ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಗೆದ್ದರೆ ಒಂದೇ ತಿಂಗಳಲ್ಲಿ ಅಕ್ರಮ ಸಕ್ರಮ ಫೈಲ್ ವಿಲೇವಾರಿ ಗ್ಯಾರಂಟಿ: ಅಶೋಕ್ ಕುಮಾರ್ ರೈ

Posted by Vidyamaana on 2023-04-25 17:19:51 |

Share: | | | | |


ಗೆದ್ದರೆ ಒಂದೇ ತಿಂಗಳಲ್ಲಿ ಅಕ್ರಮ ಸಕ್ರಮ ಫೈಲ್ ವಿಲೇವಾರಿ  ಗ್ಯಾರಂಟಿ: ಅಶೋಕ್ ಕುಮಾರ್ ರೈ

ಪುತ್ತೂರು : ಈ ಬಾರಿ ಆಶೀರ್ವಾದ ಮಾಡಿ, ನಾನು ಗೆದ್ದು ಬಂದರೆ ಒಂದೇ ತಿಂಗಳಲ್ಲಿ ಎಷ್ಟು ಆಕ್ರಮಸಕ್ರಮ ಫೈಲ್‌ಗಳು ಪೆಂಡಿಗೆ ಇದೆ ಅದೆಲ್ಲವನ್ನೂ ನಯಾ ಪೈಸೆ ಖರ್ಚಿಲ್ಲದ ಅರ್ಜಿದಾರರಿಗೆ ಮಾಡಿಕೊಡಲಿದ್ದೇನೆ. ತಾಲೂಕಿನಲ್ಲಿ ಮೂರು ಸಾವಿರಕ್ಕೂ ಮಿಕ್ಕಿ 94 ಸಿ ಅರ್ಜಿ ಪೆಂಡಿಂಗ್ ಇದೆ ಅದನ್ನು ಎಲ್ಲರಿಗೂ ಬರೆದು ಕೂಡಲಿದ್ದೇನೆ ಎಂದು ಕುಂಬ್ರ ಜಂಕ್ಷನ್‌ನಲ್ಲಿ ಎ.24  ರಂದು ನಡೆದ ಕಾಂಗ್ರೆಸ್ ಚುನಾವಣಾ - ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

 ಫ್ಲಾಟಿಂಗ್ , ಸರ್ವ ಆಗದೆ ಜನರಿಗೆ ತೊಂದರೆ ನೀಡುತ್ತಿದ್ದು ಅದೆಲ್ಲವನ್ನೂ ತಿಂಗಳೊಳಗೆ ಸರಿಪಡಿಸಲಿದ್ದೇನೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ವಾಗ್ದಾನ ಮಾಡಿದರು. ನನ್ನ ರಾಜಕೀಯ ಅವಧಿಯಲ್ಲಿ ನಾನು ಯಾವ ರಾಜಕೀಯ ನಾಯಕರನ್ನೂ ಇದುವರೆಗೆ ಯಾವುದೇ ವೇದಿಕೆಯಲ್ಲಿ ಅಪಹಾಸ್ಯ 6 ಮಾಡಿಲ್ಲ, ಮಾಡುವುದೂ ಇಲ್ಲ, ನನ್ನ ಬಗ್ಗೆ ಸಾಮಾಜಿಕ ತಾಣದಲ್ಲಿ ಇಲ್ಲ ಸಲ್ಲದಆರೋಪಗಳನ್ನು ಬಿಜೆಪಿ ಹರಿಯಬಿಡುತ್ತಿದೆ ಇದಕ್ಕೆಲ್ಲಾ ಜನ ತಕ್ಕ ಉತ್ತರ ನೀಡಲಿದ್ದಾರೆ. ನಾನು ಆರೆಸ್ಸೆಸ್ ಎಂದು ನನ್ನ ಮಗನ ಜೊತೆ ಇರುವ ಫೊಟೋವನ್ನು ಎಸ್‌ಡಿಪಿಐಯವರು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ನನ್ನ ಜೊತೆ ಚರ್ಚೆಗೆ ಬರಲಿ ಮುಸ್ಲಿಂ ಸಮುದಾಯಕ್ಕೆ ಎಸ್‌ಡಿಪಿಐ ಎನು ಮಾಡಿದೆ ಎಂಬುದನ್ನು ತಿಳಿಸಲಿ. ನಾನು 2300 ಮುಸ್ಲಿಂ ಕುಟುಂಬಗಳಿಗೆ ನೆರವು ನೀಡಿದ್ದೇನೆ, 42 ಬಡ ಕುಟುಂಬಗಳಿಗೆ ಮನೆ ಸಹಾಯ ಮಾಡಿದ್ದೇನೆ ಎಂದು ಹೇಳಿದರು. ಎಲ್ಲರೂ ಒಟ್ಟಾಗಿ ಈ ಬಾರಿ ಕಾಂಗ್ರೆಸ್ ಗೆಲ್ಲಿಸುವಂತೆ ಅವರು ಮನವಿ ಮಾಡಿದರು.

ದಾವಣಗೆರೆ: ಖಾಸಗಿ ವೀಡಿಯೋ ಚಿತ್ರಿಸಿ ಬ್ಲಾಕ್ ಮೇಲ್ : ಯುವತಿ ಆತ್ಮಹತ್ಯೆ

Posted by Vidyamaana on 2023-10-08 13:16:17 |

Share: | | | | |


ದಾವಣಗೆರೆ: ಖಾಸಗಿ ವೀಡಿಯೋ ಚಿತ್ರಿಸಿ ಬ್ಲಾಕ್ ಮೇಲ್ : ಯುವತಿ ಆತ್ಮಹತ್ಯೆ

ದಾವಣಗೆರೆ:ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ 17 ವರ್ಷದ ಬಾಲಕಿಯೊಬ್ಬಳು ತನ್ನ ಖಾಸಗಿ ವಿಡಿಯೋ ಮೂಲಕ ಇಬ್ಬರು ಹುಡುಗರಿಂದ ಬ್ಲಾಕ್ ಮೇಲ್ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಪಿಯುಸಿ ಓದುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾಳೆ.


ಅಸಿಡಿಟಿಯ ಎದೆ ಉರಿಯನ್ನು ಮತ್ತು ಎದೆ ನೋವಿನ ಉರಿಯನ್ನು ಐಡೆಂಟಿಫೈ ಮಾಡೋದು ತುಂಬಾ ಸುಲಭ: ಡಾ. ಜೆ ಸಿ ಅಡಿಗ

ಆಗಸ್ಟ್ 28 ರಂದು ಈ ಘಟನೆ ನಡೆದಿದ್ದು, ಬುಧವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಆಕೆ ಕಾಲೇಜಿಗೆ ಹೋದಾಗ ಆರೋಪಿಗಳಾದ ಇಬ್ಬರು ಹುಡುಗರು ಆಕೆಯೊಂದಿಗೆ ಸ್ನೇಹ ಬೆಳೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಆಕೆಗೆ ಮಾದಕ ದ್ರವ್ಯ ಬೆರೆಸಿದ ಖಾದ್ಯವನ್ನು ನೀಡಿದ್ದು, ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆಕೆಯ ಖಾಸಗಿ ವಿಡಿಯೋಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.


ಬಳಿಕ ವಿಡಿಯೋ ವೈರಲ್ ಮಾಡುವುದಾಗಿ ಆಕೆಗೆ ನಿರಂತರವಾಗಿ ಬ್ಲಾಕ್‌ಮೇಲ್ ಮಾಡಿದ್ದರು. ಬಾಲಕಿಯ ಪೋಷಕರು ಪೊಲೀಸರಿಗೂ ದೂರು ನೀಡಿದ್ದರು. ಆರೋಪಿಗಳು ಆಕೆಯ ಮನೆಯ ಮುಂದೆ ಬಂದು ಸಂತ್ರಸ್ತೆಯನ್ನು ತಮ್ಮೊಂದಿಗೆ ಬರುವಂತೆ ಕೇಳುತ್ತಿದ್ದರು. ಚಿತ್ರಹಿಂಸೆ ತಾಳಲಾರದೆ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸಾವಿಗೂ ಮುನ್ನ ಬಾಲಕಿ ಆಸ್ಪತ್ರೆಯಿಂದ ವಿಡಿಯೋ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಳು,ಅದರಲ್ಲಿ ತನಗಿಂತ ಬೇರೆ ಯಾವ ಹುಡುಗಿಗೂ ಇಂತಹ ಅನ್ಯಾಯ ಆಗಬಾರದು ಎಂದು ಹೇಳಿದ್ದಾಳೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮನವಿ ಮಾಡಿದರು. ಎಲ್ಲಾ ದುಷ್ಟ ಮನಸ್ಸಿನ ವ್ಯಕ್ತಿಗಳಿಗೆ ಇದೊಂದು ಪಾಠವಾಗಲಿ ಎಂದು ವಿಡಿಯೋದಲ್ಲಿ ಬಾಲಕಿ ಹೇಳಿದ್ದಾಳೆ. ನ್ಯಾಯಕ್ಕಾಗಿ ಬಾಲಕಿ ಕಣ್ಣೀರು ಸುರಿಸುತ್ತಾ ಬೇಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ. ಜಗಳೂರು ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿ ಗ್ರೂಪ್ (ರಿ) ವಿಟ್ಲ ಇದರ ವಾರ್ಷಿಕ ಮಹಾಸಭೆ -ನೂತನ ಪದಾಧಿಕಾರಿಗಳ ಆಯ್ಕೆ

Posted by Vidyamaana on 2024-02-24 12:25:46 |

Share: | | | | |


ಡಿ ಗ್ರೂಪ್ (ರಿ) ವಿಟ್ಲ ಇದರ ವಾರ್ಷಿಕ ಮಹಾಸಭೆ -ನೂತನ ಪದಾಧಿಕಾರಿಗಳ ಆಯ್ಕೆ

ವಿಟ್ಲ: ಡಿ " ಗ್ರೂಪ್ (ರಿ) ವಿಟ್ಲ ಇದರ ವಾರ್ಷಿಕ ಮಹಾಸಭೆಯು ಅಝೀಝ್ ಸನ ಇವರ ಅಧ್ಯಕ್ಷತೆಯಲ್ಲಿ ಸಂಘಟನೆಯ ಕಚೇರಿಯಲ್ಲಿ ನಡೆಯಿತು.

   ನಿರ್ಗಮನ ಅಧ್ಯಕ್ಷ ಖಲಂದರ್ ಪರ್ತಿಪ್ಪಾಡಿ ಇವರು ಸಂಘಟನೆಯು ನಡೆದು ಬಂದ ಹಾದಿ,ಮುಂದಿನ ಯೋಜನೆಯ ಬಗ್ಗೆ ವಿವರ ನೀಡಿದರು.

    ನಿಷ್ಕ್ರಿಯ ಸದಸ್ಯರನ್ನು ಕೈ ಬಿಟ್ಟು ಹಕೀಂ ಬಿಗ್‌ಬೇಕ್,ರಫೀಕ್ ಇಂಜಿನಿಯರ್,ಸಫ್ವಾನ್ ಎಲ್‌ಐಸಿ ಹಾಗೂ ಇಸ್ಮಾಯಿಲ್ ಸೂಪರ್ ಇವರನ್ನು ನೂತನ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು. ರಮ್ಝಾನ್ 28 ರಂದು ಇಫ್ತಾರ್‌ ಕೂಟ ಏರ್ಪಡಿಸುವುದಾಗಿ ತೀರ್ಮಾನಿಸಲಾಯಿತು.

     2024-25 ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು

ಅಧ್ಯಕ್ಷರಾಗಿವಿ.ಎಚ್.ರಿಯಾಝ್,ಗೌರವಾಧ್ಯಕ್ಷರಾಗಿ ಅಝೀಝ್ ಸನ, ಉಪಾಧ್ಯಕ್ಷರಾಗಿ ಶೀತಲ್ ಇಕ್ಬಾಲ್, ಕಾರ್ಯದರ್ಶಿಯಾಗಿ ಶಾಕಿರ್ ಅಳಕೆಮಜಲು, ಜತೆ ಕಾರ್ಯದರ್ಶಿ ಯಾಗಿ ವಿ.ಕೆ.ಎಂ.ಹಂಝ,ಕೋಶಾಧಿಕಾರಿಯಾಗಿ ಬಶೀರ್ ಬೊಬ್ಬೆಕೇರಿ.,ಮಾದ್ಯಮ ಪ್ರತಿನಿಧಿಗಳಾಗಿ ಅಬೂಬಕರ್ ಅನಿಲಕಟ್ಟೆ ಮತ್ತು ಮಹಮ್ಮದ್ ಅಲಿ ವಿಟ್ಲ, ಗೌರವ ಸಲಹೆಗಾರರಾಗಿ ಝುಬೈರ್ ಮಾಸ್ಟರ್, ಖಲಂದರ್ ಪರ್ತಿಪ್ಪಾಡಿ, ಇಸಾಕ್ ವಿಟ್ಲ,ಸಮದ್ ಮೇಗಿನಪೇಟೆ.

ಆ್ಯಂಬುಲೆನ್ಸ್ ನಿರ್ವಹಣೆಗಾರರಾಗಿ ಹಂಝ ವಿಟ್ಲ, ತೌಸೀಫ್ ವಿಟ್ಲ, ಉಬೈದ್ ವಿಟ್ಲ, ರಫೀಕ್ ಪೊನ್ನೋಟು,

ಸೌದಿ ಅರೇಬಿಯಾ ವಕ್ತಾರರಾಗಿ ಫಾರಿಸ್ ಮತ್ತು ಮನ್ಸೂರ್ ಮಂಗಿಲಪದವು

ದುಬೈ ವಕ್ತಾರರಾಗಿ  ರಾಝಿಕ್ ಡಿ ಇವರನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.

   ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ವಂದಿಸಿದರು.

ನಮ್ಮ ಶಾಸಕರ ಇಂದಿನ ದಿನಚರಿ

Posted by Vidyamaana on 2023-05-30 23:13:04 |

Share: | | | | |


ನಮ್ಮ ಶಾಸಕರ ಇಂದಿನ ದಿನಚರಿ

ಪುತ್ತೂರು: ರಾಜ್ಯಾದ್ಯಂತ ಮೇ 31 ಅಂದರೆ ಇಂದು ಶಾಲಾ ಶೈಕ್ಷಣಿಕ ಪ್ರಾರಂಭೋತ್ಸವ ನಡೆಯಲಿದ್ದು, ಪುತ್ತೂರು ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವವು ಬೆಳಿಗ್ಗೆ 10 ಗಂಟೆಗೆ ಬೊಳುವಾರು ಸ.ಹಿ.ಪ್ರಾ. ಶಾಲೆಯಲ್ಲಿ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ ಅವರು ಚಾಲನೆ ನೀಡಲಿದ್ದಾರೆ.

ಉಳಿದಂತೆ ಶಾಸಕರ ದಿನಚರಿ (ಮೇ 31) ಈ ರೀತಿ ಇದೆ -

*ಬೆಳಿಗ್ಗೆ 9.30ಕ್ಕೆ ಕೆಯ್ಯೂರು ಕೆಪಿಎಸ್ ಸ್ಕೂಲ್ ನಲ್ಲಿ ಪ್ರೌಢಶಾಲಾ ಮಟ್ಟದ ಶಾಲಾ ಪ್ರಾರಂಭೋತ್ಸವ ಹಾಗೂ 19 ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವುದು*

10 ಗಂಟೆಗೆ ಬೊಳುವಾರು ಸರಕಾರಿ ಹಿ ಪ್ರಾ ಶಾಲೆಯಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ*

*11 ಗಂಟೆಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಭೆ*

*12.30 ಕ್ಕೆ ಪಾಣಾಜೆ ಸರಕಾರಿ ಹಿ ಪ್ರಾ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣಾ ಕಾರ್ಯಕ್ರ‌ಮ*

BIG NEWS: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಎಂಬ ಸುದ್ದಿ ಸುಳ್ಳು : ಪರೀಕ್ಷಾ ಮಂಡಳಿ ಸ್ಪಷ್ಟನೆ

Posted by Vidyamaana on 2024-04-03 08:35:16 |

Share: | | | | |


BIG NEWS: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಎಂಬ ಸುದ್ದಿ ಸುಳ್ಳು : ಪರೀಕ್ಷಾ ಮಂಡಳಿ ಸ್ಪಷ್ಟನೆ

ಬೆಂಗಳೂರು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸುವ ಸಂಬಂಧ ಏಪ್ರಿಲ್ 3 ರ ಇಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಪತ್ರಿಕಾಗೋಷ್ಠಿ ಆಯೋಜಿಸಿದೆ ಎಂದು ಹಬ್ಬಿರುವ ಮಾಹಿತಿ ಸುಳ್ಳು ಎಂದು ಮಂಡಳಿಯ ಅಧ್ಯಕ್ಷೆ ಮಂಜುಶ್ರೀ ಸ್ಪಷ್ಟಪಡಿಸಿದ್ದಾರೆ.ಕಿಡಿಗೇಡಿಗಳು ಮಂಡಳಿ ಹೆಸರಿನಲ್ಲಿ ನಕಲಿ ಪತ್ರಿಕಾ ಹೇಳಿಕೆಯನ್ನು ಸೃಷ್ಟಿಸಿ ಸಾಮಾಜಕ ಜಾಲತಾಣದಲ್ಲಿ ಹರಿಬಿಟ್ಟು ಗೊಂದಲ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಮಂಡಳಿಯಿಂದ ಅಂತಹ ಯಾವುದೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿಲ್ಲ ಎಂದು ಹೇಳಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ಫಲಿತಾಂಶ ಪ್ರಕಟಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ವಿಟ್ಲ: ಅನುಮಾನಾಸ್ಪದವಾಗಿ ಬೈಕ್ ನಲ್ಲಿ ಯುವಕರ ಸುತ್ತಾಟ

Posted by Vidyamaana on 2023-12-04 05:11:31 |

Share: | | | | |


ವಿಟ್ಲ: ಅನುಮಾನಾಸ್ಪದವಾಗಿ ಬೈಕ್ ನಲ್ಲಿ ಯುವಕರ ಸುತ್ತಾಟ

ವಿಟ್ಲ:ಸಂಜೆ ಹೊತ್ತಲ್ಲಿ ಸಂಶಯಾಸ್ಪದವಾಗಿ ಐದಾರು ಬಾರಿ ಅತ್ತಿತ್ತ ಬೈಕ್‌ನಲ್ಲಿ ಸುತ್ತಾಡುತ್ತಿದ್ದ ಯುವಕರನ್ನು ಸ್ಥಳೀಯರು ತಡೆದು ವಿಚಾರಿಸುತ್ತಿದ್ದಂತೆ ಬೈಕ್‌ ಸವಾರ ಎಸ್ಕೆಪ್ ಆದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ಳಾಡು ಗ್ರಾಮದ ಕಾಡುಮಠ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ನಡೆದಿದೆ.


ಮುಸ್ಸಂಜೆ ಹೊತ್ತಲ್ಲಿ ಸಂಶಯಾಸ್ಪದವಾಗಿ ಐದಾರು ಬಾರಿ ಅತ್ತಿತ್ತ ಬೈಕ್‌ನಲ್ಲಿ ಸುತ್ತಾಡುತ್ತಿದ್ದ ಯುವಕರನ್ನು ಸ್ಥಳೀಯರು ತಡೆದು ವಿಚಾರಿಸುತ್ತಿದ್ದಂತೆ ಬೈಕ್‌ ಸವಾರ ಎಸ್ಕೆಪ್ ಆಗಿದ್ದು, ಹಿಂಬದಿ ಸವಾರನನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.


ಹಿಂಬದಿ ಸವಾರ ಅಡ್ಯನಡ್ಕ ನಿವಾಸಿ ರಾಕೇಶ್ ಎಂದು ಗುರುತಿಸಲಾಗಿದೆ.


ಪರಾರಿಯಾದ ಬೈಕ್ ಸವಾರನ ಸಾರ್ವಜನಿಕರು ಶೋಧ ನಡೆಸುತಿದ್ದಾರೆ.



Leave a Comment: