಣೆಗೆ ದೂರು

Posted by Vidyamaana on 2024-01-29 12:51:26 |

Share: | | | | |


ಪುತ್ತೂರು : ಶಾಸಕರಿಗೆ ಅಭಿನಂದನೆ ಸಲ್ಲಿಸಿ ಅಳವಡಿಸಿದ ಫ್ಲೆಕ್ಸ್ ಗೆ ಹಾನಿ : ಠಾಣೆಗೆ ದೂರು

ಪುತ್ತೂರು : ನಗರಸಭಾ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ಮಂಜೂರಾಗಿರುವ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಸಲ್ಲಿಸಿ ಇಲ್ಲಿನ ಕೋರ್ಟ್ ರಸ್ತೆಯಲ್ಲಿ ಅಳವಡಿಸಿದ ಬ್ಯಾನರ್ ಗೆ ಹಾನಿಗೊಳಿಸಲಾಗಿದೆ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಕೋರ್ಟ್ ರಸ್ತೆಯಲ್ಲಿ ಈ ಹಿಂದೆ ನಡೆದ ಕಾಂಕ್ರಿಟೀಕರಣ ರಸ್ತೆ ಕಾಮಗಾರಿ ಕಳಪೆಯಾಗಿ ಅಲ್ಲಲ್ಲಿ ಕಾಂಕ್ರೀಟ್ ಕಿತ್ತು ಹೋಗಿ ಸಂಚಾರಕ್ಕೆ ತೊಂದರೆಯಾಗುತ್ತಿರುವುದಕ್ಕೆ ಸದರಿ ರಸ್ತೆಯನ್ನು ಸುಸಜ್ಜಿತವಾಗಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಕಾಂಕ್ರೀಟ್ ರಸ್ತೆ ಮೇಲೆ ವೈಟ್ ಟಾಪಿಂಗ್ ಮಾಡುವ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಯವರು 42 ಲಕ್ಷ ರೂ. ಅನುದಾನ ಮಂಜೂರುಗೊಳಿಸಿ ಕಾಮಗಾರಿಯ ಶಂಕುಸ್ಥಾಪನೆ ಮಾಡಿದ್ದರು.


ಅನುದಾನ ಮಂಜೂರು ಮಾಡಿರುವ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್ ನ್ನು ಮುಖ್ಯ ರಸ್ತೆಯಿಂದ ಕೋರ್ಟ್ ರಸ್ತೆಗೆ ತಿರುಗುವಲ್ಲಿ ನಗರ ಕಾಂಗ್ರೆಸ್ ವತಿಯಿಂದ ಅಳವಡಿಸಲಾಗಿತ್ತು. ಈ ಫ್ಲೆಕ್ಸ್ ನ್ನು ರಾತ್ರಿ ಯಾರೋ ಕಿಡಿಗೇಡಿಗಳು ಹರಿದು ಹಾನಿಗೊಳಿಸಿದ್ದಾರೆ. ಹಾನಿಗೊಳಿಸಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿಯವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೆ.ಪಿ.ಸಿ.ಸಿ. ವತಿಯಿಂದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಂಯೋಜಕರಾಗಿ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಆಯ್ಕೆ

Posted by Vidyamaana on 2024-04-11 17:34:31 |

Share: | | | | |


ಕೆ.ಪಿ.ಸಿ.ಸಿ. ವತಿಯಿಂದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಂಯೋಜಕರಾಗಿ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಆಯ್ಕೆ

ಬೆಂಗಳೂರು :ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಉಡುಪಿ,ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಗೆ ಪಕ್ಷದ ಅಬ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಲು ಮತ್ತು ಗೆಲುವಿಗೆ ಸಹಕಾರಿಯಾಗಲು ಕೆ.ಪಿ.ಸಿ‌.ಸಿ. ಕಾರ್ಯದ್ಯಾಕ್ಷರಾದ ಶ್ರೀ ಮಂಜುನಾಥ ಭಂಡಾರಿ ಶಿಪಾರಸ್ಸಿನ ಮೇರೆಗೆ ಕೆ.ಪಿ.ಸಿ.ಸಿ ಅದ್ಯಕ್ಷರಾದ ಶ್ರೀ. ಡಿ.ಕೆ.ಶಿವಕುಮಾರ್ ಅವರ ಅನುಮೋದನೆಯೊಂದಿಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಂಯೋಜಕರಾಗಿ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಯವರನ್ನು ತಕ್ಷಣದಿಂದ ಕಾರ್ಯಪ್ರವರ್ತರಾಗುವಂತೆ ಈ ಮೂಲಕ ಆದೇಶಿಸಿಸಲಾಗಿದೆ..



Recent News


Leave a Comment: