ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ಸುದ್ದಿಗಳು News

Posted by vidyamaana on 2024-07-03 10:25:40 |

Share: | | | | |


ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ವಿಜಯಪುರ: ಇಸ್ಪೀಟ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಎಸ್ಕೇಪ್ ಆಗಲು ಹೋಗಿ ತೆಪ್ಪ ಮಗುಚಿದ ಘಟನೆ ನಿನ್ನೆ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿನ ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಎಂಟು ಜನ ತೆಪ್ಪದಲ್ಲಿ ಕೃಷ್ಣಾ ನದಿಯ ಮೂಲಕ ಎಸ್ಕೇಪ್ ಆಗುವ ವೇಳೆ ದುರಂತ ನಡೆದಿದೆ. ಇನ್ನು, ಮೀನುಗಾರರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರ ರಕ್ಷಣೆ ಮಾಡಲಾಗಿದ್ದು ಇಬ್ಬರ ಇಬ್ಬರ ಮೃತದೇಹ ಸಿಕ್ಕಿದೆ.

ಪುಂಡಲೀಕ ಯಂಕಂಚಿ (35), ಮಹಮ್ಮದ್ ತೈಹದ್ ಚೌಧರಿ(45) ಸಾವನ್ನಪ್ಪಿದ್ದಾರೆ. ಸಚಿನ್ ಕಟಬರ್, ಫಾರೂಕ್ ಅಮದ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎಂಟು ಜನ ಕೊಲ್ಹಾರ ಪಟ್ಟಣದವರಾಗಿದ್ದು, ನೀರುಪಾಲಾದವರು ದಶರಥ( 58),ಮೈಬೂಬ್ ವಾಲಿಕಾರ (35), ರಫೀಕ್ ಬಾಂಬೆ ,(40), ರಫೀಕ ಜಾಲಗಾರರಿಗಾಗಿ(48) ಹುಡುಕಾಟ ನಡೆಯುತ್ತಿದೆ.

 Share: | | | | |


ಜಾಹೀರಾತು ಬ್ಲಾಕ್‌ ಮಾಡುವ ಯೂಟ್ಯೂಬ್‌ ಬಳಕೆದಾರರಿಗೆ ಬ್ರೇಕ್‌ ಹಾಕಿದ ಗೂಗಲ್‌; ವೀಕ್ಷಕರಿಗೆ 3 ಆಯ್ಕೆ ನೀಡಿದ ಯೂಟ್ಯೂಬ್‌

Posted by Vidyamaana on 2023-10-25 15:45:27 |

Share: | | | | |


ಜಾಹೀರಾತು ಬ್ಲಾಕ್‌ ಮಾಡುವ ಯೂಟ್ಯೂಬ್‌ ಬಳಕೆದಾರರಿಗೆ ಬ್ರೇಕ್‌ ಹಾಕಿದ ಗೂಗಲ್‌; ವೀಕ್ಷಕರಿಗೆ 3 ಆಯ್ಕೆ ನೀಡಿದ ಯೂಟ್ಯೂಬ್‌

ಯೂಟ್ಯೂಬ್‌ ಬಳಕೆ ಜಾಗತಿಕವಾಗಿ ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಎಲ್ಲರೂ ಗೂಗಲ್‌ನ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಲು ಬಯಸುತ್ತಾರೆ. ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಸುದ್ದಿ, ಸಿನಿಮಾ, ಮನರಂಜನೆ, ಮಾಹಿತಿಯ ವಿಡಿಯೋಗಳನ್ನು ನೋಡಲು ಎಲ್ಲರೂ ಬಯಸುತ್ತಾರೆ. ಈ ರೀತಿ ಯೂಟ್ಯೂಬ್‌ನಲ್ಲಿ ವೀಕ್ಷಣೆ ಮಾಡುವಾಗ ಕಾಣಿಸುವ ಜಾಹೀರಾತುಗಳು ಸಾಕಷ್ಟು ಜನರಿಗೆ ಕಿರಿಕಿರಿ ಉಂಟು ಮಾಡುತ್ತಾರೆ.ಇಂತಹ ಕಿರಿಕಿರಿ ತಪ್ಪಿಸಲು ಕೆಲವು ಜಾಣರು ಆಡ್‌ ಬ್ಲಾಕರ್‌ ಸಾಫ್ಟ್‌ವೇರ್‌ಗಳನ್ನು ಬಳಸುತ್ತಾರೆ. ಈ ರೀತಿ ಜನರು ಆಡ್‌ ಬ್ಲಾಕರ್‌ ಬಳಸಿ ಯೂಟ್ಯೂಬ್‌ ಸೇವೆ ಪಡೆಯುವುದನ್ನು ತಪ್ಪಿಸಲು ಮತ್ತು ಇಂತಹ ಬಳಕೆದಾರರನ್ನು ಕಂಡುಹಿಡಿಯಲು ಗೂಗಲ್‌ ಆರಂಭಿಸಿದೆ.


ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಲು ಆಡ್‌ ಬ್ಲಾಕರ್‌ ಸಾಫ್ಟ್‌ವೇರ್‌ ಬಳಸುವವರಿಗೆ ಗೂಗಲ್‌ನ ಸೇವೆಗಳನ್ನು ಕಡಿತ ಮಾಡಲಾಗುತ್ತಿದೆ. ಎಲ್ಲಾದರೂ ಯೂಟ್ಯೂಬ್‌ ವೀಕ್ಷಿಸುವಾಗ ಆಡ್‌ ಬ್ಲಾಕಿಂಗ್‌ ಸಾಫ್ಟ್‌ವೇರ್‌ ಪತ್ತೆಯಾದರೆ ನಿಮಗೆ ಯೂಟ್ಯೂಬ್‌ನಲ್ಲಿ ಪಾಪ್‌ಅಪ್‌ ಸಂದೇಶ ಕಾಣಿಸಲಿದೆ. ಆ ಸಂದೇಶದಲ್ಲಿ ಈ ರೀತಿ ಆಡ್‌ ಬ್ಲಾಕರ್‌ ಬಳಸಬಾರದು ಎಂಬ ವಿವರದ ಜತೆಗೆ ಮೂರು ಆಯ್ಕೆಗಳನ್ನು ನೀಡಲಾಗುತ್ತದೆ.


ಆ ಯೂಟ್ಯೂಬ್‌ ಅಲಾರ್ಟ್‌ನಲ್ಲಿ ಈ ರೀತಿ ಬರೆದಿರುತ್ತದೆ. ಯೂಟ್ಯೂಬ್‌ ಬಳಸುವಾಗ ಆಡ್‌ ಬ್ಲಾಕರ್‌ ಬಳಸುವುದನ್ನು ನಿಷೇಧಿಸಲಾಗಿದೆ. ಜಾಹೀರಾತುಗಳು ಈ ಸೇವೆಯ ಅಗತ್ಯ ಭಾಗವಾಗಿದೆ. ನೀವು ಯೂಟ್ಯೂಬ್‌ ಪ್ರೀಮಿಯಂಗೆ ಹಣ ಪಾವತಿಸಿದರೆ ಮಾತ್ರ ಜಾಹೀರಾತು ಕಾಣಿಸುವುದಿಲ್ಲ.ನಿಮಗೆ ಒಟ್ಟು ಮೂರು ಆಯ್ಕೆಗಳು ಇವೆ. ನೀವು ಯೂಟ್ಯೂಬ್‌ ಜಾಹೀರಾತುಗಳಿಗೆ ಅನುಮತಿ ನೀಡುವುದು. ಯೂಟ್ಯೂಬ್‌ನಲ್ಲಿ ಜಾಹೀರಾತು ಕಾಣಿಸುವುದನ್ನು ತಡೆಯುವುದನ್ನು ನಿಲ್ಲಿಸಲು ಆಡ್‌ ಬ್ಲಾಕರ್‌ ಆಯ್ಕೆಯನ್ನು ಯೂಟ್ಯೂಬ್‌ ಈ ಸಂದರ್ಭದಲ್ಲಿ ಪ್ರದರ್ಶಿಸುತ್ತದೆ. ಅಥವಾ ಯೂಟ್ಯೂಬ್‌ ಪ್ರೀಮಿಯಂಗೆ ಸೈನ್‌ಅಪ್‌ ಆಗಿ. ಅಥವಾ ಈ ಸಂದೇಶ ಇಗ್ನೋರ್‌ ಮಾಡಿ. ಈ ರೀತಿ ಮೂರು ಆಯ್ಕೆ ನೀಡುತ್ತದೆ. ಸಂದೇಶ ಇಗ್ನೋರ್‌ ಮಾಡಿದ ಬಳಿಕವೂ ನೀವು ಆಡ್‌ ಬ್ಲಾಕರ್‌ ಬಳಸುವುದು ಖಾತ್ರಿಯಾದರೆ ಯೂಟ್ಯೂಬ್‌ ಸೇವೆ ಸ್ಥಗಿತಗೊಳ್ಳಲಿದೆ.


ಎಲ್ಲಾದರೂ ನೀವು ಯೂಟ್ಯೂಬ್‌ನ ಈ ಎಚ್ಚರಿಕೆಯನ್ನು ಕಡೆಗಣಿಸಿದ್ದೀರಿ ಎಂದಿರಲಿ. ಮತ್ತೆ ನೀವು ಹಲವು ವಿಡಿಯೋಗಳನ್ನು ನೋಡಬಹುದು. ಈ ಸಂದರ್ಭದಲ್ಲಿ ನೀವು ಆಡ್‌ ಬ್ಲಾಕರ್‌ ಮೂಲಕ ಜಾಹೀರಾತುಗಳಿಗೆ ತಡೆ ನೀಡುತ್ತಿದ್ದೀರಾ ಎಂದು ಪರಿಶೀಲಿಸುತ್ತದೆ. ಮೂರು ಸ್ಟ್ರೈಕ್‌ ಬಳಿಕ ನಿಮಗೆ ಯೂಟ್ಯೂಬ್‌ ವೀಕ್ಷಣೆಗೆ ಅವಕಾಶ ಇರುವುದಿಲ್ಲ.


ಬಹುತೇಕರು ಆನ್‌ಲೈನ್‌ ಬಳಸುವಾಗ ಆಡ್‌ ಬ್ಲಾಕರ್‌ಗಳನ್ನು ಬಳಸುತ್ತಾರೆ. ವೆಬ್‌ಸೈಟ್‌ಗಳಲ್ಲಿ ಜಾಹೀರಾತುಗಳು ಕಾಣಿಸದಂತೆ ಮಾಡಲು ಈ ರೀತಿ ಮಾಡುತ್ತಾರೆ. ಈ ರೀತಿಯ ಆಡ್‌ ಬ್ಲಾಕರ್‌ಗಳು ನಿಮ್ಮ ಕಂಪ್ಯೂಟರ್‌ಗಳಿಗೂ ಹಾನಿ ಮಾಡಬಹುದು. ನಿಮ್ಮ ಕಂಪ್ಯೂಟರ್‌ನ ಸುರಕ್ಷತೆಗೂ ತೊಂದರೆ ನೀಡಬಹುದು. ನಿಮ್ಮ ಇಂಟರ್‌ನೆಟ್‌ ಚಟುವಟಿಕೆ ಮೇಲೆ ನಿಗಾ ಇಡಬಹುದು. ಕೆಲವೊಂದು ಆಡ್‌ ಬ್ಲಾಕರ್‌ಗಳು ಉತ್ತಮ ಸೇವೆ ನೀಡುತ್ತವೆ. ಖಾಸಗಿತನಕ್ಕೆ ಧಕ್ಕೆಯಾಗದಂತೆ ಸೇವೆ ನೀಡುತ್ತಾವೆ.


ಕಳೆದ ಹಲವು ವರ್ಷಗಳಿಂದ ಯೂಟ್ಯೂಬ್‌ ಈ ಆಡ್‌ ಬ್ಲಾಕರ್‌ಗಳನ್ನು ಗಮನಿಸುತ್ತಿತ್ತು. ಈ ರೀತಿ ಬಳಸುವ ಜನರ ಬಗ್ಗೆ ಮೌನವಾಗಿದ್ದಿತ್ತು. ಇದೀಗ ಈ ಮೂಲಕ ತನ್ನ ಸೇವೆಯನ್ನು ದುರುಪಯೋಗ ಪಡಿಸಿಕೊಳ್ಳುವವರಿಗೆ ಯೂಟ್ಯೂಬ್‌ ವೀಕ್ಷಣೆಗೆ ಅವಕಾಶ ನೀಡದೆ ಇರಲು ನಿರ್ಧರಿಸಿದೆ. ಇದರಿಂದ ಯೂಟ್ಯೂಬ್‌ ಪ್ರೀಮಿಯಂ ಬಳಕೆದಾರರ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಯಿದೆ.


ಈ ರೀತಿ ಅಲಾರ್ಟ್‌ ಸಂದೇಶ ಬರುವ ತನಕ ನಿರಾಂತಕವಾಗಿ ಇತರರು ಯೂಟ್ಯೂಬ್‌ನಲ್ಲಿ ಆಡ್‌ ಬ್ಲಾಕರ್‌ ಬಳಕೆ ಮುಂದುವರೆಸಬಹುದು.

ಸ್ಯಾನಿಟರಿ ಪ್ಯಾಡ್‌ಗಳಲ್ಲಿ 5 ಕೋಟಿ ರೂ. ಮೌಲ್ಯದ ಕೊಕೇನ್‌ ಪತ್ತೆ ದಂಗಾದ ಕಸ್ಟಮ ಅಧಿಕಾರಿಗಳು ಲಾಕ್ ಆದ ಮೂವರು ಆಫ್ರಿಕನ್ ಲೇಡೀಸ್

Posted by Vidyamaana on 2023-10-14 12:12:21 |

Share: | | | | |


ಸ್ಯಾನಿಟರಿ ಪ್ಯಾಡ್‌ಗಳಲ್ಲಿ 5 ಕೋಟಿ ರೂ. ಮೌಲ್ಯದ ಕೊಕೇನ್‌ ಪತ್ತೆ ದಂಗಾದ ಕಸ್ಟಮ ಅಧಿಕಾರಿಗಳು ಲಾಕ್ ಆದ ಮೂವರು ಆಫ್ರಿಕನ್ ಲೇಡೀಸ್

ಮುಂಬೈ, : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5.68 ಕೋಟಿ ರೂ ಮೌಲ್ಯದ ಕೊಕೇನ್‌ ಸಹಿತ ಮೂವರು ಆಫ್ರಿಕನ್ ಮಹಿಳೆಯರನ್ನು ಬಂಧಿಸಲಾಗಿದೆ.


ಸ್ಯಾನಿಟರಿ ಪ್ಯಾಡ್‌ಗಳಲ್ಲಿ ನಿಷಿದ್ಧ ವಸ್ತುಗಳನ್ನು ಮರೆಮಾಡಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು ಎಂದು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ತಿಳಿಸಿದೆ.


ಮೂವರು ವಿದೇಶಿ ಮಹಿಳಾ ಪ್ರಯಾಣಿಕರಿಂದ ಒಟ್ಟು 568 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮೂವರು ಸ್ಯಾನಿಟರಿ ಪ್ಯಾಡ್ ಮತ್ತು ಗುದನಾಳದ ಒಳಗೆ ಮರೆಮಾಚಿ ಡ್ರಗ್ಸ್ ತರುತ್ತಿದ್ದರು.


ನಿರ್ದಿಷ್ಟ ಗುಪ್ತಚರ ವರದಿಯ ಆಧಾರದ ಮೇಲೆ, DRI ಯ ಮುಂಬೈ ಘಟಕವು ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಆನ್ ಲೈನ್ ಆಪ್ ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!

Posted by Vidyamaana on 2024-06-19 05:50:12 |

Share: | | | | |


ಆನ್ ಲೈನ್ ಆಪ್ ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!

ಬೆಂಗಳೂರು : ಆನ್ ಲೈನ್ ಆಪ್ ನಲ್ಲಿ ಹಣ ಕಳೆದುಕೊಂಡಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಈ ಘಟನೆ ನಗರದ ಮಹಾರಾಣಿ ವಿವಿಯ ಹಾಸ್ಟೆಲ್‍ ನಲ್ಲಿ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು ಆನ್ ಲೈನ್ ಆಪ್ ನಲ್ಲಿ ಹಣ ಹೂಡಿಕೆ ಮಾಡಿ ನಷ್ಟಕ್ಕೆ ಒಳಗಾಗಿದ್ದಳು.

ಅಮೇರಿಕಾದ ಬಾಲ್ಟಿಮೋರ್ ಸೇತುವೆಗೆ ಡಿಕ್ಕಿ ಹೊಡೆದ ಕಾರ್ಗೋ ಹಡಗು

Posted by Vidyamaana on 2024-03-27 21:46:33 |

Share: | | | | |


ಅಮೇರಿಕಾದ ಬಾಲ್ಟಿಮೋರ್ ಸೇತುವೆಗೆ ಡಿಕ್ಕಿ ಹೊಡೆದ ಕಾರ್ಗೋ ಹಡಗು

ವಾಷಿಂಗ್ಟನ್, ಮಾ 27: ಹಡಗು ಡಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಬಾಲ್ಟಿಮೋರ್‌ನ ಪ್ರಮುಖ ಸೇತುವೆಯೊಂದು ಮಂಗಳವಾರ ಕುಸಿದುಬಿದ್ದಿದೆ. ಸೇತುವೆ ನೀರಿಗೆ ಉರುಳಿದ್ದು, ಕೆಲವು ವಾಹನಗಳು ಸಹ ನೀರುಪಾಲಾಗಿವೆ. ಇದರಿಂದ ಭಾರಿ ಪ್ರಮಾಣದ ಸಾವು ನೋವಿನ ಭೀತಿ ಉಂಟಾಗಿದೆ.

ಭಯಾನಕ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಸಿನಿಮೀಯ ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಂಟೇನರ್ ಹಡಗು, ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಸ್ತಂಭಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಅದರ ಕೆಲವು ಭಾಗಗಳು ಪಾಟಾಪ್‌ಸ್ಕೋ ನದಿಗೆ ಉರುಳಿದೆ. ಬೃಹತ್ ಸೇತುವೆಯ ಪ್ರಮುಖ ಭಾಗ ನದಿಗೆ ಬಿದ್ದಿದೆ.ಅಮೆರಿಕದ ಸ್ಥಳೀಯ ಕಾಲಮಾನ ರಾತ್ರಿ 1.30 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಕನಿಷ್ಠ 20 ಮಂದಿ ನೀರಿಗೆ ಬಿದ್ದಿರುವ ಶಂಕೆಯೊಂದಿಗೆ ರಕ್ಷಣಾ ತಂಡಗಳು ಶೋಧ ಕಾರ್ಯ ನಡೆಸಿವೆ. ಸುಮಾರು 3 ಕಿಮೀ ಉದ್ದದ ಬೃಹತ್ ಸೇತುವೆ ಕುಸಿತದ ಘಟನೆಯ ವಿಡಿಯೋ ವೈರಲ್ ಆಗಿದೆ. 300 ಮೀಟರ್ ಉದ್ದದ ಹಡಗು, ಉಕ್ಕಿನ ಸೇತುವೆಯನ್ನು ನೀರುಪಾಲು ಮಾಡಿದೆ. ಕ್ಷಣಮಾತ್ರದಲ್ಲಿ ಸೇತುವೆ ಕುಸಿದಿದ್ದು, ಈ ವೇಳೆ ಸಣ್ಣ ಪ್ರಮಾಣದ ಹಲವು ಸ್ಫೋಟಗಳು ಉಂಟಾಗಿವೆ.


ಡಿಕ್ಕಿ ಹೊಡೆದ ರಭಸಕ್ಕೆ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬಹುಭಾಗ ನೀರಿನಲ್ಲಿ ಮುಳುಗಿದೆ. ಸಿಂಗಪುರ ಧ್ವಜವುಳ್ಳ ಕಂಟೇನರ್ ಹಡಗು ಡಾಲಿ, ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿನ ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್‌ನ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ ಎಂದು ಸಿನರ್ಜಿ ಮೆರೈನ್ ಗ್ರೂಪ್‌ ಮಾಲೀಕ ಗ್ರೇಸ್ ಓಷನ್ ಪ್ರೈ ಲಿ ತಿಳಿಸಿದೆ. ಹಡಗಿನಲ್ಲಿದ್ದ ಇಬ್ಬರು ಪೈಲಟ್‌ಗಳು ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಲಾಗಿದೆ. ಯಾವುದೇ ಗಾಯಗಳಾದ ವರದಿಯಾಗಿಲ್ಲ ಎಂದು ಹೇಳಿದೆ. ವಿಶಾಲವಾದ ಪಿಲ್ಲರ್‌ಗಳ ನಡುವೆ ಸಾಕಷ್ಟು ಅಂತರವಿದ್ದರೂ, ಈ ಹಡಗು ಪಿಲ್ಲರ್‌ಗೆ ಡಿಕ್ಕಿ ಹೊಡೆದಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ."ಐ- 695 ಕೀ ಬ್ರಿಡ್ಜ್‌ನ ಎರಡೂ ಮಾರ್ಗಗಳ ಎಲ್ಲಾ ಲೇನ್‌ಗಳನ್ನು ಬಂದ್ ಮಾಡಲಾಗಿದೆ. ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ" ಎಂದು ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರ ತಿಳಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯಲ್ಲಿ 20 ನಿರ್ಮಾಣ ಕಾರ್ಮಿಕರು ಇದ್ದರು ಎನ್ನಲಾಗಿದೆ. ಎಷ್ಟು ವಾಹನಗಳು ನದಿ ನೀರಿಗೆ ಬಿದ್ದಿವೆ, ಹಾಗೂ ಅವುಗಳಲ್ಲಿ ಎಷ್ಟು ಜನರಿದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ. ಮುಳುಗು ತಜ್ಞರು, ರಕ್ಷಣಾ ತಂಡಗಳು ನೀರಿನಲ್ಲಿ ಇರಬಹುದಾದ ಜನರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿವೆ.


1.6 ಮೈಲು (2.6 ಕಿಮೀ) ಉದ್ದದ ನಾಲ್ಕು ಲೇನ್ ಸೇತುವೆಯನ್ನು 1977ರಲ್ಲಿ ಉದ್ಘಾಟಿಸಲಾಗಿತ್ತು. ಪ್ರತಿ ವರ್ಷ ಕೋಟ್ಯಂತರ ವಾಹನಗಳ ಇದರ ಮೇಲೆ ಓಡಾಡುತ್ತವೆ. ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿ ಪಕ್ಕದಲ್ಲಿನ ಪೂರ್ವ ಕರಾವಳಿಯ ಕೈಗಾರಿಕಾ ನಗರವಾದ ಬಾಲ್ಟಿಮೋರ್ ಸುತ್ತಮುತ್ತಲಿನ ರಸ್ತೆ ಸಂಪರ್ಕಗಳಿಗೆ ಈ ಸೇತುವೆ ಪ್ರಮುಖವಾಗಿದೆ.


ಅಮೆರಿಕದ ರಾಷ್ಟ್ರಗೀತೆಯಾದ ದಿ ಸ್ಟಾರ್- ಸ್ಪಾಂಗಲ್ಡ್ ಬ್ಯಾನರ್ ಅನ್ನು ರಚಿಸಿದ ಅಮೆರಿಕದ ವಕೀಲ, ಕವಿ ಫ್ರಾನ್ಸಿಸ್ ಸ್ಕಾಟ್ ಕೀ ಅವರ ಸ್ಮರಣಾರ್ಥ ಬಾಲ್ಟಿಮೋರ್ ಸೇತುವೆಗೆ ಅವರ ಹೆಸರು ಇರಿಸಲಾಗಿದೆ.

ದುರಂತ ಸಂಭವಿಸುವ ಮುನ್ನ ‘ಮೇ ಡೇ’ ಕರೆ!

ವಿಮಾನ ಹಾಗೂ ಹಡಗುಗಳಲ್ಲಿ ಯಾವುದೇ ರೀತಿಯ ಅಪಾಯ ಸನ್ನಿವೇಶ ಎದುರಾದಾಗ ‘ಮೇ ಡೇ’ ಕರೆ ಕೊಡಲಾಗುತ್ತದೆ. ಮಂಗಳವಾರ ಉಕ್ಕಿನ ಸೇತುವೆಗೆ ಹಡಗು ಡಿಕ್ಕಿ ಹೊಡೆಯುವ ಮುನ್ನವೂ ಹಡಗಿನಲ್ಲಿ ಇದ್ದ ಭಾರತೀಯ ಸಿಬ್ಬಂದಿ ಅಮೆರಿಕದ ಸ್ಥಳೀಯ ಆಡಳಿತಕ್ಕೆ ಮೇ ಡೇ ಕರೆ ಕೊಟ್ಟಿತ್ತು. ಹೀಗಾಗಿ, ಉಕ್ಕಿನ ಸೇತುವೆಯ ಎರಡೂ ಬದಿಯಲ್ಲಿ ವಾಹನ ಸಂಚಾರವನ್ನು ತಡೆ ಹಿಡಿಯಲಾಗಿತ್ತು.


"ಐ- 695 ಕೀ ಬ್ರಿಡ್ಜ್‌ನ ಎರಡೂ ಮಾರ್ಗಗಳ ಎಲ್ಲಾ ಲೇನ್‌ಗಳನ್ನು ಬಂದ್ ಮಾಡಲಾಗಿದೆ. ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ" ಎಂದು ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರ ತಿಳಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯಲ್ಲಿ 20 ನಿರ್ಮಾಣ ಕಾರ್ಮಿಕರು ಇದ್ದರು ಎನ್ನಲಾಗಿದೆ. ಎಷ್ಟು ವಾಹನಗಳು ನದಿ ನೀರಿಗೆ ಬಿದ್ದಿವೆ, ಹಾಗೂ ಅವುಗಳಲ್ಲಿ ಎಷ್ಟು ಜನರಿದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ. ಮುಳುಗು ತಜ್ಞರು, ರಕ್ಷಣಾ ತಂಡಗಳು ನೀರಿನಲ್ಲಿ ಇರಬಹುದಾದ ಜನರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ಜೈಸ್ವಾಲ್ ಹೊಸ ದಾಖಲೆ ; ಕೆಕೆಆರ್ ವಿರುದ್ಧ ರಾಜಸ್ಥಾನಕ್ಕೆ ಅತ್ಯಮೋಘ ಜಯ

Posted by Vidyamaana on 2023-05-11 20:26:54 |

Share: | | | | |


 ಜೈಸ್ವಾಲ್ ಹೊಸ ದಾಖಲೆ ; ಕೆಕೆಆರ್ ವಿರುದ್ಧ ರಾಜಸ್ಥಾನಕ್ಕೆ ಅತ್ಯಮೋಘ ಜಯ

ಕೋಲ್ಕತಾ: ಈಡನ್ ಗಾರ್ಡನ್ಸ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 9 ವಿಕೆಟಿಗಳಿಂದ ಅಮೋಘ ಗೆಲುವು ಸಾಧಿಸಿತು.ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕೆಕೆಆರ್ 8 ವಿಕೆಟ್ ನಷ್ಟಕ್ಕೆ 149 ರನ್ ಕಲೆ ಹಾಕಿತು. ವೆಂಕಟೇಶ್ ಅಯ್ಯರ್ 57 ರನ್ ಗರಿಷ್ಠ ಸ್ಕೋರ್ ಮಾಡಿದರು. ಜೇಸನ್ ರಾಯ್ 10, ಗುರ್ಬಾಜ್ 18, ನಾಯಕ ನಿತೀಶ್ ರಾಣಾ 22, ರಸೆಲ್ 10, ರಿಂಕು ಸಿಂಗ್ 16 ರನ್ ಗಳಿಸಿ ಔಟಾದರು. ತಂಡ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು. ಬ್ಯಾಟ್ಸ್ ಮ್ಯಾನ್ ಗಳು ನಿರೀಕ್ಷಿತ ಆಟ ತೋರಲಿಲ್ಲ. ಆರ್ ಆರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ 4 ವಿಕೆಟ್ ಕಬಳಿಸಿದರು. ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್(187) ಪಡೆದ ಬೌಲರ್ ಆಗಿದ್ದಾರೆ. ಡ್ವೇನ್ ಬ್ರಾವೋ 183 ವಿಕೆಟ್ ಕಬಳಿಸಿ ಅಗ್ರಣಿಯಾಗಿದ್ದರು.ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಅವರ ಭರ್ಜರಿ ಸಾಥ್ ನಿಂದಾಗಿ ಅಮೋಘ ಜಯ ಸಾಧಿಸಿತು. 13.1 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ ಸ್ಮರಣೀಯ ಜಯ ತನ್ನದಾಗಿಸಿಕೊಂಡಿತು.

ಜೈಸ್ವಾಲ್ ಐಪಿಎಲ್‌ನಲ್ಲಿ ಅತಿ ವೇಗದ ಐವತ್ತು ರನ್ ಗಳಿಸಿದ ದಾಖಲೆ ಮಾಡಿದರು. ಕೆ ಎಲ್ ರಾಹುಲ್ ಮತ್ತು ಪ್ಯಾಟ್ ಕಮಿನ್ಸ್ ಅವರು ಈ ಹಿಂದೆ 14  ಎಸೆತಗಳಲ್ಲಿ ಸ್ಪೋಟಕ ಅರ್ಧ ಶತಕಗಳನ್ನು ಸಿಡಿಸಿದ್ದರು.ಕೇವಲ 13 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜೈಸ್ವಾಲ್ 47ಎಸೆತಗಳಿಂದ 98 ರನ್ ಗಳಿಸಿ ಅಜೇಯರಾಗಿ ಉಳಿದರು.13 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ ಬಾರಿಸಿದ್ದರು. ಸಂಜು ಸ್ಯಾಮ್ಸನ್ ಔಟಾಗದೆ 29 ಎಸೆತಗಳಿಂದ 48 ರನ್ ಗಳಿಸಿ ಅಜೇಯರಾಗಿ ಉಳಿದರು 2 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿತ್ತು.

ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನದಂತ ಅಪ್ಪ ನನ್ನ ಅಪ್ಪ ವಿಶೇಷ ಅನುಭಂದ ಕಾರ್ಯಕ್ರಮ

Posted by Vidyamaana on 2024-06-24 06:15:55 |

Share: | | | | |


ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನದಂತ ಅಪ್ಪ ನನ್ನ ಅಪ್ಪ ವಿಶೇಷ ಅನುಭಂದ ಕಾರ್ಯಕ್ರಮ

ಪುತ್ತೂರು: ಒಳ್ಳೆ ವಿಚಾರಗಳನ್ನು ನಮ್ಮ ಸಂಸ್ಕೃತಿಗೆ ಅಳವಡಿಸಿಕೊಳ್ಳುವುದು ಹಿರಿಯರಿಂದ ನಡೆದು ಬಂದ ಸಂಪ್ರದಾಯವಾಗಿದೆ. ಈ ನಿಟ್ಟಿನಲ್ಲಿ ಮುಳಿಯದ ವತಿಯಿಂದ ಅಪ್ಪಂದಿರ ದಿನಕ್ಕೆ ವಿಶೇಷ ಸ್ಥಾನವನ್ನು ನೀಡಿ ಆಚರಣೆಗೆ ತರಲಾಗಿದೆ. ಐದು ಶೋರೂಂ ನಲ್ಲಿ ಸೇರಿದ ಜನರನ್ನು ನೋಡಿದರೆ ಮಹತ್ವವಿದೆ ಎಂಬುದು ತಿಳಿಯುತ್ತದೆ ಎಂದು ಮುಳಿಯ ಜ್ಯುವೆಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು.

ಶನಿವಾರ ಪುತ್ತೂರು ಶಾಖೆಯಲ್ಲಿ ಮುಳಿಯ ಜ್ಯುವೆಲ್ಸ್ ವತಿಯಿಂದ ವಿಶ್ವ ಅಪ್ಪಂದಿರ ದಿನದ ಅಂಗವಾಗಿ ಚಿನ್ನದಂತ ಅಪ್ಪ ನನ್ನ ಅಪ್ಪ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಂದೆಯವರು ಸಂಸ್ಥೆ ನಡೆಸುವ ಸಮಯದಲ್ಲಿ ೯೧೬ ಚಿನ್ನಾಭರಣ ಎಂಬ ವ್ಯವಸ್ಥೆ ಇಲ್ಲದಿದ್ದರೂ, ಅವರ ಕಾಲದಲ್ಲಿ ನೀಡಿದ ಚಿನ್ನಾಭರಣಗಳು ಅದೇ ಗುಣಮಟ್ಟದಲ್ಲಿತ್ತು. ಆ ಪ್ಯೂರಿಟಿಯನ್ನು ಅಂದು ಗ್ರಾಹಕರಿಗೆ ನೀಡಿದ ಕಾರಣದಿಂದ ಇಂದಿಗೂ ಮುಳಿಯದ ಹೆಸರು ಉತ್ತಮವಾಗಿ ಉಳಿದುಕೊಂಡಿದೆ. ಸಂಸ್ಥೆಯ ಬೆಳವಣಿಗೆಯಲ್ಲೂ ಇದು ಮಹತ್ವದ ಪಾತ್ರವನ್ನು ವಹಿಸಿದೆ ಎಂದು ತಿಳಿಸಿದರು.



Leave a Comment: