Posted by vidyamaana on 2024-07-03 19:23:39 |
ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್ನಲ್ಲಿ ಸದಸ್ಯರಾಗಿರುತ್ತಾರೆ.
ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.
Posted by Vidyamaana on 2024-05-10 10:55:14 |
ಹಾಸನ; ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಕೊನೆಗೂ ಸೆರೆಯಾಗಿದ್ದಾನೆ. ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ನಾಲ್ಕನೇ ಆರೋಪಿ ಸುಳ್ಯದ ಶಾಂತಿನಗರದ ಉಮಾರ್ ಮಗ ಮುಸ್ತಾಫ ಪೈಚಾರ್ @ ಮಹಮ್ಮದ್ ಮುಸ್ತಾಫ ಎಸ್(43) ಎಂಬಾತನನ್ನು ಇಂದು ಬೆಳಗ್ಗೆ 7 ಗಂಟೆಗೆ ಹಾಸನ ಜಿಲ್ಲೆಯ ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಗಳೂರು ಎನ್.ಐ.ಎ ಇನ್ಸೆಕ್ಟರ್ ಷಣ್ಮುಂಗಮ್ ನೇತೃತ್ವದಲ್ಲಿ ಇಂದು(ಮೇ.10) ಬಂಧಿಸಿಲಾಗಿದೆ.
Posted by Vidyamaana on 2023-09-13 09:38:17 |
ಪುತ್ತೂರು:ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸೆ.14ರಂದು ಪುತ್ತೂರಿಗೆ ಆಗಮಿಸಲಿದ್ದು, ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡಲಿದ್ದಾರೆ. ಬಳಿಕ ಕೇಂದ್ರದ ವಿವಿಧ ಕಾಮಗಾರಿಗಳ ವೀಕ್ಷಣೆ ಮಾಡಲಿದ್ದಾರೆ.
ಬೆಳಿಗ್ಗೆ ಗಂಟೆ 10ರಿಂದ ಮಧ್ಯಾಹ್ನದ ತನಕ ಅವರು ಸಾರ್ವಜನಿಕ ಅಹವಾಲು ಸ್ವೀಕಾರ ಮಾಡಲಿದ್ದು, ಬಳಿಕ ಕೇಂದ್ರ ಸರಕಾರದಿಂದ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ನಡೆಸಲಿದ್ದಾರೆ ಎಂದು ಬಿಜೆಪಿ ಕಚೇರಿ ಪ್ರಕಟಣೆ ತಿಳಿಸಿದೆ.
Posted by Vidyamaana on 2024-06-27 17:14:01 |
ಪುತ್ತೂರು, ಜೂನ್ ೨೧: ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ದಶಮಾನೋತ್ಸವದ ಹಿನ್ನೆಲೆಯಲ್ಲಿ ಪುತ್ತೂರು ವಲಯ ಮಟ್ಟದ ರಿವೈವ್ ಸ್ನೇಹ ಕೂಟ ಹಾಗೂ ಸಮಸ್ತ ಸ್ಥಾಪಕ ದಿನದ ಅಂಗವಾಗಿ ಪ್ರಾರ್ಥನಾ ಮಜ್ಲಿಸ್ ಜೂನ್ ೨೬ರಂದು ಬುಧವಾರ ರಾತ್ರಿ ಪುತ್ತೂರು ಬೈಪಾಸ್ ರಸ್ತೆಯಲ್ಲಿರುವ ಅಶ್ಮಿ ಕಂಫರ್ಟ್ನಲ್ಲಿ ನಡೆಯಿತು.
ಪ್ರಾರ್ಥನಾ ಮಜ್ಲಿಸ್ಗೆ ಸೈಯ್ಯದ್ ಎಸ್.ಎಂ. ಯಹ್ಯಾ ತಂಳ್ ಪೋಲ್ಯ ನೇತೃತ್ವ ನೀಡಿದರು. ಸ್ನೇಹಕೂಟವನ್ನು ಪುತ್ತೂರು ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ಅವರು ಮಾತನಾಡಿ ಸಂಸ್ಥೆಯ ಬೆಳವಣಿಗೆಯಲ್ಲಿ ಎಲ್ಲರ ಸಹಕಾರವನ್ನು ಕೋರಿದರು.
Posted by Vidyamaana on 2024-05-09 21:17:30 |
ಪುತ್ತೂರು: ಮದುವೆ ಜವಳಿಗೆಂದೇ ಪ್ರಸಿದ್ದಿ ಪಡೆದ ಎಂ.ಸಂಜೀವ ಶೆಟ್ಟಿ ಮಳಿಗೆಯ ನೂತನ ಶಾಖೆ ಪುತ್ತೂರಿನ ದರ್ಬೆ ವೃತ್ತದ ಬಳಿ ಮೇ 10ರಂದು ಶುಭಾರಂಭಗೊಳ್ಳಲಿದೆ.
8 ದಶಕಗಳ ವಸ್ತ್ರ ಪರಂಪರೆಯನ್ನು ಹೊಂದಿರುವ ಎಂ.ಸಂಜೀವ ಶೆಟ್ಟಿ ವಸ್ತ್ರವ್ಯಾಪಾರ ಮಳಿಗೆ, ಎಲ್ಲಾ ಪೀಳಿಗೆಯ ಗ್ರಾಹಕರ ಮನಗೆಲ್ಲುವಲ್ಲಿ ಸಫಲವಾಗಿದೆ. 1944ರಲ್ಲಿ ವಸ್ತ್ರೋದ್ಯಮಕ್ಕೆ ಕಾಲಿರಿಸಿದ ಈ ಸಂಸ್ಥೆ, ಇದೀಗ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಆಧುನಿಕ ಹಾಗೂ ಆಕರ್ಷಕ ವಿನ್ಯಾಸಗಳತ್ತ ಮುಖ ಮಾಡಿದೆ.
Posted by Vidyamaana on 2024-02-28 11:06:18 |
ಬೆಂಗಳೂರಿನಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದೆ..ಕಳ್ಳರ ಕಾಟಕ್ಕೆ ಜನ ಫೋನ್ ನಲ್ಲಿ ಮಾತಾಡೋಕು ಹೆದರೊ ಪರಿಸ್ಥಿತಿ ನಿರ್ಮಾಣ ಆಗಿದೆ..ಬೈಕ್ ನಲ್ಲಿ ಬರೊ ಆಸಾಮಿಗಳು ಕ್ಷಣ ಮಾತ್ರದಲ್ಲಿ ಮೊಬೈಲ್ ಕಸಿದು ಪರಾರಿ ಆಗ್ತಿದ್ದಾರೆ..ಇದು ಒಂದು ಕಡೆ ಆದ್ರೆ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿರುವ ಮೊಬೈಲ್ ಕದ್ದು ಹಣ ದೋಚ್ತಿದ್ದ ಖದೀಮ ಕೂಡ ಲಾಕ್ ಆಗಿದ್ದಾನೆ.ರಸ್ತೆಯಲ್ಲಿ ಮೊಬೈಲ್ ಹಿಡಿದು ನಿಂತ್ರೆ ನಿಮ್ಮ ಮೊಬೈಲ್ ನಿಮ್ಮ ಕೈನಲ್ಲಿ ಇರೋದೆ ಇಲ್ಲ..ಕ್ಷಣಮಾತ್ರದಲ್ಲಿ ಕಂಡವರ ಪಾಲಾಗಿಬಿಡತ್ತೆ…ಇಲ್ಲಾಗಿರೋದು ಕೂಡ ಅದೇ..ನೋಡಿ ರಸ್ತೆ ಬದಿ ಮೊಬೈಲ್ ಹಿಡಿದು ನಿಂತಿದ್ದ ವ್ಯಕ್ತಿಯ ಮೊಬೈಲ್ ಅನ್ನು ಬೈಕ್ ನಲ್ಲಿ ಬರೊ ಆಸಾಮಿಗಳು ಅದ್ಹೇಗೆ ಕಿತ್ತು ಪರಾರಿ ಆಗ್ತಾರೆ ಅಂತಾ..ಇಂತಹ ಗ್ಯಾಂಗ್ ಬೆಂಗಳೂರಿನಾದ್ಯಂತ ಆಯಕ್ಟಿವ್ ಆಗಿದ್ದ ಸಾರ್ವಜನಿಕರು ಭಯದಲ್ಲೇ ಮೊಬೈಲ್ ಹಿಡಿದು ಓಡಾಡೊ ಪರಿಸ್ಥಿತಿ ನಿರ್ಮಾಣ ಆಗಿದೆ.ಹೌದು ಈ ಫೋಟೊದಲ್ಲಿ ಕಾಣ್ತಿರೊ ಆಸಾಮಿಗಳ ಹೆಸರು..ರಂಗನಾಥ್ ಮತ್ತು ಗಿರೀಶ್…ಇವ್ರು ಸಾಮಾನ್ಯದವ್ರಲ್ಲ..ಮೊಬೈಲ್ ನಲ್ಲಿ ಬೆಂಗಳೂರಿನ ರಸ್ತೆ ರಸ್ತೆಗಳಲ್ಲಿ ರೌಂಡ್ಸ್ ಹಾಕ್ತಾರೆ…ರಸ್ತೆ ಬದಿಯಲ್ಲಿ ಮೊಬೈಲ್ ಕೈನಲ್ಲಿ ಹಿಡಿದು ನಿಂತಿರೋರನ್ನೆ ಟಾರ್ಗೆಟ್ ಮಾಡ್ತಾರೆ..ಅವ್ರ ಗಮನ ಸ್ವಲ್ಪ ಅತ್ತ ಇತ್ತ ಹೋದ್ರೆ ಸಾಕು..ಕೈನಲ್ಲಿದ್ದ ಮೊಬೈಲ್ ಕಸಿದು ಪರಾರಿ ಆಗ್ತಿದ್ರು..ಸದ್ಯ ಅದೇ ಖದೀಮರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ..ಬಂಧಿತರಿಂದ 20 ಲಕ್ಷ ಮೌಲ್ಯದ 68 ಮೊಬೈಲ್ ಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ
ಇನ್ನು ಮೊಬೈಲ್ ಕಸಿದು ಪರಾರಿ ಆಗೋರ ಕಥೆ ಇದಾದ್ರೆ..ಮಹಿಳೆಯರ ವ್ಯಾನಿಟಿ ಬ್ಯಾಗ್ ನಿಂದ ಮೊಬೈಲ್ ಕದ್ದು ಅವರ ಖಾತೆಯಲ್ಲಿರುವ ಹಣವನ್ನ ವರ್ಗಾವಣೆ ಮಾಡಿಕೊಳ್ತಿದ್ದ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ..ರಾಮಮೂರ್ತಿನಗರ ಪೊಲೀಸರು ವಿಘ್ನೇಶ್ ಎಂಬ ಮೊಬೈಲ್ ಕಳ್ಳತನ ಮಾಡ್ತಿದ್ದ ಆರೋಪಿಯನ್ನ ಬಂಧಿಸಿದ್ದಾರೆ.ಬಂಧಿತನಿಂದ 8 ಲಕ್ಷ ಮೌಲ್ಯದ 38 ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ..ಆರೋಪಿಯು ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ಹೊಂಚು ಹಾಕಿ ನಿಲ್ತಿದ್ದ.ಬಸ್ ಹತ್ತುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಹಿಂದಿನಿಂದ ಬಸ್ ಹತ್ತುವ ನೆಪದಲ್ಲಿ ವ್ಯಾನಿಟಿ ಬ್ಯಾಗ್ ನ ಜಿಪ್ ತೆಗೆದು ಮೊಬೈಲ್ ಫೋನ್ ಕಳ್ಳತನ ಮಾಡ್ತಿದ್ದ..ಮೊಬೈಲ್ ಫೋನ್ ನಲ್ಲಿ ಇರ್ತಿದ್ದ ಸಿಮ್ ಕಾರ್ಡ್ ಬೇರೊಂದು ಮೊಬೈಲ್ ಫೋನ್ ಗೆ ಹಾಕಿ ಫೋನ್ ಪೇ,ಗೂಗಲ್ಪೇ,ಪಿನ್ ಕೋಡ್ ಬದಲಿಸ್ತಿದ್ದ.ನಂತರ ಅವುಗಳ ಮೂಲಕ ಕಳವು ಮಾಡಿದ್ದ ಮೊಬೈಲ್ ನಂಬರ್ ಲಿಂಕ್ ಹೊಂದಿರುವ ಬ್ಯಾಂಕ್ ಗಳಲ್ಲಿರುವ ಹಣವನ್ನು ಬೇರೊಂದು ಪರಿಚಯಸ್ಥರ ಅಕೌಂಟ್ ಗೆ ವರ್ಗಾವಣೆ ಮಾಡಿ ನಂತರ ಆ ಹಣವನ್ನು ಪಡೆದುಕೊಳ್ತಿದ್ದ.ಸದ್ಯ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ
Posted by Vidyamaana on 2023-05-29 17:34:44 |
ಪುತ್ತೂರು: ಮಾನಕ ಜ್ಯುವೆಲ್ಸಿನ ನೂತನ ಶೋರೂಂನ 2ನೇ ಮಳಿಗೆ ನ್ಯೂ ಮಾನಕ ಜ್ಯುವೆಲ್ಸ್ ಗೆ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದರು.
ಇದೇ ಸಂದರ್ಭ ಸಂಸ್ಥೆಯ ಮಾಲಕರಾದ ಸಿದ್ಧನಾಥ್ ಅವರು ಅರುಣ್ ಕುಮಾರ್ ಪುತ್ತಿಲ ಅವರಿಗೆ ಶಾಲು ಹೊದಿಸಿ, ಶ್ರೀ ಮಹಾಲಿಂಗೇಶ್ವರ ದೇವರ ಬೆಳ್ಳಿಯ ಫೊಟೋ ನೀಡಿ ಗೌರವಿಸಿದರು.