ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

ಸುದ್ದಿಗಳು News

Posted by vidyamaana on 2024-06-30 19:31:43 |

Share: | | | | |


ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

ಕೋಟ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್‍ತಿ (97) ವಯೋಸಹಜ ಅಸೌಖ್ಯದಿಂದ

ಜೂ.30ರಂದು ನಿಧನ ಹೊಂದಿದರು. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

 Share: | | | | |


ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸಿಎ ದಿನಾಚರಣೆ

Posted by Vidyamaana on 2023-07-01 11:34:46 |

Share: | | | | |


ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸಿಎ ದಿನಾಚರಣೆ

ಪುತ್ತೂರು: ವಿದ್ಯಾರ್ಥಿಗಳ ಜೀವನದಲ್ಲಿ ನಿಶ್ಚಿತವಾದ ಗುರಿಯಿದ್ದರೆ ಮಾತ್ರ ಯಶಸ್ಸು ಸಾಧ್ಯ. ಗುರಿಯನ್ನು ಸಾಧಿಸುವ ಛಲ ಪ್ರತಿಯೊಬ್ಬರಲ್ಲೂ ಇರಬೇಕು. ನಿರಂತರ ಪ್ರಯತ್ನದಿಂದ ಗೆಲುವು  ಸಾಧ್ಯ ಎಂದು ಮಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಎಂ ಜಗನ್ನಾಥ ಕಾಮತ್ ಅಂಡ್ ಕೋ ಇದರ ಮ್ಯಾನೇಜಿಂಗ್ ಪಾರ್ಟ್ನರ್ ಆಗಿರುವ ಸಿಎ ಎಂ ಜಗನ್ನಾಥ ಕಾಮತ್ ಹೇಳಿದರು ಅವರು ಜುಲೈ ೧ರಂದು ಸಂತ ಫಿಲೋಮಿನ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘದ ಆಶ್ರಯದಲ್ಲಿ ನಡೆದ ವಾಣಿಜ್ಯ ಸಂಘದ ಉದ್ಘಾಟನೆ ಮತ್ತು ರಾಷ್ಟ್ರೀಯ ಸಿಎ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸಿಎ ಮಾಡಲು ವಿದ್ಯಾರ್ಥಿಗಳಿಗೆ ಲೆಕ್ಕಪತ್ರ ನಿರ್ವಹಣೆ, ಹಣಕಾಸು, ಸಾಮಾನ್ಯ ಗಣಿತ ಇನ್ನಿತರ ಕ್ಷೇತ್ರದಲ್ಲಿ ಪದವಿ ಅಗತ್ಯವಿರುತ್ತದೆ. ಸಿಎ ಮಾಡಲು ಬೇಕಾದ ಅರ್ಹತೆ ಪರಿಶ್ರಮದ ಬಗ್ಗೆ ತಿಳಿಸಿದರು.

ಮುಖ್ಯ ಅತಿಥಿಗಳಾದ ಫೈನಾನ್ಸಿಯಲ್ ಎನಾಲಿಸ್ಟ್ ಅಟ್ ಅಮೆಜಾನ್ ನ ಸಿಎ ಕೆ ಮಹಮ್ಮದ್ ಫೈರೋಜ್ ಮಾತನಾಡಿ “ವೈಫಲ್ಯವು ಯಶಸ್ಸಿನ ಮೆಟ್ಟಿಲು ಕಷ್ಟಪಟ್ಟು”. ಓದಿ ವಿಷಯವನ್ನು ಸರಿಯಾಗಿ ಗ್ರಹಿಸಿಕೊಂಡಾಗ ವಿದ್ಯಾರ್ಥಿಗಳು ಸಿಎ ಆಗಲು ಸಾಧ್ಯವಾಗುತ್ತದೆ. ನಿರಂತರ ಪರಿಶ್ರಮ ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ವಾಣಿಜ್ಯಶಾಸ್ತವನ್ನು ಅಧ್ಯಯನ ಮಾಡುವುದರಿಂದ ಹಲವಾರು ಅವಕಾಶಗಳು ಸಿಗುತ್ತದೆ. ಬ್ಯಾಂಕಿAಗ್ ಕ್ಷೇತ್ರ, ಚಾರ್ಟೆಡ್ ಅಕೌಂಟೆAಟ್ ನಂತಹ ಬೇರೆ ಬೇರೆ ಕ್ಷೇತ್ರಗಳು ವಿದ್ಯಾರ್ಥಿಗಳ ಮುಂದೆ ತೆರೆದಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ವಾಣಿಜ್ಯ ಸಂಘದ ನಿರ್ದೇಶಕರು ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ ವಿದ್ಯಾರ್ಥಿಗಳಾದ ನಿಧಾ ಅತಿಥಿಗಳನ್ನು ಸ್ವಾಗತಿಸಿ ಪ್ರತೀಕ್ಷಾ ಅತಿಥಿಗಳನ್ನು ಪರಿಚಯಿಸಿದರು. ಆಸ್ತಿಕ ವಂದಿಸಿ ನಿಶ್ಚಿತ ಕಾರ್ಯಕ್ರಮ ನಿರೂಪಿಸಿದರು

ಸಮಯಕ್ಕೆ ಸರಿಯಾಗಿ ಸದನಕ್ಕೆ ಹಾಜರಾದ ಪುತ್ತೂರು ಶಾಸಕರು ಬಹುಮಾನ ನೀಡಿ ಗೌರವಿಸಿದ ಸ್ಪೀಕರ್ ಯು ಟಿ ಖಾದರ್

Posted by Vidyamaana on 2023-12-05 19:55:17 |

Share: | | | | |


ಸಮಯಕ್ಕೆ ಸರಿಯಾಗಿ ಸದನಕ್ಕೆ ಹಾಜರಾದ ಪುತ್ತೂರು ಶಾಸಕರು  ಬಹುಮಾನ ನೀಡಿ ಗೌರವಿಸಿದ ಸ್ಪೀಕರ್ ಯು ಟಿ ಖಾದರ್

ಪುತ್ತೂರು: ಕಳೆದ ಬಾರಿ ನಡೆದ ವಿಧಾನಸಬಾ ಅಧಿವೇಶನಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದು ಮಾತ್ರವಲ್ಲದೆ ಸದನ ಮುಗಿಯುವ ತನಕ ಸದನದಲ್ಲೇ ಇದ್ದು ಸದನಕ್ಕೆ ಗೌರವ ಸಲ್ಲಿಸಿದ್ದ ಪುತ್ತೂರು ಶಾಸಕರಾದ ಅಶೋಕ್ ರೈಯವರಿಗೆ ಸ್ಪೀಕರ್ ಯು ಟಿ ಖಾದರ್ ಬಹುಮಾನ ನೀಡಿ ಗೌರವಿಸಿದ್ದಾರೆ.


ಶಾಸಕರಾದ ಅಶೋಕ್ ರೈಯವರು ಕಳೆದ ಬಾರಿ ಚೊಚ್ಚಲ ಅದಿವೇಶನದಲ್ಲಿ ಭಾಗವಹಿಸಿದ್ದರು. ಸದನಕ್ಕೆ ಸಮಯಕ್ಕೆ ಸರಿಯಗಿ ಹಾಜರಾಗುವ ಸದಸ್ಯರಿಗೆ ಬಹುಮಾ ನೀಡಿ ಗೌರವಿಸಲಾಗುವುದು ಎಂದು ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಯು ಟಿ ಖಾದರ್ ಅವರು ಘೋಷಣೆ ಮಾಡಿದ್ದರು. ಕಳೆದ ಬಾರಿಯ ಅಧಿವೇಶನಕ್ಕೆ ಒಟ್ಟು ೧೦ ಮಂದಿ ಸದಸ್ಯರು ಸಮಯಕ್ಕೆ ಸರಿಯಾಗಿ ಹಾಜರಾಗಿ ಅದಿವೇಶನ ಮುಗಿಯುವ ತನಕವೂ ಸದನದಲ್ಲೇ ಇದ್ದರು. ಹತ್ತು ಮಂದಿಯ ಪೈಕಿ ಪುತ್ತೂರು ಶಾಸಕರಾದ ಅಶೋಕ್ ರ‍್ಯಯವರು ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಂಗಳವಾರ ಅಧಿವೇಶನ ಕೊನೇ ಗಳಿಗೆಯಲ್ಲಿ ಸ್ಪೀಕರ್ ಯು ಟಿ ಖಾದರ್ ಅವರು ಶಾಸಕ ಅಶೋಕ್ ರಐಯವರನ್ನು ಬಹುಮಾನ ನೀಡಿ ಗೌರವಿಸಿದರು.


ಚೊಚ್ಚಲ ಅಧಿವೇಶನದಲ್ಲಿ ೧೪ ಪ್ರಶ್ನೆಗಳನ್ನು ಕೇಳುವ ಮೂಲಕ ಸುದ್ದಿಯಾಗಿದ್ದ ಶಾಸಕ ಅಶೋಕ್ ರೈಯವರು ತುಳು ಭಾಷೆಯಲ್ಲಿ ಸದನದಲ್ಲಿ ಮಾತನಾಡುವ ಮೂಲಕ ಕೋಟ್ಯತರ ತುಳುವರ ಮನಸ್ಸನ್ನು ಗೆದ್ದಿದ್ದರು. ೧೪ ಪ್ರಶ್ನೆಗಳ ಪೈಕಿ ಬಹುತೇಕ ಪ್ರಶ್ನೆಗಳು ಬಡವರ ಪರವಾಗಿ ಇದ್ದದ್ದು ಇನ್ನೊಂದು ವಿಶೇಷವಾಗಿತ್ತು.

ನೇತಾಜಿ ಸುಭಾಶ್ಚಂದ್ರ ಬೋಸ್‌ ಸಂಶೋಧನಾ ಮತ್ತು ಬಹುಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾಗಿ ಎಂ. ರಾಜ್ ಕುಮಾರ್ ಅಧಿಕಾರ ಸ್ವೀಕಾರ

Posted by Vidyamaana on 2023-08-28 09:14:58 |

Share: | | | | |


ನೇತಾಜಿ ಸುಭಾಶ್ಚಂದ್ರ ಬೋಸ್‌ ಸಂಶೋಧನಾ ಮತ್ತು ಬಹುಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾಗಿ ಎಂ. ರಾಜ್ ಕುಮಾರ್ ಅಧಿಕಾರ ಸ್ವೀಕಾರ

*ಬೆಂಗಳೂರು:* ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ತತ್ವ, ಆದರ್ಶಗಳು ಜನರ ನರನಾಡಿಗಳಲ್ಲಿ ಹರಿಯಬೇಕು ಎಂಬ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿರುವ ನೇತಾಜಿ ಸುಭಾಶ್ಚಂದ್ರ ಬೋಸ್‌ ರೀಸರ್ಚ್‌ ಆ್ಯಂಡ್‌ ಮಲ್ಪಿ ಡೆವಲಪ್‌ಮೆಂಟ್‌ ಟ್ರಸ್ಟ್‌ ರಜತ ಮಹೋತ್ಸವ ಆಚರಿಸಿ, ಸ್ವರ್ಣ ಮಹೋತ್ಸವದತ್ತ ಹೆಜ್ಜೆ ಇಟ್ಟಿದೆ. ನೇತಾಜಿ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಎಂ.ರಾಜ್‌ಕುಮಾರ್‌ ಇದೀಗ ಅಧಿಕಾರ ವಹಿಸಿಕೊಂಡಿದ್ದು, ಟ್ರಸ್ಟ್‌ ಇದೀಗ ನಗರದ  ಹೊರವಲಯದಲ್ಲಿ ನೇತಾಜಿ ವಿಶ್ವವಿದ್ಯಾಲಯ ಸ್ಥಾಪನೆಗೆ ನೀಲ ನಕ್ಷೆ ರೂಪಿಸಿದೆ.

‘ಈ ವಿಶ್ವವಿದ್ಯಾಲಯದ ರೂಪುರೇಷೆ ಈಗಾಗಲೇ ಸಿದ್ಧವಾಗಿದ್ದು, ಆರಂಭದಲ್ಲಿ ಟ್ರಸ್ಟ್‌ನ ಕೇಂದ್ರಸ್ಥಾನವಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ದೇಶದಲ್ಲೇ ದೊಡ್ಡದಾದ, ನೇತಾಜಿ ಅವರ 40 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗುವುದು. ಈ ಮಾದರಿ ಕ್ಯಾಂಪಸ್‌ನಲ್ಲಿ  ಕೆ.ಜಿ.ಯಿಂದ ಪಿ.ಜಿ. ತನಕ ಬೋಧನೆಯ ಸುಸಜ್ಜಿತ ಶಿಕ್ಷಣ ಸಂಸ್ಥೆಯನ್ನೂ ಸ್ಥಾಪಿಸಲಾಗುತ್ತಿದೆ. ನೇತಾಜಿ ಅವರ ಕುರಿತಾದ ಜ್ಞಾನಾರ್ಜನೆಯ ಕೇಂದ್ರವಾಗಿ ಬೆಂಗಳೂರು ಹೊರಹೊಮ್ಮಲಿದೆ’ ಎಂದು ಟ್ರಸ್ಟ್‌ನ ಅಧ್ಯಕ್ಷ ಎಂ.ರಾಜ್‌ಕುಮಾರ್ ತಿಳಿಸಿದ್ದಾರೆ.


*ನೇತಾಜಿ ಪ್ರಭಾವ:*


 ಬೆಂಗಳೂರು ಉತ್ತರ ಕಾಂಗ್ರೆಸ್‌ ಘಟಕದ ಅದ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ರಾಜ್‌ಕುಮಾರ್ ಅವರು ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರಿಂದ ಬಹಳ ಮಟ್ಟಿಗೆ ಪ್ರಭಾವಿತರಾದವರು. ದೇಶದೆಲ್ಲೆಡೆ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಜೀವನ, ಕೊಡುಗೆಯ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂಬ ಸಂಕಲ್ಪ ತೊಟ್ಟಿದ್ದು, ತಮ್ಮ ಟ್ರಸ್ಟ್‌ನ ಪದಾಧಿಕಾರಿಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.


ಪುಸ್ತಕ ಪ್ರಕಟಣೆ,  ಗ್ರಂಥಾಲಯ ಸ್ಥಾಪನೆ, ನೇತಾಜಿ ಜೀವನವನ್ನು ಯುವಜನತೆಗೆ ಪರಿಚಯಿಸುವ ಹಲವಾರು  ಕಾರ್ಯಕ್ರಮಗಳನ್ನು ತಮ್ಮ ನೇತಾಜಿ ಭವನದ ಮೂಲಕ ರೂಪಿಸಲಾಗಿದೆ. ಇನ್ನಷ್ಟು ಕಾರ್ಯಕ್ರಮಗಳ ಯೋಜನೆಯನ್ನು ಟ್ರಸ್ಟ್‌ ಹಾಕಿಕೊಂಡಿದೆ.


*ಶತಮಾನೋತ್ಸವದಲ್ಲಿ ಕಂಡ ಕನಸು*


ನೇತಾಜಿ ಅವರ ಜನ್ಮಶತಮಾನೋತ್ಸವ 1997ರಲ್ಲಿ ನಡೆದಿತ್ತು. ಅಗ ವಿಧಾನ ಪರಿಷತ್ ಸಭಾಪತಿ ಆಗಿದ್ದವರು ಡಿ.ಬಿ.ಕಲ್ಮಣ್ಕರ್‌. ಅವರು ನೇತಾಜಿ ಅವರ ಶೇಷ್ಠ ಅನುಯಾಯಿಯಾಗಿದ್ದರು. ಅವರ ಸಂಕಲ್ಪದಂತೆ ನೇತಾಜಿ ಸುಭಾಶ್ಚಂದ್ರ ಬೋಸ್‌ ರೀಸರ್ಚ್ ಆ್ಯಂಡ್ ಮಲ್ಪಿ ಡೆವಲಪ್‌ಮೆಂಟ್‌ ಟ್ರಸ್ಟ್‌ ಸ್ಥಾಪನೆಗೊಂಡಿತು. ಕಲ್ಮಣ್ಕರ್ ಅವರ ಗೌರವಾಧ್ಯಕ್ಷತೆಯಲ್ಲಿ ಹಲವು ಐಎಎಸ್‌ ಅಧಿಕಾರಿಗಳು, ಸಮಾಜ ಸೇವಕರು ಮತ್ತು ಅನೇಕ ಗಣ್ಯರ ಪಾಲ್ಗೊಳ್ಳುವಿಕೆಯೊಂದಿಗೆ ಈ ಟ್ರಸ್ಟ್‌ಗೆ ರೂಪ ದೊರೆಯಿತು. ಆಗಿನ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರೇ ನೇತಾಜಿ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.


ಟ್ರಸ್ಟ್‌ ಸ್ಥಾಪನೆಯ ಬಳಿಕ ಹಲವಾರು ಕಾರ್ಯಗಳನ್ನು ದೇಶದ ಉದ್ದಗಲಗಳಲ್ಲಿ ಮಾಡುತ್ತ ಬರಲಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನೇತಾಜಿ ಚೇತನಾ ಯಾತ್ರೆ ಕೈಗೊಳ್ಳಲಾಗಿತ್ತು. ಅದು ಕರ್ನಾಟಕದ ಎಲ್ಲಾ  ಜಿಲ್ಲಾ ಕೇಂದ್ರಗಳಿಗೂ ಸಂಚರಿಸಿತ್ತು. ಆಗ ನೇತಾಜಿ ಜೀವನ ಚರಿತ್ರೆಯನ್ನು ಬಿಂಬಿಸುವ ಪುಸ್ತಕವನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ನೀಡಲಾಗಿತ್ತು.


ಟ್ರಸ್ಟ್ ಸ್ಥಾಪನೆಯ ಬಳಿಕ ಪೋಷಣೆಯೂ ಅತ್ಯುತ್ತಮವಾಗಿಯೇ ನಡೆದಿದೆ. ನ್ಯಾಯಮೂರ್ತಿ ಆರ್.ಜೆ.ದೇಸಾಯಿ, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಕೆ.ಎಂ. ಕೋಟಿ, ಹಿರಿಯರಾದ ಜಿ.ಆರ್‌.ಶಿವಶಂಕರ, ಸಿ.ಮುನಿವೆಂಕಟಸ್ವಾಮಿ, ಹಿರಿಯ ರಾಜಕೀಯ ಧುರೀಣರಾದ ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಎಸ್‌.ಎಂ.ಕೃಷ್ಣ, ಎಚ್‌.ಕೆ.ಪಾಟೀಲ್‌ ಮೊದಲಾದವರ ಸಹಕಾರದಿಂದ ಟ್ರಸ್ಟ್‌ ಮುನ್ನಡೆಯುತ್ತ ಬಂದಿದೆ.


ವಿಧಾನಸೌಧದ ಈಶಾನ್ಯ ಭಾಗದಲ್ಲಿ 12 ಅಡಿ ಎತ್ತರದ ನೇತಾಜಿ ಪುತ್ಥಳಿ ಸ್ಥಾಪಿಸುವಲ್ಲಿ ಟ್ರಸ್ಟ್ ಪಾತ್ರ ದೊಡ್ಡದು. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಪುತ್ಥಳಿಯನ್ನು ಅನಾವರಣಗೊಳಿಸಿದ್ದರು. ನೇತಾಜಿ ಜನ್ಮದಿನದಂದು ಇಂದಿಗೂ ಮುಖ್ಯಮಂತ್ರಿಗಳು ಈ  ಪುತ್ಥಳಿಗೇ ಹಾರ ಹಾಕಿ ಸ್ಮರಿಸುತ್ತಾರೆ ಎಂಬುದು ವಿಶೇಷ.


ನೇತಾಜಿ ಹುಟ್ಟುಹಬ್ಬ ಪ್ರಯುಕ್ತ ಪ್ರತಿ ವರ್ಷ ಐದು ಮಂದಿಗೆ ನೇತಾಜಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ನೇತಾಜಿ ಭವನವಂತೂ ಇಂದು ನೇತಾಜಿ ಅವರ ಜೀವನವನ್ನು ತಿಳಿದುಕೊಳ್ಳಲು ಇರುವ ದೊಡ್ಡ ಕೇಂದ್ರವಾಗಿ ಬದಲಾಗಿದೆ. ಎನ್.ಎಸ್.ಜೋಷಿ ಸಹಿತ ಹಲವರು ಈ ಭವನ ನಿರ್ಮಾಣಕ್ಕೆ ಸಹಕರಿಸಿ‌ದ್ದಾರೆ. ನೇತಾಜಿ ಅವರ ಪುತ್ರಿ ಅನಿತಾ ಬೋಷ್‌, ಅಳಿಯ ಮಾರ್ಟಿನ್‌ ಪಫ್‌ ಅವರು ಅನೇಕ ಬಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ.


ನೇತಾಜಿ ಸುಬಾಶ್ಚಂದ್ರ ಬೋಸ್ ಅವರ ಜೀವನ ಎಲ್ಲರಿಗೂ ಆದರ್ಶ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅವರು ವಹಿಸಿದ ಪಾತ್ರವೂ ಬಹಳ ದೊಡ್ಡದು. ಅದನ್ನು ಮುಂದಿನ ಪೀಳಿಗೆಗೂ ತಿಳಿಸುವ ಅಗತ್ಯ ಇದೆ. ಈ ಉದ್ದೇಶದಿಂದಲೇ ಸ್ಥಾಪನೆಯಾದ ಟ್ರಸ್ಟ್ ಇದೀಗ ಎಂ.ರಾಜ್‌ಕುಮಾರ್ ಅವರ ಸಾರಥ್ಯದಲ್ಲಿ ತನ್ನ ಸ್ಥಾಪನೆಗೆ ನಿಜ ಉದ್ದೇಶ ಈಡೇರಿಸುತ್ತ ಮುನ್ನಡೆಯುತ್ತಿದೆ.


ಟ್ರಸ್ಟ್‌ನ ನೂತನ ಅಧ್ಯಕ್ಷರಾದ ಎಂ.ರಾಜ್‌ಕುಮಾರ್ ಅವರೊಂದಿಗೆ ಜಿ.ಆರ್.ಶಿವಶಂಕರ್ (ಪ್ರಧಾನ ಕಾರ್ಯದರ್ಶಿ), ರಾಜಯೋಗೀಂದ್ರ ವೀರಯ್ಯ ಸ್ವಾಮಿ ಶಾಸ್ತ್ರಿಮಠ ಗುರೂಜಿ (ಸಂಸ್ಥಾಪಕ ಟ್ರಸ್ಟಿ), ಗುರು ಶಾಸ್ತ್ರಿಮಠ (ಉಪಾಧ್ಯಕ್ಷ), ಸಂಜಯ್‌  ಡಿ.ಕಲ್ಮಣ್ಕರ್‌ (ಉಪಾಧ್ಯಕ್ಷ), ಡಾ.ಉಮಾ ಶೇಷಗಿರಿ (ಕಾರ್ಯದರ್ಶಿ), ಅಮರನಾಥ ಕೋಟಿ (ಖಜಾಚಿ), ರವೀಂದ್ರ ನಾರಾಯಣ ಜೋಷಿ, ಆರ್‌.ವಿಶಾಲ್‌, ಸ್ಮರಣ್‌ ಶಿವಶಂಕರ್‌, ರಾಹುಲ್ ಶೇಷಗಿರಿ, ಆದಿತ್ಯ ಸಂಜಯ್‌ ಕಲ್ಮಣ್ಕರ್ (ಟ್ರಸ್ಟಿಗಳು) ಅವರು ಈ ದೂರದೃಷ್ಟಿಯ ಯೋಜನೆಯಲ್ಲಿ ಕೈಜೋಡಿಸಿದ್ದಾರೆ.

ಉಳ್ಳಾಲ :ತೌಡುಗೋಳಿ ನಿವಾಸಿ ವಿವಾಹಿತೆ ಉಳ್ಳಾಲ ಮೂಲದ ಸುಜಾತಾ ಶೆಟ್ಟಿ ಪುಣೆಯಲ್ಲಿ ಅನುಮಾನಸ್ಪದ ಸಾವು

Posted by Vidyamaana on 2023-10-11 15:42:04 |

Share: | | | | |


ಉಳ್ಳಾಲ :ತೌಡುಗೋಳಿ ನಿವಾಸಿ ವಿವಾಹಿತೆ ಉಳ್ಳಾಲ ಮೂಲದ ಸುಜಾತಾ ಶೆಟ್ಟಿ ಪುಣೆಯಲ್ಲಿ ಅನುಮಾನಸ್ಪದ ಸಾವು

ಉಳ್ಳಾಲ : ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ತೌಡುಗೋಳಿ ಕ್ರಾಸ್ ಗುರಿಕಾರಮೂಲೆ ನಿವಾಸಿ ನಾರಾಯಣ ಶೆಟ್ಟಿ ಎಂಬವರ ಪುತ್ರಿ ಸುಜಾತ ಶೆಟ್ಟಿ (38) ಎಂಬವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯ ಭಾರತೀಯ ವಿದ್ಯಾಪೀಠ ಎಂಬಲ್ಲಿ ನಡೆದಿದೆ.

ಪಜೀರು ಪಾನೇಲ ನಿವಾಸಿ ಪುಣೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಸುರೇಶ್ ಕೈಯ್ಯ ಎಂಬವರಿಗೆ ನಾಲ್ಕು ತಿಂಗಳ ಹಿಂದೆಯಷ್ಟೇ ಸುಜಾತಾ ಅವರನ್ನು ವಿವಾಹ ಮಾಡಿಕೊಡಲಾಗಿತ್ತು. ಅ.8 ರಂದು ಸುಜಾತ ಮೃತದೇಹ ಭಾರತೀಯ ವಿದ್ಯಾಪೀಠದಲ್ಲಿರುವ ಮನೆಯೊಳಗೆ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಶವಮಹಜರಿಗೆ ಕಳುಹಿಸಲಾಗಿತ್ತು. ಅ.9 ರಂದು ತೌಡುಗೋಳಿ ಸಮೀಪ ಸುಜಾತ ಅವರ ಅಂತಿಮ ಸಂಸ್ಕಾರ ನೆರವೇರಿದ್ದು, ಮನೆಮಂದಿ ಸುರೇಶ್ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಶವಮಹಜರು ವರದಿ ಬಂದ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬೀಳಲಿದೆ. ಸುಜಾತಾ ಅವರು ತೊಕ್ಕೊಟ್ಟು ಬ್ಯೂಟಿಪಾರ್ಲರ್ ನಲ್ಲಿ ಈ ಹಿಂದೆ ಬ್ಯೂಟೀಷಿಯನ್ ಆಗಿ ಕೆಲಸ‌ನಿರ್ವಹಿಸುತ್ತಿದ್ದರು.

ಕ್ಷೇತ್ರ ಗೆಲ್ಲುವುದಕ್ಕಿಂತ ಅಭ್ಯರ್ಥಿ ಆಯ್ಕೆಯೇ ಜಟಿಲ

Posted by Vidyamaana on 2023-04-10 19:31:37 |

Share: | | | | |


ಕ್ಷೇತ್ರ ಗೆಲ್ಲುವುದಕ್ಕಿಂತ ಅಭ್ಯರ್ಥಿ ಆಯ್ಕೆಯೇ ಜಟಿಲ

ಪುತ್ತೂರು: ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲ. ಆದ್ದರಿಂದ ಬಿಜೆಪಿ, ಕಾಂಗ್ರೆಸ್ ಪಕ್ಷದೊಳಗಡೆ ಟಿಕೇಟ್ ಪೈಪೋಟಿ ಮುಂದುವರಿದಿದೆ. ವರಿಷ್ಠರಿಗೆ ಕ್ಷೇತ್ರ ಗೆಲ್ಲುವ ಲೆಕ್ಕಾಚಾರವಾದರೆ, ಅಭ್ಯರ್ಥಿಗಳಿಗೆ ಟಿಕೇಟ್ ಪಡೆದುಕೊಳ್ಳುವುದೇ ಪ್ರತಿಷ್ಠೆ ಎಂಬಂತಾಗಿದೆ.

ಪ್ರತಿಸಲ ಚುನಾವಣೆ ಬಂದಾಗಲೂ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವೋ ಗೊಂದಲ. ಆದರೆ ಈ ಬಾರಿ ಆ ಗೊಂದಲ ಬಿಜೆಪಿಗೆ ಶಿಫ್ಟ್!

ಸದ್ಯದ ಬೆಳವಣಿಗೆಗಳನ್ನು ಕಂಡಾಗ, ಬಿಜೆಪಿಯ ಅಭ್ಯರ್ಥಿ ಪಟ್ಟಿಯನ್ನು ಗಮನಿಸಿಕೊಂಡು, ಕಾಂಗ್ರೆಸ್ ಮುಂದೆ ಹೆಜ್ಜೆ ಇಡುವಂತೆ ಕಾಣುತ್ತಿದೆ. ಇದು ಪುತ್ತೂರು ಕ್ಷೇತ್ರಕ್ಕೆ ಹೆಚ್ಚು ಸಮೀಪವರ್ತಿಯಾದ ಹೇಳಿಕೆಯೂ ಹೌದು.

ಸೋಮವಾರ ಸಂಜೆಯ ಹೊತ್ತಿಗೆ ಬಿಜೆಪಿ ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಆದರೆ ವರಿಷ್ಠರ ನಡುವೆಯೇ ಸ್ಪಷ್ಟ ನಿರ್ಧಾರ ಕೈಗೊಳ್ಳುವುದು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಟ್ಟಿ ಫೈನಲ್ ಆಗಿಲ್ಲ. ಆದರೆ ಅಂತಿಮ ಪಟ್ಟಿಯಲ್ಲಿ ಪುತ್ತೂರು ಬಿಜೆಪಿ ಅಭ್ಯರ್ಥಿಗಳಾಗಿ ಅರುಣ್ ಕುಮಾರ್ ಪುತ್ತಿಲ ಹಾಗೂ ಕಿಶೋರ್ ಕುಮಾರ್ ಬೊಟ್ಯಾಡಿ ಅವರ ಹೆಸರು ಇದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದನ್ನು ಆಧರಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆಯೇ ಎನ್ನುವುದೇ ಕುತೂಹಲ.

ಕಾಂಗ್ರೆಸಿನಲ್ಲಿ ಅಭ್ಯರ್ಥಿಗಳ ಸಂಖ್ಯೆ 14 ಇದ್ದರೂ, ಅಂತಿಮ ಪಟ್ಟಿಯಲ್ಲಿ ಶಕುಂತಳಾ ಶೆಟ್ಟಿ ಹಾಗೂ ಅಶೋಕ್ ಕುಮಾರ್ ರೈ ಅವರ ಹೆಸರು ಇದೆ. ಇವರಿಬ್ಬರ ಪೈಕಿ ಒಬ್ಬರ ಹೆಸರು ಅಂತಿಮಗೊಳ್ಳುವುದು ಬಹುತೇಕ ಪಕ್ಕಾ ಎನ್ನುವುದೇ ಸದ್ಯದ ಮಾಹಿತಿ.

ಬಿಜೆಪಿಗೆ ಎದುರಾದ ವಿಘ್ನ:

ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಇರುವುದರಿಂದ, ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮ ಮಾಡಲು ಹಿಂದೇಟು ಹಾಕುತ್ತಿವೆಯೇ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪುತ್ತೂರಿನ ಮಟ್ಟಿಗೆ ಹೇಳುವುದಾದರೆ, ಇತ್ತೀಚೆಗಷ್ಟೇ ವೈರಲ್ ಆಗಿರುವ ಫೊಟೋ, ಅಭ್ಯರ್ಥಿ ಅಂತಿಮಕ್ಕೆ ಬಿಸಿ ತುಪ್ಪದಂತಾಗಿದೆ ಎಂದೇ ಹೇಳಬಹುದು. ಅಭಿವೃದ್ದಿಯ ಹರಿಕಾರ ಎಂದೇ ಬಣ್ಣಿಸಿದರೂ, ಕೊನೆ ಕ್ಷಣದಲ್ಲಿ ಎದುರಾದ ವಿಘ್ನವೊಂದು ಹಾಲಿ ಶಾಸಕರ ರಾಜಕೀಯ ಜೀವನಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ದಟ್ಟವಾಗಿದೆ.

ಬಿಜೆಪಿ ಟಿಕೇಟ್ ಸಂಜೀವ ಮಠಂದೂರು ಕೈತಪ್ಪುವುದು ಬಹುತೇಕ ಸ್ಪಷ್ಟ. ಆದ್ದರಿಂದ ಆ ಸ್ಥಾನಕ್ಕೆ ಅರುಣ್ ಕುಮಾರ್ ಪುತ್ತಿಲ ಹಾಗೂ ಕಿಶೋರ್ ಕುಮಾರ್ ಬೊಟ್ಯಾಡಿ ಹೆಸರು ಪಟ್ಟಿಯಲ್ಲಿ ಕಾಣಸಿಕ್ಕಿದೆ ಎನ್ನುತ್ತವೆ ಮೂಲಗಳು. ಇವರಿಬ್ಬರಲ್ಲಿ ಅಂತಿಮ ಯಾರು ಎನ್ನುವುದೇ ಯಕ್ಷಪ್ರಶ್ನೆ.

ಕಾಂಗ್ರೆಸ್ ಲೆಕ್ಕಾಚಾರ:

ಪುತ್ತೂರಿನಲ್ಲಿ ಕಾಂಗ್ರೆಸ್ ನಡೆ ಇನ್ನೂ ನಿರ್ಧಾರವಾದಂತಿಲ್ಲ. ಬಿಜೆಪಿಯ ಅಭ್ಯರ್ಥಿಯನ್ನು ಆಧರಿಸಿ, ಕಾಂಗ್ರೆಸ್ ಪಟ್ಟಿ ಅಂತಿಮಗೊಳಿಸುವ ಸಾಧ್ಯತೆಯೂ ಇದೆ. ಸಂಜೀವ ಮಠಂದೂರು ಅಭ್ಯರ್ಥಿಯಾದರೆ ಶಕುಂತಳಾ ಶೆಟ್ಟಿ ಅವರನ್ನೇ ಅಭ್ಯರ್ಥಿಯಾಗಿಸುವ ಸಾಧ್ಯತೆ ಇದೆ. ಕಾರಣ, ಮಹಿಳಾ ಹೋರಾಟಗಾರ್ತಿಯಾದ ಶಕುಂತಳಾ ಶೆಟ್ಟಿ, ಫೊಟೋ ವೈರಲ್ ಪ್ರಕರಣವನ್ನು ಸಮರ್ಥವಾಗಿ ಪಕ್ಷಕ್ಕೆ ಲಾಭವಾಗುವಂತೆ ತಿರುಗಿಸಬಲ್ಲರು. ಉಳಿದಂತೆ ಪುತ್ತಿಲ ಅಥವಾ ಬೊಟ್ಯಾಡಿ ಅಭ್ಯರ್ಥಿಯಾದರೆ, ಯಂಗ್ ಕ್ಯಾಂಡಿಡೇಟ್ ಅಶೋಕ್ ಕುಮಾರ್ ರೈ ಅಭ್ಯರ್ಥಿಯಾಗಲೂ ಬಹುದು.

ಕಣಕ್ಕೆ ಕಂಕಣ ಯಾವಾಗ?!:

ಒಟ್ಟಿನಲ್ಲಿ ಅಭ್ಯರ್ಥಿ ಆಯ್ಕೆಯ ಕಸರತ್ತು ಮುಗಿಯದೇ, ಚುನಾವಣಾ ಕಣ ರಂಗು ತುಂಬಿಕೊಳ್ಳುತ್ತಿಲ್ಲ. ಕೆಲ ದಿನಗಳ ಹಿಂದಿನವರೆಗೆ ನಡೆಯುತ್ತಿದ್ದ ಪ್ರಚಾರ ಕಾರ್ಯಗಳು, ಇದೀಗ ಮೆಲ್ಲನೆ ವೇಗ ಕುಂಠಿತಗೊಳ್ಳುವಂತೆ ಮಾಡಿದೆ. ಹಾಗೇ ನೋಡಿದರೆ, ಚುನಾವಣೆಯ ದಿನ ದೌಡಾಯಿಸುತ್ತಾ ಬರುತ್ತಿದೆ, ಬೆರಳೆಣಿಕೆಯ ದಿನಗಳಷ್ಟೇ ಬಾಕಿ. ಅಭ್ಯರ್ಥಿಯ ಗೊಂದಲದಲ್ಲೇ ಇರುವ ಕಾರ್ಯಕರ್ತರು, ಮುಖಂಡರು ಪ್ರಚಾರದೆಡೆಗೆ ಗಮನ ನೀಡುವುದು ಯಾವಾಗ? ರಂಗು ತುಂಬಿಕೊಳ್ಳುವುದು ಯಾವಾಗ? ಪಕ್ಷದ ಪರವಾಗಿ ಕಂಕಣ ಕಟ್ಟಿಕೊಳ್ಳುವವರು ಯಾರು?

ಇದು ಏರ್‌ಟೆಲ್‌ನ ಬಂಪ‌ರ್ ಪ್ಲಾನ್: ಕೇವಲ 49 ರೂ. ಗೆ ಅನಿಯಮಿತ ಡೇಟಾ

Posted by Vidyamaana on 2024-03-23 09:39:36 |

Share: | | | | |


ಇದು ಏರ್‌ಟೆಲ್‌ನ ಬಂಪ‌ರ್ ಪ್ಲಾನ್: ಕೇವಲ 49 ರೂ. ಗೆ ಅನಿಯಮಿತ ಡೇಟಾ

      ಟೆಲಿಕಾಂ ಕ್ಷೇತ್ರದಲ್ಲಿನ ಪೈಪೋಟಿ ಮತ್ತು ಜಿಯೋ-ವೊಡಾಫೋನ್ ಐಡಿಯಾಕ್ಕೆ ಟಕ್ಕರ್ ಕೊಡಲು ಏರ್​ಟೆಲ್ ತನ್ನ ರೂ. 49 ಡೇಟಾ ಪ್ಯಾಕ್​ನಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತಿದೆ. ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ವಿವರಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.


ಏರ್‌ಟೆಲ್ (Airtel) ಬಳಕೆದಾರರಿಗೊಂದು ಸಂತಸದ ಸುದ್ದಿ. ಏರ್‌ಟೆಲ್ ತನ್ನ ರೂ. 49 ಡೇಟಾ ಪ್ಯಾಕ್ ಅನ್ನು ಬದಲಾಯಿಸಿದೆ. ಈ ಯೋಜನೆಯನ್ನು ರೀಚಾರ್ಜ್ ಮಾಡುವ ಬಳಕೆದಾರರು ಈಗ ಅನಿಯಮಿತ ಡೇಟಾವನ್ನು ಪಡೆಯುತ್ತಾರೆ. ಏರ್‌ಟೆಲ್‌ನ ಈ ಯೋಜನೆಯು ಅಗ್ಗದ ಡೇಟಾ ಪ್ಯಾಕ್ ಆಗಿದೆ.ಟೆಲಿಕಾಂ ಕ್ಷೇತ್ರದಲ್ಲಿನ ಪೈಪೋಟಿ ಮತ್ತು ಜಿಯೋ-ವೊಡಾಫೋನ್ ಐಡಿಯಾಕ್ಕೆ ಟಕ್ಕರ್ ಕೊಡಲು ಏರ್​ಟೆಲ್ ತನ್ನ ರೂ. 49 ಡೇಟಾ ಪ್ಯಾಕ್​ನಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತಿದೆ. ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ವಿವರಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.ಏರ್‌ಟೆಲ್‌ನ ರೂ. 49 ಡೇಟಾ ಪ್ಯಾಕ್ ನಿಮಗೆ ಒಂದು ದಿನದ ಮಾನ್ಯತೆಯೊಂದಿಗೆ ಅನಿಯಮಿತ ಡೇಟಾದ ಪ್ರಯೋಜನವನ್ನು ನೀಡುತ್ತದೆ. ಆದರೆ, ಈ ಯೋಜನೆಯಲ್ಲಿ ನೀವು 20GB ವರೆಗೆ ಮಾತ್ರ ಅನಿಯಮಿತ ಡೇಟಾವನ್ನು ಪಡೆಯುತ್ತೀರಿ, ನಂತರ ಇಂಟರ್ನೆಟ್ ವೇಗವು 64 Kbps ಗೆ ಕಡಿಮೆಯಾಗುತ್ತದೆ.

ಅಂದರೆ, ಏರ್‌ಟೆಲ್‌ನ ಈ ಯೋಜನೆಯಲ್ಲಿ 1GB ಡೇಟಾದ ಬೆಲೆ ಸುಮಾರು 2.45 ರೂಪಾಯಿಗಳಾಗಿವೆ.ಏರ್‌ಟೆಲ್‌ನ ರೂ. 49 ಡೇಟಾ ಪ್ಯಾಕ್ ಈ ಹಿಂದೆ 6 GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತಿತ್ತು. ಈ ಯೋಜನೆಯ ಮಾನ್ಯತೆ ಒಂದೇ ಆಗಿರುತ್ತದೆ. ಈ ಹಿಂದೆಯೂ ಈ ಯೋಜನೆಯು 1 ದಿನದ ವ್ಯಾಲಿಡಿಟಿಯೊಂದಿಗೆ ಲಭ್ಯವಿತ್ತು. ಈಗ ಏರ್‌ಟೆಲ್ ಈ ಯೋಜನೆಯ ಪ್ರಯೋಜನಗಳನ್ನು ಹೆಚ್ಚಿಸಿ ಹೆಚ್ಚಿನ ಡೇಟಾವನ್ನು ನೀಡುತ್ತಿದೆ.ರೂ. 49 ಡೇಟಾ ಪ್ಯಾಕ್‌ನಲ್ಲಿ ಬದಲಾವಣೆಯ ನಂತರ, ಏರ್‌ಟೆಲ್ ಅಂತಹ ಎರಡು ಯೋಜನೆಗಳನ್ನು ಹೊಂದಿದೆ. ಇದರಲ್ಲಿ ಬಳಕೆದಾರರು ಅನಿಯಮಿತ ಇಂಟರ್ನೆಟ್ ಅನ್ನು ಪಡೆಯುತ್ತಾರೆ.

 ಇದನ್ನು ಹೊರತುಪಡಿಸಿ, ನೀವು ಏರ್‌ಟೆಲ್‌ನ ರೂ. 99 ಡೇಟಾ ಪ್ಯಾಕ್‌ನೊಂದಿಗೆ ಅನಿಯಮಿತ ಡೇಟಾವನ್ನು ಪಡೆಯುತ್ತೀರಿ. ರೂ. 99 ಪ್ಲಾನ್‌ನ ವ್ಯಾಲಿಡಿಟಿ 2 ದಿನಗಳು.

Recent News


Leave a Comment: